Tuesday, May 20, 2014

ಬೆಳಕು

ನೆರೆ ಮನೆಗಳ ಅಂಗಳವೆಲ್ಲಾ ಹೊನ್ನ ಬೆಳಕು 
ನನ್ನ ಮನೆ ಅಂಗಳು ಮಾತ್ರ ಕರಿ ನೆರಳು 
ಕಾರಣ ನನ್ನ ಮನೆ ಇರುವುದು ಜಗ ಬೆಳಗುವ ದೀಪದ ಕೆಳಗೆ !!

Friday, April 11, 2014

ಹಿತವಚನ

ಪರರ ತಟ್ಟೆಯಲ್ಲಿ ಏನಿದೆ ಎಂದು ತಿಳಿಯುವ ಬದಲು ನಮ್ಮ ತಟ್ಟೆಯಲ್ಲಿ ಏನಿದೆ ಎಂದು ಅರಿತು ನಮ್ಮ ಏಳಿಗೆಗೆ ದುಡಿದರೆ ನಮಗೇ ಒಳಿತು ಹಾಗು ಶ್ರೇಯಸ್ಸು.

Friday, March 28, 2014

ಗೌರಮ್ಮ

ಬಿಚ್ಚೋಲೆ ಗೌರಮ್ಮನಿಗೆ ರಾಜಕೀಯ ಹುಚ್ಚು


ಯಾವ ಮೂಢರು ಆನ್ ಮಾಡಿಹರು ಇವಳ ಮನದ ಸ್ವಿಚ್ಚು ?

ಚುನಾವಣೆ

ಬೀಸುತ್ತಿದೆ ರಾಜ್ಯಕೀಯ ಗಾಳಿ

ಪಕ್ಷ , ಪ್ರತಿ ಪಕ್ಷಗಳ ವಾಗ್ದಾಳಿ

ಯಾರ ಮುಡಿಗೇರಿದರೂ " ಚುಕ್ಕಾಣಿ " ನೀ ತಿಳಿ

ವಸ್ತುಗಳು ತುಟ್ಟಿ, ಜನರು ದಿವಾಳಿ !

Thursday, March 27, 2014

ಅರ್ಹತೆ

ಪ್ರತಿ ಚಿತ್ರದಲ್ಲೂ ಬದಲಾಯಿಸುವಂತೆ ಪಾತ್ರ
ದಿನೆ ದಿನೆ ಬದಲಾಯಿಸುತ್ತಿರುವರು ಪಕ್ಷ !
ಸಮಾಜ ಸೇವೆ ಅನ್ನುವುದು ತೆರೆಯ ಮೇಲಿನ ಚಿತ್ರವಲ್ಲ
ಇಂತಹ ನಟಿಮಣಿಯರು ಸಮಾಜದ ಕಾರ್ಯಕ್ಕೆ ಅರ್ಹರೇ ಅಲ್ಲಾ !!

ವಿಪರ್ಯಾಸ

ನಟನೆಯ ಬಿಟ್ಟು ಬೀದಿಗೆ ಇಳಿತಾರಂತೆ ನಟರು,
ತೆರೆಯ ಮೇಲಿನ ನಾಟಕ ಬಿಟ್ಟು, ಬೀದಿ ನಾಟಕಕ್ಕೆ ಹಾಜರು !!

ಕಸರತ್ತು

ಇನ್ನು ಶುರುವಾಯ್ತು...
ಚುನಾವಣೆಯ ಪ್ರಚಾರದ ಭರಾಟೆ !
ಜನರನ್ನು ಒಲಿಸಲು ನಡೆಸುವರು...
ಹಲವು ತರಹದ ಕಸರತ್ತು - ಕರಾಟೆ !!

ಹುಸಿ ನಗೆ

ಹುಸಿ ನಗೆಯ ಬೀರಿ ಜಗವ ಮೆಚ್ಚಿಸಬಹುದು
ಹುಸಿ ನಗೆಯು ಅನ್ಯರ ಜೊತೆ ಬೆರೆಸಲೂಬಹುದು
ಹುಸಿ ನಗೆಯ ಬಣ್ಣವ ಬಲ್ಲವರ್ಯಾರು ?

ಹುಸಿ ನಗೆಯ ಮರ್ಮ ತಿಳಿದವರಿಲ್ಲ
ಹುಸಿ ನಗೆಯೊಂದಿಗೆ ಬಾಳಲಾಗುವುದಿಲ್ಲ
ಹುಸಿ ನಗೆಯು ಎಂದೆಂದಿಗೂ ನೋವನ್ನು ಅಳಿಸುವುದಿಲ್ಲ !!

THOUGHT FOR THE DAY

"  The false SMILE on the face never cures the pain of the heart " 

Wednesday, March 26, 2014

ಬೇಲಿ

ಅವನು ಹೃದಯದ ಸುತ್ತಲೂ,
ಬೆಸಿದ್ದಿದ್ದಾನಂತೆ ಮುಳ್ಳಿನ ಬೇಲಿ !
ಯಾರೂ ಕದಿಯ ಬಾರದು ಅಂತಾ..,
ಅವನ ಹೃದಯದ ಮಲ್ಲಿ !!

ಸಿಹಿ ಮುತ್ತು

ನಲ್ಲೆ, ತಂದು ಕೊಡಲೆ ನಿನಗೆ ಆ ಸಾಗರದಾಳದ ಮುತ್ತು .? ಅಂದನವನು.... 
ನಲ್ಲಾ, ಆ ಮುತ್ತಗಳ ಬೆಲೆ ಎಷ್ಟೇ ಇದ್ದರೂ .., ನೀ ನೀಡುವ ಪ್ರೀತಿಯ ಸಿಹಿ ಮುತ್ತಿಗೆ ಬೆಲೆ ಕಟ್ಟಲಾದೀತೆ ಎಂದಳಾಕೆ ..?

ಸಹಜ ಗುಣ

ದಿನ ದಿನ ಮುನಿಸಿಕೊಂಡರೂ ನಾ

ಮರುದಿನ ಅವಳು ಮತ್ತೆ ಸಹಜ

ಮನಮೆಚ್ಚಿಹುದು ಅವಳ ಆ ಸಹಜ ಗುಣ

ಮತ್ತೆ ಮತ್ತೆ ಸೆಳೆಯುತ್ತದೆ ಅವಳೆಡೆಗೆ ನನ್ನ.

ರಾಜ್ಯಕೀಯ

ದಿಲ್ಲಿಯಿಂದ ಕನ್ಯಾಕುಮಾರಿವರೆಗೂ ಕುಟುಂಬ ರಾಜ್ಯಕೀಯ

ಯಾರು ಗೆದ್ದರು ನಮಗೆ ಸುಖವೇನೂ ಇಲ್ಲಾ,

ಜನರ ಕಷ್ಟಗಳ ದೂಡಿ.., ತುಂಬಿಸಿಕೊಳ್ಳುವರು ಅವರವರ ಪಾತ್ರೆಯ !

ಸುದ್ದಿ


ದೇವರನ್ನು ಒಲಿಸಿಕೊಳ್ಳಲು ಏನ್ ಏನು ಮಾಡುತ್ತಾರೋ ಮೂಢ ಜನ
ಇವರುಗಳ ಕೆಟ್ಟ ಚಟ ತೀರಿಸಿಕೊಳ್ಳಲು ದೇವರಿಗೂ ಮದ್ಯದ ನೈವೇದ್ಯ !

Tuesday, March 25, 2014

ಮತ್ತೆ ಮತ್ತೆ ನೆನಪಾಗುತ್ತದೆ.....!

ಅವಳನ್ನು ರಮಿಸಲು ಹೋದ 
ನನ್ನ ಕೈ ಮೇಲೆ ಬಿದ್ದ ಅವಳ ಕಣ್ಣ ಹನಿ.. 
ಎಷ್ಟೋ ತಿಂಗಳುಗಳು ಕಳೆದರೂ..., 
ನನ್ನ ಕೈ ನೋಡಿಕೊಂಡಾಗಲೆಲ್ಲಾ
ಅವಳ ಕಣ್ಣ ಹನಿಯ ತಂಪು ಇಂದಿಗೂ,
ಅವಳ ನೋವನ್ನು ಮತ್ತೆ ಮತ್ತೆ ಮರುಕಳಿಸುತ್ತದೆ. !!

THOUGHT FOR THE DAY

Faith is the blind belief, where it is lost when its not kept.

Monday, March 24, 2014

ಅನಿಸುತಿದೆ....

ಆದರೆ ಆಗಬೇಕು..,
                        ನೊಂದ, ಬೆಂದ ಕಣ್ಣಗಳಿಗೆ ತಂಪು ನೀಡುವ ಚೇತನ
                        ಹಸಿದ ಹೊಟ್ಟೆಗೆ ಹಸಿವ ನೀಗಿಸುವ ಮೃಷ್ಟಾನ
                        ಅನಾಥರಿಗೆ ಆಸರೆಯಾಗಬೇಕು ಸಲಹುವ ಅಣ್ಣ
                        ಕಂಗೆಟ್ಟ ಹೆಣ್ಣಿಗೆ ಕಣ್ಣಾಗಬೇಕು ಅರ್ಥಪೂರ್ಣಾಗಿಸಲು  ಅವಳ  ಜೀವನ !
                        

ಜೋಡಿ

ನಾನು ನೀನು ಸೂಪರ್ ಜೋಡಿ

ಪ್ರೀತಿನ ನಮ್ಮ ಪಯಣದ ಗಾಡಿ

ಯಾರಾದರೂ ಆದ್ರ ಅಡ್ಡ ಗ್ವಾಡಿ

ಎಲ್ಲಾ ಬಿಟ್ಟಕೊಟ್ಟು ಹೋಗೊಣ ಓಡಿ

ಹನಿ

ನಮ್ಮಿಬ್ಬರ ಪಿರುತಿ..

ಜನುಮ ಜನುಮದಾ ನಂಟು !

ಸುಮ್ನ ಹು ಅನ್ನಾಕ...

ಏನ್ ಹೋಗ ತೈತಿ ನಿನ್ನ ಗಂಟು ?

Friday, March 21, 2014

ಹುಡುಗೀಯರೇ ಫಾಸ್ಟು ಕಣ್ರಿ...!

ಕಾಮನ ಹುಣ್ಣಿಮೆಯಂದು
ಬಿಲ್ಲು ಹಿಡಿದು ಬಾಣ ಹೂಡಿ ನಿಂತ ಅವನು
ಬಾಣ ಬಿಡುವ ಮುಂಚೆನೆ ಗುಂಡೊಂದು
ಜೋರಾಗಿ ಬಂದು ಹೃದಯ ನಾಟಿತು...!
ಹುಡುಗರು ತುಂಬಾ ಸ್ಲೋ ಕಣ್ರಿ ...ಅದಕ್ಕೆ, 
ಅವಳೇ ಮೊದಲು ಅವನ ಹೃದಯಕ್ಕೆ ಹೊಡೆದಳಂತೆ !!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...