Wednesday, July 31, 2013

THOUGHT FOR THE DAY

We Write, We Read, We comment, We Share, We Like, We Promote. It is a token of APPRECIATION that we admire someone's thoughts, someone's feelings, someone's virtue. Whenever YOU read something, Just acknowledge the writings, that is a great appreciation for the writer.

Tuesday, July 30, 2013

ಸದನದಲಿ ಸಿದ್ದು-ಗುದ್ದು

೧೬ ವರ್ಷ ಕೆಳಗೆ ಮುಖ್ಯಮಂತ್ರಿ ಅವಕಾಶವ ಕಿತ್ತುಕೊಂಡಿದ್ದಕ್ಕೆ ಬೀಗುತ್ತಿದ್ದ ಹೆಚ್ ಡಿ ಕೆ

ಸಿದ್ದು ನೀಡಿದ ಮಾತಿನ ಗುದ್ದಿಗೆ ಆದರು ಕಕ್ಕಾ ಬಿಕ್ಕಿ

ಆಗ ಮಾಡಿದ ತಂತ್ರ ಈಗ ನಡಿಯಲಿಲ್ಲಾ ಅಂತಾ ಅಳುತಿಹರು ಬಿಕ್ಕಿ ಬಿಕ್ಕಿ...!

ಟೆಕ್ಕಿ ಅವಾಂತರ

ನಗರಕ್ಕೆ ಕೆಲಸಕ್ಕಾಗಿ ಅರಸಿ ಬಂದ ಟೆಕ್ಕಿ
ಬಿಎಂಟಿಸಿಯ ಬಸ್ಸನ್ನು ಹತ್ತಿ
ಟಿಕೇಟು ಪಡೆಯಲು ಹೋಗಿ
ಕನ್ನಡದ ಪದಗಳು ತಿಳಿಯದಾಗಿ
ರೊಚ್ಚಿಗ್ಗೆದ್ದು ನಿರ್ವಾಹಕನ ಮೇಲೆ
ಧಳಿಸಿದಳು ಕಿವಿಯ ಹರಿಯುವಂತೆ
ತಾನು ಒಬ್ಬ ಪರೋಡಿ ಎಂದು ನಂಬಿ
ಕುಳಿತಿಹಳು ಜೈಲೊಳಗೆ ಎಣಿಸುತ್ತಾ ಕಂಬಿ.


http://kannada.oneindia.in/news/2013/07/30/karnataka-bangalore-accenture-techie-swati-nigam-assault-bmtc-conductor-manjaiah-076163.html

ಆ ತುಟಿಗಳು ನಗುವುದ ಮರೆತಿಲ್ಲ

ಸದಾ ಕುಣಿದಾಡುತ್ತಿತ್ತು ಅವಳ ತುಟಿಗಳಲಿ ನಗು
ಅವಳ ನಗು ಪುರಸ್ಕರಿಸಲೆಂದು ಹುಟ್ಟಿತ್ತೊಂದು ಮಗು
ತಾಯ್ತನವ ಅನುಭವಿಸುತ್ತಾ ಕನಸ್ಸುಗಳ ಮೊಳಕೆ ಒಡೆದಿತ್ತು
ಕೆಟ್ಟಗಾಲ...., ತುಟಿಗಳು ಬಿಗಿದು,ಕಣ್ಣುಗಳು ತುಂಬಿದವು
ಆ ನಗುವ ತಂದ ಮಗುವು ಇನ್ನಿಲ್ಲದಾಯಿತು
ಕರಳು ಕಿವುಚಿತು ....ಎಷ್ಟು ಕ್ರೂರಿ ಅಲ್ಲವೇ ವಿಧಿ..?
ಮಾಸಗಳು ಕಳೆದವು...
ಇನ್ನೂ ಸಹಾ ಕಾಣಬಲ್ಲೆವು ಅವಳ ತುಟಿಗಳಲಿ ಅದೇ ನಗು...
ಆದರೆ ನಮ್ಮ ಕರುಳೆ ಮತ್ತೆ ಕಿವುಚುತಿದೆ ಅವಳ ನಗುವ ಹಿಂದೆ ಇದ್ದ ನೋವ ಅರೆತು.! 

Monday, July 29, 2013

ಹಿತನುಡಿ

ನಾವು ಪ್ರೀತಿಸುವ ವಸ್ತು ಅಥವಾ ಜೀವಿ ನಮ್ಮದಾಗ ಬೇಕೆಂದರೆ, ನಾವು ಯಾವುದೇ ತ್ಯಾಗಕ್ಕೂ ಸಿದ್ದವಿರಬೇಕು.
ಅದನ್ನು ಪಡೆಯಲೇ ಬೇಕೆಂದರೆ ತಕ್ಕ ಪರಿಶ್ರಮ ಪಡಬೇಕು, ಇಲ್ಲವಾದರೆ ಅದು ಬರಿ ಬೂಟಾಟಿಗೆ ಅನ್ನಿಸಿಕೊಳ್ಳುತ್ತದೆ.

ಬಾಣ



ಅವಳು ಗಾಳಿಯಲ್ಲಿ

ಬಿಡುವ ಬಾಣಗಳು

ನನಗೆ ಏನೋ

ಅನ್ನುವುದು ನನ್ನ " ಭ್ರಮೆ "

ನಿನಗಲ್ಲಾ ನಲ್ಲಾ,ಅಂದಳವಳು..

ನಾ ಬಿಟ್ಟ ಬಾಣಗಳು, ಒಂದಾದರೂ ಚುಚ್ಚಲಿ

ನಿನ್ನ ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವ..

ಆ " ಪ್ರೇಯಸಿಗೆ "

Saturday, July 27, 2013

ದೀಪಜ್ಯೋತಿ


ಪ್ರೀತಿಯ ದೀಪ ಹೊತ್ತಿಹುದು
ಎಣ್ಣೆಯ ಹುಯ್ಯಿದು ಸಲಹು
ಅಕ್ಕರೆಯ ಎರೆದು, ಪ್ರಕಾಶಿಸು !!

ಮನದ ಅಂಧಕಾರವ ದೂರಮಾಡು
ಪ್ರೀತಿಯ ಬೊಗಸೆಯಲ್ಲಿ ಹಿಡಿದು
ಜೀವಕೆ ಜೀವ ತುಂಬುವ ಜ್ಯೋತಿಯ ಪ್ರಜ್ವಲಿಸು !!

ನಂಬಿಹೆನು, ನೀ ಬಾಳ ಜ್ಯೋತಿ ಆಗುವಳೆಂದು
ಬೆಳಕ ತುಂಬುವೆ ನನ್ನ ಬಾಳಲಿ ಇಂದೆಂದೂ
ಮಾದರಿಯಾಗು ನೀ, ಪ್ರೀತಿಯ ಸಂಕೇತವೆಂದು !!

ಕಲ್ ಹೃದಯಾ

ಬಾರಿ ಬಾರಿ 
ಒಡೆಯುವುದು ಅವನ ಹೃದಯ..
ಕಾರಣ,
ಅದು ಒಂದು " ಕನ್ನಡಿ "
ಅವಳಿಗೆ ಅದು ತಾಪತ್ರೆಯೇ ಅಲ್ಲಾ..
ಏಕೆಂದರೆ,
ಅವಳ ಹೃದಯಾ " ಕಲ್ಲ" ಅಂಗಡಿ !!

Wednesday, July 24, 2013

Girls who are proud of their BEAUTY & Guys who dream to be Richer.....Should read this (Courtesy : Internet)

A reply from Richest Man  to a pretty girl seeking a rich husband




A young and pretty lady posted this on a popular forum:



Title: What should I do to marry a rich guy?



I'm going to be honest of what I'm going to say here.



I'm 25 this year. I'm very pretty, have style and good taste. I wish to marry a guy with 100 crore annual salary or above.



You might say that I'm greedy, but an annual salary 2 crore is considered only as middle class now days..



My requirement is not high. Is there anyone in this forum who has an income of 100 crore annual salary? Are you all married?



I wanted to ask: what should I do to marry rich persons like you?



Among those I've dated, the richest is 50 crore annual income, and it seems that this is my upper limit.



If someone is going to move into high cost residential area on the west of New York City Garden(?), 50 crore annual income is not enough.



I'm here humbly to ask a few questions:

1) Where do most rich bachelors hang out? (Please list down the names and addresses of bars, restaurant, gym)

2) Which age group should I target?

3) Why most wives of the riches are only average-looking? I've met a few girls who don't have looks and are not interesting, but they are able to marry rich guys.



4) How do you decide who can be your wife, and who can only be your girlfriend? (my target now is to get married)



Ms. Unnamed .



A philosophical reply from Richest Man -



Dear Ms. Unnamed,

I have read your post with great interest. Guess there are lots of girls out there who have similar questions like yours. Please allow me to analyse your situation as a professional investor.



My annual income is more than 100 crore, which meets your requirement, so I hope everyone believes that I'm not wasting time here.



From the standpoint of a business person, it is a bad decision to marry you. The answer is very simple, so let me explain.



Put the details aside, what you're trying to do is an exchange of "beauty" and "money" : Person A provides beauty, and Person B pays for it, fair and square.



However, there's a deadly problem here, your beauty will fade, but my money will not be gone without any good reason. The fact is, my income might increase from year to year, but you can't be prettier year after year.



Hence from the viewpoint of economics, I am an appreciation asset, and you are a depreciation asset. It's not just normal depreciation, but exponential depreciation. If that is your only asset, your value will be much worse 10 years later.



By the terms we use in Wall Street, every trading has a position, dating with you is also a "trading position".

If the trade value dropped we will sell it and it is not a good idea to keep it for long term - same goes with the marriage that you wanted. It might be cruel to say this, but in order to make a wiser decision any assets with great depreciation value will be sold or "leased".



Anyone with over 100 crore annual income is not a fool; we would only date you, but will not marry you. I would advice that you forget looking for any clues to marry a rich guy. And by the way, you could make yourself to become a rich person with 100 crore annual income.This has better chance than finding a rich fool.



Hope this reply helps.



signed,

RICHEST MAN

(Courtesy : Internet)

Monday, July 22, 2013

ಆಧುನಿಕ ಬ್ರಿಟೀಷರು !!

ಹೆಣ್ಣಿನಂತಿರುವ ಹೆಣ್ಣುಗಳೇ
ಮದುವೆ ಆದರೂ ತಾಳಿ ತೊಡದವರೇ
ಕಾಲಿ ಹಣೆಯ ಸತಿಗಳೇ
ಭಾರತದ ಸಂಸ್ಕೃತಿಯನ್ನು ಅಳಿಸುತ್ತಿರುವರೇ
ಬಿಟ್ಟು ತೊಲಗಿ..., ಬಿಟ್ಟು ತೊಲಗಿ, ಓ ಬ್ರಿಟೀಷರೇ..!

ನಮ್ಮ ತನವ ತುಚ್ಛವಾಗಿ ಕಾಣುವವರೇ
ನಾಡ ನುಡಿಯ ನಾಡದ ಪರಕೀಯರೇ
ಹಿರಿಯರ ಭಯ ಭಕ್ತಿ ಮರೆತವರೇ
ಭಾರತ ಮಾತೆಯ ಮರ್ಯಾದಿ ಕಳೆವವರೇ
ಬಿಟ್ಟು ತೊಲಗಿ..., ಬಿಟ್ಟು ತೊಲಗಿ ಓ ಬ್ರಿಟೀಷರೇ..!

ಹೆಣ್ಣಿನ ಪಾವಿತ್ರ್ಯ ತಿಳಿಯದೇ ವರ್ತಿಸುವವರೇ
ನಯ ನಾಜೂಕು ಮರೆತವರೇ
ಅಂಗ ಪ್ರದರ್ಶನ ಕಾರರೇ
ಸಮಾಜದ ಕೆಟ್ಟು ಹುಳಗಳೇ
ಬಿಟ್ಟು ತೊಲಗಿ..., ಬಿಟ್ಟು ತೊಲಗಿ, ಓ ಬ್ರಿಟೀಷರೇ..!

ಭಾರತ ಮಾತೆಯ ರಕ್ಷಿಸುವುದು ನಮ್ಮ ಕೈಯಲ್ಲಿದೆ
ನಮ್ಮ ದೇಶ ಉಳಿಸುವ ಭಾರ ನಮ್ಮ ಹೆಗಲ ಮೇಲಿದೆ
ನಮ್ಮ ಸಂಸ್ಕೃತಿಯ ಬೆಳೆಸುವ ಹೊಣೆ ನಮ್ಮದಾಗಿದೆ
ಧರ್ಮದೇಟು ಬೀಳುವ ಮೊದಲು ಬಿಟ್ಟು ತೊಲಗಿರೇ
ಬಿಟ್ಟು ತೊಲಗಿ..., ಬಿಟ್ಟು ತೊಲಗಿ, ಓ ಬ್ರಿಟೀಷರೇ..!

ಅಂದು - ಇಂದು

ಅಂದು,


ಹೆಂಗಳೆಯರು ಮುಡಿಯುತ್ತಿದ್ದರು "ಮಲ್ಲಿಗೆ"

ಘಮ ಘಮ ಸೂಸುವ ಸುವಾಸನೆಗೆ

ಹುಡುಗರು ಮರಳಾಗುತ್ತಿದ್ದರು "ಮೆಲ್ಲಗೆ"

ಇಂದು,

ಹೂಗಳು ಮುಡಿಯಲು ನಮ್ಮ ತಲೆ ಏನು ಪಾಟಾ ?

ಕೃತಕ ವಸ್ತುಗಳದ್ದೇ ಈಗ ಭರ್ಪೂರ್ ಆಟಾ

ನಿಮ್ಮ ಹಳೆಯ ಸಂಸ್ಕೃತಿಗೆ ನಾವು ಹೇಳೇವು ಟಾಟಾ !

THOUGHT FOR THE DAY

GOD GIVES EQUAL OPPORTUNITIES TO ALL, TO LEAD THEIR LIFE IN A MEANINGFULL WAY, BUT ONLY SOME PEOPLE GRAB THEM & SUCCEED.

Friday, July 19, 2013

ಶ್ವಾನಕ್ಕೂ ಚಪಲ


ಚೋಟು ಉಡುಗೆಯ ತೊಟ್ಟು,

ಕೈಯಲ್ಲಿ ಸಿಗರೇಟನ್ನು ಇಟ್ಟು,

ಧೂಮ್ರಮಾನ ಮಾಡಲು

ಹೊರಟ, ಮಹಿಳೆಯ ಬೆನ್ನತ್ತಿ...

ಹೊರಟಿತ್ತು, ಶ್ವಾನ ಕತ್ತು ಮೇಲೆತ್ತಿ !!

======ಭಾವಪ್ರಿಯಾ=======

ಇಂದು ಮುಂಜಾನೆ ಐ ಟಿ ಪಿ ಎಲ್ ನಲ್ಲಿ ಧೂಮ್ರಪಾನ ಜೋನಿನ ಹತ್ತಿರ ಕಂಡ ದೃಷ್ಯವನ್ನು ಆಧರಿಸಿ ಮೂಡಿಬಂದ ಕವನ.

ಬಣ್ಣ


ಕಣ್ಣಿಗೆ ಕಪ್ಪು ಬಣ್ಣ

ತುಟಿಗೆ ಕೆಂಪು ಬಣ್ಣ

ಮುಖಕ್ಕೂ ಬಣ್ಣ

ಉಗುರಿಗೂ ಬಣ್ಣ...

ಯಾವ ಬಣ್ಣವ ಮುಚ್ಚಲು...

ಹಚ್ಚುವಿರಿ ಇಷ್ಟೊಂದು ಬಣ್ಣ ?

Thursday, July 18, 2013

ಮೃತ್ಯುಪಾಷ

ಹಸಿವು ನೀಗಿಸುವ
ಮಧ್ಯಾನದೂಟ 
ಆಗಬೇಕಿತ್ತು
" ಅಕ್ಷಯಪಾತ್ರೆ "

ದುಷ್ಟರ ಕೃತ್ಯಕ್ಕೆ
ಬಲಿಯಾದ ಮಕ್ಕಳ
ಶೊಚನೀಯ
" ಯಮಯಾತ್ರೆ "
-------------
ಬಿಹಾರದ ಸರನ್‌ ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದೂಟ ಸೇವಿಸಿ ಮೃತಪಟ್ಟ ಮಕ್ಕಳಿಗೆ ಕಂಬನಿಯುತ್ತ ಶ್ರದ್ದಾಂಜಲಿ. 

ಜೀವ ಜಲ


ಜೀವ ಜಲಕೆ ಇಂದು ಭಾರಿ ಖುಷಿ

ಪರದೇಶ ತೊರೆದು, ತವರಿಗೆ ಮರಳಿದ ಅಕಾಂಶಿ.

ಜೋರಾಗಿ ಸುರಿದು ಬರುತಿದೆ

ಒಮ್ಮೆ ಮಳೆ ಹನಿಯಾಗಿ

ಇನ್ನೊಮ್ಮೆ ಆಳಿಯ ಕಲ್ಲಾಗಿ

ತವರು ಮೆಟ್ಟಿದ ಖುಷಿಗೆ ಭೋರ್ಗರೆಯುತಿದೆ

ಹಳ್ಳ, ನದಿ, ಕಣಿವೆಗಳ ಸೇರಿ ಸಂಭ್ರಮಿಸುತಿದೆ

ತುಳುಕುತ್ತಾ ಚಲಿಸಿದೆ

ಆ ನದಿಯ ದಡಕೆ ಮುತ್ತಿಡುತ್ತಾ

ದಡದಲಿ ಇದ್ದ ಬಡ್ಡಿ, ಕಡ್ಡಿಗಳೆಲ್ಲಾ ಚಿಗಿಯುತಿದೆ

ಜಲಜೀವ ರಾಶಿ ಉತ್ತಿ ಬಿತ್ತಿ ನಲಿಯುತಿವೆ

ಎತ್ತರದ ಗುಡ್ಡದ ಅಡಿಯಿಂದ ಧುಮುಕಿ

ರುದ್ರ ರಮಣೀಯ ದೃಷ್ಯ ಜಲಪಾತಕೆ ಸೊಬಗು ನೀಡುತಿದೆ

ಏನು ಉಲ್ಲಾಸವೋ.., ಏನು ಸಂತೋಷವೋ..

ತವರ ಸೇರಿ, ತನ್ನ ಮನೆಗೆ ಹಸಿರು ಹಚ್ಚಿ ಕುಣಿದಿದೆ.

Wednesday, July 17, 2013

ಕನ್ಯೆಯ ಜೊತೆ ಮಾತುಕತೆ

ಹುಡುಗ ತಮ್ಮ ತಂದೆ ತಾಯಿ ಜೊತೆ ಹುಡುಗಿಯ ನೋಡಲು ಹೋಗುತ್ತಾನೆ. ಹುಡುಗ ಹುಡುಗಿಯ ಬಗ್ಗೆ ಸ್ವಲ್ಪ ಮಾತುಕತೆ. ಇಬ್ಬರ ಅಪ್ಪಾ ಅಮ್ಮಂದಿರು ಅವರುಗಳು ಮಾತಾಡಿಕೊಳ್ಳಲಿ ಅಂತಾ ಹೇಳಿ ಒಂದು ಕೋಣೆಯೊಳಗೆ ಕಳಿಸುತ್ತಾರೆ.
ಹುಡುಗ : ನಾನು ಅಭಿಯಂತರ ಒಳ್ಳೆಯ ನೌಕರಿಯಲ್ಲಿ ಇದ್ದೇನೆ. ಸಗಮವಾಗಿ ಜೀವನ ಸಾಗಿಸಬಲ್ಲವನಾಗಿದ್ದೇನೆ.
ನಾನು ಕೆಲವು ಪ್ರಶ್ನೆಗಳನ್ನು ಕೇಳಲು ಇಚ್ಚಿಸುತ್ತೇನೆ.., ಏನೂ ಮುಚ್ಚು ಮರೆ ಇಲ್ಲದೆನೆ ಉತ್ತರಿಸು ಅಂದಾ.
ಹುಡುಗ : ನೀನು ಪದವಿ ಮುಗಿಸಿದ್ದೀಯಾ ಇನ್ನೂ ಮುಂದೆ ಓದುವ ಆಸಕ್ತಿ ಇದೆಯಾ..?
ಹುಡುಗಿ :  YES, I'M INTERESTED.
ಹುಡುಗ : ನಿನಗೆ ಮದುವೆ ಆಗಲು ಈಗ ಇಷ್ಟವಿದೆಯಾ..?
ಹುಡುಗಿ : hmm.. YES...
ಹುಡುಗ : ನಿನಗೆ ಸೀರೆ ಉಡಲು ಬರುತ್ತದೆಯೆ ?
ಹುಡುಗಿ : NOT ACTUALLY..
ಹುಡುಗ : ನಿನಗೆ ಅಡುಗೆ ಬರುತ್ತದೆಯೆ ?
ಹುಡುಗಿ : ACTUALLY I DON'T LIKE HOME FOOD, SO I GO TO SHANTI SAGAR, MAATRU SAGAR, KFC, Mc DONALD.
ಹುಡುಗ : ನಿನಗೆ ಕೆಲಸ ಮಾಡಲು ಇಷ್ಟವಿದೆಯಾ ?
ಹುಡುಗಿ : YES.. I WOULD LOVE TO WORK, BECAUSE I CAN'T DEPEND ON YOU FOR ALL MY FANCIES AND DRESS THAT I SHOP REGULARLY.
ಹುಡುಗ : ನೀನು ದೇವರನ್ನು ನಂಬುತಿಯಾ/ದೇವಸ್ಥಾನಕ್ಕೆ ಭೇಟಿ ನೀಡುವ ಅಭಾಸವಿದೆಯಾ ?
ಹುಡುಗಿ : NO I USUALLY DONT PREFER SILENT PLACES, I WOULD LIKE TO GO TO MALLS,MULTIPLEX, SHOP AND SHOP , I LOVE SHOPPING.
ಹುಡುಗ : ನೀನು ಸಿನಿಮಾಗಳನ್ನು ನೋಡ್ತಿಯಾ ?
ಹುಡುಗಿ : YES I DO WATCH MOVIES, ESPECIALLY HOLLYWOOD MOVIES.
ಹುಡುಗ : ನೀನು ಹುಟ್ಟಿದ್ದು ಎಲ್ಲಿ ?
ಹುಡುಗಿ : I WAS BORN IN BANGALORE
ಹುಡುಗ : ನನ್ನ ಕಟ್ಟ ಕಡೇ ಪ್ರಶ್ನೆ " ನಿನಗೆ ಕನ್ನಡ ಓದಲು ಬರಿಯಲು ಮಾತನಾಡಲು ಬರುತ್ತಾ ?
ಹುಡುಗಿ : ACTUALLY I'M A KANNADIGA BUT I SPEAK LESS, I'M NOT SO FLUENT WITH READING AND WRITING.
ಹುಡುಗ : ಥೂ ನಿನ್ನ ಮೊಕಕ್ಕಿಷ್ಟು..............ನಾ ಕೇಳಿದ್ದ ಇಷ್ಟು ಗುಣಗಳಿಲ್ಲಾ ಅಂದ್ರ ನಡಿತಿತ್ತು ಆದರ,  ಕನ್ನಡ ನಾಡಿನಲ್ಲಿ ಹುಟ್ಟಿ, ಕಾವೇರಿ ನೀರ ಕುಡಿದು, ಕನ್ನಡಾ ಮಾತಾಡಾಕ, ಓದಾಕ ಬರಂಗಿಲ್ಲಾ ಅಂದ್ರ ನಿಮ್ಮ ಹಂತವರನ್ನು ಕಟ್ಟಗೊಂಡು ಯಾವ ಜೀವನಾ ಮಾಡ್ಯಾನ.ಹಾಳಾಗ್ ಹೋಗ್ರಿ......
ಹುಡುಗ ಹೊರ ಬಂದು ಅಪ್ಪಾ, ಅಮ್ಮಾ ನಡಿರಿ ಮನಿಗೆ ಹೋಗುಣು ಅಂದಾ ..! :)

ಅಮರ ಪ್ರೇಮಿಗಳು


 ಒಂದು ಜೋಡಿ ಪಾರಿವಾಳು ನಮ್ಮ ಮನೆಯ ಛಾವಣಿ ಮೇಲೆ ತಮ್ಮ ಸಂಸಾರ ನಡೆಸುತ್ತಿದ್ದವು. ಸಾಧಾರಣವಾಗಿ ಅವು ಪೈಪು ಅಥವಾ ಗಿಡ ಮರಗಳ ಪೊಟ್ರೇಗಳಲ್ಲಿ ವಾಸಿಸುತ್ತವೆ. ಅವುಗಳನ್ನು ಕಂಡು ಅಚ್ಚರಿಯು ಹಾಗು ಸಂತೋಷವೂ ಆಯಿತು. ಅವುಗಳ ಹತ್ತಿರ ಸುಳಿದಾಡಲು ಹೋದಾಗ ಒಂದು ಮಾತ್ರ ಹಾರಿ ಹೋಗುತ್ತಿತ್ತು, ಮತ್ತೊಂದು ಕುಂಟುತ್ತಾ ಸಾಗುತ್ತಿತ್ತು ಆದರೆ ಹಾರುತ್ತಿರಲಿಲ್ಲಾ. ಆಮೇಲೆ ನನಗೆ ತಿಳಿದ ವಿಷಯ, ಹೆಣ್ಣು ಪಾರಿವಾಳದ ರೆಕ್ಕೆಗೆ ಗಾಯವಾಗಿದ್ದರಿಂದ ಅದಕ್ಕೆ ಹಾರಲು ಸಾಧ್ಯವಾಗುತ್ತಿರಲಿಲ್ಲ. ಗಂಡು ಪಾರಿವಾಳ ಬೆಳಿಗ್ಗೆನೆ ಹೋಗಿ ಕಾಳು ಕಡಿಗಳನ್ನು ಹೆಕ್ಕಿ ತರುತ್ತಿತ್ತು. ನಾನು ಶಾಲೆಗೆ ಹೋಗುತ್ತಿದ್ದರಿಂದ ದಿನಾಲು ಇವಗಳನ್ನು ಕಾಣಲು ಆಗುತ್ತಿರಲಿಲ್ಲ. ರಜಾ ದಿನವದ ರವಿವಾರದಂದು ಬೆಳ್ಳಬೆಳಿಗ್ಗೆ ಆ ಪಾರಿವಾಳಗಳನ್ನು ನೋಡಲು ಹೋದೆ, ಅಲ್ಲೊಂದು ವಿಸ್ಮಯ ಕಾಣಿಸಿತು ನನಗೆ.ಗಂಡು ಪಾರಿವಾಳ ತನ್ನ ಚುಂಚಿನಿಂದಾ ಹೆಣ್ಣು ಪಾರಿವಾಳಕ್ಕೆ ಕಾಳು ಹಂಚಿಕೊಳ್ಳುತ್ತಿತ್ತು. ಇದನ್ನು ಕಂಡು ನನ್ನ ಮನಸ್ಸು ಕರಗಿ ಹೋಯಿತು. ಅಂದಿನಿಂದಾ ನಾನು ಆ ಪಾರಿವಾಳಗಳಿಗೆ ದಿನಾ ಒಂದು ಬಟ್ಟಲಲ್ಲಿ ಕಾಳು ಹಾಗು ಇನ್ನೊಂದು ಬಟ್ಟಲಲ್ಲಿ ನೀರು ಹಾಕಿ ಹೋಗುತ್ತಿದ್ದೆ. ಅವುಗಳ ಕಷ್ಟ ನೋಡಿ ನಾ ಮಾಡಿದ ಸಹಾಯ ಅಷ್ಟೇ. ಹೆಣ್ಣು ಪಾರಿವಾಳ ದಿನೆ ದಿನೆ ಸ್ವಲ್ಪ ಹಾರಲು ಪ್ರಯತ್ನಿಸುತ್ತಿತ್ತು ಆದರೆ ಸಾಧ್ಯಾವಾಗುತ್ತಿರಲಿಲ್ಲ. ಬಹುದಿನಗಳ ಕಾಲ ಅವುಗಳನ್ನು ನಾ ಭೇಟಿಯೆ ಆಗಲಿಲ್ಲಾ ಅಂತಾ ನೋಡಲು ಹೋದಾಗ.., ನನಗೆ ಕಂಡ ದೃಷ್ಯ ನನ್ನ ಕಣ್ಣುಗಳಲ್ಲಿ ಅಳು ತರಿಸಿ ಬಿಟ್ಟಿತು. ಹೆಣ್ಣು ಪಾರಿವಾಳ ಯಾವುದೋ ಕೆಟ್ಟ ಕಣ್ಣುಗಳಿಗೆ ಬಲಿಯಾಗಿತ್ತು. ಅಲ್ಲೆಲ್ಲಾ ಕೆಲವು ಪಾರಿವಾಳಗಳು ಸೇರಿದ್ದವು. ಒಂದು ಪಾರಿವಾಳ ಮಾತ್ರ ಅದರ ಹತ್ತಿರನೆ ಸುತ್ತುತ್ತಿತ್ತು. ಅರ್ಧ ಗಂಟೆ ಕಳೆದ ನಂತರ ಬೇರೆ ಎಲ್ಲಾ ಪಾರಿವಾಳಗಳು ಮಾಯವಾದವು.., ಆದರೆ ಆ ಒಂದು ಗಂಡು ಪಾರಿವಾಳ ಮಾತ್ರ ಗೋಡೆಯನೇರಿ ಮಡಿದ ಪಾರಿವಾಳವನ್ನು ನೋಡುತ್ತಾ ಕುಳಿತಿತ್ತು, ಅದರ ಕಣ್ಣುಗಳನ್ನು ನಾನು ಗಮನಿಸಿದಾಗ ಅವು ನೀರೊರೆಯುತ್ತಿದ್ದವು. ಅದರ ದುಃಖವ ಕಂಡು ನನ್ನ ಕಣ್ಣುಗಳಲ್ಲಿಯೂ ನೀರು ಹರಿಲಾರಂಭಿಸಿದವು. ಪ್ರಾಣಿ ಪಕ್ಷಿಗಳಲ್ಲಿಯೂ ಕೂಡಾ ಪ್ರೀತಿ, ವಾತ್ಸಲ್ಯಾ , ಗೆಳೆಯರು, ಸಂಬಂಧಿಕರು ಇರುತ್ತಾರೆ, ಅವರುಗಳು ಕೂಡಾ ಮನುಷ್ಯನ ತರಹವೇ ಎಲ್ಲವನ್ನೂ ಅನುಭವಿಸುತ್ತವೆ ಎಂದು ತಿಳಿಯಿತು. ಆ ಪಾರಿವಾಳಗಳ ಅಮರ ಪ್ರೇಮ, ಅವರ ಒಡನಾಟ ನನ್ನ ಮನವನ್ನು ಇಂದಿಗೂ ಅಚ್ಚರಿಯಾಗಿ ಉಳಿದಿದೆ.

ಕಿವಿ ಮಾತು

ನಾನು ಕಂಡ ಕನಸ್ಸುಗಳೆಲ್ಲಾ ಕಪ್ಪು ಬಿಳಿಯಂತೆ


ಅವುಗಳಿಗೆ ಬಣ್ಣ ಹಚ್ಚಬೇಕಾದವಳು ನೀನು..

ಅವು ನನ್ನವು ಅಂದುಕೊಂಡಾಗ ಮಾತ್ರ ಅದು ಸಾಧ್ಯ !

Tuesday, July 16, 2013

ಕಣ್ಣಾ ಮುಚ್ಚಾಲೆ

ಅವಳ ಭಾವನೆಗಳ ಅರಿಯಲೂ....
ಅವಳ ಮಾತುಗಳೂ ಕಮ್ಮಿ ಎನ್ನಿಸುತ್ತವೆ.
ಕಣ್ಣುಗಳಿದ್ದರೂ  ಕಾಣಲು ಕಷ್ಟ ಪಡುವೆನು..!
ಅವಳು ದೃಶ್ಠಿ ಹೀನಳಾದಳೂ
ಮನಸಿನ ಕಣ್ಣುಗಳಿಂದ..
ನನ್ನ ಎಲ್ಲಾ ಭಾವವ ಗುರುತಿಸುವಳು !!



THOUGHT FOR THE DAY

People who judge others depends solely their own personal character.

Sunday, July 14, 2013

ನಗು-ನಗಿಸು

ನಾನು ನಗುವೆ, ನಗಿಸುವೆನು
ಆ ನಗುವಲ್ಲೆ ನಾ ದುಃಖವ ಮರೆವೆನು !
ನಗಿಸಿದರೂ, ನಿಮಗೆ ನಗು ಬರಲಿಲ್ಲವಾದರೆ
ನಿಮ್ಮ ದುಃಖಕ್ಕೆ ಕಾರಣ ನಾನಾಗಲಾರೆನು !!

ಇಣುಕುವುದೇಕೊ ಮಳೆರಾಯ ?

ಬಾರಪ್ಪಾ ಬಾರೋ ಮಳೆರಾಯ
ನಿನ್ನ ಸ್ವಾಗತ ಕೋರುವುದು ಜಗವೆಲ್ಲಾ
ಇಣುಕಿ ಇಣುಕಿ ನೋಡಿ ಮಾಯವಾಗುವೇಕೆ
ನೀನು ಬಂದರೆ ಖುಶಿಯೆ ನಮಗೆಲ್ಲಾ..!

ಸಂಭ್ರಮ

ಕುಣಿದಾಡುತ್ತಿವೆ ಸಂಭ್ರಮದಿಂದ...
ಅವಳ ಕೆನ್ನೆಯ ಮೇಲೆ...
ನಾ ಕೊಟ್ಟ ಮುತ್ತುಗಳು !!
ಕೊಟ್ಟವನು ನಾನೇ.,ಆದರೂ ಆ ಸಂಭ್ರಮ ನನ್ನದಲ್ಲ...
ಒಳಒಳಗೆ ಆನಂದಿಸಿದೆ ಮನವು
ಸ್ಪರ್ಷಿಸಿದ ಕ್ಷಣವ ನೆನೆ-ನೆನೆದು !!!

Saturday, July 13, 2013

ನಂಬಿಕೆ

ಅವಳ ಕೆಂದುಟಿ ಕಂಡಾಗಲೆಲ್ಲಾ..
ಆಗ ಬಯಸುವೆನು ನಾ ದುಂಬಿ..!
ಅವು ಅರಳುವ ಕ್ಷಣಕ್ಕಾಗಿ
ಕಾಯುವೆನು.., ನನ್ನ ಪ್ರೀತಿಯ ನಂಬಿ..!!

ರಸಿಕೊತ್ತಮ ನಲ್ಲಾ

ಕದ್ದು ಕದ್ದು 
ನೋಡಿದಾಗಲೆಲ್ಲಾ...
ಅವಳ ತುಟಿ, ಗಲ್ಲಾ....!
ಹಾಗೆ ಕದ್ದು ಮುಚ್ಚಿ,
ಕೊಟ್ಟೆಬಿಡಲೇ........
ಪ್ರೀತಿಯ ಅಚ್ಚು ಬೆಲ್ಲಾ..!!


Wednesday, July 10, 2013

THOUGHT FOR THE DAY

Love is a precious gift which is showered by one to other.
Reject it at the first instance , if you think that, you don't deserve it.

Tuesday, July 09, 2013

ನಿರ್ಜೀವ ಶರೀರ

ಹೊರಟಿಹುದು ಹೊತ್ತು ಹೂವುಗಳ ರಾಶಿ 
ಇದೇ ಕೊನೆಯದು ಅದರ ಪಯಣ !
ಒಳಒಳಗೆ ನಗುತ್ತಾ ಸಾಗಿಹುದು, ಅದಕ್ಕೆ ಖುಶಿ..
ಮುಗಿಸಿ ಹೊರಟೆ ಎಂದು..., ಇಹಲೋಕದ ಜೀವನ !! 

ಬಡವ Vs ಶ್ರೀಮಂತ

ಬಡವರಿಗೆ ಬರೆ
ಹೊಟ್ಟೆಯ ಮೇಲೆ !
ಶ್ರೀಮಂತರಿಗೆ ಹಚ್ಚೆ
ರಟ್ಟೆಯ ಮೇಲೆ !!

Monday, July 08, 2013

ಆಯ್ಕೆ ನಿಮ್ಮದೆ


ಅಚ್ಚು ಕಟ್ಟು ಸೀರೆಯ ಉಟ್ಟು ಬಂದರೆ

ಪೂಜಿಸುವರು, ಕೈ ಜೋಡಿಸಿ ನಮಿಸುವರು

ಹರಕು ಮುರುಕು ಬಟ್ಟೆಯ ತೊಟ್ಟು ಬಂದರೆ

ಬೀದಿಯ ತುಂಬಾ ಕೆಣಕುವ ಕಾಮುಕರು !

ನಿಸ್ವಾರ್ಥ


ಅವಳ ಸೌಗಂಧ,ಬಣ್ಣ ಜಗವೆಲ್ಲಾ ಮೆಚ್ಚಲಿ

ಅವಳು ಅರಳಿ ನಗುವುದ ಅಷ್ಟೇ ಬಯಸುವೆನು

ಅವಳು ಇಬ್ಬನಿಯಲ್ಲಿ ಮಿಂದು ನಲಿಯಲಿ

ಅವಳ ಸುಖವನ್ನೇ ನಾ ಬಯಸುವೆನು

ಅವಳ ಅಂದಕ್ಕಾಗಿ ನಾನು ಜನಿಸಿಲ್ಲ

ಅವಳ ಪ್ರೀತಿ ನನಗಷ್ಟೇ ಮೀಸಲಿರಲಿ ಎಂದು ಬಯಸುವುದಿಲ್ಲ

ಅವಳ ರಕ್ಷಣೆಯೇ ನನ್ನ ಹೊಣೆ

ನನ್ನ ಜೀವ ಅವಳಿಗೆ ಅರ್ಪಣೆ

ಕೊನೆಗೊಂದು ದಿನ ಬಾಡಿಹೋದರೂ ಅವಳು

ಅವಳ ನೆನಪಲ್ಲೇ ಬಿಸಿಲ ಬೇಗೆಗೆ ಒಣಗಿ ಮಡಿಯುವೆನು !



ಅವಳು = ಹೂವು , ನಿಸ್ವಾರ್ಥಿ = ಮುಳ್ಳು

Sunday, July 07, 2013

ಒಲವಿನ ಕಾದಂಬರಿ - ಸಂಚಿಕೆ ೩

(ಬಹುದಿನಗಳಿಂದ ಬರಿಯಲು ಸಾಧ್ಯವಾಗಲಿಲ್ಲ ಕ್ಷಮೆ ಇರಲಿ ) ಮುಂದೆ ಓದಿ

ಮರುದಿನ ಕಾಲೇಜಿಗೆ ಬಂದ ರಾಜ್ ಗೆಳೆಯರ ಜೊತೆಯಲಿ ಚಹಾ ಕುಡಿಯಲಿಕ್ಕೆ ಎಂದು ಕ್ಯಾಂಟಿನಿಗೆ ಹೋಗಿರುತ್ತಾನೆ, ಈ ಕಡೆ ಗೀತಾ ಬಸ್ಸನ್ನು ಇಳಿಯುತ್ತಲೆ ರಾಜ್ ನನ್ನು ಹುಡುಕುತ್ತಾ ಹೊರಡುತ್ತಾಳೆ, ರಾಜ್ ಕ್ಲಾಸಿನಲ್ಲಿ ಇಲ್ಲಾ, ಬಹುಶಃ ಲೈಬ್ರರಿಯಲ್ಲಿ ಇರಬಹುದೇ..? ಬೇಗನೆ ಅಲ್ಲಿಗೆ ದೌಡಾಯಿಸುತ್ತಾಳೆ…ರಾಜ್ ಅಲ್ಲಿಯೂ ಇಲ್ಲಾ…ಎಲ್ಲಿ ಹೋದ ಇವ..? ಗೀತಾಳ ಮನದಲ್ಲಿ ಸ್ವಲ್ಪ ಕೋಪ ಬರುತ್ತೆ, ದಿನಾಲು ಕಾಲೇಜಿಗೆ ಕಾಲಿಟ್ಟ ಕೂಡಲೆ ಕಾಣುತ್ತಿದ್ದ ಇವನು., ಇಂದು ಕಾಲೇಜಿಗೆ ಬರಲೇ ಇಲ್ಲವೆ ಅಥವಾ ಇಲ್ಲಾ ಬೆರೆ ಯಾರದರೊಡನೆ ಎಲ್ಲಿಗಾದರೂ ಹೋದನೆ ಎಂಬ ಚಿಂತೆ ಕಾಡುವಷ್ಟರಲ್ಲಿ ರಾಜ್ ಗೆಳೆಯರೊಡನೆ ಕ್ಲಾಸಿನ ಹತ್ತಿರ ಬರುತ್ತಾನೆ, ಅವನನ್ನು ಕಂಡು ಗೀತಾಳಿಗೆ ಸ್ವಲ್ಪ ನಿರಾಳ ಉಂಟಾಗುತ್ತದೆ., ಆದರೂ ಅವಳ ಮೊಗದಲ್ಲಿ ಏನೋ ಕೋಪ ಅವನ ಮೇಲೆ, ಇದನ್ನು ಗಮನಿಸಿದ ರಾಜ್ ಗೆಳೆಯರೆಲ್ಲರಿಗೂ ಹೇಳಿ ಇವಳತ್ತ ಧಾವಿಸುತ್ತಾನೆ. ಏನಮ್ಮಾ ಇವತ್ತು ಏಕೋ ಕೋಪ ಬಂದ ಹಾಗಿದೆ ನಿನಗೆ ಏನ್ ಸಮಾಚಾರ..ಅದಕ್ಕೆ ಅವಳು ಮುನಿಸಿಕೊಂಡು, ಲೋ ಏನೂ ಇಲ್ಲಾ ಹೋಗೊ, ನಿನಗೇಕೆ ಹಾಗೆ ಅನಿಸಿತು ಎಂದು ಪ್ರತಿಯಾಗಿ ಪ್ರಶ್ನಿಸಿದಳು. ಏನೂ ಇಲ್ಲಾ ನಿನ್ನ ಮುಖದ ಭಾವನೆಗಳು ನನಗೆ ಪ್ರಶ್ನಿಸುವಂತೆ ಮಾಡಿತು..ಸರಿ ಸರಿ ಬೆಳ್ಬೆಳಿಗ್ಗೆ ಎಲ್ಲಿಗೆ ಹೋಗಿದ್ದೆ..?ಅಂದಳು…ಓಹೋ ಇದಕ್ಕೆ ಮೇಡಂ ಗರಂ ಆಗಿರೋದು, ಏನೂ ಇಲ್ಲಾ ಕಣೆ ಮನೆಯಲ್ಲಿ ತಡವಾಯ್ತು ಅಂತಾ ಚಹಾ ಕುಡಯದೇ ಬಂದೆ ಅದಕ್ಕೆ ಇಲ್ಲಿ ಗೆಳೆಯರ ಜೊತೆ ಹೋಗಿದ್ದೆ. ಅದೆಲ್ಲಾ ಸರಿ , ನೀನೇಕೆ ನನ್ನನ್ನು ಹುಡುಕುತ್ತಿದ್ದೆ ? ಏನೂ ಇಲ್ಲಾ ಕಣೋ ನನ್ನ ಗೆಳತಿಯೊಬ್ಬಳು ಬೈಕ್ ತನ್ನ ಗೆಳೆಯನೊಡನೆ ಸವಾರಿ ಮಾಡಿ ಬಂದಳು ಅವಳು ಎಷ್ಟು ಖುಶಿಯಾಗಿದ್ದಳು ಅಂದರೆ ಅದು ಹೇಳಲಿಕ್ಕೆ ಆಗುವುದಿಲ್ಲಾ. ಸರಿ ಅದಕ್ಕೆ ಈಗೇನು..? ಮತ್ತೆ ನನಗೂ ಕೂಡಾ ಬೈಕ್ ಅಂದ್ರೆ ತುಂಬಾ ಇಷ್ಟಾ , ನಾನು ಒಂದು ಸಾರಿನೂ ಬೈಕ್ ಹತ್ತಿಲ್ಲಾ ಕಣೋ….ಅಂದಳು. ಅದರ ಸವಾರಿ ಮಾಡಬೇಕು ಎನ್ನುವುದು ನನ್ನ ಬಹುದಿನದ ಆಸೆ, ಆದರೆ ಏನ್ ಮಾಡೋದು ನನ್ನ ಅಪ್ಪನ ಹತ್ತಿರ ಬೈಕ್ ಇಲ್ಲಾ. ಸರಿ ಸರಿ ಓದು ಮುಗಿಸಿ ಒಳ್ಳೆ ಕೆಲಸ ಸೇರಿಕೊಂಡು ಒಂದು ಹೊಸ ಬೈಕ್ ತೊಗೊ ಆಮೇಲೆ ಎಷ್ಟು ಬೇಕಾದರೂ ಹತ್ತಿಕೊಂಡು ಅಡ್ಡಾಡಬಹುದು ಎಂದ ರಾಜ್..ಗೀತಾ ಅಯ್ಯೋ ಇನ್ನೂ ಅಷ್ಟು ವರ್ಷ ಕಾಯಬೇಕಲ್ಲಾ ಅಂದಳು. ಕನಸ್ಸು ಕಂಡಿದ್ದು ಸಾಕು ನಡಿ ಕ್ಲಾಸಿಗೆ ಹೋಗೋಣ ಎಂದ. ಕ್ಲಾಸಿನಲ್ಲಿ ಇದ್ದದ್ದು ಇವಳೊಬ್ಬಳೆ ಹುಡುಗಿ, ಯಾವಾಗಲೂ ಒಬ್ಬಳೆ ಕೂಡುತ್ತಿದ್ದ ಗೀತಾಗೆ ಅವತ್ತು ಏನ್ ಅನಿಸಿತೋ ಗೊತ್ತಿಲ್ಲಾ.., ಪ್ರೋಫೆಸರ್ ಕ್ಲಾಸಿಗೆ ಕಾಲು ಇಡುತ್ತಿದ್ದ ಹಾಗೆ ಮೊದಲನೆ ಬೆಂಚು ಬಿಟ್ಟು ಬಂದು ರಾಜ್ ನ ಪಕ್ಕದಲ್ಲಿ ಕುಳಿತು ಬಿಡುತ್ತಾಳೆ. ಎಲ್ಲರಿಗೂ ಆಶ್ಚರ್ಯ…, ಪ್ರೋಫೆಸರ್ ಕೂಡಾ ಕ್ಲಾಸ್ ಮಾಡುವಾಗ ಇವರತ್ತ ನೋಡುತ್ತಿರುತ್ತಾರೆ, ರಾಜ್ ಕೇಳಿದ ಪ್ರಶ್ನೆಗೆ ಆಸಕ್ತಿಯಿಂದ ಉತ್ತರ ನೀಡುತ್ತಾರೆ. ಅಂದಿನಿಂದ ಅವಳ ಜಾಗ ರಾಜ್ ನ ಪಕ್ಕದಲ್ಲೇ ಫಿಕ್ಸ್ ಆಗುತ್ತದೆ. ಗೆಳೆಯರೆಲ್ಲರೂ ಆಡಿಕೊಳ್ಳಲು ಶುರು ಮಾಡುತ್ತಾರೆ, ಅದಕ್ಕೆ ರಾಜ್ ಅವಳ ನನ್ನ ಒಳ್ಳೆ ಸ್ನೇಹಿತೆ ಅಷ್ಟೇ, ಮಕ್ಕಳಾ ಬೇರೆನೂ ಇಲ್ಲಾ ಅಂತಾನೆ. ಅವಳ ಮೇಲೆ ಎಷ್ಟೋ ಅಭಿಮಾನ ಇಟ್ಟುಕೊಂಡವರಿಗೆ ದುಃಖವಾಗುತ್ತದೆ. ಅದರಲ್ಲೆ ಒಬ್ಬ ಹುಡುಗ ಇವಳಲ್ಲಿ ಬಹಳ ಆಸಕ್ತಿ ತೋರಿಸುತ್ತಿರುತ್ತಾನೆ, ಆದರೆ ಆ ವಿಷಯ ರಾಜ್ ಗೆ ತಿಳಿದಿರುವುದಿಲ್ಲಾ.
ಒಂದು ದಿನ ಪ್ರ್ಯಾಕ್ಟಿಕಲ್ ಕ್ಲಾಸ್ ನಡೆದಿರುತ್ತದೆ ಅದರಲ್ಲಿ ಕಬ್ಬಿಣ ಬಗ್ಗಿಸುವ ಕೆಲಸ. ಎಲ್ಲ ಹುಡುಗರು ತಮ್ಮ ತಮ್ಮ ಕೆಲಸ ಮುಗಿಸುವದರಲ್ಲಿ ತಲ್ಲೀನರಾಗಿರುತ್ತಾರೆ, ಆದರೆ ಗೀತಾ ಒಬ್ಬಳೇ ಹೇಗೆ ಮಾಡುವುದು ಅನ್ನುತ್ತಾ ಕುಳಿತಿರುತ್ತಾಳೆ. ಇನಸ್ಟ್ರಕಟರ್ ಬಂದು ಹಾ ಬೇಗ ಬೇಗ ಮಾಡಮ್ಮ ಅನ್ನುತ್ತಾರೆ…ಸಾರ್ ಒಬ್ಬಳೆ…ಹಾ ಹೌದು ನೀನೇ ಮಾಡಬೇಕು ಅಂದು ಚಹಾ ಕುಡಿಯಲು ಹೋಗುತ್ತಾರೆ. ಅಷ್ಟರಲ್ಲಿ ಇವೆಲ್ಲವನ್ನು ಗಮನಿಸುತ್ತಿದ್ದ ಆ ಹುಡುಗ ಇವಳ ಹತ್ತಿರ ಬಂದು , ನಾನು ನಿನಗೆ ಸಹಾಯ ಮಾಡುತ್ತೇನೆ ಎಂದ. ಗೀತಾಳಿಗೂ ಏನೋ ಸಂತೋಷವಾಯಿತು. ಸರಿ ಅಲ್ಲಿಗೆ ಅವಳಿಗೆ ಮತ್ತೊಬ್ಬ ಗೆಳೆಯನ ಪರಿಚಯ. ಅವನು ಇವಳ ಹತ್ತಿರ ಮಾತನಾಡುತ್ತ ಇವಳ ಮನೆಯ ಬಗ್ಗೆ ಅಣ್ಣ ತಮ್ಮಂದಿರ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಾನೆ. ಮಾತು ಮಾತಿನಲ್ಲಿ ಅವಳ ಕೆಲಸ ಕೂಡಾ ಮಾಡಿಮುಗಿಸುತ್ತಾನೆ. ಮರುದಿನ ರಾಜ್ ನನ್ನು ಭೇಟಿ ಮಾಡಿ ಅವಳು ನಡೆದ ವಿಷಯವನ್ನು ಹೇಳುತ್ತಾಳೆ. ಓಹೋ ಪರ್ವಾಗಿಲ್ಲವೇ ನಿನಗೂ ಫ಼ಯ್ಯಾನು ಇದ್ದಾರೆ ಅಂತ ಗೊತ್ತಿರಲಿಲ್ಲ ಅಂತ ಜೋಕ್ ಮಾಡುತ್ತಾನೆ. ಇನ್ನು ರಾಜ್ ನ ವಿಚಾರ, ರಾಜ್ ಗೆ ಸಹಾಯ ಮಾಡಿದ ಗೆಳತಿ ಸುಮನಾ ಬಹಳ ದಿನಗಳಾದ ಮೇಲೆ ಭೇಟಿಯಾಗುತ್ತಾಳೆ. ಇವರುಗಳು ಬರೀ ಓದಿನ ಬಗ್ಗೆ ಅಷ್ಟೇ ಮಾತಾಡುತ್ತಿದ್ದರು. ಯಾವ ವಿಷಯಕ್ಕೆ ಯಾವ ಪುಸ್ತಕ ರೆಫರ್ ಮಾಡಬೇಕು, ಯಾವ ಪುಸ್ತಕದಲ್ಲಿ ಅರ್ಥ ಚೆನ್ನಾಗಿ ಕೊಟ್ಟಿದ್ದಾರೆ. ಆಗಾಗ ಗೀತಾ ರಾಜ್ ಗೆ ಸುಮನಾಳ ಹೆಸರು ಹಿಡಿದು ಕಾಡಿಸುವುದು. ಈ ಎಲ್ಲಾ ಸಂಗತಿಗಳು ನಡೆಯುತ್ತಿದ್ದಂತೆಯೇ ಮತ್ತೆ ಪರೀಕ್ಷೆಗಳು ಸಮೀಪಿಸುತ್ತವೆ. ಎಲ್ಲರೂ ತಯ್ಯಾರಿಯಲ್ಲಿ ತೊಡಗುತ್ತಾರೆ. ರಣರಣ ಬಿಸಿಲಲ್ಲಿ ಪರೀಕ್ಷೆ ಬರೆಯುವ ಕಸರತ್ತು ಯಾರಿಗೂ ಬೇಡಪ್ಪಾ ಅನಿಸುತ್ತಿತ್ತು ಆದರೆ ಏನು ಮಾಡುವುದು ಬರಿಯಲೇ ಬೇಕಲ್ಲವೆ.. ಒಂದು ತಿಂಗಳ ಕಾಲ ನಡೆದ ಪರೀಕ್ಷೆ ಅಂತ್ರು ಮುಗಿಯುತ್ತದೆ. ರಜಾ ದಿನಗಳು ಗೆಳೆಯರಲ್ಲಿ ಯಾರಿಗೂ ಭೇಟಿಯೇ ಇಲ್ಲಾ…ತಿಂಗಳ ಬಳಿಕ ಮತ್ತೆ ಕಾಲೇಜು ಶುರು.. ಹೊಸ ಸಿಲೆಬಸ್ಸು ಹೊಸ ಪುಸ್ತಕಗಳು ಹೊಸ ಉಪಕರ್ಣಗಳ ಹೊಂದಿಸಿಕೊಳ್ಳುವುದರಲ್ಲಿ ಮೊತ್ತೊಂದು ತಿಂಗಳು ಕಳೆದೇ ಹೋಯ್ತು. ರಿಜಲ್ಟ ಸಮಯ, ಈ ಸಾರಿ ರಾಜ್ ನ ಗೆಳತಿ ಸುಮನಾ ಡಿಸ್ಟಿಂಗಷನ್ ನಲ್ಲಿ ಪಾಸಾಗಿರುತ್ತಾಳೆ, ಅವಳ ಮಾರ್ಗ ದರ್ಶನ ಪಡೆದು ಅವನು ಕೂಡಾ ಒಳ್ಳೆಯ ಅಂಕ ಪಡೆದಿರುತ್ತಾನೆ. ಎಲ್ಲಾ ಗೆಳೆಯರು ಉತ್ತೀರ್ಣರಾಗಿ ಸಂಭ್ರಮಿಸುತ್ತಿರುತ್ತಾರೆ.., ಅಷ್ಟರಲ್ಲಿ ರಾಜ್ ಗೆ ಗೀತಾಳ ಬಗ್ಗೆ ತಲೆಗೆ ಬರುತ್ತದೆ, ಅಯ್ಯೊ ಅವಳಿಗೆ ನಾನು ಮಾತನಾಡಿಸಿಯೇ ಇಲ್ಲಾ ಅವಳು ಕೋಪಿಸಿಕೊಳ್ಳುತ್ತಾಳೆ ಅಂತಾ ಹುಡುಕಲಾರಂಭಿಸುತ್ತಾನೆ, ಎಲ್ಲಿ ನೋಡಿದರೂ ಅವಳು ಸಿಗುವುದಿಲ್ಲ…ಬೆಳಿಗ್ಗೆ ತಾನೆ ಅವಳನ್ನ ನೋಡಿದ್ದೆ ಆದರೆ ಈಗ ಎಲ್ಲಿಗೆ ಹೋದಳು..?? ಕಾಲೇಜೆಲ್ಲಾ ಹುಡುಕಾಡಿದರೂ ಅವಳ ಸುಳಿವಿಲ್ಲ. ಅವಳ ಗೆಳತಿಯೊಬ್ಬಳಿಗೆ ವಿಚಾರಿಸಲು…, ಇಲ್ಲಾ ರಾಜ್ ಅವಳು ಒoದು ವಿಷಯದಲ್ಲಿ ನಪಾಸಾಗಿದ್ದಾಳೆ ಆ ದುಃಖ ತಾಳಲಾರದೇ ಅವಳು ಮನೆಗೆ ಹೊರಟು ಹೋದಳು ಎಂದಳು. ಗೆಳತಿಯ ಬಗ್ಗೆ ಅರಿತು ಅವನಿಗೂ ಕೂಡಾ ದುಃಖವಾಗುತ್ತದೆ. ಅವಳಿಗೆ ಹೇಗೆ ಮಾತನಾಡಿಸುವುದು ಅಂತಾ ತಿಳಿಯದೇ ರಾಜ್ ಸುಮ್ಮನಾಗಿಬಿಡುತ್ತಾನೆ. ಅವಳು ಕಾಲೇಜಿಗೆ ಬಂದಾಗ ಮಾತನಾಡಿದರಾಯ್ತು ಅನ್ನುತ್ತಾ. ಆದರೆ ಅವಳು ವಾರದ ಮೇಲಾದರೂ ಕಾಲೇಜಿಗೆ ಬರುವುದಿಲ್ಲ. ಬೇಸರಗೊಂಡು ರಾಜ್ ಅವಳ ಮನೆಗೆ ಪೋನು ಮಾಡುತ್ತಾನೆ ಯಾರೂ ತೆಗೆಯುವುದಿಲ್ಲ. ಅರ್ಧ ಘಂಟೆ ಕಳೆದ ನಂತರ ಗೀತಾನೇ ಪೋನು ಮಾಡುತ್ತಾಳೆ. ಸಾರಿ ಕಣೋ ಇಷ್ಟೊಂದು ದಿನ ನಿನ್ನ ಹತ್ತಿರ ಮಾತನಾಡಲಿಲ್ಲ ಅಂದಳು, ಅದು ಇರ್ಲಿ ಬಿಡು ಏಕೆ ಹೀಗಾಯ್ತು ? ಎನೋ ಕಣೋ ನನ್ನ ತಲೆಗೆ ಕೆಲವೊಂದು ಸಾರಿ ಓದಿದ್ದು ಸೇರುವುದೇ ಇಲ್ಲಾ ಅನಿಸುತ್ತೆ. ಹೋಗ್ಲಿ ಬಿಡು ಮುಂದಿನ ಸಾರಿ ಕಟ್ಟಿ ಪಾಸು ಮಾಡಿಕೊಳ್ಳುತ್ತೇನೆ. ನಾಳಿನಿಂದ ಕಾಲೇಜಿಗೆ  ಬರುತ್ತೇನೆ ಅಲ್ಲೆ ಸಿಗುತ್ತೇನೆ, ಎಂದು ಕಾಲ್ ಕಟ್ಟ ಮಾಡುತ್ತಾಳೆ. (ಮುಂದುವರೆವುದು..)

ಜಾತಿ ರಾಜ್ಯಕೀಯ

ಜಾತಿ ರಾಜ್ಯಕೀಯ ಮಾಡುತ್ತಾರೆ ಅಂತಾ ಭಾಷಣ ಹೊಡೆಯುತ್ತಿದ್ದ ರಾಜಕಾರಣಿ
ತನ್ನ ಪ್ರತಿಯೊಂದು ಮಾತಿನಲ್ಲೂ ತನ್ನ ಜಾತಿಯ ಪ್ರಸ್ತಾಪಿಸುತ್ತಿದ್ದ !!

ಜನನಾಯಕರೋ / ನಾಲಾಯಕರೋ??

ಅಪ್ಪನ ದುಡ್ಡಿನಲ್ಲಿಕೊಂಡನು
ಕೋಟಿ ಕೋಟಿ ಕೊಟ್ಟು
ದುಬಾರಿ ಕಾರು !
ಅಪ್ಪ ಸಲ್ಲಿಸಿದನು ಮನವಿ,
ಉಪಯೋಗಿಸಿದ್ದ ಕಾರು
ಬೇಡ ನನಗೆ,
ಕೊಡಿಸಿರಿ...
ನನಗೊಂದು ಹೊಸ ಕಾರು !

ಮಾಯ

ಅವಳ ಅಮ್ಮನಿಂದ ಬೈಯಿಸಿಕೊಂಡು ಅಳುತ್ತಾ ಹೆಚ್ಚುತ್ತಿದ್ದಳು ಇರುಳ್ಳಿ ಮೆಣಸಿನಕಾಯಿ
ಮಾತುಗಳು ಸಾಕಾಗಲಿಲ್ಲ ರಮಿಸಲು ಅವಳನ್ನು, ಗಲ್ಲಕ್ಕೆ ಮುತ್ತಿಟ್ಟು ಓಡಿ ,ದೂರ ನಿಂತು ನೋಡಿದೆ...
ನೆಲಕ್ಕೆ ಉರುಳಿದ ಹನಿಗಳಲ್ಲಿ ಅವಳ ನಿರಾಳ ನಗು,ಕಣ್ಣುಗಳಲ್ಲೂ ಕಣ್ಣೀರು ಮಂಗಮಾಯ !

ತಳಮಳ

ನಲ್ಲೆ ನಿನ್ನ ಮುಂಗುರುಳಿಗು ನನಗೂ ಒಂದೇ ಜಗಳ
ನಿನಗೆ ಮುತ್ತಿಡಲು ತರಬೇಕು ದಿನವೂ ಒಂದು ಮಲ್ಲಿಗೆ ಮಳ
ಆ ಮುಂಗುರುಳು ಉಚಿತವಾಗಿ ಮುತ್ತಿಕ್ಕುವುದ ಕಂಡು ನನ್ನೆದೆಗೆ ತಳಮಳ !

Friday, July 05, 2013

ಸಮ್ಮತಿ

ಕದ್ದು ಕದ್ದು ನೋಡುತ್ತಿದ್ದ ಕಣ್ಣುಗಳ ಕಂಡು..

ಕಣ್ಣ ಮಿಟುಕಿಸಿ ರವಾನಿಸಿದ ಸಂದೇಶವ.

ನಾಚುತ್ತಿದ್ದ ಕಣ್ಣುಗಳ ಅರಳಿಸಿ..

ನಸು ನಗೆಯ ಚೆಲ್ಲಿ , ಸಮ್ಮತಿಸಿದಳು !

ವಿರಸ


=======

ದಿನ ದಿನ ಇದಿರು ಬದಿರು ಆದರೂ

ಅಲ್ಲಿ ಮಾತುಗಳಿಲ್ಲ

ಕಣ್ಣು ಕಣ್ಣು ಕಲಿತರೂ

ಯಾವ ಸನ್ನೆಯೂ ಅಲ್ಲಿಲ್ಲ

ಅವನ ನಿರೀಕ್ಷೆ ಸುಳ್ಳಾದರೂ

ಅವಳಿಗೆ ಏನಾಗಿದೆ ಅಂತಾ ತಿಳಿಯಲಿಲ್ಲಿ

ಅವನ ಗೆಳೆತನ ಇವಳಿಗೆ ಬೇಕಿಲ್ಲ

ಇವಳ ಸ್ನೇಹದ ಅವಶ್ಯಕತೆ ಅವನಿಗೂ ಇಲ್ಲ !!

--------------------------------

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...