ಮನವ ತೊಳೆಯಿರಿ ಓ ಮಾನವರೇ ,
ಕೆಟ್ಟ ಚಟಗಳ ಪ್ರೇರೇಪಿಸುವ ಮನವ, 
ದುಷ್ಟ ಕೆಲಸಕ್ಕೆ ಕೈ ಹಾಕುವ ಮನವ, 
... ಮಾನವನ ವ್ಯಕ್ತಿತ್ವ ಹಾಳು ಮಾಡುವ... ಮನ ತೊಳೆಯಿರಿ..!
ಮನವ ತೊಳೆಯಿರಿ ಓ ಮಾನವರೇ ,
ಅನ್ನ್ಯರನ್ನು ದೂಷಿಸುವ ಮನವ,
ಪರ ಜನರ ಅಳಿವು ಬಯಸುವ ಮನವ, 
ಅನ್ಯರ ಕಷ್ಟಗಳಲ್ಲಿ ತೃಪ್ತಿ ಕಾಣುವ .... ಮನ ತೊಳೆಯಿರಿ..!
ಮನವ ತೊಳೆಯಿರಿ ಓ ಮಾನವರೇ ,
ಶ್ರೀಹರಿಯ ಜಪಿಸದ ಮನವ 
ದೇವನೋಲುಮೆಯ ಕೊಂಡಾಡದ ಮನವ 
ಜಗತ್ತ ಸೃಷ್ಟಿಯ ಮಾಯವ ಅರಿಯದ ....ಮನ ತೊಳೆಯಿರಿ..!
ಮನವ ತೊಳೆಯಿರಿ ಓ ಮಾನವರೇ ,
ಕಲಿಯುಗದ ಕಾಲ ಮುಗಿಯುವ ಮುನ್ನ,
ಮಾನವನ ಹುಟ್ಟು ಅಡಗುವ ಮುನ್ನ,
ಪ್ರಕೃತಿ ವಿಕೊಪಕೆ ತೆರಳುವ ಮುನ್ನ ....ಮನ ತೊಳೆಯಿರಿ..!
Friday, February 24, 2012
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
- 
ನಲ್ಲೆ, ತಂದು ಕೊಡಲೆ ನಿನಗೆ ಆ ಸಾಗರದಾಳದ ಮುತ್ತು .? ಅಂದನವನು.... ನಲ್ಲಾ, ಆ ಮುತ್ತಗಳ ಬೆಲೆ ಎಷ್ಟೇ ಇದ್ದರೂ .., ನೀ ನೀಡುವ ಪ್ರೀತಿಯ ಸಿಹಿ ಮುತ್ತಿಗೆ ಬೆಲೆ ಕಟ್ಟಲ...
 - 
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
 - 
ಹಸಿರು ಮಾನವನ ಜೀವದ ಉಸಿರು ಹಸಿರು ಇದ್ದಾರೆ ಭಾಗ್ಯ , ಹಸಿರು ತರುವುದು ಸೌಭಾಗ್ಯ ಹಸಿರು ಬೆರೆತಿರಲು ಜೀವನ , ಹಸಿರು ಬದುಕಿನ ಪಯಣ ಕಾಡು ಬೆಳೆದರೆ ನಾಡಿಗೆ ಮಳೆ , ಸೋನೆ ಗರ...
 
No comments:
Post a Comment