Friday, February 28, 2014

ಮೂಢರು

ಮೆಹೆಂದಿಯ ರಂಗು ಭಾಗ್ಯ ತರಲಿಲ್ಲ ಅವಳಿಗೆ

ಸಂಬಂಧಗಳ ಮಹತ್ವ ತಿಳಿಯದ ಮೂಢೆಗೆ

ಬಾಳು ಹಸುನಾಗುತ್ತಿತ್ತು ಹೇಗೆ ಮೂಢ ನಂಬಿಕೆಗೆ ?

Wednesday, February 26, 2014

ಆರಾಧನೆ

ಅವನ ಕಲ್ಪನೆಯಲ್ಲಿ ಹುಟ್ಟಿದ ಕನ್ಯೆಯ ಕುರಿತು..

ಬರೆದಿಹನು ಸಾವಿರ ಕವನ !

ಅವಳು, ಅವನೇ ವರವಾಗಿ ಬೇಕು ಅಂತಾ ಬಯಸುತ್ತಾ..

ಮಾಡಿಹಳು ಪೂಜಾ,ಹವನ !!

Tuesday, February 25, 2014

ಪಾಕಪ್ರವೀಣ

ಈ ಕಲಿಯುಗದಲ್ಲಿ ಹೆಣ್ಣುಮಕ್ಕಳಿಗಿಂತಲೂ ಗಂಡು ಮಕ್ಕಳೇ ಪಾಕಶಾಸ್ತ್ರದಲ್ಲಿ  ಪ್ರಾವಿಣ್ಯತೆ ಹೊಂದಿದ್ದಾರೆ , ನಂಬುವುದಿಲ್ಲವೇ ? ಉದಾಹರಣೆಗೆ : ನಮ್ಮ ಸುನಿಲ ನನ್ನೇ ತೊಗೊಳಿ, ಅವನು ಗೊಲಾಕಾರದ ಚಪಾತಿಗಳು, ಕ್ಯಾಬೇಜು ಪಲ್ಯಾ, ಅನ್ನ , ನುಗ್ಗೆಕಾಯಿ ಸಾರು , ಕ್ಯಾರೆಟ್ & ಮೂಲಂಗಿ ಸಾಲಡ್ಡು ಎಲ್ಲವೂ ಒಂದೇ ಗಂಟೆಯಲ್ಲಿ ತಯ್ಯಾರ ಮಾಡುತ್ತಾನೆ. ;) :D 

THOUGHT FOR THE DAY

People who walkout of relation with their EGO can gain nothing. People who are left out will get a greater experience and turn expertise in every field they walk through.

ಪ್ರೀತಿ

ಚಿನ್ನ ರನ್ನ ಬೇಡ ನನಗೆ..

ತಿಜೋರಿ ಸೇರುವ ದರ್ಜೆ..!

ಹೃದಯದಲ್ಲಿ ಬಂಧಿಸು ಸಾಕು

ಕೊಡು ನನಗೆ ಪ್ರೀತಿಯ ಸಜೆ !!



Friday, February 21, 2014

God Says..

God Says
" The reason why some people have turned against you and walked away from you without reason...has nothing to do with you. It is because I have removed them from your life because they cannot go where I'M taking you next. They would only hinder you at the next level because they have already served their purpose in your life. Let them GO and keep moving. GREATER is coming your way...says the Lord.

Courtesy : Internet

ನಡೆದು ಬಿಡು ಮುಂದೆ !!

ಆ ಹೃದಯಕೆ ಒಲವಿನ ಪರಿವಿಲ್ಲ

ಆ ಮನಸ್ಸಿಗೆ ಪ್ರೀತಿಯ ಬೆಲೆ ತಿಳಿದಿಲ್ಲ

ಭಾವನೆಗಳು ಅದಕೆ ಮುಟ್ಟುವುದಿಲ್ಲ

ನಡೆದು ಬಿಡು ಮುಂದೆ !!


ಗರ ಬಡಿದವರಿಗೆ ಬಿಡಿಸಲೂ ಬಹುದು

ಹಣದ ಹಿಂದೆ ಹೆಣಗಾಡುವರಿಗೆ

ಮಾನವನ ಭಾವಗಳು ತಿಳಿಯುವುದಿಲ್ಲ

ನಡೆದು ಬಿಡು ಮುಂದೆ !!


ದಾರಿ ತಪ್ಪಿದವರಿಗೆ ತಿದ್ದಿ ತೀಡಲೂ ಬಹುದು

ಅಟ್ಟಹಾಸದಿ ಸೊಕ್ಕಿನಲಿ ಮೆರೆಯುವರಿಗೆ

ತಿಳುವಳಿಕೆಯ ಮಾತು ಮನ ಹೊಕ್ಕುವುದಿಲ್ಲ

ನಡೆದು ಬಿಡು ಮುಂದೆ !!


ದೊಡ್ಡವರಂತಿರುವರು ಅನುಭವ ಹೊಂದಿರಬಹುದು

ನೀತಿಯ ಬೋಧಿಸಿದರೂ ಅರಿಯದವರಿಗೆ

ಮಚ್ಚಿಯ ಪೆಟ್ಟು ಕೂಡಾ ಕಲಿಸಲಾಗದು

ನಡೆದು ಬಿಡು ಮುಂದೆ !!


ನಿರೀಕ್ಷಣೆಯ ಸಮಯ ಮಿತಿ ಮೀರಿತು

ತಿರುಗಿ ಬರಲಾರದು ಇನ್ನೆಂದೂ

ಕಾದು ಕಾದಿಟ್ಟು ಇನ್ನು ಫಲವಿಲ್ಲ

ನಡೆದು ಬಿಡು ಮುಂದೆ !!

Thursday, February 20, 2014

ಚೆಲುವೆ

ನಸುಕಿನ ಮಬ್ಬಿನಲಿ

ಧ್ವನಿಯೊಂದು ಕೇಳುತಿದೆ

ರಾಗ ಬದ್ಧ ಶೃತಿಯಲಿ

ಸಂಗೀತವದು ಕೇಳುತಿದೆ

ನಡೆದೆ ಧ್ವನಿಯ ಅನುಸರಿಸಿ

ದೂರ ನದಿಯ ದಂಡೆಯ ಮೇಲೆ

ಕೇಶ ಹರಡಿ ಮುಖವ ಮರೆಯಾಗಿಸಿ

ಕೂತಿರುವಳೊಬ್ಬ ಬಾಲೆ

ಸದ್ದು ಮಾಡದೆ ಮೆಲ್ಲನೆ ಸಮೀಪಿಸಿ

ಇಣುಕಿ ನೋಡಿದರೆ

ನನ್ನದೇ ಬಿಳಿ ರಂಗವಲ್ಲಿ

ಬಣ್ಣ ತುಂಬುತ್ತಾ ಕೂತಿರುವಳು

ಮೈನವಿರೇಳಿಸುವ ಚೆಲುವೆ !!

THOUGHT FOR THE DAY

IT IS GOOD SIGN TO ACCEPT THE FAULTS/MISTAKES AND CREATE A ACTION PLAN TO AVOID THEM "


RATHER

" ARGUMENT OVER THE MISTAKES, ONLY MAKES THE THINGS WORST "

Wednesday, February 19, 2014

ಜೀವನ

ಜೀವನ ಯಾಕೋ ಕಪ್ಪು ಬಿಳಿ ಚಿತ್ರ

ಎಷ್ಟು ಹುಡುಕಿದರೂ ಸಿಗುತ್ತಿಲ್ಲ ಉತ್ತರ

ಬಾಳ ಹಾದಿ ಹೂವು ಮುಳ್ಳು ಅಂತಾರೆ

ನಡೆಯುವುದು ಹೇಗೆ ಬರೀ ಮುಳ್ಳೇ ಇದ್ದರೆ .. ?

Sunday, February 16, 2014

THOUGHT FOR THE DAY

Its easy to fool people who doesn't know about you.
On the contrary,
Its impossible to fool the people who know you better.

Saturday, February 15, 2014

ಮನೆ ಮಗಳು

ಅವಳು ಕಾಲಿಟ್ಟ ಕ್ಷಣದಲ್ಲಿ ಮನೆಗೆ ಏನೋ ಕಳೆ ಬಂದಂತೆ, ಸಾಮಾನ್ಯ ಹುಣ್ಣಿಮೆ ಅಮವಾಸ್ಯೆಗಳು ಈಗ ಹಬ್ಬಗಳಂತೆ, ನಸುಕಿನಲ್ಲಿ ಎದ್ದು ಮನೆಯ ಗೂಡಿಸಿ ಸಾರಿಸಿ ಸಿಂಗರಿಸುತ್ತಾಳೆ. ಎಲ್ಲರೂ ಏಳುವ ಮೊದಲು ತಾನು ತೈಯ್ಯಾರಾಗುತ್ತಾಳೆ. ಪೂಜೆ ಪಾಠ ಮಾಡಿ, ಮನೆಯ ದೇವರುಗಳಿಗೆಲ್ಲಾ ಬೆಳಗುತ್ತಾಳೆ. ಮನೆಯ ತುಂಬೆಲ್ಲಾ ಭಕ್ತಿ ಗೀತೆಗಳ ಸಂಗೀತ. ಗಂಡ, ಅತ್ತೆ ಮಾವಂದಿರ ನಮಸ್ಕರಿಸುತ್ತಾಳೆ. ಅವರುಗಳು ಮುಖತೊಳೆದು ಬರುವಷ್ಟರಲ್ಲಿ ಚಹಾ ತಿಂಡಿ ತಯ್ಯಾರಾಗಿರುತ್ತದೆ. ಅವಳಿಗೆ ಇಂತಹ ಒಂದು ಕನಸ್ಸಿತ್ತು, ತುಂಬಿದ ಸಂಸಾರ, ದೊಡ್ಡ ಮನೆ, ಆ ಮನೆಯಲ್ಲಿ ದೇವರಂತಹ ಅತ್ತೆ ಮಾವ, ತನಗೆ ಪ್ರಾಣಕ್ಕಿಂದ ಹೆಚ್ಚಾಗಿ ಪ್ರೀತಿಸುವ ಗಂಡ. ಆ ಮನೆಸಿಕ್ಕಿದ್ದುದಕ್ಕೆ ಅವಳಿಗೆ ತುಂಬಾ ಖುಷಿ. ಮಾವರನ್ನು ಅವಳು " ಅಪ್ಪಾಜಿ " ಹಾಗು ಅತ್ತೆಯನ್ನು " ಅಮ್ಮಾ" ಎಂದೇ ಕರೆಯುತ್ತಾಳೆ. ಈ ಕಲಿಯುಗದಲ್ಲಿ ಇಂತಹ ಅತ್ತೆ,  ಮಾವ, ಗಂಡ ಸಿಕ್ಕಿದ್ದು ನನ್ನ ಪುಣ್ಯ ಅನ್ನುತ್ತಾಳೆ, ಆ ಸೊಸೆ. ಅಂದ ಹಾಗೆ ಅವಳು ಸೊಸೆಯಲ್ಲ ನಮ್ಮ " ಮನೆ ಮಗಳು " ಅನ್ನುತ್ತಾರೆ ಅವಳ ಅತ್ತೆ ಮಾಂವದಿರು.  ಇದೇ ಅಲ್ಲವೆ ಗೆಳೆಯರೇ ಚೊಕ್ಕ ಸಂಸಾರ, ಮನೆ ನಂದನವನ. ಎಲ್ಲರೂ ಬಯಸುವ " ವಾಡೆ ". ಶುಭ ದಿನ :)

Friday, February 14, 2014

ಕಹಿ ಸತ್ಯ

ಗೂಬೆಗಳು, ದೆವ್ವಗಳು, ಸೂಳೆಗಳು, ರಾತ್ರಿಯಲ್ಲೇ ಕಾರ್ಯಾಚರಣೆ ಮಾಡುತ್ತವೆ ಏಕೆಂದರೆ, ಅವುಗಳಿಗೆ ಬೆಳಕನ್ನು ಎದಿರಿಸುವ ಧೈರ್ಯ ಇರುವುದಿಲ್ಲ.

ಸಣ್ಣ ಕಥೆ

ಅವನು ಎಂದೆಂದೂ ತನಗಾಗಿ ದೊಡ್ಡ ದೊಡ್ಡ ಮಾಲಿನೊಳಗೆ ಶಾಪಿಂಗ್ ಮಾಡಿದವನಲ್ಲ.., ಅಂದು ಏಕೊ ತನ್ನ ಪ್ರೀತಿ ಪಾತ್ರರಿಗೆ ಉಡುಗೊರೆ ಕೊಡಲೆಂದು ಆ ಭವ್ಯ ವ್ಯಾಪಾರ ಮಳೆಗೆಗೆ ಕಾಲಿಟ್ಟ. ಮಳಿಗೆ ತುಂಬಾ ಜನರ ಹಿಂಡು, ಕಿಕ್ಕಿರಿದು ತುಂಬಿತ್ತು.ಹುಡುಗರು ತಮ್ಮ ಪ್ರೇಯಸಿಗೆ, ಅಪ್ಪಾ ಅಮ್ಮಂದಿರು ತಮ್ಮ ಮಕ್ಕಳಿಗೆ , ಅಜ್ಜಿ ತಾತಂದಿರು ತಮ್ಮ ಮಕ್ಕಳು ಮೊಮ್ಮಕ್ಕಳಿಗೆ ಖರಿಧಿಸುವಲ್ಲಿ ತಲ್ಲೀನರಾಗಿದ್ದರು.ಅವನು ಒಂದು ಬಟ್ಟೆಯ ಅಂಗಡಿ ಹೊಕ್ಕು ಅಲ್ಲಿ ಹೊಸ ಹೊಸ ಉಡುಗೆಗಳ ಖರಿಧಿಸುವಲ್ಲಿ ನಿರತನಾದ. ಎಷ್ಟು ಹುಡುಕಿದರೂ ತನಗೆ ಮನಸೊಪ್ಪುವ ಉಡುಗೆ ಸಿಗುತ್ತಿರಲಿಲ್ಲ. ದೂರದಲ್ಲಿ ಒಂದು ಉಡುಗೆಯ ಕಂಡು ಅದರ ಹತ್ತಿರ ಹೊರಡುತ್ತಾನೆ. ಓಹೋ ಹೊಸ ವಿಯಾಸ, ವಿಭಿನ್ನ ಉಡುಗೆ ಅದನ್ನು ನೋಡುತ್ತಾ ಖುಶಿಯಲ್ಲಿದ್ದಾಗ.....ಒಂದು ಪುಟ್ಟ ಮಗು, ಚಂದದ ಉಡುಗೆ ತೊಟ್ಟು  ಇವನ ಹತ್ತಿರ ಬಂದು, ಇವನ ಪ್ಯಾಂಟನ್ನು ಹಿಡಿದು ಎಳೆಯುತ್ತಾ..ಆಪ್ಪಾ ಅಂದು ಕರೆಯುತ್ತದೆ...ಇವನಿಗೆ ಆಶ್ಚರ್ಯ..! ಯಾರದಿದು ಮಗು ? ತನ್ನ ಅಪ್ಪಾ ಅಮ್ಮಂದಿರಿಂದ ತಪ್ಪಿಸಿಕೊಂಡಿದೆ ಅನ್ನುತ್ತಾ ಆ ಮಗುವನ್ನು ಎತ್ತಿಕೊಂಡು ಅಂಗಡಿಯ ರಿಸಿಪಶನ್ ಹತ್ತಿರ ಹೋಗುತ್ತಾನೆ, ಅಷ್ಟರಲ್ಲಿ ಹಿಂದಿನಿಂದಾ ಒಂದು ಧ್ವನಿ ಕೇಳಿಬರುತ್ತದೆ, ಅದು ಒಂದು ತಾಯಿ ಕಂದನ ಕಳೆದುಕೊಂಡ ದನಿ, ಆ ಮಗು ತಾಯಿಯ ಧ್ವನಿ ಕೇಳಿದ ಕೂಡಲೇ ಅವನ ತೋಳಿನಿಂದ ಇಳಿದು ತಾಯಿಯ ಹತ್ತಿರ ಓಡಿಹೊಗುತ್ತದೆ. ತಾಯಿಯ ತೋಳೆರಿದ ಮಗು ಅವನ ಹತ್ತಿರ ಕೈ ಮಾಡುತ್ತ.....ಅಪ್ಪಾ ಅನ್ನುತ್ತದೆ...ಅವಳು ಅವನ ಕಡೆ ತಿರುಗಿ ನೋಡುತ್ತಾಳೆ., ಒಂದು ನಿಮಿಷ ಸ್ಥಬ್ಧ..... ಇಬ್ಬರಿಗೂ ಆಶ್ಚರ್ಯ....!! ಅವಳು ಅವನ ಕಾಲೇಜಿನ ಪ್ರೇಯಸಿ....ಎಷ್ಟೋ ವರ್ಷಗಳ ನಂತರ ಭೇಟಿ...! ಅವಳನ್ನು ಗಮನಿಸಿದ ಅವನಿಗೆ ಕಾಣಿಸಿದ್ದು ....  ಕುಂಕುಮವಿಲ್ಲದ ಅವಳ ಹಣೆ ..., ತಾಳಿ  ಇರದ ಕೊರಳು...! ಅಲ್ಲೊಂದು ಮೌನ, ಅರೆ ಇವಳ ಮದುವೆ ಆಗಲೇ ಆಗಿತ್ತಲ್ಲ....? ಇವಳೇಕೆ ಹೀಗೆ....???? ಅವಳ ಗಂಡ ಈ ಪುಟ್ಟ ಕಂದಮ್ಮ ಹುಟ್ಟುವ ಹೊತ್ತಿಗೆ ಇಹಲೋಕ ತ್ಯಜಿಸಿದ್ದ.........!!

Wednesday, February 12, 2014

THOUGHT FOR THE DAY

BEAUTY IS ONLY FOR VISION, WHEREAS.., CHARACTER IS THE MEDIUM TO TOUCH ONE'S HEART.

Tuesday, February 11, 2014

ಒಲುಮೆ

ನನ್ನ ಕವನದಲ್ಲಿ,


ಅವಳದೇ ಉಲ್ಲೇಖ ,

ಅನ್ನುವುದು ಅವಳಿಗೆ " ಹಿರಿಮೆ "

ನನ್ನ ಕವನಕೆ ,

ಅವಳೇ ಪ್ರೇರಣೆ ,

ಅನ್ನುವುದು ನನ್ನ " ಒಲುಮೆ "

ಆಕರ್ಷಣೆ

ಎಲ್ಲೊ ದೂರದ ಮೂಲೆಯಲ್ಲಿ ಕೂತು ಅವಳು ನನ್ನ ಗಮನಿಸುತ್ತಾಳೆ!

ನನ್ನ ದೃಷ್ಟಿ ಅವಳ ಕಡೆ ಬಿದ್ದೊಡನೆ ಮರೆಯಾಗುತ್ತಾಳೆ..

ಇನ್ನೂ ಕದ್ದು ನೋಡುವೆ ಏಕೆ ? ಗೀಚಿಬಿಡು ಒಲವಿನ ಕವನ, ಈ ಹೃದಯದ ಹಾಳೆಯ ಮೇಲೆ.!!

ಶುಭ್ರ ಪ್ರೇಮ

ನನ್ನ ಹೃದಯವಲ್ಲ ಇದು ಗರ್ಭಗುಡಿ,

ನೀ ಪಾದಾರ್ಪಣೆ ಮಾಡಿ ನೆಲೆಸು,

ದೇವಿಯಂತೆ ನಿನ್ನ ಆರಾಧಿಸುವೆ !

Monday, February 10, 2014

ಮೌನ ವಿರಹ

ಬಂಡೆಗಳಿಗೆ ಜಲಪಾತದ ಪ್ರೀತಿ ತಿಳಿಯುವುದಿಲ್ಲ
ಪ್ರೀತಿ ಹರಿದು ಪಕ್ಕದ ಬಂಡೆಗೆ ಎರೆದಾಗ..," ಮೌನ ವಿರಹ "

ಚುಟುಕ

ಭಾವನೆಗಳ ಬೆಸುಗೆ

ಮನಸ್ಸುಗಳ ಅಪ್ಪುಗೆ

ವಸಂತ ಬರುವ ಕಾಲಕೆ..

ಹೃದಯಗಳ ಮಿಲನ

ಇನ್ನು ಶುರು ಪ್ರೇಮ ಕವನ.

ಭ್ರೂಣ

ಮನಸ್ಸು ಮನಸ್ಸು ಕೂಡಿ

ಪ್ರೀತಿಯ ಗಾಳಿ ಬೀಸಿ

ಹೃದಯಗಳು ಬೆಸೆದವು ಹಾಡಿ

ಅನುರಾಗದಿ ಉಕ್ಕಿತು ಕವನ

ಮೊಳೆಯಿತು ಅವಳಲಿ..,ಅವರಿಬ್ಬರ ಪ್ರೀತಿಯ ಭ್ರೂಣ !!

ಹೆಂಡ್ತಿ ಬೇಕು..

ನೀಳ ವರ್ಣದವಳಿದ್ದರೂ ಸರಿಯೆ

ಎಣ್ಣೆಗೆಂಪು ಇದ್ದರೂ ಸರಿಯೆ

ಶುಭ್ರ ಮನಸಿದ್ದರೆ ಸಾಕು

ಹೆಂಡ್ತಿ ಬೇಕು..


ಬಡವರಾದರೂ ಸರಿಯೆ

ಅನಾಥಳಿದ್ದರೂ ಸರಿಯೆ

ಗುಣವಂತೆ ಆಗಿದ್ದರೆ ಸಾಕು

ಹೆಂಡ್ತಿ ಬೇಕು..


ಕಛೇರಿಗೆ ತೆರಳುವಾಗ ನಗುತ್ತಾ ಕೈ ಬೀಸಬೇಕು

ಮರಳುವ ವೇಳೆಯಲಿ ಬಾಗಿಲಲ್ಲಿ ಕಾಯುತ್ತಿರಬೇಕು

ಗಂಡನಾದರಿಸುವಳಾಗಿದ್ದರೆ ಸಾಕು

ಹೆಂಡ್ತಿ ಬೇಕು..


ಮುದ್ದು ಮಾಡುತ್ತಿರಬೇಕು

ಮುದ್ದಿಸಿವಂತಿರಬೇಕು

ಮುದ್ದು ಮುದ್ದು ಮಕ್ಕಳಾದರೆ ಸಾಕು

ಹೆಂಡ್ತಿ ಬೇಕು..


ಎಲ್ಲಾ ನಮ್ಮದು ಅಂತಿರಬೇಕು

ನಮ್ಮದೇ ಮನೆಯಿದು ಅಂದುಕೊಳ್ಳಬೇಕು

ನಮ್ಮತನವ ಮೆರೆಯುತ್ತಿದ್ದರೆ ಸಾಕು

ಹೆಂಡ್ತಿ ಬೇಕು..


ತವರು ಮನೆಯ ಜ್ಯೊತಿ ಅವಳು

ಗಂಡನ ಮನೆ ಬೆಳಗುತಿರಬೇಕು

ಮೆನೆ ಮೆಚ್ಚುವ ಮಗಳಾಗಬೇಕು

ಹೆಂಡ್ತಿ ಬೇಕು..


ಪುಟ್ಟ ಗೂಡಿನವಳಾದರೂ ಸರಿಯೆ

ದಿಟ್ಟ ಹೃದಯವಿರಬೇಕು

ಕೆಟ್ಟ ಸಮಯವ ಎದುರಿಸುವಂತಿರಬೇಕು

ಹೆಂಡ್ತಿ ಬೇಕು..

ಮಾಂತ್ರಿಕೆ

ಅವಳು ನನ್ನ ಕವಿತೆಗೆ ಪ್ರತಿಕ್ರಯಿಸದಿದ್ದರೂ,

ಅವಳು ಓದಿಯೇ ಇರುತ್ತಾಳೆ ಅನ್ನುವದು ನನ್ನ ನಂಬಿಕೆ !

ಏಕೆಂದರೆ, ...

ಅವಳು ಬರೆವ ಪ್ರತಿ ಕವನಗಳ ಸಾಲಿನಲ್ಲೂ

ನನಗೆ ಉತ್ತರ ನೀಡುತ್ತಿರುವ ಮಾಂತ್ರಿಕೆ !!



Friday, February 07, 2014

ಗೊಂದಲ

ಆ ಕಣ್ಣುಗಳು ಬಿಡದಂತೆ ದಿಟ್ಟಿಸುತ್ತಿದ್ದವು ಆ ತುಟಿಗಳನು
ಏನು ಆಕರ್ಷಣೆಯೋ ತಿಳಿಯಲಾರದೇ, ಕೇಳಿಯೇ ಬಿಟ್ಟಳು ಅವನಿಗೆ.....ನಿನ್ನ ತುಟಿಗಳು ಇಷ್ಟು ಕೆಂಪಗಿರುವ ಕಾರಣ...ಹಚ್ಚಿರುವೆಯಾ .. ತುಟಿಗಳಿಗೆ ಬಣ್ಣ....? ಅಯ್ಯೋ ಇಲ್ಲಾ ಕಣೆ ಮಾರೈತಿ, ಛಳಿಗೆ ತುಟಿ ಒಡೆದು ಬಿರುಕು ಬಿಟ್ಟಿವೆ.. ಅಂದ ಅವನು..! ತುಟಿಗೆ ಹಚ್ಚಿರುವೆ ವ್ಯಾಸಲೀನಿನ ಲೇಪನ. :)

ಕಟು ಸತ್ಯ

ಪ್ರಮಾದವ ಎಸಗಿದ ಜನರು..

ಅದನ್ನು ಮುಚ್ಚಲು ಸಜ್ಜನರ ತರ ನಟಿಸಿದರೆ, ಅವರು ಸಜ್ಜನರಾಗುವುದಿಲ್ಲ..!

ಅವರ ಕೃತ್ಯ ಶ್ವಾನದಂತೆ...,

ಬಹಿರ್ದೆಶೆಗೆ ಹೋಗಿ....,ನೆಲವ ಕೆದರಿ.., ಮಣ್ಣು ಚಿಮ್ಮಿ.., ಮುಚ್ಚುವಂತೆ..!

Thursday, February 06, 2014

ಪಶ್ಚಾತಾಪ

ಹೂ ಮನಸ್ಸು ಅಂತಾ ತಿಳಿದು ಪ್ರೀತಿ ಮಾಡಿದ್ದು ತಪ್ಪಾಯಿತು
ಕ್ರೂರ ಹೃದಯವದು ಪ್ರೀತಿಯೇ ಅಲ್ಲಾ ದ್ವೇಶಕ್ಕೂ ಅರ್ಹವಲ್ಲದ್ದು !!

Thought for the day

To love is nothing, to be loved is something but to love and to be loved by the one you love,that is EVERYTHING. Never take love for granted.

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...