Tuesday, May 22, 2012

ಮುಕ್ತಿ

ಹೆಣೆಯ ಮೇಲೆ ಮೂರು ರೇಖೆ
ಬರಹವನ್ನೇ ಬದಲಾಯಿಸಲಿಲ್ಲ ಏಕೆ ?
ಶಿವ ವಿಭೂತಿ ಬರೆದಹಾಗೆ
ನನ್ನ ಪೂಜೆ ಫಲಿಸದೇಕೆ ?
ಹೊಸ ಜೀವನ ಕಾಣುವ ಬಯಕೆ
ಕನಸುಗಳು ಪೂರ್ಣಗೊಳ್ಳದೇಕೆ  ?
ಕಲ್ಲು ಮುಳ್ಳುಗಳ ಕೂಡಿರುವ  ದಾರಿಗೆ
ಕೊನೆಯೇ ಕಾಣುತ್ತಿಲ್ಲ ಇನ್ನೂ ಏಕೆ ?
ಹೊರಟೆ.., ಗಂಟು  ಮೂಟೆಯ ಕಟ್ಟಿ
ಕೈ ಬಿಸಿ ಕರೆವ ಯಮ ಪಾಶಕೆ ..
ಮುಕ್ತಿಸಿಗಲಿ ಎನಗೆ ದೇವಾ.. ನಿನ್ನ ಸನಿಧಿಯೊಳಗೆ..!
 

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...