Monday, May 07, 2018

ಕನ್ನಡ ಕೊಲೆಗಡಕರು

ಬೇಂದ್ರೆ ಅಜ್ಜಾ ನಿನ್ನ ಕವನ
ವಾಚಿಸಿ ಖುಶಿ ಪಟ್ಟಿದ್ದೆ ನಾನು...
ಮತಿಗೆಟ್ಟ ರಾಜಕೀಯದವರು
ವಾಚಿಸಿ ನಿಮ್ಮ ಕವನವ ಅವಮಾನಿಸುತಿಹರು
ಕನ್ನಡ ಬಾರದ ಒಬ್ಬ ಮೂರ್ಖ
ತಾನು ಕನ್ನಡಿಗ ಎನ್ನುತಿಹನು
ಮತದ ಭಿಕ್ಷೆಗಾಗಿ ನಿಮ್ಮ ಕವನವ
ಹರಕು ಮುರುಕು ಮಾಡಿ ಹಾಡಿದನು
ಕೂಗಿ ಕೂಗಿ ಹೇಳಿದನು...
ಹುಚ್ಚು ಮಂಗ್ಯಾ ಹಂತವನು
ದೇಶಾನ ಆಳೊ ನೆಪದಾಗ
ನನ್ನ ಕನ್ನಡವನ್ನೇ ಕೊಂದನು...!

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...