Wednesday, April 28, 2010

ಬೇಕಾಗಿದ್ದರೆ...!

ವಿಧ್ಯಾರ್ಹತೆ : ಹೆಚ್ಚು ಕಲಿತವಳಿರದಿದ್ದರು ಪರವಾಗಿಲ್ಲ ,
ಭುಧ್ಧಿವಂತಳಾಗಿರಬೇಕು ..!
ಹೆಚ್ಚು ಅಂಕಗಳಿಸದಿದ್ದರು ಪರವಾಗಿಲ್ಲ ,
ಅಂಕೆಶಾಸ್ತ್ರ ಬಲ್ಲವಳಾಗಿರಬೇಕು...!
ಪಾಕ ಪ್ರವಿಣೆ ಆಗಬೇಕಿಲ್ಲ ,
ಅಡುಗೆ ಬಲ್ಲವಳಾಗಿದ್ದರೆ ಸಾಕು ..!
ಪ್ರೀತಿಯೇ ಅರಿಯದಿದ್ದರು ಪರವಾಗಿಲ್ಲ
ಮನಸ್ಸಿನ ಮಾತು ತಿಳಿದುಕೊಂಡರೆ ಸಾಕು..!
ಹೃದಯ ಬಡಿತ ಕೇಳಿಸದಿದ್ದರೂ ಪರವಾಗಿಲ್ಲ ,
ತುಡಿತಕ್ಕೆ ಮಿಡಿಯುವಂತವಳಾಗಿರಬೇಕು ..!
ಜೀವನವೆಂಬುದು ತಿಳಿಯದಿದ್ದರೂ ಪರವಾಗಿಲ್ಲ,
ಬಾಳುವೆ ಎಂಬ ಆತ್ಮವಿಶ್ವಾಸವಿದ್ದವಳು ಬೇಕು ..!
ಹೀಗೆಂದು ಒಬ್ಬ ಮಡದಿ ಬಾಳ ಸಂಗಾತಿಯಾಗಿ ಬೇಕು...!

Tuesday, April 27, 2010

ಓ ಒಲವೆ ತಡ ಮಾಡದೆ ಬಾ....!!!

ನನ್ನ ಚೆಲುವಿನ ಒಲವೆ
ನನ್ನನು ಕಾಯಿಸುವುದು ತರವೇ
ನಿನ್ನ ಕಾಣಲು ಕಾತುರದಿ ನಾ ಕಾದಿರುವೆ
ಬಾರದೆ ನಿ ಏಕೆ , ಹೀಗೆ ಮೌನವಾಗಿರುವೆ ?

ನನ್ನ ಹೃದಯದ ಬಡಿತವೆ
ನನ್ನ ಬಡಿತದ ತುಡಿತವ ನಿ ಅರಿಯೆ
ನಿನ್ನ ಬರ ಮಾಡಿಕೊಳ್ಳಲು ನಾ ಅರಸುತಿರುವೆ
ಉಸಿರಿಗೆ ಉಸಿರಾಗಲು ಹೀಗೇಕೆ ನಿನಗೆ ನಾಚಿಕೆ ..?

ನನ್ನ ಪ್ರೀತಿಯ ಪಾತ್ರವೇ
ನನ್ನ ಒಲುಮೆಗೆ ಒಡತಿಯೇ
ನನ್ನ ಬಾಳ ಕಥೆಯನ್ನು ಹೆಣೆಯುವಳೇ
ನಿನ್ನ ಸಾಲುಗಳಿಲ್ಲದೆ ಈ ಕಥೆಯು ಮುಂದುವರಿಯುವುದೇ..?

ನನ್ನಯ ನಂಬಿಕೆಯ ಉಳಿಸಿ
ನನ್ನಯ ವಿಶ್ವಾಸವ ಗಳಸಿ
ನನ್ನ ಲೋಕವ ರಾರಾಜಿಸಲು
ರತ್ನ ಕಂಬಳಿಯ ಹಾಸಿ ನಾ, ನಿನ್ನ ದಾರಿಯನ್ನೇ ನೋಡುತಿರುವೆ...!

ಓ ಒಲವೆ ತಡ ಮಾಡದೆ ಬಾ..! ನಿ ಎಲ್ಲಿಯೇ ಇದ್ದರು ಓಡೋಡಿ ಬಾ...!!

ಮುಂಜಾನೆಯ ಒಂದು ದಿನ...!!!

ಮುಂಜಾನೆಯ ಮಂಜಿನಲ್ಲಿ ನಡಿದು ಬರುತಿದ್ದಳು  
ಮೆಲ್ಲ ಮೆಲ್ಲನೆ ಹೆಜ್ಜೆಯ ಮೇಲೆ ಹೆಜ್ಜೆಯನಿಡುತ್ತ
ದಿಟ್ಟ ಧ್ಯೇಯದಿ  ಆತ್ಮವಿಶ್ವಾಸದಿ ಮುನ್ನುಗ್ಗುತಿದ್ದಳು   
ಕಾಲ ಗೆಜ್ಜೆಯದು ಜ್ಹಲ್ ಜ್ಹಲ್ ಎಂದು ಗುಣುಗಿದ್ದವು
ಕಿವಿಯ ಜುಮುಕಿಗಳು ಅಲುಗಾಡಿ ಕುಣಿದಿದ್ದವು
ಬಳೆಗೆ ಬಳೆ ತಗುಲಿ ಗಂಟೆಗಳು ಮೊಳಗಿದಹಾಗೆ    
ಅವಳ ಕಂಗಳ ತೇಜಸ್ಸು ಪ್ರಕಾಶ ಚೆಲ್ಲಿದ ಹಾಗೆ
ಅವಳು ನಡೆದು ಬಂದ ಹಾದಿಗೆ ಬೆಳಕು ಚೆಲ್ಲಿದೆ 
ಹೀಗೆಂದು ವರ್ಣಿಸಲು ನಾನು ಅವಳಿಗಂದೆ
ನಿಮ್ಮ ಗೆಜ್ಜೆ ಸದ್ದು ನಮ್ಮನ್ನು ಕದಡಿದೆ ಎಂದೇ 
ಅದಕ್ಕೆ ಅವಳು ಕಿವಿಗಳನ್ನ ಮುಚ್ಚಿಕೊಳ್ಳಿ ಎಂದಳು....!!!  
***************************************
~ ಭಾವಪ್ರಿಯ ~

Monday, April 26, 2010

ಮುಂಗಾರು ಮಳೆಯಲ್ಲಿ ಮುಂಗುರುಳ ಬಾಲೆ...!

ಮುಂಗಾರು ಮಳೆಯಲ್ಲಿ ಕಂಡೆ ಮುಂಗುರುಳ ಬಾಲೆ...!
ಹನಿ ಹನಿಯು ತೋಟಕುತಿತ್ತು ಅವಳ ಹಣೆಯ ಮೇಲೆ ...!
ಕಪ್ಪೆ ಚಿಪ್ಪಿನೊಳಗೆ ಕುಳಿತಂತೆ ಅವಳ ಕಣ್ಣು ಕಣಗಿಲೆ  ...!
ಮೊಗದಲ್ಲಿ  ಅರಳಿದೆ ಕೆಂಪು ನಗೆಯ ಅಲೆ...!
ತುಟಿಗಳು ಅದರಿ , ಮೂಡಿಸಿದೆ ನವ ಚಿತ್ರದ  ಕಲೆ  ..!
ಹೃದಯದಲ್ಲಿ ಹರಿದಿದೆ ಪ್ರೇಮ ಕವಿತೆಯ  ಹೊಳೆ ..!
ಆ ಮಳೆಯ ಸ್ಪರ್ಶ ಬೀಸಿದೆ ಒಲವಿನ ಬಲೆ...!
ಹನಿಗಳಲ್ಲಿ ನೆನೆಯಲು  , ನೆನಪಿಗೆ ಬರುವಳು ನನ್ನ ನಲ್ಲೆ..!  
ಮನ ತುಂಬಿ ನನ್ನವಳು ಉಕ್ಕಿಸುತಿರುವಳ ಪ್ರೀತಿಯ  ಹೂ ಮಳೆ .!
ಮುಂಗಾರಿನ  ಮಳೆಯೇ ನಿಜವಾಗಿಯೂ , ಏನು ನಿನ್ನಯ ಇ ಲೀಲೆ ...?  
 
************************************************************

Tuesday, April 20, 2010

ಯಾರನ್ನು ಹೇಗೆ ನಂಬಲಿ ...?

ಮೊಸಕರೆ ವಂಚಕರೆ ಕೂಡಿರುವ ಜಗದಲ್ಲಿ
ಆಪ್ತರೋ ಸ್ನೇಹಿತರೋ ಯಾರನ್ನು ನಂಬಲಿ ..?
ಪ್ರೀತಿ ಪಾತ್ರರೋ ..ಅಥವ ಪ್ರೀತಿಸಿ ವಂಚಿಸುವವರೋ
ಹುಸಿ ಪ್ರೀತಿಯ ತೋರಿ ಬೆನ್ನಲ್ಲಿ ಚೂರಿ ಹಾಕಿದವರೋ
ಶಶಿವರ್ಣವ ಕಂಡು , ಕೀಚಕ ಮನವ ಅರಿಯದೆ ಹೋದೆ
ನಂಬಿಕೆ ಶಬ್ದಕ್ಕೆ ಮಸಿ ಬಳಿದವರ ...
ವಿಶ್ವಾಸ ಗಳಿಸಲು ಕಪಟ ನಾಟಕವಾಡಿದವರ ....
ಯಾರನ್ನು ಹೇಗೆ ನಂಬಲಿ ಶಿವ....ಯಾರನ್ನು ಹೇಗೆ ನಂಬಲಿ...?

==================================ಭಾವಪ್ರಿಯ

ಕರುನಾಡಿನಲ್ಲಿ ಮುಂಗಾರು ಮಳೆಯ ಆರ್ಭಟ...

ಕರುನಾಡಿನಲ್ಲಿ ಮುಂಗಾರು ಮಳೆಯ ಆರ್ಭಟ...
ರೆಂಬೆ, ಕೊಂಬೆಗಳು ನೆಲಕ್ಕೆ ಉರುಳಿ ಧುಳಿಪಟ...
ಉರಿ ಬಿಸಿಲಿನ ತವೆಗೆ ನಿರೆರೆಚಿದ ಹಾಗೆ..
ತಲೆಯ ತಟ್ಟಿ ಎಣ್ಣೆಯ ಬಡಿದಹಾಗೆ..
ಧೂಳು ಕಡ್ಡಿ ಕಸ ಗಾಳಿಯಲ್ಲಿ ತೂರಿ ,
ಕಪ್ಪನೆಯ ಮೋಡಗಳು ಸಿಟ್ಟಿಗೆದ್ದು ಸುರುದಿರಲು ,
ಚಟ ಪಟನೆ ಪೆಟ್ಟು ತಿಂದು ಭೂಮಿ ಕರಗಿ ನಿಂತಿಹಳು ..
ಮೈಯೊಡ್ಡಿ ಬಳಕುತ ಹಸಿರನುಟ್ಟು ಮೆರೆದಿಹಳು...!

-ಭಾವಪ್ರಿಯ

Thursday, April 08, 2010

ಮಿಂಚು

ಸೂರ್ಯನು ಮೋಡದೊಳಗೆ ಮರೆಯಾಗಿ
ಭೂಮಿಯಲ್ಲಿ ಕತ್ತಲು ಆವರಿಸಿದಾಗ
ಆ ದೇವರು ತಗೆಯುವ ಛಾಯಚಿತ್ರವೇ ಇ ಮಿಂಚು...!!!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...