Thursday, May 30, 2013

ಕಳಂಕಿತೆ

ಕಳಂಕ ಹೊತ್ತು ಮನೆ ಬಿಟ್ಟು ನಡೆದವಳು
ತಾನು ಕಳಂಕಿತಳಲ್ಲಾ ಅನ್ನುವದ ನಿರೂಪಿಸಲೇ ಇಲ್ಲಾ
ಏಕೆಂದರೆ, ಅವಳ ಅಂತರಂಗ ಕೂಡಾ ಅವಳು ಕಳಂಕಿತೆ  ಅಂತಾ ಸಾರಿ ಸಾರಿ ಹೇಳುತ್ತಿತ್ತು.

Monday, May 27, 2013

ಕಿಡಿ ನುಡಿ


ಕೊಬ್ಬು ಮೈಯೊಳಗೆ ಬೆಳೆದರೆ ಪರವಾಗಿಲ್ಲಾ  (ಸ್ವಂತ ವಿಚಾರ)

ಆದರೆ,

ನಿಮ್ಮ ನಡೆ ನುಡಿಗಳನ್ನು ಕೊಬ್ಬಿನಿಂದ ಪೋಶಿಸಬೇಡಿರಿ.  (ಪರರರಿಗೂ ತಟ್ಟುವ ವಿಚಾರ)

"ಪಾದರಕ್ಷೆ "


ನಡೆದು ನಡೆದು ನೋವನುಂಡ ಕಾಲುಗಳಿಗೆ ಸವೆದ ಚಪ್ಪಲಿಗಳು

ಸೊಲುಗಳು ಕತ್ತರಿಸಿದರೂ ಕಾರ್ಯ ಸ್ಥಗಿತಗೊಳಿಸಲಿಲ್ಲ ಅವುಗಳು

"ಪಾದರಕ್ಷೆ " ತನ್ನ ಹೆಸರಿಗೆ ಕುಂದು ಬಾರದೆ ರಕ್ಷಿಸಿದ ಪಾದುಕೆಗಳು

ಹೊಸ ಸೊಲುಗಳ ಹಚ್ಚಿ ಬಿಟ್ಟೊಡನೆ ಮತ್ತೆ ಆ ರಕ್ಷೆಗಳಿಗೆ ಹೊಸ ಜೀವನ ಶುರು !

Friday, May 24, 2013

ಹಿತ ವಚನ

ತಿಳಿಯದೇ ತಪ್ಪು ಮಾಡಿ ಅದಕ್ಕೆ ಕ್ಷಮಾರ್ಪಣೆ ಕೇಳುವವರಿಗೆ ಕ್ಷಮಿಸಬಹುದು .... ಅದರೆ ತಿಳಿದು ತಿಳಿದು ತಪ್ಪು ಮಾಡಿ ಸೋಗು ಮಾಡವರನ್ನು ಎಂದಿಗೂ ನಂಬಬಾರದು ಹಾಗೆ ಕ್ಷಮಿಸೂಬಾರದು !!  

Thursday, May 23, 2013

ಗಂಡ ಹೆಂಡತಿ ಜಗಳ...


ನೆನ್ನೆ ವರ್ಷಧಾರೆ ಸುರಿಸಿದವಳು ಎಲ್ಲಿರುವಳು ಎಂದು ನೋಡಲು ಆಗಸದೆಡೆಗೆ

ಬಿದ್ದು ಬಿದ್ದು ನಗುತಿದ್ದ ಚಂದ್ರ ಅಂದ, ಮುನಿಸಿಕೊಂಡ ಹೆಂಡತಿಯ ರಮಿಸದೇ ಕೂಡುವ ಗಂಡು ನಾನಲ್ಲ !!

***ಭಾವಪ್ರಿಯಾ***

THOUGHT FOR THE DAY

EXPRESS YOURSELF WITHOUT RELUCTANCE, THOUGH YOU MAY NOT FIND SOLUTIONS TO THE PROBLEMS BUT ATLEAST YOU WILL GET SOME RELIEF FOR YOUR PAINS.

Wednesday, May 22, 2013

ಒಲವಿನ ಕಾದಂಬರಿ ಸಂಚಿಕೆ - ೨


ಒಂದು ವರ್ಷದ ಓದು ಮುಗಿದೇ ಹೋಯ್ತು, ಆ ಒಂದು ವರ್ಷದಲ್ಲೆ ರಾಜ್ಗೆ ಏರಿಳಿತದ ಅನುಭವ ಕೂಡಾ ಆಯ್ತು. ಜೀವನ ಹಾಗೆ ತಾನೆ ಏರಿಳಿತಗಳ ಪ್ರಯಾಣ. ಗೆಳೆಯರ ನಡುವೆ ಹೆಚ್ಚು ಒಡನಾಟ, ಎಲ್ಲರೂ ಕೂಡಿಕೊಂಡು ಕಾಲೇಜಿನ ಜೀವನವನ್ನು ಸಂತೋಷದ ಕ್ಷಣಗಳಿಂದ ಕಳೆಯುತ್ತಿದ್ದರು. ಸಾಮಾನ್ಯವಾಗಿ ಹುಡುಗೀಯರಿಗೆ ಓದೊ ಹುಚ್ಚು.., ಹುಡುಗರದು ಲೈಫ್ ಎಂಜಾಯ್ ಮಾಡುವ ತವಕ, ಅದಕ್ಕೆ ಹುಡುಗರು ಹಾದಿ ತಪ್ಪುವುದು , ಇಲ್ಲಾ ಯಾವುದೊ ಒಂದು ಚಟಕ್ಕೆ ಬಲಿಯಾಗುವುದು , ಇಲ್ಲಾ ಪ್ರೀತಿಯಲ್ಲಿ ಬಿದ್ದು ಓದುವುದ ಮರೆತು ಅತ್ಯಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುವುದು. ಇವೆಲ್ಲಾ ಹುಡುಗಿಯರ ಜೀವನದಲ್ಲಿ ಆಗುವುದಿಲ್ಲಾ ಅಂತೇನೂ ಇಲ್ಲಾ, ಅಲ್ಲಿಯೂ ಆಗುತ್ತವೆ ಆದರೆ ಕಡಿಮೆ ಪ್ರಮಾಣದಲ್ಲಿ. ಸರಿ ರಾಜ್ ಸ್ವಲ್ಪ ಜಾಗರುಕನಾಗುತ್ತಾನೆ, ಮೊದಲನೆ ವರ್ಷದ ಸ್ಥಿತಿ ಮತ್ತೆ ಬರಬಾರದು ಅಂದುಕೊಂಡು ಶ್ರದ್ದೆಯಿಂದ ವಿಧ್ಯಾಭ್ಯಾಸ ಮಾಡುತ್ತಿರುತ್ತಾನೆ. ಕ್ಲಾಸಿನ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕ ಪಡೆದು ಮುನ್ನುಗ್ಗುತ್ತಿರುತ್ತಾನೆ. ಈ ಸಮಯದಲ್ಲಿ ತನ್ನದೇ ಕ್ಲಾಸಿನವಳಾದ ಗೀತಾಳ ಪರಿಚಯವಾಗುತ್ತದೆ. ಗೀತಾ ಸ್ವಲ್ಪ ಸುಂದರಿ, ಶ್ವೆತ ವರ್ಣ, ಅಚ್ಚುಕಟ್ಟು ಮೈಕಟ್ಟು ಧಾರ್ಮಿಕ ಹಾಗು ಒಳ್ಳೆಯ ಮನೆತನದವಳಾಗಿರುತ್ತಾಳೆ. ಸ್ವಚ್ಚ ಮನಸು ಅವಳದು, ನೇರ ಹಾಗು ದಿಟ್ಟ ಸ್ವಭಾವದವಳು. ಒಂದೇ ಕ್ಲಾಸಿನಲ್ಲಿ ಓದುತ್ತಾರೆ ಅಂದರೆ ಗೆಳೆತನ ಇರಲೇಬೇಕಲ್ಲವೆ ಅನ್ನುತ್ತಾ ನಮ್ಮ ರಾಜ್ ನೆ ಮೊದಲ ಬಾರಿಗೆ ಅವಳಿಗೆ ತನ್ನ ಪರಿಚಯ ನೀಡಿ ಅವಳನ್ನು ಪರಿಚಯ ಮಾಡಿಕೊಂಡಿರುತ್ತಾನೆ. ಮೊದಲ ದಿನ ಮೆಷ್ಟ್ರುಗೆ ಕಾಯುತ್ತಾ ಎಲ್ಲರೂ ಹೊರಗೆ ನಿಂತಾಗ ಗೀತಾ ಒಬ್ಬಳೇ ದೂರದಲ್ಲಿ ನಿಂತು ಹುಡುಗರು ಏನ್ ಮಾಡುತ್ತಾರೆ, ಎಲ್ಲಿಗೆ ಹೋಗುತ್ತಾರೆ , ಯಾರ ಪರಿಚಯವೂ ಇಲ್ಲ ಹೇಗೆ ನಾನು ಮಾತನಾಡಿಸಲಿ, ಯಾರಿಗೆ ಮಾತನಾಡಿಸಲಿ ಅನ್ನೋ ದುಗಡದಿಂದ ಇದ್ದಾಗ ನಮ್ಮ ರಾಜ್ ಸೂಕ್ಷ್ಮವಾಗಿ ಗಮನಿಸಿ ಅವಳ ಸಹಾಯಕ್ಕಾಗಿ ನಿಲ್ಲುತ್ತಾನೆ. ಹಾಯ್ ನಾನು ರಾಜ್….ನಿಮ್ಮ ಹೆಸರು….ಅವಳು ಹೆಲೋ ನನ್ನ ಹೆಸರು ಗೀತಾ ನಿಮ್ಮ ಕ್ಲಾಸಿನವಳೆ….ಹಾ ಗೊತ್ತು ನಿಮ್ಮನ್ನ ಮೊದಲನೆ ವರ್ಷ ಗಮನಿಸಿದ್ದೆ ಆದರೆ ನೀವು ನಮ್ಮ ಕ್ಲಾಸಿನವರು ಅಂತಾ ತಿಳಿದಿರಲಿಲ್ಲ ಅನ್ನುತ್ತಾನೆ. ಗೀತಾಗೆ ಅಂತೂ ಒಬ್ಬ ಗೆಳೆಯ ಸಿಕ್ಕಾ ಅನ್ನುವ ಖುಷಿಯಾಗುತ್ತದೆ. ಹೀಗೆ ಹಾಯ್ ಬಾಯ್ ಅನ್ನುತ್ತಾ ಒಂದು ವಾರ ಕಳೆಯುತ್ತದೆ. ಒಂದು ದಿನ ಗೀತಾ ಕ್ಲಾಸ್ ಮಿಸ್ ಮಾಡಿಕೊಂಡಿರುತ್ತಾಳೆ ಅಂದಿನದ ನೋಟ್ಸ ಬೇಕಿತ್ತು ಅಂತಾ ರಾಜ್ಗೆ ಕೇಳುತ್ತಾಳೆ…, ಅದಕ್ಕೆ ರಾಜ್ ಸರಿ ನಾಳೆ ತಂದು ಕೊಡುತ್ತೇನೆ ಅಂತಾ ಹೇಳಿ ಹೊರಡ ಬೇಕು ಅನ್ನುವಷ್ಟರಲ್ಲಿ…ಗೀತಾ ಅವನನ್ನು ಕೂಗಿ ನಿಮ್ಮ ಕಾಂಟ್ಯಾಕ್ಟ ಮಾಡಲು ನಂಬರ್ ಏನಾದರು ಇದೆನಾ ಅಂತಾ ಕೇಳುತ್ತಾಳೆ. ರಾಜ್ ಹಾ ಇದೆ ಮನೆಯ ಲ್ಯಾಂಡಲೈನ್ ನಂಬರ್ ಆಗಬಹುದೇ..? ಓಹೋ ಪರವಾಗಿಲ್ಲಾ..ಕೊಡಿ ಅಂತಾ ಹೇಳಿ ತೊಗೊಳುತ್ತಾಳೆ. ಮತ್ತೆ ದಿನಗಳು ಎಂದಿನಂತೆ ಸಾಗುತ್ತವೆ. ಕೆಲವು ದಿನಗಳ ನಂತರ ರಾಜ್ ಮನೆಗೆ ಒಂದು ದೂರವಾಣಿ ಕರೆ ಬರುತ್ತದೆ. ರಾಜ್ ನ ತಂದೆ ಆ ಕರೆಯನ್ನು ಸ್ವಿಕರಿಸುತ್ತಾರೆ…, ಆದರೆ ಆಕಡೆಯಿಂದಾ ಯಾವುದೇ ಧ್ವನಿ ಕೇಳಿ ಬರುವುದಿಲ್ಲ. ಒಂದೆರೆಡು ಬಾರಿ ಹೀಗೆಯೇ ಆಗುತ್ತದೆ.., ಅದಕ್ಕೆ ರಾಜ್ ನ ತಂದೆ ಪೋನನ್ನು ತೆಗೆದು ಇಟ್ಟುಬಿಡುತ್ತಾರೆ. ರಾಜ್ ಕೂಡ ಈ ಕರೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.  ಇತ್ತ ಕಾಲೇಜಿನಲ್ಲಿ ಎರಡು ಮೂರ ದಿನದ ವರೆಗೆ ಗೀತಾ ಹಾಗು ರಾಜ್ ನ ಮಾತು ಕಥೆಗಳು ಆಗಿರುವುದಿಲ್ಲ. ರಾಜ್ ಲೈಬ್ರರಿಗೆ ಹೋಗಿ ಯಾವುದೋ ಪುಸ್ತಕವನ್ನು ಹುಡುಕುತ್ತಿರುತ್ತಾನೆ ಅಷ್ಟರಲ್ಲಿ ಗೀತಾ ಕೂಡಾ ಅಲ್ಲಿಗೆ ಬರುತ್ತಾಳೆ..ದೂರದಲ್ಲಿ ನಿಂತು ರಾಜನನ್ನು ನೋಡಿ ಮಂದಹಾಸ ನೀಡುತ್ತಿರುತ್ತಾಳೆ..ಅವಳಿಗೆ ಏನೋ ಹೇಳುವುದಿರಬೇಕು ಅದಕ್ಕೆ ಹಾಗೆ ಮಾಡುತ್ತಿದ್ದಾಳೆ ಅಂದುಕೊಂಡು ರಾಜ್ ಅವಳಬಳಿ ಹೋಗಿ ಏನ್ ವಿಷಯ ಅಂತಾ ವಿಚಾರಿಸುತ್ತಾನೆ…ಅವಳು ಏನು ಇಲ್ಲಾ ನಿನಗೆ ಒಂದು ವಿಷಯ ಹೇಳಬೇಕಿತ್ತು..ಅಂದಳು., ರಾಜ್ ಸರಿ ಹೇಳು ಅಂದನು…ಸ್ವಲ್ಪಾ ತಡಿ ನೀನೆನಾದರೂ ನಮ್ಮ ಮನೆಗೆ ಕರೆ ಮಾಡಿದ್ದಿಯಾ ಅಂತಾ ಕೇಳಲು ದೊಡ್ಡ ನಗೆ ಬೀರಿ ಹೌದು ನಾನೆ ಮಾಡಿದ್ದು…, ಅದು ಯಾರದೊ ಮನೆಗೆ ಹೋಗಿರಬೇಕು ಅಂದುಕೊಂಡು ಇಟ್ಟೆ, ಮತ್ತೆ ಮಾಡಿದರೂ ಯಾರೋ ದೊಡ್ಡವರ ಧ್ವನಿ ಕೇಳಿದಂತಾಯಿತು ಅದಕ್ಕೆ ಇಟ್ಟುಬಿಟ್ಟೆ.. ಹೌದು ನೀನು ಏಕೆ ಕರೆ ತೊಗೊಳಲಿಲ್ಲಾ..? ಅಂತಾ ಕೇಳುತ್ತಾಳೆ.. ನನಗೆ ನಮ್ಮ ಮನೆಯಲ್ಲಿ ಯಾವುದೇ ಕರೆಗಳು ಬರುವುದಿಲ್ಲಾ ಅದಕ್ಕೆ ನಾನು ಅದರ ಗೋಜಿಗೆ ಹೋಗುವುದಿಲ್ಲಾ ಅನ್ನುತ್ತಾನೆ ರಾಜ್. ಸರಿ ನನ್ನ ತಂದೆ ಕರೆ ಸ್ವಿಕರಿಸಿದಾಗ ಮಾತನಾಡಬೇಕಿತ್ತು ಅವರಿಗೆ ಕೇಳಿದ್ದರೆ ನನಗೆ ಕರೆಯುತ್ತಿದ್ದರು ಹಾಗೆಕೆ ಮಾಡಿದೆ ಎಂದು ರಾಜ್ ಪ್ರಶ್ನಿಸಿದ ಅದಕ್ಕ ನಿಮ್ಮ ತಂದೆ ನನಗೆ ಬೈಯ್ಯಬಹುದು ಎಂದು ಭಯಗೊಂಡು ಇಟ್ಟುಬಿಟ್ಟೆ ಅಂದಳು. ಸರಿ, ಇನ್ನೊಂದು ಸರಿ ನಿನ್ನ ಪರಿಚಯ ಹೇಳಿ ರಾಜ್ ಬೇಕಿತ್ತು ಅಂತಾ ಹೇಳು ಅವರು ಏನು ಬೈಯ್ಯುವುದಿಲ್ಲಾ ಅಂತಾನೆ.  ಮತ್ತೆರಡು ದಿನದ ನಂತರ ಕರೆ ಮಾಡಿ ಅಂಟಿ ನಾನು ಗೀತಾ ಸ್ವಲ್ಪ ರಾಜ್ ಇದ್ದರೆ ಕೊಡ್ತೀರಾ ಅಂದಳು. ರಾಜ್ ನ ಅಮ್ಮ ರಾಜ್ ನಿನ್ನ ಗೆಳತಿ ಅಂತೆ ಯಾರೋ ಕರೆ ಮಾಡಿದ್ದಾರೆ ನೋಡಪ್ಪಾ….ರಾಜ್ ಕರೆಯನ್ನು ಸ್ವಿಕರಿಸುತ್ತಾನೆ. ಎಯ್ ನಾನು ಕಣೋ ಗೀತಾ….ನಾಳೆ ಬರಬೇಕಾದಾಗ ಪ್ರ್ಯಾಕ್ಟಿಕಲ್ ಪುಸ್ತಕ ತೊಗೊಂಡು ಬಾ, ನಾನು ಕಾಪಿ ಮಾಡಿಕೊಡ್ತೀನಿ ಅಂದಳೆ…ಆಯ್ತು..ಮತ್ತೆ ಏನ್ ಸಮಾಚಾರ…? ಏನೂ ಇಲ್ಲಾ ಮನೆಲಿ ಬೊರ ಆಗ್ತಾ ಇತ್ತು.., ಸರಿ ನಿನ್ನ ಹತ್ರ ಮಾತಾಡೋಣ ಅಂದು ಕೊಂಡು ಪೋನು ಮಾಡಿದೆ ಹಾಗೆ ನೋಟ್ಸ ಕೂಡಾ ಬೇಕಿತ್ತು ಅಲ್ಲಾ.. ಹಾಗೆ ಮಾಡಿದೆ. ಹೌದು ನಿಮ್ಮ ಮನೆಲಿ ಹುಡುಗಿ ಪೋನ್ ಮಾಡಿದರೆ ಏನು ಅನ್ನುವುದಿಲ್ವಾ..? ರಾಜ್ ಅದಕ್ಕೆ ಅರೆ ಏನು ಅನ್ನಬೇಕು ನಾನು ಒಳ್ಳೆಯ ಹುಡುಗ ಅಂತಾ ನಮ್ಮ ಮನೆಯವರಿಗೆ ಗೊತ್ತು ಅದಕ್ಕೆ ಏನು ಅನ್ನುವುದಿಲ್ಲಾ…ಆದರೆ ನೀನು ಅಂದು ಕರೆ ಮಾಡಿ ಮಾತನಾಡದೇ ಇದ್ದಾಗ ನನ್ನ ಮೇಲೆನೆ ಅನುಮಾನ ಬಂದಿತ್ತೇನೊ ನನ್ನ ಅಪ್ಪನಿಗೆ, ಅದಕ್ಕೆ ನಿನ್ನ ಬಗ್ಗೆ ಎಲ್ಲಾ ಹೇಳಿದ್ದೇನೆ, ಮುಂದಿನ ಬಾರಿ ಕರೆ ಮಾಡಿದರೆ ನಿನ್ನ ಹೆಸರು ಹೇಳು ಅವರು ಏನೂ ಅನ್ನುವುದಿಲ್ಲಾ ಅವರು ಕೂಡಾ ನಿನಗೆ ಚೆನ್ನಾಗಿ ಮಾತನಾಡಿಸುತ್ತಾರೆ.ಸರಿ ಸರಿ ಕಣೋ ನಮ್ಮ ಅಮ್ಮ ಕೂಡ ಬರಬಹುದು ಅಡುಗೆ ಮಾಡಿರು ಅಂತಾ ಹೇಳಿದ್ದ್ರು ನಾನು ಹೊರಡುತ್ತೇನೆ…ಅರೆ ನಿನಗೆ ಅಡುಗೆ ಮಾಡಲಿಕ್ಕೆ ಬರುತ್ತಾ…ಅಂತಾ  ರಾಜ್ ಕೇಳಲು ಹ್ಮು ಬರುತ್ತೆ ಹುಡುಗಿ ಅಲ್ವಾ ಕಲಿಲೇ ಬೇಕು ಮುಂದೆ ಕಷ್ಟ ಆಗಬಾರದು ನೋಡು…ಅದಕ್ಕೆ. ಸರಿ ಸರಿ ನಾಳೆ ಕಾಲೇಜಿನಲ್ಲಿ ಸಿಗೋಣ. ಬಾಯ್ ಅಂತಾ ಹೇಳು ಇಡುತ್ತಾಳೆ. ಗೀತಾಳಿಗೆ ರಾಜ್ ಒಬ್ಬನೆ ಒಳ್ಳೆಯ ಸ್ನೇಹಿತ ಆಗಿ ಬಿಡುತ್ತಾನೆ. ದಿನೆ ದಿನೆ ಇವರ ಗೆಳೆತನ ಬಹಳ ಘಾಡವಾಗುತ್ತದೆ. ಒಂದು ದಿನ ರಾಜ್ ತನ್ನ ಎಲ್ಲಾ ಗೆಳೆಯ ಗೆಳತಿಯರೊಡನೆ ಕಾಲೇಜಿಗೆ ಬರುತ್ತಿರಿವಾಗ ಗೀತಾ ಇವನನ್ನು ನೋಡುತ್ತಾಳೆ…ಸ್ವಾರ್ತಥೆ ಇರಬಹುದು….ಯಾರು ಅವರೆಲ್ಲಾ ನಿನ್ನ ಗೆಳೆಯರೇ…??? ರಾಜ್ ಹೌದು ಗೆಳೆಯರು…..ಗೀತಾ ಮತ್ತೆ ಕೆಲ ಹುಡುಗೀಯರು ಕೂಡಾ ಇದ್ದರು….ಓಹೋ ಅವರಾ ಹೌದು ನಮ್ಮ ಊರಿನವರೆ ಎಲ್ಲರೂ….ಬಾ ಅವರಿಗೆ ಭೇಟಿ ಮಾಡಿಸುತ್ತೇನೆ ಅಂದನು ರಾಜ್.. ಇವನು ಮೋಹನ , ಪವನ್ ಮತ್ತೆ ಮಂಜು…ಎಲ್ಲರಿಗೂ ಹಾಯ್…… ಮತ್ತೆ ಇವಳು ಸ್ಮಿತಾ , ಕಾವ್ಯಾ, ಕವನ , ನಯನಾ..ನಯನಾ ನನ್ನ ಬಾಲ್ಯದ ಗೆಳತಿ…ಮತ್ತೊಬ್ಬಳು “ಸುಮನಾ”
ಸುಮನಾ ಮಂದಹಾಸ ಬೀರುತ್ತಾಳೆ. ಗೀತಾಗೆ ಮನದಲ್ಲಿ ಏನೋ ಪ್ರಶ್ನೆ ಮೂಡಿತು ಆದರೆ ಸುಮ್ಮನಾದಳು. ಎಲ್ಲರೂ ಕ್ಲಾಸಿಗೆ ತೆರಳುತ್ತಾರೆ. ಗೀತಾ ಬಿಡುವಿನಲ್ಲಿ, ಲೋ ರಾಜ್ ನಿನಗೆ ಇಷ್ಟೊಂದು ಗೆಳೆಯರು ಇದ್ದಾರಂತಾ ಏಕೆ ನೀನು ಮೊದಲೇ ಹೇಳಲಿಲ್ಲ…? ಅಯ್ಯೊ ಸಂದರ್ಭ ಬಂದಿರಲಿಲ್ಲ ಅದಕ್ಕೆ ಹೇಳಿರಲಿಲ್ಲ…ಅದಕ್ಕೇನಾಯ್ತು ಈಗ…ಏನು ಇಲ್ಲಾ ಹೋಗೋ…ಸರಿ ಇನ್ನೂ ಒಂದು ಗಂಟೆ ಯಾವ ಕ್ಲಾಸು ಇಲ್ಲಾ ನಾನು ಲೇಡಿಜ್ ರೂಮಿಗೆ ಹೋಗಿ ರೆಸ್ಟು ತೊಗೊತೀನಿ ಅಂತಾ ಹೇಳಿ ನಿರ್ಗಮಿಸುತ್ತಾಳೆ. ರಾಜ್ ಒಬ್ಬನೆ ಇದ್ದಾಗ ಆಕಡೆಯಿಂದ ಸುಮನಾ ಬರುತ್ತಾಳೆ…ಹಾಯ್ ರಾಜ್ ನಾನು ಲೈಬ್ರರಿಗೆ ಹೋಗ್ತಾ ಇದ್ದೇನೆ ಸ್ವಲ್ಪ ಪುಸ್ತಕ ಹುಡುಕುವುದರಲ್ಲಿ ಸಹಾಯ ಮಾಡುತ್ತೀಯಾ….ಹ್ಮು ಸರಿ ನಡಿ ಹೋಗೋಣ ಅಂದ ರಾಜ್. ಇಬ್ಬರು ಒಂದೊಂದು ಪುಸ್ತಕ ಹಿಡಿದು ಓದಲು ಕೂರುತ್ತಾರೆ. ಕೆಲ ಸಮಯ ಕಳೆದ ನಂತರ ಗೀತಾ ಕೂಡಾ ಲೈಬ್ರರಿಗೆ ಬರುತ್ತಾಳೆ.., ಇಬ್ಬರೂ ಕೂಳಿತದ್ದನ್ನು ಕಂಡು ಕಾಣದೆ ಇರುವ ಹಾಗೆ ನಡೆದು ಬಿಡುತ್ತಾಳೆ. ಇದನ್ನು ಗಮನಿಸಿದ ಸುಮನಾ ನೋಡೊ ನಿನ್ನ ಫ್ರೇಂಡು ಹೋಗ್ತಾ ಇದ್ದಾಳೆ ಅಂದಳು…ಸುಮ್ಮನೆ ಕೂತಕೊಂಡು ಓದಿಕೊ ಬರೀ ಕಾಲ್ ಎಳಿಯೋದೆ ನಿನ್ನ ಕೆಲಸ ಅಂದ. ಎಲ್ಲೋ ಗೀತಾಗೆ ಜಲಸ್ಸಿ ಅಂತಾರಲ್ಲಾ ಅದು ಶುರುವಾಗಿತ್ತು ಅನ್ನಿಸುತ್ತೆ. ಮರುದಿನ ಬಂದವಳೆ ಲೋ ರಾಜ್ ಏನಪ್ಪಾ ಸುಮನಾ ಜೊತೆ ನೆನ್ನೆ ಕಂಬಾಯಿನ್ ಸ್ಟಡಿ ನಡೆದಾಗಿತ್ತು ಅಂದಳು…ಹೌದು…ನೀನು ಯಾವಾಗ ನೋಡಿದೆ…? ಮತ್ತೆ ಯಾಕೆ ಅಲ್ಲಿ ಬರಲಿಲ್ಲಾ..? ಅಂದ ರಾಜ್….ಸುಮ್ನೆ ಯಾಕೆ ಡಿಸ್ಟರ್ಬ್ ಮಾಡೋದು ಅಂತಾ ಬರಲಿಲ್ಲಾ…! ಏನೋಪಾ ನೀವು ಹುಡುಗಿರನ್ನ ಅರ್ಥ ಮಾಡಿಕೊಳ್ಳುವುದೇ ಕಷ್ಟ….! ಸರಿ ನಡಿ ಕ್ಲಾಸಿಗೆ ಹೋಗೋಣ…ಇಬ್ಬರೂ ಕ್ಲಾಸಿಗೆ ಹೋಗುತ್ತಾರೆ. ಕ್ಲಾಸ ಮುಗಿದು ಹೊರ ಬರುತ್ತಾರೆ…, ಲೋ ನಾನು ಇವತ್ತು ಊಟದ ಡಬ್ಬಿ ತಂದಿಲ್ಲಾ ನಾನು ಒಬ್ಬಳೆ ಇದ್ದೀನಿ…..ಒಹೋ ಹೌದಾ ಯಾಕೆ….ಅಮ್ಮಂಗೆ ಹುಷಾರಿರಲಿಲ್ಲಾ ಅದಕ್ಕೆ ಕಟ್ಟಿ ಕೊಡಲಿಲ್ಲ…..ಸರಿ ಬಾ ಹಾಗಾದರೆ ನನ್ನ ಜೊತೆ ಊಟಕ್ಕೆ…ಅಯ್ಯಿ ಬೇಡಪ್ಪಾ ನಿನ್ನ ಮೆಸ್ಸಿನಲ್ಲಿ ಬರೀ ಹುಡುಗರೆ ಇರುತ್ತಾರೇನೋ…ಇಲ್ಲಾ ಬಾರಮ್ಮ ಎಲ್ಲರೂ ಇರುತ್ತಾರೆ ಅಲ್ಲಿ…ಮನಸ್ಸಿನಲ್ಲಿ ಹೋಗಬೇಕು ಅಂತಾ ಇದ್ದರೂ ಸುಮ್ಮನೆ ಬೇಡ ಅನ್ನುವುದು ರಾಜ್ ಮನದಲ್ಲೇ ಅಂದುಕೊಳ್ಳುತ್ತಾನೆ. ದಿನಾ ಇಲ್ಲೇ ಊಟಾ ಮಾಡ್ತೀಯಾ.. ಊಟಾ ತುಂಬಾನೆ ಚೆನ್ನಾಗಿದೆ, ನನಗೂ ದಿನಾ ಇಲ್ಲೇ ಬರಬೇಕು ಅನ್ನಿಸುತ್ತೆ. ಓಹೋ…..ಹಾಗೆ……ಸರಿ ಸರಿ ನಿಮ್ಮ ಅಮ್ಮನಿಗೆ ಹೇಳಿ ಬಿಡು ನಾನು ಕಾಲೇಜಿನಲ್ಲೇ ಊಟ ಮಾಡುತ್ತೇನೆ ಅಂತಾ ಅಂದನು…ಗೀತಾ ಹಾಗೇನಾದರೂ ಹೇಳಿದರೆ ಅಮ್ಮಾ ಬೈತಾರೆ ಅವರಿಗೆ ನಾನು ಹೊರಗಡೆ ಏನಾದರೂ ತಿಂದರೆ ಇಷ್ಟವಾಗುವುದಿಲ್ಲ ಅಂದಳು. ಸರಿ ಬಿಡಮ್ಮ..
ನಡಿ ಕ್ಲಾಸಿಗೆ ಹೋಗೋಣ. ರಣ ರಣ ಬಿಸಿಲು ಅದರಲ್ಲಿ ಆ ನಮ್ಮ ಮ್ಯಾನೇಜ್ ಮ್ಯಂಟ ಮೇಷ್ಟ್ರು , ಹೊಟ್ಟೆ ತುಂಬಿದೆ ಇನ್ನೂ ನಾವು ಲಕ್ಚರ್ ಕೇಳಿದಹಂಗೆ…??? ದಿನ ಮುಕ್ತಾಯ……! (ಮುಂದುವರೆವುದು..)

Thought for the day

When people seem to be stressed or angry , leave them alone for few span expecting things to be alright by sometime later.

Monday, May 20, 2013

ಮಳೆ ಗೆಳತಿ

ನಿನ್ನ ಆಗಮನವ ಸ್ವಾಗತಿಸುತಿಹರು ಗುಡುಗುಡುಗಿ
ಕ್ಷಣ ಕ್ಷಣ ನಡುವೆ ನಗೆಮೊಲ್ಲೆ ಚಲ್ಲಿದೆ ಮಿಂಚು
ಧರೆ ಬಾಯ್ ಬಿರಿದು ನಿನ್ನ ಆಹ್ವಾನಿಸಿಹಳು
ನಿನ್ನ ಅಕ್ಕರೆಯ ಸಿಂಚನ ಮೈಗೆ ಸೊಕಿ 
ವಾತಾವರ್ಣ ತಂಪಾಗುತಿದೆ... ಜೀವ ಸಂಕುಲವೆಲ್ಲವೂ ನಿರಾಳ !!

ಒಲವಿನ ಕಾದಂಬರಿ - ಸಂಚಿಕೆ ೧


ನಾಯಕ : ರಾಜ್        ಗೆಳೆಯರು : ಮೊಹನ , ಪವನ , ಮಂಜು
ನಾಯಕಿ : ಸುಮನಾ      ಗೆಳೆಯರು : ಸ್ಮಿತಾ , ಕಾವ್ಯಾ, ಕವನ , ನಯನಾ , ಗೀತಾ
 ಸನ್ ೧೯೮೦ ಇಸವಿಯ ಕಥೆ ಇದು..,ನಾಯಕ ರಾಜ್ ಒಬ್ಬ ಪ್ರತಿಭಾವಂತ, ಸುಸಂಸ್ಕೃತ, ಸ್ವಲ್ಪ ನಾಚಿಗೆ ಸ್ವಭಾವದ, ಒಳ್ಳೆಯ ಮನೆತನದ ಹುಡುಗ. ತಂದೆ ಅರೆಸರ್ಕಾರಿ ನೌಕರಿ ಅಧಿಕಾರಿ , ತಾಯಿ ಒಬ್ಬ ಅಧ್ಯಾಪಕಿ. ಮಗನಿಗೆ ಶಿಸ್ತಿನಿಂದ ಬೆಳೆಸುವಲ್ಲಿ ಇಬ್ಬರ ಪಾತ್ರವೂ ದೊಡ್ಡದು. ರಾಜ್ ಶಾಲಾ ಅಭಾಸ ಮುಗಿಸಿದ ನಂತರ ದೂರದ ಊರಿನಲ್ಲಿ ಪಿ ಯು ಸಿ ಮುಗಿಸಿ ಉತ್ತಮ ಅಂಕ ಪಡೆದು ಮುಂದಿನ ಅಭಾಸಕ್ಕೆ ಯಾವ ಕಾಲೇಜು ಸೇರಿಕೊಳ್ಳಬೇಕು ಅನ್ನುವ ಚಿಂತೆಯಲ್ಲಿ ತೊಡಗಿರುತ್ತಾನೆ. ಅಷ್ಟರಲ್ಲಿ ಇವನಿಗೆ ಒಂದು ಒಳ್ಳೆಯ ಕಾಲೇಜಿನಿಂದ ಸಂದರ್ಶನಕ್ಕೆ ಆಹ್ವಾನ ಬರುತ್ತದೆ. ಸಂತಸಗೊಂಡ ರಾಜ್ ಎಲ್ಲ ತರಹದ ತೈಯ್ಯಾರಿ ಮಾಡಿಕೊಂಡು ನಿಗದಿತ ದಿನದಂದು ಕಾಲೇಜಿಗೆ ಹೊರಡಲು ಸಜ್ಜಾಗುತ್ತಾನೆ. ಅಪ್ಪ ಅಮ್ಮನ ಆಶಿರ್ವಾದ ಪಡೆದು, ದೇವರಿಗೆ ನಮಸ್ಕಾರ ಮಾಡಿ ಹೊರಡುತ್ತಾನೆ. ಕಾಲೇಜಿನ ಆವರ್ಣ ನೋಡುತ್ತಿದ್ದಂತೆಯೇ ಏನೋ ಖುಶಿ ಏನೋ ಉಲ್ಲಾಸ. ಮುಖ್ಯ ಅಧಿಕಾರಿಗಳ ಕಚೇರಿಯ ಹೊರಗೆ ಸರದಿಗಾಗಿ ಕಾಯುತ್ತಿರುವ ಹುಡುಗರನ್ನು ಕಂಡು ತಾನೂ ಅಲ್ಲೆ ತನ್ನ ಸರದಿಗಾಗಿ ಕಾಯುತ್ತಾ ನಿಲ್ಲುತ್ತಾನೆ. ಬರುವ ಹೋಗುವ ಹುಡುಗರ ನೋಡುತ್ತಾ ಅವರ ಮುಖದ ಭಾವನೆಗಳನ್ನು ಆಲಿಸುತ್ತಾನೆ, ಕೆಲವರು ಖುಶಿಯಿಂದ ಹೊರ ಬರುತ್ತಿದ್ದರೆ ಕೆಲವರು ಪೇಚು ಮುಖ ಧರಿಸಿ ಹೊರಬರುತ್ತಿದ್ದರು. ಕೊನೆಗೆ ರಾಜ್ ನ ಸರದಿ ಬಂತು. ರಾಜ್ ಒಳ್ಳೆಯ ಅಂಕ ಪಡೆದುದರಿಂದ ಪ್ರವೇಶ ಸುಲಭವಾಗಿ ದೊರೆಯಿತು. ಎಲ್ಲಾ ಕಚೇರಿಯ ಕಾರ್ಯಗಳನ್ನು ಮುಗಿಸಿ ಮನೆಗೆ ಹಿಂತಿರುಗುತ್ತಾನೆ. ಅಪ್ಪ ಅಮ್ಮನಿಗೆ ಸುದ್ದಿ ಕೇಳಿ ತುಂಬಾ ಸಂತೋಷವಾಗುತ್ತದೆ. ಒಬ್ಬನೆ ಮಗ ದೂರವಿದ್ದು ಕಲಿತದ್ದು ಸಾಕು ಪದವಿಯಾದರೂ ನಮ್ಮ ಹತ್ತಿರದಲ್ಲೇ ಇದ್ದು ಕಲಿಯಲಿ ಅನ್ನುವ ಆಸೆ ಅವರದಾಗಿತ್ತು.
ಹೊಸ ಕನಸ್ಸು , ಹೊಸ ಜನ , ಹೊಸ ಧೇಯ ಓದಿ ದೊಡ್ಡ ಪದವೀಧರನಾಗುವ ಹುಮ್ಮಸ್ಸು. ಕಾಲೇಜಿನ ದಿನಗಳೆ ಹಾಗೆ ದಿನವೂ ಹೊಸ ಹೊಸ ಅನುಭವಗಳು. ಕಾಲೇಜಿನ ಮೊದಲ ದಿನ, ಯಾರ ಗುರುತು ಪರಿಚಯವಿಲ್ಲ ಕಾರಣ ಇವನು ಓದಿದ್ದು ಬೇರೆ ಊರಿನಲ್ಲಿ. ಮೊದಲನೆ ದಿನವಾದುದ್ದರಿಂದ ಬೇಗನೆ ಎದ್ದು, ನಿತ್ಯ ಕರ್ಮಗಳನ್ನು ಮುಗಿಸಿ, ದೇವರ ಪೂಜೆ ಮಾಡಿ, ಅಪ್ಪಾ ಅಮ್ಮಂದಿರಿಗೆ ನಮಿಸಿ ಬಸ್ ತಂಗುದಾಣದೆಡೆಗೆ ಹೊರಡುತ್ತಾನೆ. ತಂಗುದಾಣದಲ್ಲಿ ಎಷ್ಟೋ ಹುಡುಗ ಹುಡುಗಿಯರು ಬಸ್ಸಿಗಾಗಿ ಕಾಯುತ್ತಿರುತ್ತಾರೆ. ಒಮ್ಮೆ ಎಲ್ಲರೆಡೆಗೆ ಕಣ್ಣಾಯಿಸಿ ಖಾಲಿ ದಾರಿಯೆಡೆಗೆ ಮುಖ ಮಾಡಿ ಕಾಯುತ್ತಾ ನಿಲ್ಲುತ್ತಾನೆ. ಕೆಲ ಸಮಯದ ನಂತರ ನೀಲಿ ಬಿಳಿ ಬಣ್ಣದ ಬಸ್ಸು ಬಂದು ತಂಗುದಾಣವನ್ನು ತಲುಪುತ್ತದೆ. ಬಸ್ಸನ್ನು ಏರಿ ಅರ್ಧ ಗಂಟೆಯಲ್ಲಿ ತನ್ನ ಕಾಲೇಜನ್ನು ತಲುಪುತ್ತಾನೆ. ತನ್ನ ಜೊತೆ ಮತ್ತೆ ಕೆಲ ಹುಡುಗ ಹುಡುಗಿಯರು ಅದೇ ಕಾಲೇಜಿಗೆ ಹೋಗಲು ಇಳಿಯುತ್ತಾರೆ.
ಕಾಲೇಜಿಗೆ ಹತ್ತಿರ ಬರುತ್ತಿದ್ದಂತೆಯೆ ಒಬ್ಬ ಹುಡುಗ ರಾಜ್ ನ ಬಳಿ ಬಂದು., ನೀನು ಹೊಸ ವಿಧ್ಯಾರ್ಥಿನಾ ಅಂತಾ ಕೇಳುತ್ತಾನೆ, ಅದಕ್ಕೆ ಹೌದು ಅನ್ನುತ್ತಾನೆ. ಸರಿ ಕಾಲೇಜು ಮುಗಿದ ಮೇಲೆ ಸಿಗೋಣ ಎಂದು ಹೊರಟು ಹೋಗುತ್ತಾನೆ. ನೋಟಿಸ್ ಬೋರ್ಡನ್ನು ನೋಡಿ ತನ್ನ ತರಗತಿಯ ಮಾಹಿತಿ ಪಡೆದು ಕ್ಲಾಸಿನತ್ತ ಹೊರಡುತ್ತಾನೆ. ವ್ಹಾಎಂತಹ ದೊಡ್ಡ ಕೋಣೆ…, ಗೋಡೆಯ ಮಧ್ಯ ಭಾಗದಲ್ಲಿ ಬಿಳಿಯ ಗಾಜಿನ ಬೋರ್ಡು ( ಬಹುತೇಕ ಕಾಲೇಜುಗಳಲ್ಲಿ ಈಗ ಗಾಜಿನ ಬೋರ್ಡನ್ನು ಬಳಸುತ್ತಾರೆ, ಶಾಲೆಯಲ್ಲಿ ಕಪ್ಪು ಬೋರ್ಡನ್ನು ನೋಡಿ ಅಭಾಸ ಅಲ್ಲವೇ ) ಮಿರ ಮಿರ ಮಿನುಗುವ ಚ್ವಕ್ಕವಾದ ಬೆಂಚುಗಳು, ದೊಡ್ಡ ದೊಡ್ಡ ಕಿಟಕಿಗಳು, ಕಿಟಕಿಯಿಂದ ಕಾಣುವ ವಿಶಾಲವಾದ ಕ್ರೀಡಾಂಗಣ. ರಾಜ್ ಒಂದು ವಿಸ್ಮಯ ಜಗತ್ತಿಗೆ ಕಾಲಿಟ್ಟ ಅನುಭಾವವಾಯಿತು. ಕಾಲೇಜು ಜೀವನದ ಮೊದಲ ಕ್ಲಾಸು…, ಬಿಳಿ ಅಂಗಿ ಬಿಳಿ ಪ್ಯಾಂಟು ಧರಿಸಿ ಕೈಯಲ್ಲಿ ಒಂದು ಪುಸ್ತಕ, ಮಾರ್ಕರ್ ಹಾಗು ಡಸ್ಟರ್ ಹಿಡಿದ ವ್ಯಕ್ತಿ ಕ್ಲಾಸನ್ನು ಪ್ರವೇಶಿಸುತ್ತಾನೆ. ರಾಜ್ ಇವನು ಬಹುಶಃ ಪಿವನ್ ಇರಬೇಕು ಲಕ್ಚರರ್ ಅವರ ಸಾಮಗ್ರಿಗಳನ್ನು ಇಡಲು ಬಂದಿರಬಹುದು ಅಂದುಕೊಳ್ಳುತ್ತಾನೆ. ಎಲ್ಲರೂ ಎದ್ದು ನಿಲ್ಲುತ್ತಾರೆ….ಕೂತುಕೊಳ್ಳಿ ವಿಧ್ಯಾರ್ಥಿಗಳೇ ಎಂದಾಗ ರಾಜ್ ಗೆ ಅಚ್ಚರಿ ಅರೆಇವರು ಲಕ್ಚರರಾ …? ಲಕ್ಚರರ್ ತಮ್ಮ ಪರಿಚಯ ಹೇಳಿ ತಾವು ಗಣಿತ ಹೇಳಿಕೊಡುವವರು ಅಂತಾ ಹೇಳುತ್ತಾರೆ.. ಓಹೋ ಇವರೇ ಆ ಸ್ಟ್ರಿಕ್ಟ ಮೇಷ್ಟ್ರು ಹುಡುಗರು ಆಡಿಕೊಳ್ಳುತ್ತಿದ್ದವರುಅಬ್ಬಾ ಸ್ವಲ್ಪ ಹುಷಾರ್ ಆಗಿರಬೇಕು. ತದ ನಂತರ ಒಬ್ಬರಾದ ಮೇಲೆ ಒಬ್ಬರು ಬಂದು ಎಲ್ಲರ ಪರಿಚಯ ಪಡೆದು ಮುಂದಿನ ದಿನದಿಂದ ಪಾಠ ಶುರುಮಾಡುತ್ತೇವೆ ಅಂತಾ ಹೇಳಿ ಹೊರಡುತ್ತಾರೆ. ಮೊದಲನೆ ದಿನ ಪರಿಚಯದೊಂದಿಗೆ ಮುಗಿಯುತ್ತದೆ. ರಾಜ್ ಗೆ ಒಂದು ತರದ ನಿರಾಳ ಹಾಗು ಉತ್ಸುಕತೆ. ಮನೆಗೆ ಹೊರಟ ರಾಜ್ ಗೆ ಬೆಳಿಗ್ಗೆ ಮಾತನಾಡಿದ ಹುಡುಗ ತನ್ನ ಮತ್ತಿಬ್ಬರ ಗೆಳೆಯರೊಂದಿಗೆ ಬಂದು ಇವನನ್ನ ತಡವುತ್ತಾನೆ. ನೋಡಪ್ಪಾ ನಾವು ಈ ಕಾಲೇಜಿನ ಸೀನಿಯರ್ಗಳು ದಿನ ನಾವು ಕಂಡಾಗ ನಮಸ್ಕರಿಸಬೇಕು ತಿಳಿತಾ..ಅಂದರು. ರಾಜ್ ಗೆ ಇದೆಲ್ಲಾ ಹೊಸ ಅನುಭವ. ಸರಿ ಅಂತ ಹೇಳುತ್ತಾನೆ, ಕೆಲವು ಕೀಟಲೆ ಪ್ರಶ್ನೆಗಳನ್ನ ಕೇಳಿ ಅವನನ್ನ ಕಾಡಿಸುತ್ತಾರೆ. ತಂಗುದಾಣ ತಲುಪುತ್ತಿದ್ದಂತೆ ಬಸ್ಸು ಬರುತ್ತದೆ.ಅಂದಿನ ಕಥೆ ಅಲ್ಲಿಗೆ ಮುಕ್ತಾಯವಾಯಿತುಮರುದಿನ ಮತ್ತೆ ರಾಜ್ ಕಾಲೇಜಿಗೆ ಹೊರಡುತ್ತಾನೆಮತ್ತೆ ಅವೇ ಹುಡುಗರು ಇವನನ್ನ ಕಾಡಿಸಲು ಶುರುವಿಡುತ್ತಾರೆ…, ರಾಜ್ ಗೆ ರೇಗಿ ಹೋಗುತ್ತದೆ.. ಅವರಿಗೆ ತಿರುಗಿ ಹೇಳುತ್ತಾನೆ, ನೀವುಗಳು ನನಗೆ ಹೀಗೆಯೇ ತೊಂದರೆ ಕೊಡುತ್ತಿದ್ದರೆ ನಾನು ಕಾಲೇಜಿನ ಪ್ರಿನ್ಸಿಪಾಲರಿಗೆ ದೂರು ನೀಡುತ್ತೇನೆ, ಸುಮ್ಮನೆ ನಿಮ್ಮ ಪಾಡಿಗೆ ನೀವು ಇದ್ದುಬಿಡಿ ಇಲ್ಲಾ ಪರಿಣಾಮ ನೆಟ್ಟಗಾಗುವುದಿಲ್ಲ ಅಂದು ಬಿಡುತ್ತಾನೆ. ಇವನ ಮಾತು ಕೇಳಿ ಹುಡುಗರು ಸ್ವಲ್ಪ ಭಯ ಭೀತರಾಗುತ್ತಾರೆ. ಓಹೋ ಇವನ ತಂದೆ ವಿದ್ಯುತ್ ಅಧಿಕಾರಿ ಇವನನ್ನು ಮುಟ್ಟಿದರೇ ಶಾಕ್ ಹೊಡೆಯುತ್ತೆ ಅನ್ನುತ್ತಾ ವ್ಯಂಗ್ಯವಾಡುತ್ತಾರೆ. ಮರುದಿನ ದಿಂದ ಎಲ್ಲರು ಇವನ ಗೆಳೆಯರಾಗುತ್ತಾರೆ. ಇಲ್ಲಿಗೆ ರಾಜ್ ಗೆ ಸ್ವಲ್ಪ ಗೆಳೆಯರ ಪರಿಚಯವಾಯಿತು. ಕ್ಲಾಸಿನಲ್ಲಿ ಪಕ್ಕದಲ್ಲಿ ಕೂತುಕೊಳ್ಳುವರ ಜೊತೆ ಕೂಡ ಇವನ ಗೆಳೆತನ ಶುರುವಾಗುತ್ತದೆ. ದಿನಗಳು ಕಳೆದಂತೆ ಮೊಹನ , ಪವನ , ಮಂಜು ಅವರೊಂದಿಗೆ ತುಂಬಾ ನಿಕಟ ಗೆಳೆತನ ಬೆಳೆಯುತ್ತದೆ. ಜೊತೆ ಜೊತೆಯಲೇ ಚಾಹ, ಊಟ, ಪಾಠ . ಕಾಲೇಜು ಅಂದ ಮೇಲೆ ಹುಡುಗಯರ ಕೂಡಾ ಇರ್ತಾರಲ್ವಾಹಾಗೆ ನಮ್ಮ ರಾಜ್ ಗೆ ಒಬ್ಬ ಹುಡುಗಿಯ ಪರಿಚಯವಾಗುತ್ತದೆ, ಅವಳ ಹೆಸರು ನಯನಾ. ಇವಳ ಕೂಡ ಮಾತನಾಡುತ್ತ ರಾಜ್ ಗೆ ಒಂದು ವಿಶಯ ತಿಳಿಯುತ್ತದೆ ಅದೇನೆಂದರೆ ಚಿಕ್ಕವರಿದ್ದಗಲೇ ನಯನಾ ಹಾಗು ರಾಜ್ ಒಂದೆ ಶಾಲೆಯಲ್ಲಿ ಎಲ್ ಕೇಜಿ ಓದಿರುತ್ತಾರೆ. ೧೮ ವರ್ಷಗಳ ಹಿಂದೆ ನೋಡಿದ ಮುಖ ಹೇಗೆ ತಾನೆ ನೆನೆಪಿರಬೇಕು ಅಲ್ಲವೇ ? ಈ ವಿಷಯ ತಿಳಿಯುತ್ತಲೇ ಇವರ ಸ್ನೇಹ ಇನ್ನೂ ಘಾಡವಾಗುತ್ತದೆ. ರಾಜ್ ತನ್ನ ಗೆಳೆಯರಾದ ಮೊಹನ , ಪವನ , ಮಂಜು ಇವರನ್ನು ನಯನಾಳಿಗೆ ಪರಿಚಯಿಸುತ್ತಾನೆ. ಹಾಗೆ ನಯನಾ ಕೂಡ ತನ್ನ ಗೆಳತಿಯರಾದ ಸ್ಮಿತಾ, ಕಾವ್ಯಾ, ಕವನ ಹಾಗು ಸುಮನಾ ಳನ್ನು ಪರಿಚಯಿಸುತ್ತಾಳೆ. ಇಲ್ಲಿಗೆ ಕಾಲೇಜಿನ ಬಣ್ಣ ಬಣ್ಣದ ಬದುಕಿಗೆ ಕಾಲಿಟ್ಟ ಗೆಳೆಯ ಗೆಳತಿಯರು ಹೀಗೆ ಒಂದು ಗೂಡುತ್ತಾರೆ ಹಾಗು ಒಂದು ಒಳ್ಳೆಯ ಸ್ನೇಹಲೋಕ  ಶೃಷ್ಟಿಯಾಗುತ್ತದೆಹುಡುಗ ಹುಡುಗಿಯರೆಲ್ಲರೂ ಒಳ್ಳೆಯ ಅಂಕ ಪಡೆದವರಾಗಿರುತ್ತಾರೆ. ಇವರೆಲ್ಲರೂ ಬೆರೆ ಬೆರೆ ವರ್ಗದಲ್ಲಿ ಅಭಾಸ ಮಾಡುತ್ತಿರುತ್ತಾರೆ. ಇಷ್ಟರಲ್ಲಿ ನಾಯಕ ರಾಜ್ ಗೆ ಮತ್ತೊಬ್ಬ ಹುಡುಗಿ ತನ್ನದೇ ಕ್ಲಾಸಿನವಳಾದ ಗೀತಾ ಜೊತೆ ಸ್ನೇಹವಾಗುತ್ತದೆ. ಕಾಲೇಜಿಗೆ ಕಾಲಿಟ್ಟು ೬ ಮಾಸಗಳು ಕಳೆದಿರುವುದಿಲ್ಲ ಮೊದಲನೆ ಸೆಮಿಷ್ಟರ್ ಪರೀಕ್ಷೆಗಳು ಬರುತ್ತವೆ. ಎಲ್ಲರೂ ಅಭಾಸದ ತಯ್ಯಾರಿಯಲ್ಲಿ ಮುಳುಗುತ್ತಾರೆ. ಒಂದು ತಿಂಗಳುಗಳ ಕಾಲ ಪರೀಕ್ಷೆ ನಡೆಯುತ್ತದೆ. ಮತ್ತೆ ಯಥಾವತ್ತಾಗಿ ಕ್ಲಾಸುಗಳು ಪ್ರಾರಂಭವಾಗುತ್ತವೆ. ಮತ್ತ ಗೆಳೆಯರ ಮಾತುಗಳು,ಹಾಸ್ಯ, ತುಂಟತನ ಸಾಮಾನ್ಯವಾಗಿ ನಡೆಯುತ್ತಿರುತ್ತವೆ. ಎಲ್ಲರ ಜೀವನದಲ್ಲಿ ಒಂದು ಟರ್ನಿಂಗ್ ಪಾಯಿಂಟ ಬರುತ್ತದೆ ಅಂತೆ ಹಾಗೆ ಮೊದಲನೆಯ ಸೆಮಿಷ್ಟರ್ ರಿಜಲ್ಟಗಳು ಬರುತ್ತವೆ. ಕೆಲವರಿಗೆ ಖುಶಿ ಕೆಲವರಿಗೆ ದುಃಖ. ನಮ್ಮ ನಾಯಕ ರಾಜ್ ಗೆ ಆಶ್ಚರ್ಯ್ ಕಾದಿತ್ತುಇಲ್ಲಿತನಕ ಒಳ್ಳೆಯ ಶೇಣಿಯಲ್ಲಿ ಅಂಕ ಪಡೆಯುತ್ತಿದ್ದವನು ಒಮ್ಮಿಂದೊಮ್ಮೆಲೆ ಎರಡು ವಿಷಯದಲ್ಲಿ ನಪಾಸಾಗಿರುತ್ತಾನೆ. ದುಃಖದಲ್ಲಿ ಮುಳುಗಿದ ರಾಜ್ ಮಂಕಾಗಿ ಬಿಡುತ್ತಾನೆ. ಅವನಿಗೆ ತನ್ನ ಆತ್ಮಸ್ಥೈರ್ಯ ಕುಗ್ಗಿದಂತಾಗುತ್ತದೆ. ಕಾಲೇಜಿನಲ್ಲಿ ಕೂಡ ಒಬ್ಬೊಬ್ಬನೆ ಇರಲು ಪ್ರಾರಂಭಿಸುತ್ತಾನೆ. ಒಮ್ಮಿಂದೊಮ್ಮೆಲೆ ಇಂತಹ ಆಘಾತವಾಗುವದು ಅಂತ ಕನಸು ಮನಸ್ಸಿನಲ್ಲೂ ನೆನೆಸಿರಲಿಲ್ಲ. ಗೆಳೆಯ ಗೆಳತಿಯರೆಲ್ಲಾ ತೇರ್ಗಡೆಯಾಗಿರುತ್ತಾರೆ. ಯಾವಾಗಲೂ ಇವನ ನಗು ಮುಖವ ನೋಡಿದವರು ಇವನ ಪೇಚು ಮುಖ ಕಂಡು ಮರಗುತ್ತಾರೆ. ಇಂತಹ ಸಮಯದಲ್ಲಿ ಧರ್ಯ ಹೇಳಲು ಸುಮನಾ ಮುಂದಾಗುತ್ತಾಳೆ. ಅವನ ಸ್ವಭಾವವನ್ನು ಅರಿತ ಸುಮನಾ , ಅವನನ್ನು ಹೋಗಿ ಭೇಟಿಯಾಗುತ್ತಾಳೆ..ಅವನನ್ನು ಕುರಿತು., ನೋಡು ರಾಜ್ ಹೀಗೆ ಆಯ್ತು ಅಂತ ತಲೆ ಕೆಡೆಸಿಕೊಳ್ಳುವುದರಲ್ಲಿ ಏನೂ ಫಲವಿಲ್ಲ, ಆಗಿದ್ದುದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಅಂತಾ ವಿಚಾರ ಮಾಡು. ಮುಂದಿನ ಪರೀಕ್ಷೆಯಲ್ಲಿ ಸರಿಯಾಗಿ ಮಾಡಿ ಒಳ್ಳೆಯ ಅಂಕ ಪಡೆದರಾಯಿತು, ಅದಕ್ಕೆ ಬೇಕಾದ ಸಹಾಯ ನಾನು ಮಾಡುತ್ತೇನೆ ಅಂತಾ ಸಹಾಯ ಹಸ್ತ ಚಾಚುತ್ತಾಳೆ. ರಾಜ್ ಗೆ ಅವಳ ಮುಂದೆ ಮುಜುಗರ…. ಆದರೂ ಸ್ವಲ್ಪ ಸುದಾರಿಸಿಕೊಂಡು.., ಸುಮನಾ ನೀನು ಹೇಳುವುದರಲ್ಲಿ ನಿಜಾಂಷವಿದೆ. ನನಗೆ ಗಣಿತವೆಂದರೆ ಭಯವಾಗುತ್ತದೆ, ಆ ವಿಷಯದ ಬಗ್ಗೆ ಸ್ವಲ್ಪ ಸಹಾಯ ಮಾಡಿದರೆ ನಾನು ಬೇರೆಯ ವಿಷಯಗಳನ್ನು ಓದಿಕೊಳ್ಳುತ್ತೇನೆ ಅನ್ನುತ್ತಾನೆ. ಸುಮನಾ ತನ್ನ ಎಲ್ಲಾ ಗಣಿತ ಸಂಬಂಧಿಸಿದ ನೋಟ್ಸು ಪುಸ್ತಕಗಳನ್ನು ಕೊಟ್ಟು ಶುಭ ಹಾರೈಸುತ್ತಾಳೆ. ಅಂದಿನಿಂದ ರಾಜ್ ಗೆ ಸುಮನಾಳ ಕಂಡರೆ ಗೌರವ. ಅವರ ಗೆಳೆತನ ದಿನೆ ದಿನೆ ಗಾಢವಾಗುತ್ತದೆ. ಈ ತಯ್ಯಾರಿಯಲ್ಲಿ ಮತ್ತೊಂದು ಸೆಮಿಷ್ಟರ್ ಪರೀಕ್ಷೆ ಬಂದೆ ಬಿಡುತ್ತದೆ. ಪೂರ್ಣ ಸಿದ್ದಥೆ ಮಾಡಿಕೊಂಡು ರಾಜ್ ಪರೀಕ್ಷೆಗೆ ಹಾಜರಾಗುತ್ತಾನೆ. ಪೇಪರುಗಳು ಚೆನ್ನಾಗಿ ಮಾಡಿದ್ದರೂ ಅವನಲ್ಲಿ ಹಳೆಯ ರಿಜಲ್ಟನ ಕಪ್ಪು ಛಾಯೆ ಇನ್ನೂ ಹೋಗಿರಲಿಲ್ಲ. ಕೊನೆಗೆ ಒಂದು ದಿನ ಏನೂ ಮುನ್ಸೂಚನೆ ಇಲ್ಲದೆ ರಿಜಲ್ಟು ಬಂದಿರುತ್ತದೆ. ಕಾಲೇಜಿಗೆ ಕಾಲು ಇಡುತ್ತಿದ್ದಂತೆಯೆ ಸುಮನಾ ಎಲ್ಲಿಂದಲೋ ಓಡಿ ಬಂದು ನೀನು ಒಳ್ಳೆಯ ಅಂಕ ಪಡೆದು ಉತ್ತೀರ್ಣನಾಗಿದ್ದಿಯಾ ಅಂತ ಹೇಳುತ್ತಾಳೆ. ರಾಜ್ ಗೆ ಇನ್ನಿಲ್ಲದ ಸಂತೋಷವಾಗುತ್ತದೆ. ಮೊದಲು ತಂದೆ ತಾಯಿಗೆ ಪೋನು ಮಾಡಿ ವಿಷಯ ತಿಳಿಸುತ್ತಾನೆ ಅವರು ಕೂಡಾ ಹರ್ಷ ವ್ಯಕ್ತ ಪಡಿಸುತ್ತಾರೆ. ಸುಮನಾ ನೋಡು ನಾನು ಹೇಳಿರಲಿಲ್ಲವಾ ನೀನು ಮಾಡೇತೀರುತ್ತಿ ಅಂತಾ….ಸರಿ ಈಗ ನಡಿ ನಮಗೆಲ್ಲಾ ಚಹಾ ಪಾರ್ಟಿ ಕೊಡು ಅಂತಾ ಕರೆಯುತ್ತಾಳೆ. ಗೆಳೆಯ ಗೆಳತಿಯರೆಲ್ಲಾರೂ ಕೂಡಿಕೊಂಡು ಕಾಲೇಜಿನ ಕ್ಯಾಂಟೀನಿಗೆ ಹೊರಡುತ್ತಾರೆ. (ಮುಂದುವರೆವುದು ….)

ಅವಳ ಪ್ರೀತಿ ( ಮಳೆ )

===========
ಎಷ್ಟೊಂದು ಪ್ರೀತಿ ನಿನಗೆ ನನ್ನ ಮೇಲೆ ಗೆಳತಿ
ಬೆಳಿಗ್ಗಿನಿಂದ ಕಾದು ಕಾದು ಹೊರ ನಡೆದೊಡನೆ ಸುರಿದು ಬಿಟ್ಟೆ
ನಿನ್ನ ಮೊಹದ ಪಾಷದಲ್ಲಿ ನಾ ನೆನೆ ನೆನೆದು ಬಿಟ್ಟೆ..!

ಸ್ನೇಹ

ಅವಳ ಚುಚ್ಚುಮಾತುಗಳು ಸಹಿಸಲಾಗದೇ ನಿಲ್ಲಿಸಿಬಿಟ್ಟೆ ಅವಳೊಡನಾಟ
ಅವಳ ಮನಸ್ಸಿನ ಕಸಿವಿಸಿ ಕಂಡು ನನ್ನ ಮನಸ್ಸೇ ಆಡುತ್ತಿರುವುದು ಡೊಂಬರಾಟ
ಎಷ್ಟೇ ಮುನಿಸಿಕೊಂಡರೂ ನಾ..., ಮತ್ತೆ ಮರುಗುವುದು ನನ್ನ ಮನಸ್ಸೇ...
ಪ್ರೀತಿಸಲಾರೆ...ದ್ವೇಶಿಸಲಾರೆ....... ಸ್ನೇಹವೆಂದರೆ ಇದೆ ದೃವತಾರೆ..!

ಜೀವನಾ

ನನ್ನ ಜೀವ ನೀ ಗೆಳತಿ, ನಿನ್ನ ಜೀವ ನಾ... 
ನಾವಿಬ್ಬರೂ ಬೆರೆತಾಗಲೇ ತಾನೆ, ನಮ್ಮದೊಂದು "ಜೀವನಾ"

ಅವಳು

ಪ್ರತಿ ಕ್ಷಣವೂ ನನಗೆ ಅವಳದೇ ಖಯಾಲಿ
ನೆನೆಯದೆ ಸಾಗುವುದೇ ಇಲ್ಲಾ ನನ್ನ ಒಲವಿನ ಗಾಲಿ
ತೂಗುತಿಹುದು ಅವಳ ನೆನಪಲ್ಲೇ ಮನದ ಜೋಕಾಲಿ
ನಿದ್ದ್ರೆಗೆ ಜಾರು ಇನಿಯ ಅನ್ನುತಿರುವಳು ಬಂದು ಸೇರುವೆ ನಿನ್ನ ಕನಸಲಿ !

ತಾಪಾ

ನಾ ಬರೆಯುವ ಕವಿತೆಯಲಿ
ಅವಳ ಕುರುಹು ಇರಬಾರದಂತೆ...
ಇದ್ದರೇ ಅವಳಿಗೆ ಕೋಪ....ಆಮೇಲೆ ನಾನೇ ಅನುಭವಿಸಬೇಕು ಅದರ ತಾಪಾ..!!

ಆತುರ :’(

ಅವಳಿಗೆ ಅವನೆಂದರೆ ಪ್ರಾಣ
ದಿನ ನಿತ್ಯವೂ ಬೆಳೆಸುತ್ತಿದ್ದಳು ಕಛೇರಿಯವರೆಗೆ ಪ್ರಯಾಣ
ಕ್ಷಣ ಕ್ಷಣವೂ ಅವನ ಜೊತೆ ಇರಬೇಕು ಅನ್ನುವಂತದ್ದು ಅವಳ ಪಣ
ಕಡೆಗೊಂದು ದಿನ ಅವನೊಬ್ಬನೆ ಹೊರಟಿದ್ದನು ಅವಳಲಿಲ್ಲದೆ...
ಎಲ್ಲಿ ಅವಳು...ನಿನ್ನವಳು ಎಂದೊಡನೆ ಅಂದನು...
ಅವಳಿಗೆಂದಿಗೂ ತಾನೆ ಬೇಗ ತಲುಪುವ ಹಠ...
ನನ್ನ ಅರ್ಧ ದಾರಿಯಲ್ಲೇ ಬಿಟ್ಟು ಹೋದಳು...
ಅವಳಿಗಿದ್ದಿದ್ದು ಕ್ಯಾನ್ಸರ್....! 

ಸುಭಾಷಿತ


ನೆನ್ನೆಯ ಸಿಟ್ಟನ್ನು ಇಂದು ಕೂಡಾ ಮುಂದುವರೆಸಿದರೇ ಎರಡು ದಿನದ ನಷ್ಟ , ಸುಮ್ಮನೆ ಏಕೆ ಬೇಕು ಆ ಕಷ್ಟ , ನೆನ್ನೆಯದನ್ನು ನೆನ್ನೆಗೆ ಬಿಟ್ಟು ಇಂದು ಸುಖಿಸೋಣ.

Friday, May 10, 2013

ಡ್ರಾಮಾ ಡ್ರಾಮಾ


===========

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ  !!

ಮೊದಲ್ನೆ ದಿನಾ ಕಾಲೇಜು ಹೊರಟ್ಟಿದ್ದ ಸೊಮಾ
ನೋಡಿ ಲುಕ್ಕು ಕೊಟ್ಟು.. ಕಣ್ಣು ಹೊಡೆದಳು ಭಾಮಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ !!

ಚಪ್ಲಿ ಮಾಯವಯ್ತು ಶು ಹಾಕ್ಕೊಂಡು ಹೊರಟ ಸೊಮಾ
ಹುಡುಗಿ ನೋಡಿ ನಕ್ಕ್ಲು...ಅವ್ನಿಗೆ ಮರುಕ್ಷಣ ಪ್ರೇಮಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ  !!

ಕ್ಲಾಸಲ್ ಕೂತು ಕೊಂಡು ಪಾಠ ಕೇಳುತ್ತಿದ್ದ ಸೊಮಾ
ಪಕ್ಕಕ್ಕೆ ಬಂದು ಕೂತ್ಲು...ಅವನ ಮೈಯಲ್ಲಾ ಜುಮ್ಮಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ  !!

ಮರುದಿನ ಬಂದ್ಲು ಕೇಳಲು ಇವ್ನ ನೋಟ್ಸನಾ
ಕೈಯ್ಯಾ ಹಿಡಿದು ಕುಲುಕಿದಳು ಅವಳ ಸ್ಪರ್ಷಕ್ಕೆ ಇವ್ನು ಲಿನಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ !!

ಸ್ನೇಹಾ ಸ್ನೇಹಾ ಅಂತ ಮೈಮೇಲೆ ಬೀಳುತ್ತಿದ್ದಳು ಭಾಮಾ
ಶಾಕು ಹೊಡೆದ ಸೊಮಾ..ಮೈಮೇಲೆ ಇಲ್ಲಾ ಪ್ರಜ್ಞಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ  !!

ಜಗವೇ ಮರೆತನು ಸೊಮಾ ಕನಸಿನ ಲೋಕದಲ್ಲೇ ಪಯಣ
ಊಟಾ ತಿಂಡಿ ಬಿಟ್ಟು...ಓದು ಮರೆತನು ಸೊಮಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ  !!

ಪ್ರೀತಿಯ ಹುಚ್ಚು ಹಚ್ಚಿ ತಮಾಷೆ ನೋಡುತ್ತಿರುವಳು ಭಾಮಾ
ಪರೀಕ್ಷೆನೇ ಬಂದರುನೂ ಓದೇ ಮರೆತನು ಸೊಮಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ !!

ರಾತ್ರಿಯಿಡಿ ಓದಿ ನಂಬರ್ ಪಡೆದಳು ಭಾಮಾ
ಕಾಲಿ ಹಾಳೆಯ ಕೊಟ್ಟು ಫೆಲಾದನು ಸೊಮಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ !!

ಡಿಗ್ರಿ ಪಡೆದ ಭಾಮಾ ಮದುವೆಯಾಗಿ ಗಂಡನ ಕೂಡ ಕ್ಷೇಮ
ಓದು ಗೀದು ಬಿಟ್ಟು ಲವ್ವಲ್ಲಿ ಹಾಳಾಗಿ ಹೋದ ಸೊಮಾ

ಡ್ರಾಮಾ ಡ್ರಾಮಾ ಡ್ರಾಮಾ  ಹುಡುಗೀರ್ದೆಲ್ಲಾ ಎಲ್ಲಾ ಡ್ರಾಮಾ
ಕೋಮಾ ಕೋಮಾ ಕೋಮಾ ಲವ್ವಲ್ಲಿ ಬಿದ್ದ ಸೊಮಾ !!

***ಭಾವಪ್ರೀಯಾ***

Thursday, May 09, 2013

ಫಲಿತಾಂಶ


೧೦ನೇಯ ತರಗತಿ ಫಲಿತಾಂಶ - ಎಂದಿನಂತೆ ಹುಡುಗಿಯರದೇ ಎತ್ತಿದ " ಕೈ"

೨೦೧೩ ಚುನಾವಣೆ ಫಲಿತಾಂಶ - ಎಲ್ಲ ಜನ ಸಾಮಾನ್ಯರು ಎತ್ತಿಹಿಡಿದರು " ಕೈ "

THOUGHT FOR THE DAY

When you don't like someONE's behaviour, better change them..!!

Sunday, May 05, 2013

ಚುಟುಕ

ಆನೆಯ ಮೇಲೆ ನಾವು ಕುಳಿತರೆ 
                                      " ಜಂಬೂಸವಾರಿ "
ಆನೆ ನಮ್ಮ ಮೇಲೆ ಕುಳಿತರೆ..
                                     " ಪರಲೋಕಕ್ಕೆ ದಾರಿ " 

Friday, May 03, 2013

ಚುಟುಕ

ದಡವಾಗಿ ಕಾಯುತಲಿರುವೆ

ದುಮ್ಮಿಕ್ಕುವ ಅಲೆಯಾಗಿ ಬಂದು ಸೇರು

ಎದೆಮೇಲೆ ಬರೆದಿದ್ದ ನಿನ್ನ ಹೆಸರೇಕೆ

ನೀನೆ ಬಂದು ನೆಲಸು..ಕಾದಿರುವುದು ಹೃದಯದ ಸೂರು !

ನೋಟುಗಳ ಕಾರ್ಬಾರು

===========

ನೂರರ ನೋಟು ಕೊಟ್ಟು..,

ಗಿಟ್ಟಿಸುವರು ವೋಟು !

ಸೀಟು ಸಿಕ್ಕ ಮೇಲೆ..,

ಬಾಚಿಕೊಳ್ಳುವರು ಕೋಟಿ ಕೋಟಿ ನೋಟು !!

-------------------------------------

ಚುಟುಕ

ಗಲ್ಲಿ ಗಲ್ಲಿಯ ಗೋಡೆಯ ಮೇಲೆ ಅಭ್ಯರ್ಥಿಗಳ ಪೋಷ್ಟರ್ರು

ಯಾರೇ ಗೆದ್ದು, ಆರಿಸಿ ಬಂದರೂ ಸುದಾರಿಸಲಿಲ್ಲ ನಮ್ಮೂರು

ಬೀದಿಯ ಕತ್ತೆಗಳಿಗೆ ಮಾತ್ರ ಹೊಟ್ಟೆ ತುಂಬಿತು ಬಲು ಜೋರು !

Thursday, May 02, 2013

ಒಲವಿನ ಗುಂಗು

========
ಲೇಖನಿ ಹರಿಸಿದ,
ಒಲವನು ಶಾಹಿಯಿಂದ..
ಬಿಳಿ ಹಾಳೆಯಲ್ಲಾ ರಂಗು ರಂಗು..
ಅಂದಿನಿಂದ ಶಾಹಿಗೆ,
ಬರೀ ಲೇಖನಿದೇ ಗುಂಗು...!!

--------------------------

ಲೇಖನಿ

====
ಲೇಖನಿಯ ಸ್ಪರ್ಶಕ್ಕೆ...
ಖಾಲಿ ಹಾಳೆಗಳು ಮಾತಾಡಿದವು..!
ಲೇಖನಿಯ ಮನದಾಳಾದಿಂದ
ಗುಟ್ಟುಗಳೆಲ್ಲಾ ರಟ್ಟಾದವು..!

-----------------------

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...