Saturday, September 17, 2016

ಕಾವೇರಿ


ಕಾವೇರಿ ನಮ್ಮವಳಲ್ಲ 
ಕಾವೇರಿ ನಿಮ್ಮವಳೂ ಅಲ್ಲ
ಕಾವೇರಿ ಕರುನಾಡ ಭೂಮಿಯಲ್ಲಿ ಜನಿಸಿದವಳು
ಅವಳು ಸ್ವತಂತ್ರಳು
ಮೈತುಂಬಿದರೇ ಹರಿದಾಳು
ಇಲ್ಲದಿರೆ, ಮೌನಕ್ಕೆ ಜಾರಿಹಳು
ಅವಳು ಜನನಿ, ಅವಳು ಜೀವನದಿ
ಅವಳು ಅವಳಾಗಿಯೇ ಇರಲು ಬಿಡಿ !!


========ಭಾವಪ್ರಿಯ========

ಚಿಂತಾಜನಕ ಸ್ಥಿತಿ


ಕಾವು ಏರಿ ಬಿಸಿಯಾಗಿದೆ, 
ಕುಡಿಯೋಕೆ ನೀರಿಲ್ಲದೆ, 
ಪತ್ರಗಳು ಬರೆದು ಲೇಖನಿ ಕರಗಿದೆ...
ಶಾಂತಿಯುತ ಹೋರಾಟಕ್ಕೆ ಬೆಲೆ ಎಲ್ಲಿದೆ ?


------------ಭಾವಪ್ರಿಯ------------

Friday, August 12, 2016

ಆಧಾರ

ಮರದಲಿ ಕೂತು ತೂಕಡಿಸುತ್ತಿರುವ ಶುಕಗಳಿಗೆ
ಬೆಳಕು ಹರಿಯುವ ಕಾಯುವಿಕೆ
ಬೆಳಕೇ ಕಾಣದ ಕಣ್ಣುಗಳಿಗೆ
ಹೊಸ ಜ್ಯೋತಿ ಪಡೆವ ಬಯಕೆ
ಗ್ರಹಣ ಹಿಡಿದ ಸೂರ್ಯನಿಗೆ
ಮುಕ್ತಿ ಸಿಗುವುದೆಂಬ ನಂಬಿಕೆ
ದಿನವೂ ಹುಟ್ಟುವ ಕನಸ್ಸುಗಳಿಗೆ
ಬಣ್ಣ ಹರಡಬಹುದು ಜೀವಕೆ !

Monday, February 22, 2016

ಎಚ್ಚರಿಕೆ

ಕತ್ತಿ ಕೋಶದಲ್ಲಿದ್ದಷ್ಟು ಶಾಂತಿ
ಹೊರ ಬಿದ್ದರೆ ರಕ್ತ ಕ್ರಾಂತಿ
ದೇಶದ ವೈರಿಗಳೇ ಎಚ್ಚರ
ಮತಿಗೆಟ್ಟರೇ ಇಂದೇ ನಿಮ್ಮ ಸಂಹಾರ.

Monday, February 15, 2016

ಪುಟಾಣಿ


ಅವಳ ಪುಟ್ಟ ಪುಟ್ಟ ಹೆಜ್ಜೆ
ಝಲ್ ಝಲ್ ಎನ್ನುವ ಗೆಜ್ಜೆ
ನಮ್ಮ ಪುಟಾಣಿಯ ಸದ್ದು
ಮನೆಯವರಿಗೆಲ್ಲಾ ಮುದ್ದು !
😄

Thursday, July 30, 2015

Tuesday, July 21, 2015

ಚುಟುಕ

ಅವಳು ಜೊತೆಯಲ್ಲಿದ್ದರೆ, 

ಹೃದಯವದು ಕನಸ್ಸುಗಳ ಸಾಗರ !

ವಿರಹದ ಕ್ಷಣಗಳು ಆವರಿಸಿದರೆ,

ನೆನಪುಗಳಿಂದ ಮನಸ್ಸು ಭಾರ !!

------------------------------

ಬೆಳಕಿಗೆ ಸಾವಿದೆ ಇರುಳಡಿಗೆ
ಕತ್ತಲಿಗೂ ಸಾವಿದೆ ನಸುಕಿನಡೆಗೆ
ಎಂದಿಗೂ ಸಾವಿಗೆ ಅಂಜದಿವರು
ಮತ್ತೆ ಹುಟ್ಟುತ್ತೇನೆ ಎಂಬ ದೃಡ ನಂಬಿಕೆ !

Friday, July 17, 2015

ಚಾಳಿ

ಕೆಲವು ಹೆಣ್ಣುಮಕ್ಕಳದು
ಅದು ಎಂಥದೋ ಚಾಳಿ,
ಮದುವೆಯಾದರೂ...
ಕುವರಿ ಎಂದು ಭಿಂಬಿಸಲು,
ಮುಚ್ಚಿಟ್ಟುಕೊಳ್ಳುತ್ತಾರೆ ತಾಳಿ !!

Monday, July 06, 2015

ಹುಟ್ಟು ಸಾವು

ಬಯಸಿ ಪಡೆದದ್ದಲ್ಲಾ ಹುಟ್ಟು 
ಬಯಸಿದರೂ ಬರುವುದಿಲ್ಲ ಸಾವು 
ಹುಟ್ಟು ಸಾವಿನ ನಡುವೆ ತಪ್ಪಿದ್ದಲ್ಲ ನೋವು !!

ಸಾವೂ ಸುಂದರ

ಸಾವು ಇರಬಹುದು 
ಬಲು ಸುಂದರ.,.!
ಭೇಟಿ ಮಾಡಿದವರು
ಮರೆತೇ ಬಿಡುವರು
ಜೀವಿಸುವ ಸಮರ...!!

Tuesday, June 09, 2015

ಕುವರಿ ಬರುತ್ತಾಳೆ....!!

ಕುವರಿ ಬರುತ್ತಾಳೆ....
===========
ನವ ಜಗಕೆ ಕಾಲಿಟ್ಟ ಕುವರಿ
ನವ ಉಲ್ಲಾಸ ತಂದ ಕುವರಿ
ನವ ಕನಸ್ಸುಗಳ ಹೊತ್ತು ಬರುತ್ತಾಳೆ , ಕುವರಿ ಬರುತ್ತಾಳೆ....!!

ಮುಗ್ಧ ಮನಸಿನ ಕುವರಿ
ಕಿಲ ಕಿಲ ನಗುವ ಕುವರಿ
ಕುದುರೆಯ ಏರಿ ಬರುತ್ತಾಳೆ, ಕುವರಿ ಬರುತ್ತಾಳೆ....!!

ಪುಟ್ಟ ಪುಟ್ಟ ಹೆಜ್ಜೆಯ ಕುವರಿ
ದೊಡ್ಡ ದೊಡ್ಡ ಕಣ್ಣಿನ ಕುವರಿ
ಸಂತಸವ ಬಡಿಸುವ ಕುವರಿ, ಕುವರಿ ಬರುತ್ತಾಳೆ..!!

ಕೆಂಪು ಅಂಬಾರಿಯ ತನ್ನಿರಿ
ರತ್ನ ಕಂಬಳಿಯ ಹಾಸಿರಿ
ಹೃದಯ ಆಳುವ ಕುವರಿ ಬರುತ್ತಾಳೆ.., ನಮ್ಮ ರಾಜಕುಮಾರಿ ..!!

***********************
ಭಾವಪ್ರಿಯ
***********************

Monday, March 30, 2015

ಮತ್ತೆ ಹಾಡುವುದು ಹೃದಯ


ಪರದೆಯ ಸರಿಸಿ ನಿಂತೆ
ಕಿಟಕಿಯಲಿ ಇಣುಕುತ ನಕ್ಕಳು ಆಕೆ
ಮೇಲೆ ಕರಿ ಮುಗಿಲು ...
ಬೀಸುತಿಹುದು ಪರಿಮಳದ ಘಮಲು
ಕಣ್ಣುಗಳು ಕಲಿಯಬೇಕಷ್ಟೆ
ಮುಂದೆ ನಡೆಯಲಿದೆ ಹೃದಯದ್ದೇ ಜಾತ್ರೆ.

Friday, January 30, 2015

THOUGHT FOR THE DAY

I don't say I'm PERFECT, But never pull back myself in putting efforts to be PERFECT & that is my LIFE STYLE.

THOUGHT FOR THE DAY

COMPLAINING ON SUPERIORS TO HIDE ONE'S OWN FAULTS DOES NOT MAKE SENSE & NEVER EARN RESPECT.

ನೋಟ


ಹನ್ನೆರಡು ವರುಷ ಕಳೆದರೂ,
ನೀನು ಇಂದಿಗೂ ಹಾಗೆ...!
ಈ ನೋಟಕು, ಆ ನೋಟಕೂ...
ಇಂದಿಗೂ ಹೃದಯಕೆ, ಹೊಗೆ...!!

ಪ್ರೀತಿ ಇದು ಯಾವ ರೀತಿ ?

ಇಬ್ಬರಲ್ಲೂ,
ಅನ್ಯೋನ್ಯ ಪ್ರೀತಿ
ಮನ ಸೋತ ತಪ್ಪಿಗೆ...
ಮನೆಯವರ.,
ನೋಯಿಸದಿರುವ ರೀತಿ,
ಆ ಇಬ್ಬರ ಪ್ರೀತಿ
ಅವಿಸ್ಮರಣೀಯ ಪ್ರೀತಿ !!

Thursday, January 29, 2015

ನಿದಿರಾ ದೇವಿ

ಇರುಳಲ್ಲಿ ಕಾಣುತ್ತಿಲ್ಲ
ಬೆಳಕಲ್ಲಿ ಹೋಗುತ್ತಿಲ್ಲ
ಕಣ್ಣು ಬೆಂಕಿ ಕೆಂಡ,
ಯಾರೋ ಕದ್ದಿಹರು..!!


ತನುವಿಗೆ ವಿಶ್ರಾಂತಿ ಇಲ್ಲ
ಮನಸ್ಸಿಗೆ ನೆಮ್ಮದಿ ಇಲ್ಲ
ಜೀವ ಚಟಪಟಿಸುಹುದಲ್ಲ,
ಯಾರೋ ಕದ್ದಿಹರು..!!


ಕೊರೆಯುವ ಚಳಿ ಅಲ್ಲ
ಸುಡುತಿರುವ ಬೆಂಕಿಯೂ ಅಲ್ಲ
ಕರಿಮೋಡವೇ ಕವಿದಿರೆ ಕಣ್ಣಿಗೆ ಕಾಣುತ್ತಿಲ್ಲ
ಯಾರೋ ಕದ್ದಿಹರು...!!

Monday, January 26, 2015

ಅಪ್ಪುಗೆ

ಈ ಜುಣುಗುಡುವ ಚಳಿಗೆ

ಯಾವ ಕಂಬಳಿಯೂ ಬಾರದು ಕೆಲಸಕೆ

ನಿನ್ನ ನೆನಪಿನ ಬಿಸಿ ಅಪ್ಪುಗೆ..,

ಬಿಸಿಲನೂ ಮೀರಿಸುವುದು ಬೆಚ್ಚಗೆ !!

ಶ್ವೇತಧಾರಿ


ಎಂದೋ ಕಂಡ ಕನಸ್ಸು
ನನಸಾದದ್ದು ಸೊಗಸು
ಮಳೆಯಲ್ಲಿ ನೆನೆದದ್ದು ಸವಿ ನೆನಪು
ಹಿಮದಲ್ಲಿ ಮಿಂದದ್ದು ಅತಿ ಮೋಜು
ಬ್ರಹ್ಮ ಕರಣಿಸಿದ ಹಾಲು ವರವು
ಭೂಮಿ ಕಂಗಳಿಸಿದಳು ಶ್ವೇತವ ಉಟ್ಟು !

ವಿಹಂಗಮಯ

ಎಲೆಗಳ ಹೊದಿಕೆ ಕಳಚಿದ
ತರು ಲತೆ ಬಳ್ಳಿಗಳಿಗೆ,
ಕೃಷ್ಣ ಸುರಿಸಿದನು
ಮಂಜು ಹನಿಯ ಮಲ್ಲಿಗೆ,
ಶುಭ್ರ ಸುಮಧುರ
ವಿಹಂಗಮಯ ನೋಟಕೆ,
ಕಂಗಳಿಸಿಹರು ಇವರು
ಭುವಿಯಲ್ಲಾ ಶ್ವೇತ ಉಡುಗೆ !!
 

Thursday, December 18, 2014

THOUGHT FOR THE DAY

GOD IMPOSES TOUGH JOB ONLY TO THOSE PEOPLE WHOM HE THINKS CAN DO IT.

ಹೀಗೂ ಉಂಟು

ಹುಡುಗೀರ ಚಪಲವಿರದವನ 
ಮಣಿಸೋಕೆ ಅವಳಾದಳು ಅಣಿ..!
ಮನಸೋಲದ ಹುಡುಗನ ಮೇಲೆ
ಅವಳ ವಿಕೃತ ದಾಳಿ...!!

THOUGHT FOR THE DAY

Its easy to convince a fool rather than wicked immatured minds.

Saturday, December 13, 2014

Bitter Truth

TRUTH ALONE TRIUMPHS statement can be proved wrong by the power of TEARS of women.

ತುಡಿತ

ಸರೋವರದಿ ಮಿಂದೆದ್ದ ಅವಳ
ಕೇಶದಿಂದ ತೋಟಕುತ್ತಿದ್ದ ಹನಿಗಳು
ಮನ ಕಲುಕೇ ಬಿಟ್ಟವು ...!

ನೆನೆದ ಕೇಶವ ಆರಿಸಳವಳು
ಕಿಚ್ಚಿನೊಡನೆ ನಡೆಸಿದ ಸಂಭಾಷಣೆಗಳು
ಹೃದಯ ಕದ್ದೇ ಬಿಟ್ಟವು ...!

ಮೌನದಿ ಕೂಡಲಾರೆ ಇನ್ನೂ
ಕೂತಲ್ಲೇ ಎರಡು ಪದ ಗೀಚಿಯೇ ಬಿಡುವೆ
ಚಿಗುರೊಡದ ಒಲವು ಅವಳ ಹೃದಯ ಮಿಟಲೇ ಬೇಕು..!!

Thursday, December 11, 2014

THOUGHT FOR THE DAY

GREAT THOUGHTS AND GOOD BEHAVIOR DEPICTS THE MATURITY OF A PERSON.

THOUGHT FOR THE DAY

THE HIDDEN POWER OF TALENT CAN ONLY BE WITNESSED WHEN IT IS EXHIBITED.

ದಿನ ಅನುದಿನ

ನೆನ್ನೆ ಕಳೆದಿದೆ
ಅದಕ್ಕೆ ಮರುಗದಿರು
ನಾಳೆ ಬರಲಿದೆ
ಅದಕ್ಕೆ ಹೆದರದಿರು
ಇಂದು ನಿನ್ನದೇ
ಬದುಕಿ ತೋರಿಸಿಬಿಡು !

THOUGHT FOR THE DAY

Sharing & Caring both function similarly, One enhances the knowledge & other the belief.

THOUGHT FOR THE DAY

Fighting attitude makes people to find opportunities in Problems.

ಬೊಗಸೆ

ನಮ್ಮ 
ಕಣ್ಣ ಹನಿಗಳು
ಬೊಗಸೆ ತುಂಬಿದಾಗ .,.
ಮತ್ತೊಬ್ಬರ
ಕಣ್ಣ ಹನಿಗಳಿಗೆ
ಬೊಗಸೆ ಒಡ್ಡಲಾಗದು....! 

Thursday, November 27, 2014

ಬಾಣ

ಹಣದಲ್ಲಿ ಸಂಬಂಧಗಳ ತೂಗುವವರಿಗೆ..
ಪ್ರೀತಿ ವಾತ್ಸಲ್ಯದ ಬೆಲೆಯೇ ತಿಳಿಯದು !!

Wednesday, November 26, 2014

ಅದೊಂದು ಆಗಿರಲಿಲ್ಲವೆಂದರೆ...

ನನ್ನ ಜೀವನ ಚೆನ್ನಾಗಿಯೇ ನಡೆದಿತ್ತು
ಅಂದು ನಾನು ಆಯ ತಪ್ಪಿ ಬಿದ್ದಿದ್ದಕ್ಕೆ
ಕಾಲು ಮುರಿದ.., ಕೂತಿರುವೆ ನಾನು !
ನನ್ನ ಜೀವನ ಚೆನ್ನಾಗಿಯೇ ನಡೆದಿದೆ
ಎಷ್ಟು ಹುಡುಕಿದರೂ ಸಿಗದ ಸಂಗಾತಿ..
ಮದುವೆ ಆಗದೆ.., ಕೂತಿರುವೆ ನಾನು !
ನನ್ನ ಜೀವನ ಚೆನ್ನಾಗಿಯೇ ನಡೆದಿತ್ತು
ಅಂದು ಬೆಂಕಿಯೊಡನೆ ಆಡದಿದ್ದರೆ..
ಕಣ್ಣು ಕಳೆದುಕೊಂಡು..,ಕೂತಿರುವೆ ನಾನು !
ನನ್ನ ಜೀವನ ಚೆನ್ನಾಗಿಯೇ ನಡೆದಿದೆ
ಆ ಸುನಾಮಿ ಬಂದ್ದಿದ್ದರಿಂದ..
ಮನೆ ಕಳೆದುಕೊಂಡು..,ಇಂದು ಗುಡಿಸಲಲ್ಲಿ ನಾನು !

ಎಲ್ಲ ಮನುಷ್ಯರಿಗೂ ಒಂದಿಲ್ಲಾ ಒಂದು ಕೊರತೆ ಇದ್ದೇ ಇರುತ್ತದೆ, ಅದು ಏನೇ ಇದ್ದರೂ ಆ ಕೊರತೆಗಳನ್ನು ಎದುರಿಸುತ್ತಾ ಬಾಳುವುದೇ ಜೀವನ.

Tuesday, November 25, 2014

ಅಲೆಯ ಮಾಲೆ

ಅಲೆಯ ಮೇಲೆ ತೇಲಿ ಬರುತಿದೆ
ನೆನೆದ ಮನದ ಆ ಪತ್ರ.
ಯಾರ ಭಾವಗಳ ಹೊತ್ತು ತಂತೋ
ತೋಡಿಕೊಳ್ಳಲು ಅವನ ಹತ್ರ.
ಹೇಳಿ ಕೇಳಿ ಹುಚ್ಚು ಕವಿಯು ಅವನು
ಗೀಚಿ ಬಿಡುವನೋ ಒಲವ ಮಿತ್ರ.
ಹಾರಿ ಬಿಡಲು ಪ್ರೀತಿಯ ಘಮಲು
ಮೂಡಿಸಬಹುದೇ ಆಗಸದಿ ಆ ಚಂದಿರ ?
ಅವನ ತುಡಿತಕೆ, ನಿನ್ನ ಮಿಡಿತವೂ
ಹೃದಯ ಮುಟ್ಟಿತೆ, ತಿಳಿಸಿ ಹೇಳು ..!
ಅಲೆಯ ಮೇಲೆ ಒಲವ ಮಾಲೆ
ಕಳೆಸಿಕೊಡುವೆ ಎಂದನು !!

Sunday, November 23, 2014

ಅಲ್ಹಾದ

ನೀನಿರದ ಹೊತ್ತಿನಲ್ಲಿ ,
ಸವಿಗನಸ್ಸುಗಳೇ ಮೋಹಕ !
ನೀನಿರದ ಸಾಲುಗಳಲ್ಲಿ,
ನಿನ್ನ ನೆನಪುಗಳೇ ಪ್ರೇರಕ !!

ಪ್ರೀತಿ

ಹೃದಯದೊಳಗೆ ಹುಟ್ಟಿ 
ಹಗಲಿರುಳು ಬೆಳಗುವುದು, 
ಪವಿತ್ರ ಪ್ರೀತಿ !
ಮುಸ್ಸಂಜೆಯಲ್ಲಿ ಹುಟ್ಟಿ
ಬೆಳಗಾಗುತ್ತಲೇ ಮಾಯವಾಗುವುದು,
ನಾಯಿ ಪ್ರೀತಿ !!

Tuesday, November 18, 2014

ಬೇಡಿಕೆ

ನಾ ಬರೆಯಬೇಕೆಂದರೆ ಬೇಕಿಲ್ಲ ಯಾರ ಪ್ರೇರಣೆ
ಅದಕ್ಕಾಗಿ ಬಯಸುವುದಿಲ್ಲ ಯಾವುದೇ ಮನ್ನಣೆ
ಚೆಲ್ಲುತ್ತಿರುವೆ ಭಾವನೆಗಳ ಹೀಗಷ್ಟೇ
ಕದಿಯದಿರಿ ಎನ್ನ ಭಾವನೆಗಳ, ನಾ ಬೇಡುವುದಷ್ಟೇ !

ಮಾದರಿಯಾಗು

ನಿನ್ನ ಮುದ್ದಾದ ಮೊಗದಲ್ಲಿ ನಗುವಿರಲಿ ಗೆಳತಿ
ಮುನಿಸು ಬಾರದಂತೆ ಕಾಯಲಿ ಮೂಗುತಿ
ಸಂಯಮವ ತೋರಲಿ ಕುಂಕುಮ ಹಣೆಯಲ್ಲಿ, ಮಿಂಚಿ
ದುಃಖವ ತಡೆಯುವ ಶಕ್ತಿ ನೀಡಲಿ, ಆ ಕಣ್ಣ ಕಾಡಿಗೆ
ಮಾದರಿ ಹೆಣ್ಣಾಗು ನೀ , ಈ ನಮ್ಮ ನಾಡಿಗೆ.

Sunday, November 16, 2014

ಆ ಅಮೃತ ಘಳಿಗೆ

ನೀ..,
ಇನ್ನೂ ಬಂದಿಲ್ಲವೆಂಬ
ಬೇಸರವಿಲ್ಲವೇ ಗೆಳತಿ..!
ನೀ
ಬಂದು ಸೇರುವ ಆ ಅಮೃತ ಘಳಿಗೆಗೆ
ನೆನೆಯುತ್ತಲೇ., ಕಂಡುಕೊಂಡಿರುವೆನು ಸುಖ ಶಾಂತಿ..!

Saturday, November 15, 2014

ಹೃದಯಗನ್ನಡಿ

ಅವಳೇ ಬರೆದ ಹೆಸರು ಈ ಹೃದಯದ ಮೇಲೆ
ಅಳಿಸಲಾಗುತ್ತಿಲ್ಲ....!
ತಿರುಚಿ ಗೀಚಲೆಂದರೆ....,
ಅದು ಹೃದಯಗನ್ನಡಿಯ ಒಡೆಯುವುದಲ್ಲ !!

ಎಚ್ಚರಿಕೆ

ಅವಳು ಸಿಂಗರಿಸಿಕೊಳ್ಳುವುದೇ ತನಗಾಗಿ..,
ಎಂದು ಇವನಿಗೆ ಅನುಮಾನ...!
ಅರೇ ಓ ಮಂಕೆ.., ಜಾರಿ ಬಿದ್ದಿಯೇ ಮತ್ತೆ ಅದೇ ಹಳ್ಳಕ್ಕೆ ..,
ಮನ ಸೋಲದಿರು...., ಜೋಪಾನ..!!

Tuesday, November 11, 2014

ನೆನಪು

ನೀ
ಬಿಟ್ಟು ಹೋದ
ಹೃದಯವೀಗ... ಖಾಲಿ-ಖಾಲಿ !
ಭಾರದಲ್ಲಿ
ತೂಗುತ್ತಿವೆ...
ನೆನಪುಗಳ, ಜೋಕಾಲಿ !!

Sunday, November 09, 2014

ತುಣುಕುಗಳು

ಅವಳ ಪಾದಾರ್ಪಣೆ ತಂದಿತ್ತು ,
ಬಾಳಲ್ಲಿ ಹೊಸ ಬೆಳಕು !
ಅವಳಿರದ ಹೊತ್ತು....
ಬದುಕಿನುದ್ದಕ್ಕೂ, ಸವಿ ನೆನಪುಗಳ ಮೆಲಕು !!

ಪೌರ್ಣಿಮೆ ಇರದ ಚಂದ್ರ, " ಅರ್ಧ "
ಅರ್ಧಾಂಗಿ ಇರದ ಬದುಕು, " ವ್ಯರ್ಥ "

ಹೃದಯ ಮಂದಿರದಲ್ಲಿ ಬಂದಾಗ...
ನಡೆದಿತ್ತು ಅಲ್ಲಿ ಪ್ರೇಮ ಜಾತ್ರೆ !
ಅವಳು ತೊರೆದು ನಡೆದಾಗ...
ಅವನ ಕೈಯಲ್ಲಿ ಭಿಕ್ಷಾ ಪಾತ್ರೆ... !!

Thursday, November 06, 2014

ಹಣೆಬರಹ

ಹಣೆಬರಹದ ಹೊಣೆಗಾರ
ನೀನು ಅಲ್ಲ, ನಾನೂ ಅಲ್ಲ !
ಬರೆದಿರಬಹುದೇ ಆ ಬ್ರಹ್ಮ
ಕೇಳಿದರೆ..., ಕೈ ಜಾಡಿಸಿದನು
ನಿಮ್ಮ ಕರ್ಮ.......,
ಆ ಹೊಣೆಗಾರ ನಾನಲ್ಲ ಎಂದನಲ್ಲ !!

ಚಿರಕಾಲ

ನಾ
ಕಂಡ ಕನಸ್ಸಿನಲ್ಲಿ
ನಿನದೊಂದು ಪಾಲಿರಲಿ !
ಕಾಲ
ಎಷ್ಟೇ ದೂರ ಸರಿದರೂ
ನನ್ನ ನೆನಪು ಸಾದಾ ಇರಲಿ !!

ಹೆಜ್ಜೆ

ಅವಳ ಹೆಜ್ಜೆ
ನನ್ನತ್ತ ಮೂಡಿದಾಗ
ಜಗವೆಲ್ಲಾ ವರ್ಣಮಯ !
ಅವೇ ಹೆಜ್ಜೆಗಳು.,
ದೂರ ಸರಿದಾಗ....
ಜಗವೇ ಮಾಯ.......!!

Monday, November 03, 2014

ಹೊಣೆ

ನೀವು ಭಾರತದ ಯಾವದೇ ರಾಜ್ಯದವರಿದ್ದರೂ ಸರಿ,
ನೀವೆಲ್ಲಾ ನಮ್ಮವರೇ ಅನ್ನುವ ಮನೋಭಾವ ನಮ್ಮದು.!
ಹಾಗೆಯೇ ನೀವು ನಮ್ಮವರಾಗಿ ಬೆರೆಯಿರಿ 
ಕನ್ನಡವ ಅರೆತು, ಕಲಿತು, ಬೆಳೆಸುವ ಹೊಣೆ ನಿಮ್ಮದಾಗಿರಲಿ..!!

ಕಿವಿಮಾತು

ಪ್ರದರ್ಶಿಸದಿರಿ ಹೆಂಗಳೆಯರೇ ಅದು ಅಪಾಯವೇ ಸರಿ
ಅಂದವನ್ನು ಮುಚ್ಚಿಡುವುದರಿಂದಲೇ ಅದಕ್ಕುಂಟು ಬೆಲೆ
ನಿಮ್ಮ ಮೆಚ್ಚುವವರು ಅಂತರಂಗವ ಬಯಸುವರು
ತೋರಿಕೆಯ ಬಹಿರಂಗ ಕಿಡಿಗೇಳಿಗಳ ಮನ ಬಂಗ
ಸೂಕ್ಷ್ಮ ಮಾತನ್ನು ತಿಳಿಯಿರಿ , ಅಪಾಯವ ಉಪಾಯದಿಂದ ಗೆಲ್ಲಿರಿ. !!

Sunday, November 02, 2014

ಇದು ಅದೇನಾ ???

ಅವಳು ಹೃದಯದಲ್ಲಿಲ್ಲ ಅನ್ನುವುದು ಸುಳ್ಳು..
ಆದಕ್ಕೆ, ಅವಳ ಒಂದು ಸಹಿಯಿಂದಲೆ ಹೃದಯ ಇನ್ನೂ ಬಡಿಯುತ್ತಿದೆ..!!

ಖಾಲಿ ಜಾಗ

ಹೃದಯ ಅಲಂಕರಿಸುವುದಿಲ್ಲ ಎಂಬ ಖಯಾಲಿ
ಅವಳಿಗಾಗಿ ಮಿಸಲಿಟ್ಟ ಜಾಗ ಇನ್ನೂ.., ಖಾಲಿ.

ಚಿಗುರು ಪ್ರೀತಿ

ಅವಳು ಹುಟ್ಟು ಹಾಕಿದ ಪ್ರೀತಿ ಕಮರೊ ಹೊತ್ತು
ಬೆಳೆಯದೇ ಹೃದಯದಲ್ಲಿ, ಅರಳದೇ ಮಾಸಿತ್ತು !!

ಮೋಹಕ ಪ್ರೀಯೆ

ಬಹಳ ಮೋಹಕ ಚೆಲುವೆ ನಿನ್ನ ಮೈಮಾಟ
ಪ್ರತಿ ಸಲ ಕಂಡು ನಿನ್ನ ಮನವಾಯಿತು ಮರ್ಕಟ
ಚಿತ್ರ ಬದಲಾಯಿಸಿ ಪದೆ ಪದೆ, ನೀಡುತ್ತಿರುವೆ ಹೃದಯಕ್ಕೆ ಸಂಕಟ
ಇನ್ನು ಸಿಗದಿರೆ ನೀ ನಾ ಸೇರುವ ಮಠ. !!

Monday, October 13, 2014

THOUGHT FOR THE DAY

SOME PEOPLE ARE PRIORITY IN SOMEONE'S EYES , BUT THE SPECIAL ONE'S NEEDS TO CREATE THE TOP PRIORITY IF THEY WANT THEMSELVES TO BE TREATED AS ROYAL.

Sunday, October 12, 2014

ನತದೃಷ್ಠೆ

ಹೆಂಡತಿಯ ಅಧಿಕಾರ ಸಿಕ್ಕಿತು ಆದರೆ, 
ಅವಳು ಅವನ ಮನ ಗೆಲ್ಲಲಿಲ್ಲ..!
ಅವಳ ಹಣೆಬಾರಕ್ಕೆ ಅವಳೇ ಹೊಣೆ
ಈಗ ಅವಳಿಗೆ ಅಧಿಕಾರವೂ ಇಲ್ಲ.., ಅವನೂ ಇಲ್ಲ..!!

ಹಿತವಚನ

ಆಳುವುದು, ಆಳಾಗುವುದು ನಿಯಮವಲ್ಲಾ ಜಗದಲ್ಲಿ
ಸಹಬಾಳ್ವೆಗೆ ನಿಯಮ ಬೇಕಿಲ್ಲ , 
ಬಾಳಿ ಬದುಕುತ್ತೇವೆ ಅನ್ನುವ ಛಲವೊಂದಿದ್ದರೆ ಸಾಕು..!

ತಕ್ಕಡಿ

ತಕ್ಕಡಿ ತೂಗುತ್ತಿರುವಳು ಅವಳಲ್ಲ
ಕಣ್ಣಿಗೆ ಕಪ್ಪು ಪಟ್ಟಿ ಧರಿಸಿದವಳು...!
ತೂಗಬೇಕಾದವರು ನಾವೇ... ಕಣ್ಣು ತೆರೆದು.,
ಎಡ ಭಾರವಾಗದಂತೆ..., ಬಲ ಕುಸಿಯದಂತೆ..!!

ಹುಡ್ ಹುಡ್

ಅಬ್ಬರಿಸುತ್ತಿದೆ ಹುಡ್ ಹುಡ್
ಜನರೆಲ್ಲಿ ನಡುಕ ಗಡಗಡ್
ದಯನೀಯ ಸ್ಥಿತಿ ಬ್ಯಾಡ್ ಬ್ಯಾಡ್ 
ಏಕೆ ನಡೆಯುತ್ತಿದೆ ಇಂತಹ ಗಡ್ ಬಡ್ ? 

ಸಂಶಯ

ಪದೆ ಪದೆ ಇಣುಕಿ ನೋಡುತ್ತಾಳೆ.. 
ಅವನ ಹೃದಯದಲ್ಲಿ.......!
ಯಾರಾದರೂ ಚೋರಿ ಕದ್ದು ಕುಳಿತಿರಬೇಕು ಅಂತಾ..
ಎಲ್ಲೋ ಮೂಲೆಯಲ್ಲಿ....!!

ವಿಚಾರ

ಕೆಲವೊಂದು ಜೋಡಿಗಳನ್ನು ನೋಡಿದಾಗ ಈ ಹುಡುಗಾ ಆ ಹುಡುಗಿಯನ್ನ ಅಥವಾ ಈ ಹುಡುಗಿ ಅಂಥಹ ಹುಡುಗನನ್ನು ಹೇಗೆ ಮದುವೆ ಆದನಪ್ಪಾ/ಆದಳಪ್ಪಾ ಅನ್ನಿಸುತ್ತದೆ. 
ಮನುಷ್ಯನ ಬಾಹ್ಯ ಸೌಂದರ್ಯ ಪ್ರೀತಿಸೋಕೆ ಕಾರಣವಲ್ಲ, ಅದು ಅವರ ಪರಸ್ಪರ ಸ್ವಭಾವ ಅರೆತು ಬಾಳುವ ನಂಬಿಕೆ ಹಾಗು ಒಬ್ಬರ ಸುಖದಲ್ಲಿ ಇನ್ನೊಬ್ಬರು ಸಂತೋಷ ಕಾಣುವ ಮಹಾಗುಣ. ಹೀಗೆ ಬಾಳುತ್ತಿರುವ ಎಲ್ಲಾ ಜೋಡಿಗಳಿಗೂ ಒಳ್ಳೇಯದಾಗಲಿ.

ಕಿವಿಮಾತು

ಹುಡುಕಲು ಹೋಗ ಬೇಡ ಗೆಳತಿ ಇಲ್ಲದ ಪ್ರೀತಿಯ...
ಅದು ಇರುವುದಾದರೇ.........,
ತಾನಾಗಿಯೇ ಒಲಿದು ಬರುವುದು ನಿನ್ನ ಬಳಿಗೆ..!! 

ಹಿತವಚನ

ನೋವು ಅನುಭವಿಸಿದವರಿಗೆ ಅನುಕಂಪ ನೀಡುವುದಕ್ಕಿಂತ ಅವರ ಜೊತೆ ಇದ್ದು ಧೈರ್ಯ ತುಂಬುವುದು ಶ್ರೇಷ್ಟವಾದದ್ದು.

Thursday, October 09, 2014

ಧಾರಾಳ V/S ಸ್ವಾರ್ಥ

ನನ್ನದೆಲ್ಲಾ ನಿನ್ನದು ಅನ್ನುವುದು ಧಾರಾಳತನ,
ನಿನ್ನದೆಲ್ಲಾ ನನ್ನದೇ ಅನ್ನುವುದು ಸ್ವಾರ್ಥ !! 

ಸುಮ್ನೆ ಒಂದು ವಿಚಾರ

ಎಲ್ಲಾ ಬಾರಿ ಪಡೆದುಕೊಂಡಿದ್ದು ಅಷ್ಟೇ ಖುಶಿ ಕೊಡುವುದಿಲ್ಲ, ಕೆಲ ಕಾಲದಲ್ಲಿ ಕಳೆದುಕೊಂಡದ್ದು ಖುಶಿ ಕೊಡುತ್ತದೆ.

ಅವಳದೇ ಮತ್ತು

ನನ್ನವಳು ನಡೆಸಿರುವಳು ದಿನವೂ ಕಸರತ್ತು
ಬೃಹದ್ದಾಕಾರ ಅಳಿಸಿ ಆಕಾರಳಾಗುವ ಗಮ್ಮತ್ತು
ಅವಳು ಹೇಗಿದ್ದರೂ ಚಂದವೇ ನನಗೆ, ಈ ನಡುವೆ ತಲೆಗೇರಿದೆ ಅವಳದೇ ಮತ್ತು..!!

ಕುಂಬಳಕಾಯಿಯ ಅಳಲು

ಕುಂಬಳ ಕಾಯಿ ನಾನು
ಯಾರೋ ಬಿತ್ತಿದರು
ಯಾರೋ ಉತ್ತಿದರು
ನನ್ನ ಬೆಳಸಿದವ ನನ್ನ ಬಳಿಸಲಿಲ್ಲ
ಯಾರಿಗೋ ಮಾರಿ ಬಿಟ್ಟನು
ಅವನು ಕೊಂಡು ತಂದು
ಮಹಾನಗರದ ರಸ್ತೆ ಬೀದಿ ಅಡಿಗೆ ಹಾಕಿರುವನು...
ಇನ್ನೂ ಮುಂದೆ ಇದೆಯಂತೆ ಹಬ್ಬ
ನನ್ನ ಬಗೆದು ಬಿಸಾಡುವರಂತೆ
ಆ ಬಗವಂತನ ಹೆಸರಿನಲ್ಲಿ...
ರಸ್ತೆಯ ಇಬ್ಬದಿಯಲ್ಲೂ ನನ್ನ ಕಳೆಬರಹಗಳು...!

Tuesday, September 30, 2014

THOUGHT FOR THE DAY


BLIND BELIEF IS THE INNOCENCE OF A CHILD , BELIEVING A PERSON EVEN AFTER EXPERIENCING CRUELTY IS FOOLISHNESS.

Sunday, September 28, 2014

ಹಿತವಚನ


ಎಷ್ಟೋ  ವಿಷಯಗಳಲ್ಲಿ "ಸರಿ" ಅಂತಾ ಒಪ್ಪಿಕೊಳ್ಳುವುದು ಬಹಳಷ್ಟು ವಾದ-ವಿವಾದಗಳನ್ನು ಕಡಿಮೆ ಮಾಡುತ್ತದೆ.

Saturday, September 27, 2014

ಲೂಟಿ

ನನ್ನ ಮನದ ತೆರೆದ ಮುಸ್ತಕ ಆಲಿಸಿದ ಅವಳು,
                                                      ಬಹಳ ಚೂಟಿ !
ಈಗ ತರ ತರಹದ ವಯ್ಯಾರ ಬಳಸಿ ಮಾಡುತ್ತಿರುವಳು,
                                                     ನನ್ನ ಕನಸ್ಸುಗಳ ಲೂಟಿ !!

Thursday, September 25, 2014

ರಸ್ತೆಗೆ ಮೇಕಪ್

ಕೆರ ಕೆಟ್ಟು ಹದಗೆಟ್ಟು ಹೋದ ರಸ್ತೆಗಳಿಗೆ.....,
ಬಳಿದಾರೆ ಟಾರು...!!
ಆ ವರುಣನಿಗೆ ಅದೇನೋ ಕೋಪ.............,
ಮತ್ತೆ ಕಿತ್ತೆಸೆಯಲು ಸುರಿಸ್ಯಾನ ಮಳೆ ನೀರು !

ನಿರ್ಲಿಪ್ತಳು

ಅವನು,
ಬಣ್ಣ ಬಣ್ಣವಾಗಿ ಬಣ್ಣಿಸಿದ ಕನ್ಯೆ...
ಇವಳೇ....
ಅಂತಾ ಅವಳು ಭಾವಿಸಿ ಬೀಗಿದಳು..!
ಪಾಪ ಅವಳಿಗೇನು ತಿಳಿದೀತು,
ಅವನು ವರ್ಣಿಸಿದ ಕನ್ಯೆ ...ಬರೀ ಕವನಗಳಲ್ಲೇ ಅವಳು ನಿರ್ಲಿಪ್ತಳು..!!

Monday, September 01, 2014

THOUGHT FOR THE DAY

Extend the helping hand to the poor & needy,  not to people who pretend to be poor and are greedy.

Wednesday, August 27, 2014

ಹಬ್ಬ

ಹಬ್ಬ ಬಂತು ಹಬ್ಬ
ಕಾಣದ ದೇವರ ಹುಡುಕುವ ಹಬ್ಬ
ಬೀದಿ ಬೀದಿಯಲ್ಲಿ ದೇವರ ಕೂಡಿಸುವ ಹಬ್ಬ

ಹಬ್ಬ ಬಂತು ಹಬ್ಬ
ಜನರ ಪೀಡಿಸಿ, ಹಣ ವಸೂಲಿ ಮಾಡುವ ಹಬ್ಬ
ಪುಂಡ ಪೋಕರಿಗಳಿಗೆ ಪುಂಡಾಟದ ಹಬ್ಬ

ಹಬ್ಬ ಬಂತು ಹಬ್ಬ
ಹಾದಿ ಬೀದಿಗೆ ಜಗಮಗಿಸೋ ದೀಪ
ಭಕ್ತಿಯೇ ಇಲ್ಲಾ.., ಅಬ್ಬರವೇ ಎಲ್ಲಾ

ಹಬ್ಬ ಬಂತು ಹಬ್ಬ
ಕೆರೆ ಭಾವಿಗಳೆಲ್ಲಾ ಪೂಜೆ ತ್ಯಾಜಗಳ ಸಾಗರ
ರಸ್ತೆ ರಸ್ತೆಗಳಲ್ಲಿ ತಿಪ್ಪೆ ಹೆಕ್ಕುವ ಸಮರ

ಹಬ್ಬ ಬೇಕೆ ಹಬ್ಬ..?
ನಗರ ಹೊಲಸುಗೊಳಿಸುವ ಹಬ್ಬ
ಅರ್ಥವ ಮರೆತು ಆಚರಿಸುವ ಹಬ್ಬ..!!!

Monday, August 25, 2014

ಗೊಂದಲ

ಸದಾ ದೂರವಾಣಿಯಲ್ಲಿ ಮಗ್ನಳಾಗಿದ್ದವಳ ನಗುವ ಕಂಡು
ಎಂತಹ ಒಳ್ಳೇಯ ಜೋಡಿ ಇರಬಹುದು ಇವರದು ಅಂದೆ..
ಮತ್ತೊಂದು ಬಂದ ದೂರವಾಣಿಗೆ ಇವಳ ಕಠೋರ ನಿಲುವು
ಆಗಲೇ ತಿಳಿದದ್ದು ಅವಳ ಕಾಲುಂಗರಗಳು ಯಾರದ್ದೊ ಎಂದು..!!

Thursday, August 21, 2014

ತಟಸ್ಥ

ಬದುಕು ಎಷ್ಟೇ ಕೆಸರೆರೆಚಿದರೂ ನಾನು ತಟಸ್ಥ
ಸಮುದ್ರದ ದಡದಲ್ಲಿರುವ ಬಂಡೆಯ ಹಾಗೆ...!
ಎಂದಾದರೊಂದು ದಿನ ಮಳೆಗರೆದು ತೊಳೆಯುವುದು
ಬಿಸಿಲೊರೆಸಿ ಸೂರ್ಯ ಆರಿಸುವ ಹಾಗೆ. !!

Sunday, August 10, 2014

THOUGHT FOR THE DAY

Dare to Dream and keep dreaming , Because " THE DREAMS COME TRUE " Believe me ITS TRUE.

कतल

ऐसे बेरहमी से ना देखो कहीं आशिक़ की कतल ना होजाये 
घायल दिल को मरहम के बजाये कही मौत ना मिलजाए !!

Friday, August 01, 2014

ತಂಗಾಳಿ

ಅನುಭವಿಸುತ್ತಿರುವೆನು ನಾನು ನಿನ್ನ ಇರುವಿಕೆ....
ಈ ತಂಪಾದ ಪರ್ವತ ಶ್ರೇಣಿಗಳಲ್ಲಿ ,
ಸೊಕಿ ಹೋದಾಗಲೆಲ್ಲಾ ಆ ಹಿಮಬೆರೆತ ತಂಗಾಳಿ !!

ಮಳೆ

ಮಳೆಯಲ್ಲಿ ನೆನೆದವ ನಾನಲ್ಲ...
ಆದರೂ ಇಂದೇಕೊ ನೆನೆಯುತ್ತಿರುವೆ
ನಿನ್ನ ನೆನಪಲ್ಲೆ.., ನನ್ನೇ ನಾನು ಮರೆತು !!

ಮೌನ


ನನ್ನ ನೂರು ಪ್ರಶ್ನೇಗಳಿಗೆ ಅವಳದು ಒಂದೇ ಉತ್ತರ "ಮೌನಗೀತೆ "
ಅದಕ್ಕೆ ನನ್ನ ಕಡೆಯಿಂದ, ಅವಳಿಗೆ ಬರೆಯುತ್ತಿರುವೆ "ಮೌನಕವಿತೆ"

Tuesday, June 10, 2014

ಸೆರೆಮನೆ

ನಿನ್ನ ಪ್ರೀತಿಸುವ ತಪ್ಪು ಮಾಡಿರುವೆ ಗೆಳೆಯಾ...
ಮಣ್ಣಿಸು ನನ್ನ, ಬಂಧಿಸಿ ಬಿಡು ನಿನ್ನ ಹೃದಯದ ಸೆರೆಮನೆಯಲ್ಲಿ...
ನಿನ್ನ ಸನೀಹ ಬಯಸಿದ ನಾನು, ಖೈಧಿಯೇ ಸರಿ....!!

Friday, June 06, 2014

ಕೋಪ

ಅವಳಿಗೋ ಅತಿಯಾದ ಕೋಪ
ಕಿತ್ತೆಸೆದಳು ಗೆಳೆಯರ ಬಳಗದಿಂದ ಹಾಕುತ್ತಾ ಶಾಪ
ಗೆಳೆಯರಂತಿದ್ದವರೆಲ್ಲಾ ಹುಸಿಗೊಳಿಸಲು ಅವಳ ನಂಬಿಕೆಯ
ಮತ್ತೆ ವಾಲಿತು ಅವಳ ಮನ ಅವನಿದ್ದಕಡೆಗೆ... ಅನ್ನಿಸುತ್ತಾ ಪಾಪ..!

ಹುಚ್ಚು ಮನ

ಕಣ್ಣ ಮುಂದೆ ಇರುವಾಗ ತಾತ್ಸಾರ ತೋರುವ ಮನ
ಬಳಿ ಇರದಾಗ ಅವಳನ್ನೇ ಹುಡುಕುತ್ತಿರುತ್ತದೆ...ಹುಚ್ಚು ಮನ.! 

Thursday, June 05, 2014

ಭಾಷ್ಪ

ದುಃಖ ಉಮ್ಮಳಿಸಿದ್ದಾಗ ಸುರಿಸುತ್ತಾರೆ ಕಣ್ಣೀರು 
ಸಂತೋಷಕ್ಕೂ ಹರಿಸುತ್ತಾಳೆ ಹನಿಗಳು ಹಲವು
ತಿಳಿಯದಿವಳ ಮನ.., ಏತಕ್ಕಾಗಿ ಈ ಒಲವು ?

Tuesday, May 20, 2014

ಬೆಳಕು

ನೆರೆ ಮನೆಗಳ ಅಂಗಳವೆಲ್ಲಾ ಹೊನ್ನ ಬೆಳಕು 
ನನ್ನ ಮನೆ ಅಂಗಳು ಮಾತ್ರ ಕರಿ ನೆರಳು 
ಕಾರಣ ನನ್ನ ಮನೆ ಇರುವುದು ಜಗ ಬೆಳಗುವ ದೀಪದ ಕೆಳಗೆ !!

Friday, April 11, 2014

ಹಿತವಚನ

ಪರರ ತಟ್ಟೆಯಲ್ಲಿ ಏನಿದೆ ಎಂದು ತಿಳಿಯುವ ಬದಲು ನಮ್ಮ ತಟ್ಟೆಯಲ್ಲಿ ಏನಿದೆ ಎಂದು ಅರಿತು ನಮ್ಮ ಏಳಿಗೆಗೆ ದುಡಿದರೆ ನಮಗೇ ಒಳಿತು ಹಾಗು ಶ್ರೇಯಸ್ಸು.

Friday, March 28, 2014

ಗೌರಮ್ಮ

ಬಿಚ್ಚೋಲೆ ಗೌರಮ್ಮನಿಗೆ ರಾಜಕೀಯ ಹುಚ್ಚು


ಯಾವ ಮೂಢರು ಆನ್ ಮಾಡಿಹರು ಇವಳ ಮನದ ಸ್ವಿಚ್ಚು ?

ಚುನಾವಣೆ

ಬೀಸುತ್ತಿದೆ ರಾಜ್ಯಕೀಯ ಗಾಳಿ

ಪಕ್ಷ , ಪ್ರತಿ ಪಕ್ಷಗಳ ವಾಗ್ದಾಳಿ

ಯಾರ ಮುಡಿಗೇರಿದರೂ " ಚುಕ್ಕಾಣಿ " ನೀ ತಿಳಿ

ವಸ್ತುಗಳು ತುಟ್ಟಿ, ಜನರು ದಿವಾಳಿ !

Thursday, March 27, 2014

ಅರ್ಹತೆ

ಪ್ರತಿ ಚಿತ್ರದಲ್ಲೂ ಬದಲಾಯಿಸುವಂತೆ ಪಾತ್ರ
ದಿನೆ ದಿನೆ ಬದಲಾಯಿಸುತ್ತಿರುವರು ಪಕ್ಷ !
ಸಮಾಜ ಸೇವೆ ಅನ್ನುವುದು ತೆರೆಯ ಮೇಲಿನ ಚಿತ್ರವಲ್ಲ
ಇಂತಹ ನಟಿಮಣಿಯರು ಸಮಾಜದ ಕಾರ್ಯಕ್ಕೆ ಅರ್ಹರೇ ಅಲ್ಲಾ !!

ವಿಪರ್ಯಾಸ

ನಟನೆಯ ಬಿಟ್ಟು ಬೀದಿಗೆ ಇಳಿತಾರಂತೆ ನಟರು,
ತೆರೆಯ ಮೇಲಿನ ನಾಟಕ ಬಿಟ್ಟು, ಬೀದಿ ನಾಟಕಕ್ಕೆ ಹಾಜರು !!

ಕಸರತ್ತು

ಇನ್ನು ಶುರುವಾಯ್ತು...
ಚುನಾವಣೆಯ ಪ್ರಚಾರದ ಭರಾಟೆ !
ಜನರನ್ನು ಒಲಿಸಲು ನಡೆಸುವರು...
ಹಲವು ತರಹದ ಕಸರತ್ತು - ಕರಾಟೆ !!

ಹುಸಿ ನಗೆ

ಹುಸಿ ನಗೆಯ ಬೀರಿ ಜಗವ ಮೆಚ್ಚಿಸಬಹುದು
ಹುಸಿ ನಗೆಯು ಅನ್ಯರ ಜೊತೆ ಬೆರೆಸಲೂಬಹುದು
ಹುಸಿ ನಗೆಯ ಬಣ್ಣವ ಬಲ್ಲವರ್ಯಾರು ?

ಹುಸಿ ನಗೆಯ ಮರ್ಮ ತಿಳಿದವರಿಲ್ಲ
ಹುಸಿ ನಗೆಯೊಂದಿಗೆ ಬಾಳಲಾಗುವುದಿಲ್ಲ
ಹುಸಿ ನಗೆಯು ಎಂದೆಂದಿಗೂ ನೋವನ್ನು ಅಳಿಸುವುದಿಲ್ಲ !!

THOUGHT FOR THE DAY

"  The false SMILE on the face never cures the pain of the heart " 

Wednesday, March 26, 2014

ಬೇಲಿ

ಅವನು ಹೃದಯದ ಸುತ್ತಲೂ,
ಬೆಸಿದ್ದಿದ್ದಾನಂತೆ ಮುಳ್ಳಿನ ಬೇಲಿ !
ಯಾರೂ ಕದಿಯ ಬಾರದು ಅಂತಾ..,
ಅವನ ಹೃದಯದ ಮಲ್ಲಿ !!

ಸಿಹಿ ಮುತ್ತು

ನಲ್ಲೆ, ತಂದು ಕೊಡಲೆ ನಿನಗೆ ಆ ಸಾಗರದಾಳದ ಮುತ್ತು .? ಅಂದನವನು.... 
ನಲ್ಲಾ, ಆ ಮುತ್ತಗಳ ಬೆಲೆ ಎಷ್ಟೇ ಇದ್ದರೂ .., ನೀ ನೀಡುವ ಪ್ರೀತಿಯ ಸಿಹಿ ಮುತ್ತಿಗೆ ಬೆಲೆ ಕಟ್ಟಲಾದೀತೆ ಎಂದಳಾಕೆ ..?

ಸಹಜ ಗುಣ

ದಿನ ದಿನ ಮುನಿಸಿಕೊಂಡರೂ ನಾ

ಮರುದಿನ ಅವಳು ಮತ್ತೆ ಸಹಜ

ಮನಮೆಚ್ಚಿಹುದು ಅವಳ ಆ ಸಹಜ ಗುಣ

ಮತ್ತೆ ಮತ್ತೆ ಸೆಳೆಯುತ್ತದೆ ಅವಳೆಡೆಗೆ ನನ್ನ.

ರಾಜ್ಯಕೀಯ

ದಿಲ್ಲಿಯಿಂದ ಕನ್ಯಾಕುಮಾರಿವರೆಗೂ ಕುಟುಂಬ ರಾಜ್ಯಕೀಯ

ಯಾರು ಗೆದ್ದರು ನಮಗೆ ಸುಖವೇನೂ ಇಲ್ಲಾ,

ಜನರ ಕಷ್ಟಗಳ ದೂಡಿ.., ತುಂಬಿಸಿಕೊಳ್ಳುವರು ಅವರವರ ಪಾತ್ರೆಯ !

ಸುದ್ದಿ


ದೇವರನ್ನು ಒಲಿಸಿಕೊಳ್ಳಲು ಏನ್ ಏನು ಮಾಡುತ್ತಾರೋ ಮೂಢ ಜನ
ಇವರುಗಳ ಕೆಟ್ಟ ಚಟ ತೀರಿಸಿಕೊಳ್ಳಲು ದೇವರಿಗೂ ಮದ್ಯದ ನೈವೇದ್ಯ !

Tuesday, March 25, 2014

ಮತ್ತೆ ಮತ್ತೆ ನೆನಪಾಗುತ್ತದೆ.....!

ಅವಳನ್ನು ರಮಿಸಲು ಹೋದ 
ನನ್ನ ಕೈ ಮೇಲೆ ಬಿದ್ದ ಅವಳ ಕಣ್ಣ ಹನಿ.. 
ಎಷ್ಟೋ ತಿಂಗಳುಗಳು ಕಳೆದರೂ..., 
ನನ್ನ ಕೈ ನೋಡಿಕೊಂಡಾಗಲೆಲ್ಲಾ
ಅವಳ ಕಣ್ಣ ಹನಿಯ ತಂಪು ಇಂದಿಗೂ,
ಅವಳ ನೋವನ್ನು ಮತ್ತೆ ಮತ್ತೆ ಮರುಕಳಿಸುತ್ತದೆ. !!

THOUGHT FOR THE DAY

Faith is the blind belief, where it is lost when its not kept.

Monday, March 24, 2014

ಅನಿಸುತಿದೆ....

ಆದರೆ ಆಗಬೇಕು..,
                        ನೊಂದ, ಬೆಂದ ಕಣ್ಣಗಳಿಗೆ ತಂಪು ನೀಡುವ ಚೇತನ
                        ಹಸಿದ ಹೊಟ್ಟೆಗೆ ಹಸಿವ ನೀಗಿಸುವ ಮೃಷ್ಟಾನ
                        ಅನಾಥರಿಗೆ ಆಸರೆಯಾಗಬೇಕು ಸಲಹುವ ಅಣ್ಣ
                        ಕಂಗೆಟ್ಟ ಹೆಣ್ಣಿಗೆ ಕಣ್ಣಾಗಬೇಕು ಅರ್ಥಪೂರ್ಣಾಗಿಸಲು  ಅವಳ  ಜೀವನ !
                        

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...