Sunday, November 02, 2014

ಮೋಹಕ ಪ್ರೀಯೆ

ಬಹಳ ಮೋಹಕ ಚೆಲುವೆ ನಿನ್ನ ಮೈಮಾಟ
ಪ್ರತಿ ಸಲ ಕಂಡು ನಿನ್ನ ಮನವಾಯಿತು ಮರ್ಕಟ
ಚಿತ್ರ ಬದಲಾಯಿಸಿ ಪದೆ ಪದೆ, ನೀಡುತ್ತಿರುವೆ ಹೃದಯಕ್ಕೆ ಸಂಕಟ
ಇನ್ನು ಸಿಗದಿರೆ ನೀ ನಾ ಸೇರುವ ಮಠ. !!

Monday, October 13, 2014

THOUGHT FOR THE DAY

SOME PEOPLE ARE PRIORITY IN SOMEONE'S EYES , BUT THE SPECIAL ONE'S NEEDS TO CREATE THE TOP PRIORITY IF THEY WANT THEMSELVES TO BE TREATED AS ROYAL.

Sunday, October 12, 2014

ನತದೃಷ್ಠೆ

ಹೆಂಡತಿಯ ಅಧಿಕಾರ ಸಿಕ್ಕಿತು ಆದರೆ, 
ಅವಳು ಅವನ ಮನ ಗೆಲ್ಲಲಿಲ್ಲ..!
ಅವಳ ಹಣೆಬಾರಕ್ಕೆ ಅವಳೇ ಹೊಣೆ
ಈಗ ಅವಳಿಗೆ ಅಧಿಕಾರವೂ ಇಲ್ಲ.., ಅವನೂ ಇಲ್ಲ..!!

ಹಿತವಚನ

ಆಳುವುದು, ಆಳಾಗುವುದು ನಿಯಮವಲ್ಲಾ ಜಗದಲ್ಲಿ
ಸಹಬಾಳ್ವೆಗೆ ನಿಯಮ ಬೇಕಿಲ್ಲ , 
ಬಾಳಿ ಬದುಕುತ್ತೇವೆ ಅನ್ನುವ ಛಲವೊಂದಿದ್ದರೆ ಸಾಕು..!

ತಕ್ಕಡಿ

ತಕ್ಕಡಿ ತೂಗುತ್ತಿರುವಳು ಅವಳಲ್ಲ
ಕಣ್ಣಿಗೆ ಕಪ್ಪು ಪಟ್ಟಿ ಧರಿಸಿದವಳು...!
ತೂಗಬೇಕಾದವರು ನಾವೇ... ಕಣ್ಣು ತೆರೆದು.,
ಎಡ ಭಾರವಾಗದಂತೆ..., ಬಲ ಕುಸಿಯದಂತೆ..!!

ಹುಡ್ ಹುಡ್

ಅಬ್ಬರಿಸುತ್ತಿದೆ ಹುಡ್ ಹುಡ್
ಜನರೆಲ್ಲಿ ನಡುಕ ಗಡಗಡ್
ದಯನೀಯ ಸ್ಥಿತಿ ಬ್ಯಾಡ್ ಬ್ಯಾಡ್ 
ಏಕೆ ನಡೆಯುತ್ತಿದೆ ಇಂತಹ ಗಡ್ ಬಡ್ ? 

ಸಂಶಯ

ಪದೆ ಪದೆ ಇಣುಕಿ ನೋಡುತ್ತಾಳೆ.. 
ಅವನ ಹೃದಯದಲ್ಲಿ.......!
ಯಾರಾದರೂ ಚೋರಿ ಕದ್ದು ಕುಳಿತಿರಬೇಕು ಅಂತಾ..
ಎಲ್ಲೋ ಮೂಲೆಯಲ್ಲಿ....!!

ವಿಚಾರ

ಕೆಲವೊಂದು ಜೋಡಿಗಳನ್ನು ನೋಡಿದಾಗ ಈ ಹುಡುಗಾ ಆ ಹುಡುಗಿಯನ್ನ ಅಥವಾ ಈ ಹುಡುಗಿ ಅಂಥಹ ಹುಡುಗನನ್ನು ಹೇಗೆ ಮದುವೆ ಆದನಪ್ಪಾ/ಆದಳಪ್ಪಾ ಅನ್ನಿಸುತ್ತದೆ. 
ಮನುಷ್ಯನ ಬಾಹ್ಯ ಸೌಂದರ್ಯ ಪ್ರೀತಿಸೋಕೆ ಕಾರಣವಲ್ಲ, ಅದು ಅವರ ಪರಸ್ಪರ ಸ್ವಭಾವ ಅರೆತು ಬಾಳುವ ನಂಬಿಕೆ ಹಾಗು ಒಬ್ಬರ ಸುಖದಲ್ಲಿ ಇನ್ನೊಬ್ಬರು ಸಂತೋಷ ಕಾಣುವ ಮಹಾಗುಣ. ಹೀಗೆ ಬಾಳುತ್ತಿರುವ ಎಲ್ಲಾ ಜೋಡಿಗಳಿಗೂ ಒಳ್ಳೇಯದಾಗಲಿ.

ಕಿವಿಮಾತು

ಹುಡುಕಲು ಹೋಗ ಬೇಡ ಗೆಳತಿ ಇಲ್ಲದ ಪ್ರೀತಿಯ...
ಅದು ಇರುವುದಾದರೇ.........,
ತಾನಾಗಿಯೇ ಒಲಿದು ಬರುವುದು ನಿನ್ನ ಬಳಿಗೆ..!! 

ಹಿತವಚನ

ನೋವು ಅನುಭವಿಸಿದವರಿಗೆ ಅನುಕಂಪ ನೀಡುವುದಕ್ಕಿಂತ ಅವರ ಜೊತೆ ಇದ್ದು ಧೈರ್ಯ ತುಂಬುವುದು ಶ್ರೇಷ್ಟವಾದದ್ದು.

Thursday, October 09, 2014

ಧಾರಾಳ V/S ಸ್ವಾರ್ಥ

ನನ್ನದೆಲ್ಲಾ ನಿನ್ನದು ಅನ್ನುವುದು ಧಾರಾಳತನ,
ನಿನ್ನದೆಲ್ಲಾ ನನ್ನದೇ ಅನ್ನುವುದು ಸ್ವಾರ್ಥ !! 

ಸುಮ್ನೆ ಒಂದು ವಿಚಾರ

ಎಲ್ಲಾ ಬಾರಿ ಪಡೆದುಕೊಂಡಿದ್ದು ಅಷ್ಟೇ ಖುಶಿ ಕೊಡುವುದಿಲ್ಲ, ಕೆಲ ಕಾಲದಲ್ಲಿ ಕಳೆದುಕೊಂಡದ್ದು ಖುಶಿ ಕೊಡುತ್ತದೆ.

ಅವಳದೇ ಮತ್ತು

ನನ್ನವಳು ನಡೆಸಿರುವಳು ದಿನವೂ ಕಸರತ್ತು
ಬೃಹದ್ದಾಕಾರ ಅಳಿಸಿ ಆಕಾರಳಾಗುವ ಗಮ್ಮತ್ತು
ಅವಳು ಹೇಗಿದ್ದರೂ ಚಂದವೇ ನನಗೆ, ಈ ನಡುವೆ ತಲೆಗೇರಿದೆ ಅವಳದೇ ಮತ್ತು..!!

ಕುಂಬಳಕಾಯಿಯ ಅಳಲು

ಕುಂಬಳ ಕಾಯಿ ನಾನು
ಯಾರೋ ಬಿತ್ತಿದರು
ಯಾರೋ ಉತ್ತಿದರು
ನನ್ನ ಬೆಳಸಿದವ ನನ್ನ ಬಳಿಸಲಿಲ್ಲ
ಯಾರಿಗೋ ಮಾರಿ ಬಿಟ್ಟನು
ಅವನು ಕೊಂಡು ತಂದು
ಮಹಾನಗರದ ರಸ್ತೆ ಬೀದಿ ಅಡಿಗೆ ಹಾಕಿರುವನು...
ಇನ್ನೂ ಮುಂದೆ ಇದೆಯಂತೆ ಹಬ್ಬ
ನನ್ನ ಬಗೆದು ಬಿಸಾಡುವರಂತೆ
ಆ ಬಗವಂತನ ಹೆಸರಿನಲ್ಲಿ...
ರಸ್ತೆಯ ಇಬ್ಬದಿಯಲ್ಲೂ ನನ್ನ ಕಳೆಬರಹಗಳು...!

Tuesday, September 30, 2014

THOUGHT FOR THE DAY


BLIND BELIEF IS THE INNOCENCE OF A CHILD , BELIEVING A PERSON EVEN AFTER EXPERIENCING CRUELTY IS FOOLISHNESS.

Sunday, September 28, 2014

ಹಿತವಚನ


ಎಷ್ಟೋ  ವಿಷಯಗಳಲ್ಲಿ "ಸರಿ" ಅಂತಾ ಒಪ್ಪಿಕೊಳ್ಳುವುದು ಬಹಳಷ್ಟು ವಾದ-ವಿವಾದಗಳನ್ನು ಕಡಿಮೆ ಮಾಡುತ್ತದೆ.

Saturday, September 27, 2014

ಲೂಟಿ

ನನ್ನ ಮನದ ತೆರೆದ ಮುಸ್ತಕ ಆಲಿಸಿದ ಅವಳು,
                                                      ಬಹಳ ಚೂಟಿ !
ಈಗ ತರ ತರಹದ ವಯ್ಯಾರ ಬಳಸಿ ಮಾಡುತ್ತಿರುವಳು,
                                                     ನನ್ನ ಕನಸ್ಸುಗಳ ಲೂಟಿ !!

Thursday, September 25, 2014

ರಸ್ತೆಗೆ ಮೇಕಪ್

ಕೆರ ಕೆಟ್ಟು ಹದಗೆಟ್ಟು ಹೋದ ರಸ್ತೆಗಳಿಗೆ.....,
ಬಳಿದಾರೆ ಟಾರು...!!
ಆ ವರುಣನಿಗೆ ಅದೇನೋ ಕೋಪ.............,
ಮತ್ತೆ ಕಿತ್ತೆಸೆಯಲು ಸುರಿಸ್ಯಾನ ಮಳೆ ನೀರು !

ನಿರ್ಲಿಪ್ತಳು

ಅವನು,
ಬಣ್ಣ ಬಣ್ಣವಾಗಿ ಬಣ್ಣಿಸಿದ ಕನ್ಯೆ...
ಇವಳೇ....
ಅಂತಾ ಅವಳು ಭಾವಿಸಿ ಬೀಗಿದಳು..!
ಪಾಪ ಅವಳಿಗೇನು ತಿಳಿದೀತು,
ಅವನು ವರ್ಣಿಸಿದ ಕನ್ಯೆ ...ಬರೀ ಕವನಗಳಲ್ಲೇ ಅವಳು ನಿರ್ಲಿಪ್ತಳು..!!

Monday, September 01, 2014

THOUGHT FOR THE DAY

Extend the helping hand to the poor & needy,  not to people who pretend to be poor and are greedy.

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...