Monday, January 25, 2021

ಆಶಾಕಿರಣ

ಬಿಗಿ ಹಿಡಿದ ಕುಪ್ಪಸದ ಉಸಿರು

ನಿಶ್ವಾಸವೂ ಕಠೀಣವಿಂದು

ಕಲ್ಮಶ, ವೈರಾಣು ಕೂಡಿದ ಗಾಳಿಯಲ್ಲಿ

ಉಸಿರಾಟವೇ ಕಷ್ಟ ಈ ಸಮಯದಲ್ಲಿ !


ಲಸಿಕೆ ಮೂಡಿಸಿದ ಭರವಸೆ

ಜವಾಬ್ದಾರಿ ಹೊರುವರು ಯಾರಿಲ್ಲಿ ?

ಆರೋಗ್ಯವಾಗಿದ್ದ ಮನುಷ್ಯ ಇಂದು

ತಡೆಮದ್ದಿನಿಂದಲೇ ಜೀವ ತೊರೆದನಿಲ್ಲಿ !


ಭಯ ಹುಟ್ಟಿಸಿದ ವೈರಾಣು

ಸದ್ದಿಲ್ಲದೇ ಮಾಡಿದೆ ಹೈರಾಣು

ಸಂಖ್ಯೆ ಕಡಿಮೆಗೊಂಡರೂ

ಧೈರ್ಯವೇ ಸಾಲದು ಬೆರೆತು ಮೆರೆಯಲು !


ಸ್ನೇಹಿತರು ಬಂಧುಗಳು ಬಂದರೂ

ಅನುಮಾನ ಪಡೋದೆ ಸವಾಲು

ಯಾವ ರೂಪದಲ್ಲಿರುವಳೊ ಮಹಾಮಾರಿ

ಅವುಚಿಕೊಳ್ಳುವಳೊ ಯಾಮಾರಿ..!


ಹೇಗೆ ಹುಟ್ಟಿಕೊಂಡಿತೋ ಈ ಕುತ್ತು

ಕ್ಷಣ ಕ್ಷಣಕ್ಕೂ ತಪ್ಪದ ಆಪತ್ತು

ವಿಶ್ವಾಸದ ಆಶಾಕಿರಣ ಚಿಗುರುವುದೆಂದೋ

ಮತ್ತೆ ನಲಿವಿನ ವೇಳೆ ಬರುವುದೆಂದೋ..!


***ಭಾವಪ್ರಿಯ***

Tuesday, January 05, 2021

ನಾಡಪ್ರೇಮಿ


ಕನ್ನಡ ಪ್ರೇಮಿ ನಾನು

ಕನ್ನಡದ ಅಭಿಮಾನಿ 

ಕನ್ನಡ ತನವ ಪ್ರದರ್ಶಿಸಲು

ನನಗೆ...., 

ಯಾವ ದೊಣ್ಣೆ ನಾಯಕನ ಸವಾಲು ?

ಕನ್ನಡ ಪುಸ್ತಕ ವಿತರಿಸಿ,

 ಭಾಷೆ ಬೆಳೆಸುವ ಕಾಲ ಇಂದಿಲ್ಲ..!

ಕನ್ನಡದ ಅನ್ನವ ತಿಂದು, 

ನಮ್ಮನ್ನೇ ಹೀಗಳೆವರೆಲ್ಲಾ....!

ಸಾಹಿತ್ಯದ ಗಂಧ ಇರದವರು

ಪಡ್ಡೆ ನೀತಿಯ ಭೋಧಿಸುವರು !

ನೆಲೆ ಕೊಟ್ಟ ನೆಲಕ್ಕೆ ., 

ಕಿಂಚಿತ್ತು ಅಭಿಮಾನವಿಲ್ಲದವರು

ಊರು ಬಿಟ್ಟು ಬಂದ ಅಲೆಮಾರಿಗಳು,

ಕನ್ನಡದ ವಿರುದ್ಧವೇ ವಿಜಯೋತ್ಸವ ಆಚರಿಸಿದರು ! 👿

ಕನ್ನಡಿಗರ ಸೌಮ್ಯ ಗುಣವಿದು

ಸಂಚು ಮಾಡುವವರಿಗೆ ದಾರಿ ದೀಪವಾಗಿಹುದು. 

ನಮ್ಮ ನೆಲದಲ್ಲಿ ರಾರಾಜಿಸಿದರೆ ನಮ್ಮ ಬಾವುಟ

ದುಷ್ಟರಿಗೇಕೆ ಹೊಟ್ಟೆ ಸಂಕಟ ?

ನಮ್ಮ ಬಾವುಟ ಹಾರಿಸುವುದು ನಮ್ಮ ಹಕ್ಕು,

ಬಿಡಲೊಲ್ಲೆ ಅನ್ನುವರಿಗೆ ಎಲ್ಲಿಯ ಸೊಕ್ಕು.?

ವಿಶಾಲತೆ ತೋರಿದ್ದು ಸಾಕು ಇನ್ನೂ..,

ತಿರುಗಿ ಬೀಳುವುದು ಮುಂದೆ ತೀಕ್ಷಣ ಕಣ್ಣು. 

ಮರ್ಕಟನ ಬಾಲ ಮುದುಡಿದರೆ ಚೆನ್ನ

ಇಲ್ಲವಾದರೆ ಬೈಲಿಗೆಳೆವೆವು ಇವರ ಬಣ್ಣ.( ಚೊಣ್ಣ)😉


*********ಸುನಿಲ್ ಅಗಡಿ*********

೩೧-೧೨-೨೦೨೦

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...