Tuesday, May 22, 2012

ಮುಕ್ತಿ

ಹೆಣೆಯ ಮೇಲೆ ಮೂರು ರೇಖೆ
ಬರಹವನ್ನೇ ಬದಲಾಯಿಸಲಿಲ್ಲ ಏಕೆ ?
ಶಿವ ವಿಭೂತಿ ಬರೆದಹಾಗೆ
ನನ್ನ ಪೂಜೆ ಫಲಿಸದೇಕೆ ?
ಹೊಸ ಜೀವನ ಕಾಣುವ ಬಯಕೆ
ಕನಸುಗಳು ಪೂರ್ಣಗೊಳ್ಳದೇಕೆ  ?
ಕಲ್ಲು ಮುಳ್ಳುಗಳ ಕೂಡಿರುವ  ದಾರಿಗೆ
ಕೊನೆಯೇ ಕಾಣುತ್ತಿಲ್ಲ ಇನ್ನೂ ಏಕೆ ?
ಹೊರಟೆ.., ಗಂಟು  ಮೂಟೆಯ ಕಟ್ಟಿ
ಕೈ ಬಿಸಿ ಕರೆವ ಯಮ ಪಾಶಕೆ ..
ಮುಕ್ತಿಸಿಗಲಿ ಎನಗೆ ದೇವಾ.. ನಿನ್ನ ಸನಿಧಿಯೊಳಗೆ..!
 

ನೆನಪು



ಗೆದ್ದ ಸಂತೋಷವ ಹಂಚಿಕೊಂಡ ಸಿಹಿ ನೆನಪು

ಕಳೆದುಕೊಂಡ ವಸ್ತು ನೆನಪಿಗೆ ಬಾರದ ನೆನಪು

ಅವಿಸ್ಮರಣೀಯ ಕ್ಷಣ ಮರುಕಳಿಸಿದ ನೆನಪು

ವಿಷಾದಕರ ಸಂಗತಿ ಕೊಟ್ಟ ಕಹಿ ನೆನಪು

ನವ ಜೀವವು ಬಾಳಲ್ಲಿ ಕಾಲಿಟ್ಟ ದಿನದ ನೆನಪು

ಅಗಲಿದವರ ನೆನೆದು ಅತ್ತಂತ ನೆನಪು

ಜೀವನವೇ ಹೀಗೆ ನೆನಪುಗಳ ಸಾಗರ

ಸಿಹಿ ಕಹಿ ಏರು ಇಳಿತಗಳ ಸಪ್ತಸಾಗರ



ಭಾವಪ್ರಿಯ

Friday, May 18, 2012

आपको देखते ही अर्मान जागता है


आपका ख्याल आतेही दिल झूमता है

हर वक़्त, बे वक़्त आप ऐसे मंडराते है

हर घडी आपके सात रहने का दिल करता है

हो ना हो हम आपको चाहने लगे है

... क्यूंकि.. हर पल हर जगह हम आपको ही देखते है



                                                                                    -भावप्रिय

Thursday, May 17, 2012

ನಲ್ಲೆ :


ಕುಸುಮದೊಳಗಿನ ಮಂಜಿನ ಹನಿಯಂತೆ
ಹುಣ್ಣಿಮೆ ಸೊಬಗ ಸವಿಯುವ ಕವಿಯಂತೆ
ಪ್ರೇಮಿಗಳ ಕಣ್ಣ ಸನ್ನೆಯಂತೆ
ಸದಾ ನಗುತಿರು ನಿನ್ನ ನಗುವಿನುಸಿರಲಿ ನನ್ನ ಹೆಸರು ಬರೆದು...


ನಲ್ಲ :

ನಾ ಕುಸುಮವಾದರೆ ನೀನೆ ನನ್ನ ಮಂಜಿನ ಹನಿ
ಹುಣ್ಣಿಮೆಗೆ ಸೊಬಗು ನೀಡುವ ಚಂದಿರನು ನೀ
ನಿನ್ನ ನಗುವಲ್ಲೇ ನನ್ನ ನಗು ಕಾಣುವೆ
ಉಸಿರು ಉಸಿರಲ್ಲಿ ಬೆರೆತು ಬಿಡು ನೀ ....!

Tuesday, May 15, 2012

ನಮ್ಮ ಕಾರುಗಳು ....!!!

ಬೀಟ್ ಚೊಲೋ ಐತಿ ನೋಡಾಕ,
ಜಾಗ ಬಹಳ ಇಲ್ಲ ಕೂಡಾಕ.!
ಸ್ಪಾರ್ಕ್ ಬೀದಿಗೆ ಬಂದರೆ,
ಅನ್ಯರಿಗೆ ಬಹಳ ತೊಂದರೆ.!
ತವೇರನಮ್ಮ ಚಿಲುಮೆ,
ಬೃಹತ್ ಸಂಸ್ಥೆಗಳಿಗೆ ಇದರ ಮೇಲೆ ಒಲುಮೆ.!
ಆಪ್ಟ್ರಾ ನಮ್ಮ ವಿಶಾಲ ವಾಹನ ,
ಬಾಳಲ್ಲಿ ತರುವುದು ವಿಲಾಸಿ ಜೀವನ .!
ಕ್ಯಾಪ್ಟಿವ ಬಲು ಜೋರು,
ಇದು ಬರಿ ದೊಡ್ಡವರ ಕಾರು !
ಕ್ರುಜು ಕಂಡರೆ ಜನರು ಎನುತಿಹರು,
ಅಲ್ಲಿ ನೋಡು... ರಾಜ ಬರುತಿಹರು.!

कडुवा सच्च...!!!


सच्च केहेने वालों को लोग मानते नहीं
सच्चाई की रास्ते में कबी फूल खिलते नहीं
दर्द भरी सच्चाई में कोई जीना चाहता नहीं
झूठे लोगों की ही दरबार है हर जगह
बेईमानी की हर जगह कदर
जूट की साम्राज्य में सत्य का निर्नाम
कहाँ गया वो गांधीजी का आदर्ष
सज्जन लोग कर रहें संघर्ष
कब होगा इन जैसे लोगों का नाश
कब मिलेगा इंसानियत को आस ..!

ಅವಳ ಕೂಗು

ತಂದೆ ತಾಯಿರ ಮನೆಯ ತೊರೆದು
ಅಣ್ಣ ತಂಗಿಯ ಸ್ನೇಹ ಮರೆತು
ನಂಬಿ ನಿನ್ನಂಗಳಕೆ ಬಂದಿಹಳು
ತನ್ನ ಪ್ರೀತಿ ಎಲ್ಲಾ ನಿನಗೆರೆದು
ನಿನ್ನ ಕೊಂಚ ವಾತ್ಸಲ್ಯವ ಬಯಸಿಹಳು
ಏಕೆ ತಿಳಿಯದಾಗಿದೆ ನಿನಗೆ .., ಅವಳ ಕೂಗು ?

ನಗುವುದ ಮರೆತಿಹಳು
ಮೊಗವು ಇಳಿದಾಗಿ ಚಿಂತೆಯಲೇ ಮುಳುಗಿಹಳು
ಬಾಳುವ ಆಸೆ ನುಚ್ಚುನೂರಾಗಲು
ಏಕೆ ಆಲಿಸದೆ ಹೋದೆ ನೀ ಅವಳ ಒಳ ದನಿಯ
ಮರಳಿಸು ಅವಳ ಮುಗುಳು ನಗೆಯ..
ಏಕೆ ತಿಳಿಯದಾಗಿದೆ ನಿನಗೆ .., ಅವಳ ಕೂಗು ?

ನಿರ್ಲಕ್ಷಿಸುವುದು ತರವಲ್ಲ ನಿನಗೆ
ಆ ಜೀವವು ಇಲ್ಲವಾದರೆ ನಿನ್ನೊಂದಿಗೆ
ಅವಳ ಕೊರೆತೆಯು ಕಾಡುವುದು ಎಂದೆಂದಿಗೂ
ಬಾಳು ಹಸಿರಾಗುವ ಆಲೋಚನೆಯ ಬೆಳಸಿಕೊ
ಸಮಯ ಮೀರುವ ಮುನ್ನ ಎಚ್ಚೆದ್ದುಕೋ
ಇನ್ನಾದರೂ ಅರೆತು ಬಿಡು ನೀ...ಅವಳ ಕೂಗು ..!

-ಭಾವಪ್ರಿಯ

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...