Thursday, August 27, 2009

ಕಳ್ಳನ ಮನಸ್ಸು ಹುಳ್ಳಹುಳ್ಳಗೆ

ಕಳ್ಳನ ಮನಸ್ಸು ಹುಳ್ಳಹುಳ್ಳಗೆ

ಸುಳ್ಳನ ಅಳುಕು ತಪ್ಪು ಮುಚ್ಚುವವರೆಗೆ

ಸತ್ಯವ ಮರಿಸಲು ಅಳುವ ನಾಟಕ

ಸುಳ್ಳಿನ ನಷ್ಟ ತಪ್ಪಿಸಲು ಗೋಳಿಡುವ ನಾಟಕ

ಹರಿ ಇಲ್ಲದೆ ನಾಲಿಗೆ ರೋಜ್ಜಿನಂತೆ ಹರಿದಿರಲು

ಕ್ಷುಲ್ಲಕ ಜನರಿವರು ಮತಿಯೇ ಇಲ್ಲದೆ ಮಾತನಾಡಿಹರು

ಇವರಿವರ ಕುಡಿಗೆ ಕುತ್ತು ತರುವ ಇವರು

ಪ್ರೀತಿಯ ಅರಿಯದೆ ತೋರಿಕೆಯ ಅಭಿಮಾನ ತೋರಿಹರು

ಕೈಯಲಾಗದ ಇವರು ಅತ್ತು ಕರೆದು ಸಮಯವ ಸಾದಿಸಿಹರು

ಇವರ ಮಟ್ಟ ಇಲ್ಲಿಯವರೆಗೆ .... ನಾ ಕಾಣಿಸುವೆನು ದಾರಿ ಇವರಿಗೆ ಕೊನೆಯವರೆಗೆ ...!

Wednesday, August 26, 2009

ಧೀರ ಧೀಮಂತ...!

ಧೀರ ಧೀಮಂತ ಈ ಘಟ
ನ್ಯಾಯ ನಯವಾದ ನನ್ನ ಹಠ
ಅಡಗಿಸಿ ನಿನ್ನಯ ಹುಟ್ಟು
ಬಡಿದು ಬಗ್ಗಿಸುವೆ ನಿನ್ನ
ಸೇರಿಸುವತನಕ ನಿನಗೆ ಮಠ
ಕ್ರೂರಿ ಕಪಟಿ ಮೋಸ ಜಾಲದ ಮಾಟಗಾತಿ
ನಿನ್ನ ಘರ್ವವ ಮೆಟ್ಟಿ ನಿಲ್ಲುವ ತನಕ
ನಾ ಸುಮ್ಮನೆ ಕೂಡೆನು ..!

ಉಪ್ಪು ತಿಂದವನು......!

ಉಪ್ಪು ತಿಂದವನು ನೀರು ಕುಡಿಯಲೇ ಬೇಕು
ತಪ್ಪು ಮಾಡಿದವನು ಅದನ್ನು ಭರಿಸಲೇಬೇಕು
ಮೆಲ್ಲ ಮೆಲ್ಲನೆ ಮಜ್ಜಿಗೆ ಕಡಿದರೆ
ಅಜ್ಜಿಗೆ ತಿಳಿಯಲಿಲ್ಲ ಎಂದು ತಿಳಿಯ ಬೇಡವೋ ಮೂಢ
ನಿ ಚಾಪೆಯ ಕೆಳಗೆ ನುಸುಳಿದರೆ ...ನಾ ರಂಗೋಲಿ ಕೆಳಗೆ ತೂರುವ ಜಾಣ ...!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...