Sunday, February 17, 2013

ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು..)


ಒಬ್ಬ ಸುಂದರ ಯುವಕ, ಮನಸಲ್ಲಿ ಸಂದರ ಕನಸ್ಸುಗಳು, ಗುರಿಯ ಬೆನ್ನ ಹತ್ತಿ ಶ್ರದ್ದೆಯಿಂದ ಮುನ್ನುಗುತ್ತಿದ್ದ. ಪದವಿ ಪಡೆದು ಕೆಲಸಕ್ಕೆ ಅಲೆಯುವ ಕಾಲವದು.ಮಹಾನಗರಿ ಇನ್ನೂ ಅವನಿಗೆ ಹೊಸದು.ಜನರ ಸಂಪರ್ಕ ಕಡಿಮೆ.ದಿನ ಪತ್ರಿಕೆಗಳನ್ನೆ ನೋಡುತ್ತಾ ಚಿಕ್ಕ ಮಟ್ಟ ಕೆಲಸವಾದರೂ ಸರಿಯೆ ಎಂದು ಹೊರೆಟವ. ತಿಂಗಳು ಕಳೆದವು ಅವನ ಹಣೆಬರಹ ದಯತೋರಲಿಲ್ಲ ಅವನಿಗೆ..ಮರಳಿ ತವರಿಗೆ ಮರಳಿದ. ತಂದೆ ನಿವ್ರುತ್ತ ಅಧಿಕಾರಿ, ಬರುವ ಪೆನಶನ್ ಹಣದಿಂದನೆ ಮನೆ ಸಾಗಿಸಬೇಕು, ತಮ್ಮಂದಿರು ಇನ್ನೂ ವಿದ್ಯಾಬ್ಯಾಸ ಮಾಡುತ್ತಿದ್ದರು.ಬೆಳೆದು ನಿಂತ ಮಗ ಪದವಿ ಮುಗಿಸಿದರೂ ಕೆಲಸ ಸಿಗುವಲ್ಲಿ ಬವಣಿಸುವುದ ಕಂಡು ತಾಯಿ-ತಂದೆಗೂ ಬೇಸರ..ಮನಸಿನ ವೇದನೆ ಹೇಳಿಕೊಳ್ಳಾಲಾರದ ಪರಿಸ್ತಿಥಿ ನವ ಯುವಕನಿಗೆ. ಹೇಗೋ ಪ್ರಯತ್ನದಿಂದ ಒಂದು ಸಣ್ಣ ವಾಹನಗಳ ರಿಪೇರಿ ಮಾಡುವ ಅಂಗಡಿಯಲ್ಲಿ ಕೆಲಸಗಿಟ್ಟಿದ..ಕೆಲಸ ಯಾವುದಾದರೇನು ಎಂದು ಶ್ರದ್ದೆಯಿಂದ ದುಡಿಯತೊಡಗಿದ.ರಾತ್ರಿವೇಳೆಯಲ್ಲಿ ಓದುವುದು, ಬೇರೆ ಸಂಸ್ಠೆಗಳಿಗೆ ಸಂದರ್ಶನ ನೀಡುವುದು ಸಾಮಾನ್ಯವಾಗಿಬಿಟ್ಟಿತ್ತು. ಶ್ರಮ ಪಡುವವರಿಗೆ ದೇವರು ಎಂದಿಗೂ ಕೈ ಬಿಡುವುದಿಲ್ಲ ಅನ್ನುವ ಸಾಕ್ಷಿಯಾಗಿ ಆ ಯುವಕನಿಗೆ ದೂರದ ಹೋರ ರಾಜ್ಯದಲ್ಲೊಂದು ಕೆಲಸ ದೊರೆಯಿತು. ಹೋರ ರಾಜ್ಯಕ್ಕೆ ತೆರಳಬೇಕಾದಾಗ ೫೦೦೦/- ರೂ ಒಟ್ಟು ಹಾಕಲಾರದೇ ಕೆಲಸ ಕಳೆದು ಕೊಳ್ಳುವ ಆ ಸಮಯ ಮನಸ್ಸಿಗೆ ಬೇಸರ ಉಂಟು ಮಾಡಿತ್ತು..ತಂದೆಗೆ ಕೇಳಬೇಕೆಂದರೆ ತಮ್ಮಂದಿರ ವಿದ್ಯಾಬ್ಯಾಸ ಎಲ್ಲಾ ಖರ್ಚುವೆಚ್ಚಗಳ ನೆನೆದು ಸುಮ್ಮನಾದ...ದಾರಿ ಇಲ್ಲದೇ ಇದ್ದ ಕೆಲಸವನ್ನೆ ಮುಂದುವರೆಬೇಕು ವೆಂಬ ನಿರ್ಧಾರಕ್ಕೆ ಬರುತ್ತಾನೆ. ವಿಷಯ ತಿಳಿದ ಮಾಲಿಕ ಅವನ ಶ್ರದ್ದೆಗೆ ಮೆಚ್ಚಿ ೫೦೦೦/- ಕೊಟ್ಟು ಅವನ ಭವಿಶ್ಯ ರೂಪಿಸಿಕೊಳ್ಳಲು ಹೇಳಿ ಕಳಿಸುತ್ತಾನೆ...( ಮುಂದುವರೆವುದು...)

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...