Monday, October 07, 2013

ಸಮಾಧಿ

ಆ ಶರೀರಗಳಿಗೆ ಕೂಡಿ ಬಾಳುವ ಯೋಗವಿರಲಿಲ್ಲ

ಒಬ್ಬರನೊಬ್ಬರು ಒಪ್ಪುವ ತಿಳಿ ಇರಲಿಲ್ಲ

ನಂಬಿಕೆ ಉಳಿಸಿಕೊಂಡು ನಡೆದುಕೊಳ್ಳುವ ಪರಿ ಗೊತ್ತಿರಲಿಲ್ಲ

ಹೀಗಾಗಿ ಮತ್ತೊಂದು ಹೆಣ ಇಂದು ಸಮಾಧಿ ಸೇರಿತು !


ವಂಚನೆಯ ಗುರಿ ಇಟ್ಟುಕೊಂಡು, ನ್ಯಾಯವ ಮೆರೆಯಲಿಲ್ಲ

ಲೂಟಿ ಮಾಡುವ ದುಷ್ಟ ದರ್ಪ, ಶಿಷ್ಟ ರೀತಿಯೇ ಗೊತ್ತಿಲ್ಲ

ಒಳ್ಳೇಯ ತನದ ಆದರಿಸದ ದೇಹಗಳು, ಕೃತಜ್ಞತೆಯೇ ಗೊತ್ತಿರಲಿಲ್ಲ

ಹೀಗಾಗಿ ಮತ್ತೊಂದು ಹೆಣ ಇಂದು ಸಮಾಧಿ ಸೇರಿತು !

(ಇದು ಸಮಾಜದಲ್ಲಿ ಕಡಿದು ಬೀಳುವ ಸಂಬಂಧಗಳ ಹೆಣ ಸಮಾಧಿ ಸೇರಿದ ಕವನ !!)

2 comments:

Badarinath Palavalli said...

ಸತ್ಸಂಬಂಧಗಳಿಗೆಲ್ಲಿ ಬೆಲೆ!

Sunil R Agadi (Bhavapriya) said...

ಸರ್ ಯಾವುದೇ ಸಂಬಂಧಗಳಿಗೂ ಈಗ ಬೆಲೆನೇ ಇಲ್ಲಾ.!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...