Friday, March 22, 2013

ಶತಧಡ್ಡರು

ಎಲ್ಲಾ ಪಾಪ ಕರ್ಮಗಳನ್ನ ಮಾಡಿ
ಸುಳ್ಳಿನ ಕಂತೆ ಹೆಣೆದು ಮಾಡಿದರು ಮೋಡಿ
ತಮ್ಮ ತಪ್ಪುಗಳ ಮುಚ್ಚುವ ಕೆಡ್ದವನ್ನು ತೋಡಿ
ಹೇಸಿಗೆಯನ್ನಿಟ್ಟುಕೊಂಡು ನಾರುತಿಹುದು ಇವರ ನಾರಾ ನಾಡಿ
ದೇವರಿಗೆ ಮೊರೆ ಹೋಗುವರು ಇವರೆಂತಹ ಹೇಡಿ   ?

ಸ್ವಾತಂತ್ರ್ಯ V/s ಸ್ವೇಚ್ಛಾಚಾರ

ಸ್ವಾತಂತ್ರ್ಯ :  ಸರಿಯಾದ, ಸತ್ಯವಾದ, ನ್ಯಾಯವಾದ ಕಾರ್ಯಗಳನ್ನು ಮಾಡುವುದಕ್ಕೆ ಸಿಗಬೇಕಾದ ಮನ್ನಣೆ.

ಸ್ವೇಚ್ಛಾಚಾರ  :  ತಪ್ಪು ಒಪ್ಪುಗಳ ಪರಿವೆಯೇ ಇಲ್ಲದೇ ಮನ ಬಂದಂತೆ ಗೂಳಿಯ ಹಾಗೆ  ಹಠದಿಂದ ವರ್ತಿಸುವುದು. 

Thursday, March 21, 2013

ಮೂರ್ಖರು


ಬದುಕಿಗೊಂದು ಕನ್ನಡಿ, ಜೋಪಾನವಾಗಿಟ್ಟುಕೊಂಡರೆ ಕೈಪಿಡಿ,
ಕನ್ನಡಿಗೆ ಕಲ್ಲ ಹೊಡೆದು ಆ ಚೂರುಗಳಲ್ಲಿ ನಗುತಿರುವ ಮೋಹಿನಿ..!
ಕೂಡಿಸಲಾರದ ಸಂಬಂಧದ ಚೂರುಗಳು ಎಂಬ ಅರಿವಿದ್ದರೂ ,
ಕೂಡಿಸಿ ಕೂಡಿಸಿ ಎಂಬ ನಾಟಕವ ಆಡುವ ಮೂರ್ಖರು.

ಹನಿ

ಒಂದೇ ಒಂದು ಹುಡುಗಿಯೂ ಸಿಗದೆ, ಇನ್ನೂ ಕೆಲವರಿಗೆ ಬೇಜಾರು,

ಮೂರು ಹೆಂಡಿರ ಬಿಟ್ಟ ಗಂಡು, ನಾಲ್ಕನೆಯದಕ್ಕೆ ತಯ್ಯಾರು..!

THOUGHT FOR THE DAY

A PERSON WHO DOES NOT KNOW HOW TO BEHAVE PROPERLY OR REACT TO A PERSON’S QUESTION IS NOT WORTH BEING A “ FRIEND “

ಹಿತವಚನ


ಮಾತು ಮಾತಲ್ಲಿ ಅಸಹನೆ, ಮುಂಗೋಪುತನ ಕಾರುವವರು ಎಂದಿಗೂ ಒಳ್ಳೆಯ ಸ್ನೆಹಿತರು ಆಗಲು ಸಾಧ್ಯವಿಲ್ಲ !

Wednesday, March 20, 2013

ಶುಭ ಮುಂಜಾವು


ನಸುಕು ಕಳೆಯಿತು

ಬೆಳಕು ಹರೆಯಿತು

ಆಗಸದಲ್ಲಿ ನಗುತಾ ನಿಂತಾ ಆ ಸೂರ್ಯ

ಅವನ ಮೊಗ ಕಾಣುತ ಅರಳಿದಳು ಕುಸುಮೆ

ತೋಟದ ಎಲ್ಲೆಡೆ ಪರಿಮಳದ ಹಬ್ಬ

ದುಂಬಿ ಹಕ್ಕಿಗಳ ಕುಣಿತದ್ದೆ ಸದ್ದು

ಉಲ್ಲಾಸದಿ ಸಾಗಲಿ ಈ ದಿನ ನೀಡುತ್ತಾ ಮುದ್ದು.

Tuesday, March 19, 2013

ಸುಭಾಶಿತ


ನಮ್ಮ ಊರು, ನಮ್ಮ ಜನ ಹಚ್ಚಿಕೊಂಡಾಗ ಖುಶಿಗೆ ಪಾರವೇ ಇರುವುದಿಲ್ಲ .

ಅದೇ ನಮ್ಮ ಊರಿನವರು, ನಾವು ಬರಿ ಸಹಪಾಟಿಗಳು ಅಷ್ಟೇ ಅಂದಾಗ, ದುಃಖ ತಾಳುವುದೇ ಇಲ್ಲ.

Monday, March 18, 2013

ಹಿತವಚನ



ಹುಲಿ ದಾಳಿ ಮಾಡುವ ಮೊದಲು ಎರಡು ಹೆಜ್ಜೆ ಹಿಂಜರಿಯುತ್ತದೆ,ಅಷ್ಟ ಮಾತ್ರಕ್ಕೆ ಅದು ಹೆದರಿದೆ ಅಂತ ಅರ್ಥವಲ್ಲ.!

ಅದು ಎದುರಾಳಿಯ ಮುಂದಿನ ಹೆಜ್ಜೆ ಅರಿತು,ಮೇಲಬೀಳಲು ಹುಡುಕಿಕೊಂಡ ಒಂದು ತಂತ್ರ !
***ಭಾವಪ್ರಿಯ***

THOUGHT FOR THE DAY

THERE IS NOTHING LIKE " DEFEAT" IN ONE's LIFE.

THOSE ARE JUST FAILURES AND STEP STONES TO "SUCCESS"

***BHAVAPRIYA***

हितवचन


हम ज़िन्दगि से शिक्वा कैसे करे , ज़िन्दगितो जन्मसे हमारा साथ है,

उन लोगों से शिक्वा करके भी क्या फाईदा .., जो हमारे ज़िन्दगी को कभी अपना नहीं समझे !
 
***भावप्रिय***

Friday, March 15, 2013

THOUGHT FOR THE DAY

In the journey of LIFE , if you find thorns in your way, don't hesitate and step back, just keep walking, a little pain that you experience today may lead to a big happiness to keep yourself cheerful throughout your life.

ಹಿತವಚನ

ಜೊತೆಯಲ್ಲಿ ಬಾಳುವವರದು ಜನುಮ ಜನುಮದ ಅನುಬಂಧ

ದಿಕ್ಕೆಟ್ಟು ಬಾಳುವರದು ಹಿಂದಿನ ಜನುಮದ ಪಾಪ ಕರ್ಮಬಂಧ

ಸೋಲನುಂಡು, ಮೆಲೆದ್ದು ಜಯಿಸಲೆಂದೇ ಬಾಳುವವರದು ವಿಶ್ವಾಸ ಬಂಧ.  

Thursday, March 14, 2013

ಹಿತವಚನ

ಬದುಕುವುದಕ್ಕಾಗಿ ತಿನ್ನು , ತುನ್ನುವುದಕ್ಕಾಗಿಯೇ ಬದುಕಬೇಡ.
ಹೆಚ್ಚು ಅನಿಸಿದರೆ ಹಸಿದ ಹೊಟ್ಟೆಗಳಿಗೆ ಹಂಚು , ಆ ಹೊಟ್ಟೆಗಳೇ ನಿನಗೆ ಶುಭ ಹಾರೈಸುತ್ತವೆ.

Monday, March 11, 2013

ಹಿತವಚನ

ಬಡವನಾಗಿದ್ದರೂ ಸ್ವಾಭಿಮಾನಿ, ದುಡಿದು ತಿನ್ನುವನು ತನ್ನ ತೋಳ್ ಗಳ ನಂಬಿ.
ಚಿಕ್ಕ ಗೂಡಲ್ಲಿ ನೆಲೆಸಿದರೂ , ಖುಶಿಯ ಭಂಡಾರವ ಹೊತ್ತು ಮೆರೆವರು.
ಕೋಟಿ ಕೋಟಿ ಇದ್ದರೂ ಸಿರಿವಂತರಿಗೆ ಸಿಗದು ನೆಮ್ಮದಿ.
ಅರಮನೆಯಲ್ಲಿ ಮೆರೆದರೂ , ಕ್ಷಣ ಕ್ಷಣ ಖುಶಿಗಾಗಿ ಹಾತೊರೆಯುತಿಹರು.

Saturday, March 09, 2013

ಕಥೆ (ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು ) - 14

( ಮುಂದುವರೆದಿದೆ ..... ) " ಮದುವೆ " ಎಂಬ ಸಂಚಿನ ನಾಟಕ , ಈ ನಾಟಕಕ್ಕೆ ಸೂತ್ರ ಹಾಗು ಪಾತ್ರಧಾರಿಗಳು

ಹುಡುಗಿ : ಅತೀ ಆಸೆಯ ಹುಳು . ಹಣ ಐಶ್ವರ್ಯಕಕ್ಕಾಗಿ ಯಾರ ಜೊತೆಯಾದರೂ ಅಡ್ಜಸ್ಟ್ ಮಾಡಿಕೊಳ್ಳುವ ಕುತಂತ್ರ ಮೇಧಾವಿ . ತನ್ನ ಸೌಂದರ್ಯವನ್ನು ಬಂಡವಾಳವನ್ನಾಗಿಸಿ ಕೊಂಡವಳು.ಚಾಲಾಕಿ ,ಯಾವಗಲೂ ಮೇಕಪ್ಪು ಮಾಡಿಕೊಳ್ಳುತ್ತಾ ಹೊಸ ಹೊಸ ತಂತ್ರ ಹೂಡಿ ಹುಡುಗರ ಮೋಸ ಮಾಡುವ ಒಬ್ಬ ವಿದ್ಯಾವಂತ ಮೋಸಗಾರ್ತಿ .ಮದುವೆ ಎಂದರೆ ಇವಳಿಗೆ ಉಚಿತವಾಗಿ ಸಿಗುವ ಒಂದು ಗಂಡು ,ಇವಳ ಬೇಡಿಕೆಗಳನ್ನ ಇಡೇರಿಸುವ ಒಂದು ಪ್ರಾಣಿ. ಇವಳ ಸ್ವೆಛ್ಚಾಚಾರದ ಬದುಕಿಗೆ ಯಾವ ಗಂಡು ಅಡ್ಡಬರಬಾರದು. ಒಟ್ಟಿನಲ್ಲಿ ಕಾಲೇಜು ಮೆಟ್ಟಿಲು ಏರುವ ಮುಂಗಡವಾಗಿ ಎಲ್ಲಾ ಅನುಭವಿಸಿದವಳು.

ಮಾವ : ಒಬ್ಬ ಅಕ್ಕನ ಮಗಳನ್ನು ಮೋಹಿಸಿ ಅವಳು ಕೈ ಕೊಟ್ಟಾಗ ಮತ್ತೊಬ್ಬ ಮಗಳನ್ನು ನೇಮಕಕ್ಕೆ ಮದುವೆಯಾಗಿ ಕಥಾನಾಯಕಿ (ಹುಡುಗಿ)ಯನ್ನು ಅನುಭವಿಸುತ್ತಾ , ತನ್ನ ಕಣ್ಣ ಮುಚ್ಚಾಲೆ ಆಟವಾಡುವವ. ಹೃದಯಾಘಾತದ ನಾಟಕ ಮಾಡುತ್ತಾ , ತಲೆ ಹಿಡಿಯುವ ಕೆಲಸ ಮಾಡುವವ. ಎಲ್ಲಿ ಎಂಜಲು ಸಿಕ್ಕರೂ ನೆಕ್ಕುವ ನಾಯಿ.

ಜಿದ್ದಿಬಾಯಿ : ಹುಡುಗಿಯ ತಾಯಿ , ಮಗಳು ಮದುವೆ ಬೇಡವೆಂದರೂ ಬೆದರಿಸಿ ಹಣಗಳಿಸುವುದಕೋಸ್ಕರ ಸಂಚು ರಚಿಸಿದವಳು. ಇವಳು ಅಂದುಕೊಂಡಿದ್ದು ಮಾಡಲಿಕ್ಕೆ ಇವಳು ಕೂಡಾ ಎಲ್ಲರ ಜೊತೆ ಅಡ್ಜಸ್ಟ್ ಮಾಡಿಕೊಳ್ಳುತ್ತಾ ಸಮಯ ಸಾಧಿಸುವ ಸಮಯಸಾಧಕಿ. ತನ್ನ ಹಠಕ್ಕೊಸ್ಕರ ಹೆತ್ತ ಮಕ್ಕಳನ್ನು ಧಂದೆಗೆ ಬಳಿಸುವವಳು. ಇವಳ ಆಟಕ್ಕೆ ಒಬ್ಬ ಪೋಲಿಸು, ಒಬ್ಬ ಸಂಬಂಧಿ ರೌಡಿ. ಗಂಡ ಕಳೆದುಕೊಂಡ ಮುಂಡೆ ಸಿಕ್ಕ ಜನರನ್ನೆಲ್ಲಾ ಮಕ್ಕಳ ತಂದೆ ಎನ್ನುವಳು.

ಓದುಗರಿಗೆ ನೀತಿ : ಈ ಕಥೆಯಿಂದ ತಿಳಿದುಕೊಳ್ಳ ಬೇಕಾಗುವ ಸತ್ಯಗಳೆಂದರೆ , ಮದುವೆ ಮಾಡಿಕೊಳ್ಳುವ ಮುನ್ನ ಗಂಡಾಗಲಿ ಹೆಣ್ಣಾಗಲಿ ಅವರ ಮನೆಯ ಹಾಗು ಮನೆತನದ ಬಗ್ಗೆ ಕುಲಂಕುಶವಾಗಿ ತಿಳಿದುಕೊಳ್ಳಲು ಪ್ರಯತ್ನಿಸಿ , ಅನುಮಾನಗಳು ಉಂಟಾದಲ್ಲಿ ತಡೆದು ಸ್ವಲ್ಪ ಯೋಚಿಸಿ, ಆತುರತೆಯಲ್ಲಿ ಯಾವುದೇ ಸಂಬಂಧಗಳನ್ನು ಒಪ್ಪಿಕೊಳ್ಳಬೇಡಿ. ಎದುರಾಳಿಯ ಮಾತುಗಳು ನಂಬಲು ಸಾಧ್ಯವೋ ಇಲ್ಲವೋ , ಕಣ್ಣೀರು ಸುರಿಸಿ ಮೋಸ ಮಾಡುವವರು ಈ ಜಗದಲ್ಲಿ ಕಡಿಮೆ ಇಲ್ಲಾ , ಇಂತಹ ಸಮಾಜ ಘಾತಕ ಹುಳುಗಳಿಂದ ಎಚ್ಚರವಾಗಿರಿ. ಬಡವರು , ಗಂಡ ಸತ್ತವರು ಅನ್ನುವ ಕರುಣೆ ಇದ್ದಾರೆ ಭಿಕ್ಷೆ ಹಾಕಿ ಮುನ್ನಡೆಯಿರಿ. ಅನುಕಂಪ ಹೊತ್ತು ಎಂದಿಗೂ ಒಬ್ಬರ ಬಾಳು ಬೆಳಗಿಸಲು ಹೋಗಬೇಡಿ. ಈ ಕಥೆಯು ಎಲ್ಲ ವಿಜಯನಂತಹ ಮುಗ್ಧ ಜನರಿಗೆ ಒಂದು ಎಚ್ಚರಿಕೆಯ ಗಂಟೆ ಎಂತಿರಲಿ . ಇಷ್ಟು ದಿನ ಕಥೆಯನ್ನು ಚಾಚುತಪ್ಪದೆ ಆಲಿಸಿದ ತಮಗೆ ಹೃತ್ಪೂರ್ವಕ ಧನ್ಯವಾದಗಳು.



ಮತ್ತೆ ಒಂದು ಹೊಸ ಕಥೆಯೊಂದಿಗೆ ಬರುತ್ತೇನೆ ಅಲ್ಲಿಯವರೆಗೂ ಬ್ಲಾಗ್ ನ ಅನ್ಯ ಬರಹಗಳನ್ನ ಓದುತ್ತಾಯಿರಿ. 
      

Thursday, March 07, 2013

ಕಥೆ (ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು ) - 13

( ಮುಂದುವರೆದಿದೆ ..... ) ಕೆಲವೊಂದು ಸಾಮಜಿಕ ಕೆಟ್ಟು ಹುಳಗಳ ಅಟ್ಟಹಾಸ ಎಂದಿಗೂ ನಿಲ್ಲುವುದಿಲ್ಲ .., ಹಾಗೆಯೇ ನಮ್ಮ ವಿಜಯನ ಕಥೆಯಲ್ಲಿ ಕೂಡ ., ಎರಡು ತಿಂಗಳು ತನಕ ಈ ಹುಳಗಳು ಮನೆಯಲ್ಲೇ ಇದ್ದು ಮತ್ತೊಂದು ಕೆಟ್ಟ ಕೃತ್ಯಕ್ಕೆ ತಯ್ಯಾರಿ ನಡೆಸುತ್ತಾರೆ. ಮೊದಲೇ ದುಃಖ ಭರಿತನಾದ ವಿಜಯಾ ಆಫೀಸಿಗೆ ರಜೆ ಅಂತಾ ಮನೆಗೆ ಹೊರಡುತ್ತಾನೆ. ಹೆಣ್ಣಿನ ಮನೆಕಡೆಯವರು    ವಿಜಯನ ಸಂಬಂಧಿಕರನ್ನು ಸಂಪರ್ಕಿಸಿ  ಹೆಂಗಾದರೂ  ಮಾಡಿ ತಮ್ಮ ಮಗಳ ಹಾಗು ವಿಜಯನ ಜೀವನ ಸರಿ ಪಡಿಸೋಣ ಅಂತ ಒಪ್ಪಿಸಿ , ವಿಜಯನನ್ನು ಒಂದುಕಡೆ ಕರೆಸಿ ಆಮೇಲೆ ಎಲ್ಲಾ ವಿಷಯ ಇತ್ಯರ್ಥ ಮಾಡೋಣ ಅನ್ನುತ್ತಾರೆ , ಇವರ ಕುತಂತ್ರ ತಿಳಿಯದ ವಿಜಯನ ಸಂಬಂಧಿ ಒಂದು ಒಳ್ಳೆಯ ಕೆಲಸ ನನ್ನಿಂದ ಆಗಿಬಿಡಲಿ ಅಂದುಕೊಳ್ಳುತ್ತಾರೆ. ಹಾಗೆ ಒಂದು ಜಾಗ ಗುರುತು ಮಾಡಿ ಇಬ್ಬರ ಮನೆಕಡೆಯವರನ್ನ ಬರಲು ಹೇಳಿಕಳಿಸುತ್ತಾರೆ.  ಏನೋ ಸಂತೋಷ , ಮತ್ತೆ ಹೆಂಡತಿಯನ್ನು ಸೇರುತ್ತಾನೆ , ಇಬ್ಬರ ಸಂಕಸ್ಟಗಳು ಪರಿಹಾರವಾಗುತ್ತವೆ, ಮತ್ತೆ ಜೀವನ ದಾರಿಗೆ ಮರಳುತ್ತದೆ ಅಂತ  ಖುಶಿಪಡುತ್ತಾನೆ. ಆದರೆ ಅವನ ಹೆಂಡತಿಯ  ಕೆಟ್ಟ ಮಾವನ   ಕುತಂತ್ರ ವಿಜಯನಿಗೆ ತಿಳಿಯದೆ ಹೋಗಿತ್ತು.  ಸರಿ ವಿಜಯ, ವಿಜಯನ ತಂದೆ ಹಾಗು ತಮ್ಮಂದಿರು ಈ ಸಭೆಗೆ ಹೋಗುತ್ತಾರೆ , ಹುಡುಗನಿಗೆ ಒಬ್ಬನಿಗೆ ಕರಿಯಿರಿ ಅವನ ಹತ್ತಿರ ಮಾತಾಡೋಣ ಅಂತಾ ಹೇಳುತ್ತಾರೆ . ಹೆಣ್ಣಿನಕಡೆಯವರು ಪೂರ್ವ  ಸುಸಜ್ಜಿತವಾಗಿ ಗುಂಡಾಗಳನ್ನ ಕರೆದುಕೊಂಡು ಬಂದಿರುತ್ತಾರೆ , ಏನು ಇಲ್ಲಾ ಅಂದರೂ ೫೦ ಗುಂಡಾಗಳು , ರೌಡಿಗಳನ್ನ  ಕರೆಸಿರುತ್ತಾರೆ . ಓದುಗರೇ ನಿಮಗೆ ಹೆಣ್ಣೀನ ಮನೆಯವರು ಹೀಗೆ ಏಕೆ ಕರೆತಂದರು ಅಂತಾ ಊಹಿಸಬಲ್ಲಿರಾ ? ಈ ಸಭೆಯ ಉದ್ದೇಶ  ಯಾರಿಗಾದರೂ ತಿಳಿಯುತ್ತದೆ , ಇದಕ್ಕೆ ಹೆಣ್ಣು  ಅಂದರೆ ವಿಜಯನ ಪತ್ನಿ ಕೂಡಾ ಹೊರತಾಗಿರಲಿಲ್ಲ . ವಿಜಯನ ಕೆಟ್ಟ ಹೆಂಡತಿ ವಿಜಯ್ನನ್ನ ಕೊಲ್ಲಿಸುವ ಪ್ಲಾನು ಮಾಡಿಸಿಬಿಟ್ಟಿರುತ್ತಾಳೆ .  ಹುಡುಗ ೫0 ಜನರ ಮಧ್ಯದಲ್ಲಿ ಒಮ್ಮಿಂದೊಮ್ಮೆಲೆ  ವಿಜಯನನ್ನ ಹೊಡಿಯಲು ಶುರುಮಾಡುತ್ತಾರೆ. ವಿಜಯನ ಪತ್ನಿ ಮುಂದೆ ನಿಂತು ಹೊಡಿಯಿರಿ ಅವನನ್ನ ಅಂತಾ ಕೂಗುತ್ತಿರುತ್ತಾಳೆ , ಇವಳನ್ನ ಕಂಡ ವಿಜಯಾ ದಿಗ್ಬ್ರಾಂತನಾಗುತ್ತಾನೆ . ಇವಳು ನನ್ನ ಕೊಲೆಯ ಸಮಯ ನಿಗದಿ ಪಡಿಸಿದಳಾ ? ಏನೂ ತಿಳಿಯುವಷ್ಟರಲ್ಲಿ ವಿಜಯನ ಅಂಗಿಯನ್ನು ಹರೆದು , ಅವನ ಬಂಗಾರದ ಚೇನು , ಮೊಬೈಲು ಕೈಯ್ಯಲ್ಲಿಯ ಉಂಗುರಗಳು ಎಲ್ಲವನ್ನು ಕದ್ದುಕೊಳ್ಳುತ್ತಾರೆ , ಕಳ್ಳ ಕಧಿಮರ ಜೊತೆ ಸಂಬಂಧಗಳ ಇಟ್ಟು ಕೊಂಡವಳು ಇವಳು ಎಂತಹ ಹೆಣ್ಣು.. ? ಇವಳು ಹೆಣ್ಣೇನೆ ನಾ ಅಥವಾ ಹೆಮ್ಮಾರಿನಾ ? ಓದುಗರೇ ನೀವೇ ಯೋಚಿಸಿ .. ! ಸದ್ದು ಗದ್ದಲ ಕೇಳುತ್ತಲೇ ವಿಜಯನ ತಂದೆ ಹಾಗು ತಮ್ಮಂದರು ಸ್ಥಳಕ್ಕೆ ಧಾವಿಸುತ್ತಾರೆ. ವಿಜಯನ ಸುತ್ತುವರೆದ ಮಂದಿಯನೆಲ್ಲಾ ಹಿರಿಯ ತಮ್ಮ ಒಂದೇ ಏಟಿನಲ್ಲಿ ಚದಿರುಸುತ್ತಾನೆ , ಎಲ್ಲರೂ ವಿಜಯನನ್ನು ಬಿಟ್ಟು ಅವನನ್ನು ಹೊಡೆಯಲು ಶುರುವಿಟ್ಟ   ತಕ್ಷಣ ಅವನು ಎಲ್ಲರನ್ನು  ಒಂದೇ ಸಮನೆ ಎತ್ತಿ ಕೊಡವುತ್ತಾನೆ , ಇವನು ಒಬ್ಬ ಕುಸ್ತಿಪಟು ಇದ್ದಹಾಗೆ ಒಂದೇಸಮನೆ ಹತ್ತಾರು ಜನರನ್ನು ಹೊಡಿಯಬಲ್ಲವ , ಇವನದು ನೂರಾನೆಯ ಬಲ , ಇವನ ಅಬ್ಬರ ಕಂಡು ಎಲ್ಲರೂ  ಸುಮ್ಮನಾಗುತ್ತಾರೆ , ಅತ್ತ ಕಡೆ ಆ ಕೆಟ್ಟ ಹೆಣ್ಣಿನ ಅಕ್ಕ ವಿಜಯನ ಇನ್ನೊಬ್ಬ ತಮ್ಮನಿಗೆ ಹೊಡೆಯುತ್ತಿರುತ್ತಾಳೆ , ಅವನು ಕೂಡ ತನ್ನ ಶಕ್ತಿಯ ಗೂಡಿಸಿ ಅವಳ ಹೊಟ್ಟೆಗೆ ಒಂದು ಒದೆಯುತ್ತಾನೆ , ಗಂಡಸರ ಮೇಲೆ ದಾಳಿ ಮಾಡಲು ಬಂದ ಈ ಹೆಂಗಸು ಕೂಡಾ ಮಾದುವೆ ಆದವಳು,  ಲಜ್ಜಗೆಟ್ಟ ಜಲುಮ ಇವಳದು ಗಂಡನನ್ನು ಹತೋಟಿಯಲ್ಲಿತ್ತುಕೊಂಡು ಆಡಿಸುವ ಬೇವರ್ಸಿ ಇವಳು. ಇವರ ಬಳಗವೇ ರೌಡಿಗಳ ಅಡ್ಡ .  ಜಿದ್ದಿಬಾಯಿ ಇವಳ ತಾಯಿಯು ಈ ಗಲಾಟೆ ನಡೆಯುತ್ತಿರುವಾಗ  " ಹ್ಹಾ...ಹಾ ನಿಮಗೆಲ್ಲಾ ಇದು ಬೇಕಿತ್ತಾ " ಅಂತ ವ್ಯಂಗ್ಯ ಮಾಡುತ್ತಾಳೆ , ಮಗಳ ಜೀವನ ಹಾಳು ಆಗುತ್ತಿರುವುದು ಅನ್ನುವ ಪರಿವೆ ಇಲ್ಲದ ನಾಚ್ಚಿಗ್ಗೆಡು ಜಲುಮ ಗಂಡ ಸತ್ತ ಮುಂಡೆ , ಮಕ್ಕಳನ್ನ ಧಂಧೆಗೆ ಬಿಟ್ಟು ಹಣಗಳಿಸುವವಳು. ಮಧ್ಯಸ್ತಿಕೆ ವಹಿಸಿದವರಿಗೆ ನನ್ನ ಮಗಳು ಇವನ ಹತ್ತಿರ ಒಂದು ವರುಷ ಸಂಸಾರ ಮಾಡಿದ್ದಾಳೆ ಅದಕ್ಕೆ ಪರಿಹಾರ ಕೊಡಿಸಿ ಅಂತಾ ಹೇಳುತ್ತಾಳೆ .  ಗಂಡನ ಮನೆಯವರಿಗೆ ಹಾಗು ಗಂಡನಿಗೆ ಹೊಡೆದು ಪರಿಹಾರ ಕೇಳುವುದು ಎಲ್ಲಾದರೂ ಕೇಳಿದ್ದಿರಾ ಪ್ರೀಯ  ಓದುಗರೇ ? ಇದಕ್ಕೆ ಹೈ ಟೆಕ್  ಸೂಳೆಗಾರಿಕೆ ಅಂದರೆ ತಪ್ಪಾಗಲಾರದು ಅನ್ನುವುದು ನನ್ನ ಭಾವನೆ . ಹಣಕ್ಕಾಗಿಯೆ ಮದುವೆ ಆಗುವುದು , ಸಂಸಾರದ ನಾಟಕವಾಡುವುದು ಕೆಲವು ತಿಂಗಳ ನಂತರ ಮಗಳಿಗೆ ಜಗಳ ಮಾಡಿ ಓಡಿ  ಬರಲು ಹೇಳುವುದು . ಮನೆಗೆ ಬಂದ ಮೇಲೆ ಇವರ ಕುತಂತ್ರಗಳ ಹೂಡುವುದು.  ಇಂತಹ ಹೆಣ್ಣಿನ ಸಹವಾಸ ಮಾಡಿ, ಮದುವೆಯಾಗಿ  ಜೀವನ ಹಾಳು ಮಾಡಿಕೊಂಡು ಎಷ್ಟೋ  ವಿಜಯನಂತವರು ಇದ್ದಾರೆ . ಈ ಹುಡುಗರ  ತಪ್ಪಾದರೂ ಏನು ? ಕಷ್ಟಪಟ್ಟು ಕಲಿತು, ಅಪ್ಪ-ಅಮ್ಮ ನೋಡಿದ ಹುಡುಗಿಯ ಒಪ್ಪೊಕೊಂಡು ಮಾದುವೆ ಆದರೇ , ಇಂತಹ ಹೆಮ್ಮಾರಿಗಳಿಂದ ಹುಡುಗರು ಪಡುವ ಕಷ್ಟಗಳು ಹೇಳತೀರದ್ದು . ನಾಳಿನ ಸಂಚಿಕೆಯಲ್ಲಿ ಕಥೆಯ ಮುಖ್ಯ ಪಾತ್ರಾಧಾರಿಗಳು , ಇವರ ಒಳ ಸಂಚು ಹಾಗು ಇವರುಗಳ ವ್ಯಕ್ತಿತ್ವದ ಬಗ್ಗೆ ಸ್ವಲ್ಪ ಹೇಳುತ್ತೇನೆ.  (....... ಮುಂದುವರೆಯಲಿದೆ ) 

हितवचन

जो सच्छे प्यार करके खोया हो , वो प्यार करना कभी नहीं छोड़ता क्यूंकि भलेही उसको लोगों पर विश्वास उट जाए , लेकिन उसके प्यार पर आत्मविश्वास और तगडा हो जाता है।


ಹಿತ ವಚನ

ಉರಿಯುವ ಬೆಂಕಿಗೆ ತುಪ್ಪ ಸುರಿಯುವರಿಗಿಂತ , ಬೆಂಕಿ ಹೊತ್ತಿರುವುದು ನೋಡಿ ಸುಮ್ಮನೆ ಹೋಗುವರೇ ಲೇಸು .!


हितवचन

जो माणुस तुम्च प्यार आणि  विश्वास्च  हक्दार  नई अस्लतर ,
तेंना कदीही तेव्ड महत्व देणार नही पायिजे ,
क्युंकी तो कदी खरच प्यार समजणार नाही !


THOUGHT FOR THE DAY

SHOWING CARE AND LOVE TO A PERSON WHO NEVERS THINKS YOU AS HIS OWN,
IS JUST LIKE,
INVESTING MONEY IN A BANK WHICH DOES NOT PAY YOU INTEREST.

Wednesday, March 06, 2013

ಕಥೆ (ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು ) - 12


(ಮುಂದೆವರೆದಿದೆ....) ಪೋಲಿಸು ಠಾಣೆಯಲ್ಲಿ ದೂರು ಕೊಟ್ಟು ವಿಜಯನಿಗೆ ಬೇಗ ಜೈಲಿಗೆ ಹಾಕಿ ಅಂತ ಹುಡುಗಿಯ ಮಾವ ಇನಸ್ಪೆಕ್ಟರ್ ಮೇಲೆ ಒಬ್ಬ ಪೋಲಿಸ್ ಗಳೆಯನಿಂದ ವತ್ತಾಯ ಪಡಿಸುತ್ತಾನೆ. ಬಹಳಷ್ಟು ಠಾಣೆಗಳಲ್ಲಿನ ಅಧಿಕಾರಿಗಳು ಸ್ವಲ್ಪ ಕಠೋರವಾಗಿಯೆ ಇರುತ್ತಾರೆ ಅನ್ನಬಹುದು.,ಆದರೆ ವಿಜಯನ ಪುಣ್ಯಾ ಏನೋ ಅಲ್ಲಿಯ ಅಧಿಕಾರಿ ನ್ಯಾಯವಾಗಿ ನಡೆದುಕೊಳ್ಳವನಾಗಿರುತ್ತಾನೆ. ಒಮ್ಮಿಂದೊಮ್ಮೆಲೆ ದುಡುಕದೆ, ವಿಜಯನನ್ನು ಪೋಲಿಸು ಠಾಣೆಗೆ ಸುಮ್ಮನೆ ಬಂದು ಭೆಟಿಯಾಗು ಅಂತ ಒಬ್ಬ ಕಾನ್ಸ್ಟೇಬಲ್ ಹತ್ತಿರ ಹೇಳಿ ಕಳಿಸುತ್ತಾನೆ. ವಿಜಯನಿಗೆ ಏನೂ ತಿಳಿಯುವುದಿಲ್ಲ, ಅಲ್ಲಾ ಪೋಲಿಸಿನವರು ತನ್ನನ್ನಾ ಏಕೆ ಕರಿಸಿಕೊಳ್ಳುತ್ತಾರೆ .? ಬಹುಶಃ ಅವರಿಗೆ ಎಲ್ಲೊ ತಪ್ಪು ಮಾಹಿತಿಯಿಂದ ನನ್ನ ಕರೆದಿದ್ದಾರೆ ಅಂದು ಕೊಳ್ಳುತ್ತಾನೆ., ಸರಿ ಹೋಗಿ ಬರೋಣ ಅಂದುಕೊಂಡು ಒಬ್ಬನೆ ಠಾಣೆಗೆ ಹೋಗುತ್ತಾನೆ. ವಿಜಯ ಪೋಲಿಸು ಠಾಣೆಗೆ ಹೋಗಿ ವಿಚಾರಿಸಿದರೆ ಅಲ್ಲಿ ಇನಸ್ಪೆಕ್ಟರ್ ಇರುವುದಿಲ್ಲ, ಸರಿ ಸ್ವಲ್ಪ ಸಮಯ ಕಾದರಾಯಿತು ಅಂದು ಕೊಂಡು ಕೂರುತ್ತಾನೆ, ಸ್ವಲ್ಪ ಹೊತ್ತಿನ ನಂತರ ಇನಸ್ಪೆಕ್ಟರ್ ಬರುತ್ತಾರೆ. ಒಳಗೆ ಹೋದವನೆ ಭೇಟಿಯಾಗಿ ಸರ್ ನನಗೆ ಬರಲು ಹೇಳಿದ್ದಿರಿ ಅಂತ ಗೊತ್ತಾಯಿತು ಅದಕ್ಕೆ ಬಂದೆ.., ಏನ್ ಸಮಾಚಾರ ಅಂತ ಕೇಳುತ್ತಾನೆ. ವಿಜಯ ಅಂದರೆ ನೀನೆನಾ ? ಹಾ ಹೌದು...! ಎಲ್ಲಿ ಕೆಲಸ ಮಾಡುತ್ತಿರುವೆ ? ವಿಜಯ ಹೀಗ್ ಹೀಗೆ ನಾನು ಒಂದು ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುತ್ತೆನೆ ಅಂತ ಹೇಳಿದ. ನಿನ್ನ ಕುಟುಂಬದವರ ಬಗ್ಗೆ ಹೇಳು ಅಂದರು., ಅದಕ್ಕೆ ವಿಜಯಾ ತಂದೆ ನಿವ್ರುತ್ತ ಅಧಿಕಾರಿ,ತಾಯಿ ಹೌಸ್ ವೈಫ್ ಊರಲ್ಲೆ ಇರುತ್ತಾರೆ, ಇನ್ನೂ ಓದುತ್ತಿರುವ ತಮ್ಮಂದಿರು ಇದ್ದಾರೆ. ಸರಿ ನಿನ್ನ ಮದುವೆ ಆಗಿದ್ದು ಯಾವಾಗ...? ಅಂದಾಗ, ಇವರಿಗೆ ಇವೆಲ್ಲಾ ಏಕೆ ಬೇಕು, ಯಾವುದಕ್ಕೆ ಕರೆದಿದ್ದಾರೊ ಅದನ್ನೇ ಹೇಳುತ್ತಿಲ್ಲವಲ್ಲ ಅಂದುಕೊಳ್ಳುವಷ್ಟರಲ್ಲಿ..ನಿನ್ನ ಹೆಂಡತಿ ನಿನ್ನ ಮೇಲೆ ವರದಕ್ಷಿಣೆ ಕಿರುಗಳ ಹಾಗೆ ಅತ್ತೆ ಮಾವಂದರು,ತಮ್ಮಂದಿರು ಎಲ್ಲರೂ ಸೇರಿ ಕಿರುಗಳ ಕೊಡುತ್ತಾರೆ ಅಂತಾ ದೂರು ನೀಡಿದ್ದಾಳೆ ಇದಕ್ಕೆ ನೀನು ಏನು ಹೇಳುತ್ತಿಯ ? ಅಂದರು. ಇವನ ಹೆಂಡತಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುತ್ತಾಳೆ ಅಂತಾ ವಿಜಯ ಎಂದೆಂದಿಗೂ ಊಹಿಸಿರಲಿಲ್ಲ. ಸಾರ್ ಇವೆಲ್ಲಾ ಕಟ್ಟು ಕಥೆಗಳು, ನಾನು ಅವಳು ಬಿಟ್ಟರೆ ಇಲ್ಲಿ ಯಾರು ಕೂಡಾ ಇರುವುದಿಲ್ಲಾ., ಎಲ್ಲರೂ ನನ್ನ ತವರೂರಿನಲ್ಲೇ ಇರುತ್ತಾರೆ ಅಂದಕೂಡಲೇ ಇನಸ್ಪೆಕ್ಟರ್ ಅವರಿಗೆ, ಹುಡುಗಿ ಕಡೆ ಏನೋ ವಿಷಯವಿದೆ..ಅಂದುಕೊಳ್ಳುತ್ತಾರೆ. ಸರಿ ಆ ಹುಡುಗಿಯ ಜೊತೆಯಲ್ಲಿ ಒಬ್ಬ ಮನುಷ್ಯ ಬಂದಿದ್ದ ಅವನು ಯಾರು ಅಂತಾ ನಿನಗೆ ಗೊತ್ತೆ ? ಅವನ ಚೆಹರೆಯ ವಿವರ ಕೊಡುತ್ತ ಅಂದರು. ಅವನೇ ಸಾರ್ ನನ್ನ ಮದುವೆ ಜೀವನದಲ್ಲಿ ಬೆಂಕಿ ಹಚ್ಚಿದವನು ಅಂದ ವಿಜಯ.ಅದಕ್ಕೆ ಇನಸ್ಪೆಕ್ಟರ್ ನನಗೂ ಕೂಡ ಅವನ ನೋಡಿದರೆ ಹಾಗೆ ಅನ್ನಿಸಿತು, ಅವನು ವತ್ತಾಯ ಮಾಡಿ ನಿನ್ನನ್ನ ಒಳಗೆ ತಳ್ಳಿ ಅಂತ ಹೇಳುತ್ತಿದ್ದನು ಮತ್ತೆ ಪದೆ ಪದೆ ಒಬ್ಬ ಹಿರಿಯ ಅಧಿಕಾರಿಗಳಿಂದ ಪೋನು ಕೂಡಾ ಮಾಡಿಸಿದ್ದನು. ನಿನ್ನ ಹೆಂಡತಿ ಹಾಗು ಅವನು ಜೋಡಿಯಾಗಿ ಬಂದಾಗಲೇ ನನಗೆ ಅನುಮಾನ ಮೂಡಿತ್ತು...ಅವರುಗಳು ಇಲ್ಲಿಗೆ ದೂರು ನೀಡಲು ಬಂದಾಗ ಅವಳು ಭರ್ಜರಿಯಾಗಿ ಮೇಕಪ್ ಮಾಡಿಕೊಂಡು ಲಿಪ್ ಸ್ಟಿಕ್ ಹಚ್ಚಿಕೊಂಡು ಬಂದದ್ದು ನೋಡಿಯೇ ಅವರು ಕೊಡುತ್ತಿರುವ ದೂರು ಸುಳ್ಳು ಎಂದು ಉಹಿಸಿದ್ದೆ. ಅದಲ್ಲದೆ ನಮ್ಮ ಪೇದೆ ಬಂದು ನಿಮ್ಮ ಅಕ್ಕ ಪಕ್ಕದ ಮನೆಯವರಿಗೆ ನಿಮ್ಮ ಬಗ್ಗೆ ಕೇಳಿದಾಗ ಒಳ್ಳೆಯ ಹುಡುಗ, ತಾವಾಯಿತು ತಮ್ಮ ಕೆಲಸವಾಯಿತು ಮತ್ತೆ ಯಾರ ತಂಟೆಗೂ ಹೋಗುವುದಿಲ್ಲ ಅಂತ ಹೇಳಿದ್ದರು. ನಿನ್ನ ಹೆಂಡತಿ ಬಗ್ಗೆ ಏನು ಹೇಳುತ್ತಿಯಾ ಅಂದಾಗ ವಿಜಯ, ಈ ಹಿ0ದೆ ದೇವಸ್ಥಾನದಲ್ಲಿ ನಡೆದ ವಿಷಯವನ್ನು ಹೇಳುತ್ತಾನೆ, ಅವಳ ನಡವಳಿಕೆ ಆಫೀಸಿನಲ್ಲಿ ಸರಿ ಇಲ್ಲಾ ಸಾರ್ ಅದಕ್ಕೆ ಅವಳಿಗೆ ಕೆಲಸಕ್ಕೆ ರಾಜಿನಾಮೆ ಕೊಟ್ಟು ಮನೆಯಲ್ಲಿ ಇರು ಅಂತ ಹೇಳಿದ್ದಕ್ಕೆ ಮನೆ ಬಿಟ್ಟು ಓಡಿಹೋಗಿದ್ದಾಳೆ. ಅವಳಿಗೆ ಅವಳ ತಾಯಿ ಹಾಗು ಅವಳ ಮಾವನ ಕುಮ್ಮಕ್ಕು ಕೂಡಾ ಇದೆ ಅಂತಾ ಹೇಳುತ್ತಾನೆ. ಸರಿ.., ನಿನ್ನ ಊಹೆ ಸರಿಯಾಗಿದೆ ಅವಳ ಬಗ್ಗೆನೂ ಕೂಡ ನಮ್ಮ ಪೇದೆ ವಿಷಯ ತಂದ್ದಿದ್ದಾನೆ, ಅವನು ಹೇಳಿದ ಪ್ರಕಾರ ಅವಳು ಸ್ವಲ್ಪ ಓವರ್ ಇದ್ದಾಳೆ, ಬರಿ ಗಂಡಸರ ಜೊತೆ ಒಡನಾಟ, ಮತ್ತು ಒಬ್ಬ ಸಹುಧ್ಯೊಗಿ ಕೂಡ ಬಹಳ ಸಲಿಗೆ ಇಂದ ಇರುತ್ತಳೆ ಅನ್ನುವುದು ಕೂಡಾ ತಿಳಿದುಬಂದಿದೆ. ಸರಿ ಬಿಡಪ್ಪ , ಅವರ ಮನೆಯವರು ಯಾರು ನಿನ್ನ ವಿಷಯಕ್ಕೆ ಬರಬಾರದ ಹಾಗೆ ನಾನು ತಾಕಿತ್ತು ಮಾಡಿ ಕಳಿಸುತ್ತೆನೆ, ನೀನು ಅವಳ ಕೂಡ ನೆಟ್ಟಗೆ ಜೀವನ ನಡೆಸಿಕೊಂಡು ಹೋಗುತ್ತಿಯಾ ಅಂತಾ ಕೇಳುತ್ತಾರೆ ?, ಅದಕ್ಕೆ ವಿಜಯ ಖುಶಿಯಿಂದ ಸಮ್ಮತಿ ಒಪ್ಪಿಸುತ್ತಾನೆ.ಸರಿ ನಿಮ್ಮ ತಂದೆಗೆ ಇಲ್ಲಿಗೆ ಬರಲು ಹೇಳು, ಎಲ್ಲರೂ ಸಹ ಕೂತು ಚರ್ಚೆ ಮಾಡಿ ಒಂದು ಒಳ್ಳೆಯ ನಿರ್ಧಾರಕ್ಕೆ ಬರೋಣ ಅಂತ ಹೇಳಿ ವಿಜಯನನ್ನ ಬೀಳಕೊಡುತ್ತಾರೆ. ಸರಿ ಒಂದು ವಾರ ಬಿಟ್ಟು ಇಬ್ಬರ ಮನೆಯವರನ್ನ ಪೋಲಿಸು ಠಾಣೆಗೆ ಬರಲು ಹೇಳಿಕಳಿಸುತ್ತಾರೆ. ಇನಸ್ಪೆಕ್ಟರ್ ಇವರನ್ನ ಕುರಿತು ಎನು ನಿಮ್ಮ ಸಮಸ್ಯೆ ಇಲ್ಲಿ ಹೇಳಿ, ಇಬ್ಬರದು ಕೇಳಿ ನಾನು ಒಂದು ನಿರ್ಧಾರ ಹೇಳುತ್ತೆನೆ ಅಂತಾ ಹೇಳುತ್ತಾರೆ. ಗಂಡ ನನಗೆ ನೌಕರಿ ಬಿಡಲು ಹೇಳುತ್ತಿದ್ದಾನೆ ಅದಕ್ಕೆ ನಾನು ಒಪ್ಪುವುದಿಲ್ಲ, ನನಗೆ ನೌಕರಿ ಬಿಟ್ಟರೆ ತಲೆ ಕೆಟ್ಟು ಹೋಗುತ್ತದೆ ಅಂತ ಹೇಳುತ್ತಾಳೆ. ನಿನ್ನ ಗಂಡನಿಗೆ ನಿನ್ನ ದುಡುಮೆಯ ದುಡ್ಡು ಬೇಡವಂತೆ, ನೀನು ಮನೆಯಲ್ಲಿ ಇದ್ದುಕೊಂಡು ಸಂಸಾರವನ್ನು ನೋಡಿಕೊಂಡು ಹೋದರೆ ಸಾಕು ಅಂತಾ ಹೇಳುತ್ತಾನೆ. ನೀನು ಯಾರಿಕೋಸ್ಕರ ದುಡಿಯ ಬೇಕು ಅನ್ನುತ್ತಿಯ, ಅಂದರೆ ನನ್ನ ಫ್ಯಾಮಲಿ ಗೊಸ್ಕರ ಅನ್ನುತ್ತಾಳೆ ( ಅವಳ ಕಪಟ ಉತ್ತರವಿದು ಸ್ನೇಹಿತರೆ..ಅವಳಿಗೆ ತನ್ನ ಫ್ಯಾಮಲಿ ಅಂದರೆ ತನ್ನ ಅಮ್ಮ, ಮಾವ ಅವರೆಲ್ಲಾ ಅಷ್ಟೇ.) ಸರಿ ವಿಜಯಾ ನೀನು ಹೇಳಪ್ಪಾ ನೀನು ಏನಂತಿಯಾ, ಸಾರ್ ನಾನು ನಿಮಗೆ ಆಗಲೇ ಹೇಳಿದ ಹಾಗೆ ಇವಳ ಆಫಿಸೀನ ಚಟುವಟಿಕೆಗಳು ನನಗೆ ಹಿಡಿಸಿಲ್ಲ, ಇವಳಿಗೆ ಮನೆಯ ಬಗ್ಗೆ ನಮ್ಮ ಸಂಸಾರದ ಬಗ್ಗೆ ಕಿಂಚಿತ್ತು ಚಿಂತೆ ಇಲ್ಲ ಅದಕ್ಕೆ ಸ್ವಲ್ಪ ದಿನ ಇವಳು ಕೆಲಸ ಬಿಟ್ಟು ಇದ್ದರೆ ನಾನೇ ಮತ್ತೆ ಬೇಕೆನ್ನಿಸಿದಾಗ ಇವಳಿಗೆ ಕೆಲಸ ಕೊಡಿಸುತ್ತೆನೆ ಆ ತಾಕತ್ತು ನನ್ನಲ್ಲಿದೆ ಅನ್ನುತ್ತಾನೆ. ಇನಸ್ಪೆಕ್ಟರ್ ರವರು ಭೇಷ ವಿಜಯಾ...ಇವನು ಇಷ್ಟೆಲ್ಲಾ ಹೇಳುವಾಗ ಸುಮ್ಮನೆ ಒಪ್ಪೊಕೊಳ್ಳಮ್ಮ ನಿಮ್ಮ ಜೀವನ ಸುಖಾವಾಗಿರುತ್ತದೆ ಅಂದರು. ಏನೇ ಆಗಲಿ ನಾನಂತು ಕೆಲಸ ಬಿಡುವುದೇ ಇಲ್ಲಾ..ಅಂದಳು ಇನಸ್ಪೆಕ್ಟರ್ ಬೈದುದಕ್ಕೆ ಸರಿ ಬಿಡುತ್ತೆನೆ ಆದರೆ ಒಂದೆ ಸರಿ ಬಿಡಲು ಆಗುವುದಿಲ್ಲ ನನಗೆ ಸ್ವಲ್ಪ ಸಮಯ ಬೇಕು ಅನ್ನುತ್ತಾಳೆ, ಇವಳ ಕ್ರೂರ ಬುದ್ದಿ ತಿಳಿದಿದ್ದ ವಿಜಯ,ಅವಳು ಕೆಲಸ ಬಿಡದೆ ಇದು ಸರಿ ಹೋಗುವುದಿಲ್ಲ ಸರ್ ಅಂದ ಕೂಡಲೆ ಇನಸ್ಪೆಕ್ಟರ್ ಅವರಿಗೆ ಇವಳ ಆಫೀಸಿನ ರಾಸ ಲಿಲೆಗಳು ನ್ಯಾಪಕಕ್ಕೆ ಬರುತ್ತವೆ., ಸರಿ ವಿಜಯ ನಿನ್ನ ಹೆಂಡತಿ ನೀನು ೩೦೦೦೦ ಸಾವಿರ ಸಂಬಳ ತೆಗೆದು ಕೊಳ್ಳುತ್ತಿ ಅಂತಾ ಹೇಳಿದ್ದಾಳೆ ಹೌದಾ ಅಂತಾ ಕೇಳುತ್ತಾರೆ, ತಕ್ಷಣ್...., ಅಯ್ಯೋ ನಾನು ಹಾಗೆ ಹೇಳಿಯೇ ಇಲ್ಲಾ ಅಂತಾ ಇನಸ್ಪೆಕ್ಟರ್ ಅವರಿಗೆ ಬಾಯಿ ಬಡಿಯುತ್ತಾಳೆ, ಇದನ್ನು ಕಂಡ ಇನಸ್ಪೆಕ್ಟರ್ ಇವಳ ಹಾವು ನಾಲಿಗೆ ಬಗ್ಗೆ ವಿಜಯಾ ಹೇಳಿದ್ದು ನಿಜ ಅಂತಾ ಗೊತ್ತಾಗುತ್ತದೆ. ( ಅವಳು ಇನಸ್ಪೆಕ್ಟರ್ ಗೆ ಈ ವಿಷಯ ಹೇಳಿದ ಕಾರಣ, ನೀವು ಅವನ ಹತ್ತಿರ ದುಡ್ಡು ವಸೂಲಿ ಮಾಡಿ ಅಂತ ಹೇಳೊದಕ್ಕೆ ಈ ವಿಷಯ ತಿಳಿಸಿರುತ್ತಾಳೆ - ಕಪಟಿ ಹೆಂಗಸು - ಗಂಡನ ಜೊತೆಯಲ್ಲೆ ಇದ್ದು ಗಂಡನನ್ನೆ ಹಿಂದಿನಿಂದ ಚೂರಿ ಹಾಕುವ ಇವಳ ಬುದ್ದಿ ) ಇನಸ್ಪೆಕ್ಟರ್ ನಕ್ಕು ಸರಿ ಅವನ ಸಂಬಳದಲ್ಲಿ ಜಾಮ್ ಜಾಮ್ ಅಂತಾ ಜೀವನ ಮಾಡಬಹುದು, ಇಬ್ಬರು ನೋಡಲು ಸುಂದವಾಗಿದ್ದಿರಿ, ಮಕ್ಕಳು ಮಾಡಿ, ಕಾರು ತೊಗೊಳಿ, ದೊಡ್ಡ ಮನೆ ಕಟ್ಟಿಸಿ ಸುಖವಾಗಿ ಜೀವಿಸಿರಿ ಅಂತಾ ಹೇಳಿದರೂ ಇವಳು ಮಾತ್ರ ಒಪ್ಪುವುದೇ ಇಲ್ಲಾ...! ಇನಸ್ಪೆಕ್ಟರ್ ಇಷ್ಟೆಲ್ಲಾ ಹೇಳಿದರೂ ನೀನು ಒಪ್ಪುತ್ತಿಲ್ಲಾ ಅಂದರೆ... ಅಂದ ಕೂಡಲೆ ಅವಳು ಸಾರ್ ನಿಮ್ಮ ಕೂಡ ನಾನು ಸ್ವಲ್ಪ ಪರ್ಸನಲ್ ಆಗಿ ಮಾತಾಡಬೇಕು ಎಲ್ಲರನ್ನೂ ಹೊರಗೆ ಕಳಸಿ ಅಂತಾ ಹೇಳುತ್ತಾಳೆ, ಸರಿ ಸ್ವಲ್ಪ ಎಲ್ಲರೂ ಹೊರಗೆ ಇರಿ...ಅಂದ ಇನಸ್ಪೆಕ್ಟರ್....ಜೋರಾಗಿ ರೇಗಾಡುತ್ತಾ ಅವಳ ಮೇಲೆ....ನಾವೇನು ಇಲ್ಲಿ ಲಂಚ ತಿನ್ನಲು ಕೂಳಿತ್ತಿದ್ದಿವಾ ? ನನ್ನನ್ನ ನೀನು ಏನು ಅಂದುಕೊಂಡಿದ್ದಿಯಾ, ನಿನ್ನ ಜೀವನ ಹಾಳಾಗದಿರಲಿ ಅಂತಾ ನಾನು ಒಂದು ಗೂಡಿಸೊಣವೆಂದರೆ ನನಗೆ ಲಂಚದ ಆಮಿಷ ಒಡ್ಡುತ್ತಿರುವೆ...,ಹಾಳಾಗಿ ಹೋಗು ಇನ್ನು ಮೇಲೆ ನನ್ನ ಠಾಣೆಗೆ ಬರಬೇಡ ಅಂದ ಗದರಿಸಿ ಕಳಿಸುತ್ತಾರೆ. ನೋಡಿದಿರಾ ಓದುಗರೆ...ಹೆಂಗಸಿನ ಚಾಲಾಕುತನವ... ? ಇವಳ ಬುದ್ಧಿಗೆ ಇವಳು ಜಾಣೆ ಅನ್ನುತ್ತಿರೋ ಅಥಾವಾ ಕಿರಾತಕಿ ಅನ್ನುತ್ತಿರೋ ನಿಮಗೆ ಬಿಟ್ಟದ್ದು..! ಇಲ್ಲಿಗೆ ಇನಸ್ಪೆಕ್ಟರ್ ಒಂದು ನವ ಜೋಡಿಯನ್ನು ಮತ್ತೆ ಕೂಡಿಸುವ ಪ್ರಯತ್ನ ನೆಲಕಚ್ಚುತ್ತದೆ. ಅವಳು ಮತ್ತೆ ಅವರ ಜನರು ಹೊರ ನಡಿದ ಕೂಡಲೆ ವಿಜಯನ ಕುರಿತು, ಅವಳು ಹೆಮ್ಮಾರಿ ಇದ್ದಾಳಪ್ಪ, ನೀನು ಇವಳನ್ನ ಬಿಟ್ಟು ಬೇರೊಬ್ಬ ಒಳ್ಳೆಯ ಹುಡುಗಿಯನ್ನು ನೋಡಿ ಮದುವೆಯಾಗು..., ಅವಳು ಹಾಳಾಗಿ ಹೋಗುತ್ತಾಳೆ, ಅವಳ ಬಗ್ಗೆ ಮತ್ತೆ ತಲೆ ಕೊಡಿಸುವುದಕ್ಕೆ ಹೋಗ ಬೇಡ., ಅವಳು ಸಂಸಾರ ಮಾಡಲಿಕ್ಕೆ ಲಾಯಕ್ಕು ಇಲ್ಲಾ ಅಂತಾ ಹೇಳುತ್ತಾರೆ. ಇನಸ್ಪೆಕ್ಟರ್ ಅವರ ಮಾತು ಕೇಳಿದ ವಿಜಯ ಅವರ ಕಾಲಿಗೆಬಿದ್ದು ಬಿಡುತ್ತಾನೆ.., ನಿನಗೆ ಒಳ್ಳೆಯದಾಗಲಿ ಬೇಗ ಇವಳನ್ನ ಬಿಟ್ಟು ಒಂದು ಒಳ್ಳೆಯ ಹುಡುಗಿ ನೋಡಿ ಮದುವೆ ಮಾಡಿಕೊ, ಮದುವೆಗೆ ಕರಿ ನಾನು ಬರುತ್ತೆನೆ ಅಂತಾ ಹೇಳಿ ಕಳಿಸುತ್ತಾರೆ. ಇಂತಹ ಇನಸ್ಪೆಕ್ಟರ್ ಗಳೂ  ಇರುತ್ತಾರೆ ಅಂತಾ ತಿಳಿದು ವಿಜಯನಿಗೆ ಹಾಗು ಅವನ ಮನೆಯವರಿಗೆ ಸಂತೋಷವಾಗುತ್ತದೆ. ಇಲ್ಲಿಯ ಸಂದಾನ ಫಲಕಾರಿ ಯಾಗಲಿಲ್ಲ, ಹೆಣ್ಣಿನ ತಾಯಿ ಮಾವನ ಹಠ ಇಲ್ಲಿಗೆ ನಿಂತೀತೆ..? ವಿಜಯನ ಗೋಳು ಇಲ್ಲಿಗೆ ಮುಗೀತೆ ? ಅಥಾವಾ ಇವರ ಜೀವನ ಮತ್ತೆ ಸರಿಯಾದೀತೆ..? ಎಲ್ಲಾ ಊಹಾ ಪೋಹಗಳು ಹಾಗೆ ಇರಲಿ ಗೆಳೆಯರೆ...., ಮುಂದಿನ ಸಂಚಿಕೆಯಲ್ಲಿ ಮುಂದು ವರೆಸುತ್ತೆನೆ ಕಾದು ನೋಡಿ...........ಮುಂದುವರೆವುದು...)

ಸೂಚನೆ : ನಿಮ್ಮ ಅಭಿಪ್ರಾಯ, ತಕರಾರುಗಳನ್ನ ಅಪೇಕ್ಷಿಸುತ್ತೆನೆ, ಏನೇ ಇರಲಿ ನನಗೆ ಬರೆದು ಕಳಸಿ..., ಇನ್ನೂ ಕೆಲವೇ ಕಂತುಗಳಲ್ಲಿ ಈ ಕಥೆಯನ್ನ ಮುಗಿಸುತ್ತೆನೆ....ಧನ್ಯವಾದಗಳು.

THOUGHT FOR THE DAY

WHOLE WORLD SEEMS BEAUTIFULL ONLY WHEN THE EYES SEEING THAT WORLD ARE BEAUTIFULL.

ವೆಭಿಚಾರಿ

ಗಂಡನ ಬಿಟ್ಟ ಹೆಂಡತಿ,
ಪರ ಸತಿಗಳಿಗೆಲ್ಲಾ ಸವತಿ,
ಎನೇ ಗಳಿಸಿದರೇನು... ಅನ್ನಿಸಿಕೊಳ್ಳುವುದು ಮಾತ್ರ ವೆಭಿಚಾರಿ..!

ಹಿತವಚನ

ಸಾಲಾ ಸೋಲ ಮಾಡಿ ಐಶಾರಾಮಿ ಗಳಿಸಿದರೆ ಏನು ಬಂತು ,
ಎಷ್ಟಿದ್ದರೂ ಸಾಲ ಕೊಟ್ಟವನು ನಿನ್ನ ಅಂದ ನೋಡಿ ಬಿಟ್ಟಾನೆ ?

ಘರ್ವ

ತನ್ನಷ್ಟಕ್ಕೆ ತಾನೇ ಹೊಗಳಿಕೊಳ್ಳೊ  ತ್ರಿಪುರ ಸುಂದರಿ ,
ಕೆಲವೇ ವರುಷದಲ್ಲಿ ನೀನಾಗುವೆ ಪ್ರೀತಿಯ ಬೇಡುವ ಭಿಕಾರಿ !!

ಚುಟುಕ

ಮನುಷತ್ವಕ್ಕೆ, ಪ್ರೀತಿಗೆ ಬೆಲೆಕೊಡುವವರು ವಿರಳ
ಕಾಮ ಲೋಭದಲ್ಲೇ ಇವರ ಜೀವನ್ಮರಣ ..! 

Tuesday, March 05, 2013

ಕಥೆ (ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು ) - 11

(ಮುಂದೆವರೆದಿದೆ....... )  ಗಂಡನ ಮನೆಯಿಂದ   ತಾಳಿ ಎಸೆದು ಬಂದ ಹೆಂಗಸಿಗೆ ಎನೋ ಸಂತೋಷ , ಅಂತು ಇಂತು ಗಂಡನ ಮನೆಯಿಂದ ತಪ್ಪಿಸಿಗೊಂಡು ಬಂದೆ, ಇನ್ನು ಮುಂದೆ ನನ್ನ ಯಾರು ಏನೂ  ಕೇಳುವುದಿಲ್ಲ ಅನ್ನುವ ಸಂತಸ ಅವಳಿಗೆ. ಮರುದಿನದಿಂದಲೇ ಇವಳ ಬಾಯ್ ಫ಼್ರೆಂಡ ಇವಳನ್ನ ತನ್ನ ಬೈಕಿನ ಮೇಲೆ ಆಫಿಸಿಗೆ ಕರೆತರುತ್ತಾನೆ. ಅವನು ಸಹ ಅವಳದೇ ಆಫಿಸಿನಲ್ಲಿ ಕೆಲಸ ಮಾಡುತ್ತಿರುತ್ತಾನೆ.  ಇವರಿಬ್ಬರ ಒಡನಾಟ ತುಂಬಾ ಜೋರಾಗಿ ಶುರುವಾಗುತ್ತದೆ. ಆಫೀಸಿನ ಸಹುದ್ದ್ಯೋಗಿಗಳು ಮುಂಚೆ ಇವರು ಬರಿ ಸ್ನೇಹಿತರು ಅಂದು ಕೊಂಡಿರುತ್ತಾರೆ , ಇವಳು ಗಂಡನ ಬಿಟ್ಟು   ಬಂದವಳು ಅನ್ನುವುದು ಅವಳ ಗೆಳತಿಯ ಹೊರೆತು ಯಾರಿಗೂ ತಿಳಿದಿರುವುದಿಲ್ಲ . ಇವಳ ನಡೆವಳಿಕೆ ನೋಡಿದ ಗೆಳತಿ ನೀನು ಮಾಡುತ್ತಿರುವುದು ತಪ್ಪು ... ಹೀಗೆ ಮದುವೆಯಾದ ನೀನು ಬೇರೆಯವರೊಂದಿಗೆ ಸಲಿಗೆಯಿಂದ ಇರುವುದು  ತಪ್ಪು  ಅಂದಿದ್ದಕ್ಕೆ ..., ನೀನ್ಯಾವಳೆ  ಕೇಳೋದಕ್ಕೆ ? ನಾನು ಏನ್ಬೇಕಾದರೂ ಮಾಡಿಕೊಳ್ಳುತ್ತೇನೆ ನಿನಗ್ಯಾಕೆ ಅವೆಲ್ಲಾ ಅಂತ ಗದರಿಸಿ ಬಿಡುತ್ತಾಳೆ . ಇವಳ ಕಷ್ಟಗಳಿಗೆಲ್ಲ ಸ್ಪಂದಿಸಿದ ಗೆಳತಿಗೆ ಕಥಾ ನಾಯಕಿ ಕೊಟ್ಟ ಉತ್ತರ... ನೊಂದ ಗೆಳತಿ ಇವಳಿಗೆ ಬುದ್ದಿ ಹೇಳಲು ಹೋಗಿದ್ದು ತನ್ನ ತಪ್ಪು ,ಪಾಪ ಇವಳ ಗಂಡ ಇವಳ ಮೇಲೆ ಬೆಟ್ಟದಷ್ಟು  ಪ್ರೀತಿ ಇಟ್ಟುಕೊಂಡಿದ್ದ , ಈ ವಿಷಯಗಳು ಅವನಿಗೆ ತಿಳಿದರೆ  ನೊಂದುಕೊಳ್ಳುತ್ತಾನೆ ಅನ್ನುತ್ತಾ ಮರಗುತ್ತಾಳೆ. ಗೆಳತಿ ಮೂಕ ಪ್ರೆಕ್ಷಕಳಂತೆ ಆಫೀಸಿನಲ್ಲಿ ನಡೆಯುತ್ತಿರುವುದನ್ನು  ಗಮನಿಸುತ್ತಿರುತ್ತಾಳೆ. ಆ ಕೆಟ್ಟ ಹೆಂಗಸು ಅವನ ಜೊತೇನೆ  ಊಟ, ಚಾಹ  ಎಲ್ಲಾ , ಬೇಕೆಂದಾಗಲೆಲ್ಲಾ ಐಸ್ಕ್ರಿಮು ಕೊಡೆಸುವವ ಇವ .  " ಹೆಂಗಸರ ಬುದ್ದಿ ಮಣಕಾಲು ಕೆಳಗೆ " ಅನ್ನುವ ಗಾದೆ ಇಲ್ಲಿ ನಿಜವಾಗುತ್ತದೆ.  ಅದೊಂದು ದಿನ ಗಂಡ ಎಲ್ಲೋ ಹೊರಗೆ ಹೋಗಿ ಬರುತ್ತಿರುವಾಗ ಇವಳನ್ನು ಒಬ್ಬನ ಜೊತೆ ಇದ್ದುದ್ದನ್ನು ನೋಡುತ್ತಾನೆ. ದೂರದಲ್ಲಿ ನಿಂತು ಇವರ ಚಲನವಲನಗಳನ್ನ ವಿಕ್ಷಿಸುತ್ತಾನೆ , ಇತ್ತ ಗಂಡನ ಕಂಡರೂ ಆಶ್ಚರ್ಯ ಪಡದ ಇವಳು ಗಂಡನ ಹತ್ತಿರ ಕೈ ಮಾಡುತ್ತಾ ತನ್ನ ಬಾಯ್ ಫ಼್ರೆಂಡಿಗೆ ಏನೋ ಹೇಳುತ್ತಾಳೆ.. ಅಷ್ಟರಲ್ಲಿ ಅವಳ ಬಸ್ಸು ಬರುತ್ತದೆ ಅವನು ಅವಳನ್ನ ಬಸ್ಸು ಹತ್ತಿಸಿದ್ದೇ ಆಫೀಸಿನ ಹತ್ತಿರ ವೇಗವಾಗಿ ಓಡಲು ಪ್ರಾರಂಭಿಸುತ್ತಾನೆ ,ಆಕೆಯ ಗಂಡ ದೂರದಲ್ಲೆ ನಿಂತು ಇವನು  ಯಾರು, ಎಲ್ಲಿಗೆ ಹೋಗುತ್ತಿದ್ದಾನೆ ಅಂತ ಕುತೂಹಲದಿಂದ ನೋಡುತ್ತಾನೆ.  ವಿಜಯ ನೂರು ಪ್ರಶ್ನೆಗಳ  ಹೊತ್ತು  ಮನೆಗೆ  ಮರಳುತ್ತಾನೆ . ಅವನ ಮನಸಲ್ಲಿ ಎನೋ  ಕಸಿವಿಸಿ ..., ಯಾರವನು ? ಇಷ್ಟು ಬೇಗ ಮತ್ತೊಬ್ಬನ ಜೊತೆಯಲ್ಲಿ ಇವಳ ಸರಸ , ತಡೆಯಲಾಗದೆ ಅವಳ ಗೆಳತಿಯ ಮನೆಗೆ ಹೋಗಿ ಕೇಳಿಯೇ ಬಿಡುತ್ತಾನೆ .., ರೀ ಭಾಮಾ ಅವರೇ (  ಗೆಳತಿ ) ಇವತ್ತು ಇವಳೊಬ್ಬನ ಜೊತೆಯಲ್ಲಿ ಬಸ್ಸು ನಿಲ್ದಾಣದಲ್ಲಿ  ನಿಂತಿದ್ದನ್ನು ನೋಡಿದೆ ನಿಮಗೆ ಗೊತ್ತೇ ಇರಬೇಕು ಯಾರು ಆ ಹುಡುಗ... ? ಭಾಮಾಗೆ  ಮಾತುಗಳೇ ಹೊರಡಲಿಲ್ಲ .., ವಿಜಯ ಅವರೇ ... " ಅವಳು ತುಂಬಾ ಮುಂದುವರೆದಿದ್ದಾಳೆ " ನಾವು ಗೆಳತಿಯರೆಲ್ಲರೂ ಅವಳು ಒಳ್ಳೆಯವಳು ಅಂತ ಅಂದುಕೊಂಡಿದ್ದಿವಿ , ಅವಳು ಇಂತಹ ಸಂಬಂಧಗಳನ್ನು ಇಟ್ಟುಕೊಂಡಿದ್ದಾಳೆ ಅನ್ನುವುದು ನಮಗೂ ಕೂಡ ತಿಳಿದಿರಲಿಲ್ಲ . ಅವಳಿಗೆ ನಿಮ್ಮ ಜೊತೆ ಸಂಸಾರ ಮಾಡಲು ಇಷ್ಟವಿಲ್ಲವಂತೆ , ಸುಮ್ಮನೆ ಅವಳನ್ನ ಬಿಟ್ಟು ಬಿಡಿ ಅಂತ ಹೇಳಿಬಿಡುತ್ತಾಳೆ , ಇಷ್ಟು ಬಿಟ್ಟರೆ ನಿಮಗೆ ಮತ್ತೇನೂ ನಾ  ಹೇಳಲಾರೆ ಎಂದು ಮೌನವಾಗುತ್ತಾಳೆ.  ವಿಜಯನಿಗೆ  ಅರಗಿಸಿಕೊಳ್ಳಲಾಗದ ವಿಷಯ .. ! ಹಿಂದೆ ಒಂದು ಸಾರಿ ಜಗಳದಲ್ಲಿ ಹೆಂಡತಿ  ಹೇಳಿದ ಮಾತುಗಳು  ನೆನಪಿಗೆ ಬರುತ್ತವೆ..... , ಗಂಡ ಹೆಂಡಿರ ನಡುವೆ ಜಗಳವಾದಾಗ ಗಂಡ ಅಂದು ಕಚೇರಿಯಿಂದ ತಡವಾಗಿ ಮನೆಗೆ ಬಂದಿರುತ್ತಾನೆ  , ತನ್ನ ಕಚೇರಿಯಲ್ಲಿ ನಾಟಕದ ಪ್ರಯುಕ್ತ , ಆ ನಾಟಕದಲ್ಲಿ ಹುಡುಗೆಯರು ಕೂಡ ಭಾಗವಹಿಸಿದ್ದರು ಅನ್ನೋ ಕಾರಣಕ್ಕೆ....  ಇವಳು " ನಾನು ಕೂಡ ಯಾವನನ  ಜೊತೆಯಲ್ಲಿ ಮಲಾಗಿ ಬರಲಾ ? " ಅಂತ ಹೇಳಿರುತ್ತಾಳೆ .  ಟಿವಿ ಚಾನಲ್ಲಿನಲ್ಲಿ  ಶುಸ್ಮಿತಾ ಸೇನ್ ಹಾಗು ಖುಶುಬು ನಟಿಮಣಿಯರು " SEX BEFORE MARRIAGE IS NOT CRIME " ಅಂದಿದ್ದಕ್ಕೆ ಇವಳ ಪ್ರತಿಕ್ರಿಯೆ.... " ಅಯ್ಯೋ ಇವೆಲ್ಲಾ ಕಾಮನ್ ಇವಾಗ " ಅಂದ ಮಾತುಗಳು ವಿಜಯನ್ನ ಇವಳು ಎಂತಹ ಕೆಟ್ಟ ಹೆಂಗಸು ಅನ್ನುವುದು ಗೋಚರಿಸತೊಡಗುತ್ತದೆ. ಅಯ್ಯೋ ಶಿವನೆ ..... ಯಾವ  ಪಾಪಕ್ಕಾಗಿ ನನಗೆ ಈ ಶಿಕ್ಷೆ ? ಅನ್ನುತ್ತಾ ತುಂಬಾ ನೊಂದುಕೊಳ್ಳುತ್ತಾನೆ . ಅತ್ತ ಹುಡುಗಿಯು ಮನೆಗೆ ಹೋಗಿ ತನ್ನ ತಪ್ಪುಗಳು ಮುಚ್ಚಿಕೊಳ್ಳಲು , ತನ್ನ ಗಂಡ ಆಫೀಸಿನ ಹತ್ತಿರ ಬಂದು ತನ್ನನ್ನ ಹಿಡಿದು ಎಳೆದ ಅಂತ ಹೇಳಿ , ಅದಕ್ಕೆ  ಅವನ ಮೇಲೆ ಪೋಲಿಸು ದೂರು ನೀಡಲು ಮುಂದಾಗುತ್ತಾಳೆ, ಇದಕ್ಕೆ ಕುಮ್ಮಕ್ಕು ಅವಳ ಮಾವ, ಅವಳ ತಾಯಿ .  ಆದರೆ ಇಲ್ಲಿ ಇವರ ಮನೆಯವರಿಗೆ ಇವಳ ಕಪಟ ಆಟಗಳು ತಿಳಿದಿರುವುದಿಲ್ಲ. ಒಂದು ಮಟ್ಟಿಗೆ ಇವಳ ಮಾವನಿಗೆ ಇವಳ ಬಗ್ಗೆ ಎಲ್ಲಾ ಮಾಹಿತಿಗಳು ಇರುತ್ತವೆ ಹಾಗು ಇವನು ಕೂಡ ಅವಳ ಕೃತ್ಯಗಳಿಗೆ ಸಹಾಯ ಹಸ್ತ ನೀಡುತ್ತಿರುತ್ತಾನೆ. ಮಾರನೆ ದಿನ ಬೆಳಿಗ್ಗೆ ಇವಳ ಮಾವ ಹಾಗು ಇವಳು  ಸೇರಿ  ಪೋಲಿಸು  ಠಾಣೆಯಲ್ಲಿ  ವಿಜಯನ ವಿರುದ್ದ ಸುಳ್ಳು ದೂರುಗಳನ್ನು ನೀಡುತ್ತಾರೆ , ಅವರ ದೂರಿನಲ್ಲಿ ಗಂಡ ಅವಳನ್ನು ಹೊಡಿದು ಬಡಿದು ಹಿಂಸಿಸುತ್ತಾನೆ , ವರದಕ್ಷಿಣೆ ಕಿರುಗಳ ಹಾಗು ಹುಡುಗನ ತಂದೆ ತಾಯಿ ತಮ್ಮಂದಿರ ಮೇಲೆ ಹಿಂಸೆಯ ಸುಳ್ಳು ದೂರು ನೀಡುತ್ತಾಳೆ. ಗಂಡನ ಜೊತೆ ಇವಳೊಬ್ಬಳೆ ಇದ್ದವಳು ಮನೆ ಮಂದಿಯ ಮೇಲೆಲ್ಲಾ ಮನಕೆ ತೋಚಿದಂತೆ ದೂರು ನೀಡುತ್ತಾಳೆ. ವಾಹ ಎಂತಹ ಹೆಂಗಸುರು ಇದ್ದಾರಪ್ಪಾ ಈ ಜಗದಲ್ಲಿ ಅಂತಾ ಅನ್ನಿಸುವುದಿಲ್ಲವೇ ಪ್ರೀಯ  ಓದುಗರೆ...  ?  ಪಾಪ ವಿಜಯನಂತಹ ಹುಡುಗರು ಇನ್ನೂ ಎಷ್ಟು ಇರುವರು ನಾ ಕಾಣೆ...!  ಕೆಟ್ಟ ಹೆಂಡತಿಯ ಕಟ್ಟಿಕೊಂಡ ವಿಜಯನ ಕಥೆ ಮುಂದೆ ಏನಾಗುತ್ತದೋ ಕಾದು  ನೋಡಿ. ( ಮುಂದುವರೆವುದು  ....... )

ವೇಶ್ಯೆ

ಗಂಡನಿಗೆ ವೇಶ್ಯೆಯ ಸಹವಾಸ ಮಾಡಿದ್ದಿರಾ ಅಂತ ಕೇಳಿದ ಹೆಂಗಸು ...,
ತನ್ನ ಮಾತುಗಳಲ್ಲೇ ...., ತಾನೂ  ಒಬ್ಬ ವೇಶ್ಯೆ ಅಂತ ಬಿಂಭಿಸಿದ್ದಳು ....!!

हित वचन



दियाचे अंत कदि निकट आवर्तात तरी दिया जोरात खूप उजाळा हुयील !

पण ये त्यांची जीत नाही तो अस्तंगत होयील असा सुचना आहे !

ಹಿತ ವಚನ


" ಧರ್ಮೊ ರಕ್ಷತಿ ರಕ್ಷಿತಃ "

ಯಾರು ಧರ್ಮವನ್ನು ಪಾಲಿಸುತ್ತಾರೊ ಅವರಿಗೆ ಧರ್ಮವೇ ರಕ್ಷಿಸುತ್ತದೆ.

ಈ ಜಗದಲ್ಲಿ ಎಂದಿಗೂ ಅಧರ್ಮಕ್ಕೆ ಜಯ ದೊರೆತಿಲ್ಲ , ಅಧರ್ಮ ಎಂದಿಗೂ ಜಯಿಸುವುದಿಲ್ಲ.

हित वचन


इंसान कित्नाही बुरा क्यूँ ना हो , भगवन उसे गलती सुदारने के लिए एक फरिश्ता भेजता है।

लेकिन वो लोग अपनी गलती सुदारे  बगैर फरीस्थों को भी अपने कर्मों से दुख पोहुचाते है।

मौका तो एक ही बार मिलता है। जो सुदर गए वोह सुदार्जाते है , और जो नहीं सुदर्ते उनको खुद भगवन भी नहीं बचा सकता है।

THOUGHT FOR THE DAY

MISTAKES CAN BE FORGIVEN, WHEN THEY JUST HAPPEN UNKNOWINGLY..!
BUT,
NOT WHEN THEY ARE DONE  " INTENTIONALLY "

Monday, March 04, 2013

ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು) - 10

ಮುಂದುವರೆದಿದೆ....) ಹೇಗೊ ಮತ್ತೆ ಮನೆಗೆ ಬಂದಳು ಮುಂದೆ ಹೊಂದಿಕೊಂಡು ಹೋಗುತ್ತಾಳೆ ಎಂದು ಭಾವಿಸಿದ್ದ ವಿಜಯ. ಆದರೆ, ಅವಳ ಮನಸಲ್ಲಿ ಬೇರೆಯೇ ಇತ್ತು. ಅವಳ ವರ್ತನೆಗಳು ಬರಿ ಅನುಮಾನಗಳನ್ನ ಊಂಟು ಮಾಡುತ್ತಿದ್ದವು..ಕದ್ದು ಮುಚ್ಚಿ ಬಚ್ಚಲ ಮನೆಯಲ್ಲಿ ಯಾರದೊ ಹತ್ತಿರ ಮಾತನಾಡುತ್ತಿದ್ದಳು.,ಏನೋ ನಡೆಯುತ್ತಿತ್ತು...ಏನು ಅನ್ನುವುದು ಅವನಿಗೆ ತಿಳಿಯುತ್ತಿರಲಿಲ್ಲ..ಇವಳ ವಿಜಯನ ಜೊತೆ ಮತ್ತೆ ಸರಿಯಿಲ್ಲ ಏನೋ ಕುತಂತ್ರ ನಡೆಸುತ್ತಿದ್ದಳು. ಏನೂ ತಿಳಿಯದಾದಾಗ ವಿಜಯ ಅವಳ ಗೆಳತಿಯ ಸಹಾಯ ಪಡೆಯಲು ನಿರ್ಧರಿಸುತ್ತಾನೆ. ಅವರ ಮನೆಗೆ ತೆರಳಿ ನೀವು ಬಂದು ಸ್ವಲ್ಪ ಇವಳಿಗೆ ಬುದ್ಧಿ ಹೇಳಿ.., ಇವಳು ಬದುಕಬೇಕಾದದ್ದು ಗಂಡನ ಜೊತೆಯಲಿ, ಇಬ್ಬರು ಒಬ್ಬರಿಗೊಬ್ಬರು ಆಸರೆಯಾಗಿರಬೇಕು ಗಂಡನ ಗೌರವ ಪ್ರತಿಷ್ಠೆಯೆ ಇವಳ ಪ್ರಧಾನ್ಯತೆ ಆಗಿರಬೇಕು ಹಾಗೆಯೇ ಗಂಡನು ಕೂಡ ಹೆಂಡತಿಯ ಬೇಕು ಬೇಡಗಳನ್ನು ತಿಳಿದು ಅರಿತು ಬಾಳಬೇಕು. ಅವರುಗಳು ಕೂಡ ಸರಿ ನಿಮ್ಮ ಜೀವನ ನಮ್ಮ ಮಧ್ಯಸ್ತಿಕೆಯಿಂದ ಸರಿ ಹೋಗುವುದು ಅಂದರೆ ನಾವು ಬರುತ್ತಿವಿ ಅನ್ನುತ್ತಾರೆ. ಸಂಜೆ ಆರು ಗಂಟೆಗೆ ಸರಿಯಾಗಿ ಅವಳ ಗೆಳತಿ ಮತ್ತು ಗಂಡ ಮನೆಗೆ ಬರುತ್ತಾರೆ. ಗೆಳತಿಯೊಡನೆ ಕುಶಲ ಸಮಾಚಾರವಾಗುತ್ತದೆ. ವಿಜಯನ ಕುರಿತು ಎನ್ ವಿಜಯರವರೆ ಏನ್ ಸಮಾಚಾರ..ಅಂತಾ ಮಾತುಗಳು ಶುರುಮಾಡುತ್ತಾರೆ, ಅದಕ್ಕೆ ವಿಜಯನು... ನೋಡಿ ನೀವು ತಿಳಿದ್ದಿದ್ದವರಿದ್ದಿರಿ ಇವಳು ಮಾಡಿದ್ದು ಸರಿಯೇ ನೀವೇ ಹೇಳಿ...ನಾನು ಮನೆಯಲ್ಲಿ ಇರದಾಗ ಇವಳು ಮನೆ ಬಿಟ್ಟು ಹೋದಳು,ಎಲ್ಲಿಗಾದರೂ ಹೋಗಬೇಕಾದಾಗ ಹೇಳಿ ಹೋಗ ಬೇಕೊ ಬೇಡವೊ ನೀವೇ ಹೇಳಿ..ಯಾವಾಗಲೂ ನೋಡಿದರು ಪೋನಿನಲ್ಲಿ ಮಾತನಾಡುತ್ತನೆ ಇರುತ್ತಾಳೆ,ಹೋಗುವ ಮೊದಲು ಗಂಡನಿಗೆ ಒಂದು ಪೋನು ಮಾಡಬಹುದಿತ್ತಲ್ಲ..., ಕೇಳಿ ಇವಳು ಮಾಡಿದಳಾ ಅಂತ....ಇಷ್ಟು ಮಾತುಗಳು ಆಗುತ್ತಿದ್ದರೂ ಇವಳ ಅಡುಗೆ ಮನೆಯಲ್ಲಿ ಸುಮ್ಮನೆ ಕುಳಿತಿರುತ್ತಾಳೆ.., ನೋಡಿ ಇಲ್ಲಿ ನೀವು ಬಂದ್ದಿದ್ದಿರಾ, ನಾವು ನಮ್ಮ ಸಂಸಾರದ ಬಗ್ಗೆ ಮಾತನಾಡುತ್ತಿದ್ದೇವೆ ಇವಳಿಗೆ ಸ್ವಲ್ಪನಾದರೂ ಚಿಂತೆ ಇದೆಯೆ..? ಯಾವಾಗಲೂ ನನ್ನ ಫ್ಯಾಮಲಿ ನನ್ನ ಜನ ಅಂತ ಇರ್ತಾಳೆ, ಹಾಗದರೆ ಇವಳಿಗೆ ಅವರ ಬಗ್ಗೆನೆ ಚಂತಿಸುವುದಿತ್ತೆಂದರೆ ಮದುವೆ ಏಕೆ ಬೇಕಿತ್ತು, ನನ್ನ ಗೌರವ, ಪ್ರತಿಷ್ಟೆ ಬಗ್ಗೆ ಇವಳಿಗೆ ಕಿಂಚಿತ್ತು ಚಂತೆಯಿಲ್ಲ, ಹೀಗಿದ್ದರೆ ಸಂಸಾರ ನಡೆದೀತಾ ? ಸರಿ ವಿಜಯ ಅವರೆ ಈಗ ಏನ್ ಆಗಿದೆ ಅದನ್ನ ಮರೆತು ಬಿಡೋಣ,ನೀವು ಕೂಡ ಮರೆತು ಬಿಡಿ.., ನಮ್ಮನ್ನ ಗೌರವವಿಟ್ಟು ಕರೆದಿದ್ದೀರಿ ಹಾಗೆ ನಾವು ಬಂದಿದ್ದೀವಿ ಮುಂದೆ ಹೇಗಿರಬಹುದು ಅನ್ನೊ ಯೋಚನೆ ಮಾಡೊಣ ಅಂತ ಹೇಳುತ್ತಾಳೆ ಗೆಳತಿ..ನೋಡೆ ( ವಿಜಯನ ಪತ್ನಿಯತ್ತ ನೋಡುತ್ತಾ..) ನಿಮ್ಮ ಯಜಮಾನರು ತುಂಬಾ ಒಳ್ಳೆಯವರು, ನಿನ್ನ ಮೇಲೆ ತುಂಬಾನೆ ಜೀವ ಇಟ್ಟುಕೊಂಡಿದ್ದಾರೆ, ಅವರು ಹೇಗೆ ಹೇಳುತ್ತಾರೆ ಹಾಗೆ ಕೇಳಿಕೊಂಡು ಹೋಗು, ನಿನಗೇನೆ ಸಮಸ್ಯವಿದ್ದರೆ ನಿನ್ನ ಯಜಮಾನರ ಹತ್ತಿರ ಹೇಳಿಕೊ ಪದೆ ಪದೆ ನಿನ್ನ ಮನೆಯವರನ್ನ ನಿಮ್ಮ ಜಗಳದಲ್ಲಿ ತರಬೇಡ..,ನೀನು ಈಗಾಗಲೇ ಕೆಲವು ವಿಷಯಗಳನ್ನ ಹೇಳಿ ಅವರುಗಳು ಇವರ ದೊಡ್ಡವ್ವನವರಿಗೆ ಹೇಳಿದ್ದು ನಿನ್ನ ಯಜಮಾನರಿಗೆ ಬೇಸರ ಉಂಟು ಮಾಡಿದೆ ಇಂತಹ ಘಟನೆಗಳು ಮತ್ತೆ ಆಗದ ಹಾಗೆ ನೋಡಿಕೊ, ನಿಜ ಹೇಳಬೇಕೆಂದರೆ ನಿಮ್ಮ ಮನೆಯವರಿಂದ ಸ್ವಲ್ಪದಿನ ದೂರವಿರು, ಗಂಡನ ನೆಚ್ಚಿನ ಹೆಂಡತಿಯಾಗಲು ಪ್ರಯತ್ನಿಸು, ಅವನ ಪ್ರೀತಿ ವಿಶ್ವಾಸ ಗಳಿಸು ಬೆರೆಯರ ಬಗ್ಗೆ ಚಿಂತಿಸುವುದು ನಿನ್ನ ಕಾಯಗವಲ್ಲ,ಅವರವರ ಸಂಸಾರ ಅವರೇ ನೋಡಿಕೊಳ್ಳಬೇಕು. ಇಷ್ಟೆಲ್ಲಾ ಹೇಳಿದರು ಅವಳು ಒಂದು ಮಾತಿಗೂ ಸರಿ ಅಂತ ಹೇಳಲೇ ಇಲ್ಲ, ನನಗೆ ನಮ್ಮ ಮನೆಯವರನ್ನ ಬಿಟ್ಟು ಬದುಕಲು ಆಗುವುದಿಲ್ಲ ಅವರೇ ನನಗೆಲ್ಲಾ....ಅಂತಾ ಹೇಳುತ್ತಾಳೆ ಈ ಮಾತುಗಳನ್ನ ಕೇಳಿದ ಗಂಡನಿಗೆ ತಲೆಗೆ ಏರುತ್ತದೆ...ನೋಡಿರಿ ಇವಳ ಗರ್ವ...ಹೇಗೆ ಹೇಳುತ್ತಾಳೆ ಅಂತಾ, ಇವಳಿಗೆ ಗಂಡ ಇದ್ದರು ಸತ್ತರೂ ಏನು ಫರಕ್ ಬೀಳುವುದಿಲ್ಲ ಅಂತ ಹೇಗೆ ಹೇಳುತ್ತಾಳೆ ನೋಡಿ ಅಂದನು...ಪಾಪ ಅವರು ತಾನೆ ಏನು ಹೇಳ್ಯಾರು...ನೀನು ಹಿಂಗೆ ಆಡಿದರೆ ಸರಿ ಹೋಗುವುದಿಲ್ಲ, ನಿಮ್ಮ ಇಬ್ಬರ ಮನೆಕಡೆಯವರನ್ನ ಕೂಡಿಸಿ ಮಾತನಾಡಿ ಅಂತ ಹೇಳುತ್ತಾರೆ, ವಿಜಯನ ಹೆಂಡತಿ ಆಯ್ತು ನಾನು ಕರೆಸುತ್ತೇನೆ ಆದರೆ ನಾನು ಇವತ್ತು ಇಲ್ಲಿ ಇರುವುದಿಲ್ಲ...,ಏಕೆಂದರೆ ನನಗೆ ಇವನ ಮೇಲೆ ಭರವಸೆ ಇಲ್ಲ..ನಾನು ಇಲ್ಲೆ ಇದ್ದರೆ ನಾನೆ ಏನಾದರೂ ಮಾಡಿಕೊಳ್ಳಬಹುದು ಅಂತ ಧಮಕಿ ಹಾಕುತ್ತಾಳೆ.ಹಾಗಿದ್ದರೆ ಹೊರಬಿದ್ದು ಹೋಗು ಅಂತ ಹೇಳುತ್ತಾನೆ,ಅದಕ್ಕೆ ಅವಳು ನಗಲಾರಂಭಿಸುತ್ತಾಳೆ, ಇದನ್ನು ಕಂಡ ಗಂಡನಿಗೆ ಇನ್ನಷ್ಟು ರೇಗಿ ಹೋಗುತ್ತದೆ, ಸಿಟ್ಟು ತಾಳಲಾರದೆ ಒಂದು ಕೆನ್ನೆಗೆ ಬಾರಿಸುತ್ತಾನೆ...ಇವಳು ತನ್ನ ಮಾವನಿಗೆ ಎಲ್ಲಾ ತಯ್ಯಾರಿ ಮಾಡಿಕೊಳ್ಳಿ ಅಂತಾ ಪೋನು ಮಾಡಿ ಗಂಡನ ಮುಂದೆನೆ ಹೇಳುತ್ತಾಳೆ. ಇವಳು ಏನು ಹೇಳಿದಳು ಅನ್ನುವುದು ವಿಜಯನಿಗೆ ತಿಳಿಯದೇ ಹೋಯಿತು. ಅವತ್ತು ಅವಳು ತನ್ನ ತಾಳಿಯ ಬಿಚ್ಚಿ ಎಸೆದು ತನ್ನ ಕಪಟಿ ಮಾವನ ಮನೆಗೆ ಮತ್ತೆ ಮರಳುತ್ತಾಳೆ, ಹೋಗುವ ಮುನ್ನ, ತನ್ನ ಎಲ್ಲಾ ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಾಳೆ, ಮುಂದೆ ವಾಪಸ್ಸು ಬರಬಾರದು ಎಂದುಕೊಂಡು... ಇವಳನ್ನ ಕರೆದು ಕೊಂಡು ಹೋಗಲಲು ಇವನ ಮಾವ ಇವಳ ಗೆಳತಿಯ ಮನೆಗೆ ಬಂದು ಕಾಯುತ್ತಿರುತ್ತಾನೆ. ಹೋಗುವ ಮುನ್ನ, ಇವನಿಗೆ ಒಂದು ಗತಿ ಕಾಣಿಸುತ್ತೇನೆ ಅಂತಾ ಹೇಳಿ ಹೋಗಿರುತ್ತಾನೆ, ಆದರೆ ಈ ವಿಷಯ ವಿಜಯನಿಗೆ ತಿಳಿದಿರುವುದಿಲ್ಲ...ಮತ್ತೆ ಎರಡು ತಿಂಗಳುವರೆಗೆ ಇವರಿಬ್ಬರ ನಡುವೆ ಯಾವುದೇ ಮಾತುಗಳು ನಡೆಯುವುದೇ ಇಲ್ಲ...ಹೀಗೆಯೇ ಸಂಬಂಧಗಳು ಹಳಿಸಿ ಹೋಗಲಾರಂಭಿಸಿದವು....ಹೆಣ್ಣಿನ ಮನೆಯವರು ಇದನ್ನ ಹೀಗೆ ಬಿಡಬಾರದು ಬೇಗ ಮಾತನಾಡಿ ಬೆಗೆ ಹರಿಸಬೇಕು ಅನ್ನುವ ಗೋಜಿಗೆ ಹೋಗುವುದಿಲ್ಲ.., ಸುಮ್ಮನೆ ಮನೆಯೊಳಗೆ ಇಟ್ಟುಕೊಂಡು ಅವಳ ಸಂಬಳವನ್ನು ಉಡಾಯಿಸುತ್ತಾ ಮಜಾ ಮಾಡುತ್ತಿರುತ್ತಾರೆ. ಗಂಡ ತಾನೆ ಹೆಂಡತಿಯ ಬಿಡಲಾರದೇ ಓಡಿ ಬರುವನು ಎಂದುಕೊಂಡು..... ಇವಳು ಮಾತ್ರ ತನಗೆ ಏನೂ ಆಗಿಲ್ಲ ಅನ್ನುವ ಹಾಗೆ ತನ್ನ ಮನೆಯವರ ಜೊತೆ ಸುಖವಾಗಿ ಇರಲಾರಂಭಿಸುತ್ತಾಳೆ.. ಯಾರಾದರೂ ಇಂತಹ ಮನೆಯವರನ್ನ ಹಾಗು ಗಂಡನನ್ನ ಬಿಟ್ಟು ತವರಿನಲ್ಲಿ ಕುಳಿತವರನ್ನ...ನೋಡಿದ್ದೀರಾ ಗೆಳೆಯರೆ...ಇವರ ಮದುವೆಯ ಹಿಂದಿನ ಉದ್ದೇಶ ಇನ್ನು ಮೇಲೆ ತಿಳಿಯುತ್ತದೆ.... ಈ ಮಧ್ಯದಲ್ಲಿ ಇವಳ ಆಫೀಸು ಲಿಲೆಗಳು ಶುರುವಾಗುತ್ತವೆ..... ಒಂದು ಮದುವೆ ಆದ ಹೆಂಗಸ್ಸು ಯಾವ ಮಟ್ಟಕ್ಕೆ ಇಳಿಬಹುದು ಅನ್ನುವುದು ಕಾದು ನೋಡಿ......(ಮುಂದುವರೆವುದು...)

Friday, March 01, 2013



ಸೌಂದರ್ಯತೆ

ಸೌಂದರ್ಯತೆ  ಎಂದಿಗೂ ಮುಖದಲ್ಲಿ ಬಿಂಭಿಸುವುದಿಲ್ಲ

ಅದು ಮನುಷ್ಯನ ಒಳ್ಳೆಯ ಗುಣ, ಕ್ರಿಯೆ,ಹಾಗು ಕರ್ಮಗಳಿಂದ ಗೋಚರಿಸುತ್ತದೆ. 
                                                                                                                       - ಭಾವಪಪ್ರಿಯ
खूबसूरती

खूबसूरती कभी भी शकल से नहीं पहचानी जाती है ..
जो अपने अच्छे काम और क्रिया  से जाने जाते है वोही सबसे  बडे खुबसूरत होते है !
                                                                                                                            - भावप्रिय
BEAUTY

BEAUTY IS NEVER JUDGED ON THE FACE
RATHER,
PEOPLE  ARE ADMIRED BY THE BEAUTY OF  THEIR HEART & BY GOOD DEEDS.
                                                                                                                         - Bhavapriya

THOUGHT FOR THE DAY


SOMETIMES WHILE DIGGING FOR GOLD, WE END UP WITH SCRAP IRON WHICH ARE HARD TO DIGEST

BUT, THESE ARE " THE LEARNINGS OF LIFE ".

BECAUSE GOD WANTS YOU TO DIG MORE DEEP & DEEPER WHERE U END UP WITH DIAMONDS,

THEN HE SMILES & SAYS " THATS WHAT YOU REALLY DESERVE "

ಕೊನೆಯೇ ಇಲ್ಲ

ನಿನ್ನ ಕಳ್ಳ ಹೆಜ್ಜೆಗಳ ಅರಿವು ನನಗುಂಟು,


ನಿನ್ನ ಕಾಮನ ಆಸೆಗಳಿಗೆ ಕೊನೆಯೇ ಇಲ್ಲ !

ಏಳ್ ಏಳು ಜನಮವವಿತ್ತರೂ ನೀ,

ನಿನ್ನ ಲಜ್ಜೆ ಜೀವಕೆ ಕೊನೆಯೇ ಇಲ್ಲ !

ಹಿತವಚನ

ಸಾವಿರ ಜನರ ರಕ್ತ ಕುಡಿದರೂ ನೀ ...ನಿನ್ನ ಸಾವು ಒಂದು ಚಪ್ಪಾಳೆಯಲ್ಲೇ..!

ಎಷ್ಟೇ ಜನರ ಲೂಟಿ ಮಾಡು ನೀ....ನಿನ್ನ ಕುತಂತ್ರ ಸ್ವಪ್ನ ಪಡೆಯುವುದಿಲ್ಲೆ..!

Thursday, February 28, 2013

ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು) - 9

(ಮುಂದೆ ಓದಿ......) ಮದುವೆಯ ಬಂಧನದಲ್ಲಿ ಕಾಲಿಡುವಾಗ ಯಙ್ಯದ ಮುಂದೆ ಪ್ರಮಾಣ ಮಾಡಿ ಇಬ್ಬರು ಸುಖ ದಃಖಗಳನ್ನು ಸಮಾನವಾಗಿ ಹಂಚುಕೊಂಡು ಬಾಳುತ್ತೇವೆ ಅಂದ ಮಾತುಗಳು ಇಲ್ಲಿ ಸುಳ್ಳಾಗಿದ್ದವು. ಮದುವೆಯಾದ ಮೇಲೆ ಅವನೇ ಸರ್ವಸ್ವ ಅಂತ ಇವಳು ಎಂದೆಂದಿಗೂ ತಿಳಿಯಲೇ ಇಲ್ಲ. ಮನೆ ಮಗಳು ಗಂಡನ ಬಿಟ್ಟು ತವರು ಮನೆಗೆ ಬಂದರೆ ಹೆಣ್ಣಿನ ಮನೆಕಡೆಯವರು ಸಾಮಾನ್ಯವಾಗಿ ಆತಂಕಕ್ಕೆ ಒಳಗಾಗುತ್ತಾರೆ. ತಕ್ಷಣವೆ ಏನು ಆಗಿದೆ..? ಯಾಕೆ ಮಗಳು ಹೇಳದೇ ಕೇಳದೇ ಗಂಡ ಮನೆಯಲ್ಲಿ ಇರದ ಸಮಯದಲ್ಲಿ ಎಲ್ಲ ಕಟ್ಟಿಕೊಂಡು ಬಂದಳು ಎಂದು ಎಲ್ಲರೂ ವಿಚಾರಿಸಬಹುದು., ಆದರೆ ಇವಳ ವಿಷಯದಲ್ಲಿ ಹೀಗೆ ಆಗಲೇ ಇಲ್ಲ. ಹೆಣ್ಣಿನ ಮನೆಕಡೆಯವರಾಗಲಿ,ಇಲ್ಲಾ ಅವಳ ತಾಯಿಯಾಗಲಿ, ಅಕ್ಕಂದಿರಾಗಲಿ ಒಂದು ಚಕಾರ ಮಾತು, ಪೊನು ಕೂಡಾ ಮಾಡುವುದಿಲ್ಲ. ಆದರೆ ಅವಳು ತಮ್ಮವರ ಮನೆಗೆ ಹೋಗಿರುವಳು ಅನ್ನುವುದು ಮಾತ್ರ ವಿಜಯನಿಗೆ ತಿಳಿಯಿತು. ಸರಿ ಮನಸ್ಸಿಗೆ ಬೇಸರವಾಗಿದೆ ಮನೆಗೆ ಹೋಗಿ ಬರಬಹುದು ಅನ್ನುವುದು ನಮ್ಮ ವಿಜಯನ ಕಲ್ಪನೆ...! ಆದರೆ ಅವನ ಆಶ್ಚರ್ಯಕ್ಕೆ ಅವಳು ತನ್ನ ಮನೆಯಿಂದ ಕಚೇರಿಗೆ ಬಂದು ಹೋಗುತ್ತಿರುತ್ತಾಳೆ..ಮನಸ್ಸಿಗೆ ಬೇಸರವಾದವಳು ಕಚೇರಿಗೆ ಹೋಗುವಷ್ಟು ಸರಿ ಇದ್ದಳೆ ? ಇಲ್ಲಾ ಕಚೇರಿಯಲ್ಲಿ ಅವಳಿಗೆ ಇಷ್ಟವಾದದ್ದು ಏನೋ ಇತ್ತೆ ? ಇದಕ್ಕೆ ಮುಂದೆ ಉತ್ತರ ದೊರೆಯುತ್ತೆ...! ಗಂಡನ ಜೊತೆ ಇವಳ ಮಾತು ಕಥೆಯಿಲ್ಲ, ಮನೆಯವರ್ಯಾರು ಅವಳ ಗಂಡನ ಜೊತೆ ಮಾತನಾಡಲಿಲ್ಲ. ಎರಡು ದಿನ ಸಂಪರ್ಕವಿಲ್ಲದೇ ಕಳೆದು ಮರಳಿ ಗಂಡನ ಮನೆಗೆ ಮರಳುತ್ತಾಳೆ. ಇವಳು ಯಾರ ಜೊತೆಗೆ ಹೋಗಿದ್ದಳು ? ಯಾರು ಇವಳಿಗೆ ತಂದು ಬಿಟ್ಟರು ? ಗಂಡನ ಮನೆ ಹೊಸ್ತಿಲ ದಾಟಿದ ಹೆಣ್ಣು ಮಗಳಿಗೆ ಎನಂತ ಕರೆಯುತ್ತಿರೊ ನೀವೆ ಹೇಳಬೇಕು..ಗಂಡ ಕಚೇರಿಯ ಕೆಲಸಕ್ಕಾಗಿ ಅಂದು ರಾತ್ರಿ ತಡವಾಗಿ ಮನೆಗೆ ಬರುತ್ತಾನೆ, ಹೆಂಡತಿಯ ಹತ್ತಿರ ಬೀಗದ ಕಿಲಿ ಇಲ್ಲಾ, ತನ್ನ ಒಬ್ಬ ಗೆಳತಿಯ ಸಹಾಯದಿಂದ ಮನೆ ಬಾಗಿಲು ಒಡೆಯಲು ಪ್ರಯತ್ನಿಸುತ್ತಾಳೆ, ಆಗುವುದಿಲ್ಲ ..! ಸರಿ ಗಂಡ ಬರುವವರೆಗೂ ಬಾಗಿಲಲ್ಲೇ ಕುಳಿತುಕೊಳ್ಳುತ್ತಾಳೆ. ಇವಳ ಮೈ ಪೂರ್ತಿ ಸುಡುತ್ತಿತ್ತು, ಮೈ ನಡುಗುತ್ತಿತ್ತು, ಕೊರೆವ ಚಳಿಯಲ್ಲಿ ಮನೆಮುಂದೆ ಕಾಯುತ್ತ ಕುಳಿತಿರುತ್ತಾಳೆ.ಗಂಡ ಮನೆಗೆ ಬಂದೊಡನೆ ಇವಳನ್ನು ನೋಡಿ.., ಹೇಳದೇ ಕೇಳದೇ ಹೊದವಳು ನೀನು ಒಬ್ಬಳೆ ಹೇಗೆ ಬಂದೆ ನನ್ನ ಮರ್ಯಾದಿಯ ಕಳೆದ ನಿನ್ನ ಮಾವ ಅಕ್ಕನ ಮನೆಗೆ ನೀನು ಹೋಗಬಾರದು ಅಂತಾ ಹೇಳಿದ್ದರು ನನ್ನ ಮರ್ಯಾದೆ ಕಳೆದು ಏಕೆ ಹೋದೆ ? ವಿಜಿ ನನ್ನ ಮೈಯಲ್ಲಿ ಹುಷಾರಿಲ್ಲ ನಿನ್ನ ಬಿಟ್ಟು ಇರಲು ಆಗಲಿಲ್ಲ ಅದಕ್ಕೆ ಬಂದೆ ಅಂದಳು. ಇವಳ ಮಾವ ಮಾಡಿದ ಕ್ರೂರ ಕೃತ್ಯಕ್ಕೆ ವಿಜಯನಿಗೆ ಅವನ ಮೇಲೆ ತುಂಬಾ ಕೋಪ ಬಂದಿತ್ತು..,ಅವನು ಏನೇ ಮಾಡಿದರೂ ಇವನು ಮರಿಯಬೇಕಂತೆ., ಗಂಡನ ಮರ್ಯಾದಿಗಿಂತ ಇವಳಿಗೆ ಅವಳ ಮಾವನ ಮರ್ಯಾದಿಯೇ ಹೆಚ್ಚು..!,ಹೇಗೆ ತಾನೆ ಸಹಿಸಬಲ್ಲ ಒಬ್ಬ ಗಂಡ.ಗಂಡನ ತಲೆಯಲ್ಲಿ ರೋಷ ತುಂಬಿರುತ್ತದೆ, ಹಾಲಿನಂತೆ ನಡೆಯುತ್ತಿದ್ದ ಸಂಸಾರದಲ್ಲಿ ಜಿದ್ದಿಬಾಯಿ ಹಾಗು ಅವಳ ತಮ್ಮ ಬೆಂಕಿ ಹಚ್ಚಿ ಮೊಜು ನೋಡುತ್ತಿರುತ್ತಾರೆ. ಅದಲ್ಲದೆ ಅದರ ಮೇಲೆ ತುಪ್ಪ ಕೂಡ ಸುರಿಯುತ್ತಿರುತ್ತಾರೆ. ವಿಜಯನಿಗೆ ಇದು ಇವಳ ಕೃತ್ಯವೋ ಅಥವಾ ಇವಳ ಮಾವ ಅಮ್ಮನ ಕ್ರೂರ ಕೃತ್ಯವೋ ತಿಳಿಯುವುದಿಲ್ಲ. ಮನೆಯಲ್ಲಿ ಬರಿ ಜಗಳಗಳು, ಮಾತು ಮಾತಿಗೆ ಜಗಳಗಳು ಕಾರಣ, ಇವಳ ತಾಯಿ ಮಾವ. ಇವರಿಬ್ಬರೂ ನವ ದಂಪತಿ ಪಾಲಿಗೆ ವೈರಿಗಳಾಗಿ ಪರಿಣಮಿಸುತ್ತಾರೆ. ಸರಿ ಮತ್ತೆ ಇವಳ ವಿಷಯಕ್ಕೆ ವಾಪಸ್ ಬರೋಣ, ರಾತ್ರಿ ಹೊತ್ತಿನಲ್ಲಿ ಅದು ೧೦೦ರ ಮೇಲೆ ಜ್ವರ ಇರುವ ಸಮಯದಲ್ಲಿ ನಿನ್ನ ಒಬ್ಬಳನ್ನೆ ಹೇಗೆ ಬಿಟ್ಟರು..? ಅಂದರೆ ನೀನು ಇದ್ದರೂ ಬಿಟ್ಟರೂ ಅವರಿಗೆ ಏನೂ ಆಗುವುದಿಲ್ಲ, ಆ ನಿನ್ನ ಮಾವ ಏಕೆ ನಿನ್ನ ಕರೆದುಕೊಂಡು ಬಂದು ಬಿಟ್ಟು ಹೋಗಲಿಲ್ಲ.? ನಿಮ್ಮ ಮನೆಯವರಿಗೆ ಯಾರಿಗೂ ನಿನ್ನ ಬಗ್ಗೆ ಚಿಂತೆ ಇಲ್ಲ ಅದಕ್ಕೆ ಈ ಪರೀಸ್ತಿತಿಯಲ್ಲಿ ಹೀಗೆ ಕಳಿಸಿದ್ದಾರೆ. ಅವಳು ಮನೆ ಒಳಗೆ ಬರಲು ಬಿಡು ನಾನು ಆಮೇಲೆ ಕರಿಸುತ್ತೆನೆ ಅಂತ ಮತ್ತೆ ಮೊಸದ ಮಾತು ಹೇಳಿ ಒಳ ಸೇರುತ್ತಾಳೆ. ಗಂಡನಿಗೆ ಇವಳ ಮೇಲೆ ಎಷ್ಟೇ ಪ್ರೀತಿ ಇದ್ದರೂ ಇವರ ಮನೆಯವರಿಂದ ನೆಮ್ಮದಿ ಹಾಳಾಗಿರುತ್ತದೆ, ಅದರ ಸಂಬಂಧವಾಗಿ ಇವಳ ಕೂಡಾನು ಸರಿ ಮಾತನಾಡಿಸುತ್ತಿರುವುದಿಲ್ಲ..ತಾಳಲಾರದೆ ಹೇಳು ವಿಜಿ ನಾ ಏನು ಮಾಡಿದರೆ ನೀನು ಮತ್ತೆ ನನ್ನ ಜೊತೆ ನಗು ನಗುತ್ತಾ ಬಾಳುತಿ ಎಂದಿದ್ದಕ್ಕೆ., ಸರಿ ನಮ್ಮ ಮನೆಯ ಕಲಹಗಳಿಗೆ ನಿನ್ನ ಮಾವ ಹಾಗು ನಿನ್ನ ಅಮ್ಮ ಕಾರಣ ಅವರುಗಳು ಬಂದು ತಮ್ಮಿಂದ ತಪ್ಪಾಗಿದೆ ಎಂದು ಕೇಳಲಿ ಅಂತ ಹೇಳುತ್ತಾನೆ. ಹಂಗೆ ಅಂದ ಕೂಡಲೆ ಹೆಂಡತಿ ಕೂಡಾ ಪೊನು ಎತ್ತಿಕೊಂಡು ಮಾವನಿಗೆ ಕರೆ ಮಾಡಿ ನನ್ನ ಜೀವನ ಸರಿಹೋಗಬೇಕಾದರೆ ನೀವು ಬಂದು ನನ್ನ ಗಂಡನಿಗೆ ಕ್ಷಮೆ ಕೇಳಿ, ಇದರಿಂದ ನನ್ನ ಜೀವನ ಸುಧಾರಿಸುವುದು ಅಂದರೂ ಅವನು ಅದಕ್ಕೆ ಒಪ್ಪುವುದಿಲ್ಲ, ನಾನು ಯಾವುದೇ ಕಾರಣಕ್ಕೆ ನಿನ್ನ ಗಂಡನಿಗೆ ಕ್ಷಮೆ ಕೇಳುವುದಿಲ್ಲ ಅಂದು ಬಿಡುತ್ತಾನೆ. ಅಲ್ಲೆ ಇದ್ದ ಗಂಡನಿಗೆ ಮತ್ತಷ್ಟು ಕೋಪ ಬರುತ್ತದೆ. ಓದುಗರೆ ಯೋಚಿಸಿ, ಮಗಳ ಸಂಸಾರ ಸರಿ ಹೋಗುವುದು ಅಂದರೆ ಯಾವುದೆ ಮನೆಯವರು ಎನ್ ಬೇಕಾದರೂ ಮಾಡಲು ತಯ್ಯಾರಿರುತ್ತಾರೆ,ಆದರೆ ಈ ಹುಡುಗಿಯ ಮನೆಯವರು ಎಂತಹ ಲಜ್ಜಗೆಟ್ಟ ಜನವಿರಬಹುದು..? ತಾವು ಮಾಡಿದ ತಪ್ಪನ್ನು ತಪ್ಪು ಎಂದು ಒಪ್ಪಿಕೊಳ್ಳಲು ಕೂಡ ಇವರಿಗೆ ಇರುಸು ಮುರುಸು.ಇವಳ ಗಂಡನ ಮೇಲೆ ಸುಳ್ಳು ದೂರುಗಳು ನೀಡುವಾಗ ಎಲ್ಲಿಗೆ ಹೋಗಿತ್ತು ಇವರ ಬುದ್ದಿ ? ಮಗಳ ಗಂಡ ಅಳಿಯ ಅಂದರೆ ಅವನನ್ನ ಹೆಣ್ಣಿನ ಮನೆಯವರು ಮಗಳನ್ನ ಕೈ ಹಿಡಿದವ, ಕೊನೆವರೆಗೂ ಕಾಪಾಡುವವ ಅನ್ನುವ ಒಂದು ಮರ್ಯಾದೆ ಗೌರವ ಕೊಡಬೇಕಲ್ಲವೆ ? ಇವರಿಗೆ ಅಳಿಯ ಅಂದರೆ ಕಾಲ ಕಸ, ಅನ್ನುವ ದೃಷ್ಟಿಯಲ್ಲಿ ನೋಡಿದವರು ಇವರನ್ನು ವಿಜಯ ತಾನೆ ಹೇಗೆ ಸಹಿಸ್ಯಾನು.? ನಿನ್ನ ಮನೆಯವರು ಯಾವುದಕ್ಕೂ ಕ್ಷಮೆ ಕೇಳುವುದಿಲ್ಲ ಅಂದರೆ.. ನಾನು ಈಗ ಏನು ಹೇಳುತ್ತೇನೆ ಹಾಗೆ ನೀನು ಕೇಳಬೇಕು., ಇನ್ನೂ ಮೇಲೆ ನಿನಗೆ ನನ್ನ ಬಿಟ್ಟು ಯಾರು ಇಲ್ಲ, ಅವರೆಲ್ಲರೂ ನಿನ್ನ ಪಾಲಿಗೆ ಮಡಿದರು.. ಅವರ ಹೆಸರನ್ನಾಗಲಿ ಅವರ ಮಾತುಗಳನ್ನಾಗಲಿ ನನ್ನ ಮನೆಯಲ್ಲಿ ಆಡಕೂಡದು ಎಂದು ತಾಕಿತ್ತು ಮಾಡುತ್ತಾನೆ. ಅದಕ್ಕೆ ಅಯ್ಯೊ ನನ್ನ ಮನೆಯವರಿಂದ ನನ್ನ ದೂರ ಮಾಡ ಬೇಡ ಅಂದು ಗೊಗರೆಯುತ್ತಾಳೆ. ಅಲ್ಲಿಗೆ ಅಂದಿನ ರಾತ್ರಿ ಜಗಳದಲ್ಲೆ ಮುಗಿಯುತ್ತದೆ. ಅದೇ ರಾತ್ರಿ ಇನ್ನೊಂದು ಸಣ್ಣ ಘಟನೆ ನಡೆಯುತ್ತದೆ..ಹೆಂಡತಿಗಷ್ಟೆ ಊಟ ಮಾಡಿಸಿ ಮಲಗಲು ಹಾಸಿಗೆ ಹಾಕಿ ಕೊಟ್ಟು ಮನ ಸರಿ ಇರದ ಕಾರಣ ತಾನು ಪಕ್ಕದ ರೂಮಿನಲ್ಲಿ ಹೋಗಿ ಮಲಗುತ್ತಾನೆ. ಕೆಲ ಸಮಯ ಕಳೆದಂತೆ ಅವಳ ರೂಮಿನಿಂದ ಅಳುವ ಹಾಗು ನಡುಗುವ ಶಬ್ದ ಕೇಳಿ ಬರಲು .., ಓಡಿ ಹೋಗುತ್ತಾನೆ., ಹೆಂಡತಿ ಚಳಿ ಜ್ವರದಿಂದ ನಡುಕ ಬಂದು ಅಳುತ್ತಾ ಒದ್ದಾಡುತ್ತಿರುತ್ತಾಳೆ., ತಕ್ಷಣ ಅವಳನ್ನ ತೋಳಲ್ಲಿ ಬಚ್ಚಿಟ್ಟು ಜೋರಾಗಿ ತಬ್ಬಿಕೊಳ್ಳುತ್ತಾನೆ ಅವಳ ಸ್ಠಿತಿ ಕಂಡು ಕಣ್ಣೀರುಡುತ್ತಾನೆ. ಆಗ ಸಮಯ ಎರಡು ಗಂಟೆ ,ರಾತ್ರಿ ಇವಳಿಗೆ ಎಲ್ಲಿ ಕರೆದು ಕೊಂಡು ಹೋಗಬೇಕು ಅನ್ನುತ್ತಾ ಮನೆಯಲ್ಲಿ ಜ್ವರಕ್ಕಾಗಿ ತಂದಿಟ್ಟ ಗುಳುಗೆಗಳು ನ್ಯಾಪಕಕ್ಕೆ ಬರುತ್ತವೆ, ಅವನ್ನ ತಂದು ಕೊಟ್ಟು ಹಾಲನ್ನು ಬಿಸಿ ಮಾಡಿ ಹೆಂಡತಿಗೆ ಕುಡಿಸುತ್ತಾನೆ, ಬಿಸಿ ಹಾಲನ್ನು ಕುಡಿಸಿದರೆ ಅವಳ ಚಳಿ ಸ್ವಲ್ಪ ಮಟ್ಟಿಗೆ ಕಡಿಮೆ ಆಗುವುದು ಅಂದುಕೊಂಡು.ಇಷ್ಟು ಕಲಹಗಳ ನಡುವೆ ಗಂಡ ತೋರಿಸಿದ ಈ ಸ್ವಭಾವಕ್ಕೆ ನೀವು ಏನೆಂದು ಹೇಳುತ್ತಿರಿ ??? ಇವನು ಅವಳನ್ನ ಯಾವ ತರಹ ಪ್ರೀತಿಸುತ್ತಿದ್ದ ಹಾಗು ಇವನ ಪ್ರೀತಿಯ ಆಳವನ್ನು ನೀವೇ ಉಹಿಸಬಹುದು. ಅವಳು ಅತ್ತರೆ ಇವನ ಕಣ್ಣಲ್ಲೂ ಸಹ ನೀರು ಬರುತ್ತಿತ್ತು..ಇಷ್ಟೊಂದು ಪ್ರೀತಿ ಇಟ್ಟುಕೊಂಡ ಗಂಡನ ತೊಳಲಾಟ ಹೆಂಡತಿಗೆ ತಿಳಿಯಲೇ ಇಲ್ಲವೆ ?

ಮದುವೆಯ ಜೀವನವೋ  …ಮೃತ್ಯುವಿನ ವಾಹನವೋ …..?

ಹೆಂಗ ಬಾಳಲೆವ್ವಾ ಇಕೀಕೂಡ 
ಗಂಡನ ಮ್ಯಾಲ ಅಭಿಮಾನ ಇಲ್ಲದಕಿಕೂಡ 
ತನ್ನ ಒಡೆಯನ ಮರ್ಯಾದೆ ಕಳೆದಕಿಕೂಡ 
ತನ್ನ ಗರ್ವದಲ್ಲಿ ಮರೆಯುವವಳ ಕೂಡ !

ಸುಳ್ಳು ಕಂತೆಗಳ ಸರಮಾಲೆ ಇವಳ ಬಳಗ 
ಹಾವು ನಾಲಿಗೆ ಹೊತ್ತ ಇವರವ್ರ 
ಕ್ಷಣ ಕ್ಷಣಕೆ ಬದಲಾಗುವ ಊಸ್ರವಳ್ಳಿ ಇವರ..
ನಂಬಿ ಕೆಟ್ಟೆನಲ್ಲೋ  ಶಿವ , ಶಂಬೋ ಹರ ಹರ ..!

ಮದುವೆಯ ಕನಸ್ಸು ನುಚ್ಚು ನೂರಾಯ್ತು 
ಅದರ ಸೊಗಸು ಮಣ್ಣಲ್ಲಿ ಮುಚ್ಚಿ ಮರೆಯಾಯಿತು 
ನೆಮ್ಮದಿ ಇಲ್ಲದೇ ಜೀವನ ಕದಡಿ ಹೋಯಿತು 
ಥೂ ...ಏನು ಮದುವೆಯ ಜೀವನವೋ ...
ಇಲ್ಲವೇ ಇದು ಮೃತ್ಯುವಿನ ವಾಹನವೋ..?

  (......ಮುಂದೆ ಏನಾಗುವುದು ಕಾದು ನೋಡಿ....)

आत्मविश्वास

जिंदगी में कोई साथ चले ना चले

 
जिंदगी कभी कुछ दे या ना दे

 
नसीब अपना साथ दे या ना दे

 
आत्मविश्वास कभी ना चोडना

 
क्यूंकि एक वही है .. जो, हर जिंदगीके पल  को लौटा सकता है !

ದೇವರ ದರ್ಬಾರು

ಆ ದೇವರ ದರ್ಬಾರಿನಲ್ಲಿ ವಕಾಲತ್ತು ಮಾಡುವ ವಕ್ಕೀಲ

ಸುಖ ನೆಮ್ಮದಿಯ ಗೆಲ್ಲದ ಹೊರೆತು ನಾ ಹಿಂತಿರುಗದೇ ಅಚಲ.

हित वचन


जो सच्चे प्यार को ठुकराथे  है ..
वो हर मोड पर प्यार को  पानेके लिए तरस जाते है !

नीति


प्यार को जो अस्त्र बनाकर खेलते है ...

उन लोगों को प्यार ही ब्रम्हास्त्र बनकर चुकता है !!

THOUGHT FOR THE DAY


loving someone unconditionally is TRULY  " DIVINE love "
but,
love which is made at the  " cost of gifts "  gives a different meaning..!

Wednesday, February 27, 2013

ಹಿತವಚನ


ಸಹನೆ, ತಾಳ್ಮೆ ಗಂಡಸಿನ ದೌರ್ಬಲ್ಯಗಳಲ್ಲ ,

ಎಲ್ಲೆ ಮಿರಿದಾಗ ಬಿರುಗಾಳಿ ಎಂದಿಗೂ ನಿಲ್ಲುವುದಿಲ್ಲ.!

ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು) - 8

(ಮುಂದೆವರ್ವುದು...) ತಾಳ್ಮೆಗೂ ಒಂದು ಇತಿ ಮಿತಿ ಅನ್ನುವುದು ಇರುತ್ತದೆ, ಹಾಗೆ ಕೂಡ ಇಲ್ಲಿ ವಿಜಯನ ಸಹನೆ, ತಾಳ್ಮೆ ಕಳೆದುಕೊಳ್ಳಲಾರಂಭಿಸಿತು.., ಎಷ್ಟೇ ಆಗಲಿ ಅವನು ಕೂಡ ಮನುಷ್ಯ ಪ್ರಾಣಿ ತಾನೆ..ಒಂದು ದಿನ ಕಚೇರಿಯಲ್ಲಿ ಎಂದಿನಂತೆ ಕೆಲಸದಲ್ಲಿ ಮಗ್ನನಾಗಿದ್ದಾಗಾ ಮತ್ತೆ ವಿಜಯನ ಪೊನು ರಿಂಗಾಯಿಸುತ್ತದೆ...ಎನ್ ಮಾಡ್ತಾ ಇದ್ದಿರಿ ಅಂತ ಹೆಂಡತಿಯ ಧ್ವನಿ ಕೇಳಿ ಬಂತು..ಆಹಾ ಏನೂ ಪ್ರೀತಿ ಅಂತ ಅಂದುಕೊಳ್ಳಬೇಡಿ ಸ್ವಲ್ಪ ತಾಳಿ ಮುಂದಿನ ಕಥೆ ಹೇಳುತ್ತೇನೆ...,ರೀ ಇವತ್ತು ತುಂಬಾ ಬಿಸುಲು ತಾನೆ...? ಗಂಡ...ಹಾ ಹೌದು..! ಅದಕ್ಕೆ...ಏನ್ ಇಲ್ಲಾ ನಿಮ್ಮ ಜೊತೆ ಐಸ್ಕ್ರೀಮು ತಿನ್ನುವಾಸೆ ಆಗಿದೆ ಅಂದಳು...ಸರಿ ಮನೆಗೆ ಬಂದ ಮೇಲೆ ಕೊಡಿಸುತ್ತೇನೆ ಈಗ ಕೆಲಸ ಮಾಡು ಅಂದ....ಉಹ್ಮು...ಈಗಲೆ ಬೇಕು, ಬಂದು ಕೊಡಿಸಿ ಅಂದಳು..ಎಲ್ಲರೂ ತಮಾಷೆ ಅಂದುಕೊಳ್ಳಬಹುದು....ನಿಜ, ವಿಜಯನು ಕೂಡ ಹಂಗೆ ಅಂದುಕೊಂಡ..!! ಸರಿ ಕೆಲಸ ಬಹಳ ಇದೆ..ಸಂಜೆ ಮನೆಯಲ್ಲಿ ಮಾತಾಡೋಣ, ನಿನ್ನ ಕಚೇರಿಗೆ ಕರೆದುಕೊಂಡು ಹೋಗಲು ಬರುತ್ತೇನೆ ಅಂತ ಹೇಳಿ ಇಡುತ್ತಾನೆ. ನುಡಿದಂತೆ ನಡೆ.., ಸಂಜೆ ಕಚೇರಿಯ ಗೇಟಿನ ಬಳಿ ಹೆಂಡತಿಗೆ ಮಿಸ್ಕಾಲ್ ಕೊಟ್ಟು ಅವಳ ಬರುವನ್ನು ಕಾಯುತ್ತಾನೆ, ೨ ನಿಮಿಷದ ಮೇಲೆ ಬರುತ್ತಾಳೆ.., ಸರಿ ಮಧ್ಯಾನ ಐಸ್ಕ್ರೀಮ್ ಬೇಕು ಅಂದೆ ಅದಕ್ಕೆ ನಡಿ ಎಲ್ಲಿಗೆ ಹೋಗೋಣ ಅಂತ ಕೇಳುತ್ತಾನೆ...,ಅದಕ್ಕೆ ಅವಳು ನನಗೇನು ಬೇಡ ನಾನು ಬೆಳಿಗ್ಗೆ ಕೇಳಿದ್ದು ನೀವು ಕೊಡಿಸಲಿಲ್ಲ ಅದಕ್ಕೆ ನನ್ನ ಗೆಳೆಯ ಕೊಡಿಸಿದ ಅವನ ಬೈಕಿನ ಮೇಲೆ ಬಾಸ್ಕಿನ್ ರಾಬಿನ್ಗೆ ಹೋಗಿ ಬಂದೆ ಅಂದಳು...! ಈ ಮಾತನ್ನು ಕೇಳಿದೊಡನೆ ವಿಜಯನಿಗೆ ರೋಷ ಉಕ್ಕಿ ಬಂತು..ತಡೆದುಕೊಂಡ..ಅವನಿಗೆ ತಿಳಿದ ಪ್ರಕಾರ ಆ ಅಂಗಡಿಯು ೩ ಕಿಮಿ ದೂರದಲ್ಲಿತ್ತು.., ಮದುವೆ ಆದ ಒಬ್ಬ ಹೆಂಗಸು ಬೇರೊಬ್ಬನ ಜೊತೆ ಐಸ್ಕ್ರೀಮ್ ಸವಿಯಲು ದೂರದೊಂದು ಸ್ಥಳಕ್ಕೆ ಹೋಗಲೇ ಬೇಕಿತ್ತಾ...??? ಗಂಡನಿಗೆ ಇಷ್ಟವಾಗುವುದಿಲ್ಲಾ ಅನ್ನುವುದು ಇವಳಿಗೆ ತಿಳಿದಿರಲಿಲ್ಲವೇ..? ಅಥವಾ ಮಾಡಬೇಕಂತೆ ಮಾಡಿದ ಆಟವದು..! ವಿಜಯ ಪದೇ ಪದೇ ಅವಳಿಗೆ ಹೇಳುತ್ತಿದ್ದ ಕೆಲವು ಮಾತುಗಳು, ಕಚೇರಿಯಲ್ಲಿ ಬೇರೆ ಹುಡುಗರ ಜೊತೆ ಕೆಲಸ ಎಷ್ಟು ಇರುತ್ತದೊ ಅಷ್ಟೇ ಮಾತನಾಡಬೇಕು.., ಎಲ್ಲೇ ಹೋದರೂ ಹುಡುಗಿಯರು ಜೊತೆಯಲ್ಲಿದ್ದರೆ ಒಳ್ಳೆಯದು ಹಾಗೆಯೆ ಹುಡುಗರ ಜೊತೆ ಹೋದರೂ ಗುಂಪಿನಲ್ಲಿ ಹೋದರೆ ತಪ್ಪೇನು ಇಲ್ಲ ಆದರೆ ಒಬ್ಬಳೆ ಯಾರದೊ ಕೂಡ ಹೋಗುವುದು ಸರಿಯಲ್ಲ ಒಬ್ಬ ಗೃಹಿಣಿ ಇವೆಲ್ಲಾ ತಾವಾಗಿಯೇ ತಿಳಿದುಕೊಳ್ಳಬೇಕು ಇಲ್ಲಾ ಬುದ್ದಿ ಹೇಳುವವರ ಮಾತನ್ನಾದರೂ ಕೇಳಬೇಕು.  ಸರಿ ಮನೆಯಲ್ಲಿ ಈ ವಿಷಯವಾಗಿ ಜಗಳ ಆಗುತ್ತದೆ. ಕೋಪಗೊಂಡ ಗಂಡ ಇನ್ನು ಮೇಲೆ ಯಾರ ಹುಟ್ಟು ಹಬ್ಬ ಇರಲಿ, ಪಾರ್ಟಿ ಇರಲಿ ನೀನು ಮಾತ್ರ ಹೋಗಬೇಡ ಯಾರಾದರೂ ಜುಲ್ಮಿ ಮಾಡಿದರೆ ಗಂಡನಿಗೆ ಇಷ್ಟವಾಗುವುದಿಲ್ಲಾ ಅಂತಾ ಖಢಾಕಂಡಿತವಾಗಿ ಹೇಳಿ ಬಿಡು ಎಂದ. ಗಂಡ ಹೆಂಡಿರಲ್ಲಿ ಅನುಮಾನ ಬರಬಾರದಂತೆ ಆದರೆ ಹೆಂಡತಿಯರು ಅನುಮಾನ ಬರುವ ಹಾಗೆ ವರ್ತಿಸಿದರೆ ಗಂಡನಾದವನು ಅವಳಿಗೆ ಬುದ್ದಿ ಹೇಳಬೇಕಾಗುತ್ತದೆ. (ಈ ವಿಷಯ ಇಲ್ಲಿ ವಿಜಯನ ದೃಷ್ಟಿ ಕೊನದಲ್ಲಿ ಹೇಳುತ್ತಿದ್ದೇನೆ, ಆದರೆ ಸಾಮಾನ್ಯವಾಗಿ ಹೆಂಡರಿಯರಿಗೂ ಸಹ ಗಂಡನ ಮೇಲೆ ಸಂಶಯ ಬಂದರೆ ಅದನ್ನ ಸರಿ ಪಡಿಸಿಕೊಳ್ಳುವುದು ಇಬ್ಬರ ಕರ್ತವ್ಯವಾಗಿರಬೇಕು) ಕೆಲವು ವಿಷಯಗಳನ್ನು ಚರ್ಚಿಸುವಾಗ ಅವಳು ಹೀಗೆ ಹೇಳುತ್ತಾಳೆ ನನ್ನ ಕಚೇರಿಯಲ್ಲಿ ಇರುವ ಒಬ್ಬ ಮ್ಯಾನೇಜರ್ ನನ್ನನ್ನು ಕೆಟ್ಟ ದೃಷ್ಟಿಯಂದ  ದಿಟ್ಟಿಸಿ ನೋಡುತ್ತಿರುತ್ತಾನೆ., ಅದನ್ನು ಗಮನಿಸಿದ ಆಕೆ ಗಂಡನ ಮುಂದೆ ಹೇಳಿದಾಗ, ವಿಜಯ ಹೌದು ಅವರು ಯಾಕೆ ನೋಡಿದರು ಅಥವಾ ನೋಡುತ್ತಾರೆ ಸ್ವಲ್ಪ ನೀನೆ ಯೋಚನೆ ಮಾಡು ತಿಳಿಯದಿದ್ದಲ್ಲಿ ನಾನು ವಿವರಿಸುತ್ತೆನೆ ಅಂದನು...ಯೋಚನೆ ಮಾಡುವಷ್ಟು ನನಗೆ ಸಮಯವಿಲ್ಲ.., ನೀವೇ ಹೇಳಿ ಅಂದಳು...ಆಗ ವಿಜಯ ನೀವು ಉಡ ತೊಡುವ ಬಟ್ಟೆಗಳು ಮೈ ಮುಚ್ಚುವಂತಿರಬೇಕು ಅನಾವಶ್ಯಕವಾಗಿ ಹುಡುಗರನ್ನು ಆಕರ್ಷಿಸುವ ಹಾಗಿರಬಾರದು, ಅದಕ್ಕೆ ನಾನು ಕಚೇರಿಗೆ ಜೀನ್ಸು ಟಿ-ಷರ್ಟು ಧರಿಸಬಾರದು ಎಂದು ತಾಗಿತ್ತು ಮಾಡಿದ್ದು..ಓಹೋ ಸರಿ ರೀ ಅಂದು ಬಿಡುತ್ತಾಳೆ. ಕೆಲವು ವಿಷಯಗಳಲ್ಲಿ ತಿಳಿದುಕೊಳ್ಳುತ್ತಿದ್ದಳೆ ಅನ್ನಬಹುದು ಆದರೆ ಆ ಮಾತುಗಳು ಅವಳ ಮನದಲ್ಲಿ ಇರುತ್ತಿರಲಿಲ್ಲ. ವ್ಯಕ್ತಿ ಎಷ್ಟೇ ಕೆಟ್ಟವರಿದ್ದರೂ ಅವರಲ್ಲಿ ಕೆಲವು ಒಳ್ಳೆಯ ಗುಣಗಳು ಇರಬಹುದು ಅವುಗಳನ್ನು ಎಲ್ಲರು ಒಪ್ಪಬೇಕಾದ ವಿಷಯ. " ಹುಟ್ಟು ಗುಣ ಸುಟ್ಟರೂ ಹೋಗದು " ಕೆಲವು ಕೆಟ್ಟ ಚಟಗಳು ಎಷ್ಟೇ ತಪ್ಪು ಅಂತ ಹೇಳಿದರೂ ಜನರು ತಿಳಿದುಕೊಳ್ಳುವುದೇ ಇಲ್ಲ ಅದೇ ತರಹದ  ಸ್ವಭಾವದವಳು ಇವಳಾಗಿರುತ್ತಾಳೆ. ಕೇಳಿದಾಗ ಸರಿ ಎಂದು ಮತ್ತೆ ಸಮಯ ಕಳೆದಂತೆ ಮತ್ತೆ ಅವೇ ತಪ್ಪುಗಳು ಮತ್ತೆ ಮತ್ತೆ ಮಾಡುತ್ತಿರುತ್ತಾಳೆ.ಹಾಗೆಯೇ ಇವಳ ಕಚೇರಿಯ ವಹಿವಾಟುಗಳು ನಿಲ್ಲುವುದೇ ಇಲ್ಲ, ದಿನ ಒಂದಲ್ಲಾ ಒಂದು ಕಾರಣಕ್ಕೆ ಕಚೇರಿಯ ವಿಷಯಗಳಿಂದ ಜಗಳಗಳು ಆಗುತ್ತಿರುತ್ತವೆ..,ಬೇಸತ್ತ ಗಂಡ ಒಂದು ತಿರುಮಾನಕ್ಕೆ ಬರುತ್ತಾನೆ. ಇವಳು ಕೆಲಸ ಮಾಡುತ್ತಿರುವುದರಿಂದನೆ ಇಷ್ಟೆಲ್ಲಾ ಜಗಳಕ್ಕೆ ಕಾರಣ, ಇವಳು ಕೆಲಸ ಬಿಟ್ಟರೆ ಮನೆ ಕಡೆಗೆ ಗಮನ ಕೊಡುತ್ತಾಳೆ ಎಂದು ಭಾವಿಸಿ ಅವಳಿಗೆ ಕೆಲಸಕ್ಕೆ ರಾಜಿನಾಮೆ ಕೊಟ್ಟು ಮನೆ ಕೆಲಸ ಮಾಡಿಕೊಂಡಿರು, ನಿನ್ನ ಸಾಕುವ ತಾಕತ್ತು  ನನ್ನಲ್ಲಿದೆ.,ನಿನಗೆ ಏನು ಬೇಕು ಬೇಡ ಎಲ್ಲವನ್ನು ತಂದು ಹಾಕುತ್ತೇನೆ ಮನೆಯಲ್ಲೇ ಇರು ಅಂತ ಹೇಳಿದಕೂಡಲೇ ಇವಳಿಗೆ ದೊಡ್ಡ ಬಂಡೆಯೇ ತಲೆ ಮೇಲೆ ಬಿದ್ದ ಹಾಗಾಗುತ್ತದೆ..., ಕೆಲಸದ ಮೇಲೆ ವ್ಯಾಮೋಹವೊ ಅಥವಾ ಬೇರೆ ಎನೋ ಅನ್ನುವುದು ಸ್ವಲ್ಪ ಅನುಮಾನಕ್ಕೆ ಈಡುಮಾಡಿಕೊಡುತ್ತದೆ. ಅವಳು ಊಟ ಬಿಟ್ಟು ಮಾತು ಬಿಟ್ಟು ಹೆದರಿಸಿ ಬೆದರಿಸಿ ಅವನ ನಿರ್ಣಯವನ್ನು ಬದಲಾಯಿಸಲು ಪ್ರಯತ್ನಿಸುತ್ತಾಳೆ ಆದರೆ ಅವನ  ಸಂಕಲ್ಪ ದೃಡವಾಗಿರುತ್ತದೆ. ಜಗಳಗಳು ವಿಪರೀತಕ್ಕೆ ಹೋಗುತ್ತವೆ, ಇಷ್ಟರಲ್ಲಿ ಇವಳ ಪೊನು ರಿಂಗಾಯಿಸುತ್ತದೆ ಸಿಟ್ಟಿನಲ್ಲಿ ಇದ್ದ ಗಂಡ ಇವಳ ಪೊನನನ್ನು ತೆಗೆದುಕೊಂಡು ನೆಲಕ್ಕೆ  ಜೋರಾಗಿ  ಎಸೆಯುತ್ತ್ತಾನೆ. ಸಂಸಾರ ಹಾಳಾಗುತ್ತಿದ್ದರೂ ಅವಳಿಗೆ ಇಷ್ಟೊಂದು ದುಃಖ ಆಗಿರಲಿಲ್ಲ ಅವಳ ಪೊನು ಒಡೆದದ್ದು ಕಂಡು ಬಿಕ್ಕಿಸಿ ಬಿಕ್ಕಿಸಿ ಅಳುತ್ತಾಳೆ ಎಕೆಂದರೆ ಆ ಪೊನು ಅವಳಿಗೆ ತನ್ನ ಪ್ರೀತಿಯ ಮಾವನಿಂದ ಸಿಕ್ಕ ಉಡುಗರೆಯಾಗಿರುತ್ತದೆ. ಹೆಂಡತಿ ಅಷ್ಟೊಂದು ಅತ್ತಳು ಅವಳ ಪೊನು ಸಿಟ್ಟಿನಲ್ಲಿ ಮುರಿದು ಹಾಕಿದೆ ಎಂದುಕೊಳ್ಳುತ್ತಾ ಹೆಂಡತಿಗೊಂದು ಹೊಸ ಮೊಬೈಲು ಕೊಡಿಸಬೇಕು ಅಂದು ಅಂತರ್ಜಾಲದಲ್ಲಿ ನೋಡಲು ಮುಂದಾಗುತ್ತಾನೆ. ಮಾರನೆ ದಿನ ಗಂಡ ಕಚೇರಿಗೆ ಹೋಗಲು ಮುನ್ನ ಅವಳ ಹಣೆಗೆ  ಎಂದಿನಂತೆ ಪ್ರೀತಿಯ ಮುತ್ತನ್ನು ನೀಡಿ ಹೊರಡುತ್ತಾನೆ. ಅವಳು ಸಹ ಎಂದಿನಂತೆ ಚಹಾ ಮಾಡಿಕೊಟ್ಟು ಕಳಿಸುತ್ತಾಳೆ. ರಾತ್ರಿಯಲ್ಲಾ ಅವಳನ್ನು ರಮಿಸಿ ಎಲ್ಲಾ ಜಗಳಗಳಿಗೆ ಫುಲ್ ಸ್ಟಾಪ್ ಇಟ್ಟಿರುತ್ತಾನೆ....ಆದರೆ ಅವನು ಕಚೇರಿಗೆ ಹೋದ ಮೇಲೆ ನಡೆಯುವುದೇ ಬೇರೆ....ಅವಳು ತನ್ನ ಎಲ್ಲಾ ಬಟ್ಟೆ ಬರೆಗಳನ್ನು ಕಟ್ಟಿಕೊಂಡು ಮನೆ ಬಿಟ್ಟು ಹೋಗುತ್ತಾಳೆ. ಗಂಡನಿಗೆ ಒಂದು ಮಾತು ಹೇಳದೆ ಕೇಳದೆ ಮನೆ ಬಿಟ್ಟು ಹೋದರೆ ಎನ್ ಅನ್ನಬೇಕು ಗೆಳೆಯರೆ...? ಸಂಜೆ ಮನೆಗೆ ಬಂದ ಗಂಡನಿಗೆ ಆಗಿದ್ದ ಘಟನೆ ಬಗ್ಗೆ ತಿಳಿದೇ ಇರುವುದಿಲ್ಲ, ಅವಳು ದಿನಾಲು ಕಚೇರಿಯಿಂದ ಮನೆಗೆ ಬರುವ ಮೊದಲೇ ಗಂಡ ಮನೆಗೆ ಬರುತ್ತಿರುತ್ತಾನೆ, ಆದ ಕಾರಣ ಅವನಿಗೆ ಸಂಶಯ ಬರುವುದೇ ಇಲ್ಲ..ಹೆಂಡತಿಯನ್ನು ಕರೆದುಕೊಂಡು ಪೊನು ಕೊಡಿಸಲು ಎಲ್ಲಾ ತಯ್ಯಾರಿಯನ್ನು ನಡೆಸುತ್ತಿರುತ್ತಾನೆ ಆದರೆ ಆವಳು ಬರುವ ಸಮಯವಾದರೂ ಅವಳು ಮನೆಗೆ ಬರುವುದೇ ಇಲ್ಲ...ವಿಜಯನ ತಂದೆಗೆ ಈ ವಿಷಯ ತಿಳಿದುಹೋಗಿರುತ್ತದೆ..ಅವರು ವಿಜಯನಿಗೆ ಕರೆ ಮಾಡಿ ನಿನ್ನ ಹೆಂಡತಿ ಎಲ್ಲಿದ್ದಾಳೆ.? ಅಂತ ಕೇಳುತ್ತಾರೆ ಕಚೇರಿಗೆ ಹೋಗಿರುವಳು ಕೆಲಸವಿರಬೇಕು ಅದಕ್ಕೆ ತಡವಾಗಿದೆ ಅಂತ ಹೇಳುತ್ತಾನೆ...! ಇಲ್ಲಾ ಅವಳ ಸಾಮಾನುಗಳು ಮನೆಯಲ್ಲಿವೆಯೇ ಸ್ವಲ್ಪ ನೋಡು ಅಂತ ಹೇಳುತ್ತಾರೆ...ಸರಿ ಅಂತ ವಿಕ್ಷಿಸುತ್ತಾನೆ ನೋಡಿದರೆ ಅವಳ ಸೂಟಕೇಸು ಇಲ್ಲಾ....ಅಂದರೆ ಇವಳು ನಿಜವಾಗಿಯೂ ಮನೆ ಬಿಟ್ಟು ಹೋಗಿದ್ದಾಳೆ...ಮತ್ತೆ ಗಂಡನಿಗೆ ಸಿಟ್ಟು ಬರುತ್ತದೆ. ಒಂದು ಮಾತೂ ಹೇಳದೇ ಹೋದಳು...ಅನ್ನುವುದು ತುಂಬಾ ಬೇಸರ ತರುತ್ತದೆ.(ಮುಂದೆವರೆಯುವುದು...)

ಗೂಬೆ

ಅವನು ಗೂಬೆ ಅಂದರೂ ಖುಶಿ ಪಟ್ಟಳಾಕೆ....ಏಕೆಂದರೆ,

ನಕ್ಕು ..,ಗೂಬೆ ಯಾರೆಂದು ತಿಳಿಸುವೆ ಸಧ್ಯದಲ್ಲೇ.. ಅಂದಳು ಈಕೆ !!

Tuesday, February 26, 2013

ಚುಟುಕ


ನಿಜ ಪ್ರೀತಿಗೆಲ್ಲಿದೆ ಬೆಲೆ..?

ಹಣವಿದ್ದರೆ ಅಷ್ಟೆ ಹುಡುಗಿಯರು ಹಾಕುವರು ಬಲೆ.

ಗೋವಿಂದಾಆಆಆ.... ಗೋವಿಂದಾ..!!!

ಮುಗ್ದನಾಗಿದ್ದರೆ ಗಂಡನ ಮಾಡುತ್ತಾಳೆ ಗೂಬೆ..,

ಎರಡೇ ದಿನದಲ್ಲಿ ಮನೆಯಲ್ಲಾ ಲೂಟಿ, ಗಂಡನ ಕೈಯಲ್ಲಿ ಚೆಂಬೆ..!!!

ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು) - 7

(.....ಮುಂದುವರೆಯುತ್ತದೆ... ) ಇದ್ದಕ್ಕಿದ್ದಹಾಗೆ ಊಟಕ್ಕೆ ಬನ್ನಿ ಎಂದು ಕರೆಯಲು ಕಾರಣವೇನು..? ಹಬ್ಬವಂತು ಅಲ್ಲ ಮತ್ತೆ ಯಾವುದೇ ಕಾರ್ಯಕ್ರಮ ಕೂಡ ಇಲ್ಲ ಮೊನ್ನೆ ಅಂದರೆ ಒಂದು ತಂಗಳ ಕೆಳಗೆ ಮನೆಗೆ ಬಂದು ಹೋಗಿದ್ದವಿ, ಎಂಬ ಪ್ರಶ್ನೆಗಳು ಉದ್ದ್ಭವಿಸುತ್ತಿದ್ದವು ವಿಜಯನ ಮನದಲ್ಲಿ. ಹೆಂಡತಿ ತನ್ನ ತವರು ಮನೆಗೆ ಹೋಗುವಾಗ ಬೆಳ್ಳಂಬೆಳಿಗ್ಗೆ ಎಂದ್ದು ೧೦ ಗಂಟೆಗೆ ತಯ್ಯಾರ್ ಆಗುವಳು ಇಂದು ಯಾಕೋ ತಡ ಮಾಡುತ್ತಿದ್ದಾಳೆ...ಓಹೋ ನಮ್ಮ ಸಂಬಂಧಿಕರ ಮನೆಗೆ ಹೋಗಲು ಇವಳಿಗೆ ಇಷ್ಟವಿಲ್ಲ ಅದಕ್ಕೆ...ಇಲ್ಲವಾದರೆ ಬೇರೆ ಏನೋ ಕಾರಣವಿರಬಹುದೇ ?? ಒಂದು ಗಂಟೆ ಸುಮಾರಿಗೆ ಮನೆಗೆ ಊಟಕ್ಕೆ ಬನ್ನಿ ಅಂತ ಹೇಳಿದವರು ವಿಜಯನ ದೊಡ್ಡವ್ವ ತುಂಬಾ ಸಮಯ ಪ್ರಜ್ನೆ ಹೊಂದಿದವರು. ಇವಳು ಜಳಕ ಮಾಡಿ ತಯ್ಯಾರ್ ಆಗಲೂ ಇವಳಿಗೆ ೧.೩೦ ಗಂಟೆಯೇ ಆಯಿತು..ವಿಜಯ ತನ್ನ ಅವ್ವನ ಬಗ್ಗೆ ತಿಳಿದವನು ಚಟಪಟಿಸತೊಡಗಿದನು..ಅಯ್ಯೊ ನಾವು ತಡವಾಗಿ ಹೋದರೆ ಅವ್ವಾ ಬೈಯುತ್ತಾಳೆ..ಬೇಗನೆ ಬಾ ಎಂದು ಹೆಂಡತಿಗೆ ಕೂಗುತ್ತಾನೆ..! ಇವಳ ಮೇಕಪ್ಪು ಮುಗಿಯುವುದೇ ಇಲ್ಲ..ಸಿಟ್ಟಿಗೆದ್ದು ಬೇಗನೆ ನಡಿಯಲೇ ಅಂದು ಗದರಿಸುತ್ತಾನೆ. ಸರಿ..ಏಕೆ ಇಷ್ಟು ತಡವಾಯಿತು ಅವ್ವಾ ಕೇಳಿದರೆ ಏನು ಹೇಳುವುದು ಎಂದು ಕೇಳಿದರೆ ಟ್ರಾಫಿಕ್ಕು ಇತ್ತು ಅಂತ ಹೇಳಿದರಾಯಿತು ಅಂತ ಸಲಿಸಾಗಿ ಉತ್ತರಿಸುತ್ತಾಳೆ, ಇವನೊ ಅವ್ವನಿಗೆ ಆಗಲಿ ಅಪ್ಪನಿಗೆ ಆಗಲಿ ಎಂದಿಗೂ ಸುಳ್ಳು ಹೇಳಿದವನಲ್ಲ...ಹೆಂಡತಿಯ ತಪ್ಪನ್ನು ಮುಚ್ಚಿಕೊಳ್ಳಲು ಅದನ್ನೆ ಹೇಳಿದರಾಯಿತು ಅಂದುಕೊಂಡ. ಸುಮಾರು ೨.೩೦ ಗಂಟೆಗೆ ಮನೆಗೆ ತಲುಪುತ್ತಾರೆ.., ಕಾದು ಕಾದು ಸುಸ್ತಾದ ಅವ್ವ ಅಪ್ಪ ಊಟಕ್ಕೆ ಕುಳಿತ್ತಿರುತ್ತಾರೆ. ಅಪ್ಪ ವಿಜಯನ ಕುರಿತು ಏನಪ್ಪಾ ಊಟಕ್ಕೆ ಅಂದರೆ ರಾತ್ರಿಯ ಊಟ ಅಂತ ತಿಳಿದಿದ್ದಿಯಾ ಎಂದು ತಮಾಷೆ ಮಾಡುತ್ತಾರೆ, ಅವ್ವಾ ಯಕೋ ಇಷ್ಟು ಲೇಟು..? ಅಂದಿದ್ದಕ್ಕೆ ಇಲ್ಲ ಅವ್ವಾ ಬೇಗಾನೆ ಮನೆ ಬಿಟ್ಟಿದ್ವಿ ಆದರೆ ಟ್ರಾಫಿಕ್ಕು ಜಾಮ್ ಇತ್ತು ಅದಕ್ಕೆ ತಡವಾಯಿತು ಅನ್ನುತ್ತಾ ಹೆಂಡತಿಯ ಮುಖ ನೋಡುತ್ತಾನೆ..,ವಿಜಯನ ಮುಖ ಭಾವನೆಗಳ ಅರಿತ ಅವ್ವ... ಎನವ್ವ ನೀ ತಡ ಮಾಡಿದಿಯೋ ಇಲ್ಲಾ ಅವನೇ ಮಾಡಿದನೊ ಅಂತ ಕೇಳಿದ್ದಕ್ಕೆ ಕುಹಕು ನಗು ಬೀರುತ್ತಾಳೆ.., ಅಲ್ಲಿಗೆ ಅವ್ವನಿಗೆ ಖಾತ್ರಿ ಆಗುತ್ತದೆ. ಅಲ್ಲಾ ಹೆಂಗಸರು ಯಾವಾಗಲೂ ಬೇಗ ತಯ್ಯಾರ್ ಆಗಬೇಕು ಒಂದು ಪಕ್ಷ ಗಂಡಸರು ತಡವಾದರೆ ನಾವೇ ಅವರಿಗೆ ಅವಸರ ಮಾಡಿ ಕರೆಯಬೇಕು ಸಮಯ ಪ್ರಜ್ಣ್ಯೆ ಹೆಣ್ಣಿಗೆ ತುಂಬಾ ಮುಖ್ಯ ಅಂತ ಬುದ್ದಿ ಮಾತು ಹೇಳಿ..ಈ ಸಲ ಕ್ಷಮಿಸುತ್ತೇನೆ ಮುಂದೆ ಹೀಗಾಗದ ಹಾಗೆ ನೋಡಿಕೊ ಅಂತ ಹೇಳಿ ಊಟಕ್ಕೆ ಕೂಡಲು ಹೇಳುತ್ತಾರೆ. ದೊಡ್ಡವ್ವನದು ಅಡುಗೆ ಮಾಡುವುದರಲ್ಲಿ ಎತ್ತಿದ ಕೈ. ಅವರು ಊಟದಲ್ಲಿ ಪಾಯಸ, ಹೋಳಿಗೆ, ಒಡೆ , ಫಲಾವು ಮತ್ತೆ ತರ ತರಹದ ಅಡುಗೆ ಮಾಡಿರುತ್ತಾರೆ. ದಂಪತಿಗಳು ಸೇರಿ ಊಟ ಮಾಡುತ್ತಾರೆ. ಊಟ ಮುಗಿದ ಬಳಿಕ ಸ್ವಲ್ಪ ಕುಶಲೋಪರಿ, ಕೆಲಸದ ಬಗ್ಗೆ, ಅಪ್ಪ ಅಮ್ಮಂದಿರ ಬಗ್ಗೆ ಬಂಧು ಬಳಗದವರ ಬಗ್ಗೆ ಸ್ವಲ್ಪ ಮಾತುಗಳು ಆಡುತ್ತಾರೆ. ಸ್ವಲ್ಪ ವಿರಾಮ...! ದೊಡ್ಡವ್ವ ವಿಜಯನ ಕುರಿತು ಏನಪ್ಪಾ ನಿನ್ನ ಅತ್ತೆ ಮತ್ತೆ ಅವಳ ತಮ್ಮ ಹಾಗು ಇವಳ ಅಕ್ಕ ಭಾವಂದಿರು ಮೊನ್ನೆ ಮನೆಗೆ ಬಂದಿದ್ದರು ನಿನ್ನ ಮೇಲೆ ತುಂಬಾನೆ ದೂರುಗಳ ನೀಡುತ್ತಿದ್ದರು...ಏನ್ ವಿಷಯ...ಅಂತ ಕೇಳಿತ್ತಾರೆ..! ವಿಜಯನಿಗೆ ಏನೂ ತಿಳಿಯದಾಗುತ್ತದೆ., ಅವರು ಇಲ್ಲಿಗೆ ಬಂದಿದ್ದರಾ....??? ನನಗೆ ನೀನು ಏನೂ ಹೇಳಿಲ್ಲಾ ಅಂತ ಹೆಂಡತಿ ಹತ್ತಿರ ಮುಖ ಮಾಡುತ್ತ ಕೇಳುತ್ತಾನೆ. ಅವಳು ತನಗೇ ತಿಳಿದಿಲ್ಲ ಅನ್ನುವ ಹಾರು ಉತ್ತರ ಕೊಡುತ್ತಾಳೆ..!ಸರಿ ದೊಡ್ಡವ್ವ ಏನಂತ ಹೇಳಿದರು...ನೀನು ನಿನ್ನ ಹೆಂಡತಿಗೆ ತುಂಬಾ ತ್ರಾಸು ಕೊಡುತ್ತಿ ಅಂತೆ ಅವಳಿಗೆ ಚಾಕೊಲೇಟು, ಚಿಪ್ಸು ಹಪ್ಪಳ ತಿನ್ನಲು ಬಿಡುವುದಿಲ್ಲವಂತೆ ಇದರಿಂದ ಅವಳಿಗೆ ತುಂಬಾ ಹಿಂಸೆ ಆಗುತ್ತೆ ಅಂತೆ ಹೇಳುತ್ತಾರೆ. ಹೌದಾ ಇಲ್ಲೇ ಇದ್ದಾಳಲ್ಲ ಇವಳಿಗೆ ಕೇಳಿ ನಾನು ಈ ವಿಷಯವಾಗಿ ಏನನ್ನು ಹೇಳುವುದಿಲ್ಲ ಅನ್ನುತ್ತಾನೆ. ಏನಮ್ಮ ನೀನು ನಿನ್ನ ಗಂಡನಿಗೆ ಮೇಲೆ ನಿಮ್ಮ ಮನೆಯವರ ಮುಂದೆ ದೂರು ನೀಡಿದ್ದು ನಿಜಾನಾ ? ಅಯ್ಯೊ ಆಂಟಿ ನಾನು ಹಾಗೆ ಹೇಳಿಯೇ ಇಲ್ಲ ಅಂದಳು.. ( ಓದುಗರೇ ಒಂದು ವಿಷಯ ಗಮನಿಸಬೇಕು..ಈ ತರಹ ವಿಜಯನ ಮೇಲೆ ದೂರು ಹೇಳುವುದು ಇವರ ಮನೆಯ ಕೆಟ್ಟ ಬುದ್ದಿನಾ ಅಥವಾ ಅವನ ಹೆಂಡತಿಯ ಕೆಟ್ಟು ಬುದ್ದಿಯಾ ? ) ವಿಜಯನು ಯೋಚನೆಯಲ್ಲಿ ಮುಳುಗುತ್ತಾನೆ..ನನ್ನ ಬಗ್ಗೆ ದೂರು ನೀಡಲು ಇವಳೆ ಕಾರಣವಿರಲೇಬೇಕು.., ಬೆಂಕಿ ಇರದೇ ಹೊಗೆ ಆಡುವುದಿಲ್ಲ, ಹೆಂಡತಿಯ ಈ ಮಸಲತ್ತು ಗಂಡನಿಗೆ ತಿಳಿಯದೇ ಹೋಗುತ್ತದೆ. ಅದಕ್ಕೆ ಅವ್ವಾ ನೋಡವ್ವಾ  ವಿಜಯನ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ, ಅವನು ನನ್ನ ಕೈಯಲ್ಲಿ ಬೆಳೆದ ಮಗ,ಆವನ ಒಂದೊಂದು ಸ್ವಭಾವದ ಬಗ್ಗೆ ನನಗೆ ತಿಳಿದಿದೆ, ಅವನು ಸ್ವಲ್ಪ ಮಟ್ಟಿಗೆ ಮುಂಗೋಪತನವಿದೆ ಆದರೆ ಯಾರನ್ನಾದರೂ ಹಿಂಸಿಸುವುದು ಅಥವಾ ತೆಗಳುವುದು ಅವನ ಜಾಯಮಾನವೇ ಅಲ್ಲ. ನಿಮ್ಮ ಮನೆಯವರು ಇಂತಹ ಸಣ್ಣ ವಿಷಯಗಳನ್ನು ತಂದು ನಮ್ಮ ಮುಂದೆ ಹೇಳುವ ಅವಶ್ಯಕತೆ ಇರಲಿಲ್ಲ. ನೀವು ಇಬ್ಬರೂ ವಿದ್ಯಾವಂತರು ನಿಮ್ಮ ಜೀವನದ ಬಗ್ಗೆ ಹಾಗು ರೂಪಿಸಿಕೊಳ್ಳುವುದರ ಬಗ್ಗೆ ಯೋಚಿಸಿ ವಿನಃ ತಂದೆ ತಾಯಿಯರನ್ನು ಮದ್ಯಸ್ತಿಕೆ ತರಬೇಡಿ. ನಾನು ಅವರಿಗೂ ಸಹ ಅದೇ ಹೇಳಿ ಕಳಿಸಿದ್ದೇನೆ, ನವ ದಂಪತಿಗಳಿಗೆ ಅವರ ಪಾಡಿಗೆ ಅವರನ್ನ ಬಿಟ್ಟು ಬಿಡಿ, ಅವರ ಜೀವನ ಅವರು ರೂಪಿಸಿಕೊಳ್ಳುತ್ತಾರೆ. ಸರಿ ಸಂಜೆಯ ಚಾಹಾದ ಸಮಯವಾಯಿತು, ಚಾಹ ಕುಡಿದವರೆ ಮನೆಯ ಕಡೆ ವಿಜಯ ಮತ್ತು  ಅವನ ಹೆಂಡತಿ ಪ್ರಯಾಣ ಬೆಳೆಸುತ್ತಾರೆ. ನಾವು ನಮ್ಮಷ್ಟಕ್ಕೆ ಚೆನ್ನಾಗಿಯೇ ಇದ್ದಿವಿ, ಇವಳ ತಾಯಿ ಭಾವನಿಗೆ ಅಕ್ಕನಿಗೆ ಏನ್ ಆಗಬೇಕಿತ್ತು ಅನ್ನುವ ವಿಷಯ ಕಾಡತೊಡಗುತ್ತದೆ. ಅಲ್ಲಿಗೆ ನವ ದಂಪತಿಗಳ ನಡುವೆ ಹುಡುಗಿಯ ತಾಯಿ ಹಾಗು ಬಳಗದವರು ವೈರಿಗಳ ಹಾಗೆ ಕಾಡತೊಡಗುತ್ತಾರೆ. ಪದೇ ಪದೇ ಪೊನು ಮಾಡಿ ಹುಡುಗಿಯ ಕಿವಿಯ ಊದುವಿಕೆ ಪ್ರಾರಂಭವಾಗುತ್ತದೆ. ಇವರ ಮನೆಯಲ್ಲಿ ಜಗಳಗಳು ಶುರುವಾಗತೊಡಗುತ್ತವೆ. ವಿಜಯ ಹೆಂಡತಿಯ ಕುರಿತು ನೀನು ಏನನ್ನೂ ಹೇಳದೆನೇ ನಿನ್ನ ಮನೆಯವರು ನಮ್ಮ ದೊಡ್ಡವ್ವನವರ ಮನೆಗೆ ಹೋಗಲು ಸಾಧ್ಯವಿಲ್ಲ.., ಹೋದರೆ ಹೋಗಲಿ ಆದರೆ ಸುಳ್ಳು ಸುಳ್ಳು ದೂರುಗಳು ನನ್ನ ಮೇಲೆ ಹೇಳುವುದಂದರೇನು..? ನೀನು ನನ್ನ ಜೊತೆ ಬಾಳೆಬೇಕಾದವಳು ನನ್ನ ಬೆನ್ನ ಹಿಂದೇನೇ ಚೂರಿ ಹಾಕುತ್ತಿರುವೆಯಲ್ಲಾ, ಏನು ಇದೆ ನಿನ್ನ ಮನದಲ್ಲಿ " ನನಗೆ ನಿನ್ನ ಜೊತೆ ಬಾಳಲು ಇಷ್ಟವಿಲ್ಲ ಅನ್ನುವ ಅರ್ಥ ಹಾಗು ನನಗೆ ಕಳಿಸಿಕೊಡು ಅನ್ನುವ ಅರ್ಥ ನನಗೆ ಸ್ವಲ್ಪ ಮಟ್ಟಿಗೆ ತಿಳಿಯುತ್ತಿದೆ ಅನ್ನುತ್ತಾನೆ. ವಿಜಯನ ಮನಸ್ಸಿಗೆ ಶಾಂತಿಯೇ ಇಲ್ಲದಂತಾಗುತ್ತದೆ. ದಿನಗಳು ಕಳೆದಂತೆ ಮರೆತು ಮತ್ತೆ ಸುಖದಿಂದ ಬಾಳ ತೊಡಗುತ್ತಾರೆ...ಆದರೆ ಬೆನ್ನ ಹಿಂದೇನೆ ಹೆಂಡತಿ ಆಡುತ್ತಿರುವ ಕ್ರೂರ ಕೃತ್ಯದ ಬಗ್ಗೆ ವಿಜಯನಿಗೆ ಅರಿವೆಯೇ ಇರುವುದಿಲ್ಲ. ಹೆಂಡತಿಯ ಹೆಜ್ಜೆಗಳು ತುಂಬಾ ನಿಗೂಢವೆನ್ನಿಸಲು ಪ್ರಾರಂಭವಾದಾಗ...ಒಂದು ದಿನ ಹೆಂಡತಿಯು ತನ್ನ ಕಚೇರಿಯವರಾದ ಗೆಳತಿಯನ್ನು ಮನೆಗೆ ಕರೆತರುತ್ತಾಳೆ. ಸಹಾಯ ಬಯಸಿಬಂದ ಆಕೆ ವಿಜಯನ ಕುರಿತು ನಾನು ಕೂಡ ಹೊಸತಾಗಿ ಮದೆವೆ ಆಗಿದ್ದೇನೆ, ಮನೆ ಹುಡುಕುವುದಕ್ಕೆ ಹಾಗೆ ಮನೆಗೆ ಅನಿಲದ ಗ್ಯಾಸು ತೆಗೆದು ಕೊಳ್ಳಲಿಕ್ಕೆ ಸಹಾಯ ಮಾಡಿ ಎಂದು ಕೇಳುತ್ತಾಳೆ. ಹೆಂಡತಿಯ ಗೆಳತಿಗೆ ಎಲ್ಲಾ ತರಹದ ಮಾಹಿತಿ ಕೊಟ್ಟು ಸಹಾಯ ಮಾಡುತ್ತಾನೆ, ಸಂತೋಷಗೊಂಡು ಅವಳು ಧನ್ಯವಾದ ಅರ್ಪಿಸಿ ಮನೆಗೆ ಮರೆಳುವ ಮುನ್ನ, ನಿಮ್ಮಿಂದ ತುಂಬಾ ಉಪಕಾರವಾಯಿತು ಮತ್ತೊಂದು ಸಲ ನನ್ನ ಗಂಡನನ್ನ ಕರೆ ತರುವೆ ಅವರಿಗೆ ಕೂಡ ಸ್ವಲ್ಪ ಮಾಹಿತಿ ಬೇಕಂತೆ ಸಹಾಯ ಮಾಡಿ ಎಂದು  ವಿನಂತಿಸಿಕೊಳ್ಳುತ್ತಾಳೆ. ಪರರರಿಗೆ ಸಹಾಯ ಮಾಡುವುದರಲ್ಲಿ ಏನು ಸಂತೋಷ ಹಾಗು ನೆಮ್ಮದಿ ಇರುತ್ತದೆ ಎಂದರೆ ವಿಜಯನ ತರಹದ ಹುಡುಗನನ್ನು ನೋಡಿ ಕಲಿಯಬೇಕು ಅನ್ನಿಸಲ್ಲವೇ..? ಕೆಲವರಿಗೆ ಅನಿಸಲಿಲ್ಲ ಅಂದರೂ ತಪ್ಪೇನಿಲ್ಲಾ ಬಿಡಿ...! ಹೆಂಡತಿಯ ಗೆಳತಿ ತುಂಬಾ ಜೋರು ಹಾಗೆ ಮನುಷ್ಯರನ್ನು ಒಂದೇ ನೋಟದಲ್ಲಿ ಹೀಗೆ ಎಂದು ತಿಳಿದುಕೊಳ್ಳುವ ಚಾತುರತೆ ಹೊಂದಿದವಳಾಗಿದ್ದಳು,ಹಾಗೆಯೇ ಅವಳ ಗಂಡ ಕೂಡ...ಭಾರಿ ಸೌಮ್ಯ ಸ್ವಭಾವದವ. ಆಗಾಗ ಇವರ ಮನೆಗೆ ಅವರು ಬರುವುದು ಅವರ ಮನೆಗೆ ಇವರುಗಳು ಹೋಗುವುದು ನಡಿದೇ ಇರುತ್ತದೆ. ಗೆಳೆಯತನ ಹೀಗೆ ತಾನೆ ಬೆಸೆಯುವುದು. ಈ ಗೆಳತಿಯ ಪಾತ್ರ ಮುಂದೆ ಮತ್ತೆ ಬರುತ್ತದೆ, ಮತ್ತೆ ಹೇಳುತ್ತೆನೆ. ಇಲ್ಲಿ ವಿಜಯನ ಹೆಂಡತಿ ಇಷ್ಟೊಂದು ಮುಚ್ಚು ಮರೆ ಮಾಡುತ್ತ ತನ್ನ ಮನೆಯವರ ಜೊತೆ ಸೇರಿ ಏನೋ ಪ್ಲಾನು ಮಾಡುತ್ತಿರುತ್ತಾಳೆ. ಮುಗ್ಧ ಗಂಡ ಇವೆಲ್ಲ ವಿಷಯಗಳಿಂದ ಬಹಳ ದೂರದಲ್ಲಿರುತ್ತಾನೆ, ಅವನಿಗೆ ಪರಿಸ್ಥಿತಿಯ ಪರಿವೇಯೇ ಇರುವುದಿಲ್ಲ.  ಒಂದು ದಿನ ಹೆಂಡತಿ ಮನೆಗೆ ಬಂದು ಕೈ ಕಾಲು ತೊಳೆದು ಅಡುಗೆ ಮಾಡಲು ಅಡುಗೆ ಮನೆ ಸೇರುತ್ತಾಳೆ, ಗಂಡ ಪೇಪರ್ ಓದುತ್ತಾ ಕುಳಿತ್ತಿರುತ್ತಾನೆ ತಟ್ಟನೆ ಅಲ್ಲಿಯೇ ಇಟ್ಟ ಅವನ ಹೆಂಡತಿಯ ಮೊಬೈಲಿಗೆ ಒಂದು ಮೆಸೇಜು ಬಂದು ಬೀಳುತ್ತದೆ...ಕೈಗೆತ್ತಿಕೊಂಡ ಗಂಡ ನೋಡಿದರೆ ಒಬ್ಬ ಹುಡುಗನ ಮೆಸೇಜು ಅದು, " Why are you not talking to me ? Till today you have used me and now you are not at all seeing me. I want to talk to you please call me  " ಗಂಡ ಹೇ ಯಾರದಿದು ಮೆಸೇಜು ಎನ್ ಏನೋ ಹುಚ್ಚರ ಹಾಗೆ ಕಳಿಸಿದ್ದಾನೆ..., ಅವನಿಗೆ ಚೆನ್ನಾಗಿ ಹೇಳಿ ಬಿಡು ಇನ್ನ ಮೇಲೆ ಇಂತಹ ಸಂದೇಶಗಳನ್ನು ಕಳಿಸಬೇಡವೆಂದು ಸುಮ್ಮನಾಗುತ್ತಾನೆ. ( ಅಯ್ಯೊ ಈ ಮಂಕು ಬುದ್ದಿಯ ವಿಜಯ....ಪಾಪ ಒಳ್ಳೆಯದನ್ನೆ ಯೋಚಿಸುವವನು ) ಮತ್ತೊಂದು ಸಲ ಕಚೇರಿಯ ಹುಡುಗ ಕಾಲ್ ಮಾಡುತ್ತಾನೆ, ಕಾಲ್ ರಿಸೀವ್ ಮಾಡಿದ ಗಂಡನಿಗೇನು ಗೊತ್ತು ಯಾರು ಅಂತ, ಪಾಪ ವಿಜಯ.....ಯಾರು ಸಾರ್ ತಾವು ಏನ್ ಬೇಕಿತ್ತು ಅಂದಿದ್ದಷ್ಟರಲ್ಲಿ ಪಟಕ್ಕನೆ ಬಂದು ಕಸಿದು ಕೊಳ್ಳುತ್ತಾಳೆ...ಅಯ್ಯೊ ಅವರು ನಮ್ಮ ಯಜಮಾನರು ಅವರಿಗೆ ಬುದ್ದಿ ಇಲ್ಲಾ ಅಂತ ಹೇಳುತ್ತಾಳೆ. ( ಪರ ಗಂಡಸಿನ ಮುಂದೆ ಹೆಂಡತಿ ಆದವಳು ಗಂಡನಿಗೆ ಕೊಡುವ ಮರ್ಯಾದೆ ನೋಡಿದ್ದಿರಾ ಗೆಳೆಯರೆ ??) ಇವಳ ಬಾಯಲ್ಲಿ ಬರೀ ಕಚೇರಿಯ ಹುಡುಗರದೇ ಮಾತು...ಒಬ್ಬ ಹುಡುಗನ ಮಾತುಗಳು ಇವಳಿಗೆ ಇಷ್ಟ, ಒಬ್ಬ ಹುಡುಗನ ಹೇರ್ ಸ್ಟೈಲ್ ಇವಳಿಗೆ ಇಷ್ಟ, ಒಬ್ಬ ತೊಡುವ ಅಂಗಿ ಇವಳಿಗೆ ಇಷ್ಟ, ಒಬ್ಬ ನಡಿಯುವ ಬಂಗಿ ಇವಳಿಗಿಷ್ಟ...ಹೀಗೆ ಒಂದು ಸಾರಿಯಾದಳು ಗಂಡನಿಗೆ ಹೇಳಿದ ಸನ್ನಿವೇಷಗಳೇ ಇರಲಿಲ್ಲ. ನೋಡು ಪ್ರೀಯೆ ನೀನು ಈಗ ಗೃಹಿಣಿ ಪರ ಗಂಡಸರಿಂದ ಸ್ವಲ್ಪ ದೂರವಿದ್ದಷ್ಟು ಒಳ್ಳೆಯದು ಅಂತ ಬುದ್ದಿವಾದ ಹೇಳುತ್ತಾನೆ ಆದರೆ ಆ ಹೆಂಗಸು ಅದನ್ನ ಕಿವಿಗಳಿಗೇ ಹಾಕುವುದಿಲ್ಲ...ಅವಳ ಆಟ ಮುಂದುವರೆದೇ ಇರುತ್ತದೆ..... ಇವಳ ಕ್ಯಾರೆಕ್ಟರ್ ಬಗ್ಗೆ ನಿಮಗೆ ಸ್ವಲ್ಪ ಮಟ್ಟಿಗೆ ತಿಳಿದಿರಬೇಕಲ್ಲವೆ ಇಲ್ಲಿಯತನಕ. ಸರಿ ನಮ್ಮ ವಿಜಯನಿಗೆ ಏನೂ ಬೇಜಾರಿಲ್ಲಾ ಬಿಡಿ ಯಾಕೆಂದರೆ ಅವನು ಒಬ್ಬ ಜೆಂಟಲ್ ಮ್ಯಾನ್ ಒಬ್ಬ ಮಾದರಿ ಅಭಿಯಂತರ, ತನ್ನ ಕಚೇರಿಯಲ್ಲಿ ಒಳ್ಳೆಯ ಕೆಲಸಗಾರ ಅನ್ನುವ ಹೆಸರು. ಇವಳದು ಇನ್ನೂ ಬಲಿತ ಬುದ್ದಿಅಲ್ಲ ಅಂತ ಕ್ಷಮಿಸಿಬಿಟ್ಟಿದ್ದ......ಆದರೇ ಅಲ್ಲೆ ಆಗಿದ್ದು ಎಡವಟ್ಟು.....ಅವಳ ಹಿಂದಿನ ಚರಿತ್ರೆ ಅವನಿಗೆ ಇನ್ನೂ ಮೇಲೆ ಹಂತ ಹಂತವಾಗಿ ತಿಳಿಯಲಾರಂಬಿಸುತ್ತದೆ...!  ( ಮುಂದೆವರೆಯುವುದು....)

Monday, February 25, 2013

प्रतिशोद

दुख सेः सेः कर कितना दिन चुप रहेगा मानव .,
हर दुखका प्रतिशोद सहना तुम्हे अनिवार्य होगा  दानव !

ಚುಟುಕ


ಪೋಶಕರಿಗಿಲ್ಲ ಮಕ್ಕಳ ಭವಿಶ್ಯ ರೂಪಿಸುವ ಛಲ

ತಿಂಗಳು ವರುಷದಲ್ಲಿಯೇ ವಿಚ್ಚೆದನ., ಬಯಸುವರು ಹಣದ ಫಲ

ಅರಿಯದು ಮುಗ್ಧ ಜನರಿಗೆ ಇವರ ಜಾಲ

ದಿಕ್ಕೆಟ್ಟು ಕಂಗೆಟ್ಟು ಮನವೆಲ್ಲಾ ಕೋಲಾಹಲ..!

ಮದುವೆಯೋ ಇಲ್ಲಾ ಕಳ್ಳಾಟವೋ ?

ಹೊಸ ಬಾಳಿನ ಹೊಸ್ತಿಲ ಏರುವವರಿಗೆ ಜಗವೆಲ್ಲಾ ಸುಂದರ

ಹಣಕ್ಕೆಂದೇ ಮದುವೆಯಾದ ಜನರಿಂದ ಜೀವನವೆಲ್ಲಾ ದುಃಖದ ಸಾಗರ !!

ಶೋಷಣೆ


ಸತ್ಯ, ನಿತ್ಯ, ನೀತಿವಂತರಿಗೆ ತಪ್ಪದು ಶೋಷಣೆ

ಕಳ್ಳ, ಕಪಟ, ಕ್ರೂರಿಗಳಿಗೆ ಕಾನೂನು ರಕ್ಷಣೆ !!

ನೀತಿ


ಕಳ್ಳರನ್ನು ನಂಬಿದರೂ ಕುಳ್ಳರನ್ನು ನಂಬಬಾರದಂತೆ,  ಹಾಗೆಯೇ

ಒಟ ಒಟ ಮಾತನಾಡುವವರನ್ನು ನಂಬಬಹುದು ಆದರೆ ಗುಮ್ಮನೆ ಸುಮ್ಮನೆ ಇದ್ದು ನಟಿಸುವವರನ್ನು ಎಂದಿಗೂ ನಂಬಬಾರದು.

ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು) - 6


ಗಂಡ ಹೆಂಡಿರ ಜಗಳ ಉಂಡು ಮಲಗುವತನಕ ಅನ್ನುವಹಾಗೆ ಹೀಗೆ ಸ್ವಲ್ಪ ಸಿಹಿ ಹೀಗೆ ಸ್ವಲ್ಪ ಕಹಿಗಳಿಂದ ಕೂಡಿದ ಜೀವನ ಸಾಗತೊಡಗಿತು. ವಿಜಯನ ಹೆಂಡತಿಗೆ ಮೊಬೈಲಿನಲ್ಲಿ ಮಾತಡುವುದು ಹಾಗು ಯಾವಾಗಲೂ ಎಸೆಮೆಸ್ ಮಾಡುವ ಚಟ. ಎಷ್ಟೋ ಸಾರಿ ಗಂಡನ ಜೊತೆಯಲ್ಲಿ ಇದ್ದಾಗಲೇ ಕದ್ದು ಮುಚ್ಚಿ ಮೆಸೆಜು ಮಾಡುವುದು ಕೇಳಿದರೆ ನನ್ನ ತಂಗಿ ಅಥವಾ ಯಾವುದೋ ದೂರದ ಊರಿನ ಗೆಳತಿ ಅಂತ ಹೇಳಿ ಮಾತು ಹಾರಿಸುತ್ತಿದ್ದಳು.ಗಂಡ ಪಾಪ ಹೋಗ್ಲಿ ಬಿಡು ಏನೋ ಗೆಳತಿಯರ ನಡುವೆ ಸಂಭಾಷಣೆ ಇರಬಹುದು ಅಂತ ತಲೆ ಕೆಡಿಸಿಕೊಳ್ಳಲು ಹೋಗಿರುವುದಿಲ್ಲ.ವೀಪರೀತ ಅನ್ನಿಸಿದಾಗಲ್ಲೆಲ್ಲಾ ನೋಡು ನೀನು ಈಗ ಗೃಹಿಣಿ ರಾತ್ರೊರಾತ್ರಿ ಗೆಳೆಯರೊಡನೆ ಚಾಟ್ ಮಾಡುವುದು ಸರಿಯಲ್ಲಾ ಅಂತ ಹೇಳಿದ. ಆದರೂ ತಿಳಿದುಕೊಳ್ಳದ ಈಕೆ ತನ್ನ ಕಾಯಕವನ್ನು ಹಾಗೆಯೆ ಮುಂದುವರೆಸುತ್ತಾಳೆ. ಹಾಗೆಯೆ ಸಣ್ಣ ಪುಟ್ಟ ಜಗಳ ಬಂದಾಗ ನನಗೆ ನಿನ್ನ ಊರು ಇಷ್ಟವಿಲ್ಲ ಅಲ್ಲಿಯ ಜನರು ಸರಿ ಇಲ್ಲ ಅಂತ ಕುಹಕು ನುಡುಯುತ್ತಿರುತ್ತಾಳೆ. ಯಾರೇ ಆಗಲಿ ತಮ್ಮ ಊರಿಗೆ, ಊರ ಜನರಿಗೆ ಬೈದೊಡನೆ ಸಿಟ್ಟು ಬರುವುದು ಸರ್ವೇ ಸಾಮಾನ್ಯ., ಅದರಲ್ಲೂ ಇಕೆ ಕೂಡಾ ಆ ಊರಿನಲ್ಲೇ ವಿದ್ಯಾಭ್ಯಾಸ ಮಾಡಿ ಪದವಿ ಪಡೆದಿರುತ್ತಾಳೆ. ನಾವು ಯಾವುದೇ ಊರಿನಲ್ಲಿ ಬೆಳೆದಿರಲಿ, ಓದಿರಲಿ, ಅದರ ಬಗ್ಗೆ ಯಾರಾದರೂ ತೆಗಳಿ ಮಾತನಾಡಿದರೆ ರೋಷ ಬರುವುದು ನಿಷ್ಚಿತ.ನೋಡೆ ಪ್ರೀಯೆ ನೀನು ಎಣ್ಣೆ ಪದಾರ್ಥಗಳು ಹೆಚ್ಚು ತಿನ್ನಬೇಡ ನಿನ್ನ ಆರೋಗ್ಯದ ಮೇಲೆ ಕೆಟ್ಟು ಪರಿಣಾಮ ಬೀರುತ್ತದೆ ಆಮೇಲೆ ಕಷ್ಟಪಡುವುದಕಿಂತ ಈಗಲೇ ಎಚ್ಚೆದ್ದುಕೊಳ್ಳುವುದು ಲೇಸು ಅಂತ ಬುದ್ದಿವಾದ ಹೇಳುತ್ತಿದ್ದ.ಸರಿ ಏನೋ ಹೇಳುತ್ತಾ ಎಲ್ಲಿಗೋ ಹೋಗಿ ಬಿಟ್ಟೆ...,ಇವಳ ವಹಿವಾಟುಗಳು ಹಾಗು ಮೊಬೈಲಿನಲ್ಲಿ ನಡೆಯುತ್ತಿರುವ ಕಥೆಗಳಾದರು ಏನು ಅಂತ ತಿಳಿದುಕೊಳ್ಳಲು ವಿಜಯ ಒಂದು ಬಾರಿ ಅವಳ ಮೊಬೈಲನ್ನು ಕೈಗೆ ಎತ್ತಿಕೊಳ್ಳುತ್ತಾನೆ, ಅದಕ್ಕೆ ಅವಳು ತಕ್ಷಣ ಮೈಮೇಲೆ ಎರೆಗಿ "ಹೌ ಡೇರ್ ಯೂ ಟಚ್ ಮೈ ಮೊಬೈಲ್ , ನನ್ನ ಪರ್ಸನಲ್ ಥಿಂಗಸ್ ನೋಡಲಿಕ್ಕೆ ನಿನಗೆ ಏನ್ ಅಧಿಕಾರವಿದೆ ಎಂದು ಗದರಿಸುತ್ತಾಳೆ " ಗಂಡ ಹೆಂಡಿರ ನಡುವೆ ಯಾವುದೇ ತರಹದ ಅನುಮಾನಗಳು ಇರಬಾರದು ಆದರೇ ಇಲ್ಲಿ ನಡೆಯುವ ಸನ್ನಿವೇಶ ಅವಳ ಮೇಲೆ ಸಂಶಯ ಪಡುವ ಹಾಗೆ ಮಾಡುತ್ತದೆ.
ಹೀಗೆ ವಿಜಯನ ಹೆಂಡತಿ ಅನುಮಾನದ ಸುಳಿ ಹುಟ್ಟು ಹಾಕುತ್ತಾಳೆ. ವಿಜಯನಿಗೆ ಏನು ನಡೆಯುತ್ತಿರಬಹುದು ಎಂಬುದು ತಿಳಿಯುವುದೇ ಇಲ್ಲ. ಮತ್ತೆ ಅವಳನ್ನು ಮನ್ನಿಸಿ ಸುಮ್ಮನಾಗುತ್ತಾನೆ. ಕೆಲವು ದಿನಗಳು ಕಳೆದಂತೆ, ದಂಪತಿಗಳು ಶನಿವಾರದಂದು ದೇವಸ್ಥಾನಕ್ಕೆ ಹೋಗಿ ಬರೋಣವೆಂದು ಹೊರಡುತ್ತಾರೆ. ದೇವಸ್ಥಾನದ ಗೇಟು ಹತ್ತಿರ ಚಪ್ಪಲಿ ಕಳಚಿ ಮುನ್ನಡಿಯಬೇಕು ಒಬ್ಬ ಯುವಕ ವಿಜಯನ ಹೆಂಡತಿಯನ್ನು ಕೂಗುತ್ತಾನೆ, ಗಂಡನು ಪಕ್ಕದಲ್ಲೆ ಇದ್ದಾಗಲೇ ಇಂತಹ ಒಂದು ಪ್ರಸಂಗ. ಹೆಂಡತಿ ಕೇಳಿಸಿಕೊಂಡರೂ ಕೇಳಿಸಿಯೇ ಇಲ್ಲ ಅನ್ನುವ ಹಾಗೆ ಬೇಗ ಬೇಗ ಗಂಡನನ್ನು ಬಿಟ್ಟು ಮುಂದೆ ಓಡಲು ಅಣಿಯಾಗುತ್ತಾಳೆ. ಆ ಯುವಕ ಬಿಟ್ಟು ಬಿಡೆದೆನೇ ಇವಳನ್ನು ಕೂಗುತ್ತಲೆ ಹಿಂಬಾಲಿಸುತ್ತಾನೆ. ಗಂಡನಿಗೆ ಎನು ವಿಷಯವೆಂಬುದು ತಿಳಿಯುವುದೇ ಇಲ್ಲ. ಅವಳು ಆ ಯುವಕನ ಕರೆಗೆ ಗಮನಕೊಡದಂತೆ ಮಾಡಿದ್ದಕ್ಕೆ ಆ ಯುವಕ ದೇವಸ್ಥಾನದ ಹೊರಾಂಗಣದಲ್ಲಿ ಬಂದು ಕಾಯುತ್ತಾ ಕುಳಿತುಕೊಳ್ಳುತ್ತಾನೆ.ದಂಪತಿಗಳು ಇಬ್ಬರು ಸೇರಿ ದರುಶನ ಪಡೆದು ಹೊರ ಬರುತ್ತಾರೆ.ಇಲ್ಲಿಯ ತನಕ ಗಂಡ ಮೂಕ ಪ್ರೇಕ್ಷಕನಾಗಿ ನೋಡುತ್ತಿರುತ್ತಾನೆ. ಮತ್ತೆ ಆ ಯುವಕ ಇವಳನ್ನ ಕರೆಯುವ ಮುನ್ನ ಇವಳು ಗಂಡನ ತೊಳಿನಲ್ಲಿ ಅವಿತು ನಡೆದು ಬಿಡುತ್ತಾಳೆ. ಇಲ್ಲಿಯವರೆಗೂ ಸುಮ್ಮನಿದ್ದ ಗಂಡ ಯಾರದು ನಿನ್ನ ಹಿಂಬಾಲಿಸುತ್ತಿದ್ದವ....ಅದಕ್ಕೆ ಅವಳು ಅರೆ ಯಾರು..? ನನಗೆ ಯಾರು ಕಾಣಲಿಲ್ಲವಲ್ಲ ಅಂತ ಮಾತು ಹಾರಿಸುತ್ತಾಳೆ..,ಗಂಡ ಅವನು ನಿನ್ನ ಹೆಸರನ್ನೆ ಕೂಗುತ್ತಾ ನಿನ್ನನ್ನೆ ಹಿಂಬಾಲಿಸುತಿದ್ದ ಅಂದ....ಓಹೋ ಅವನೆ...! ಅವನು ನಮ್ಮ ಕಚೇರಿಯ ಹುಡುಗ ಹೊಸತಾಗಿ ಸೇರಿಕಂಡಿದ್ದಾನೆ, ಹಾಗಿದ್ದರೆ ನೀನು ಅವನನ್ನ ಏಕೆ ಪರಿಚಯ ಮಾಡಿಕೊಡಲಿಲ್ಲ..? ಇದಕ್ಕೆ ಬರಿ ಮೌನ....!! ಮೌನ....(ಏನೋ ಇರಬಹುದು ಇವರ ಮದ್ಯೆ ಅನ್ನುವ ಅನುಮಾನಕ್ಕೆ ಅಡಿಪಾಯ ಅಲ್ಲವೇ..?) ಹೋಗಲಿ ಬಿಡಿ..., ನಮ್ಮ ವಿಜಯನಿಗೆ ಏನೂ ಅನಿಸಲಿಲ್ಲಾ...ಮುಗ್ಧ ವಿಜಯ..!! ಎರಡು ದಿನಗಳು ಕಳೆಯುತ್ತವೆ....ವಿಜಯ ಕಚೇರಿಯ ಕೆಲಸದಲ್ಲಿ ತಲ್ಲೀನನಾಗಿರುತ್ತಾನೆ...ಪೊನು ರಿಂಗಾಯಿಸುತ್ತದೆ....ಹೆಲೋ ......ಹೆಂಡತಿಯ ಕರೆ, ನಮ್ಮ ಕಚೇರಿಯಲ್ಲಿ ಒಬ್ಬರ ಪಾರ್ಟಿ ಇದೆ ನಾನು ಹೋಗಿ ಬರಲೆ...? ಎಂದು ಕೇಳುತ್ತಾಳೆ. ಏನು ಪಾರ್ಟಿ..? ಅಂತ ವಿಚಾರಿಸಿದಾಗ ನಮ್ಮ ಮ್ಯಾನೇಜರ್ ಅವರದು ಹುಟ್ಟು ಹಬ್ಬ ಅದಕ್ಕೆ ಅವರು ನನಗೆ ಹಾಗು ನನ್ನ ಗೆಳತಿಯರಿಗೆ ಪಾರ್ಟಿ ಕೊಡುತ್ತಿದ್ದಾರೆ....ಸರಿ ಹೋಗಿ ಬಾ ಆದರೆ ತಡ ಮಾಡಬೇಡ ಅಂತ ಹೇಳಿ ಪೊನು ಇಡುತ್ತಾನೆ. ಸರಿ ಮನೆಗೆ ಬಂದೊಡನೆ ಪಾರ್ಟಿಯ ವಿಚಾರ..ಅವರು ಅದನ್ನ ಕೊಡಿಸಿದರು ಇದನ್ನ ಆರ್ಡರ್ ಮಾಡಿದ್ದ್ವಿ ಅಂತೆಲ್ಲಾ ಮಾತು ಮಾತಿನಲ್ಲಿ ತಿಳಿದಿದ್ದು ಏನೆಂದರೆ ಒಬ್ಬ ಗೆಳತಿಗೆ ಕೆಲಸ ಬಹಳ ಇತ್ತು ಅಂತ ಬರಲಿಲ್ಲ, ಒಬ್ಬಳಿಗೆ ಮೈ ಹುಷಾರು ಇರಲಿಲ್ಲ ಅವಳು ಅರ್ಧದಲ್ಲೆ ಮನೆಗೆ ತೆರಳಿದಳು..., ಅದಕ್ಕೆ ಸುಮ್ಮನೆ ಟೆಬಲ್ ಬುಕ್ಕ ಮಾಡಿದ್ವಿ ಅಲ್ಲಾ ಅದಕ್ಕೆ ನಾವಿಬ್ಬರೇ ಹೋಗಿ ಬಂದ್ವಿ ಅಂದಳು...! ( ಈ ಮಾತುಗಳನ್ನ ಕೇಳುತ್ತಿದ್ದರೆ ಇದು ಪೂರ್ವ ನಿಯೋಜಿತ ಪ್ಲಾನು ಅನ್ನಿಸುವುದಿಲ್ಲವೆ ಗೆಳೆಯರೆ.. ? ) ಹೋಗ್ಲಿ ಏನೇ ಇರಲಿ ವಿಜಯನಿಗೆ ತನ್ನ ಹೆಂಡತಿಯ ಮೇಲೆ ನಂಬಿಕೆ ಆಷ್ಟೇ ಅದಕ್ಕೆ ಮತ್ತೆ ಮಾತನಾಡದೇ ಸುಮ್ನನಾಗುತ್ತಾನೆ. ಒಂದು ವಿಷಯ ಹೇಳಬೇಕೆಂದರೆ ಮದುವೆ ಆದ ಹೆಂಡಂದಿರು ಗಂಡನ ನಂಬಿಕೆಯನ್ನು ಉಳಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಿರಬೇಕು ಹಾಗೆ ಗಂಡ ಇಟ್ಟ ನಂಬಿಕೆಯನ್ನು ಎಂದಿಗೂ ಹುಸಿಕೊಳಿಸಬಾರದು. ಹೀಗೆ ತಿಂಗಳಿಗೆ ಒಂದು ಪಾರ್ಟಿ, ಸಮೂಹ ಊಟ ನಡೆಯುತ್ತಲೇ ಇರುತ್ತವೆ. ತಿಂಗಳು ಕಳೆದಂತೆ ಏಕೋ ಏನೋ ಹೆಂಡತಿ ಮನೆಯ ಕಡೆ ಹಾಗು ಗಂಡನ ಕಡೆ ಗಮನ ಕೊಡುತ್ತಿಲ್ಲ, ಸದಾ ಕಾಲ ಮೊಬೈಲು ಗೆಳೆಯರು ಅಂತಾನೇ ಬಹಳ ಕಾಲ ಕಳೆಯುತ್ತಿದ್ದಾಳೆ. ಎಲ್ಲೋ ಜೀವನ ಹಾದಿ ತಪ್ಪುತ್ತಿದೆ ಅನ್ನಿಸಲಾರಂಬಿಸಿತು ವಿಜಯನಿಗೆ. ಆಷ್ಟರಲ್ಲಿ ಹೆಂಡತಿಯ ಕಚೇರಿಯ ಅನ್ಯುವಲ್ ಕಾರ್ಯಕ್ರಮ ಬರುತ್ತದೆ.ಅಂದು ಶನಿವಾರ..., ಎಂದಿಗಿಂತಲೂ ಬೇಗನೇ ಎದ್ದು ತಯ್ಯರಾಗುತ್ತಾಳೆ. ಗಂಡನಿಗೆ ಆಶ್ಚರ್ಯ...ಯಾವಾಗಲೂ ಶನಿವಾರದಂದು ಮಲಗಲು ಬಿಡ್ರಿ ಅಂತ ೮ -೯ ಗಂಟೆವರೆಗೂ ಮಲಗಿಕೊಳ್ಳುವ ಈಕೆ ಇಂದು ಇಷ್ಟು ಬೇಗ ಎದ್ದು ಎಲ್ಲಿಗೆ ಹೊರಟಿದ್ದಾಳೆ ಎಂಬ ಪ್ರಶ್ನೆ...ಕೇಳಿಯೇ ಬಿಟ್ಟ. ಅದಕ್ಕೆ ಅವಳು ನನ್ನ ಕಚೇರಿಯ ಕಾರ್ಯಕ್ರಮ ಇದೆ ಅದಕ್ಕೆ ನಾನು ಹೋಗುತ್ತಿದ್ದೆನೆ ಅಂದಳು.... ಹೌದು ಈ ವಿಷಯವನ್ನು ನೀನು ಮಂಚೆನೆ ನನ್ಗೆ ಏಕೆ ಹೇಳಲಿಲ್ಲ...ಎಂಬ ಪ್ರಶ್ನೆಗೆ ಉತ್ತರಿಸುತ್ತ.., ನೀನು  ಬರುವುದಿಲ್ಲ ಅದಕ್ಕೆ ಕೇಳಲಿಲ್ಲ ಅಂದಳು.... , ವಿಜಯನಿಗೆ ಎನೂ ಅರ್ಥವಾಗಲಿಲ್ಲ. ಕಚೇರಿಯ ಫ್ಯಾಮಲಿ ಕಾರ್ಯಕ್ರಮ ತನ್ನ ಕಚೇರಿಯಲ್ಲಿ ನಡೆದರೂ ಎಲ್ಲರೂ ತಮ್ಮ ಕುಟುಂಬದೊಂದಿಗೆ ಬರುತ್ತಾರೆ ಅಂತಹದುದರಲ್ಲಿ ಇವಳಿಗೆ ಗಂಡ ಬರುವುದು ಬೇಡವಾಗಿತ್ತು. ಸರಿ ಹೋಗಲಿ ಬಿಡು ಎಂದ ಗಂಡ ಕಳಿಸಿಕೊಟ್ಟ....! ರಾತ್ರಿ ೮.೩೦ ಗಂಟೆ ಆಗುತ್ತದೆ ಊಟ ಅಲ್ಲಿಯೆ ಮುಗಿಸಿ ಬರುತ್ತೆನೆ ಅಂದವಳು ಹಾಗೆಯೆ ಬಂದಿರುತ್ತಾಳೆ, ಕಾರ್ಯಕ್ರಮದ ಬಗ್ಗೆ ಒಂದು ಚಕಾರ ಶಬ್ದ ಕೂಡ ಮಾತನಾಡುವುದಿಲ್ಲ. ಕಳ್ಳ ಬೆಕ್ಕಿನಂತೆ ರೂಮು ಹೊಕ್ಕು ಬಟ್ಟೆ ಬದಲಾಯಿಸಿ   ಇದ್ದುದ್ದನ್ನು ತಿಂದು ಮಲಗುತ್ತಾಳೆ. ಗಂಡ ಇವಳನ್ನು ಸೌಮ್ಯವಾಗಿ ಗಮನಿಸುತ್ತಾನೆ.., ಹೋದಲ್ಲಿ ಏನೋ ಆಗಿದೆ...ಇವಳ ಮುಖದಲ್ಲಿ ಅಳಕು ಇದೆ.. ಗಂಡನಿಗೆ ಮುಖ ಕೊಟ್ಟು ಮಾತನಾಡುತ್ತಿಲ್ಲ..ಏನು ಕೇಳಿದರು ಏನೂ ಹೇಳುವುದಿಲ್ಲ..ಮಾರನೆ ದಿನ ಗಂಡನಿಗೆ ಹೇಳುತ್ತಾಳೆ ನೆನ್ನೆ ಎಲ್ಲರೂ ಗಂಡನನ್ನು ಏಕೆ ಕರೆ ತರಲಿಲ್ಲ ಎಂದು ಪ್ರಶ್ನಿಸಿರುತ್ತಾರೆ..! ಗಂಡನ ಕರೆಯದೇ ಹೋಗಿ ಮತ್ತೆ ಗಂಡನಿಗೆ ಇಷ್ಟವಿಲ್ಲ ಅಂತ ಹೇಳುವ ಹೆಂಡಂದಿರು ಎಷ್ಟು ಜನ ಕಾಣುತ್ತಾರೆ ನಾ ಅರಿಯೆ..!
ವಿಜಯನ ಆತಂಕ, ದುಗುಡಕ್ಕೆ ಇತಿ ಮಿತಿ ಇರಲಿಲ್ಲ....ಎಲ್ಲೋ ಹೆಂಡತಿ ಹಾದಿ ತಪ್ಪುತ್ತಿದ್ದಾಳೆ ಅಂತ ಅನಿಸಿದರೂ, ಅವಳು ನನ ಪ್ರೀತಿಯ ಹೆಂಡತಿ ಅವಳ ಮೇಲೆ ಸಂಶಯ ಪಡುವುದು ಸರಿಯಲ್ಲ ಅನ್ನುವುದು ಅವನ ಭಾವನೆ. ವಿಜಯನ ತಾಳ್ಮೆ ಪರೀಕ್ಷೆ ನಡೆಯುತ್ತಿದೆ ಎಂಬಂತೆ ಹೆಂಡತಿಯ ಮನೆಯವರಿಂದ ಮತ್ತೋಂದು ಘಟನೆ ನಡಿದೇ ಬಿಡುತ್ತದೆ. ಹುಡುಗಿಯ ತಾಯಿ ಮನೆಯವರು ವಿಜಯನ ಸಂಬಂಧಿಕರ ಮನೆಗೆ ತೆರಳಿ ವಿಜಯ ತುಂಬಾ ಕೆಟ್ಟದಾಗಿ ನಡೆದುಕೊಳ್ಳುತ್ತಾನೆ ಅವಳ ಮಗಳಿಗೆ ಚಿಪ್ಸು, ಹಪ್ಪಳ, ಚೊಚೊಲೇಟು ತಿನ್ನಲು ಬಿಡುವುದಿಲ್ಲ ನನ್ನ ಮಗಳಿಗೆ ತುಂಬ ಹಿಂಸೆ ಆಗುತ್ತದೆ, ಗೆಳೆಯರೊಡನೆ ಪೊನಿನಲ್ಲಿ ಮಾತನಾಡಲು ಬಿಡುವುದಿಲ್ಲ ಅಂತೆಲ್ಲಾ ಕಟ್ಟು ಕಥೆಗಳನ್ನು ಪೋಣಿಸಿ ಹೇಳುತ್ತಾರೆ. ಇತ್ತ ಏನೂ ಅರಿಯದ  ವಿಜಯನಿಗೆ ಹೀಗಂದು ಸಂಗತಿ ನಡೆದಿದೆ ಅನ್ನುವುದೇ ತಿಳಿದಿರುವುದಿಲ್ಲ...! ಎಂತಹ ಕ್ಷುಲ್ಲಕ ಇರಬೇಕು ಜಿದ್ದಾಬಾಯಿ...ಇಲ್ಲಿ ಇವಳ ಕೆಟ್ಟು ಕಾರ್ಯಗಳು ಪ್ರರಂಭಗೊಳ್ಳುತ್ತವೆ. ವಿಜಯನನ್ನು ಸಣ್ಣಂದಿನಿಂದ ನೋಡಿದ ಸಂಬಂಧಿಕರು ನಮ್ಮ ಹುಡುಗ ಹೇಗೆ ಇರುವನು ಅನ್ನುವುದು ನಮಗೆ ತಿಳಿದಿದೆ. ಅವನ ಬಗ್ಗೆ ನಮ್ಗೆ ನಿಮಗಿಂತ ಹೆಚ್ಚು ಗೊತ್ತು. ಅವನು ಹೇಳಿದ್ದುದರಲ್ಲಿಎನೂ ತಪ್ಪು ಇಲ್ಲಾ, ಎಣ್ಣೇ ಪದಾರ್ಥಗಳನ್ನು ನಾವು ತಿನ್ನಬಾರದು ಅಂತ ನಮ್ಮ ಮಕ್ಕಳಿಗೂ ಕೂಡಾ ಹೇಳುತ್ತೆವೆ ಅದಕ್ಕೆ ನೀವು ಹೀಗೆ ಗುಂಪು ಕಟ್ಟಿಕೊಂಡು ಅಳಿಯನ ಬಗ್ಗೆ ದೂರು ನೀಡಲು ಬಂದಿರುವುದು ಸರಿಯಲ್ಲ. ಅಲ್ಲಿ ಏನು ನಡೆದಿದೆ ಅನ್ನುವುದು ತಿಳಿದುಕೊಂಡು ನಾವು ಇಬ್ಬರಿಗೂ ಬುದ್ದಿವಾದ ಹೇಳುತ್ತೇವೆ ಅಂತ ಹೇಳಿ ಕಳಿಸುತ್ತಾರೆ. ವಿಜಯನ ಸಂಬಂಧಿಕರು ವಿಜಯ ಹಾಗು ಅವನ ಹೆಂಡತಿಗೆ ಊಟಕ್ಕೆ ಆವ್ಹಾನಿಸುತ್ತಾರೆ..,ಸಂಬಂಧಿಕರ ಕರೆಹಗೆ ಓಗೊಟ್ಟು ವಿಜಯ ಹೆಂಡತಿಯೊಡನೆ ಅವರ ಮನೆಗೆ ತೆರಳುತ್ತಾನೆ... ( ಮುಂದುವರೆಯುವುದು.........)

Friday, February 22, 2013

आत्मा विश्वास

खिचते रहो तीन , चार, पाँच  साल या फिर दस साल,  जब तक  तुम में है दम  

हरा ना सकोगे तुम ,  क्यूंकि  मेरा आत्मा विश्वास कबि  न होगा कम  ...!!

हित वचन

जब गीदड़  का मौत आता है तो वो शहर की और भागता है .!
और जो आग लगाते है वो खुद उसी आगा में जल्जाते है  !!

ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು) - 5


(ವಿಜಯನ ವೈವಾಹಿಕ ಜೀವನದ ಮುಂದಿನ ಭಾಗ...)

ಹೆಂಡತಿಯ ಮೇಲಿನ ಪ್ರೀತಿಯಿಂದ, ಅವಳ ಅನುಕೂಲಕ್ಕಾಗಿ ವಿಜಯ ರಾಜಧಾನಿಯಲ್ಲಿ ಮಡದಿ ಕಚೇರಿಗೆ ಹತ್ತಿರವಾಗುವಂತೆ ಬಾಡಿಗೆ ಮನೆ ಮಾಡುತ್ತಾನೆ.ಮನೆ ಎಷ್ಟು ಹತ್ತಿರವಿತ್ತೆಂದರೆ ನಡೆದು ಹೋದರು ಸಹ ೫ ನಿಮಿಷಗಳಲ್ಲಿ ಕಚೇರಿ ತಲುಪಬಹುದಾಗಿತ್ತು. ವಿಜಯನು ಯಾವಾಗಲೂ ಹಸನ್ ಮುಖಿ ವ್ಯಕ್ತಿ.ಹೆಂಡತಿಯೊಡನೆ ಸದಾ ತಮಾಷೆ ಮಾಡುತ್ತ ಅವಳನ್ನ ನಗಿಸುತ್ತಾ ಸಂತೋಷದಿಂದ ಕಾಲ ಕಳೆಯುತ್ತಿದ್ದ.ಹೀಗೆಯೆ ಒಂದು ದಿನ ಯಾವುದೋ ಕ್ಷುಲ್ಲಕ ಕಾರಣಕ್ಕೆ ಗಂಡನು ಹೆಂಡತಿಗೆ ಜೋರು ಮಾಡುತ್ತಾನೆ, ಅದಕ್ಕೆ ಪ್ರತಿಯಾಗಿ  "ನನಗೆ ನಿನ್ನ ಕೂಡ ಬಾಳಲು ಇಷ್ಟವಿಲ್ಲ ನನ್ನನ್ನು ಮನೆಗೆ ಕಳಿಸಿಕೊಡು" ಎಂದು ಬಿಡುತ್ತಾಳೆ..!! ವಿಜಯನಿಗೆ ಈ ವಾಕ್ಯದ ಅರ್ಥವೇ ಆಗಲಿಲ್ಲ.., ಸಿಟ್ಟಿನಲ್ಲಿ ಏನೋ ಅಂದಳು ಎಂದುಕೊಂಡು ಅವಳನ್ನ ರಂಬಿಸಿ ಸುಮ್ಮನಾಗಿಸುತ್ತಾನೆ. ಮತ್ತೆ ಎಥಾವತ್ತಾಗಿ ಜೀವನ ಸಾಗುತ್ತದೆ. ಮದುವೆಯಾದ ಒಂದೇ ತಿಂಗಳಲ್ಲಿ ಇವಳ ಬೇಡಿಕೆಗಳು ಶುರುವಾಗುತ್ತವೆ, ಮೊದಲಿಗೆ ನನಗೆ ಫ್ರಿಡ್ಜು ಬೇಕು, ವಾಷಿಂಗ್ ಮಷಿನು ಬೇಕು ಅನ್ನುವ ರಾಗ ತೆಗೆಯುತ್ತಾಳೆ. ಪಾಪ ವಿಜಯನ ಸಂಬಳ ತಕ್ಕ ಮಟ್ಟಿಗಿದ್ದು ಸಂಸಾರ ಸುಗಮವಾಗಿ ಸಾಗಿಸುವಷ್ಟಾಗಿರುತ್ತದೆ, ಆದ್ದರಿಂದ ಈ ಎಲ್ಲಾ ವಸ್ತುಗಳು ಕಾಲ ಕಳೆದಂತೆ ಒಂದೊಂದಾಗಿ ಖರೀದಿಸೋಣ ಎಂದು ಹೇಳುತ್ತಾನೆ. ಅವಳದು ದೊಡ್ಡ ಉದ್ಯೋಗ ಇಲ್ಲದಿರುವುದರಿಂದ  ಇಲ್ಲಿ ಹುಡುಗಿಯು ಮಾಡಿದ ಸಾಲ ಕೂಡ ವಿಜಯ ಕಟ್ಟುತ್ತಿರುತ್ತಾನೆ, ಮನೆಯ ಜವಾಬ್ದಾರಿ ಹೊತ್ತಿದ ಗಂಡಸ್ಸಿಗೆ ಅದರ ಭಾರದ ಬಗ್ಗೆ ತಿಳಿದಿರುತ್ತದೆ. ಹೀಗೆಯೆ ಪ್ರತಿ ವಾರದ ಅಂತ್ಯಕ್ಕೆ ಇವಳ ಬೇಡಿಕೆಗಳು ಏರುತ್ತಿರುತ್ತವೆ.ಬೇಸರಗೊಂಡ ವಿಜಯ ತಂದೆ ತಾಯಿಯರ ಮೊರೆ ಹೋಗುತ್ತಾನೆ. ಹೊಸತಾಗಿ ಮದುವೆಯಾದ ಮಗನ ಪರಿಸ್ಥಿತಿ ತಿಳಿದು ಅವನ ತಂದೆ ತಾಯಂದಿರು ಸಮಾಧಾನ ಬುದ್ದಿ ಮಾತುಗಳು ಹೇಳಲು ರಾಜ್ಯಧಾನಿಗೆ ಆಗಮಿಸುತ್ತಾರೆ.ಅತ್ತೆ ಮಾವಂದಿರ ಆಗಮನದಿಂದ ವಿಜಯನ ಹೆಂಡತಿಗೆ ಕಸಿವಿಸಿ ಶುರುವಾಗುತ್ತದೆ. ಇವರು ಯಾಕೆ ಇಲ್ಲಿಗೆ ಬಂದರು ಎಂದು ಕೇಳಿಯೇ ಬಿಡುತ್ತಾಳೆ....( ಆಶ್ಚರ್ಯ ಪಡಬೇಕಾದ ವಿಷಯವಲ್ಲವೇ...???) ವಿಜಯನಿಗೆ ಇವಳ ಪ್ರಶ್ನೆಗೆ ದಿಕ್ಕೇತೋಚದಂತಾಗುತ್ತದೆ. ಸರಿ ಇರಲಿ ತಂದೆ ತಾಯಿಯರು ಮೊದಲ ಬಾರಿಗೆ ಮನೆಗೆ ಬಂದಿಹರು ಎಂದು ಪಟ್ಟಣದ ವಿಹಾರಕ್ಕೆ ಕರೆದುಕೊಂಡು ಹೋಗಿ ಬರುತ್ತಾನೆ. ರಾತ್ರಿ ಎಲ್ಲರೂ ಕೊಡಿ ಊಟ ಮಾಡಿ ಹೀಗೆ ಮಾತಿಗೆ ಕೂಡುತ್ತಾರೆ. ತಂದೆ ದಿವಾನದ ಮೇಲೆ ಕೂತರೆ ವಿಜಯ ನೆಲದ ಮೇಲೆ ಅಮ್ಮನ ಪಕ್ಕದಲ್ಲಿ ಕೂಡುತ್ತಾನೆ, ಹೆಂಡತಿ ಹೋಗಿ ಸುಮ್ಮನೆ ಮಲಗುತ್ತಾಳೆ.., ವಿಜಯನು ಎಲ್ಲರೂ ಇಲ್ಲಿ ಕೂತಿರುವಾಗ ನೀನೆಲ್ಲಿಗೆ ಹೋದೆ,..? ಬಾ ಇಲ್ಲಿ ಅಂತ ಕರೆಯುತ್ತಾನೆ. ಧಡಾಡಿಸಿ ಬಂದವಳೆ ಏನು ? ಅಂತಾ ಕೇಳುತ್ತಾಳೆ..ಕೂಡು ಬಾರವ್ವಾ ಇಲ್ಲಿ ಸ್ವಲ್ಪ ಮಾತಾಡೊದು ಇದೆ ನಿನ್ನ ಹತ್ತಿರ ಅನ್ನುತ್ತಾರೆ. ಬೇಗ ಹೇಳಿ ನಾನು ಮಲಗಬೇಕು ಅಂತ ಜಂಭದಿಂದಲೇ ಹೇಳುತ್ತಾಳೆ. ಮಾವನ ಮುಂದೆಯೆ ಕುರ್ಚಿಯನ್ನು ಎಳೆದು ಕಾಲು ಮೇಲೆ ಕಾಲು ಹಾಕಿಕೊಂಡು ಕೂಡುತ್ತಾಳೆ ( ದೊಡ್ಡವರ ಮುಂದೆ ಕಾಲು ಮೇಲೆ ಕಾಲು ಹಾಕಿಕೊಂಡು ಕೂಡುವುದು ಇದು ಯಾವ ತಾಯಿ ಹೇಳಿಕೊಟ್ಟ ಮಾತು ಎಂದೆನ್ನಲೇಬೇಕಲ್ಲವೇ...? ) ವಿಜಯನ ಸಂಬಳ ನಿನಗೆ ತಿಳಿದೇ ಇದೆ ತಾನೆ...ಹೌದು ತಿಳಿದಿದೆ, ಹಾಗೆಯೇ ನಿನ್ನ ೨.೫೦ ಲಕ್ಷದ ಸಾಲ ತಿಳಿದಿದೆ ತಾನೆ..? ಹೌದು... ಹೀಗಿದ್ದಲ್ಲಿ ಗಂಡನಾದವನಿಗೆ ಮನೆ ನಡೆಸಿಕೊಂಡು ಹೋಗಲು ಕಷ್ಟವಾಗುತ್ತದೆ, ಏನೇ ತೆಗೆದುಕೊಳ್ಳುವುದಾದರೂ ಸಾಲ ಮುಗಿಸಿ ಮುಂದೆ ಒಂದೊಂದಾಗಿ ತೆಗೆದುಕೊಳ್ಳಿ ಅದಕ್ಕೆ ಏನು ಅವಸರ ಎಂದು ಹೇಳುತ್ತಾರೆ.
ನಿನ್ನ ಸಾಲ ಒಂದು ಮುಗಿದು ಬಿಟ್ಟರೆ ನೀವು ಜಾಮ್ ಜಾಮ್ ಆಗಿ ಇರಬಹುದು ಅಂತ ಬುದ್ದಿವಾದ ಹೇಳುತ್ತಾರೆ. ಇಷ್ಟು ಹೇಳಿದ್ದಕ್ಕೆ ಅವಳು ರಾತ್ರಿ ಪೂರ್ತಿ ಬಿಕ್ಕಿಸಿ ಬಿಕ್ಕಿಸಿ ಅಳುತ್ತಾಳೆ. ವಿಜಯನ ತಾಯಿ ಅವಳಿಗೆ ಸಮಾಧಾನ ಹೇಳಿ ಸಂತಯಿಸುತ್ತಾರೆ. ಮಾರನೆ ದಿನ ಬೆಳಿಗ್ಗೆ ವಿಜಯನ ತಂದೆ ತಾಯಿ ತಮ್ಮ ಊರಿಗೆ ಮರಳುತ್ತಾರೆ. ಇದಾದ ಸ್ವಲ್ಪ ದಿನಗಳವರೆಗೂ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಮತ್ತೆ ಜೀವನ ಸುಗಮವಾಗಿ ಸಾಗುತ್ತದೆ. ಮತ್ತೆ ಕೆಲ ದಿನಗಳ ಬಳಿಕ ಮತ್ತೆ ಅದೇ ರಾಗ ...ಆದರೆೀ ಈ ಸಲಾ ಹೆಂಡತಿಯ ಬೇಡಿಕೆ ವಿಭಿನ್ನವಾಗಿರುತ್ತದೆ, ನನಗೆ ವಜ್ರದ ಓಲೆಗಳು ಬಳೆಗಳು ಕೊಡಿಸು ಅನ್ನುತ್ತಾಳೆ..ಮತ್ತೆ ಮತ್ತೆ ಸಮಜಾಯಿಸಿ ಹೇಳಿದರೂ ಕೂಡ ಅವಳು ತಿಳಿದುಕೊಳ್ಳುವುದೇ ಇಲ್ಲ. ಅದಕ್ಕೊಸ್ಕರ ಮತ್ತೆ ತಗಾದೆ ತೆಗೆಯುತ್ತಾಳೆ. ಮತ್ತೆ ಅದೇ ಉತ್ತರ "ನನಗೆ ನಿನ್ನ ಕೂಡ ಬಾಳಲು ಇಷ್ಟವಿಲ್ಲ ನನ್ನನ್ನು ಮನೆಗೆ ಕಳಿಸಿಕೊಡು" ( ಓದುಗರು ಯೋಚಿಸಬೇಕು....ಇಲ್ಲಿ ಇವಳಿಗೆ ವಸ್ತು ಪ್ರೀತಿ ಹೆಚ್ಚು ಕಾಡುತ್ತಿರುತ್ತದೆ) ಪದೆ ಪದೇ ಈ ಪದಗಳನ್ನು ಕೇಳಲಾರದೇ ಗಟ್ಟಿ ಹೃದಯ ಮಾಡಿ ಕೇಳಿಯೇ ಬಿಡುತ್ತಾನೆ....ಏಕೇ ನೀನು ಈ ವಾಕ್ಯವನ್ನು ಯಾವಾಗಲೂ ಉಚ್ಚರಿಸುತ್ತಿ ನಿನ್ನ ಮನದಲ್ಲಿ ಏನ್ ಊಂಟು ಎಂದು ಕೇಳಿದಾಗ.....ನನ್ನ ಮನೆಯವರು ಈ ಮದುವೆಯನ್ನು ಬಲವಂತವಾಗಿ ಮಾಡಿದ್ದಾರೆ, ನನಗೆ ಈ ಮದುವೆ ಇಷ್ಟವಿರಲಿಲ್ಲ ಎಂದು ಹೇಳುತ್ತಾಳೆ. ವಿಜಯ ಆಘಾತದಲ್ಲಿ ಮುಳುಗುತ್ತಾನೆ....ಹಾಗಾದರೆ ಮದುವೆಗೂ ಮುನ್ನ ಸಿಕ್ಕಾಗ ಏಕೆ ಹೇಳಲಿಲ್ಲ ಅಂತ ಅಂದಾಗ ನನ್ನ ಅಮ್ಮ ಮಾವ ಅಕ್ಕಂದಿರು ಹಾಗೆ ಎಲ್ಲೂ ಹೇಳಬಾರದು ಎಂದು ತಾಕಿತ್ತು ಮಾಡಿದ್ದರು ಅನ್ನುತ್ತಾಳೆ. ಹಾಗೆನಾದರೂ ಹೇಳಿದರೆ ನನ್ನ ತಾಯಿ ನೇಣಿಗೆ ಶರಣಾಗುತ್ತಾಳೆ ಎಂದಿದ್ದಳು ಅದಕ್ಕೆ ಹೇಳಲಿಲ್ಲ ಅಂತ ಹೇಳಿಬಿಡುತ್ತಾಳೆ. ಆಘಾತದ ಮೇಲೆ ಆಘಾತವಾಗುತ್ತದೆ ವಿಜಯನಿಗೆ...ಬಹಳ ಯೋಚಿಸಿದ ನಂತರ ಸರಿ ಎನೋ ಆಗಿದ್ದು ಆಗಿ ಹೋಯಿತು ಇನ್ನು ಚಿಂತಿಸಿ ಫಲವಿಲ್ಲ, ನಾನು ನೀನು ಗಂಡ ಹೆಂಡಿರು, ನಾನು ನಿನ್ನನ್ನ ಚೆನ್ನಾಗಿಯೇ ನೋಡಿಕೊಳ್ಳುತ್ತೆನೆ ಎಂದು ಹೇಳಿ ರಮಿಸುತ್ತಾನೆ. ಇಷ್ಟಕ್ಕೆ ಮುಗಿಯುವುದಿಲ್ಲ.....ಜೇಡರ ಬಲೆ ಇನ್ನೂ ಕ್ಲೀಷ್ಟಕರವಾಗಿರುತ್ತದೆ..........ಮುಂದುವರೆಯುವುದು...)

ಹಿತ ವಚನ


ಅಕ್ಷರ ಓದುವುದು ಜ್ಞಾನನಕ್ಕಾಗಿ, ಉಪಜೀವನಕ್ಕಾಗಿ, ಸೊಕ್ಕಿನಲ್ಲಿ ಮೆರೆಯುವುದಕ್ಕಲ್ಲ...

ಸಂಸಾರ ಸಾಗಿಸಲು ಸಾಮಾನ್ಯ ಜ್ಞಾನವೇ ಬೇಕು, ಹಸಿವಾದಾಗ ಅನ್ನ ಉಣ್ಣಲೇಬೇಕು, ಹಣವೆಂದೂ ಹಸಿವು ನೀಗಿಸುವುದಿಲ್ಲ!!

Thursday, February 21, 2013

ಸಂಶಯ ( ಸಾಂಸಾರಿಕ ಹಿತ ವಚನ )


" ಸಂಶಯ ಅನ್ನುವುದು ದಂಪತಿಗಳಲ್ಲಿ ಬರಬಾರದು " ಆದರೆ ಸಂಶಯಗಳು ಹುಟ್ಟುವಂತೆ ದಂಪತಿಗಳು ಸಹ ವರ್ತಿಸಬಾರದು. ಯಾವುದೋ ಒಂದು ಸಂದರ್ಭದಲ್ಲಿ ಸಂಶಯ ಹುಟ್ಟಿಕೊಂಡರೆ.., ಇಬ್ಬರೂ ಕೂಡಾ ಕೂತು ಚರ್ಚಿಸಿ ಸಮಾಲೋಚಿಸಿ ಸಂಶಯವನ್ನು ದೂರು ಮಾಡಿಕೊಳ್ಳಬೇಕು. ಇದುವೇ ಸತ್ಯಾ ಹಾಗೆ ಎಲ್ಲ ಒಳ್ಳೆಯ ಭಾವನೆ ಇಟ್ಟುಕೊಂಡವರು ಹೇಳುವ ಮಾತು. ಈ ವಿಷಯವಾಗಿ ಒಂದು ಸಣ್ಣ ಹಿತವಚನ.....


" ಸಭ್ಯವಂತ ಪತಿ ಹೆಂಡತಿಯನ್ನು ಎಂದೂ ಅನುಮಾನದಿಂದ ನೋಡುವುದಿಲ್ಲ ,ಅನುಮಾನ ಬಂದಲ್ಲಿ ಸತಿಯಾದವಳು ಅವನ ಕಲ್ಪನೆ ತಪ್ಪು ಎಂದು ಸಾಧಿಸಿ ತೋರಿಸಲು ಯಾವುದೇ ಪರೀಕ್ಷೆಗೂ ಹಿಂಜರಿಯಬಾರದು ಹಾಗೆ ನುಣುಚಿಕೊಳ್ಳಲು ಪ್ರಯತ್ನಿಸಿದರೆ ಅವಳ ಮೇಲಿನ ಆರೋಪಗಳು ನಿಜ ರೂಪ ಪಡೆಯುತ್ತವೆ " ( ಅನುಮಾನ ಹೆಣ್ಣಿಗೂ ಆಗಿರಬಹುದು ಹಾಗೆಯೇ ಗಂಡಿಗೂ ಆಗಿರಬಹುದು , ಇಲ್ಲಿ ಯಾವ ಪಕ್ಷಪಾತವಿಲ್ಲ ).

ಓದುಗರು ತಮ್ಮ ಅಭಿಪ್ರಾಯ ತಿಳಿಸಿರಿ......

ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು) - 4


ಇಂದಿನ ಮುಂದುವರೆದ ಭಾಗ ಶುರು ಮಾಡುವ ಮುನ್ನ ಒಂದು ಸಂತಸದ ಸುದ್ದಿ ಮುಂದಿಡಲು ಇಚ್ಚಿಸುತ್ತೇನೆ , ಇಂದಿಗೆ ನನ್ನ ಬ್ಲಾಗ್ ಓದುಗರ ಸಂಖೆ ೯೦೦೦ ದಾಟಿದೆ , ಈ ಸಂದರ್ಭದಲ್ಲಿ ಎಲ್ಲರಿಗೂ ಹೃತ್ ಪೂರ್ವಕ ಅಭಿನಂದನೆಗಳನ್ನು ಅರ್ಪಿಸುತ್ತೇನೆ.
ಈಗ ಮುಂದೆ ಓದಿಕೊಳ್ಖಿ...........ವಿಜಯನ ಮದುವೆ ಪುರಾಣ ....)

ನಮ್ಮ ಕಡೆಯಲ್ಲಾ ಹುಡುಗಿಯ ಮನೆಕಡೆ ಎಷ್ಠೇ ಕಷ್ಟವಿದ್ದರು ಕನ್ಯೆಯ ಮನೆವರೆ ಮದುವೆ ಮಾಡಿಕೊಡುವುದು ಸಂಪ್ರದಾಯ. ಆದರೆ ಇಲ್ಲಿ ನಡೆದದ್ದೆ ಬೇರೆ , ಸೊಗಿನ ಬಿಣ್ಣಾಣ್ಗಿತ್ತಿ ಕನ್ಯೆಯ ತಾಯಿ ನಾಟಕ ಪ್ರವೀಣೆ. ಇವಳ ಬಗ್ಗೆ ಸ್ವಲ್ಪ ಹೇಳೆಲೇ ಬೇಕಾದ ಅಂಶಗಳಿವೆ ಏಕೆಂದರೆ ಈ ಮದುವೆ ಎಂಬ ನಾಟಕಕ್ಕೆ ಇವಳೇ ಸುತ್ರದಾರಳು. ಇವಳ ಲಗ್ನವು ಒಬ್ಬ ಸರ್ಕಾರಿ ನೌಕರನ ಜೊತೆ ಆಗಿರುತ್ತೆ. ಪಾಪ ಅವ(ಹುಡುಗಿಯ ತಂದೆ) ಒಳ್ಳೆಯವನೆ. ಸೌಮ್ಯ ಸ್ವಭಾವ,ನೀತಿ,ನೀಯಮ ಸರಳತೆಯಲ್ಲೇ ಬೆಳೆದ ವ್ಯಕ್ತಿ. ಅವನ ವಿನಯತೆಯನ್ನು ಎಲ್ಲರೂ ಮೆಚ್ಚುತ್ತಿದ್ದರು. ಸುಪುತ್ರರಿರದ ಇವರ ಮನೆಯಲ್ಲಿ ಇವರಿಗೆ ಬರಿ ಕನ್ಯಾಮಣಿಗಳು. ಪಾಪ ತಂದೆ ಹೃದಯಾಘಾತದಿಂದ ತೀರಿಕೊಂಡರು. ಆಗ ಆ ಮನೆಯಲ್ಲಿ ಗಂಡು ಮಕ್ಕಳ ಆಸರೆಯೇ ಇಲ್ಲಾ. ಅಲ್ಲಿಗೆ ಹುಡುಗಿಯ ತಾಯಿದೇ ದರ್ಬಾರು.ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಹೇಗೆ ಇರಬೇಕು ಹೇಗೆ ನಡೆದು ಕೊಳ್ಳಬೇಕು ಅನ್ನುವ ಸಾಮಾನ್ಯ ಶಿಸ್ತನ್ನು ಕೂಡ ಅವಳು ಹೇಳಿಕೊಡಲಿಲ್ಲ. ಎಲ್ಲರೂ ತಮ್ಮ ಇಷ್ಟಕ್ಕೆ ಬಂದ ಹಾಗೆ ಬೆಳೆದು ಬಿಟ್ಟರು. ಗಂಡು ಇರದ ಮನೆಗಳ ಕಥೆನೇ ಇಷ್ಟೇ ಇರಬೇಕು ಬಿಡಿ..! ಸರಿ ಪಾಪ ನಮ್ಮ ವಿಜಯನ ಮದುವೆ ಪುರಣಕ್ಕೆ ಬರೊಣ. ವಿಜಯ ಹುಡುಗಿಯನ್ನು ನೋಡಿದ ಹಾಗೆಯೇ ಅವಳು ಕೂಡಾ ನೋಡಿದಳು. ವಿಜಯನ ತಂದೆ ತಾಯಿಗಳು ತಮ್ಮ ಒಪ್ಪಿಗೆ ಸೂಚಿಸಿ ಮುಂದಿನ ಕಾರ್ಯಕ್ರಮಕ್ಕೆ ಅಣಿಯಾಗುವಂತೆ ಸೂಚಿಸಿದರು. ಮದುವೆಯ ವಿಷಯ ಬರುತ್ತಿದ್ದಂತೆಯೆ ಜಿದ್ದಿಬಾಯಿ ( ಹುಡುಗಿಯ ತಾಯಿ ) ಅಯ್ಯೊ ಅಣ್ಣಾರ ನಮಗ ಮದುವಿ ಮಾಡಿಕೊಡಲಿಕ್ಕೆ ಆಗೋದಿಲ್ಲಾ, ನಾನು ಗಂಡ ಸತ್ತ ಮುಂಡೆ ಅಂತೆಲ್ಲಾ ಕಥೆ ಹೇಳಿ. ಮದುವೆ ನೀವೇ ಮಾಡಿಕೊಳ್ಳಿ ಅಂತ ಹೇಳುತ್ತಾಳೆ. ಬೆಂಗಳೂರಿನಲ್ಲಿ ಒಂದು ಸೀದಾ ಸಾದಾ ಮದುವೆ ಮಾಡಲು ಕಮ್ಮಿ ಕಮ್ಮಿ ಎಂದರೂ ೩ ಲಕ್ಷ ರೂ ಕಿಂತ ಕಮ್ಮಿಯಲ್ಲಿ ಮಾಡಲು ಸಾಧ್ಯವಿಲ್ಲ ಅನ್ನುವುದು ನೀವು ಓದುಗರಿಗೆ ತಿಳಿದೇ ಇರುವ ವಿಷಯ ಅಲ್ಲವೇ ..! ಅಂತಹುದರಲ್ಲಿ ೨೫ ಸಾವಿರ ರೂ ಗಳು ಕೊಡುತ್ತೆವೆ, ಮದುವೆ ನೀವೆ ಮಾಡಿಕೊಂಡು ಬಿಡಿ ಎಂದು ಬಿಟ್ಟಳು.ಇದರಿಂದ ಬೆಸರಗೊಂಡ ವಿಜಯನ ತಂದೆ, ನೀವೂ ಏನನ್ನೂ ಕೊಡುವುದು ಬೇಡ ಅಂತ ಹೇಳಿ ಸುಮ್ಮನಾಗುತ್ತಾರೆ. ಹಾಗೆಯೆ ವಿಜಯನ ಕುರಿತು ಹುಡುಗಿಯ ತಾಯಿ ಜಿದ್ದಮ್ಮ ಈ ತರಹ ಹೇಳಿದಳು, ನೀನು ಕೂಡಾ ಏನು ಅಪೇಕ್ಷಿಸಬೇಡಪಾ ಅಂತಾ ಹೇಳುತ್ತಾರೆ. ಅಪ್ಪ ಅಮ್ಮಂದಿರ ಮಾತು ತಪ್ಪದ ವಿಜಯ ಏನು ತಾನೆ ಹೇಳ್ಯಾನು ? ಅವ್ನು ಸುಮ್ಮನಾಗಿ ಬಿಟ್ಟ. ಜೀವನ ನಡೆಸುವ ತೊಳಿನ ಬಲ ಅವನಲ್ಲಿದೆ.., ಹುಡುಗಿಯ ಮನೆಯ ಯಾವ ಹಂಗು ನನಗೆ ಬೇಕಿಲ್ಲಾ ಅಂದು ಕೊಂಡು ಒಪ್ಪಿಕೊಳ್ಳುತ್ತಾನೆ. ಸರಿ ವಿಜಯನ ತಂದೆ ಮಗನ ಮದುವೆಯ ಬಗ್ಗೆ ತುಂಬಾ ಕನಸ್ಸುಗಳು ಇಟ್ಟುಕೊಂಡಿದ್ದರು ಹಾಗೆಯೇ ಸಾಲಾ ಸೊಲಾ ಮಾಡಿ ಅಚ್ಚುಕಟ್ಟಾದ ಒಂದು ಕಲ್ಯಾಣ ಮಂಟಪವ ನೋಡಿ ಮದುವೆಯ ತಯ್ಯಾರಿಯಲ್ಲಿ ತಲ್ಲೀನರಾಗುತ್ತಾರೆ. ಲಗ್ನ ಪತ್ರಗಳು ಮುದ್ರಣಗೊಳ್ಳುತ್ತವೆ. ಮೊದಲನೇಯ ಲಗ್ನ ಪತ್ರ ಹುಡುಗಿಯ ಮನೆಗೆ ಕೊಟ್ಟು ಬರಲು ವಿಜಯನ ತಂದೆ ಸಜ್ಜಾಗುತ್ತಾರೆ. ಮನೆ ತಲುಪಿ ಪತ್ರ ಕೊಟ್ಟು ಇನ್ನೇನು ಹೊರಡಬೇಕಾದಾಗ ಜಿದ್ದಿಬಾಯಿ ವಿಜಯನ ತಂದೆಯನ್ನು ಕುರಿತು, ತಮಗೆ ಒಂದು ವಿಷಯ ಹೇಳಬೇಕಿತ್ತು ಹೇಗೆ ಹೇಳಬೇಕೊ ತಿಳಿಯುತ್ತಿಲ್ಲ ಅನ್ನುತ್ತಾ , ನನ್ನ ಮಗಳ ವಿದ್ಯಾಭಾಸಕ್ಕೆ ೨.೫೦ ಲಕ್ಷ ಹಣ್ವನ್ನು ಸಾಲವಾಗಿ ಪಡೆದಿದ್ದೇವೆ ಅದನ್ನ ಅವಳೆ ತೀರಿಸುತ್ತಾಳೆ ಎಂದು ಹೇಳಿದಳು. ಓದುಗರೇ ಯೋಚಿಸಿ ಈ ಜಿದ್ದಿಬಾಯಿ ಹೇಗಿರಬಹುದು ಎಂದು...? ಇಂತಹ ಮಹತ್ತರದ ವಿಷಯವನ್ನು ಇವಳು ಮದುವೆಯ ಲಗ್ನ ಪತ್ರಿಕೆ ಕೊಡಲು ಹೋದ ಸಮಯದಲ್ಲಿ ತಿಳಿಸುತ್ತಾಳೆ. ಹಾ...ಇನ್ನೊಂದು ವಿಚಾರವಿದೆ ನಮ್ಮ ಕಡೆ ಬಳುವಳಿ ಸಾಮಾನು ಕೊಡುವ ಪದ್ದಥಿ ಕೂಡಾ ಇಲ್ಲಾ ಅಂತಾನೂ ಹೇಳುತ್ತಾಳೆ. ನಾ ಹಿಂದೆ ವಿವರಿಸಿದ ಹಾಗೆ ಈ ಹೆಂಗಸಿನ ಸ್ವಭಾವ ಹಾಗು ಒಂಚನೆಯ ಬುದ್ದಿ ತಿಳಿದಿರಬೇಕಲ್ಲವೆ..? ಇದನ್ನು ಕೇಳುತ್ತಲೆ ವಿಜಯನ ತಂದೆಗೆ ತುಂಬಾನೆ ಆಘಾತ ಹಾಗು ಬೇಸರವಾಗುತ್ತದೆ. ಈಗ ಏನು ಮಾಡುವುದು ? ಎಂದು ತಿಳಿಯಾಲಾರದೇ ದಿಗ್ ಬ್ರಾಂತರಾಗುತ್ತಾರೆ. ಮದುವೆಯ ಪತ್ರಿಕೆ ಮುದ್ರಣಗೊಂಡಿವೆ, ಬಹಳಷ್ಟು ಸಂಬಂಧಿಕರಿಗೂ ವಿಷಯ ತಿಳಿಸಿದ್ದೆವೆ ಇನ್ನು ಮುರುಗಡೆ ಮಾಡಿಕೊಂಡರೆ ನಮ್ಮ ಮರ್ಯಾದಿ ಏನಾಗಬೇಕು ಎಂದುಕೊಂಡು ಚಿಂತೆಗೆ ಜಾರುತ್ತಾರೆ. ಮನೆ ಮಂದಿ ಎಲ್ಲಾ ಕೂತು ಚಿಚಾರ ಮಾಡಿ. ದೇವರು ನಮ್ಮನ್ನ ಚೆನ್ನಾಗಿ ಇಟ್ಟಿದ್ದಾನೆ, ನಮ್ಮಿಂದ ಒಂದು ಒಳ್ಳೆಯ ಕಾರ್ಯವಾಗಬೇಕಿದೆ, ಅದರಲ್ಲೂ ಒಬ್ಬ ತಂದೆ ಇರದ ಮಗಳಿಗೆ ಮದುವೆಯ ಭಾಗ್ಯ,ಗಂಡನ ಆಸರೆ ನೀಡಿದ ಪುಣ್ಯಾ ಬರುವುದು ಅಂದುಕೊಳ್ಳುತ್ತಾ ಎಲ್ಲಾ ಚಿಂತೆಯನ್ನು ಬಿಟ್ಟು ಒಳ್ಳೆಯ ಮನಸಿನಿಂದ ಮದುವೆ ಅತ್ಯಂತ ವಿಜೃಂಬಣೆಯಿಂದ ಮಾಡಿ ಮುಗಿಸುತ್ತಾರೆ. ಮದುವೆಗೆ ಬಂದ ಎಲ್ಲಾ ಬಂಧು ಮಿತ್ರರು ನವ ಜೋಡಿಗೆ ಹಾರೈಸಿಸುತ್ತಾರೆ. ಮದುವೆ ಮಾಡಿದ ಪದ್ದತಿ ಹಾಗು ಮದುವೆಯಲ್ಲಿಯ ಉಪಚಾರವನ್ನು ಎಲ್ಲರೂ ಕೊಂಡಾದುತ್ತಾರೆ. ಅಲ್ಲಿಗೆ ವಿಜಯನ ಪೆ ಪೆ ಪೆ ಡುಂ ಡುಂ ಮದುವೆ ಮುಗಿದು ಹೋಗುತ್ತದೆ. ಮುಗ್ಧ ಮೂಕ ಕನಸ್ಸುಗಳ ಹೊತ್ತ ವಿಜಯ ಮಧುಚಂದ್ರಕೆ ತೆರಳುತ್ತಾನೆ. ಈಷಾರಾಮಿ ಕಾರಿನಲ್ಲಿ ಇವರ ಮಧುಚಂದ್ರದ ಪ್ರಯಾಣ ಸುಗಮವಾಗಿ ಮುಗಿಯುತ್ತದೆ. (.... ಇನ್ನು ಕಾದು ನೋಡಿ....ವಿಜಯನ ವೈವಾಹಿಕ ಮುಂದಿನ ಜೀವನ. )

Wednesday, February 20, 2013

ಚುಟುಕ


ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರೂ ನೋಡಲಿಲ್ಲ ಅಂದಹಂಗ
ಕದ್ದು ಮುಚ್ಚಿ ರಾಸಲೀಲೆ ಆಡುವರು ಜಗಕೆಲ್ಲಾ ತಿಳಿಯಲಿಲ್ಲ ಅಂದಹಂಗ
ಕಾಲ ಕಳೆಯಬೇಕು ಅಷ್ಟೆ..ಪರದೆ ಸರೆಯುವ ಸಮಯ ಬಂದೇ ಬರುತ್ತದೆ ..!!

ನಂಬಿಕೆ


ಗಂಡನ ನಂಬದ ನಾರಿಗೆ ಕೆಲಸದ ಮೇಲೆ ಭಾರಿ ನಂಬಿಕೆ.,

ಬಾಳ್ವೆ ಮಾಡಲಾಗದೇ ಓಡಿ ಹೋದ ಹೆಂಗಸಿನ ಮೇಲೆ.., ಅವನಿಗೆ ಉಳಿಯಬೇಕೇ ನಂಬಿಕೆ ?

ಪವಿತ್ರತೆ



ದ್ವಾಪರಯುಗದ  ದೇವತಾ ನಾರಿಮಣಿಗಳೆಗೇ ತಪ್ಪಲಿಲ್ಲ  ಪವಿತ್ರತೆಯ ಜರಡಿ-ಅಗ್ನಿ ಪರೀಕ್ಷೆ

ನೀನ್ಯಾವ ಲೆಕ್ಕವೋ ಆಧುನಿಕ ನಾರಿಯೇ.? ಹೊಸ್ತಿಲ ದಾಟಿದ ತಪ್ಪಿಗೆ ನಿನಗೂ ಉಂಟು ನಾ ನಾ ತರಹದ ಪರೀಕ್ಷೆ.

Tuesday, February 19, 2013

ಮೂಢೆ


ನಿಸ್ವಾರ್ಥ ಪ್ರೇಮವ ದಿಕ್ಕರಿಸಿ ನಡೆದ ಮೂಢೆಗೆ
 ಪ್ರತಿ ಕ್ಷಣ ಕ್ಷಣವೂ ಮುಳ್ಳು ಹಾಸಿಗೆಯಾಗಲಿ
ಹಣ ಹಣ ಎನ್ನುವ ನಿನ್ನ ಕ್ರೂರ ಬುದ್ದಿಗೆ
ಕೋಟಿ ಹಣವಿದ್ದರೂ ನಿನ್ನವರ ಬಳಗವ ಉಳಿಸಿಕೊಳ್ಳದಂತಾಗಲಿ
ಒಂಟಿತನ ನಿನಗೆ ಕಟ್ಟಿಟ್ಟ ಬುತ್ತಿ
ಮುಘ್ದ ಪ್ರೀತಿಯ ತುಚ್ಚಕಂಡ ನೀನು, ಕೊರಗಿ ಕೊರಗಿ ಅಂತ್ಯ ಕಾಣುವಂತಾಗಲಿ.

ಕಿರಾತಕಿ


ನಿನ್ನ ಬಿಟ್ಟು ಬದುಕಲಾರೆ ಎನ್ನುತ್ತಿದ್ದಳು ಅಂದು

ಅವನ ಕೂಡ ಬದುಕಬಲ್ಲೆ ಎನ್ನುತ್ತಿರುವಳು ಇಂದು, ನಿನ್ನ ಕೊಂದು..!!

ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು) - 3

......ತವರೂರಿಗೆ ಮರಳುವ ಖುಷಿಯಲ್ಲಿ ತುಂಬಾನೆ ತಯ್ಯಾರಿ ನಡೆಸಿ, ತವರೂರಿರಿನ ರಾಜಧಾನಿಗೆ ತೆರಳಿ ಸಂದರ್ಶನ ಕೊಟ್ಟು ಬಂದದ್ದಾಯಿತು. ಬಹಳ ಅಪೇಕ್ಷೆಯನ್ನು ಇಟ್ಟುಕೊಂಡು ಕರೆಗಾಗಿ ಇದಿರು ನೋಡುತ್ತಿದ್ದ..ಒಂದು ತಿಂಗಳು ಕಳೆಯಿತು,ಎರಡು ತಿಂಗಳು ಕಳೆಯಿತು ಹಾಗೆ ಮೂರು ತಿಂಗಳುಗಳು ಕಳೆದರೂ ಕರೆ ಬರಲೇ ಇಲ್ಲ.. ನಿರಸಗೊಂಡು ಇದ್ದ ಜಾಗದಲ್ಲೇ ತನ್ನ ಭವಿಷ್ಯವಿರಬಹುದು ಎಂದುಕೊಂಡು ಸುಮ್ಮನಾಗಿಬಿಟ್ಟ. ಹೀಗೆ ಒಂದು ದಿನ ಕಚೇರಿಯ ಕಾರ್ಯದಲ್ಲಿ ನಿರತನಾಗಿದ್ದಾಗ ಪೋನು ರಿ0ಗಾಯಿಸಿತು..ಅದು ತವರೂರ ಕರೆ..ಯಾರೋ ಗೆಳೆಯರು ಇರಬೇಕು ಎಂದುಕೊಳ್ಳುತ್ತಲೆ ಹೆಲೋ ಅಂದ..,ಆ ಕಡೆಯಿಂದ ಒಂದು ಹೆಣ್ಣಿನ ಧ್ವನಿ ಕೇಳಿ ಬಂತು..,ತಾವು ನಮ್ಮಲ್ಲಿಗೆ ಬಂದು ಸಂದರ್ಶನ ನೀಡಿದ್ದರ ನಿಮಿತ್ತ ನಿಮ್ಮನ್ನು ನಮ್ಮ ಕಂಪನಿಗೆ ಟೆಕ್ನಿಕಲ್ ಲೀಡ ಅಂತ ನೇಮಕ ಮಾಡುತ್ತಿದ್ದೇವೆ, ತಾವು ಆದಷ್ಟು ಬೇಗ ಬಂದು ಸೇರಿಕೊಳ್ಳಬೇಕು ಎಂದು ಹೇಳಿದರು. ವಿಜಯನ ಸಂತೋಷಕ್ಕೆ ಮಿತಿಯೇ ಇರಲಿಲ್ಲ, ಅವನು ಕುಣಿದು ಕುಪ್ಪಳಿಸ ತೊಡಗಿದ. ಬಹು ದಿನಗಳಿಂದ ತಂದೆ ತಾಯಿ ಬಂಧು ಮಿತ್ರರಿ0ದ ದೂರವಿದ್ದು ಅವನಿಗೆ ಸಾಕಾಗಿ ಹೋಗಿತ್ತು. ವಿಷಯ ತಿಳಿಯುತ್ತಲೇ ತನ್ನ ಮೇಲಧಿಕಾರಿಗೆ ತಿಳಿಸಿದ, ಅವರೂ ಕೂಡ ಸಂತೋಷಪಟ್ಟರು. ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿ ತನ್ನ ಕಾರ್ಯವನ್ನು ಬೇರೊಬ್ಬ ಗೆಳೆಯನಿಗೆ ಒಪ್ಪಿಸಿ ಹೊರಡಲು ಸಿದ್ದನಾದ. ಒಂದೆಡೆ ತವರಿಗೆ ಮರಳುವ ಖುಷಿ ಮತ್ತೊಂದೆಡೆ ಗಳೆಯರನ್ನು, ತನಗೆ ಸಹಾಯ ಮಾಡಿದ ಬಾಡಿಗೆ ಮಾಲಿಕರನ್ನ, ಮೂರು ವರುಷ ಕೆಲಸ ಮಾಡಿದ ಸ್ಥಳವನ್ನ ಬಿಟ್ಟು ಹೋಗುವಾಗ ಬೇಸರವೂ ಕೂಡಾ ಆಯಿತು.ಮಾರನೆ ದಿನ ತನ್ನ ತವರಿಗೆ ಮರಳಿದ ಒಂದೆರೆಡು ದಿನ ಅಪ್ಪ ಅಮ್ಮ ತಮ್ಮಂದಿರ ಜೋತೆಯಲಿ ಕಾಲ ಕಳೆದು ತನ್ನ ಹೊಸ ಕೆಲಸಕ್ಕೆ ಸೇರಿಕೊಳ್ಳಲು ರಾಜಧಾನಿಯತ್ತ ಪ್ರಯಾಣ ಬೆಳಸಿದ. ಮತ್ತೆ ಚಿಗುರಲಾರಂಭಿಸಿದವು ಹೊಸ ಹೊಸ ಕನಸ್ಸುಗಳು. ಈತ ಈಗ ಸೇರಿಕೊಂಡ ಕಂಪನಿ ಒಂದು ಸುಪ್ರಸಿದ್ದ ಬಹುರಾಷ್ಟೀಯ ಕಂಪನಿಯಾಗಿತ್ತು. ಅತ್ತ ತಂದೆ ತಾಯಿಗೂ ಖುಷಿ.. ಮಗನ ವೃತ್ತಿ ಜೀವನ ಸರಿಯಾಗಿ ನಡೆಯುತ್ತಿದೆ. ಹಿರಿಯನಾದ ಮಗನಿಗೆ ಒಂದು ಒಳ್ಳೆಯ ಸಂಬಂಧ ನೋಡಿ ಮದುವೆ ಮಾಡಬೇಕೆಂದು ನಿರ್ಧಾರಕ್ಕೆ ಬರುತ್ತಾರೆ. ವಿಜಯ ತುಂಬಾ ಜಾಣ ಸುಸಂಸ್ಕೃತ ಹುಡುಗನಾಗಿದ್ದ. ರೂಪದಲ್ಲಿ ಗುಣದಲ್ಲಿ ನಡೆ ನುಡಿಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ. ಎಷ್ಟೊ ಹುಡುಗಿಯರಿಗೆ ಇವನು ಅಚ್ಚುಮೆಚ್ಚು ಆದರೆ ವಿಜಯ ಮಾತ್ರ ಎಲ್ಲಾ ಗೆಳತಿಯರನ್ನು ತನ್ನ ಸಹಪಾಟಿಗಳು ಅಕ್ಕ ತಂಗಿಯರು, ಸಹೋದರಿಯರು ಎನ್ನುವ ಭಾವನೆ ಇಟ್ಟುಕೊಂಡಿದ್ದ. ತಂದೆ, ವಿಜಯಾ ನೀನು ಈಗ ಒಳ್ಳೆಯ ಕೆಲಸದಲ್ಲಿದ್ದಿಯ ಇನ್ನೂ ನಿನಗೊಂದು ಮದುವೆ ಮಾಡಬೇಕು ಎಂದುಕೊಂಡಿದ್ದೇನೆ ಇದಕ್ಕೆ ನಿನ್ನ ಅಭಿಪ್ರಾಯವ ತಿಳಿಸುವೆಯಾ ಅಂದರು. ಅದಕ್ಕೆ ತಂದೆಯ ತಾಯಿಯ ವಿಧೆಯನಾಗಿ ಬೆಳೆದ ವಿಜಯನಿಗೆ ಮುಜುಗರ.., ತಮ್ಮ ಇಚ್ಚೆಯಂತೆ ಆಗಲಿ ಎಂದು ತಿಳಿಸಿದ. ವಿಜಯನ ಸಮ್ಮತಿಯಿಂದ ತಂದೆ ಕನ್ಯೆಯ ಹುಡುಕಾಟ ಪ್ರಾರಂಭಿಸಿದರು.ರೂಪವಂತ ಗುಣವಂತನಾದ ವಿಜಯನಿಗೆ ಹುಡುಗಿಯ ಹುಡುಕುವುದು ಅಷ್ಟೇನು  ಕಷ್ಠಕರವೆನ್ನಿಸಲಿಲ್ಲ. ತಂದೆಯ ಗೆಳೆಯನ ಸಹಾಯದಿಂದ ಒಂದು ಕನ್ಯೆಯ ಬುಲಾವು ಬಂದಿತು. ಕನ್ಯೆಯು ವಿದ್ಯಾವಂತೆ ಸೌಂದರ್ಯವತಿ ಆಗಿ ಕಂಡು ಬಂದುದ್ದರಿಂದ ಮುಂದುವರೆಯಲು ವಿಚಾರಿಸಿದರು. ಒಳ್ಳಯ ಮನೆತನದವರಾದ ವಿಜಯನ ತಂದೆಯವರು ಹುಡುಗಿಯವರ ಕಡೆಯಿಂದ ಏನನ್ನೂ ಅಪೇಕ್ಷಿಸದೆ ಮದುವೆಗೆ ಸೈ ಎಂದು ಸೂಚಿಸಿದರು. ಮುಗ್ಧ ಹುಡುಗ ಹೆಂಗಳೆಯರ ಬಗ್ಗೆ ಗೌರವ ಭಾವನೆ ಇಟ್ಟುಕೊಂಡು ಬೆಳೆದವನು.ತನ್ನ ಕೈ ಹಿಡಿದು ಬಂದ ಹೆಣ್ಣು ತನ್ನ ತನು ಮನದಿಂದ ಒಪ್ಪಿಕೊಂಡು ಸಂಸಾರ ನಡೆಸಲು ಪ್ರಾರಂಭಿಸಿದನು. ಅವಳು ಒಂದು ಸಣ್ಣ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಸಂಸಾರ ನಡೆಸಲು ಅನುಕೂಲವಾಗುವಂತೆ ಅವಳ ಕಚೇರಿಯ ಹತ್ತಿರವೇ ಮನೆ ಮಾಡಿದನು. ಗಂಡನ ಪ್ರೀತಿಗೆ ಪಾರವೇ ಇರಲಿಲ್ಲ. ಹೇಳಿ ಮಾಡಿಸಿದ್ದ ಜೋಡಿ ಎನ್ನುವ ಹಾಗೆ ಜೀವನ ಸಾಗಿತ್ತು...! ಹೆಣ್ಣಿನ ಬಗ್ಗೆ ಹೇಳಬೇಕೆಂದರೆ ೩ ವರುಷದ ಹಿಂದೆಯೇ ಆ ಊರಿಗೆ ಬಂದು ತನ್ನ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು ಕಲಿತವಳು. ಅಷ್ಟು ಬಿಟ್ಟರೆ ವಿಜಯನಿಗೆ ಮತ್ತೆನೂವಳ ಬಗ್ಗೆ ತಿಳಿದಿರಲಿಲ್ಲ. ತನ್ನ ವಿದ್ಯಾಬ್ಯಾಸದ ಜೀವನದಲ್ಲಿ ಕಂಡಂತೆ ಎಲ್ಲ ಹುಡುಗಿಯರು ಒಳ್ಳೇಯವರೆ ಎಂಬ ಅವನ ಭಾವನೆ...ಬೆಳ್ಳಗೆ ಇದ್ದುದ್ದೆಲ್ಲಾ ಹಾಲಲ್ಲಾ ಎನ್ನುವುದ ತಿಳಿಯದ ಅವನು ಎಲ್ಲೋ ಸ್ವಲ್ಪ ಎಡವಿದ್ದ. ತಂದೆ ತಾಯಂದಿರಿಗೂ ಹೀಗೊಂದು ಹೆಣ್ಣಿನ ಮನೆಯವರ ವಿಚಾರಣೆ ಹೆಣ್ಣಿನ ಬಗ್ಗೆ ತಿಳಿದುಕೊಳ್ಳದೇ ಎಲ್ಲೋ ಅವರು ಕೂಡಾ ಎಡವಿದ್ದರು.....( ವಿಜಯನ ವೈವಾಹಿಕ ಜೀವನ ಮುಂದುವರೆವುದು....)

ಹಿಡಿ - ಶಾಪ


ಬಟ್ಟೆ ಬರೆ ಭಾಹ್ಯ ಎಂದಿಗೂ ಮನುಷ್ಯನ ನಿಜ ರೂಪವಲ್ಲ

ಉತ್ತಮ ಎಂದು ಮನೆ ಹೆಸರಿನಲ್ಲಿ ಇರುವದರಿಂದ ಉತ್ತಮರಾಗುವುದಿಲ್ಲ

ನಟನೆಯಿಂದ ತಾತ್ ಕಾಲಿಕವಾಗಿ ಜನರನ್ನು ಮರಳು ಮಾಡಬಹುದು

ಸಜ್ಜನರಿಗೆ ಕೊಟ್ಟ ಕಿರುಗುಳ ದುಷ್ಟ ಜನರಿಗೆ ಶಾಪವಾಗಿ ಕಾಡುವುದು

ಮಚ್ಚೆಯ ನಾಲಿಗೆ ಹೇಳುತಿದೆ ಕೇಳು...

ಕೇಡು ಬಯಸಿದ ಜೀವ ವಿಲವಿಲ ಒದ್ದಾಡುವುದು

ಸುಳ್ಳು ಹೇಳಿದ ಬಾಯಿ ಅದು ಹುಳಬಿದ್ದು ಹೋಗುವುದು

ಅಯ್ಯೊ ಅನ್ನಿಸಿ ಪಡೆದ ಹಣ ನಿನ್ನ ಬಳಗವ ಸುಟ್ಟು ನಿರ್ನಾಮವಾಗಿಸುವುದು

ನೀ ಇಹಲೋಕ ತ್ಯಜಿಸುವ ಮುನ್ನ ,ಮರಳಿ ಮರಳಿ ಈ ಮಾತುಗಳು ಕಿವಿಗಪ್ಪಳಿಸುವುದು.

Monday, February 18, 2013

ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು) - 2

ಅಂದ ಹಾಗೆ ಆ ಹುಡುಗನ ಹೆಸರು ಹೇಳಲಿಲ್ಲವಲ್ಲ ನಾನು...ಹೆಸರು ವಿಜಯ್. ಮಾಲೀಕರ ಸಹಾಯ ಪಡೆದು ಅವರಿಗೆ ಧನ್ಯವಾದಗಳ ಅರ್ಪಿಸಿ ಹೊಸ ಊರಿನ ಕಡೆಗೆ ನಡೆದ. ವಿಜಯ್ ಧೈರ್ಯಶಾಲಿ ಬಂದ ಅವಕಾಶವನ್ನು ಸದ್ದುಪಯೋಗ ಪಡಿಸಿಕೊಳ್ಳಲು ಏನ್ ಬೇಕಾದರು ಮಾಡುವಂತಹ ಸ್ವಭಾವ ಅವನದು. ದೇವರನ್ನು ನೆನೆಯುತ್ತಾ ಕಛೇರಿಯೊಳಗೆ ಹೋದ. ಅಲ್ಲಿಯ ಮ್ಯಾನೇಜರು ಇವನನ್ನು ಬರಮಾಡಿಕೊಂಡು ಕೆಲವು ಕಛೇರಿಯ ಪತ್ರಗಳಿಗೆ ಸಹಿ ಹಾಕಿಸಿಕೊಂಡು ಅವನ ಕುಶಲೊಪರಿ ವಿಚಾರಿಸಿದರು. ಆಗಲೆ ಮಧ್ಯಾನದ ವೇಳೆ..,ಪಾಪ ವಿಜಯನ ಹೊಟ್ಟೆ ತಾಳ ಹಾಕ ತೊಡಗಿತ್ತು..ಮ್ಯನೇಜರು ಜವಾನನ್ನು ಕರೆದು  ಇವರಿಗೆ ಊಟದ ಮನೆಗೆ ಕರೆದುಕೊಂಡು ಹೋಗು ಎಂದು ಸೂಚಿಸಿದರು. ವಿಜಯ ತನ್ನ ಹಸಿವೆ ಆರಿಸಿಕೊಂಡು ಮತ್ತೆ ಮ್ಯಾನೇಜರ್ ಇದ್ದ ಕಡೆಗೆ ಬಂದ. ಅಷ್ಟರ ಹೊತ್ತಿಗೆ ಅಲ್ಲಿ ಮತ್ತೆ ಕೆಲ ಹುಡುಗರು ಬಂದು ಸೇರಿದ್ದರು. ವಿಜಯ ಮುಂದು ಹೋಗಿ ತನ್ನ ಪರಿಚಯವ ಹೇಳಿ ಎಲ್ಲರೊಂದಿಗೆ ಬೆರೆತುಬಿಟ್ಟನು. ಹೊಸ ಕೆಲಸ ಹೊಸ ಊರು ಹೊಸ ಜನ ತಿಳಿಯದ ಭಾಷೆ ಆದರೂ ಒಂದು ತರಹದ ಸಂಭ್ರಮ. ಹೊರ ರಾಜ್ಯದವನಾಗಿದ್ದರಿಂದ ಮ್ಯನೇಜರು ಅವನಿಗೆ ಕಂಪನಿಯ ಅಥಿತಿ ಗೃಹದಲ್ಲಿ ತಂಗುವ ವ್ಯವಸ್ಥೆ ಮಾಡಿದರು.ಸಂತೋಷದಿಂದ ತಂದೆಗೆ ಪೋನ್ ಮಾಡಿ ಕೆಲಸಕ್ಕೆ ಸೇರಿಕೊಂಡೆ ಎಂಬ ಸಿಹಿ ಸುದ್ದಿ ತಿಳಿಸಿದ. ಮರು ದಿನ ಬೇಗನೆ ಎದ್ದು ತಯ್ಯಾರ್ ಆಗಿ ಕೆಲಸ ಕಾರ್ಯಗಳ ಬಗ್ಗೆ ತಿಳಿದು ಕೊಳ್ಳುವ ಹುಮ್ಮಸ್ಸಿನಿಂದ ಕಛೇರಿಯ ಕಡೆಗೆ ನಡೆದ. ಎಲ್ಲಾ ಲೊಕಲ್ ಹುಡುಗರು ಆಗಲೇ ಜಮಾಯಿಸಿದ್ದರು. ಮ್ಯನೇಜರು ಪೂರ್ತಿ ಕಂಪನಿಯ ಕೆಲಸ ಕಾರ್ಯಗಳು ಹೇಗೆ ನಡೆಯುತ್ತದೆ ಎಂಬುದ ತೋರಿಸಿ, ಎಲ್ಲರಿಗೂ ಒಂದು ಸಣ್ಣ ಸಣ್ಣ ಕೆಲಸ ಕೊಟ್ಟು ಮಾಯವಾದರು. ಗೆಳೆತನ ಪ್ರೀತಿ ವಿಸ್ವಾಸ ಬೆಳೆಯಲಾರಂಬಿಸಿತು ಎಲ್ಲಾ ಸಹ ಪಾಟಿಗಳೊಡನೆ. ದಿನೆ ದಿನೆ ಹೊಸ ಹೊಸ ಅನುಭವ..,ಕಾಲ ಉರುಳಿದಂತೆ ವರುಷ ಕಳೇದದ್ದೆ ಗೊತ್ತಾಗಲಿಲ್ಲ. ನಮ್ಮ ವಿಜಯ ಎಲ್ಲರಿಗಂತ ಒಂದು ಹೆಜ್ಜೆ ಮುಂದೆ ವರೆದು ಅದೇ ಕಚೇರಿಯಲ್ಲಿ ಪರ್ಮನೆಂಟ ಆಗಿ ನೇಮಕಗೊಂಡ. ವಿನಯತೆ ಶ್ರದ್ದೆಯಿಂದ ಕೆಲಸಕ್ಕೆ ಸಿಕ್ಕ ಬಹುಮಾನ ಎಂದುಕೊಂಡು ದೇವರನ್ನು ನೆನೆದು, ಕಲಸ ಪ್ರಾರಂಭಿಸಿದ. ತಾನು ಯಾರ ಜೋತೆಯಲ್ಲಿ ಕೆಲಸ ಮಾಡುತಿದ್ದನೊ ಅವರಿಗೆ ಇವನು ಈಗ ಅಧಿಕಾರಿ. ಕಂಪನಿಯ ಒಳ ನಡೆಯುತ್ತಿದ್ದಂತೆ ಎಲ್ಲರೂ ವಿಜಯ್ ಸಾರ್ ಅಂದಾಗ ಏನೋ ಮುಜುಗರ ಮತ್ತೊಂದೆಡೆ ಖುಷಿ.ಇನ್ನೂ ಹೆಚ್ಚು ಕಲಿಯಬೇಕು ಬೆಳೆದು ದೊಡ್ಡ ಅಧಿಕಾರಿಯಾಗಬೇಕು ಎಂಬ ಕನಸ್ಸು ಅವನಿಗೆ ಯಾವಾಗಲೂ ಕಾಡುತ್ತಿತ್ತು..ತನ್ನ ರಾಜ್ಯದ ರಾಜಧಾನಿಯಲ್ಲಿ ಕೆಲಸ ಮಾಡುತ್ತಿದ್ದ ಗೆಳೆಯನ ಸಂಪರ್ಕಿಸಿದಾಗ ಅವನ ಕಂಪನಿಯಲ್ಲಿ ಕೆಲಸ ಖಾಲಿ ಇರುವುದು ಗಮನಕ್ಕೆ ಬಂತು, ಮೂರು ವರುಷದ ನಂತರ ತನ್ನ ತಾಯಿ ನಾಡಿಗೆ ಮರಳುವ ಅವಕಾಶ ಅವನದಾಯಿತು..(ಮುಂದುವರೆಯಲಿದೆ ವಿಜಯನ ಸೆಕೆಂಡ ಇನ್ನಿಂಗ್ಸ್..)

ಇವಳೆಂತಹ ಹೆಣ್ಣು..?


ಮದುವೆ ಎಂಬ ಪವಿತ್ರ ಬಂಧನ ಹೊಕ್ಕಿ
ಗಂಡನಿಗೆ ಮೋಸವ ಮಾಡುತ್ತ ಕಳೆದಳು ವರುಷ
ಮಿಂಡನ ಮರೆಯಲಾರದೇ ತೋರೆದು ಗಂಡನ
ಓಡಿ ಹೋದಳು ಅವನ ಕೂಡ..
ಒಬ್ಬ ಗಂಡು ಸಾಲದು ಇವಳಿಗೆ
ಮಾವ ತಮ್ಮ ಗೆಳೆಯ ಎಲ್ಲರೂ ಒಂದೇ..
ರಾತ್ರಿ ಜೋತೆ ಇದ್ದವರೆಲ್ಲಾ ಗಂಡರೆ ಇವಳಿಗೆ
ಹಾದರದ ಜೀವನ ಮಾಡುವವಳಿಗೆ
ವರುಷದಿ ಮಾಡಿದ ಸಂಸಾರಕ್ಕೆ ಗಂಡ ತೆತ್ತಬೇಕಂತೆ
ಇವಳ ತಾಯಿ ಕೇಳಿದಷ್ಟು ಹಣದ ಕಂತೆ ಕಂತೆ..!
ಮಗಳ ಬಾಳಿನಲ್ಲಿ ಆಡುವ ತಾಯಂದಿರು.., ಹೀಗೂ ಊಂಟೆ..?

ನಂಬಿಕೆ ದ್ರೋಹಿ

ಕೆಟ್ಟ ತಾಯಿಯ ಹಠದ ಮಾತು ತನ್ನ ಜೀವನ ಕೆಡಿಸುವುದು

ಕುತಂತ್ರಿ ಸೋದರ ಮಾವ ತನ್ನ ಬೇಳೆ ಬೇಯಿಸುವನು

ಗಂಡ ಹೆಂಡಿರ ಜೀವನದಲ್ಲಿ ಮೂಗು ತೊರಿಸುವುದು ಇವರ ಕಾಯಕವದು

ಭಂಡ ತಾಯಿ ಎಲ್ಲರನ್ನೂ ಕೈಗೊಂಬೆಯಾಗಿ ಆಡಿಸುವ ಚಾಳಿಯವಳು

ಸೋದರ ಮಾವನ ಆಸೆ ಸೊಸೆಯ ಮೇಲೆ..

ಹೆಂಡತಿ - ಮಕ್ಕಳು ಇದ್ದರೂ...

ಅವಳ ಸಂಸಾರವ ಕೆಡಿಸಲು., ಗಂಡನ ಕೊಲ್ಲುವ ಭಂಟ

ಬುದ್ದಿ ಇರದ ಹೆಂಗಸು ತನ್ನ ಜೀವನದ ಪರಿವಿಲ್ಲದೇ

ದುಷ್ಟರ ಕೈ ಗೊಂಬೆಯಾಗಿ ಹಾಳುಮಾಡಿ ಕೊಂಡಿರುವಳು ತನ್ನ ಜೀವನವ

ಅನ್ಯಾಯ ಎಸೆದುದನ್ನು ಮರೆತು.., ನಟನೆಯ ಅನುಕಂಪ ಗಿಟ್ಟಿಸುವ ಪರಿ

ಥೂ ನಿನ್ನ ಬುದ್ದಿಗಿಷ್ಟು....ನೀ ಕಲಿತಿದ್ದು ಬರೀ ಅಕ್ಷರ...ಅದೇ ನಿನ್ನ ಅವನತಿಯ ಅವಾಂತರ

ಕಾಲು ಬಿದ್ದು ಕ್ಷಮೆಯಾಚಿಸುವ ಬದಲು ಮತ್ತೆ ತೋರುತಿಹ ಅಟ್ಟಹಾಸದ ಆಟ..

ಇವಳೆಂತಹ ಹೆಂಗಸು......?? ನಂಬಿಕೆ ದ್ರೋಹಿ..!

Sunday, February 17, 2013

ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು..)


ಒಬ್ಬ ಸುಂದರ ಯುವಕ, ಮನಸಲ್ಲಿ ಸಂದರ ಕನಸ್ಸುಗಳು, ಗುರಿಯ ಬೆನ್ನ ಹತ್ತಿ ಶ್ರದ್ದೆಯಿಂದ ಮುನ್ನುಗುತ್ತಿದ್ದ. ಪದವಿ ಪಡೆದು ಕೆಲಸಕ್ಕೆ ಅಲೆಯುವ ಕಾಲವದು.ಮಹಾನಗರಿ ಇನ್ನೂ ಅವನಿಗೆ ಹೊಸದು.ಜನರ ಸಂಪರ್ಕ ಕಡಿಮೆ.ದಿನ ಪತ್ರಿಕೆಗಳನ್ನೆ ನೋಡುತ್ತಾ ಚಿಕ್ಕ ಮಟ್ಟ ಕೆಲಸವಾದರೂ ಸರಿಯೆ ಎಂದು ಹೊರೆಟವ. ತಿಂಗಳು ಕಳೆದವು ಅವನ ಹಣೆಬರಹ ದಯತೋರಲಿಲ್ಲ ಅವನಿಗೆ..ಮರಳಿ ತವರಿಗೆ ಮರಳಿದ. ತಂದೆ ನಿವ್ರುತ್ತ ಅಧಿಕಾರಿ, ಬರುವ ಪೆನಶನ್ ಹಣದಿಂದನೆ ಮನೆ ಸಾಗಿಸಬೇಕು, ತಮ್ಮಂದಿರು ಇನ್ನೂ ವಿದ್ಯಾಬ್ಯಾಸ ಮಾಡುತ್ತಿದ್ದರು.ಬೆಳೆದು ನಿಂತ ಮಗ ಪದವಿ ಮುಗಿಸಿದರೂ ಕೆಲಸ ಸಿಗುವಲ್ಲಿ ಬವಣಿಸುವುದ ಕಂಡು ತಾಯಿ-ತಂದೆಗೂ ಬೇಸರ..ಮನಸಿನ ವೇದನೆ ಹೇಳಿಕೊಳ್ಳಾಲಾರದ ಪರಿಸ್ತಿಥಿ ನವ ಯುವಕನಿಗೆ. ಹೇಗೋ ಪ್ರಯತ್ನದಿಂದ ಒಂದು ಸಣ್ಣ ವಾಹನಗಳ ರಿಪೇರಿ ಮಾಡುವ ಅಂಗಡಿಯಲ್ಲಿ ಕೆಲಸಗಿಟ್ಟಿದ..ಕೆಲಸ ಯಾವುದಾದರೇನು ಎಂದು ಶ್ರದ್ದೆಯಿಂದ ದುಡಿಯತೊಡಗಿದ.ರಾತ್ರಿವೇಳೆಯಲ್ಲಿ ಓದುವುದು, ಬೇರೆ ಸಂಸ್ಠೆಗಳಿಗೆ ಸಂದರ್ಶನ ನೀಡುವುದು ಸಾಮಾನ್ಯವಾಗಿಬಿಟ್ಟಿತ್ತು. ಶ್ರಮ ಪಡುವವರಿಗೆ ದೇವರು ಎಂದಿಗೂ ಕೈ ಬಿಡುವುದಿಲ್ಲ ಅನ್ನುವ ಸಾಕ್ಷಿಯಾಗಿ ಆ ಯುವಕನಿಗೆ ದೂರದ ಹೋರ ರಾಜ್ಯದಲ್ಲೊಂದು ಕೆಲಸ ದೊರೆಯಿತು. ಹೋರ ರಾಜ್ಯಕ್ಕೆ ತೆರಳಬೇಕಾದಾಗ ೫೦೦೦/- ರೂ ಒಟ್ಟು ಹಾಕಲಾರದೇ ಕೆಲಸ ಕಳೆದು ಕೊಳ್ಳುವ ಆ ಸಮಯ ಮನಸ್ಸಿಗೆ ಬೇಸರ ಉಂಟು ಮಾಡಿತ್ತು..ತಂದೆಗೆ ಕೇಳಬೇಕೆಂದರೆ ತಮ್ಮಂದಿರ ವಿದ್ಯಾಬ್ಯಾಸ ಎಲ್ಲಾ ಖರ್ಚುವೆಚ್ಚಗಳ ನೆನೆದು ಸುಮ್ಮನಾದ...ದಾರಿ ಇಲ್ಲದೇ ಇದ್ದ ಕೆಲಸವನ್ನೆ ಮುಂದುವರೆಬೇಕು ವೆಂಬ ನಿರ್ಧಾರಕ್ಕೆ ಬರುತ್ತಾನೆ. ವಿಷಯ ತಿಳಿದ ಮಾಲಿಕ ಅವನ ಶ್ರದ್ದೆಗೆ ಮೆಚ್ಚಿ ೫೦೦೦/- ಕೊಟ್ಟು ಅವನ ಭವಿಶ್ಯ ರೂಪಿಸಿಕೊಳ್ಳಲು ಹೇಳಿ ಕಳಿಸುತ್ತಾನೆ...( ಮುಂದುವರೆವುದು...)

Wednesday, February 13, 2013

ಹಣೆಬರಹ

ಫ಼ೆಬ್ರುವರಿಯಲ್ಲಿ ನಾ ನಿನ್ನ ಮನಸಾರೆ ಪ್ರೀತಿಸುತ್ತಿನಿ ಅಂದವಳು 
ಎರಡು ತಿಂಗಳದಲ್ಲೆ....ಎಪ್ರಿಲ್ ಫ಼ೂಲು ಮಾಡಿ ಓಡಿ ಹೋದಳು
ಅವಳ ಜಾತಕದಲ್ಲೆ ಬರೆದಿತ್ತು ಅವಳೊಂದು ಬ್ಲಡಿ ಫ಼ೂಲು
ಹಣೆಬರಹ ಬದಲಿಸಿಕೊಂಡ ಹುಡುಗನೀಗ ಮಾಲಾ ಮಾಲು..!

Tuesday, February 12, 2013

ಕಣ್ಣಿನ ಪರದೆಗಳು ಕುಸಿಯುತ್ತಿತ್ತು 
ಹಾಸಿಗೆಯು ಕರೆಯುತಿತ್ತು 
ನಿದ್ದ್ರಾದೇವಿ ಆವರಿದ್ದೆ  ತಿಳಿಯಲೇ ಇಲ್ಲಾ 
ಸಿಹಿ ಸಿಹಿ ಕನಸಿನಲ್ಲಿ ಮುತ್ತುಗಳ ಸುರಿಸಿದಂತಾಗಿ 
ಒಮ್ಮೆ ಬಲ ಗಲ್ಲಕ್ಕೆ ಮತ್ತೊಮ್ಮೆ  ಎಡ ಗಲ್ಲಕ್ಕೆ  
ಒಮ್ಮೆ ಕೈಯಿಗೆ  ಮತ್ತೊಮ್ಮೆ ಕಾಲಿಗೆ  ಚುಂಬಿಸಿದಂತಾಗಿ 
ನಸುಕಿನಲ್ಲಿ ಎದ್ದು ಮಯ್ಯ ಮುರಿದೆ 
ಮೈ ಕೈ ಮುಟ್ಟಿ  ಮುಟ್ಟಿ  ನೋಡಲು
ಅಲ್ಲಲ್ಲಿ ಕಂಡವು ಗುಮ್ಮುಟೆಯ ಸಾಲುಗಳು 
ಆಗಲೇ ತಿಳಿದಿತ್ತು ಕನಸಿನಲ್ಲಿ ಕೊಟ್ಟವಳು ಸುಂದರಿಯಲ್ಲ 
ರಕ್ತವ ಹೀರಿ ಬಾಯಿ ಚಪ್ಪರಿಸಿದ  ಹೆಣ್ಣು ಸೊಳ್ಳೆ ಅವಳು  

***ಭಾವಪ್ರಿಯ***

Thursday, February 07, 2013

ಮತ್ತೆ ಮೂಡಿತು....!


ಮತ್ತೆ ಮೂಡಿತು ಮಂದಹಾಸ ಅವಳ ಮೊಗದಲ್ಲಿ

ಮತ್ತೆ ತುಟಿಗಳು ಅರಳಿದವೂ ಅವಳ ನಗು ಅಂಚಿನಲ್ಲಿ

ಸಂತೋಷ ಹೊಮ್ಮುತಿದೆ ಆ ಕಣ್ಣಗಳಲ್ಲಿ ,

ಗಲ್ಲ ಕೆಂಪಾದವು ಹರುಷದ ಮೊಗ್ಗೆ ಚೆಲ್ಲಿ.., ಮತ್ತೆ ಮೂಡಿತು..ಮತ್ತೆ ಮೂಡಿತು..!

Friday, February 01, 2013

ಅನ್ನಸ್ಲಿಕತ್ತದ ನನಗ..., ಏನೋ ಹೇಳೊದೈತಿ ನಿನಗ..!

ಆ ನಿನ್ನ ಮಾರಿ ಮ್ಯಾಗ,

ಏನೋ ಸಂಗತಿ ಕಾಡೇತಿ ಅಂತ..

ಆ ನಿನ್ನ ಸಪ್ಪನ ಕಣ್ಣಾಗ,

ದುಃಖ ಮನಿ ಮಾಡಿ ಕೂತಂಗ..

ತುಟಿ ತಡವರಿಸಿ ಬಿಗಿದಾವ,

ಮಾತು ಬಾರದ ಮೂಕಿಹಂಗ..

ಅನ್ನಸ್ಲಿಕತ್ತದ ನನಗ,

ಏನೋ ಹೇಳೊದೈತಿ ನಿನಗ..


ಮನಸಿನ ಗೊಂದಲದಾಗ,

ಅದರಿ ಅವಿತು ಕುಳಿತಿ ಯಾಕ..

ಹೃದಯಕ್ಕ ಮಂಕು ಕವಿದಾಗ,

ದುಗಡವ ನೀ ಹೊರ ಚೆಲ್ಲಬೇಕ ..

ಮೌನ ದೂಡ ದೂರಕ,

ಚಿಂತಿ ಬಿಟ್ಟು ತೊಡಿಕೊಳ್ಳಾಕ ಅಣಿಯಾಗ..

ಅನ್ನಸ್ಲಿಕತ್ತದ ನನಗ,

ಏನೋ ಹೇಳೊದೈತಿ ನಿನಗ..!



***ಭಾವಪ್ರಿಯ***

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...