Wednesday, August 27, 2014

ಹಬ್ಬ

ಹಬ್ಬ ಬಂತು ಹಬ್ಬ
ಕಾಣದ ದೇವರ ಹುಡುಕುವ ಹಬ್ಬ
ಬೀದಿ ಬೀದಿಯಲ್ಲಿ ದೇವರ ಕೂಡಿಸುವ ಹಬ್ಬ

ಹಬ್ಬ ಬಂತು ಹಬ್ಬ
ಜನರ ಪೀಡಿಸಿ, ಹಣ ವಸೂಲಿ ಮಾಡುವ ಹಬ್ಬ
ಪುಂಡ ಪೋಕರಿಗಳಿಗೆ ಪುಂಡಾಟದ ಹಬ್ಬ

ಹಬ್ಬ ಬಂತು ಹಬ್ಬ
ಹಾದಿ ಬೀದಿಗೆ ಜಗಮಗಿಸೋ ದೀಪ
ಭಕ್ತಿಯೇ ಇಲ್ಲಾ.., ಅಬ್ಬರವೇ ಎಲ್ಲಾ

ಹಬ್ಬ ಬಂತು ಹಬ್ಬ
ಕೆರೆ ಭಾವಿಗಳೆಲ್ಲಾ ಪೂಜೆ ತ್ಯಾಜಗಳ ಸಾಗರ
ರಸ್ತೆ ರಸ್ತೆಗಳಲ್ಲಿ ತಿಪ್ಪೆ ಹೆಕ್ಕುವ ಸಮರ

ಹಬ್ಬ ಬೇಕೆ ಹಬ್ಬ..?
ನಗರ ಹೊಲಸುಗೊಳಿಸುವ ಹಬ್ಬ
ಅರ್ಥವ ಮರೆತು ಆಚರಿಸುವ ಹಬ್ಬ..!!!

Monday, August 25, 2014

ಗೊಂದಲ

ಸದಾ ದೂರವಾಣಿಯಲ್ಲಿ ಮಗ್ನಳಾಗಿದ್ದವಳ ನಗುವ ಕಂಡು
ಎಂತಹ ಒಳ್ಳೇಯ ಜೋಡಿ ಇರಬಹುದು ಇವರದು ಅಂದೆ..
ಮತ್ತೊಂದು ಬಂದ ದೂರವಾಣಿಗೆ ಇವಳ ಕಠೋರ ನಿಲುವು
ಆಗಲೇ ತಿಳಿದದ್ದು ಅವಳ ಕಾಲುಂಗರಗಳು ಯಾರದ್ದೊ ಎಂದು..!!

Thursday, August 21, 2014

ತಟಸ್ಥ

ಬದುಕು ಎಷ್ಟೇ ಕೆಸರೆರೆಚಿದರೂ ನಾನು ತಟಸ್ಥ
ಸಮುದ್ರದ ದಡದಲ್ಲಿರುವ ಬಂಡೆಯ ಹಾಗೆ...!
ಎಂದಾದರೊಂದು ದಿನ ಮಳೆಗರೆದು ತೊಳೆಯುವುದು
ಬಿಸಿಲೊರೆಸಿ ಸೂರ್ಯ ಆರಿಸುವ ಹಾಗೆ. !!

Sunday, August 10, 2014

THOUGHT FOR THE DAY

Dare to Dream and keep dreaming , Because " THE DREAMS COME TRUE " Believe me ITS TRUE.

कतल

ऐसे बेरहमी से ना देखो कहीं आशिक़ की कतल ना होजाये 
घायल दिल को मरहम के बजाये कही मौत ना मिलजाए !!

Friday, August 01, 2014

ತಂಗಾಳಿ

ಅನುಭವಿಸುತ್ತಿರುವೆನು ನಾನು ನಿನ್ನ ಇರುವಿಕೆ....
ಈ ತಂಪಾದ ಪರ್ವತ ಶ್ರೇಣಿಗಳಲ್ಲಿ ,
ಸೊಕಿ ಹೋದಾಗಲೆಲ್ಲಾ ಆ ಹಿಮಬೆರೆತ ತಂಗಾಳಿ !!

ಮಳೆ

ಮಳೆಯಲ್ಲಿ ನೆನೆದವ ನಾನಲ್ಲ...
ಆದರೂ ಇಂದೇಕೊ ನೆನೆಯುತ್ತಿರುವೆ
ನಿನ್ನ ನೆನಪಲ್ಲೆ.., ನನ್ನೇ ನಾನು ಮರೆತು !!

ಮೌನ


ನನ್ನ ನೂರು ಪ್ರಶ್ನೇಗಳಿಗೆ ಅವಳದು ಒಂದೇ ಉತ್ತರ "ಮೌನಗೀತೆ "
ಅದಕ್ಕೆ ನನ್ನ ಕಡೆಯಿಂದ, ಅವಳಿಗೆ ಬರೆಯುತ್ತಿರುವೆ "ಮೌನಕವಿತೆ"

Tuesday, June 10, 2014

ಸೆರೆಮನೆ

ನಿನ್ನ ಪ್ರೀತಿಸುವ ತಪ್ಪು ಮಾಡಿರುವೆ ಗೆಳೆಯಾ...
ಮಣ್ಣಿಸು ನನ್ನ, ಬಂಧಿಸಿ ಬಿಡು ನಿನ್ನ ಹೃದಯದ ಸೆರೆಮನೆಯಲ್ಲಿ...
ನಿನ್ನ ಸನೀಹ ಬಯಸಿದ ನಾನು, ಖೈಧಿಯೇ ಸರಿ....!!

Friday, June 06, 2014

ಕೋಪ

ಅವಳಿಗೋ ಅತಿಯಾದ ಕೋಪ
ಕಿತ್ತೆಸೆದಳು ಗೆಳೆಯರ ಬಳಗದಿಂದ ಹಾಕುತ್ತಾ ಶಾಪ
ಗೆಳೆಯರಂತಿದ್ದವರೆಲ್ಲಾ ಹುಸಿಗೊಳಿಸಲು ಅವಳ ನಂಬಿಕೆಯ
ಮತ್ತೆ ವಾಲಿತು ಅವಳ ಮನ ಅವನಿದ್ದಕಡೆಗೆ... ಅನ್ನಿಸುತ್ತಾ ಪಾಪ..!

ಹುಚ್ಚು ಮನ

ಕಣ್ಣ ಮುಂದೆ ಇರುವಾಗ ತಾತ್ಸಾರ ತೋರುವ ಮನ
ಬಳಿ ಇರದಾಗ ಅವಳನ್ನೇ ಹುಡುಕುತ್ತಿರುತ್ತದೆ...ಹುಚ್ಚು ಮನ.! 

Thursday, June 05, 2014

ಭಾಷ್ಪ

ದುಃಖ ಉಮ್ಮಳಿಸಿದ್ದಾಗ ಸುರಿಸುತ್ತಾರೆ ಕಣ್ಣೀರು 
ಸಂತೋಷಕ್ಕೂ ಹರಿಸುತ್ತಾಳೆ ಹನಿಗಳು ಹಲವು
ತಿಳಿಯದಿವಳ ಮನ.., ಏತಕ್ಕಾಗಿ ಈ ಒಲವು ?

Tuesday, May 20, 2014

ಬೆಳಕು

ನೆರೆ ಮನೆಗಳ ಅಂಗಳವೆಲ್ಲಾ ಹೊನ್ನ ಬೆಳಕು 
ನನ್ನ ಮನೆ ಅಂಗಳು ಮಾತ್ರ ಕರಿ ನೆರಳು 
ಕಾರಣ ನನ್ನ ಮನೆ ಇರುವುದು ಜಗ ಬೆಳಗುವ ದೀಪದ ಕೆಳಗೆ !!

Friday, April 11, 2014

ಹಿತವಚನ

ಪರರ ತಟ್ಟೆಯಲ್ಲಿ ಏನಿದೆ ಎಂದು ತಿಳಿಯುವ ಬದಲು ನಮ್ಮ ತಟ್ಟೆಯಲ್ಲಿ ಏನಿದೆ ಎಂದು ಅರಿತು ನಮ್ಮ ಏಳಿಗೆಗೆ ದುಡಿದರೆ ನಮಗೇ ಒಳಿತು ಹಾಗು ಶ್ರೇಯಸ್ಸು.

Friday, March 28, 2014

ಗೌರಮ್ಮ

ಬಿಚ್ಚೋಲೆ ಗೌರಮ್ಮನಿಗೆ ರಾಜಕೀಯ ಹುಚ್ಚು


ಯಾವ ಮೂಢರು ಆನ್ ಮಾಡಿಹರು ಇವಳ ಮನದ ಸ್ವಿಚ್ಚು ?

ಚುನಾವಣೆ

ಬೀಸುತ್ತಿದೆ ರಾಜ್ಯಕೀಯ ಗಾಳಿ

ಪಕ್ಷ , ಪ್ರತಿ ಪಕ್ಷಗಳ ವಾಗ್ದಾಳಿ

ಯಾರ ಮುಡಿಗೇರಿದರೂ " ಚುಕ್ಕಾಣಿ " ನೀ ತಿಳಿ

ವಸ್ತುಗಳು ತುಟ್ಟಿ, ಜನರು ದಿವಾಳಿ !

Thursday, March 27, 2014

ಅರ್ಹತೆ

ಪ್ರತಿ ಚಿತ್ರದಲ್ಲೂ ಬದಲಾಯಿಸುವಂತೆ ಪಾತ್ರ
ದಿನೆ ದಿನೆ ಬದಲಾಯಿಸುತ್ತಿರುವರು ಪಕ್ಷ !
ಸಮಾಜ ಸೇವೆ ಅನ್ನುವುದು ತೆರೆಯ ಮೇಲಿನ ಚಿತ್ರವಲ್ಲ
ಇಂತಹ ನಟಿಮಣಿಯರು ಸಮಾಜದ ಕಾರ್ಯಕ್ಕೆ ಅರ್ಹರೇ ಅಲ್ಲಾ !!

ವಿಪರ್ಯಾಸ

ನಟನೆಯ ಬಿಟ್ಟು ಬೀದಿಗೆ ಇಳಿತಾರಂತೆ ನಟರು,
ತೆರೆಯ ಮೇಲಿನ ನಾಟಕ ಬಿಟ್ಟು, ಬೀದಿ ನಾಟಕಕ್ಕೆ ಹಾಜರು !!

ಕಸರತ್ತು

ಇನ್ನು ಶುರುವಾಯ್ತು...
ಚುನಾವಣೆಯ ಪ್ರಚಾರದ ಭರಾಟೆ !
ಜನರನ್ನು ಒಲಿಸಲು ನಡೆಸುವರು...
ಹಲವು ತರಹದ ಕಸರತ್ತು - ಕರಾಟೆ !!

ಹುಸಿ ನಗೆ

ಹುಸಿ ನಗೆಯ ಬೀರಿ ಜಗವ ಮೆಚ್ಚಿಸಬಹುದು
ಹುಸಿ ನಗೆಯು ಅನ್ಯರ ಜೊತೆ ಬೆರೆಸಲೂಬಹುದು
ಹುಸಿ ನಗೆಯ ಬಣ್ಣವ ಬಲ್ಲವರ್ಯಾರು ?

ಹುಸಿ ನಗೆಯ ಮರ್ಮ ತಿಳಿದವರಿಲ್ಲ
ಹುಸಿ ನಗೆಯೊಂದಿಗೆ ಬಾಳಲಾಗುವುದಿಲ್ಲ
ಹುಸಿ ನಗೆಯು ಎಂದೆಂದಿಗೂ ನೋವನ್ನು ಅಳಿಸುವುದಿಲ್ಲ !!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...