Tuesday, September 24, 2013

ನನ್ನ ಆತ್ಮೀಯ ಗೆಳೆಯ ಬೇಲೂರು ರಘುನಂದನ್ ರವರು ಬರೆದ ವಚನ..

ವಚನ - 211


ಕಟ್ಟು - ೩



ಮುಡಿ ಬಿಟ್ಟವಳು ಮರ್ಯಾದೆ ಬಿಟ್ಟವಳು

ನುಡಿ ಬಿಟ್ಟವಳು ನಾಚಿಕೆಯಾ ಬಿಟ್ಟವಳು ...

ಪತಿಯ ಬಿಟ್ಟವಳು ಲೋಕದಲಿ ರಂಡೆ

ಪತಿಯ ನುಂಗಿ ಕೊಂಡವಳು ಮುಂಡೆ

ಭಾವನೆಯ ತೋರೆ ಲಜ್ಜೆಯನೇ ಬಿಟ್ಟವಳು

ಎಲ್ಲ ಬಿಟ್ಟವಳು ಕೊನೆಗೆ ಮೂರು ಬಿಟ್ಟವಳು

ಎಂದು ಮೊಟಕುವ ಮಂದಿ ನಾಲಿಗೆ ಸತ್ತವರು.

ಎಲ್ಲ ಬಿಟ್ಟವರು ಎನುವ ಇವರು ಏನೇನು ಜೊತೆಗೆ

ಕಟ್ಟಿಕೊಂಡು ಬಿಟ್ಟಿ ಮಾತುಗಳನಾಡುತಿರುವರು.

ನುಂಗಲಾಗದ ಕೆಮ್ಮು ಕಫ಼ ನೋವು ಬಾವು ಕೀವನ್ನು,

ಒಳಗಿಟ್ಟುಕೊಂಡು ಲಾಭವಿಲ್ಲ ಅಂತ ಸೊಟ್ಟ ಮನದಲ್ಲಿ,

ಬಿಟ್ಟವಳು ಬಿಟ್ಟವಳು ಅನ್ನುವ ಭಾವಿಲ್ಲದ ಬಾಯಿಗೆ

ನೀನೇ ಹೇಳಿಬಿಡಯ್ಯ ಶ್ವೇತಪ್ರಿಯ ಗುರುವೆ.



-ಬೇಲೂರು ರಘುನಂದನ್

22.9.2013

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...