Tuesday, April 16, 2013

ಬಾಳು ಬರಡು


ಮೈ ನೆರೆದಾಗ ಚಿಗುರೊಡೆದಿತ್ತು

ವಸಂತ ಹಸಿರು ಹಾಸಿದಾಗ ಕಂಕಣ ಭಾಗ್ಯತಂದಿತ್ತು

ಉತ್ತಿ ಬಿತ್ತಿ ಬೆಳೆದು ರೂಪಿಸಿಕೊ ನಿನ್ನ ಜೀವನದ ಹಾದಿ ಎಂದಿತ್ತು

ಸುಂದರ ಸರಳ ಜೀವನ ನಿನ್ನ ಕಣ್ಣಗಳಿಗೆ ಕಾಣದಾಯಿತು

ಮೆಟ್ಟಿ ನಡೆದು ಬಿಟ್ಟೆ., ತುಳಿಯುತ್ತಾ ಹಸಿರ ಹಾಸಿಗೆ

ಬರುಡಾಯಿತು ನೆಲ..,ಚಿಗುರದೇ ಒಂದೇ ಒಂದು ಗರಿಕೆ

ಹಳಿಸಿದ ಜೀವನ ಮರಳದು ಕೊನೆವರೆಗೂ..,

ಬಾಳು ಬರಡು.., ಎಂದೆಂದಿಗೂ ತುಂಬದು ನಿನ್ನ ಒಡಲು.



1 comment:

Badarinath Palavalli said...

ವಸುಂಧರೆಯ ಅಧೋಗತಿ ಮತ್ತು ಮಾನವನ ದಾಹದ ಪ್ರವೃತ್ತಿಯ ಸಮರ್ಥ ಅನಾವರಣ ಇಲ್ಲಾಗಿದೆ. ಉತ್ತಮ ಸಮಾಜ ಮುಖಿ ಕವನ.

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...