Tuesday, April 02, 2013

"ವಿ" ಕೋಪ

ಸಣ್ಣ ಪುಟ್ಟ ವಿಷಯಕ್ಕೆ ಏಕೆ ಈ ಕೋಪ ?

ಬಸವಳಿದ ಜೀವವದು ಹೋಗಲಿ ಬಿಡು ಪಾಪ.!

ಕೆಂಗಣ್ಣು ಬಿಡಬೇಡ ಹಾಕ ಬೇಡ ಶಾಪ.,

ಮುನಿಸನ್ನು ಮಾರಿ ಬಿಡು, ಏನೇ ಇರಲಿ ಲೋಪ !

ತಡ ಮಾಡದೇ ಸೇರು ಬಾ.. ಬಿಟ್ಟು ನಿನ್ನ ಹಠ..,

ತೆರೆದಿಟ್ಟಿರುವೆ ನನ್ನ ಮನಸ್ಸಿನ ಕಪಾಟ.!

2 comments:

Badarinath Palavalli said...

ಮೆಚ್ಚಿದೆ, ಒಬ್ಬರು ಸೋತರೇನೇ ಒಲವಿನ ಆಟದಲ್ಲಿ ಸಮ ಸುಖಮಯ. ಒಳ್ಳೆಯ ಪ್ರಾಸಕವಿ ಕಣಪ್ಪೀ ನೀವು.

Sunil R Agadi (Bhavapriya) said...

ನಾನು ಕವನ ಬರೆಯಲು ಹುಡುಕುವುದಿಲ್ಲ ಯಾವುದೇ ಪ್ರಾಸ..
ನನಗರಿಯದೇ ಮನಕೆ ಹೊಳೆಯುತ್ತವೆ ಕೊಡದೇ ಯಾವುದೇ ತ್ರಾಸ..! :) ನೀವು ಕೊಟ್ಟ ಬಿರುದು ನನಗಿಷ್ಟವಾಯಿತು ಸರ್, ತುಂಬಾ ಧನ್ಯವಾದಗಳು.

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...