Tuesday, September 24, 2019

ವ್ಯಥೆ

ಹಣದ ಮೇಲಿನ ಒಲವು
ಅಧಿಕಾರದ ಅಮಲು !

ಸುಳ್ಳು ಕಂತೆಗಳ ಸಾಲು
ಹುಸಿ ಪ್ರಚಾರದ ತೆವಲು !

ಅಂಧ ಭಕ್ತಿಗೆ ಶರಣು
ಸತ್ಯವ ಅರಿತರೂ ಕುರುಡು !

ಬಡಾಯಿ ಕೊಚ್ಚಿಕೊಳ್ಳುವ ಬಾಯಿ
ಕಳ್ಳನ ಸೋಗು ಮಹಾಮಾಯಿ !

ಶೋಕಿ ಜೀವನದ ಮಡುವು
ಪೂಜೆಗೆ ಕುಳಿತರೂ ಕುಹಕು !

ಪೊಳ್ಳು ಡೋಂಗಿಯ ಸಬೂಬು
ದೇಶದ ಮಾನ ಜಗಮುಂದೆ ಹರಾಜು !

ಸಮಸ್ಯೆಯಲ್ಲೇ ಮುಳುಗಿದರೂ ಬಡಪಾಯಿ
ಎಲ್ಲಾ ಸರಿಯಿದೆ ಅನ್ನುವ ಜನ ದ್ರೋಹಿ !!

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...