Monday, July 08, 2019

ಕವಿಯ ಲೇಖನಿ

ಕ್ರಾಂತಿಯ ಸಮರ
ಆದರೂ ಮೌನಿ
ಅರಿಯಿರಿ ಸಾರ
ಅದು ಶಾಂತ ವಾಹಿನಿ
ಹರಿಸಿದೆ ಬೆವರ..,ಕವಿಯ ಲೇಖನಿ !

ಗುಡು-ಗುಡುಗಿದವರ
ಹುಟ್ ಅಡಗಿಸುವ ಹನಿ
ಹುಚ್ಚೆದ್ದು ಅಬ್ಬರಿಸಿದವರ
ಸದ್ದಿರದೆ ಬೆಚ್ಚಿಸುವ ಪರಿ
ಹರಿಸಿದೆ ಬೆವರ..,ಕವಿಯ ಲೇಖನಿ !

ಸೊಕ್ಕಿನಿಂದ ಮೆರೆದವರ
ತಗ್ಗಿಸಿ ಮುದುಡಿಸುವ ಹಾರಿ
ಶಕ್ತಿ ಪ್ರದರ್ಶಿಸಿದ ಶೂರ
ಧೈರ್ಯಗೆಡದಂತೆ ಮದವೇರಿ
ಹರಿಸಿದೆ ಬೆವರ..,ಕವಿಯ ಲೇಖನಿ !



No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...