Monday, May 24, 2010

ಮತ್ತೆ ಹಚ್ಚುತ್ತಿರುವೆ ನಾ ಕವನಗಳ ಬೆಳಕ..!!!


ಭಾವನೆಗಳು ಮೊಳಗಲು ಭಾವನ
ಕವಿತೆಯ ಸಾಲುಗಳಿಗೆ ಕವನ
ತಂತಿಗಳ ಮಿಡಿತವೆ ಪ್ರೇರಣ
ಮನವ ಸಂತೈಸಲು ಮನೋರಮಾ
ಕವನಗಳು ಹುಟ್ಟಲು ಬೇಕು ಸ್ಪೂರ್ತಿ
ಅದರೊಳಗೆ ಅಡಿಗಿರಬಹುದು ಕೀರ್ತಿ
ನನ್ನ ಪದಗಳಿಗೆ ಒಲಿದ ನೂರೆಂಟು ಲಲನೆಯರೇ
ಪಾದಾರ್ಪಣೆ ಮಾಡಿ ಈ ಕವಿ ಹೃದಯದಲ್ಲಿ ...ಮತ್ತೆ ಹಚ್ಚುತ್ತಿರುವೆ ನಾ ಕವನಗಳ ಬೆಳಕ.

Sunday, May 09, 2010

ದೂರ ದೃಷ್ಟಿ....!

ಅರ್ಜುನನು ಗುರಿ ಇಟ್ಟದ್ದು ಕಣ್ಣಿಗೆ
ತಪ್ಪಲಿಲ್ಲ ಅವನ ಗುರಿ ಕಿರೀಟಕ್ಕೆ ಏರಿಸಿಕೊಂಡ ಮತ್ತೊಂದು ಗರಿ
ಭೀಮನ ಬಲವನ್ನು ಕಂಡವರಿಲ್ಲ
ಬಡಿದು ಬಂಟರ ಮೂಳೆಗಳ ಮುರಿದನಲ್ಲ
ಕೃಷ್ಣನ ಚಾತುರ್ಯ ಜಗತ್ತ ಪ್ರಸಿದ್ದ
ಅವನಲ್ಲಿತ್ತು ಪಾಂಡವರ ಗೆಲ್ಲಿಸುವ ದೃಷ್ಟಿ
ಮನುಷನಲ್ಲಿ ಇರಬೇಕು ದೂರ ದೃಷ್ಟಿ
ಅದನ್ನು ಸಾದಿಸಿದಾಗಲೇ ಅವನಿಗೊಲಿವುದು ಪುಷ್ಪ ವೃಷ್ಟಿ ..!
ಜೀವನದಲ್ಲಿ ಮುನ್ನುಗ್ಗಲು ಬೇಕು ಧ್ಯೇಯ ,ಧೈರ್ಯ, ಎಲ್ಲವನು ಸಾಧಿಸಲು ಪಡಬೇಕು ಶ್ರಮ..!

Monday, May 03, 2010

ಮುಂಜಾನೆಯ ಮಳೆ ...!!


ಬೆಂಗಳೂರಿನಲ್ಲಿ ಮುಂಜಾನೆಯ ಮಳೆ ಹನಿಯ ಸಿಂಚನ
ಬಾಗಲಿನ ಕಸ ತೆಗೆದು , ಅಂಗಳದಲ್ಲಿ ರಂಗೋಲಿಯ ತೋರಣ
ತಂಪನೆಯ ಗಾಳಿಗೆ ತೇಲಿ ತೂಗಿ ನಲಿವ ತೆಂಗಿನ ಗರಿಯ ನರ್ತನ
ಗೂಡು ತೊರೆದು ಹಕ್ಕಿಗಳು ಬಾನಿನೊಳಗೆ ಪಲಾಯನ
ಕೋಗಿಲೆಯ ಕುಹೂ ಕುಹೂ ಮೂಡಿಸಿದೆ ಮನದಲ್ಲಿ ಗಾಯನ
ದಿನಗಳು ಹೀಗೆ ಸಾಗಲಿ ತುಂಬುತ್ತ ನವ ಚೇತನ..!

***************ಭಾವಪ್ರಿಯ*************

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...