Sunday, July 07, 2013

ಮಾಯ

ಅವಳ ಅಮ್ಮನಿಂದ ಬೈಯಿಸಿಕೊಂಡು ಅಳುತ್ತಾ ಹೆಚ್ಚುತ್ತಿದ್ದಳು ಇರುಳ್ಳಿ ಮೆಣಸಿನಕಾಯಿ
ಮಾತುಗಳು ಸಾಕಾಗಲಿಲ್ಲ ರಮಿಸಲು ಅವಳನ್ನು, ಗಲ್ಲಕ್ಕೆ ಮುತ್ತಿಟ್ಟು ಓಡಿ ,ದೂರ ನಿಂತು ನೋಡಿದೆ...
ನೆಲಕ್ಕೆ ಉರುಳಿದ ಹನಿಗಳಲ್ಲಿ ಅವಳ ನಿರಾಳ ನಗು,ಕಣ್ಣುಗಳಲ್ಲೂ ಕಣ್ಣೀರು ಮಂಗಮಾಯ !

2 comments:

Badarinath Palavalli said...

ಆಹಾ ಎಂತಹ ಸಾಂತ್ವನ! ಅಕಸ್ಮಾತ್ ಆಕೆಯ ಮುನಿಸಿನ ಕ್ಷಣದಲ್ಲಿ ನೀವು ಕೊಟ್ಟ ಮುಟ್ಟಿಮ್ದ ಆಕೆ ಸಿಟ್ಟಿಗೆದ್ದು ಚಾಕು ಜಳಪಿಸಿದರೆ ಎನ್ನುವ ಭಯದಿಂದಲೇ ತಾವು ಓಡಿದರೇನೋ?

Sunil R Agadi (Bhavapriya) said...

ಕಲ್ಪನೆ ಅಷ್ಟೆ ಸಾರ್, ಆದರೆ ಆ ಸನ್ನಿವೇಶ ಬಂದರೆ ನಿಜವಾಗಿಯೂ ಓಡಿ ಹೋಗೋದು ಭಯದಿಂದಾನೆ.

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...