Monday, January 25, 2021

ಆಶಾಕಿರಣ

ಬಿಗಿ ಹಿಡಿದ ಕುಪ್ಪಸದ ಉಸಿರು

ನಿಶ್ವಾಸವೂ ಕಠೀಣವಿಂದು

ಕಲ್ಮಶ, ವೈರಾಣು ಕೂಡಿದ ಗಾಳಿಯಲ್ಲಿ

ಉಸಿರಾಟವೇ ಕಷ್ಟ ಈ ಸಮಯದಲ್ಲಿ !


ಲಸಿಕೆ ಮೂಡಿಸಿದ ಭರವಸೆ

ಜವಾಬ್ದಾರಿ ಹೊರುವರು ಯಾರಿಲ್ಲಿ ?

ಆರೋಗ್ಯವಾಗಿದ್ದ ಮನುಷ್ಯ ಇಂದು

ತಡೆಮದ್ದಿನಿಂದಲೇ ಜೀವ ತೊರೆದನಿಲ್ಲಿ !


ಭಯ ಹುಟ್ಟಿಸಿದ ವೈರಾಣು

ಸದ್ದಿಲ್ಲದೇ ಮಾಡಿದೆ ಹೈರಾಣು

ಸಂಖ್ಯೆ ಕಡಿಮೆಗೊಂಡರೂ

ಧೈರ್ಯವೇ ಸಾಲದು ಬೆರೆತು ಮೆರೆಯಲು !


ಸ್ನೇಹಿತರು ಬಂಧುಗಳು ಬಂದರೂ

ಅನುಮಾನ ಪಡೋದೆ ಸವಾಲು

ಯಾವ ರೂಪದಲ್ಲಿರುವಳೊ ಮಹಾಮಾರಿ

ಅವುಚಿಕೊಳ್ಳುವಳೊ ಯಾಮಾರಿ..!


ಹೇಗೆ ಹುಟ್ಟಿಕೊಂಡಿತೋ ಈ ಕುತ್ತು

ಕ್ಷಣ ಕ್ಷಣಕ್ಕೂ ತಪ್ಪದ ಆಪತ್ತು

ವಿಶ್ವಾಸದ ಆಶಾಕಿರಣ ಚಿಗುರುವುದೆಂದೋ

ಮತ್ತೆ ನಲಿವಿನ ವೇಳೆ ಬರುವುದೆಂದೋ..!


***ಭಾವಪ್ರಿಯ***

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...