Monday, December 09, 2019

ಸಮಸ್ಯೆ

ಬದುಕು ಸಮಸ್ಯೆಗಳ ರಂದ್ರ
ಪರಿಶ್ರಮ, ತಾಳ್ಮೆಯ ಹೊಲಿಗೆ 
ಸದಾ ಮುಚ್ಚುವುದು ಮೆಲ್ಲಗೆ 

ದ್ರಿತಿಗೆಡಬಾರದು ಜೀವನದಿ
ಈಜು ಬರದಿದ್ದರೂ  ಕೈ ಬಡಿಯುತ್ತಿರಬೇಕು...
ದಂಡೆಯ ದೇವರು ಕರುಣಿಸ್ಯಾರು

ತಲೆ ಮೇಲೆ ಬಿದ್ದ ಗುಡ್ಡ 
ಗುಂಡೆದೆಗೆ ಒಡೆದು ಮಣ್ಣು ಪಾಲು
ಸಮಸ್ಯೆಗಳ ಸರ್ಪಳಿ ಹರಿದೇ ತೀರಬೇಕು

ಕಷ್ಟಗಳ ಹುಟ್ಟಿಸಿದ ಕೈಗಳು
ಸುಂಕವಿರದೆ ಬರಿದಾಗಿ ಹೋದಾವು
ಮತ್ತೆ ಅರಳುವುದು ಹೊಸ ಹೂವು  !!



No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...