Monday, July 26, 2010

ಹಸಿರು ಅಂದ ...ಹಸಿರೇ ಚಂದ ..!!




ಮೋಡ ಮುಸುಕಿದೆ ಇಂದು ಜಗವೆಲ್ಲ
ಜಡಿ ಮಳೆ ಬಿದ್ದ ಹನಿಗಳಿಂದ ಭೂಮಿಯಲ್ಲ ಹಸಿರು
ಹಸಿರು ಕೊಸರಿಕೊಂಡಂತೆ ಗದ್ದೆ ಕಣಿವೆಗಳೆಲ್ಲ
ಹಸಿರ ಉಟ್ಟ ಪೈರು , ಹಸಿರ ಹೊತ್ತ ತೇರು
ಹಸಿರ ಬಸಿರ ಜಾತ್ರೆಯಲಿ ಮನಸ್ಸು ಕೂಡ ಹಚ್ಚ ಹಸಿರಾಗಿದೆಯೆಲ್ಲ
ಕೆರೆಯ ಮೇಲೆ ಪಚ್ಚೆ ಹಸಿರು, ಬಂಡೆಗಳ ಮೇಲೆ ಪಾಚಿ ಹಸಿರು
ಹಸಿರ ವನಶ್ರೀ ನಡುವಿನಲ್ಲಿ ಕಪ್ಪು ಹೆದ್ದಾರಿ ಹಾದಿಹೆಯಲ್ಲ
ತೆಂಗಿನ ಗರಿಯ ಹಸಿರ ನಡುವೆ ಕೋಗಿಲೆ ಅದು ಕೂಗುತಿಹುದು
ತಿಳಿಯ ಹಸಿರ ಗಿಳಿರಾಮ ಕೂತು ಹಣ್ಣ ಸವೆದಿಹನಲ್ಲ
ಪ್ರಕೃತಿಯ ಹಸಿರು ತಂತು ... ಇಂದು ಧರೆಗೆ, ಅಂದ ಚಂದ ..!

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...