ಜೀವನ ಎಂಬುದು ಬರೀ ಒಂದು ಚಕ್ರದ ಮೇಲೆ ಚಲಿಸುವ ಚಕ್ಕಡಿ ಅಲ್ಲ ,
ತಗ್ಗು ದಿಣ್ಣೆಗಳು ಬಂದಾಗ ಒಂದಕ್ಕೊಂದು ಸರಿ ಸಮಾನವಾಗಿ ಹೊಂದಿಕೊಳ್ಳಬೇಕು..!
ಒಂದು ಚಕ್ರ ಹಳ್ಳಕ್ಕೆ ಬಿದ್ದರೆ ಇನ್ನೊಂದು ಮೇಲೆಳೆಯಬೇಕು..,
ಎಡ ಎತ್ತು ಎಡವಿದರೆ ...ಬಲ ಎತ್ತು ನನಗೇನಂತೆ ಅಂದರೆ..,
ಬಲ ಚಕ್ರ ಮುಳುಗಿದರೆ ....ಎಡ ಎತ್ತಿಗೆ ತೊಂದರೆ...!
ಸೇರಿ ನಡಿಬೇಕಾದ ಚಕ್ಕಡಿ ಕುಂಟುತ್ತ ಸಾಗದು...,
ಚಕ್ಕಡಿ ತೈಯ್ಯಾರಿಸಿದಾತ ಇದಕ್ಕಾಗಿ ಶ್ರಮ ಪಟ್ಟಿರಲಿಲ್ಲ ...!
ನೀತಿ ಹೇಳುವರು.... ಅನೀತಿ ಬೋಧಿಸಿದರೆ ....
ತಿಳಿಯದೇ ಪಾಲಿಸುವ ನೀನು...ನಿನ್ನ ಅವನತಿಗೆ ಆವ್ಹಾನ ಇತ್ತಂತೆ ..,
ನಿನ್ನ ಬಾಳು ಎಂದೂ ತಲುಪದು ಗುರಿ .., ಅದು ಕಟ್ಟುವುದು ನಿನ್ನಯ ಗೋರಿ..!
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಅಪ್ಪು - ಮರೆಯದ ಚೇತನ --------------------- ಒಂದು ಮರೆಯಾಗಲಾರದ ಚೇತನ.. ಚಂದನ ವನದ ಸೌಗಂಧದ ಕುಸುಮ ಹೃದಯಗಳ ಆಳಿದ ಧೀಮಂತ ವಿನಯತೆ ಭಾವ ಸದಾ ಜೀವಂತ ಮನುಷತ್ವವೂ ನಾಚ...
-
ಕತ್ತಲು ಕವಿದಾಗ ತಿಳಿ-ಬಿಳಿ ನೆರಳಲ್ಲಿ ಚಂದ್ರಮುಖಿ ದೀಪದ ಬೆಳಕಿನಲ್ಲಿ ನಗೆ ಚೆಲ್ಲೊ ಮಂದಸ್ಮ್ರತಿ ನಯನಗಳು ಮನೋಹರ ಘಾಡ ನೆರಳೊತ್ತ ಗವಿ ಪ್ರೀತಿ ಮೋಹದ ಸಾಗರ ಪಂಚಮ ಪ್ರೀತಮ...
No comments:
Post a Comment