Tuesday, October 08, 2019

ಅತಿವೃಷ್ಟಿ

ಮತ್ತೆ ಶುರು..,
ಆ ವರುಣನ ಆರ್ಭಟ !
ತಪ್ಪುತ್ತಿಲ್ಲ ಇನ್ನೂ..,
ಸಂತ್ರಸ್ತರ ಸಂಕಟ !
ಭಯದಿಂದಲೇ..,
ಅನುದಿನವೂ ಬದುಕು !
ಒಪ್ಪತ್ತನ ಗಂಜಿಗೂ..,
ಕಾಣದ ದಿಕ್ಕು !
ಅತಿವೃಷ್ಟಿಗೆ..,
ಮನೆ ಕೊಚ್ಚಿ ಹೋಗಿದೆ !
ಸೂರು ಇಲ್ಲದೇ..,
ಜೀವಗಳು ನಲುಗಿವೆ !
ಮಳೆ ನಿಲ್ಲುವ..,
ಸೂಚನೆಯೇ ಇಲ್ಲ !
ಕಾಪಾಡುವ ಪರಿ..,
ಯಾವ ದೇವರು ಬಲ್ಲ ??
ಸಂತ್ರಸ್ತರ ಪಾಡು...,
ಹೇಳ ತೀರದ್ದು !
ದಾಟಬೇಕಿದೆ ಅವರು..., ಸಮಸ್ಯೆಗಳ ಸರಹದ್ದು...!!!

----ಸುನಿಲ್ ಅಗಡಿ----

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...