Thursday, June 27, 2019

ಶ್ರಾವಣ


ನಲ್ಲಾ,
ಬಿಡಬೇಡ
ಕಣ್ಣಿನಲ್ಲೇ ಹೂ ಬಾಣ
ಬಂದಿಹುದು ಶ್ರಾವಣ
ಮೊಳಗಿಹುದು ಶುಭಲಗ್ನ
ಬೇಗನೆ ಬಾ...
ಮದುವೆ ಆಗಿಯೇ ಬಿಡೋಣ..!!

Tuesday, April 16, 2019

ಮತದಾನ

ಮತ ಮತ ಮತ
ಜಾತಿ ಗೀತಿ ಬೇಡ ಇದರ ಸುತ್ತ
ಹೊಸ ವಿಚಾರಕ್ಕೆ ಇರಲಿ ನಮ್ಮ ಮತ
ತುಂಡು ಕಾಂಚಾಣ ಒದಿರಿ ಅತ್ತ
ಪ್ರಜ್ಞಾವಂತರಾಗಿ ಚಲಾಯಿಸೋಣ ಮತ
ಪ್ರಜೆಗಳಿಗಾಗಿ ದುಡಿಯುವರಿಗೆ ನಮ್ಮ ಸಹಮತ
ನಮ್ಮ ಸಮಾಜಕ್ಕೆ ತಕ್ಕ ವ್ಯಕ್ತಿಗೆ ನಮ್ಮ ಬಹುಮತ
ನಮ್ಮ ಹಕ್ಕು ಚಲಾಯಿಸೋಣ..., ತಪ್ಪದೇ ನೀಡಿ ಮತ !!

-----ಭಾವಪ್ರಿಯ--------

ನಮ್ಮ ಗುಂಡಣ್ಣ

ಅವನು ದಡೂತಿ ಸಾಹಸಿ
ಗುಂಡು ಗುಂಡಕೆ ನಮ್ಮ ಸುಶಿ
ಎತ್ತಿಕೊಳ್ಳಲು ಬಲು ಭಾರ
ಬಿಟ್ಟರೇ ಓಡುವನು ಜೋರ
ಮೆಟ್ಟಿಲು ಏರಲು ಬಲು ಹುರುಪು
ಅವನನ್ನು ಹತ್ತಿ ಇಳಿಸಿ ನಾವೇ ಸುಸ್ತು
ಆಡಲು ಬೇಕಿವನಿಗೆ ಅಜ್ಜನ ಪೆನ್ನು
ಹೊರ ಹೊರಟರೇ ಏರುವನು ಅಜ್ಜಿಯ ಬೆನ್ನು
ಆಡುತ್ತಿದ್ದರೆ ಇರುವನು ತನ್ನದೇ ಗುಂಗಿನಲಿ
ಅಳು ಬಂದರೆ ಇವನು ಶಾಂತ ಅಮ್ಮನ ಮಡಿಲಲಿ !!

Monday, April 15, 2019

ಭಯ - ಚಿಂತೆ


ಗೆದ್ದವನಿಗೆ ಸೋಲುವೆ,  ಎನ್ನುವ ಭಯ
ಸೋತವನಿಗೆ.., ಮತ್ತೆ ಗೆಲ್ಲುತ್ತೆನೆಯೋ ಅನ್ನುವ ಚಿಂತೆ
ಸುಳ್ಳು ಹೇಳುತ್ತಾ ಅರಚುವವನಿಗೆ.., ಸತ್ಯ ತಿಳಿದರೆ..? ಅನ್ನುವ ಭಯ
ಸತ್ಯವಂತನಿಗೆ.., ಸುಳ್ಳುಗಾರರು ಜಯಸುವರೇ ಅನ್ನುವ ಚಿಂತೆ
ಅಧಿಕಾರ ಇದ್ದವನಿಗೆ.., ಕಳೆದುಕೊಳ್ಳುವೆ ಅನ್ನುವ ಭಯ
ಅಧಿಕಾರ ಇಲ್ಲದವನಿಗೆ.., ಈ ಸರಿಯಾದರೂ ಸಿಗುವುದೇ ಅನ್ನುವ ಚಿಂತೆ
ಅಭ್ಯರ್ತಿಗೆ.., ಹಾಕಿದ ದುಡ್ಡು ಬರುವುದೇ ಅನ್ನುವ ಭಯ
ಜನರಿಗೆ.., ಮತ ಹಾಕಿದವರು ಕೆಲಸ ಮಾಡುವರೇ ಅನ್ನುವ ಚಿಂತೆ
ಭಯ ಚಿಂತೆಗಳ ಸಂತೆ.., ಜೀವ ಇರುವ ತನಕ ಸಾಗುವಂತೆ
ಪ್ರಜಾಕಾರಣ ಬರದ ಹೊರೆತು.., ಮುಕ್ತಿ ಇದಕ್ಕೆ ಇಲ್ಲವಂತೆ !

#ಪ್ರಜಾಕೀಯ #ಉಪ್ರಪ
#prajaakiya #Upendra # UPP

Saturday, April 06, 2019

ಹೊಸ ವರ್ಷ

ಹೊಸ ಸಂವತ್ಸರದ ಯುಗಾದಿ
ಹೊಸ ಚಿಗುರು ನಮ್ಮಯ ಮನದಿ
ಬೇವಿನ ಸವಿ ತಂಪು ಜೀವನದಿ
ಬೆಳಗಲಿ ಬಾಳಲ್ಲಿ ಪ್ರೇಮನದಿ
ಯುಗ-ಯುಗಗಳ ಯುಗಾದಿ
ಹಾಸಲಿ ಜಗವೆಲ್ಲಾ ಹೂಗಳ ಗಾದಿ.

💐🌹🌺******ಭಾವಪ್ರಿಯ******💐🌺🌹

💐🌹🌺ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು💐🌹🌺

Tuesday, April 02, 2019

ಬೇಸಿಗೆ

ಸುಡು-ಸುಡುವ ಸೂರ್ಯನಿಗೆ
ಬಂದಿರಬಹುದೇ ಜ್ವರಾ....!
ಸ್ವಲ್ಪ ದಿನದ ಮಟ್ಟಿಗೆ
ತೆಗೆದುಕೊಳ್ಳಬಹುದಿತ್ತೇನೋ ರಜಾ..?
ಹಂಗಾದರೂ ಮಾಡಬಹುದಿತ್ತು
ನಾವು ರಜೆಗಳಲ್ಲಿ ಮಜಾ..!

Wednesday, January 16, 2019

ಚುಕ್ಕಿ

ಚುಕ್ಕಿ ಚುಕ್ಕಿ ಜೋಡಿಸಿ,
ಮೂಡಿತು ಶುಭಸಂಕೇತದ ರಂಗವಲ್ಲಿ !
ಮನೆಯ ಅಂಗಳ ಅಲಂಕರಿಸಿ,
ಹಬ್ಬದ ಪರಿಸರವ ಮೆರೆವ ಮಲ್ಲಿ  !
ಬಣ್ಣದ ಹೂಗಳ ಬಳಸಿ,
ಸುಗಂಧವ ಬೆರೆಸಿ ಗಾಳಿಯಲ್ಲಿ  !
ನಳಿ ನಳಿಸ್ಯಾಳೊ ಅರಸಿ,
ಬೆಳಗುತಿಹಳು ಬೆಳಕ ಬಾಳಲ್ಲಿ !!

Friday, November 23, 2018

ಲೋಲಕ ತೂಗು ಗಡಿಯಾರ

ಸಮಯವೀಗ ಲೋಲಕ ತೂಗು ಗಡಿಯಾರ
ಅತ್ತಿಂದಿತ್ತ... ಇತ್ತಿಂದತ್ತ ತೊಳಲಾಡುತಿರಲು
ಕಾಲವೂ ಸರಿಯುತಿದೆ...
ಗುರುತಿಲ್ಲ ದಿಸೆಯಿಲ್ಲದೆ...
ಸಾಗಿಹೋಗುತಿಹೆವು ಪರಿವೆಯೇ ಇಲ್ಲದೆ.
ಗುರಿಯೇ ಇಲ್ಲದ ದಾರಿ
ಮುಂದೇನಿದೆ ಅರಿಯದಾಗಿದೆ..
ಕಾಲ ಹೇಗೆ ಕಳೆಯುತಿದೆಯೋ
ಹಗಲುರಾತ್ರಿಗಳು ಅದಲುಬದಲು
ನಿತ್ಯವೂ ಅದೇ ತೊಳಲಾಟ
ಲೋಲಕ ತೂಗು ಗಡಿಯಾರ !!

Tuesday, November 20, 2018

ನಮ್ಮಯ ಕನ್ನಡ


ಮೊಗ್ಗರಳಿ ಹೂವಾಗಲಿ ಕನ್ನಡ
ಎಲ್ಲರ ಮನದ ಮಗುವಾಗಲಿ ಕನ್ನಡ !
-----------------------------------

ಬೀಸುತ್ತಿರಲಿ ಮಿಡಿತದ ಗಾಳಿ ತಂಪು
ಪಸರಿಸಲಿ ಎಲ್ಲೆಡೆ ಕನ್ನಡದ ಕಂಪು !

Monday, October 29, 2018

ನಿನ್ನಿಂದಲೇ ಒಲವೇ

ನಿನ್ನಿಂದಲೇ ಒಲವೇ
ಕನಸ್ಸಿಂದು ನನಸಾಗಿದೆ
ಕಪ್ಪು ಬಿಳಿಯ ಚಿತ್ರಕ್ಕಿಂದು
ಬಣ್ಣಗಳು ಬಳಿದಂತಿದೆ

ನಿನ್ನಿಂದಲೇ ಒಲವೇ
ಕೊರೆಯುವ ಚಳಿಗಿಂದು
ಸೂರ್ಯನ ತಾಪ ತಾಕಿದಂತಿದೆ
ಕರಿಯಾದ ದಾರಿಗಿಂದು
ಹಿಮದ ಹಾಸಿಗೆ ಹಾಸಿದಂತಿದೆ

ನಿನ್ನಿಂದಲೇ ಒಲವೇ
ಗ್ರಹಣ ಹಿಡಿದ ಸೂರ್ಯನಿಗೆ
ಬೆಳಕು ಹರಿದಂತಾಗಿದೆ
ಕತ್ತಲೆಯ ಕರಾಳರಾತ್ರಿಗೆ
ಮುಂಜಾವಿನ ಸೊಬಗು ಮೂಡಿದಂತಿದೆ

***ಭಾವಪ್ರಿಯ***


Friday, June 29, 2018

ವರ್ಷಧಾರೆ

ಸರ-ಸರನೆ ಹರಿದು
ಬರುತ್ತಿರುವ ವರ್ಷಧಾರೆಗೆ
ಬೇಲಿಯ ಕಟ್ಟಲಾದೀತೆ....?
ನೀರು ತುಂಬಿ
ಹರಿಯುವ ನದಿಯನು
ಹರಿಯುವುದನ್ನು ನಿಲ್ಲಿಸಲಾದೀತೆ....?
ಒಲಿದು ಬಂದ ವರ್ಷಧಾರೆಗೆ
ಆದರಿಸಲೇಬೇಕು ನಾವು....
ಪ್ರಾರ್ಥಿಸಿ ಅದಕೆ
ಹರಿಸಲು ನಮಗೆ..!!
***ಭಾವಪ್ರೀಯ***

Monday, May 07, 2018

ಕನ್ನಡ ಕೊಲೆಗಡಕರು

ಬೇಂದ್ರೆ ಅಜ್ಜಾ ನಿನ್ನ ಕವನ
ವಾಚಿಸಿ ಖುಶಿ ಪಟ್ಟಿದ್ದೆ ನಾನು...
ಮತಿಗೆಟ್ಟ ರಾಜಕೀಯದವರು
ವಾಚಿಸಿ ನಿಮ್ಮ ಕವನವ ಅವಮಾನಿಸುತಿಹರು
ಕನ್ನಡ ಬಾರದ ಒಬ್ಬ ಮೂರ್ಖ
ತಾನು ಕನ್ನಡಿಗ ಎನ್ನುತಿಹನು
ಮತದ ಭಿಕ್ಷೆಗಾಗಿ ನಿಮ್ಮ ಕವನವ
ಹರಕು ಮುರುಕು ಮಾಡಿ ಹಾಡಿದನು
ಕೂಗಿ ಕೂಗಿ ಹೇಳಿದನು...
ಹುಚ್ಚು ಮಂಗ್ಯಾ ಹಂತವನು
ದೇಶಾನ ಆಳೊ ನೆಪದಾಗ
ನನ್ನ ಕನ್ನಡವನ್ನೇ ಕೊಂದನು...!

Friday, February 02, 2018

ಸುಗ್ಗಿ ಬಂತು ಸುಗ್ಗಿ


ರೈತನ ದುಡಿಮೆಗೆ
ಪುರ್ಸ್ಕಾರದ ಸುಗ್ಗಿ
ಹೊಲವ ಊಳಿದ ಎತ್ತುಗಳಿಗೆ
ಅಲಂಕರಿಸಿ ಮೆರವಣಿಗೆಯ ಸುಗ್ಗಿ
ಹಸಿರು ಪಸರಿಸಿದ ಪೈರಿಗೆ
ಕಾಳು ನವಿರೆರಿದ ಸುಗ್ಗಿ
ಶ್ರಮಪಟ್ಟ ಮನುಜನ ಬೆವರಿಗೆ
ಫಲ ತಂದಂತ ಸುಗ್ಗಿ
ಚಳಿಗೆ ಮರಗಿದ ಬೆಳೆಗೆ
ಕ್ರಾಂತಿಯ ಸೂರ್ಯನ ಸುಗ್ಗಿ
ಆಚರಿಸುವ ಬಾರಾ ಸುಗ್ಗಿ
ಸವೆದು ಸಿಹಿ ಹುಗ್ಗಿ

ಸುಗ್ಗಿ ಬಂತು ಸುಗ್ಗಿ

ಅವಳು ನನ್ನೋಳಗೆ..


ನನ್ನ ಹೃದಯದ ಹಣೆತೆಗೆ
ಅವಳೇ ಬೆಳಗುವ ದೀಪ
ನನ್ನ ಬಾಳ ಹಾಡಿಗೆ
ಅವಳದೇ ಪದಗಳ ಸ್ವರೂಪ
ನನ್ನ ಬಳಲಿದ ಕಣ್ಣುಗಳಿಗೆ
ಅವಳದೇ ನಿರಾಳದ ಲೇಪ
ನನ್ನ ಮನದ ಕಾರಂಜಿಗೆ
ಅವಳ ಪ್ರೀತಿಯೇ ಪ್ರೇರಕ
ನನ್ನ ಮಿಡಿವ ಚಿತ್ತಕೆ
ಅವಳ ಚಿಲಿಮೆಯೇ ಅನುರಾಗ
ಬಯಸಿದಂತೆ ಪಡೆದಿರುವೆ
ಕರುಣಿಸಿದಾತನು ಭಗವಂತ
ಇನ್ನೂ ಏನನ್ನೂ ನಾ ಒಲ್ಲೆ

ನನ್ನ ಮನೆ ಈಗ ಬೃಂದಾವನ 

Friday, January 12, 2018

ಹೊಸದು

ಬದಲಾದ ವಸಂತ
ಈ ವರುಷ ಹೊಸದು
ಈ ಬದುಕು ಹೊಸದು
ಹೊಸದೊಂದು ಕಟ್ಟಿ ಕನಸ್ಸು
ಬೆಳಕಿನೆಡೆಗೆ ಸಾಗುವ ಹುರುಪು ನನ್ನದು !

Wednesday, January 03, 2018

ಮೂಢೆ

ಅವಳಿಗೇಕೋ ಅನುಮಾನ
ದೊರೆತಿರುವ ಪ್ರೀತಿ ವಿರಳ..
ಅವಳಿನ್ನೂ ಮೂಢೆ,
ಅರೆತಿಲ್ಲವಳು ಅವನ ಪ್ರೀತಿಯ ಆಳ !!

Tuesday, January 02, 2018

ಚುಟುಕ

ನಾ ಏನೇ ಹೇಳಿದರೂ
ಅಂತಾಳ ನಾ ಒಲ್ಲೇ,... ನಾ ಒಲ್ಲೇ..!
ಬಯಸದೇ ನೀಡುವಳು
ಕೆನ್ನೆಯ ಮೇಲೆ ನಗುವ ಮೊಲ್ಲೆ..!!

Thursday, December 21, 2017

ಚಳಿಗಾಲ

ಲೇಖನಿಗೂ ಇಂದು ತಟ್ಟಿದೆ,
                                    ಚಳಿಯ ತಂಪು
ಮರಗಟ್ಟಿರುವುದು ನನ್ನ,
                                    ಲೇಖನಿಯ ಇಂಕು !

Wednesday, December 20, 2017

ವಿರಹದ ಬೇಗೆ

ಹನ್ನೆರಡು ಗಂಟೆಗಳ ವಿರಹದ ಒಪ್ಪುಗೆಗೆ..
ಬಯಸುತ್ತಾಳೆ ಮಡದಿ ಬಿಗಿಬೆಚ್ಚನೇಯ ಅಪ್ಪುಗೆ !!

ಸಂಜೆಯ ಸೂರ್ಯ

ಹೊಸ್ತಿಲಲ್ಲಿ ನಿಂತು...
ದಿನವಿಡೀ ಕಾಯುವ ಕಣ್ಣುಗಳಿಗೆ,
ಸಂಜೆಯ ಸೂರ್ಯ,
ನೀಡುವನು ತುಟಿಗಳಿಗೆ ನಿರಾಳದನೆಗೆ !!

Tuesday, November 21, 2017

ಉಸಿರುಸಿರಲಿ ಕನ್ನಡ

ಕನ್ನಡವೇ ಹಗಲು
ಕನ್ನಡವೇ ಇರುಳು
ಕನ್ನಡವೇ ಎಲ್ಲಕ್ಕಿಂತ ಮಿಗಿಲು !

ಕನ್ನಡಿಗನ ಪಣ
ಕನ್ನಡವೇ ಪ್ರಾಣ
ಕನ್ನಡಿಗನೇ ಸಾರ್ವಭೌಮ !!

ಕನ್ನಡ

ನನ್ನ ಜಾತಿ ಕನ್ನಡ
ನನ್ನ ಧರ್ಮ ಕನ್ನಡ
ಕನ್ನಡವೇ ನನ್ನ ಮೆರಗು
ಕನ್ನಡವೇ ನನ್ನ ಕುರುಹು.

ನಿಮ್ಮ ಆಯ್ಕೆ.. ?

ಹಸಿದವರಿಗೆ ಅನ್ನ ಹಾಕಿ
ಬಡವರ ಬವಣೆಯ ನೀಗಿಸುವನೊಬ್ಬ

ರಾಜ್ಯವನ್ನು ಸುವರ್ಣವಾಗಿಸುವ ಸುವಿಚಾರಿ
ಪ್ರಜೆಗಳಿಂದ ಪ್ರಜೆಗಳಿಗಾಗಿ ದುಡಿಯುವನೊಬ್ಬ

ಬತ್ತ ಬಿತ್ತು ಬೆವರುಳಿಸಿದವ
ರೈತ ಬಾಂದವರ ಕಣ್ಣಾಗಿದವನೊಬ್ಬ

ವಿಧ್ಯಾವಂತರನ್ನು ಸುಳ್ಳಿನ ಸುಳಿಯಲ್ಲಿ ನೂಕಿ
ಕಾಣದ ಪ್ರಗತಿಯನ್ನು ಮಾಡಿದೆ., ಎಂದು ಮೂಢರನ್ನಾಗಿಸಿದವನೊಬ್ಬ




  

Monday, October 30, 2017

ಕನ್ನಡ ಕನ್ನಡ ಕನ್ನಡ,.............. ಕನ್ನಡ...!!!

ಅಚ್ಚ ಕನ್ನಡ
ಸ್ವಚ್ಚ ಕನ್ನಡ
ತನು ಕನ್ನಡ
ಮನ ಕನ್ನಡ
ಆಡು ಕನ್ನಡ
ಹಾಡು ಕನ್ನಡ
ಕುಣಿ ಕನ್ನಡ
ನಲಿ ಕನ್ನಡ
ಹಸಿರು ಕನ್ನಡ
ಉಸಿರು ಕನ್ನಡ
ನುಡಿ ಕನ್ನಡ
ನಡೆ ಕನ್ನಡ
ಬಳಿಸು ಕನ್ನಡ
ಉಳಿಸು ಕನ್ನಡ
ಹುಟ್ಟು ನಾಡು ಕನ್ನಡ
ಎದೆತಟ್ಟಿ ಹೇಳು ಕನ್ನಡ

Thursday, October 05, 2017

ಆ ನಗೆಗೆ...



ಯಾರದ್ದೋ ನೆನಪು ಕಾಡಿದಾಗ
ಯಾವದ್ದೋ ಖುಶಿ ಉಲ್ಬಣಿಸಿದಾಗ
ಎದೆಯಲ್ಲಿ ಪ್ರೀತಿ ಉಕ್ಕಿದಾಗ
ಮತ್ತೆ ಮತ್ತೆ ಆ ನೆನೆಪು ನೆನೆಸಿಕೊಂಡಾಗ.....
ಅಲ್ಲೇ ಹುಟ್ಟುವುದಲ್ಲವೆ.. ಅದುವೆ ಮುಗುಳು ನಗೆ. 

Thursday, June 29, 2017

ಮುಂಗಾರು


ನೀಲಿ ರಂಗಿನ ಸೀರೆ
ಬಂಗಾರದ ಜರದ ಧಾರೆ
ಮೈಮೇಲೆ ಹೊದ್ದ ಬಾಲೆ
ಮನವ ಕದ್ದಳು ಚಲುವೆ
ಒಲವು ಚಿಗುರಿತು ಅಲ್ಲೆ
ಎದೆಯಲ್ಲಿ ಇನ್ಮೇಲೆ...
ಶುರು ಮುಂಗಾರು ಮಳೆ !!
----ಭಾವಪ್ರೀಯ----

Friday, March 17, 2017

ಅವಳ ಮುಂಗುರುಳು

ಪ್ರೀಯೇ ನಿನ್ನ ಮುಂಗುರುಳು
ಹಣೆಯ ಮುತ್ತಿಕ್ಕುವ ರೀತಿ..!
ಆಗಬಯಸುವೆ ಆ ಮುಂಗುರುಳು
ಸದಾ ಜೊತೆಗಿದ್ದು, ಹರಿಸುವೆ ಪ್ರೀತಿ !!

Thursday, February 16, 2017

ಕಿವಿ ಮಾತು

ಗಂಡ ಹೆಂಡಿರ ಜಗಳ
ಇಬ್ಬರೂ ಒಂದಾಗುವ ತನಕ
ಇಬ್ಬರಿಗೂ ಒಂದಾಗುವ ತನಕ !!

ನಾ....ನಿನ್ನ..!!


ನೀ ಸಿಡುಕಿ ನಿಂತರೇ ನಾ ಅಪ್ಪುವೆನು
ನೀ ಮೌನತಾಳಿದರೇ ನಾ ಮಾತು ಮೆರೆವೆನು
ನೀ ಕೋಪವಿತ್ತರೇ ನಾ ಪ್ರೀತಿಸುವೆನು
ನೀ ದೂರುವ ದಡವಾದರೂ ನಾ ನಿನ್ನ ಬಿಡೆನು
ಸಮುದ್ರದ ಅಲೆಗಳಂತೆ.., ಮತ್ತೆ ಮತ್ತೆ ನಿನ್ನನ್ನೇ ಮುತ್ತುವೆನು !!

Monday, February 06, 2017

ಹಿಮದ ನೆನಪು

ಬಿಸಿಲ ಬೆಳಕಿನಲ್ಲೂ ನಡುಗುವ ಚಳಿ,
ಮಣ್ಣು ಕಾಣುವುದಿಲ್ಲ, ಬರೀ ಹಿಟ್ಟು ಚೆಲ್ಲಿದ ನೆಲ..
ಇಡೀ ಊರೆಲ್ಲಾ ಶುಭ್ರ ಬಿಳಿ ವರ್ಣಮಯ..
ಮೊದಲ ಹಿಮ ನೆನಪು ಎಂದೆಂದಿಗೂ ಚಿರನೂತನ..!

Friday, February 03, 2017

ಆಶಯ


ಚಳಿಗಾಲಕ್ಕೆ ಹೋಗುವ ಅವಸರ
ಅದಕ್ಕೆ ಮಾಯವಾದ ಬಹುಬೇಗ ಸರಸರ
ಬೇಸಿಗೆಯೂ ಬೇಗ ಕಳೆಯಲಿ..
ಮೇಘ ಕವಿದು ಬಹುಬೇಗ ಮಳೆಗರೆಯಲಿ
ಸಂತಸದೀ ಮತ್ತೆ ಕಾವೇರಿ ತುಂಬಿ ಹರಿಯಲಿ.

Monday, December 26, 2016

ನಗು - ಅಳು

ನಗು : ಅವಳ ನಗು, ಹೂ ಮಲ್ಲಿಗೆ
ಕಂಪನು ಸೂಸುವ ಕೆಂಡಸಂಪಿಗೆ !!
ಅಳು : ಅವಳ ಅಳು, ಮನ ಚುಚ್ಚುವ ಮುಳ್ಳು
ಹೃದಯ ಹಿಂಡುವ ನೋವು !!

Friday, October 28, 2016

ದೀಪಾವಳಿ


ನಲ್ಲೆ ನಿನ್ನ ಕಣ್ಣ-ದೀಪಗಳು ಹೊಳೆಯುವ ರೀತಿ
ನನ್ನ ಹೃದಯದಲ್ಲಿ ಚಿಮ್ಮುತಿದೆ ಪ್ರೀತಿ
ನೀ ಬೆಳಗುತಿರು ನನ್ನ ಜೀವನ ಇದೇ ರೀತಿ
ಹರುಷ ತುಂಬಿದ ನನ್ನ ಬಾಳು.., ನಿನ್ನಿಂದ ದಿನವೂ ದೀಪಾವಳಿ.

Wednesday, September 21, 2016

ಬೇಡುವೆನು ..


ಬೇಡುವೆನು ಮೋಡನೇ...,
ಹರಿಸಿಬಿಡು ಮಳೆಯನ್ನ
ತುಂಬಿಸಿ ಬಿಡು ಕಾವೇರಿಯ ಮಡಿಲನ್ನ
ನಮ್ಮ ರೈತರ ಅಳುವು ನಿನ್ನ ನೀರಲ್ಲಿ ಮರೆಯಾಗಿ ಹೋಗಲಿ..!
ಬೇಡುವೆನು ಮೋಡನೇ...,
ಹರಿಸಿಬಿಡು ಮಳೆಯನ್ನ
ಒಳಹರಿವು ತುಂಬಿ ಉಕ್ಕಲಿ ನಮ್ಮ ರಾಜಸಾಗರ
ಕಿತ್ತು ತಿನ್ನುವ ರಣ ಹದ್ದುಗಳಿಗೂ ತಲುಪಲಿ ಜಲದ ಅಬ್ಬರ !
ಬೇಡುವೆನು ಮೋಡನೇ...,
ಹರಿಸಿಬಿಡು ಮಳೆಯನ್ನ
ಮಿಡಿದು ಬಿಡು ಕರುನಾಡ ಕಂದರಿಗೆ
ಒರೆಸಿ ಬಿಡು ಕಂಗಳ ಹರಿದು ಹೋಗಲಿ ನೀರು ಅವರಿಗೆ..!
ಬೇಡುವೆನು ಮೋಡನೇ...,
ಹರಿಸಿಬಿಡು ಮಳೆಯನ್ನ
ಅವರ ಒಡಲೂ ತುಂಬಲಿ
ಇಷ್ಟೊಂದು ಮಳೆ ಹರಿಸು..., ಆ ಪ್ರಳಯ ಮತ್ತೆ ಮರುಕಳಿಸಲಿ..!!


ಬಿ......ಕ......ಟ್ಟು

ನೀರು ಬಿಟ್ಟು ಬಿಟ್ಟು, ಕೃಷ್ಣರಾಜಸಾಗರ ಖಾಲಿಯಾಯಿತು...!
ನೀರು ಕುಡಿದ ಹಂದಿ, ಕುಡಿದು ಕುಡಿದು ಆನೆಯಾಯಿತು...!!

Saturday, September 17, 2016

ಕಾವೇರಿ


ಕಾವೇರಿ ನಮ್ಮವಳಲ್ಲ 
ಕಾವೇರಿ ನಿಮ್ಮವಳೂ ಅಲ್ಲ
ಕಾವೇರಿ ಕರುನಾಡ ಭೂಮಿಯಲ್ಲಿ ಜನಿಸಿದವಳು
ಅವಳು ಸ್ವತಂತ್ರಳು
ಮೈತುಂಬಿದರೇ ಹರಿದಾಳು
ಇಲ್ಲದಿರೆ, ಮೌನಕ್ಕೆ ಜಾರಿಹಳು
ಅವಳು ಜನನಿ, ಅವಳು ಜೀವನದಿ
ಅವಳು ಅವಳಾಗಿಯೇ ಇರಲು ಬಿಡಿ !!


========ಭಾವಪ್ರಿಯ========

ಚಿಂತಾಜನಕ ಸ್ಥಿತಿ


ಕಾವು ಏರಿ ಬಿಸಿಯಾಗಿದೆ, 
ಕುಡಿಯೋಕೆ ನೀರಿಲ್ಲದೆ, 
ಪತ್ರಗಳು ಬರೆದು ಲೇಖನಿ ಕರಗಿದೆ...
ಶಾಂತಿಯುತ ಹೋರಾಟಕ್ಕೆ ಬೆಲೆ ಎಲ್ಲಿದೆ ?


------------ಭಾವಪ್ರಿಯ------------

Friday, August 12, 2016

ಆಧಾರ

ಮರದಲಿ ಕೂತು ತೂಕಡಿಸುತ್ತಿರುವ ಶುಕಗಳಿಗೆ
ಬೆಳಕು ಹರಿಯುವ ಕಾಯುವಿಕೆ
ಬೆಳಕೇ ಕಾಣದ ಕಣ್ಣುಗಳಿಗೆ
ಹೊಸ ಜ್ಯೋತಿ ಪಡೆವ ಬಯಕೆ
ಗ್ರಹಣ ಹಿಡಿದ ಸೂರ್ಯನಿಗೆ
ಮುಕ್ತಿ ಸಿಗುವುದೆಂಬ ನಂಬಿಕೆ
ದಿನವೂ ಹುಟ್ಟುವ ಕನಸ್ಸುಗಳಿಗೆ
ಬಣ್ಣ ಹರಡಬಹುದು ಜೀವಕೆ !

Monday, February 22, 2016

ಎಚ್ಚರಿಕೆ

ಕತ್ತಿ ಕೋಶದಲ್ಲಿದ್ದಷ್ಟು ಶಾಂತಿ
ಹೊರ ಬಿದ್ದರೆ ರಕ್ತ ಕ್ರಾಂತಿ
ದೇಶದ ವೈರಿಗಳೇ ಎಚ್ಚರ
ಮತಿಗೆಟ್ಟರೇ ಇಂದೇ ನಿಮ್ಮ ಸಂಹಾರ.

Monday, February 15, 2016

ಪುಟಾಣಿ


ಅವಳ ಪುಟ್ಟ ಪುಟ್ಟ ಹೆಜ್ಜೆ
ಝಲ್ ಝಲ್ ಎನ್ನುವ ಗೆಜ್ಜೆ
ನಮ್ಮ ಪುಟಾಣಿಯ ಸದ್ದು
ಮನೆಯವರಿಗೆಲ್ಲಾ ಮುದ್ದು !
😄

Thursday, July 30, 2015

Tuesday, July 21, 2015

ಚುಟುಕ

ಅವಳು ಜೊತೆಯಲ್ಲಿದ್ದರೆ, 

ಹೃದಯವದು ಕನಸ್ಸುಗಳ ಸಾಗರ !

ವಿರಹದ ಕ್ಷಣಗಳು ಆವರಿಸಿದರೆ,

ನೆನಪುಗಳಿಂದ ಮನಸ್ಸು ಭಾರ !!

------------------------------

ಬೆಳಕಿಗೆ ಸಾವಿದೆ ಇರುಳಡಿಗೆ
ಕತ್ತಲಿಗೂ ಸಾವಿದೆ ನಸುಕಿನಡೆಗೆ
ಎಂದಿಗೂ ಸಾವಿಗೆ ಅಂಜದಿವರು
ಮತ್ತೆ ಹುಟ್ಟುತ್ತೇನೆ ಎಂಬ ದೃಡ ನಂಬಿಕೆ !

Friday, July 17, 2015

ಚಾಳಿ

ಕೆಲವು ಹೆಣ್ಣುಮಕ್ಕಳದು
ಅದು ಎಂಥದೋ ಚಾಳಿ,
ಮದುವೆಯಾದರೂ...
ಕುವರಿ ಎಂದು ಭಿಂಬಿಸಲು,
ಮುಚ್ಚಿಟ್ಟುಕೊಳ್ಳುತ್ತಾರೆ ತಾಳಿ !!

Monday, July 06, 2015

ಹುಟ್ಟು ಸಾವು

ಬಯಸಿ ಪಡೆದದ್ದಲ್ಲಾ ಹುಟ್ಟು 
ಬಯಸಿದರೂ ಬರುವುದಿಲ್ಲ ಸಾವು 
ಹುಟ್ಟು ಸಾವಿನ ನಡುವೆ ತಪ್ಪಿದ್ದಲ್ಲ ನೋವು !!

ಸಾವೂ ಸುಂದರ

ಸಾವು ಇರಬಹುದು 
ಬಲು ಸುಂದರ.,.!
ಭೇಟಿ ಮಾಡಿದವರು
ಮರೆತೇ ಬಿಡುವರು
ಜೀವಿಸುವ ಸಮರ...!!

Tuesday, June 09, 2015

ಕುವರಿ ಬರುತ್ತಾಳೆ....!!

ಕುವರಿ ಬರುತ್ತಾಳೆ....
===========
ನವ ಜಗಕೆ ಕಾಲಿಟ್ಟ ಕುವರಿ
ನವ ಉಲ್ಲಾಸ ತಂದ ಕುವರಿ
ನವ ಕನಸ್ಸುಗಳ ಹೊತ್ತು ಬರುತ್ತಾಳೆ , ಕುವರಿ ಬರುತ್ತಾಳೆ....!!

ಮುಗ್ಧ ಮನಸಿನ ಕುವರಿ
ಕಿಲ ಕಿಲ ನಗುವ ಕುವರಿ
ಕುದುರೆಯ ಏರಿ ಬರುತ್ತಾಳೆ, ಕುವರಿ ಬರುತ್ತಾಳೆ....!!

ಪುಟ್ಟ ಪುಟ್ಟ ಹೆಜ್ಜೆಯ ಕುವರಿ
ದೊಡ್ಡ ದೊಡ್ಡ ಕಣ್ಣಿನ ಕುವರಿ
ಸಂತಸವ ಬಡಿಸುವ ಕುವರಿ, ಕುವರಿ ಬರುತ್ತಾಳೆ..!!

ಕೆಂಪು ಅಂಬಾರಿಯ ತನ್ನಿರಿ
ರತ್ನ ಕಂಬಳಿಯ ಹಾಸಿರಿ
ಹೃದಯ ಆಳುವ ಕುವರಿ ಬರುತ್ತಾಳೆ.., ನಮ್ಮ ರಾಜಕುಮಾರಿ ..!!

***********************
ಭಾವಪ್ರಿಯ
***********************

Monday, March 30, 2015

ಮತ್ತೆ ಹಾಡುವುದು ಹೃದಯ


ಪರದೆಯ ಸರಿಸಿ ನಿಂತೆ
ಕಿಟಕಿಯಲಿ ಇಣುಕುತ ನಕ್ಕಳು ಆಕೆ
ಮೇಲೆ ಕರಿ ಮುಗಿಲು ...
ಬೀಸುತಿಹುದು ಪರಿಮಳದ ಘಮಲು
ಕಣ್ಣುಗಳು ಕಲಿಯಬೇಕಷ್ಟೆ
ಮುಂದೆ ನಡೆಯಲಿದೆ ಹೃದಯದ್ದೇ ಜಾತ್ರೆ.

Friday, January 30, 2015

THOUGHT FOR THE DAY

I don't say I'm PERFECT, But never pull back myself in putting efforts to be PERFECT & that is my LIFE STYLE.

THOUGHT FOR THE DAY

COMPLAINING ON SUPERIORS TO HIDE ONE'S OWN FAULTS DOES NOT MAKE SENSE & NEVER EARN RESPECT.

ನೋಟ


ಹನ್ನೆರಡು ವರುಷ ಕಳೆದರೂ,
ನೀನು ಇಂದಿಗೂ ಹಾಗೆ...!
ಈ ನೋಟಕು, ಆ ನೋಟಕೂ...
ಇಂದಿಗೂ ಹೃದಯಕೆ, ಹೊಗೆ...!!

ಪ್ರೀತಿ ಇದು ಯಾವ ರೀತಿ ?

ಇಬ್ಬರಲ್ಲೂ,
ಅನ್ಯೋನ್ಯ ಪ್ರೀತಿ
ಮನ ಸೋತ ತಪ್ಪಿಗೆ...
ಮನೆಯವರ.,
ನೋಯಿಸದಿರುವ ರೀತಿ,
ಆ ಇಬ್ಬರ ಪ್ರೀತಿ
ಅವಿಸ್ಮರಣೀಯ ಪ್ರೀತಿ !!

Thursday, January 29, 2015

ನಿದಿರಾ ದೇವಿ

ಇರುಳಲ್ಲಿ ಕಾಣುತ್ತಿಲ್ಲ
ಬೆಳಕಲ್ಲಿ ಹೋಗುತ್ತಿಲ್ಲ
ಕಣ್ಣು ಬೆಂಕಿ ಕೆಂಡ,
ಯಾರೋ ಕದ್ದಿಹರು..!!


ತನುವಿಗೆ ವಿಶ್ರಾಂತಿ ಇಲ್ಲ
ಮನಸ್ಸಿಗೆ ನೆಮ್ಮದಿ ಇಲ್ಲ
ಜೀವ ಚಟಪಟಿಸುಹುದಲ್ಲ,
ಯಾರೋ ಕದ್ದಿಹರು..!!


ಕೊರೆಯುವ ಚಳಿ ಅಲ್ಲ
ಸುಡುತಿರುವ ಬೆಂಕಿಯೂ ಅಲ್ಲ
ಕರಿಮೋಡವೇ ಕವಿದಿರೆ ಕಣ್ಣಿಗೆ ಕಾಣುತ್ತಿಲ್ಲ
ಯಾರೋ ಕದ್ದಿಹರು...!!

Monday, January 26, 2015

ಅಪ್ಪುಗೆ

ಈ ಜುಣುಗುಡುವ ಚಳಿಗೆ

ಯಾವ ಕಂಬಳಿಯೂ ಬಾರದು ಕೆಲಸಕೆ

ನಿನ್ನ ನೆನಪಿನ ಬಿಸಿ ಅಪ್ಪುಗೆ..,

ಬಿಸಿಲನೂ ಮೀರಿಸುವುದು ಬೆಚ್ಚಗೆ !!

ಶ್ವೇತಧಾರಿ


ಎಂದೋ ಕಂಡ ಕನಸ್ಸು
ನನಸಾದದ್ದು ಸೊಗಸು
ಮಳೆಯಲ್ಲಿ ನೆನೆದದ್ದು ಸವಿ ನೆನಪು
ಹಿಮದಲ್ಲಿ ಮಿಂದದ್ದು ಅತಿ ಮೋಜು
ಬ್ರಹ್ಮ ಕರಣಿಸಿದ ಹಾಲು ವರವು
ಭೂಮಿ ಕಂಗಳಿಸಿದಳು ಶ್ವೇತವ ಉಟ್ಟು !

ವಿಹಂಗಮಯ

ಎಲೆಗಳ ಹೊದಿಕೆ ಕಳಚಿದ
ತರು ಲತೆ ಬಳ್ಳಿಗಳಿಗೆ,
ಕೃಷ್ಣ ಸುರಿಸಿದನು
ಮಂಜು ಹನಿಯ ಮಲ್ಲಿಗೆ,
ಶುಭ್ರ ಸುಮಧುರ
ವಿಹಂಗಮಯ ನೋಟಕೆ,
ಕಂಗಳಿಸಿಹರು ಇವರು
ಭುವಿಯಲ್ಲಾ ಶ್ವೇತ ಉಡುಗೆ !!
 

Thursday, December 18, 2014

THOUGHT FOR THE DAY

GOD IMPOSES TOUGH JOB ONLY TO THOSE PEOPLE WHOM HE THINKS CAN DO IT.

ಹೀಗೂ ಉಂಟು

ಹುಡುಗೀರ ಚಪಲವಿರದವನ 
ಮಣಿಸೋಕೆ ಅವಳಾದಳು ಅಣಿ..!
ಮನಸೋಲದ ಹುಡುಗನ ಮೇಲೆ
ಅವಳ ವಿಕೃತ ದಾಳಿ...!!

THOUGHT FOR THE DAY

Its easy to convince a fool rather than wicked immatured minds.

Saturday, December 13, 2014

Bitter Truth

TRUTH ALONE TRIUMPHS statement can be proved wrong by the power of TEARS of women.

ತುಡಿತ

ಸರೋವರದಿ ಮಿಂದೆದ್ದ ಅವಳ
ಕೇಶದಿಂದ ತೋಟಕುತ್ತಿದ್ದ ಹನಿಗಳು
ಮನ ಕಲುಕೇ ಬಿಟ್ಟವು ...!

ನೆನೆದ ಕೇಶವ ಆರಿಸಳವಳು
ಕಿಚ್ಚಿನೊಡನೆ ನಡೆಸಿದ ಸಂಭಾಷಣೆಗಳು
ಹೃದಯ ಕದ್ದೇ ಬಿಟ್ಟವು ...!

ಮೌನದಿ ಕೂಡಲಾರೆ ಇನ್ನೂ
ಕೂತಲ್ಲೇ ಎರಡು ಪದ ಗೀಚಿಯೇ ಬಿಡುವೆ
ಚಿಗುರೊಡದ ಒಲವು ಅವಳ ಹೃದಯ ಮಿಟಲೇ ಬೇಕು..!!

Thursday, December 11, 2014

THOUGHT FOR THE DAY

GREAT THOUGHTS AND GOOD BEHAVIOR DEPICTS THE MATURITY OF A PERSON.

THOUGHT FOR THE DAY

THE HIDDEN POWER OF TALENT CAN ONLY BE WITNESSED WHEN IT IS EXHIBITED.

ದಿನ ಅನುದಿನ

ನೆನ್ನೆ ಕಳೆದಿದೆ
ಅದಕ್ಕೆ ಮರುಗದಿರು
ನಾಳೆ ಬರಲಿದೆ
ಅದಕ್ಕೆ ಹೆದರದಿರು
ಇಂದು ನಿನ್ನದೇ
ಬದುಕಿ ತೋರಿಸಿಬಿಡು !

THOUGHT FOR THE DAY

Sharing & Caring both function similarly, One enhances the knowledge & other the belief.

THOUGHT FOR THE DAY

Fighting attitude makes people to find opportunities in Problems.

ಬೊಗಸೆ

ನಮ್ಮ 
ಕಣ್ಣ ಹನಿಗಳು
ಬೊಗಸೆ ತುಂಬಿದಾಗ .,.
ಮತ್ತೊಬ್ಬರ
ಕಣ್ಣ ಹನಿಗಳಿಗೆ
ಬೊಗಸೆ ಒಡ್ಡಲಾಗದು....! 

Thursday, November 27, 2014

ಬಾಣ

ಹಣದಲ್ಲಿ ಸಂಬಂಧಗಳ ತೂಗುವವರಿಗೆ..
ಪ್ರೀತಿ ವಾತ್ಸಲ್ಯದ ಬೆಲೆಯೇ ತಿಳಿಯದು !!

Wednesday, November 26, 2014

ಅದೊಂದು ಆಗಿರಲಿಲ್ಲವೆಂದರೆ...

ನನ್ನ ಜೀವನ ಚೆನ್ನಾಗಿಯೇ ನಡೆದಿತ್ತು
ಅಂದು ನಾನು ಆಯ ತಪ್ಪಿ ಬಿದ್ದಿದ್ದಕ್ಕೆ
ಕಾಲು ಮುರಿದ.., ಕೂತಿರುವೆ ನಾನು !
ನನ್ನ ಜೀವನ ಚೆನ್ನಾಗಿಯೇ ನಡೆದಿದೆ
ಎಷ್ಟು ಹುಡುಕಿದರೂ ಸಿಗದ ಸಂಗಾತಿ..
ಮದುವೆ ಆಗದೆ.., ಕೂತಿರುವೆ ನಾನು !
ನನ್ನ ಜೀವನ ಚೆನ್ನಾಗಿಯೇ ನಡೆದಿತ್ತು
ಅಂದು ಬೆಂಕಿಯೊಡನೆ ಆಡದಿದ್ದರೆ..
ಕಣ್ಣು ಕಳೆದುಕೊಂಡು..,ಕೂತಿರುವೆ ನಾನು !
ನನ್ನ ಜೀವನ ಚೆನ್ನಾಗಿಯೇ ನಡೆದಿದೆ
ಆ ಸುನಾಮಿ ಬಂದ್ದಿದ್ದರಿಂದ..
ಮನೆ ಕಳೆದುಕೊಂಡು..,ಇಂದು ಗುಡಿಸಲಲ್ಲಿ ನಾನು !

ಎಲ್ಲ ಮನುಷ್ಯರಿಗೂ ಒಂದಿಲ್ಲಾ ಒಂದು ಕೊರತೆ ಇದ್ದೇ ಇರುತ್ತದೆ, ಅದು ಏನೇ ಇದ್ದರೂ ಆ ಕೊರತೆಗಳನ್ನು ಎದುರಿಸುತ್ತಾ ಬಾಳುವುದೇ ಜೀವನ.

Tuesday, November 25, 2014

ಅಲೆಯ ಮಾಲೆ

ಅಲೆಯ ಮೇಲೆ ತೇಲಿ ಬರುತಿದೆ
ನೆನೆದ ಮನದ ಆ ಪತ್ರ.
ಯಾರ ಭಾವಗಳ ಹೊತ್ತು ತಂತೋ
ತೋಡಿಕೊಳ್ಳಲು ಅವನ ಹತ್ರ.
ಹೇಳಿ ಕೇಳಿ ಹುಚ್ಚು ಕವಿಯು ಅವನು
ಗೀಚಿ ಬಿಡುವನೋ ಒಲವ ಮಿತ್ರ.
ಹಾರಿ ಬಿಡಲು ಪ್ರೀತಿಯ ಘಮಲು
ಮೂಡಿಸಬಹುದೇ ಆಗಸದಿ ಆ ಚಂದಿರ ?
ಅವನ ತುಡಿತಕೆ, ನಿನ್ನ ಮಿಡಿತವೂ
ಹೃದಯ ಮುಟ್ಟಿತೆ, ತಿಳಿಸಿ ಹೇಳು ..!
ಅಲೆಯ ಮೇಲೆ ಒಲವ ಮಾಲೆ
ಕಳೆಸಿಕೊಡುವೆ ಎಂದನು !!

Sunday, November 23, 2014

ಅಲ್ಹಾದ

ನೀನಿರದ ಹೊತ್ತಿನಲ್ಲಿ ,
ಸವಿಗನಸ್ಸುಗಳೇ ಮೋಹಕ !
ನೀನಿರದ ಸಾಲುಗಳಲ್ಲಿ,
ನಿನ್ನ ನೆನಪುಗಳೇ ಪ್ರೇರಕ !!

ಪ್ರೀತಿ

ಹೃದಯದೊಳಗೆ ಹುಟ್ಟಿ 
ಹಗಲಿರುಳು ಬೆಳಗುವುದು, 
ಪವಿತ್ರ ಪ್ರೀತಿ !
ಮುಸ್ಸಂಜೆಯಲ್ಲಿ ಹುಟ್ಟಿ
ಬೆಳಗಾಗುತ್ತಲೇ ಮಾಯವಾಗುವುದು,
ನಾಯಿ ಪ್ರೀತಿ !!

Tuesday, November 18, 2014

ಬೇಡಿಕೆ

ನಾ ಬರೆಯಬೇಕೆಂದರೆ ಬೇಕಿಲ್ಲ ಯಾರ ಪ್ರೇರಣೆ
ಅದಕ್ಕಾಗಿ ಬಯಸುವುದಿಲ್ಲ ಯಾವುದೇ ಮನ್ನಣೆ
ಚೆಲ್ಲುತ್ತಿರುವೆ ಭಾವನೆಗಳ ಹೀಗಷ್ಟೇ
ಕದಿಯದಿರಿ ಎನ್ನ ಭಾವನೆಗಳ, ನಾ ಬೇಡುವುದಷ್ಟೇ !

ಮಾದರಿಯಾಗು

ನಿನ್ನ ಮುದ್ದಾದ ಮೊಗದಲ್ಲಿ ನಗುವಿರಲಿ ಗೆಳತಿ
ಮುನಿಸು ಬಾರದಂತೆ ಕಾಯಲಿ ಮೂಗುತಿ
ಸಂಯಮವ ತೋರಲಿ ಕುಂಕುಮ ಹಣೆಯಲ್ಲಿ, ಮಿಂಚಿ
ದುಃಖವ ತಡೆಯುವ ಶಕ್ತಿ ನೀಡಲಿ, ಆ ಕಣ್ಣ ಕಾಡಿಗೆ
ಮಾದರಿ ಹೆಣ್ಣಾಗು ನೀ , ಈ ನಮ್ಮ ನಾಡಿಗೆ.

Sunday, November 16, 2014

ಆ ಅಮೃತ ಘಳಿಗೆ

ನೀ..,
ಇನ್ನೂ ಬಂದಿಲ್ಲವೆಂಬ
ಬೇಸರವಿಲ್ಲವೇ ಗೆಳತಿ..!
ನೀ
ಬಂದು ಸೇರುವ ಆ ಅಮೃತ ಘಳಿಗೆಗೆ
ನೆನೆಯುತ್ತಲೇ., ಕಂಡುಕೊಂಡಿರುವೆನು ಸುಖ ಶಾಂತಿ..!

Saturday, November 15, 2014

ಹೃದಯಗನ್ನಡಿ

ಅವಳೇ ಬರೆದ ಹೆಸರು ಈ ಹೃದಯದ ಮೇಲೆ
ಅಳಿಸಲಾಗುತ್ತಿಲ್ಲ....!
ತಿರುಚಿ ಗೀಚಲೆಂದರೆ....,
ಅದು ಹೃದಯಗನ್ನಡಿಯ ಒಡೆಯುವುದಲ್ಲ !!

ಎಚ್ಚರಿಕೆ

ಅವಳು ಸಿಂಗರಿಸಿಕೊಳ್ಳುವುದೇ ತನಗಾಗಿ..,
ಎಂದು ಇವನಿಗೆ ಅನುಮಾನ...!
ಅರೇ ಓ ಮಂಕೆ.., ಜಾರಿ ಬಿದ್ದಿಯೇ ಮತ್ತೆ ಅದೇ ಹಳ್ಳಕ್ಕೆ ..,
ಮನ ಸೋಲದಿರು...., ಜೋಪಾನ..!!

Tuesday, November 11, 2014

ನೆನಪು

ನೀ
ಬಿಟ್ಟು ಹೋದ
ಹೃದಯವೀಗ... ಖಾಲಿ-ಖಾಲಿ !
ಭಾರದಲ್ಲಿ
ತೂಗುತ್ತಿವೆ...
ನೆನಪುಗಳ, ಜೋಕಾಲಿ !!

Sunday, November 09, 2014

ತುಣುಕುಗಳು

ಅವಳ ಪಾದಾರ್ಪಣೆ ತಂದಿತ್ತು ,
ಬಾಳಲ್ಲಿ ಹೊಸ ಬೆಳಕು !
ಅವಳಿರದ ಹೊತ್ತು....
ಬದುಕಿನುದ್ದಕ್ಕೂ, ಸವಿ ನೆನಪುಗಳ ಮೆಲಕು !!

ಪೌರ್ಣಿಮೆ ಇರದ ಚಂದ್ರ, " ಅರ್ಧ "
ಅರ್ಧಾಂಗಿ ಇರದ ಬದುಕು, " ವ್ಯರ್ಥ "

ಹೃದಯ ಮಂದಿರದಲ್ಲಿ ಬಂದಾಗ...
ನಡೆದಿತ್ತು ಅಲ್ಲಿ ಪ್ರೇಮ ಜಾತ್ರೆ !
ಅವಳು ತೊರೆದು ನಡೆದಾಗ...
ಅವನ ಕೈಯಲ್ಲಿ ಭಿಕ್ಷಾ ಪಾತ್ರೆ... !!

Thursday, November 06, 2014

ಹಣೆಬರಹ

ಹಣೆಬರಹದ ಹೊಣೆಗಾರ
ನೀನು ಅಲ್ಲ, ನಾನೂ ಅಲ್ಲ !
ಬರೆದಿರಬಹುದೇ ಆ ಬ್ರಹ್ಮ
ಕೇಳಿದರೆ..., ಕೈ ಜಾಡಿಸಿದನು
ನಿಮ್ಮ ಕರ್ಮ.......,
ಆ ಹೊಣೆಗಾರ ನಾನಲ್ಲ ಎಂದನಲ್ಲ !!

ಚಿರಕಾಲ

ನಾ
ಕಂಡ ಕನಸ್ಸಿನಲ್ಲಿ
ನಿನದೊಂದು ಪಾಲಿರಲಿ !
ಕಾಲ
ಎಷ್ಟೇ ದೂರ ಸರಿದರೂ
ನನ್ನ ನೆನಪು ಸಾದಾ ಇರಲಿ !!

ಹೆಜ್ಜೆ

ಅವಳ ಹೆಜ್ಜೆ
ನನ್ನತ್ತ ಮೂಡಿದಾಗ
ಜಗವೆಲ್ಲಾ ವರ್ಣಮಯ !
ಅವೇ ಹೆಜ್ಜೆಗಳು.,
ದೂರ ಸರಿದಾಗ....
ಜಗವೇ ಮಾಯ.......!!

Monday, November 03, 2014

ಹೊಣೆ

ನೀವು ಭಾರತದ ಯಾವದೇ ರಾಜ್ಯದವರಿದ್ದರೂ ಸರಿ,
ನೀವೆಲ್ಲಾ ನಮ್ಮವರೇ ಅನ್ನುವ ಮನೋಭಾವ ನಮ್ಮದು.!
ಹಾಗೆಯೇ ನೀವು ನಮ್ಮವರಾಗಿ ಬೆರೆಯಿರಿ 
ಕನ್ನಡವ ಅರೆತು, ಕಲಿತು, ಬೆಳೆಸುವ ಹೊಣೆ ನಿಮ್ಮದಾಗಿರಲಿ..!!

ಕಿವಿಮಾತು

ಪ್ರದರ್ಶಿಸದಿರಿ ಹೆಂಗಳೆಯರೇ ಅದು ಅಪಾಯವೇ ಸರಿ
ಅಂದವನ್ನು ಮುಚ್ಚಿಡುವುದರಿಂದಲೇ ಅದಕ್ಕುಂಟು ಬೆಲೆ
ನಿಮ್ಮ ಮೆಚ್ಚುವವರು ಅಂತರಂಗವ ಬಯಸುವರು
ತೋರಿಕೆಯ ಬಹಿರಂಗ ಕಿಡಿಗೇಳಿಗಳ ಮನ ಬಂಗ
ಸೂಕ್ಷ್ಮ ಮಾತನ್ನು ತಿಳಿಯಿರಿ , ಅಪಾಯವ ಉಪಾಯದಿಂದ ಗೆಲ್ಲಿರಿ. !!

Sunday, November 02, 2014

ಇದು ಅದೇನಾ ???

ಅವಳು ಹೃದಯದಲ್ಲಿಲ್ಲ ಅನ್ನುವುದು ಸುಳ್ಳು..
ಆದಕ್ಕೆ, ಅವಳ ಒಂದು ಸಹಿಯಿಂದಲೆ ಹೃದಯ ಇನ್ನೂ ಬಡಿಯುತ್ತಿದೆ..!!

ಖಾಲಿ ಜಾಗ

ಹೃದಯ ಅಲಂಕರಿಸುವುದಿಲ್ಲ ಎಂಬ ಖಯಾಲಿ
ಅವಳಿಗಾಗಿ ಮಿಸಲಿಟ್ಟ ಜಾಗ ಇನ್ನೂ.., ಖಾಲಿ.

ಚಿಗುರು ಪ್ರೀತಿ

ಅವಳು ಹುಟ್ಟು ಹಾಕಿದ ಪ್ರೀತಿ ಕಮರೊ ಹೊತ್ತು
ಬೆಳೆಯದೇ ಹೃದಯದಲ್ಲಿ, ಅರಳದೇ ಮಾಸಿತ್ತು !!

ಮೋಹಕ ಪ್ರೀಯೆ

ಬಹಳ ಮೋಹಕ ಚೆಲುವೆ ನಿನ್ನ ಮೈಮಾಟ
ಪ್ರತಿ ಸಲ ಕಂಡು ನಿನ್ನ ಮನವಾಯಿತು ಮರ್ಕಟ
ಚಿತ್ರ ಬದಲಾಯಿಸಿ ಪದೆ ಪದೆ, ನೀಡುತ್ತಿರುವೆ ಹೃದಯಕ್ಕೆ ಸಂಕಟ
ಇನ್ನು ಸಿಗದಿರೆ ನೀ ನಾ ಸೇರುವ ಮಠ. !!

Monday, October 13, 2014

THOUGHT FOR THE DAY

SOME PEOPLE ARE PRIORITY IN SOMEONE'S EYES , BUT THE SPECIAL ONE'S NEEDS TO CREATE THE TOP PRIORITY IF THEY WANT THEMSELVES TO BE TREATED AS ROYAL.

Sunday, October 12, 2014

ನತದೃಷ್ಠೆ

ಹೆಂಡತಿಯ ಅಧಿಕಾರ ಸಿಕ್ಕಿತು ಆದರೆ, 
ಅವಳು ಅವನ ಮನ ಗೆಲ್ಲಲಿಲ್ಲ..!
ಅವಳ ಹಣೆಬಾರಕ್ಕೆ ಅವಳೇ ಹೊಣೆ
ಈಗ ಅವಳಿಗೆ ಅಧಿಕಾರವೂ ಇಲ್ಲ.., ಅವನೂ ಇಲ್ಲ..!!

ಹಿತವಚನ

ಆಳುವುದು, ಆಳಾಗುವುದು ನಿಯಮವಲ್ಲಾ ಜಗದಲ್ಲಿ
ಸಹಬಾಳ್ವೆಗೆ ನಿಯಮ ಬೇಕಿಲ್ಲ , 
ಬಾಳಿ ಬದುಕುತ್ತೇವೆ ಅನ್ನುವ ಛಲವೊಂದಿದ್ದರೆ ಸಾಕು..!

ತಕ್ಕಡಿ

ತಕ್ಕಡಿ ತೂಗುತ್ತಿರುವಳು ಅವಳಲ್ಲ
ಕಣ್ಣಿಗೆ ಕಪ್ಪು ಪಟ್ಟಿ ಧರಿಸಿದವಳು...!
ತೂಗಬೇಕಾದವರು ನಾವೇ... ಕಣ್ಣು ತೆರೆದು.,
ಎಡ ಭಾರವಾಗದಂತೆ..., ಬಲ ಕುಸಿಯದಂತೆ..!!

ಹುಡ್ ಹುಡ್

ಅಬ್ಬರಿಸುತ್ತಿದೆ ಹುಡ್ ಹುಡ್
ಜನರೆಲ್ಲಿ ನಡುಕ ಗಡಗಡ್
ದಯನೀಯ ಸ್ಥಿತಿ ಬ್ಯಾಡ್ ಬ್ಯಾಡ್ 
ಏಕೆ ನಡೆಯುತ್ತಿದೆ ಇಂತಹ ಗಡ್ ಬಡ್ ? 

ಸಂಶಯ

ಪದೆ ಪದೆ ಇಣುಕಿ ನೋಡುತ್ತಾಳೆ.. 
ಅವನ ಹೃದಯದಲ್ಲಿ.......!
ಯಾರಾದರೂ ಚೋರಿ ಕದ್ದು ಕುಳಿತಿರಬೇಕು ಅಂತಾ..
ಎಲ್ಲೋ ಮೂಲೆಯಲ್ಲಿ....!!

ವಿಚಾರ

ಕೆಲವೊಂದು ಜೋಡಿಗಳನ್ನು ನೋಡಿದಾಗ ಈ ಹುಡುಗಾ ಆ ಹುಡುಗಿಯನ್ನ ಅಥವಾ ಈ ಹುಡುಗಿ ಅಂಥಹ ಹುಡುಗನನ್ನು ಹೇಗೆ ಮದುವೆ ಆದನಪ್ಪಾ/ಆದಳಪ್ಪಾ ಅನ್ನಿಸುತ್ತದೆ. 
ಮನುಷ್ಯನ ಬಾಹ್ಯ ಸೌಂದರ್ಯ ಪ್ರೀತಿಸೋಕೆ ಕಾರಣವಲ್ಲ, ಅದು ಅವರ ಪರಸ್ಪರ ಸ್ವಭಾವ ಅರೆತು ಬಾಳುವ ನಂಬಿಕೆ ಹಾಗು ಒಬ್ಬರ ಸುಖದಲ್ಲಿ ಇನ್ನೊಬ್ಬರು ಸಂತೋಷ ಕಾಣುವ ಮಹಾಗುಣ. ಹೀಗೆ ಬಾಳುತ್ತಿರುವ ಎಲ್ಲಾ ಜೋಡಿಗಳಿಗೂ ಒಳ್ಳೇಯದಾಗಲಿ.

ಕಿವಿಮಾತು

ಹುಡುಕಲು ಹೋಗ ಬೇಡ ಗೆಳತಿ ಇಲ್ಲದ ಪ್ರೀತಿಯ...
ಅದು ಇರುವುದಾದರೇ.........,
ತಾನಾಗಿಯೇ ಒಲಿದು ಬರುವುದು ನಿನ್ನ ಬಳಿಗೆ..!! 

ಹಿತವಚನ

ನೋವು ಅನುಭವಿಸಿದವರಿಗೆ ಅನುಕಂಪ ನೀಡುವುದಕ್ಕಿಂತ ಅವರ ಜೊತೆ ಇದ್ದು ಧೈರ್ಯ ತುಂಬುವುದು ಶ್ರೇಷ್ಟವಾದದ್ದು.

Thursday, October 09, 2014

ಧಾರಾಳ V/S ಸ್ವಾರ್ಥ

ನನ್ನದೆಲ್ಲಾ ನಿನ್ನದು ಅನ್ನುವುದು ಧಾರಾಳತನ,
ನಿನ್ನದೆಲ್ಲಾ ನನ್ನದೇ ಅನ್ನುವುದು ಸ್ವಾರ್ಥ !! 

ಸುಮ್ನೆ ಒಂದು ವಿಚಾರ

ಎಲ್ಲಾ ಬಾರಿ ಪಡೆದುಕೊಂಡಿದ್ದು ಅಷ್ಟೇ ಖುಶಿ ಕೊಡುವುದಿಲ್ಲ, ಕೆಲ ಕಾಲದಲ್ಲಿ ಕಳೆದುಕೊಂಡದ್ದು ಖುಶಿ ಕೊಡುತ್ತದೆ.

ಅವಳದೇ ಮತ್ತು

ನನ್ನವಳು ನಡೆಸಿರುವಳು ದಿನವೂ ಕಸರತ್ತು
ಬೃಹದ್ದಾಕಾರ ಅಳಿಸಿ ಆಕಾರಳಾಗುವ ಗಮ್ಮತ್ತು
ಅವಳು ಹೇಗಿದ್ದರೂ ಚಂದವೇ ನನಗೆ, ಈ ನಡುವೆ ತಲೆಗೇರಿದೆ ಅವಳದೇ ಮತ್ತು..!!

ಕುಂಬಳಕಾಯಿಯ ಅಳಲು

ಕುಂಬಳ ಕಾಯಿ ನಾನು
ಯಾರೋ ಬಿತ್ತಿದರು
ಯಾರೋ ಉತ್ತಿದರು
ನನ್ನ ಬೆಳಸಿದವ ನನ್ನ ಬಳಿಸಲಿಲ್ಲ
ಯಾರಿಗೋ ಮಾರಿ ಬಿಟ್ಟನು
ಅವನು ಕೊಂಡು ತಂದು
ಮಹಾನಗರದ ರಸ್ತೆ ಬೀದಿ ಅಡಿಗೆ ಹಾಕಿರುವನು...
ಇನ್ನೂ ಮುಂದೆ ಇದೆಯಂತೆ ಹಬ್ಬ
ನನ್ನ ಬಗೆದು ಬಿಸಾಡುವರಂತೆ
ಆ ಬಗವಂತನ ಹೆಸರಿನಲ್ಲಿ...
ರಸ್ತೆಯ ಇಬ್ಬದಿಯಲ್ಲೂ ನನ್ನ ಕಳೆಬರಹಗಳು...!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...