Sunday, February 27, 2011

ನಿರೀಕ್ಷಣೆ ...!



ಅಂತರಂಗ ಬಹಿರಂಗಗಳ ಸುಚಿಗೊಳಿಸಿ ,
ಮನಸಿನ ಬಾಗಿಲಿಗೆ ನಾ ಕಟ್ಟಿ ತೋರಣ !
ಹೃದಯವೆಂಬ ಗರ್ಭ ಗುಡಿಯಲ್ಲಿ ಕಾಣುವ ಆಸೆ ನನಗೆ,
ಪ್ರೀತಿಯಿಂದ ವಿನಯವಾದ ನನ್ನ ಆಹ್ವಾನ !
ಅಕ್ಕರೆ ಸಕ್ಕರೆಯ ರಕ್ತ ಚಲಿಸುವಂತೆ,
ಬರುವಂತಳಾಗು ನಿ ನನ್ನ ಹೃದಯ ಸಾಮ್ರಾಜ್ಯಕ್ಕೆ !
ಬೆಳ್ಳಿಯ ಆರತಿ ಹಿಡಿದು, ನಿನ್ನ ಆಗಮನವೇ ಎದಿರು ನೋಡುತಿರುವೆ..
ದೇವಿ ಇರದ ದೈವಿಸ್ಥಳದಲಿ ಪೂಜಾರಿಗೇನು ಕೆಲಸ ,
ನಿನ್ನ ಜಪಿಸದ ನನಗೆ ಜೀವವೆಲ್ಲ ನಿರಸ
ಕಾಯಿಸದಿರು ಭಕ್ತನನ್ನು ..
ಕಾಡಿಸದಿರು ಧರ್ಮ ಪಾಲಿಸುವವನ..
ನಿನ್ನ ಮನದ ಮುಗಿಲಿನ ಬಾಗಿಲು ತೆರೆಯೆ..!

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...