Wednesday, January 29, 2020

ಶೂನ್ಯದ ಮಹಿಮೆ

ಒಂದರಿಂದ ಒಂಬತ್ತು
ಶೂನ್ಯನಿಗೂ
ಕೊಡುವುದು ಗಮ್ಮತ್ತು !
ಶೂನ್ಯದಿಂದ
ಉಗಮಿಸಿದ ಪ್ರಾಣ,
ಶ್ರಮಿಸಿ ಪ್ರಯೋಗಿಸು
ಸಂಖ್ಯೆಗಳ ಬಾಣ
ಜೀವನುದ್ದುಕ್ಕೂ
ನೆಮ್ಮದಿಯ ಝಣ-ಝಣ ಕಾಂಚಾಣ !!

ಮುಗಿಲೆತ್ತರಕ್ಕೆ ಹಾರಲಿ ಕೀರ್ತಿ

ಜೀವನ ಎಂದಿಗೂ
ಯಾರಿಗೂ ಸುಗಮವಲ್ಲ !

ಕಷ್ಟ ಪಟ್ಟು ಕಲಿತ ವಿಧ್ಯೆ
ಎಂದಿಗೂ ವ್ಯರ್ಥವಲ್ಲ !

ದಿಟ್ಟ ಧೇಯದಿ ಮುನ್ನಡೆದರೆ
ಸಾಧಕನಿಗೆ ಸೋಲಿಲ್ಲ !

ಬದುಕು ಬವಣೆಯ ಸಾಗರ,
ಮುನ್ನುಗ್ಗಿ ನಡೆ ಸರ-ಸರ !

ಕಾದಿಹುದು ಗುರಿ ಅಲ್ಲಿ…,
ದಾರಿಯೇ ಎದ್ದು ಕಾದಿದೆ ಇಲ್ಲಿ! 

ಬಂದು ಬಿಡಬಾರೋ ಓ ಧೀರಾ,
ನಿನ್ನ ಮೇಲೆ ನಂಬಿಕೆ ಅಪಾರ !

ಛಲದಿಂದ ಗೆಲ್ಲುವ ಮೂರ್ತಿ,
ಮುಗಿಲೆತ್ತರಕ್ಕೆ ಹಾರಲಿ ಕೀರ್ತಿ !

Friday, January 17, 2020

ಬುಸುಗುಡುವ ಸರ್ಪಗಳು

ಬುಸುಗುಟ್ಟುತ್ತಿವೆ
ಕಾಳ ಸರ್ಪಗಳು
ಬೀದಿ ಬೀದಿಗಳಲ್ಲಿ !

ವಿಷವ ಉಗುಳುತ್ತಾ
ಹೊಗೆಯ ರೂಪದಲಿ
ತೇಲಿಹರು ಸುಖದ ನಶೆಯಲಿ!

ವರುಶಗಳ ಕೊಪವಲ್ಲ
ಬರಿ ಸ್ವಾರ್ಥದ ಚಟ
ಹಾದು ಹೋಗುವವರಿಗೂ ತಪ್ಪದು ಕಂಟಕ !

ಎಲ್ಲೆಲ್ಲಿಯೂ ಕಪ್ಪು ಚಾಯೆ
ಕೊಲ್ಲುವ ವಿಷಕಾರಿ ಧೂಮ್ರ
ಶ್ವಾಶಕೋಶವೆಂಬುದು ಸೇದುವ ಕೈಗಾರಿಕಾ ಕೇಂದ್ರ !

ಚಿಗ್ರಿ ಬಂತ ಚಿಗ್ರಿ


ಚಿಗ್ರಿ ಚಿಗ್ರಿ ಅವಳಿನಗರದ ಕುದುರಿ
ಬ್ಯಾಸಿಗ್ಯಾಗ ಹವಾನಿಯಂತ್ರಿತ ಸಫಾರಿ !

ಮಳಿಗಾಲಕ್ಕ ಬೆಚ್ಚಗಿನ ಸವಾರಿ
ನೀರ ನಿಂತ್ರ ಟೋಲ್ ನಾಕಾದಾಗ..., ಚಿಗ್ರಿಗೆ ಬೈಬ್ಯಾಡ್ರಿ !

ದೊಡ್ಡ ದೊಡ್ಡ ಗಾಜಿನ ಕಿಡಕಿ
ಹೊರ್ಗ ನೋಡಾಕ ಕುಂತ್ರ ಇಲ್ಲಾ ಬ್ಯಾಸರ್ಕಿ !

ಬಯಲಾಗಿಂದು ಕೇಳಂಗಿಲ್ಲಾ ಯಾವ ಸಪ್ಳಾ
ಆಕಾಶವಾಣ್ಯಾಗಿನ ಚೊಲೋ ಹಾಡ್ ಕೇಳ್ರಲ್ಲಾ !

ಎಲ್ಲಾ ನಿಲ್ದಾಣಕ್ಕೂ ಬರಾಕ ಮೊದಲ
ಒದರಿ ಹೇಳ್ತದ ತಂಗುದಾಣದ ಹೆಸರ !

ಕಂಡಕ್ಟರ ಇಲ್ಲದ ಬಸ್ಸು ಚಾಲಕಂಗ ಓಡಸೋದು ಕಷ್ಟ
ಗಾಡಿ ನಿಲ್ಲಿಸಾಕ..,ಅಲ್ಲಿ ಒಂದು ಗುಂಡಿ ಒತ್ತ !

ಕೈ ಹಾಕಿದ್ದಲ್ಲೆಲ್ಲಾ ನಿಲ್ಲಂಗಿಲ್ಲಾ ನಮ್ಮ ಕುದುರಿ
ಮೈ ಮರ್ತ ಮಲ್ಕೊಂಡೋರು ಧಾರ್ವಾಡ/ಹುಬ್ಬಳ್ಳಿ ತಲುಪೋದು ಖಾತ್ರಿ !!

------------ಭಾವಪ್ರಿಯ------------



Thursday, January 16, 2020

ನಿರೀಕ್ಷಣೆ


ಮನದ ಮುಗಿಲಲ್ಲಿ
ಹಾರುತಿದೆ ಗೆಳತಿ
ಬಣ್ಣ ಬಣ್ಣದ
ಗಾಳಿ ಪಟ
ನಿನ್ನ ಕಂಪನ್ನು ಸೂಸುತಿದೆ
ಪವನ ತಂದ ಸುಗಂಧ !

ದಿನವೂ  ಕಾಡುತಿದೆ
ಆ ನಿನ್ನ ಮೊಗವು
ಕರ್ಣಗಳಲ್ಲಿ ತೂಗುವ
ಆ ತೂಗಿಕೆಗಳು...,
ಅಸೂಯೆ ಪಟ್ಟ, ನನ್ನ ಅದರಗಳು
ಕೊರಗುತಿವೆ, ನೀಡಲಾಗದ " ಮುತ್ತುಗಳಿಗೆ " !!

ಹರಿಣಗಳ ನಯನಗಳಂತೆ
ಹೊಳೆವ ಆ ಹೊಳಪು
ಕಾಡುತಿದೆ ಹಗಳಿರುಳಲ್ಲೂ..
ಅಕ್ಷಿಗಳು ಕುಕ್ಕುವಂತೆ
ಇನ್ನು ಈ ಜೀವಕೆ
ಸುಪ್ತಿ ಎಲ್ಲಿ...?

ನಿನ್ನ ತುಂಟು
ನಗೆಯ ಆಟಗಳು...
ಮುಂಗುರುಳ ಸರಿಸುವ ಪರಿ
ಮಡುಹುದಿದೆ ಎನ್ನ
ಜೀವಾಳ....ಇನ್ನೂ ಕಾಯಬೇಕೆಷ್ಟು
ಮಿಡಿತಗಳ ಆವರ್ತಿ..?

ನಿರೀಕ್ಷಿಸುತ್ತಿರುವೆ
ನಿನ್ನ ಬರುವಿಗಾಗಿ..
ಮಿಟುಗದೇ ಕಾದಿವೆ
ನೆತ್ರಗಳು.., ವಿರಾಮವಿಲ್ಲದೆ
ಪ್ರೀಯೆ ..ಇನ್ನೂ ಬಾರದಾಗಿಹೆ
ನೀನೆಲ್ಲಿ ???

****ಭಾವಪ್ರಿಯ****

Tuesday, January 14, 2020

ಸಂಕ್ರಾಂತಿ ಸುಗ್ಗಿ

ಸುಗ್ಗಿ ಬಂತು ಸುಗ್ಗಿ
ಸೂರ್ಯನ ಆರಾಧಿಸುವ ಸುಗ್ಗಿ
ಉತ್ತರಾಯಣದ ಪಯಣದಾರಂಬದ ಸುಗ್ಗಿ
ತೀಕ್ಷಣ ಕಿರಣಗಳ ಚೆಲ್ಲುವ ಸುಗ್ಗಿ
ಚಳಿಯಿಂದ ಬೆಚ್ಚಗೆ ತೆರಳುವಾ ಸುಗ್ಗಿ
ಪೂರ್ವದಲ್ಲಿ ಉದಯಿಸಿದ ಸೂರ್ಯ ಪಶ್ಚಿಮಕ್ಕೆ ತೆರಳೊ ಸುಗ್ಗಿ
ಹಗಲಿರುಳುಗಳು ಸಮಾನವಾದ ಸುಗ್ಗಿ
ಶುಭಕಾರ್ಯಗಳಿಗೆ ಮುಹೂರ್ತದ ಸುಗ್ಗಿ
ಸೂರ್ಯನು ಮಕರ ರಾಶಿಯ ಪ್ರವೇಸಿಸುವ ಸುಗ್ಗಿ ||

ಸುಗ್ಗಿ ಬಂತು ಸುಗ್ಗಿ
ರೈತರ ಫಸಲು ಕಟಾವಿನ ಸುಗ್ಗಿ
ಬೆಳೆದ ಬೆಳೆಯಾ ಪೂಜಿಸೊ ಸುಗ್ಗಿ
ವರ್ಷದಿಂದೊರುಷಕೆ ಬೆಳೆ ವೃದ್ದಿಸೋಕೆ ಸುಗ್ಗಿ
ದನಕರುಗಳ ಸಿಂಗರಿಸಿ, ಮೆರವಣಿಗೆಯ ಸುಗ್ಗಿ
ಕೆಂಡವ ಹಾಸಿ, ಕಿಚ್ಚು ಹಾಯಿಸುವ ಸುಗ್ಗಿ
ಜಲ್ಲಿಕಟ್ಟಿನ ಓಟದ ಸ್ಪರ್ಧೆಯ ಸುಗ್ಗಿ
ಗೆದ್ದ ಗೂಳಿಯ ಸನ್ಮಾನಿಸುವ ಸುಗ್ಗಿ
ಅಯ್ಯಪನ ದರುಶನ,ಮಕರ ಜ್ಯೋತಿಯ ಕಾಣುವ ಸುಗ್ಗಿ ||

ಸುಗ್ಗಿ ಬಂತು ಸುಗ್ಗಿ
ಹೆಣ್ಣುಮಕ್ಕಳ ಸಡಗರದ ಸುಗ್ಗಿ
ಬಣ್ಣಗಳ ತುಂಬಿ ರಂಗೋಲಿ ಬಿಡಿಸುವ ಸುಗ್ಗಿ
ಸಿಹಿ ಸಿಹಿ ತಿನಿಸುಗಳ ಮಾಡುವ ಸುಗ್ಗಿ
ನವವಿವಾಹಿತ ಮಹಿಳೆಗಯರು ಬಾಳೆಹಣ್ಣು ವಿತರಿಸುವ ಸುಗ್ಗಿ
ಮಕ್ಕಳಿಗೆ ಹೊಸ ಬಟ್ಟೆ ಧರಿಸುವ ಸುಗ್ಗಿ
ಗಾಳಿಪಟ ಮಾಡಿ ಎತ್ತರಕ್ಕೆ ಹಾರಿಸುವ ಸುಗ್ಗಿ
ಸಿಹಿ ಕಬ್ಬಿನ ರಸ ಹೀರುವ ಸುಗ್ಗಿ
ಎಳ್ಳು,ಬೆಲ್ಲ, ಸಕ್ಕರೆಯ ಅಚ್ಚು ಸವೆಯುವಾ ಸುಗ್ಗಿ ||

ಜೋಳಿಗೆ

ಸೋಮವಾರದಂದು ಶಿವನ ಪೂಜೆ
ಮುಕ್ಕಣ್ಣನೇ ನೀಡೊ ವರ ನನಗೆ !
ಶಿಶುಗಳ ಒಲವಿಗೆ ಕಾದಿಹೆನು ದೇವಾ 
ಪಡೆದು ಪಾತ್ರನಾಗುವೆ ನಿನ್ನ ಕೃಪೆಗೆ !!

ಮಂಗಳವಾರದಂದು ಮಂಗಳಮೂರ್ತಿಯ ಪೂಜಿಪೆ
ವಿಘ್ನಗಳ ನಿವಾರಿಸೋ ಗಣನಾಥನೆ..!
ಮೋದಕ ಪ್ರೀಯ ಪಾರ್ವತಿ ಕಂದ
ತುಂಬಿ ಬಿಡು ಗಣಪಾ, ನನ್ನ ಜೋಳಿಗೆ !!

ಬುಧುವಾರದಂದು ಮೇಘ ಶಾಮನ ನೆನೆವೆ
ನನ್ನವರ ಒಡಗೂಡಿ ನಿನ್ನ ಆರಾಧಿಸುವೆ
ಹೂವುಗಳ ಕರುಣಿಸೋ ಓ ವಾಸುದೈವನೇ
ನಗೆಯ ನೀಡೋ..,ಆಡಲಿ ಕಂದನು ಎನ್ನ ಮಡಿಲೊಳಗೆ !!

ಗುರುವಾರದಂದು ಗುರುರಾಯರ ಆರಾಧಿಸುವೆ
ತುಂಗೆಯ ತಟದಿ ಮಿಂದು ದರುಶನ ಪಡೆದೆ
ನಿನ್ನ ಬಜನೆಗೆ ಕುಣಿಯೋ ಗೋಪಾಲನ
ದಯಪಾಲಿಸೋ ಬಾಲಕೃಷ್ಣನ ಯಶೋದೆಯಾಗಿ ನಾನು ಬೇಡಿಪೆ !!

ಶುಕ್ರವಾರದಂದು ಮಹಾಲಕ್ಷ್ಮೀಯ ವೃತ
ಕಳಸವ ಶೃಂಗರಿಸಿ, ಸೀರೆಯ ಉಡಿಸಿ
ಭಕ್ತಿಯಿಂದ ವೈಭವದಿ ಪೂಜಿಸುವೆ
ಲಕ್ಷ್ಮೀಯ ಕರುಣಿಸೇ ಸಂತಾನಲಕ್ಷ್ಮಿ, ಭಜಿಸುವೆ ನಾ ಅಷ್ಟಲಕ್ಷ್ಮಿ !!

ಶನಿವಾರದಂದು ಹನುಮನ ನೆನೆಸುವೆ
ಕೇಸರಿನಂದನ, ಅಂಜನಾ ಪ್ರೀಯನೆ
ತಾಯಿಯ ಆರಾಧಕನೆ, ರಾಮ ಅನುಜನೆ
ಆಶಿರ್ವಧಿಸು, ಬಾಲಹನುಮ ಪರಿಯ ಕಂದ ನನದಾಗಿಸು !!

ಭಾನುವಾರ ಮೈಲಾರಲಿಂಗೈಯಾ
ಭಂಡಾರ ಶೋಭಿತ ನೀನಯ್ಯಾ
ಹಾಲ ಅಭಿಷೇಕವ ನೆರವೇರಿಸುವೆ...
ಹಾಲ್ಗೆನ್ನೆಯ ಕಂದನ ಕರುಣಿಸಯ್ಯಾ...!

ವಿಧ ವಿಧ ದೇವರ ಬೇಡುವೆನಯ್ಯಾ...,
ಕರುಣಿಸಿ ಕಂದನ ನನಗಯ್ಯಾ
ತಾಯಿಯ ಮಡಿಲ ತುಂಬಿರಯ್ಯಾ....,
ಕೃಪಾಕರಿಸಿರೇ ದೇವರೆಲ್ಲಾ...!!

Monday, January 13, 2020

ನಮ್ಮ ಗಣಪ


ನಮ್ಮ ಪ್ರೀತಿಯ ಮುದ್ದು ಗಣಪ
ನೆಗಡಿಗೆ ರಾತ್ರಿಯಲ್ಲ ನಿದ್ದೆ ಗೆಟ್ಟ

ಕಿರಿಕಿರಿಯ ಅನುಭವಿಸಿ ಸುಸ್ತಾಗಿ ಬಿಟ್ಟ
ನಸುಕಿನ ತಂಪಿಗೆ ಸಂಪಾಗಿ ಮಲಗಿಬಿಟ್ಟ

ಅವ್ವನಿಗೆ ರಾತ್ರಿ ನಿದ್ದ್ರೆಯೇ ಇಲ್ಲಾ
ಗಣಪ ಮಲಗಿದ ವೇಳೆ.., ಸಿಹಿ ಸಕ್ಕರೆ ಬೆಲ್ಲ !!

ಶುಭ ಮುಂಜಾನೆ

ಇಬ್ಬನಿಯ ಮುಸುಕು ಭುವಿಯ ಮಾಚಿದಿದೆ
ತಂಪಿಗೆ ನಡುಗಿದೆ ಗರಿಕೆ-ಹುಲ್ಲ ಹಾಸಿಗೆ !

ಗಿಡದಲ್ಲಿ ಹಕ್ಕಿಗಳು ಚಳಿಗೆ ಮುದುಡಿ ಕೂತಿವೆ
ಕಂಟಿಯಲ್ಲಿ ಮಲಗಿದ ಗುಲಾಬಿ ಅರಳಿ ನಗೆಯ ಬೀರಿದೆ !

ಹೊದಿಕೆಯ ಒದ್ದು, ಎದ್ದು ಬಾರೋ ಸೂರ್ಯ
ಜಗವೆಲ್ಲಾ ನಿನ್ನಯ ಆಗಮನಕ್ಕೆ ರೆಪ್ಪೆಬಿಚ್ಚಿ ಕಾದಿದೆ !!

ನನ್ನ ಪ್ರೇಮ ತರಂಗ

ಕೂಗುತಿದೆ ಮನಸ್ಸಿನ ಕೋಳಿ ಹುಂಜ
ನೀನೆ ಕವನಕೆ ಸ್ಪೂರ್ತಿ ಪದಗಳ ಪುಂಜ ||

ಪೋಣಿಸುತ್ತಿರುವೆ ಹೂಗಳ ನಲ್ಮೆಯ ಸುಗಂಧ
ನಿನ್ನ ಹೃದಯಕೆ ಮುಟ್ಟಲಿ ನನ್ನ ಪ್ರೇಮ ತರಂಗ ||

ಮಿಂದು ಖುಷಿಯಲಿ ಜೊತೆ ಸಾಗಲಿ ನೌಕೆ
ಮನವರಿಕೆ ಮಾಡಿಕೋ ನೀನು ಬರಿ ನನ್ನಾಕೆ ||

ಅರಿಯೇ ಪ್ರೀಯೆ ನನ್ನ ಪ್ರೀತಿಯ ಸಾರ
ಒಡಗೂಡಿ ಈಜೋಣು ಬಾ, ಒಲವಿನ ಸಾಗರ !!

Thursday, January 09, 2020

ಅಪ್ಪನ ಸಂಪತ್ತು

ಗುಂಡು ಮೊಗದ ಗುಂಡಣ್ಣ
ಹೊಳೆವ ನಯನಗಳು, ತ್ವಚೆ ಶ್ವೇತ ವರ್ಣ ||

ಗುಬ್ಬಿಯಂತೆ ಬಾಯಿ ತೆರೆದ
ಮುಗುಳ ನಗುವು ಚಂದ ||

ನಲಿದಾಡುತ ಅಪ್ಪನ ತೋಳಲ್ಲಿ
ಎದೆಗೆ ಒತ್ತುತ್ತಿವೆ ಪುಟ್ಟ ಹೆಜ್ಜೆಗಳಿಲ್ಲಿ ||

ಚಿಕ್ಕ ಅಂಗೈಗಳ ಜೋಡಿಸಿ
ಎದೆಗೆ ಮುಷ್ಟಿಗಳ ಹಚ್ಚಿ ಒರೆಗಿಸಿ ||

ನಮಸ್ಕರಿಸುವಂತೆ ಚೀಪುತ್ತಾ ಬೆರಳು
ಖುಶಿಯ ಹಂಚುತ್ತಿರುವ ಕರುಣಾಳು ||

ಆಗಾಗ ನಗುತಿರುವನು ಅಪ್ಪನ ಚೇಷ್ಟೆಗೆ
ಕೂಡುವುದ ಕಲಿತಿರದ ಕೂಸು ಪದೆ ಪದೆ ನೀಡುತ್ತ ಅಪ್ಪುಗೆ ||

ಮುದ್ದು ಮುದ್ದು ಕಂದನ ಪ್ರತಿ ಹರಕತ್ತು
ಸವೆದ ಅಪ್ಪನಿಗೆ ಬೇಕೇನು ಇನ್ಯಾವ ಸಂಪತ್ತು ||

ಹಿಂದಿತ್ತೊಂದು ಕಾಲ

ವಿಶಾಲವಾಗಿತ್ತು ಭಾರತ
ವಿಧವಿಧವಿತ್ತು ಜಾತಿಮತ
ಧರ್ಮಗಳು ಇದ್ದರೂ ಸಾವಿರಾರು
ಭೇದ ಭಾವ ಮೆರೆಯದ ಜನರು
ಸಂತೋಷದಿಂದ ಕೂಡಿ ಬಾಳುತ್ತಿದ್ದರು !!

ಶ್ರೀಮಂತರು, ಬಡವರು, ಇರ್ವರೂ ಇದ್ದರು
ದೊಡ್ಡಸ್ತಿಕೆ ತೋರದೇ ಜೊತೆಯಲ್ಲೆ ದುಡಿಯುತ್ತಿದ್ದರು
ಕಷ್ಟಗಳು ಯಾರಿಗೇ ಬಂದರು
ಒಬ್ಬೊಬ್ಬರಿಗೂ ಅಣಿಯಾಗುತ್ತಿದ್ದರು
ಸಹಬಾಳ್ವೆಯೇ ಮಂತ್ರವ ನಂಬಿದ್ದರು !!

ವಿಶ್ವಕ್ಕೆ ಹೆಸರಾದ ಸಿರಿ ಸಂಪತ್ತು
ಪರಕೀಯ ಜನರ ತಲೆ ಕೆಡಿಸಿತ್ತು
ಸೌಹಾರ್ದತೆಯ ಮುರಿಯಲು ಕಸರತ್ತು ನಡೆದಿತ್ತು
ವಿಷದ ಬೀಜ ಬಿತ್ತುವ ಕಾಯಕ ಎಗ್ಗಿಲ್ಲದೇ ಸಾಗಿತ್ತು
ವೈಷಮ್ಯದ ಗಾಳಿ ಧೂಳಲ್ಲಿ ತೂರಿ ಎಲ್ಲರ ಎದೆಯ ಹೊಕ್ಕಿತ್ತು !!

ಸಿರಿವಂತ, ಕಿರಿವಂತ, ಮೇಲ್ವರ್ಗ ಕೆಳವರ್ಗ
ಜಾತಿಗೀತಿ, ಆ ಧರ್ಮ ಈ ಧರ್ಮ
ಮೆದುಳ ಹೊಕ್ಕ ಹುಳಗಳು ಬುದ್ಧಿಯ ತಿಂದದ್ದವು
ಅರಿಯದಾ ಜನರ ಮಂಕು ಯೋಚನೆಗಳು
ಅಸೂಯೆ ಪಟ್ಟು ಒಬ್ಬರಿಗೊಬ್ಬರು ವೈರಿಗಳಾದರು !!

ಎಲ್ಲಿ ಉಳಿವುಂಟು ಮನುಸಂಕುಲಕೆ
ಪ್ರೀತಿ, ಕಾಳಜಿಯ ಮರೆತ ಜಗಕೆ
ಭೂಮಿಯೂ ಉರಿದೈತೆ ನೋಡಾ
ತಪ್ಪು ಮಾಡದ ಪ್ರಾಣಿ ಸಂಕುಲವೂ ದ್ವಂಸ
ಗ್ರಹಣ ಬಡಿದೈತೆ ಪ್ರತಿ ಜೀವಕೆ, ಇನ್ನೆಲ್ಲಿ ಊಳಿಗಾಲ !!

ಯಾವುದು ಪ್ರಗತಿಯ ಹಾದಿ ?

ಹಾದಿ ಬೀದಿಗಳೆಲ್ಲಾ ತೋಡಿ
ನೋಡು ಹಾರೈತಿ ಕೆಂಪು ಹುಡಿ ||

ತೆಗ್ಗು-ದಿಣ್ಣೆ, ಕಣಿವೆಗಳ ರಸ್ತೆ
ಕುಣಿಯುತ್ತಾ ಸಾಗುವವರ, ನೋಡು ಅವಸ್ತೆ ||

ಧೂಳು ಮುಳುಗಿ ಮಾರಿಯಲ್ಲಾ
ಜೀಕ್ಯಾಡಿ ಸಾಗ್ಯಾರ ಹಾದ್ಯಾಗೆಲ್ಲಾ ||

ಉಡಾಳ ಮುದುಕನ ಒಂಟಿ ಹಗೆ
ಊರ ಜನರೆಲ್ಲಾ ಬೆಂದು, ಆಡೈತಿ ಹೊಗೆ ||

ಬೇಸತ್ತ ಮನಷ್ಯಾರ ಜೀವ ನಾಡಿ
ತಿಣಕ್ಯಾಡ್ಕೋತ ನಡದೈತಿ ಜೀವನದ ಗಾಡಿ ||

ಬೆನ್ನ ಮ್ಯಾಲ ಬಿದ್ದ ಬಾರುಕೋಲ ಏಟಿಗೆ
ದುಡು ದುಡನ ನಡದೈತಿ ಚಕ್ಕಡಿ ಮನಿಕಡೆಗೆ ||

ಗುಡಸಲದಾಗ ಕೂತ ಹೆಂಡತಿ ಮಕ್ಕಳ ಸೊಂಡಿ
ಎಲ್ಲಿ ಹುಡ್ಕೊಂಡು ಹೋದ್ರ ಸಿಗತೈತಿ ನೆಮ್ಮದಿ ಮಂಡಿ. ?

Monday, January 06, 2020

ಮುದ್ದು ಬಂಗಾರ

ಮುದ್ದು ಮೊಗದ ಸರ್ದಾರ
ಬೊಚ್ಚು ಬಾಯಿನ ಹಮ್ಮೀರ

ಗುಬ್ಬಿಯ ನಿದ್ದಿ ಮಾಡುವವ
ಹಸಿವಾದರೇ ಕಿಟಾರನೆ ಚೀರುವವ

ಹಾಲುಣಲು ಅಮ್ಮನ ಮಡಿಲಲ್ಲಿ ನಿರ್ಲಿಪ್ತ
ಅವಳ ತೋಳಗೆ ಅವನೆಂದಿಗೂ ಆಪ್ತ

ಎತ್ತಿಕೊಂಡರೆ ಹೆಗಲಲ್ಲಿ ವಿರಾಜಮಾನ
ಅಂಗಾತ ಮಲಗಿಸಿದರೇ ವಿಪರೀತ ಬಿಗುಮಾನ

ಇನ್ನೂ ಬೆನ್ನು ನಿಲ್ಲದ ಶೂರ
ಕೂತುಕೊಳ್ಳಲೇ ಬೇಕೆಂಬ ಕಾತುರ

ಅಪ್ಪನ ಹೊಟ್ಟೆ ಒರೆಗಿ ಕೂತರೆ ಶಾಂತ
ಕೈ ಎತ್ತಿ ಹಿಡಿದರೆ ಕಾಳುಗಳ ಕುಣಿಸುವಾತ

ಆಡಿಸಿ ನಗುತಿರೆ ಅಪ್ಪನ ಜೊತೆ..,ಅವನ ಆಟ
ಅವನ ಮುಗುಳು ನಗೆ ಎಲ್ಲರಿಗೂ ರಸದೂಟ !!

Friday, January 03, 2020

ಹೊಸ ವರುಷ

ಕಳೆದ ವರ್ಷದ ಸವಿ ನೆನಪುಗಳು ಬಹಳ,
ಕನಸುಗಳು ಸಾರ್ಥಕ ಗೋಳಿಸಿದ್ದವು ಅನುಕ್ಷಣ
ಜೀವನದ ಏರಿಳಿತಗಳು ಎತ್ತೆತ್ತರ,
ಬಾಳಿನ ಬಹುಪಾಲು ಪ್ರಶ್ನೆಗಳಿಗೆ ದೊರೆಯಿತು ಉತ್ತರ,
ಬದುಕಿನ ಅರ್ಥ ಕೊಟ್ಟ ಕಂದನ ಆಗಮನ,
ಅವನ ನಗು, ಆಟ, ಹಠ ಏನೋ ಪರಿಪಾಠ,
ಹೆಚ್ಚುತ್ತಿರುವ ಜವಾಬ್ದಾರಿಗಳು ನಿರ್ವಹಿಸಲು ಬೇಕು ಹೊಸ ಹುಮ್ಮಸ್ಸು,
ಸವಿ ಕ್ಷಣಗಳ ಬುತ್ತಿ ಕಟ್ಟಿ ಮುಂದೊಂದು ದಿನ ಮೆಲಕು ಹಾಕೋಣ,
ನವ ವರುಷವ ಹರುಷದಿಂದ ಬರ ಮಾಡಿಕೊಳ್ಳೋಣ,
ಹೊಸ ಸವಾಲುಗಳ ಬೆನ್ನ ಹತ್ತಿ,
ಧೈರ್ಯ ಸಾಹಸಗಳ ಕರಗತಗೊಳಿಸಿ ಮುನ್ನುಗ್ಗಿ,
ಗುರಿಯತ್ತ ಸಾಗಲಿ ಕುದುರೆ ಸವಾರಿ,
ಹೊಸ ಯುಗದ ನಾಗಾಲೋಕವಿದು,
ಸೇಣೆಸಿ ಪ್ರತಿ ಯುದ್ಧವ ಗೆಲ್ಲೋಣ,
ಎಂದಿಗೂ ಬರೆಯದ ಇತಿಹಾಸಕ್ಕೆ ನಾಂದಿ ಹಾಡೋಣ !!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...