Tuesday, December 17, 2019

ಧಾರವಾಡ ಒಂದು..

ಧಾರವಾಡ ಒಂದು..
ನಮ್ಮೂರಿಗೆ ಬರುವರೆಲ್ಲಾ ನಮ್ಮ ಬಂಧು !

ಧಾರವಾಡ ಹುಬ್ಳಿ ನಮ್ಮದರೀ
ಬಂದ ನಮ್ಮ ಪ್ರಸಿದ್ಧ ಠಾಕೂರ್ ಪೇಡಾ ಸವಿರಿ !

ವಿದ್ಯಾಲಯಗಳ ಹಸಿರು ಚಂದಾ
ಬರಮಾಡಿಕೊಂಡಾವ ಜನರ ಹೃದಯದಿಂದಾ !

ಓದಿ ಕಲಿತವರ ಜೀವನ ಪಾವನ
ಕಡೆತನಕ ಮರೆಯುವುದಿಲ್ಲ ಇಲ್ಲಿಯ ಮಣ್ಣ ರುಣ !

ಉಸಿರಿರುವತನಕ ಮಾಡುವೆ ನಾ ಗುಣಗಾನ
ಧಾರವಾಡ್ ಅಂದ್ರ ನನಗ ಪಂಚಪ್ರಾಣ !

ಕವಿಗಳ ಬೀಡಿದು ಎಲ್ಲರಿಗೂ ಅಭಿಮಾನ
ನಾಡ ಹೆಮ್ಮೆ ಹೆಚ್ಚಿಸಿದ ಗಣ್ಯರಿಗೆ ಹೃತ್ಪೂರ್ವಕ ಅಭಿನಂದನ !!

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...