ಒಬ್ಬ ಸುಂದರ ಯುವಕ, ಮನಸಲ್ಲಿ ಸಂದರ ಕನಸ್ಸುಗಳು, ಗುರಿಯ ಬೆನ್ನ ಹತ್ತಿ ಶ್ರದ್ದೆಯಿಂದ ಮುನ್ನುಗುತ್ತಿದ್ದ. ಪದವಿ ಪಡೆದು ಕೆಲಸಕ್ಕೆ ಅಲೆಯುವ ಕಾಲವದು.ಮಹಾನಗರಿ ಇನ್ನೂ ಅವನಿಗೆ ಹೊಸದು.ಜನರ ಸಂಪರ್ಕ ಕಡಿಮೆ.ದಿನ ಪತ್ರಿಕೆಗಳನ್ನೆ ನೋಡುತ್ತಾ ಚಿಕ್ಕ ಮಟ್ಟ ಕೆಲಸವಾದರೂ ಸರಿಯೆ ಎಂದು ಹೊರೆಟವ. ತಿಂಗಳು ಕಳೆದವು ಅವನ ಹಣೆಬರಹ ದಯತೋರಲಿಲ್ಲ ಅವನಿಗೆ..ಮರಳಿ ತವರಿಗೆ ಮರಳಿದ. ತಂದೆ ನಿವ್ರುತ್ತ ಅಧಿಕಾರಿ, ಬರುವ ಪೆನಶನ್ ಹಣದಿಂದನೆ ಮನೆ ಸಾಗಿಸಬೇಕು, ತಮ್ಮಂದಿರು ಇನ್ನೂ ವಿದ್ಯಾಬ್ಯಾಸ ಮಾಡುತ್ತಿದ್ದರು.ಬೆಳೆದು ನಿಂತ ಮಗ ಪದವಿ ಮುಗಿಸಿದರೂ ಕೆಲಸ ಸಿಗುವಲ್ಲಿ ಬವಣಿಸುವುದ ಕಂಡು ತಾಯಿ-ತಂದೆಗೂ ಬೇಸರ..ಮನಸಿನ ವೇದನೆ ಹೇಳಿಕೊಳ್ಳಾಲಾರದ ಪರಿಸ್ತಿಥಿ ನವ ಯುವಕನಿಗೆ. ಹೇಗೋ ಪ್ರಯತ್ನದಿಂದ ಒಂದು ಸಣ್ಣ ವಾಹನಗಳ ರಿಪೇರಿ ಮಾಡುವ ಅಂಗಡಿಯಲ್ಲಿ ಕೆಲಸಗಿಟ್ಟಿದ..ಕೆಲಸ ಯಾವುದಾದರೇನು ಎಂದು ಶ್ರದ್ದೆಯಿಂದ ದುಡಿಯತೊಡಗಿದ.ರಾತ್ರಿವೇಳೆಯಲ್ಲಿ ಓದುವುದು, ಬೇರೆ ಸಂಸ್ಠೆಗಳಿಗೆ ಸಂದರ್ಶನ ನೀಡುವುದು ಸಾಮಾನ್ಯವಾಗಿಬಿಟ್ಟಿತ್ತು. ಶ್ರಮ ಪಡುವವರಿಗೆ ದೇವರು ಎಂದಿಗೂ ಕೈ ಬಿಡುವುದಿಲ್ಲ ಅನ್ನುವ ಸಾಕ್ಷಿಯಾಗಿ ಆ ಯುವಕನಿಗೆ ದೂರದ ಹೋರ ರಾಜ್ಯದಲ್ಲೊಂದು ಕೆಲಸ ದೊರೆಯಿತು. ಹೋರ ರಾಜ್ಯಕ್ಕೆ ತೆರಳಬೇಕಾದಾಗ ೫೦೦೦/- ರೂ ಒಟ್ಟು ಹಾಕಲಾರದೇ ಕೆಲಸ ಕಳೆದು ಕೊಳ್ಳುವ ಆ ಸಮಯ ಮನಸ್ಸಿಗೆ ಬೇಸರ ಉಂಟು ಮಾಡಿತ್ತು..ತಂದೆಗೆ ಕೇಳಬೇಕೆಂದರೆ ತಮ್ಮಂದಿರ ವಿದ್ಯಾಬ್ಯಾಸ ಎಲ್ಲಾ ಖರ್ಚುವೆಚ್ಚಗಳ ನೆನೆದು ಸುಮ್ಮನಾದ...ದಾರಿ ಇಲ್ಲದೇ ಇದ್ದ ಕೆಲಸವನ್ನೆ ಮುಂದುವರೆಬೇಕು ವೆಂಬ ನಿರ್ಧಾರಕ್ಕೆ ಬರುತ್ತಾನೆ. ವಿಷಯ ತಿಳಿದ ಮಾಲಿಕ ಅವನ ಶ್ರದ್ದೆಗೆ ಮೆಚ್ಚಿ ೫೦೦೦/- ಕೊಟ್ಟು ಅವನ ಭವಿಶ್ಯ ರೂಪಿಸಿಕೊಳ್ಳಲು ಹೇಳಿ ಕಳಿಸುತ್ತಾನೆ...( ಮುಂದುವರೆವುದು...)
Sunday, February 17, 2013
ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು..)
ಒಬ್ಬ ಸುಂದರ ಯುವಕ, ಮನಸಲ್ಲಿ ಸಂದರ ಕನಸ್ಸುಗಳು, ಗುರಿಯ ಬೆನ್ನ ಹತ್ತಿ ಶ್ರದ್ದೆಯಿಂದ ಮುನ್ನುಗುತ್ತಿದ್ದ. ಪದವಿ ಪಡೆದು ಕೆಲಸಕ್ಕೆ ಅಲೆಯುವ ಕಾಲವದು.ಮಹಾನಗರಿ ಇನ್ನೂ ಅವನಿಗೆ ಹೊಸದು.ಜನರ ಸಂಪರ್ಕ ಕಡಿಮೆ.ದಿನ ಪತ್ರಿಕೆಗಳನ್ನೆ ನೋಡುತ್ತಾ ಚಿಕ್ಕ ಮಟ್ಟ ಕೆಲಸವಾದರೂ ಸರಿಯೆ ಎಂದು ಹೊರೆಟವ. ತಿಂಗಳು ಕಳೆದವು ಅವನ ಹಣೆಬರಹ ದಯತೋರಲಿಲ್ಲ ಅವನಿಗೆ..ಮರಳಿ ತವರಿಗೆ ಮರಳಿದ. ತಂದೆ ನಿವ್ರುತ್ತ ಅಧಿಕಾರಿ, ಬರುವ ಪೆನಶನ್ ಹಣದಿಂದನೆ ಮನೆ ಸಾಗಿಸಬೇಕು, ತಮ್ಮಂದಿರು ಇನ್ನೂ ವಿದ್ಯಾಬ್ಯಾಸ ಮಾಡುತ್ತಿದ್ದರು.ಬೆಳೆದು ನಿಂತ ಮಗ ಪದವಿ ಮುಗಿಸಿದರೂ ಕೆಲಸ ಸಿಗುವಲ್ಲಿ ಬವಣಿಸುವುದ ಕಂಡು ತಾಯಿ-ತಂದೆಗೂ ಬೇಸರ..ಮನಸಿನ ವೇದನೆ ಹೇಳಿಕೊಳ್ಳಾಲಾರದ ಪರಿಸ್ತಿಥಿ ನವ ಯುವಕನಿಗೆ. ಹೇಗೋ ಪ್ರಯತ್ನದಿಂದ ಒಂದು ಸಣ್ಣ ವಾಹನಗಳ ರಿಪೇರಿ ಮಾಡುವ ಅಂಗಡಿಯಲ್ಲಿ ಕೆಲಸಗಿಟ್ಟಿದ..ಕೆಲಸ ಯಾವುದಾದರೇನು ಎಂದು ಶ್ರದ್ದೆಯಿಂದ ದುಡಿಯತೊಡಗಿದ.ರಾತ್ರಿವೇಳೆಯಲ್ಲಿ ಓದುವುದು, ಬೇರೆ ಸಂಸ್ಠೆಗಳಿಗೆ ಸಂದರ್ಶನ ನೀಡುವುದು ಸಾಮಾನ್ಯವಾಗಿಬಿಟ್ಟಿತ್ತು. ಶ್ರಮ ಪಡುವವರಿಗೆ ದೇವರು ಎಂದಿಗೂ ಕೈ ಬಿಡುವುದಿಲ್ಲ ಅನ್ನುವ ಸಾಕ್ಷಿಯಾಗಿ ಆ ಯುವಕನಿಗೆ ದೂರದ ಹೋರ ರಾಜ್ಯದಲ್ಲೊಂದು ಕೆಲಸ ದೊರೆಯಿತು. ಹೋರ ರಾಜ್ಯಕ್ಕೆ ತೆರಳಬೇಕಾದಾಗ ೫೦೦೦/- ರೂ ಒಟ್ಟು ಹಾಕಲಾರದೇ ಕೆಲಸ ಕಳೆದು ಕೊಳ್ಳುವ ಆ ಸಮಯ ಮನಸ್ಸಿಗೆ ಬೇಸರ ಉಂಟು ಮಾಡಿತ್ತು..ತಂದೆಗೆ ಕೇಳಬೇಕೆಂದರೆ ತಮ್ಮಂದಿರ ವಿದ್ಯಾಬ್ಯಾಸ ಎಲ್ಲಾ ಖರ್ಚುವೆಚ್ಚಗಳ ನೆನೆದು ಸುಮ್ಮನಾದ...ದಾರಿ ಇಲ್ಲದೇ ಇದ್ದ ಕೆಲಸವನ್ನೆ ಮುಂದುವರೆಬೇಕು ವೆಂಬ ನಿರ್ಧಾರಕ್ಕೆ ಬರುತ್ತಾನೆ. ವಿಷಯ ತಿಳಿದ ಮಾಲಿಕ ಅವನ ಶ್ರದ್ದೆಗೆ ಮೆಚ್ಚಿ ೫೦೦೦/- ಕೊಟ್ಟು ಅವನ ಭವಿಶ್ಯ ರೂಪಿಸಿಕೊಳ್ಳಲು ಹೇಳಿ ಕಳಿಸುತ್ತಾನೆ...( ಮುಂದುವರೆವುದು...)
Wednesday, February 13, 2013
ಹಣೆಬರಹ
ಫ಼ೆಬ್ರುವರಿಯಲ್ಲಿ ನಾ ನಿನ್ನ ಮನಸಾರೆ ಪ್ರೀತಿಸುತ್ತಿನಿ ಅಂದವಳು
ಎರಡು ತಿಂಗಳದಲ್ಲೆ....ಎಪ್ರಿಲ್ ಫ಼ೂಲು ಮಾಡಿ ಓಡಿ ಹೋದಳು
ಅವಳ ಜಾತಕದಲ್ಲೆ ಬರೆದಿತ್ತು ಅವಳೊಂದು ಬ್ಲಡಿ ಫ಼ೂಲು
ಹಣೆಬರಹ ಬದಲಿಸಿಕೊಂಡ ಹುಡುಗನೀಗ ಮಾಲಾ ಮಾಲು..!
ಎರಡು ತಿಂಗಳದಲ್ಲೆ....ಎಪ್ರಿಲ್ ಫ಼ೂಲು ಮಾಡಿ ಓಡಿ ಹೋದಳು
ಅವಳ ಜಾತಕದಲ್ಲೆ ಬರೆದಿತ್ತು ಅವಳೊಂದು ಬ್ಲಡಿ ಫ಼ೂಲು
ಹಣೆಬರಹ ಬದಲಿಸಿಕೊಂಡ ಹುಡುಗನೀಗ ಮಾಲಾ ಮಾಲು..!
Tuesday, February 12, 2013
ಕಣ್ಣಿನ ಪರದೆಗಳು ಕುಸಿಯುತ್ತಿತ್ತು
ಹಾಸಿಗೆಯು ಕರೆಯುತಿತ್ತು
ನಿದ್ದ್ರಾದೇವಿ ಆವರಿದ್ದೆ ತಿಳಿಯಲೇ ಇಲ್ಲಾ
ಸಿಹಿ ಸಿಹಿ ಕನಸಿನಲ್ಲಿ ಮುತ್ತುಗಳ ಸುರಿಸಿದಂತಾಗಿ
ಒಮ್ಮೆ ಬಲ ಗಲ್ಲಕ್ಕೆ ಮತ್ತೊಮ್ಮೆ ಎಡ ಗಲ್ಲಕ್ಕೆ
ಒಮ್ಮೆ ಕೈಯಿಗೆ ಮತ್ತೊಮ್ಮೆ ಕಾಲಿಗೆ ಚುಂಬಿಸಿದಂತಾಗಿ
ನಸುಕಿನಲ್ಲಿ ಎದ್ದು ಮಯ್ಯ ಮುರಿದೆ
ಮೈ ಕೈ ಮುಟ್ಟಿ ಮುಟ್ಟಿ ನೋಡಲು
ಅಲ್ಲಲ್ಲಿ ಕಂಡವು ಗುಮ್ಮುಟೆಯ ಸಾಲುಗಳು
ಆಗಲೇ ತಿಳಿದಿತ್ತು ಕನಸಿನಲ್ಲಿ ಕೊಟ್ಟವಳು ಸುಂದರಿಯಲ್ಲ
ರಕ್ತವ ಹೀರಿ ಬಾಯಿ ಚಪ್ಪರಿಸಿದ ಹೆಣ್ಣು ಸೊಳ್ಳೆ ಅವಳು
***ಭಾವಪ್ರಿಯ***
Thursday, February 07, 2013
ಮತ್ತೆ ಮೂಡಿತು....!
ಮತ್ತೆ ಮೂಡಿತು ಮಂದಹಾಸ ಅವಳ ಮೊಗದಲ್ಲಿ
ಮತ್ತೆ ತುಟಿಗಳು ಅರಳಿದವೂ ಅವಳ ನಗು ಅಂಚಿನಲ್ಲಿ
ಸಂತೋಷ ಹೊಮ್ಮುತಿದೆ ಆ ಕಣ್ಣಗಳಲ್ಲಿ ,
ಗಲ್ಲ ಕೆಂಪಾದವು ಹರುಷದ ಮೊಗ್ಗೆ ಚೆಲ್ಲಿ.., ಮತ್ತೆ ಮೂಡಿತು..ಮತ್ತೆ ಮೂಡಿತು..!
Friday, February 01, 2013
ಅನ್ನಸ್ಲಿಕತ್ತದ ನನಗ..., ಏನೋ ಹೇಳೊದೈತಿ ನಿನಗ..!
ಆ ನಿನ್ನ ಮಾರಿ ಮ್ಯಾಗ,
ಏನೋ ಸಂಗತಿ ಕಾಡೇತಿ ಅಂತ..
ಆ ನಿನ್ನ ಸಪ್ಪನ ಕಣ್ಣಾಗ,
ದುಃಖ ಮನಿ ಮಾಡಿ ಕೂತಂಗ..
ತುಟಿ ತಡವರಿಸಿ ಬಿಗಿದಾವ,
ಮಾತು ಬಾರದ ಮೂಕಿಹಂಗ..
ಅನ್ನಸ್ಲಿಕತ್ತದ ನನಗ,
ಏನೋ ಹೇಳೊದೈತಿ ನಿನಗ..
ಮನಸಿನ ಗೊಂದಲದಾಗ,
ಅದರಿ ಅವಿತು ಕುಳಿತಿ ಯಾಕ..
ಹೃದಯಕ್ಕ ಮಂಕು ಕವಿದಾಗ,
ದುಗಡವ ನೀ ಹೊರ ಚೆಲ್ಲಬೇಕ ..
ಮೌನ ದೂಡ ದೂರಕ,
ಚಿಂತಿ ಬಿಟ್ಟು ತೊಡಿಕೊಳ್ಳಾಕ ಅಣಿಯಾಗ..
ಅನ್ನಸ್ಲಿಕತ್ತದ ನನಗ,
ಏನೋ ಹೇಳೊದೈತಿ ನಿನಗ..!
***ಭಾವಪ್ರಿಯ***
ಏನೋ ಸಂಗತಿ ಕಾಡೇತಿ ಅಂತ..
ಆ ನಿನ್ನ ಸಪ್ಪನ ಕಣ್ಣಾಗ,
ದುಃಖ ಮನಿ ಮಾಡಿ ಕೂತಂಗ..
ತುಟಿ ತಡವರಿಸಿ ಬಿಗಿದಾವ,
ಮಾತು ಬಾರದ ಮೂಕಿಹಂಗ..
ಅನ್ನಸ್ಲಿಕತ್ತದ ನನಗ,
ಏನೋ ಹೇಳೊದೈತಿ ನಿನಗ..
ಮನಸಿನ ಗೊಂದಲದಾಗ,
ಅದರಿ ಅವಿತು ಕುಳಿತಿ ಯಾಕ..
ಹೃದಯಕ್ಕ ಮಂಕು ಕವಿದಾಗ,
ದುಗಡವ ನೀ ಹೊರ ಚೆಲ್ಲಬೇಕ ..
ಮೌನ ದೂಡ ದೂರಕ,
ಚಿಂತಿ ಬಿಟ್ಟು ತೊಡಿಕೊಳ್ಳಾಕ ಅಣಿಯಾಗ..
ಅನ್ನಸ್ಲಿಕತ್ತದ ನನಗ,
ಏನೋ ಹೇಳೊದೈತಿ ನಿನಗ..!
***ಭಾವಪ್ರಿಯ***
Sunday, January 27, 2013
ಸ್ತ್ರೀ ವಿರೋಧಿ
ಹುಟ್ಟುತ್ತಲೆ ಮಗನ ತ್ಯಜಿಸಿ
ಕಸದ ತೊಟ್ಟಿಗೆ ಎಸೆದಳು ಇವಳೆಂತಾ ಹೆಣ್ಣು ?
ಬೀದಿಯಲ್ಲಿ ಬೆಳೆದ.. ಭಿಕ್ಷೆ ಬೇಡಲೆಂದು ಹೋದವನಿಗೆ,
ದೂರ ದೂಡಿದಳು ಇವಳೆಂತಾ ಹೆಣ್ಣು..?
ಕಲಿತು ದೊಡ್ಡವನಾಗಿ ಬೆಳೆಯಬೇಕೆನ್ನುವಾಗ ಸಿಕ್ಕಳೊಬ್ಬಳು ಹುಡುಗಿ
ಪ್ರೀತಿಯ ಹೆಸರು ಹೇಳಿ ಮನ ಕೆಡಸಿ ನಡೆದಳು ಇವಳೆಂತಾ ಹೆಣ್ಣು ?
ಮಾಯೆಗೆ ಮರುಳಾಗಿ ಮದುವೆ ಬಂಧನಕ್ಕೆ ಜಾರಿದ,ನಟನೆಯ ಸುಳಿ ಬೆಸೆದಳು..
ಮನೆಯ ದೋಚಿ ಓಡಿ ಹೋದಳು ಮರ್ಯಾದಿಯ ಕಳೆದು.. ಇವಳೆಂತಾ ಹೆಣ್ಣು. ?
ಪ್ರತಿ ಹೆಜ್ಜೆಗೂ ಮೋಸ ಹೋದವ ಒಬ್ಬ ಗಂಡು,
ಅದಕ್ಕೆ ಇವನು ಇಂದು ಸ್ತ್ರೀ ವಿರೋಧಿ ಬೆಂಕಿಯ ಚೆಂಡು.
Friday, January 25, 2013
ಅರುಣರಾಗ
ಚುಮು ಚುಮು ಚಳಿ ಮೈ ಸೊಕಿದಾಗ
ಮಂಜಾನೆಯ ಮಂಜು ಕಣ್ಣಾವರಿಸಿದಾಗ
ಹಕ್ಕಿಗಳ ಚಿಲಿಪಿಲಿ ಮುಗಿಲು ಮುಟ್ಟಿದಾಗ
ಸೂರ್ಯನ ಕಿರಣಗಳು ಭುವಿ ತಟ್ಟಿದಾಗ
ಸಮಸ್ತ ಮನು ಸಂಕುಲಕೆ ಶುಭ ಅರುಣರಾಗ .!
***ಭಾವಪ್ರಿಯ***
ಮಂಜಾನೆಯ ಮಂಜು ಕಣ್ಣಾವರಿಸಿದಾಗ
ಹಕ್ಕಿಗಳ ಚಿಲಿಪಿಲಿ ಮುಗಿಲು ಮುಟ್ಟಿದಾಗ
ಸೂರ್ಯನ ಕಿರಣಗಳು ಭುವಿ ತಟ್ಟಿದಾಗ
ಸಮಸ್ತ ಮನು ಸಂಕುಲಕೆ ಶುಭ ಅರುಣರಾಗ .!
***ಭಾವಪ್ರಿಯ***
Thursday, January 17, 2013
Wednesday, January 16, 2013
ಲಗಾಮು ಇರದ ಕುದುರೆ
ಕುದುರೆ ಓಡುತಿಹುದು ಕುದುರೆ
ಆಧುನಿಕತೆಯ ಬೆನ್ನೇರಿ ,
ಸಂಸ್ಕ್ರುತಿಯ ಮರೆತು,
ದಿಕ್ಕು ದಿಸೆ ಇಲ್ಲದೆ ಓಡುತಿದೆ, ಕುದುರೆ ಓಡುತಿದೆ.
ಅಹಂ ಗುಣವ ಮೇಲೆತ್ತಿ
ಶಿಷ್ಟರನ್ನ ನೆಲಕ್ಕೆ ಒತ್ತಿ
ಹೊಲಸು ತಿಪ್ಪೆಯಲಿ
ಸುಖ ಕಾಣುತಲಿ ಓಡುತಿದೆ , ಕುದುರೆ ಓಡುತಿದೆ.
ಹಿರಿತನದ ಗೌರವ ಇಲ್ಲ ಅದಕೆ
ಸೊಕ್ಕು ತುಂಬಿ ಮೈಯ ಓಳಗೆ
ಮಧ್ಯ ಕುಡಿಸಿದ ಮಂಗನ ಹಾಗೆ
ಎಲ್ಲವನ್ನು ಬಿಟ್ಟುಕೊಟ್ಟು ಓಡುತಿದೆ, ಕುದುರೆ ಓಡುತಿದೆ.
ಲಂಗು ಇಲ್ಲದ ಕುದುರೆ
ಲಗಾಮು ಇರದ ಕುದುರೆ
ತನ್ನ ಅವನತಿಯೆಡೆಗೆ
ಅವಸರದಿ ಓಡುತಿದೆ, ಕುದುರೆ ಓಡುತಿದೆ.
***ಭಾವಪ್ರಿಯ***
Tuesday, January 15, 2013
ಅಭಿಲಾಶೆ
ನಯವಾದ ನುಣುಪು ಹುಬ್ಬು ಸೌಮ್ಯತನವ ಮೆರೆದಂತೆ
ಕಾಡಿಗೆ ಲೇಪಿಸಿದ ಕಣ್ಣು ., ಧ್ರುವ ನಕ್ಷತ್ರದಂತೆ
ಹಣೆಯ ಬೊಟ್ಟು.., ಹುಣ್ಣಿಮೆ ಚಂದ್ರನಂತೆ
ಕನ್ನಡವ ನುಡಿವ ತುಟಿಗಳು, ನಾಡಿಗೆ ಶ್ರೆಯಸ್ಸಂತೆ
ವಿಶಾಲ ಹಣೆ.., ಉದಾರತನ ಸಾಕ್ಷಿಯಂತೆ
ಸೀರೆಯನುಟ್ಟು ನೀ ನಡೆದರೆ ಹಸಿರು ಬನಸಿರಿಯೇ ನೀನಂತೆ
ಹೀಗೆಯೇ ನೀ ಕಾಣಬೇಕೆನ್ನುವ ನನ್ನ ಅಭಿಲಾಶೆ
ನಲಿಯುತಾ ಬರುವೆಯಾ ನನ್ನ ಉಷೆ..?
***ಭಾವಪ್ರಿಯ ***
Thursday, January 10, 2013
Monday, January 07, 2013
ಶೂನ್ಯ
ಶೂನ್ಯ
ನೀ ಹತ್ತಿರವಿದ್ದರೂ ದೂರ
ಮನದಲ್ಲಿ ನೆಲೆಸಿರುವೆ.., ಹೆಚ್ಚಿದೆ ಮನಸ್ಸಿನ ಭಾರ
ಅನುಕ್ಷಣವೂ ಬಂದು ನೀ ನೆನಪಿಗೆ...,ತುಳುಕುತಿದವೆ ಭಾವನೆಗಳ ಸಾಗರ
ಹೃದಯ ಚಿಮ್ಮುವ ನೆತ್ತರು ..ದಿನೇ ದಿನೇ ಹೆಚ್ಚಿಸಿದೆ ಉಸಿರು
ಮನಸ್ಸು - ಹೃದಯಗಳು ಭಾವವ ಬೆಸೆಯುತಿಹರು
ನೀ ದೂರಾದರೆ ಇನ್ನ ....ನನ್ನ ಲೋಕವೇ ಶೂನ್ಯ .
ಭಾವಪ್ರಿಯ
ನೀ ಹತ್ತಿರವಿದ್ದರೂ ದೂರ
ಮನದಲ್ಲಿ ನೆಲೆಸಿರುವೆ.., ಹೆಚ್ಚಿದೆ ಮನಸ್ಸಿನ ಭಾರ
ಅನುಕ್ಷಣವೂ ಬಂದು ನೀ ನೆನಪಿಗೆ...,ತುಳುಕುತಿದವೆ ಭಾವನೆಗಳ ಸಾಗರ
ಹೃದಯ ಚಿಮ್ಮುವ ನೆತ್ತರು ..ದಿನೇ ದಿನೇ ಹೆಚ್ಚಿಸಿದೆ ಉಸಿರು
ಮನಸ್ಸು - ಹೃದಯಗಳು ಭಾವವ ಬೆಸೆಯುತಿಹರು
ನೀ ದೂರಾದರೆ ಇನ್ನ ....ನನ್ನ ಲೋಕವೇ ಶೂನ್ಯ .
ಭಾವಪ್ರಿಯ
Thursday, December 27, 2012
ಪ್ರೀತಿ
ಇಣುಕಿ ನೋಡು ಹೃದಯದ ಕಿಟಕಿ
ಬೆಚ್ಚಗೆ ಮಲಗಿಹುದು ಪುಟ್ಟ ಪ್ರೀತಿಯ ಹಕ್ಕಿ
ಕಣ್ಣುಗಳ ತೆರೆದು ಪಿಳಿ ಪಿಳಿ
ಅವಿತಿರುವುದು ಗೂಡ ಮರೆಯಲಿ
ಜಗದ ಪರಿವಿಲ್ಲದ ಅದಕೆ
ನವ ಕನಸುಗಳದೇ ಭರಾಟೆ
ರೆಕ್ಕೆಗಳ ಬಿಚ್ಚಿ ಪಟ ಪಟನೆ
ಹಾರಿ ಸೇರಬೇಕೆನ್ನುವ ಒಲವಿನ ಅರಮನೆ .
Thursday, November 22, 2012
ತಕ ಧಿಮಿ ತಕಿಟ
ತಕ ಧಿಮಿ ತಕಿಟ.. ತಕ ಧಿಮಿ ತಕಿಟ
ಮೊಗದ ಸಿರಿ ಹೃದಯ ಕಲುಕುವ ಆಟ
ತಳುಕು ಬಳುಕು ಇವರ ಮೈ ಮಾಟ
ಘಲ್ ಘಲ್ ಗೆಜ್ಜೆ ಏರಿಸಿದ ಹ್ರುದಯದ ಬಡಿತ
ಜೀವ ಉಲ್ಲಾಸಗೋ೦ಡು ಮನವಾಯ್ತು ಮರ್ಕಟ
ಭೊಲೋಕದಲ್ಲಿ ಇವರ ಅಟ್ಟಹಾಸದ ಆರ್ಬಟ
ಮೆಟ್ಟಿ ನಿಲ್ಲುವೆ ಯಮಲೋಕದಲ್ಲಿ ಇವರ ಹಠ
ಅಳಿಸುವೆ ನಾ ಸಜ್ಜನರ ಸಂಕಟ .
ಮೊಗದ ಸಿರಿ ಹೃದಯ ಕಲುಕುವ ಆಟ
ತಳುಕು ಬಳುಕು ಇವರ ಮೈ ಮಾಟ
ಘಲ್ ಘಲ್ ಗೆಜ್ಜೆ ಏರಿಸಿದ ಹ್ರುದಯದ ಬಡಿತ
ಜೀವ ಉಲ್ಲಾಸಗೋ೦ಡು ಮನವಾಯ್ತು ಮರ್ಕಟ
ಭೊಲೋಕದಲ್ಲಿ ಇವರ ಅಟ್ಟಹಾಸದ ಆರ್ಬಟ
ಮೆಟ್ಟಿ ನಿಲ್ಲುವೆ ಯಮಲೋಕದಲ್ಲಿ ಇವರ ಹಠ
ಅಳಿಸುವೆ ನಾ ಸಜ್ಜನರ ಸಂಕಟ .
Tuesday, October 23, 2012
ಪ್ರೀತಿ ಉಕ್ಕುತಿದೆ ..
ನಿನ್ನ ಜೊತೆ ನಡೆದ ಹಾದಿ
ಕಲ್ಲು ಮುಳ್ಳುಗಳು ಇದ್ದರೂ ಹೂವು ಹಾಸಿದಂತಾಗಿ
ಜೊತೆ ಜೊತೆಯಲ್ಲಿ ಸವೆದ ಕ್ಷಣಗಳು ಒಂದಾಗಿ
ಮುದ ನೀಡುತಿವೆ ಮನಸಿಗೆ ತಂಗಾಳಿಯಾಗಿ.. , ಪ್ರೀತಿ ಉಕ್ಕುತಿದೆ..!
ನಿನ್ನ ಅಂದ ಚಂದಕೆ ಬೆರಗು ನಾನಲ್ಲ
ಯಾವ ಐಶ್ವರ್ಯದ ಹಂಗು ನನಗಿಲ್ಲ
ನಿನ್ನ ಗುಣಕೆ ತಲೆ ಬಾಗಿಹೆ ನಲ್ಲ
ನಿನ್ನ ಸುಖಾಗಮನವೇ ನನದೆಲ್ಲ , ಬಯಸಿ ಬಯಸಿ ಪ್ರೀತಿ ಉಕ್ಕುತಿದೆ..!
ನಿನ್ನ ಹಣೆಗೆ ಒಂದು ಅಕ್ಕರೆಯ ಮುತ್ತಿಡಲೇ
ನಿನ್ನ ಕಣ್ಣ ಹನಿಗಳ ಇಂಗಿಸಿ ಕುಡಿಯಲೇ
ನನ್ನ ಹೃದಯದ ಗೂಡಿನಲ್ಲಿ ನಿನ್ನ ಬಚ್ಚಿಡುಲೇ
ಅನುದಿನವು ಮುದ್ದಿಸಿ ಸ್ನೇಹ ಬೆಸೆಯುಲೇ..,ನನ್ನ ಒಡಲೊಳು ಪ್ರೀತಿ ಉಕ್ಕುತಿದೆ..!
ಕಲ್ಲು ಮುಳ್ಳುಗಳು ಇದ್ದರೂ ಹೂವು ಹಾಸಿದಂತಾಗಿ
ಜೊತೆ ಜೊತೆಯಲ್ಲಿ ಸವೆದ ಕ್ಷಣಗಳು ಒಂದಾಗಿ
ಮುದ ನೀಡುತಿವೆ ಮನಸಿಗೆ ತಂಗಾಳಿಯಾಗಿ.. , ಪ್ರೀತಿ ಉಕ್ಕುತಿದೆ..!
ನಿನ್ನ ಅಂದ ಚಂದಕೆ ಬೆರಗು ನಾನಲ್ಲ
ಯಾವ ಐಶ್ವರ್ಯದ ಹಂಗು ನನಗಿಲ್ಲ
ನಿನ್ನ ಗುಣಕೆ ತಲೆ ಬಾಗಿಹೆ ನಲ್ಲ
ನಿನ್ನ ಸುಖಾಗಮನವೇ ನನದೆಲ್ಲ , ಬಯಸಿ ಬಯಸಿ ಪ್ರೀತಿ ಉಕ್ಕುತಿದೆ..!
ನಿನ್ನ ಹಣೆಗೆ ಒಂದು ಅಕ್ಕರೆಯ ಮುತ್ತಿಡಲೇ
ನಿನ್ನ ಕಣ್ಣ ಹನಿಗಳ ಇಂಗಿಸಿ ಕುಡಿಯಲೇ
ನನ್ನ ಹೃದಯದ ಗೂಡಿನಲ್ಲಿ ನಿನ್ನ ಬಚ್ಚಿಡುಲೇ
ಅನುದಿನವು ಮುದ್ದಿಸಿ ಸ್ನೇಹ ಬೆಸೆಯುಲೇ..,ನನ್ನ ಒಡಲೊಳು ಪ್ರೀತಿ ಉಕ್ಕುತಿದೆ..!
Friday, October 12, 2012
ನಿನ್ನ ಮಾತುಗಳು ಅನಾವಶ್ಯಕ ಅಂದ ನಲ್ಲೆಗೆ....
ನಿನ್ನ ಮಾತುಗಳು ಅನಾವಶ್ಯಕ ಅಂದ ನಲ್ಲೆಗೆ....
ನಾನು ಕೊಟ್ಟ ಉತ್ತರ " ಧೀರ್ಘ ಅನಿರ್ದಿಷ್ಟಿತ ಮೌನ "
ಇನ್ನು ಮೇಲೆ ತೆರೆಯುವುದೇ ಇಲ್ಲಾ ನನ್ನ ಬಾಯಿನ
ನೀನಿಟ್ಟ ಹರಿತಾದ ಬಾಣ ನಾಟಿದೆ ನನ್ನ ಹೃದಯವನ್ನ
ಮೂಕ ಮಾಡಿಸಿದೆ ಎನ್ನ , ಇನ್ನು ಬರಿ ಸ್ಮಶಾಣ ಮೌನ
Thursday, October 11, 2012
Tuesday, October 09, 2012
Wednesday, October 03, 2012
ಮದುವೆ ಎಂದರೆ ಕೆಲವರಿಗೆ ...
ವಯಸ್ಸಿಗೆ ಬಂದ ಹುಡುಗ-ಹುಡುಗಿಯರಿಗೆ ಅದು ಮೋಜು
ಹುಡುಗಿಯರ ದೃಷ್ಟಿಯಲಿ ಗಂಡ ಒಂದು ಏಟಿಎಂ ಕಾರ್ಡು
ಚಿನ್ನ ವಜ್ರ ವೈಡುರ್ಯಗಳ ಕೊಡಿಸಲು ಒಂದು ಕ್ರೆಡಿಟ್ ಕಾರ್ಡು
ತನ್ನ ಜೀವ ಕಾಪಾಡಲು ಬೇಕಾಗುವ ಒಂದು ಬಾಡಿ ಗಾರ್ಡು.
ತಂದೆಯ ಮನೆಯಲ್ಲಿ ಸಿಗದ ಸುಪ್ಪತ್ತಿಗೆ ಬಯಸುವ ತಾಣ
ಗಂಡನನ್ನು ಮುಷ್ಟಿಯಲ್ಲಿ ಇಡಲು ಹೂಡುವಳು ತನ್ನ ಮೋಹದ ಬಾಣ
ಬಾರದೆ ಹೋದಲ್ಲಿ., ತೋರುವವಳು ತನ್ನ ನಿಜವಾದ ಬಣ್ಣ
ಎಲ್ಲದರಲ್ಲೂ ಸೋತರೆ, ಶುರುವಾಗುವುದು ಹೊಸ ರಾಮಾಯಣ..!
ಸಣ್ಣ ಪುಟ್ಟ ಜಗಳಗಳಿಗೆ ತ್ವರೆದು ಗಂಡನನ್ನ
ಮರೆತೇ ಬಿಡುವರು ಮದುವೆಯ ಸಮಯದಲ್ಲಿ ಮಾಡಿದ ಪ್ರತಿಜ್ಞ
ಆಫೀಸಿನ ಕೆಲಸ ಮಾಡುವವರಿಗೆ..,ಮಾತನಾಡಿಸುವುದು ಹಣ
ಸಂಸಾರ ತೊರೆದು ನಡೆಸುವರು ಶ್ವೆಛ್ಚಾಚಾರದ (ಹಾದರದ) ಜೀವನ ..!
-------------------------------------------------------------------------
ಹುಡುಗನ ದೃಷ್ಟಿಯಲಿ ಹೆಂಡತಿ ಒಂದು ಮನೆಯ ಆಳು
ಗಂಡನ ಬೇಡಿಕೆಗಳ ಈಡೇರಿಸಲು ಸತತವಾಗಿ ದುಡಿಯುವ ಹುಳು
ಮನೆಯ ಶುಚಿಗೊಳಿಸುತ್ತ, ಗಂಡ-ಮಕ್ಕಳಿಗೆ ಅಡುಗೆ ಮಾಡಿ ಬಡಿಸುವವಳು
ಕಾಣದು ಅವನಿಗೆ ಹೆಂಡತಿಯ ನೋವಿನ ಗೀಳು..!
ಇನ್ನು ಕೆಲವರಿಗೆ.., ಹೆಂಡತಿ ತರಬೇಕು ಆಸ್ತಿ ಪಾಸ್ತಿ ಜೋರು
ನಿವೇಶನ , ಕಾರುಗಳ ಬೇಡಿಕೆಗಳು ಸಾಲು ಸಾಲು
ಸಿಗದೇ ಹೋದಲ್ಲಿ ., ಹೆಂಡತಿಗೆ ಶುರು ಕಿರಿ-ಕಿರಿ ನೂರು
ಪಾಪ., ಅವಳಿಗೆ ಜೀವನವೇ ಜಿಗುಪ್ಸೆಯ ತೇರು !
ಹೆತ್ತವರ ಅಗಲಿ ಬಂದ ಹುಡುಗಿಗೆ ತೋಚದು ಇನ್ನೇನು
ನಂಬಿ ಬಂದ ಗಂಡನೇ ತೋರುವುದಿಲ್ಲ ಪ್ರೀತಿ ಚೂರು
ತನ್ನ ಬಯಕೆ ಬವಣೆಗಳ ಕೇಳುವವರಿಲ್ಲದೇ ಹರಿಸುತಿರುವಳು ಕಣ್ಣೀರು
ಮಾಗಿ ಹೋದ ಜೀವನ ನಡಿಸಲಾರದೆ ತಾನೆಯೇ ಕೊನೆಯಾದಾಳು..!
*** ಭಾವಪ್ರಿಯ***
Sunday, September 30, 2012
ಗೆಳತಿ
ಕಾಡ ಬೇಡ ಗೆಳತಿ
***ಭಾವಪ್ರಿಯ***
ಬೇರ್ಯಾರಿಲ್ಲ ನನ್ನ ಗೆಳತಿ
ಇದ್ದರೂ..., ಆಗಲಾರಳು ನಿನ್ನ ಸವತಿ
ನನ್ನ ಮನಸಿನ್ಯಾಗ ಯಾಕ ತಣ್ಣೀರು ಸುರಿತಿ
ನೀನ... ನನ್ನ ಹೃದಯದ ಒಡತಿ
ಮೌನವಾಗಿ ಓಡುತಿ ಯಾಕ ಚಿತ್ತ ಕದಡಿ
ಬೆಂದು ಹೋಗತೇನಿ ನಾ ಒದ್ದಾಡಿ-ಒದ್ದಾಡಿ
ನನ್ನ ಕ್ಷಣಗಳು ಕಳೆದಾವ ನಡು-ನಡುಗಿ
ಆಗಬಾರದೇ ನೀ ನನ್ನ ಅಮೃತ ಗಡಗಿ .
***ಭಾವಪ್ರಿಯ***
Friday, September 28, 2012
ಮೇಘ ಮಾಯೆ
ಮತ್ತೆ ಹರಿಸ್ಯಾಳ ಹನಿ, ಮೇಘ ತಾಯೆ
ಗೆಳತಿ ಇಳೆಯ ಸಿಟ್ಟು ಅಳಿಸಲಿಕ್ಕೆ
"ಧೋ..." ಎಂದು ಸುರಿದಾಳೆ ಮೇಘ ಮಾಯೆ
ಹರಿ-ಹರಿದು ಬರಲಿ ಅವಳ ಧಾರೆ
ತುಂಬಲಿ ಹಳ್ಳ , ನದಿ , ಕಣಿವೆ, ಕೆರೆ
ಹಸಿರು ಬಡಿಸಲಿ ಬಾಳೆಯಲೆಯಲೇ
ಹಸಿರನುಟ್ಟು ಬಸಿರಾಗು ನೀ ಧರೆ
ಮುಗಿಲು ನೋಡುತಿದ್ದ ರೈತರೇ
ಹಾರಿ ಕುಣಿದಾಡಿ ಇಗಲೇ
ಬೆಳೆಯ ಬೆಳೆಯಲು ಕರುಣಿಸಿಹಳು ತಾಯೆ
ಇನ್ನು ಸಂಕಷ್ಟಗಳು ಮಂಗ ಮಾಯೆ
***ಭಾವಪ್ರಿಯ***
Monday, September 24, 2012
खामोश होगई है प्यार
बांध करके ह्रदय का द्वार
इसको ना है किसीका इंतज़ार
ना है इसको किसीसे ऐतबार
खामोश होगई है प्यार !
जो प्यार की भाषा ना समाज पाया वोह शायर
कैसे हो उसको किसीकी प्यार की खबर
खोगाया है अँधेरे में होके बेखबर
खामोश होगई है प्यार !
धड़कते अरमानो को छुपाकर
खुशिया सब भुलाकर
जीवन की हर उम्मीद छोड़कर
खामोश होगई है प्यार !
Monday, September 17, 2012
ಮತ್ತೆ ಶುರುವಾಗಿದೆ ಓಟ
ಮತ್ತೆ ಶುರು ಮಾಡಿದೆ ಓಟ
ಚಿಕ್ಕವರಿದ್ದಾಗ ಓಡಾಟವೇ ಆಟ
ಬೆಳೆದು ಬೆಳೆಯುತ್ತಲೇ ವಿದ್ಯೆ ದೇವಿಯಡೆಗೆ ಓಟ
ಮತ್ತೆ ಶುರುವಾಗಿದೆ ಓಟ
ಪದವಿಧರನಾದ ಮೇಲೆ ಮುಗಿಯಲಿಲ್ಲ ಓಟ
ಕೆಲಸ ಹುಡುಕುತ್ತಲೇ ಶುರುವಾಯಿತು.., ಮತ್ತೊಂದು ಜಂಜಾಟ
ಮಹಾನಗರಿಯಲ್ಲಿ ಅಲೆದು, ಅಲೆದು, ಕಡೆಗೂ ಸಿಕ್ಕಿತೊಂದು ಆಸರೆಯ ಕೂಟ
ಮತ್ತೆ ಶುರುವಾಗಿದೆ ಹೊಸದೊಂದು ಓಟ
ಬೆನ್ನಮೇಲೊಂದು ರೊಟ್ಟಿಯ ಬುತ್ತಿ
ಹೊರೆಟೆವು ನಾನು ಹಣದ ಬೆನ್ನಹತ್ತಿ.
ನೆಮ್ಮದಿ ಇರದ ಖುಷಿಯ ಮೆಟ್ಟಿ
ತಪ್ಪದೆನಗೆ ಕಚೇರಿಯ ಕಾಟ
ಮತ್ತೆ ಶುರುವಾಯಿತು ಓಟ
ಹುಟ್ಟಿದಾಗಿನಿಂದಲೂ ಹೀಗೆಯೇ ಇದೆ ಓಟ
ಒಮ್ಮೆ ನನಗಾಗಿ, ಇನ್ನೊಮ್ಮೆ ನನ್ನ ಹಡೆದವರಿಗಾಗಿ ಓಟ
ನನ್ನ ಆರೋಗ್ಯವ ಕಾಪಾಡಿಕೊಳ್ಳಲು,
ವರುಷಗಳ ನಂತರ ಮತ್ತೆ ಶುರುವಾಗಿದೆ ಓಟ.
***ಭಾವಪ್ರಿಯ***
Monday, September 03, 2012
ಮಿಡಿಯುತಿದೆ ಹೃದಯ
ಚೆಲುವೆ ಕುಳಿತು ಬಿಡು ಹೀಗೆ ಮೌನವಾಗಿ
ಹೃದಯದ ಮೌನವನ್ನೇ ಆಲಿಸುತ್ತಿರುವೆ ನಿನಗಾಗಿ
ಮಾತುಗಳ ಬಿನ್ನಹಿಸಲಾರದ ಭಾವನೆಗಳಿಗಾಗಿ
ಮಿಡಿಯುತಿದೆ ಎನ್ನ ಹೃದಯ ನಿನ್ನ ಸಂತೈಸುವುದಕ್ಕಾಗಿ .
ಮನಸದು ನಿನ್ನ ಕಾಡುತಿಹುದು ನಾ ಅರಿಯೆ
ಮೂಕ ರಾಗದಲಿ ಹಾಡುತಿದೆ ನಾ ತಿಳಿದೆ
ಬೇಸರವ ದೂರ ಮಾಡಲು ವಿಧಾನವ ಹುಡುಕುತಿರುವೆ
ನಿನ್ನ ಮನದ ಡುಗುಡಕೆ ಎನ್ನ ಹೃದಯ ಮಿಡಿಯುತಿದೆ
ಅಕ್ಕರೆಯ ತೋರಿಸಿದರೆ ನಿನಗೆ, ನೀ ತಪ್ಪಾಗಿ ತಿಳಿಯದಿರೆ
ಸಹಾನುಭೂತಿ ಅಲ್ಲ ಅದು ನನ್ನ ಪ್ರೀತಿಯ ಸೆರೆ
ಸ್ವಾಭಿಮಾನಿ ನೀ , ಧೈಯಶಾಲಿಯೂ ನೀ
ನಿನ್ನ ಒಂಟಿತನವ ಹೋಗಲಾಡಿಸಲು ಮಿಡಿಯುತಿದೆ ಈ ಹೃದಯ
ಬಯಸುತ್ತಿರುವ ಪ್ರೀತಿ, ನಿನಗೆ ದೊರಕದೆ
ನೀ ಬಳಲುತ್ತಿರುವುದ ನಾ ಕಾಣಲಾರೆ
ಸುಮ್ಮನೆ ಕೂಡುವ ಗೆಳೆಯ ನಾನಲ್ಲೇ
ನಿನ್ನ ಕಂಗಳಲಿ ಆನಂದ ಭಾಷ್ಪ ಕಾಣಲು ಈ ಹೃದಯ ಮಿಡಿಯುತಿದೆ.
***ಭಾವಪ್ರಿಯ***
ಕನ್ನಡದ ಹುಡುಗಿ
ಕನ್ನಡದ ಹುಡುಗಿ ಈಗ ಬಲು ಜೋರು
ಮದುವೆಕೂ ಮುಂಚೆ ಇರಬೇಕು ಹುಡುಗನ ಬೈಕು ಕಾರು
ನಂತರ ಕೊಡಬೇಕು ಅವಳಿಗೆ ಮನೆಯ ಕಾರು ಬಾರು
ಪ್ರತಿ ವೀಕೆಂಡಿಗೂ ಕೊಡಿಸಬೇಕು ಒಡವೆಗಳು ನೂರಾರು
ಗಂಡನ ಜೇಬು ಚಿಂದಿ ಚೂರು ಚೂರು
ಆಮೇಲೆ ಅವನಿಗೆ ಗತಿಯೇ ನವ್ಯ ಬಾರು.
-ಭಾವಪ್ರಿಯ
Thursday, August 23, 2012
ಬಯಸಿದೆ ಮನ ನಿನ್ನ....
ಸನಿಹಕೆ ಬಾರೆ..!
ಬಟ್ಟ ಬಯಲ ಆಗಸದಿ
ಬೆಳ್ಳಿ ಮೋಡದಂತೆ ನಿನ್ನ ನಗು
ಹನಿ ಹನಿ ಪೋಣಿಸಿ
ಮಳೆಗರೆವ ನಿನ್ನ ಪ್ರೀತಿಯ ಸೊಬಗು
ಚೆಲುವು ಸಿಹಿ ಹಂಚುತ್ತಿರುವ ಮೆರಗು ಕಂಡು.., ಬಯಸಿದೆ ಮನ ನಿನ್ನ... ಸನಿಹಕೆ ಬಾರೆ
ನಿನ್ನ ಒಲವು ಗೆಲ್ಲುವ ಪರಿ
ನಾ ಅರಿಯದೆ ಹೋದೆ , ಸರಿ ..!
ಆದರೂ ನಿನ್ನ ಸೂಕ್ಷ್ಮ ಸನ್ನೆ ಸಾಕೆನಗೆ
ನಿನ್ನ ಪಡಿಯದೇ ನಾ ಬದುಕಲಾರೆ
ಹೃದಯದ ಪೇಚಾಟಕೆ ಸುರಿ ನೀ ಅಮೃತ ಧಾರೆ .. ಬಯಸಿದೆ ಮನ ನಿನ್ನ... ಸನಿಹಕೆ ಬಾರೆ
ಕೋಟಿ ಕೋಟಿ ಇಲ್ಲ ನನ್ನೆಡೆಗೆ
ಆದರೂ ಕೋಟಿ ಶತಕೋಟಿ ಹರಿಸುವೆ ಒಲುಮೆ
ಕಲ್ಲು ಮುಳ್ಳುಗಳು ಇರಲಿ ನನ್ನ ಪಾಡಿಗೆ
ಸದಾ ಹೂ ಮಳೆಯ ಭೋರ್ಗರೆಸುವೆ ನಿನ್ನ ಹಾದಿಗೆ
ನನ್ನ ಬಾಹುಬಂಧನದೊಳು ಇರಿಸಿ ಪ್ರೀತಿಸುವೆ .......ನಿನ್ನನ್ನೇ ಬಯಸಿದೆ ಮನ.... ಸನಿಹಕೆ ಬಾರೆ
Friday, July 13, 2012
Wednesday, July 11, 2012
ನಮ್ಮ ಕನ್ನಡದ ಬ್ಲಾಗು
ನಮ್ಮ ಕನ್ನಡದ ಬ್ಲಾಗು
ಒಂದು ಚಿಂತಕರ ಚಾವಡಿ
ಚಿಗುರು ಕನಸುಗಳಿಗೆ ಒಂದು ಮುನ್ನುಡಿ
ಅರಳುವ ಭಾವಗಳಿಗೆ ಒಂದು ಕೈಪಿಡಿ
ಮನಸಿನ ಭಾವನೆಯ ಹಂಚಿಕೊಳ್ಳಲು ದಿನಚರಿ
ನಮ್ಮ ಕನ್ನಡದ ಬ್ಲಾಗು
ನೊಂದ ಮನಸಿಗೆ ಸಾಂತ್ವನ ಹೇಳುವ ವೇದಿಕೆ
ಸೋತ ಮನಗಳಿಗೆ ಧೈರ್ಯ ತುಂಬುವ ತಾಣ
ಜಯ ಸಾಧಿಸಿದ ಹೃದಯಗಳಿಗೆ ಅಭಿನಂದಿಸುವ ವನ
ಗುರಿಯ ಮುಟ್ಟಲು ಹುರಿದುಂಬಿಸುವ ಬಣ
ನಮ್ಮ ಕನ್ನಡದ ಬ್ಲಾಗು
ನಗೆ ಹಂಚುವ ಹನಿಗವನ
ಉಲ್ಲಾಸ ನೀಡುವ ಪ್ರೀತಿಯ ಗಾನ
ಕವಿ ಕವಿಯಿತ್ರಿಯರ ಸುಮಧುರ ಪದಗಳ ನರ್ತನ
ಪ್ರೀತಿಯ ಹರಿಸುವ ಆನಂದನವನ
ಕನ್ನಡ ಬ್ಲಾಗಿನ ಹುಟ್ಟು ಹಬ್ಬದ ಪ್ರಯಯುಕ್ತ ......
ಪ್ರೀತಿಯಿಂದ ,
" ಭಾವಪ್ರಿಯ "
Monday, July 09, 2012
Saturday, July 07, 2012
ಅವ್ವ ನನಗ ಇಂತಹ ಹುಡುಗಿನ ಬೇಕ
ಸೀರಿ ಉಡಾಕ ಅಕೀಗ ಬರಬೇಕು
ಹಣಿಯಾಗ ಬೊಟ್ಟಿಡಬೇಕು
ತಲಿತುಂಬಾ ಹೂ ಮುಡಿದಿರಬೇಕು
ತಳಕು ಬಳುಕೋ ನಾಚುವ ಬಳ್ಳಿಯಾಗಿರಬೇಕು
ರೊಟ್ಟಿ ಮಾಡಕ ಬರಬೇಕು
ಮನೀನು ಸ್ವಚ್ಛಗ ಇಡಬೇಕು
ದೇವರ ಪೂಜೆ ಮಾಡಬೇಕು
ಗುರು ಹಿರಿಯರಲ್ಲಿ ಭಕ್ತಿ ಕೂಡ ಇರಬೇಕು
ಗಂಡನ ಮೇಲೆ ಅಭಿಮಾನವಿರಬೇಕು
ಅನುಕಾಲ ಪ್ರೀತಿ ಹರಿಸಬೇಕು
ನನ್ನ ಬಾಳ ಬೆಳಗುವ ನಂದಾದೀಪವಾಗಬೇಕು
ಅವ್ವ ನನಗ ಇಂತಹ ಹುಡುಗಿನ ಬೇಕ.
***ಭಾವಪ್ರಿಯ***
ಸೀರಿ ಉಡಾಕ ಅಕೀಗ ಬರಬೇಕು
ಹಣಿಯಾಗ ಬೊಟ್ಟಿಡಬೇಕು
ತಲಿತುಂಬಾ ಹೂ ಮುಡಿದಿರಬೇಕು
ತಳಕು ಬಳುಕೋ ನಾಚುವ ಬಳ್ಳಿಯಾಗಿರಬೇಕು
ರೊಟ್ಟಿ ಮಾಡಕ ಬರಬೇಕು
ಮನೀನು ಸ್ವಚ್ಛಗ ಇಡಬೇಕು
ದೇವರ ಪೂಜೆ ಮಾಡಬೇಕು
ಗುರು ಹಿರಿಯರಲ್ಲಿ ಭಕ್ತಿ ಕೂಡ ಇರಬೇಕು
ಗಂಡನ ಮೇಲೆ ಅಭಿಮಾನವಿರಬೇಕು
ಅನುಕಾಲ ಪ್ರೀತಿ ಹರಿಸಬೇಕು
ನನ್ನ ಬಾಳ ಬೆಳಗುವ ನಂದಾದೀಪವಾಗಬೇಕು
ಅವ್ವ ನನಗ ಇಂತಹ ಹುಡುಗಿನ ಬೇಕ.
***ಭಾವಪ್ರಿಯ***
Thursday, June 07, 2012
ಮನೆ ಕಟ್ಟೋಣ ಬಾರೆ ಗೆಳತಿ
ನಿನ್ನಯ ಆಸೆಯ ಮನೆ
ನನ್ನಯ ಭಾವನೆಯ ಮನೆ
ನಮ್ಮಿಬ್ಬರ ಮನಸ್ಸಿನ ಮನೆ,
ಕಟ್ಟೋಣ ಬಾರೆ ಗೆಳತಿ ..!
ನಿನ್ನ ಮಡಿಲಲ್ಲಿ ನಗುವ ಹೂಗಳ ಮನೆ
ನನ್ನ ಒಡಲಲ್ಲಿ ಆಡುವ ಚಿನ್ನರ ಮನೆ
ನಮ್ಮ ಚಿಗುರು ಕನ್ನಸ್ಸು ಹೊತ್ತವರ ಮನೆ,
ಕಟ್ಟೋಣ ಬಾರೆ ಗೆಳತಿ ..!
ನಿನ್ನ ಪ್ರೀತಿ ತುಂಬಿದ ಮನೆ
ನನ್ನ ವಿಶ್ವಾಸ ಹೊತ್ತ ಮನೆ
ನಾವಿಬ್ಬರೂ ಸಾಗಿಸುವ ಮನೆ,
ಕಟ್ಟೋಣ ಬಾರೆ ಗೆಳತಿ ..!
***ಭಾವಪ್ರಿಯ***
ನಿನ್ನಯ ಆಸೆಯ ಮನೆ
ನನ್ನಯ ಭಾವನೆಯ ಮನೆ
ನಮ್ಮಿಬ್ಬರ ಮನಸ್ಸಿನ ಮನೆ,
ಕಟ್ಟೋಣ ಬಾರೆ ಗೆಳತಿ ..!
ನಿನ್ನ ಮಡಿಲಲ್ಲಿ ನಗುವ ಹೂಗಳ ಮನೆ
ನನ್ನ ಒಡಲಲ್ಲಿ ಆಡುವ ಚಿನ್ನರ ಮನೆ
ನಮ್ಮ ಚಿಗುರು ಕನ್ನಸ್ಸು ಹೊತ್ತವರ ಮನೆ,
ಕಟ್ಟೋಣ ಬಾರೆ ಗೆಳತಿ ..!
ನಿನ್ನ ಪ್ರೀತಿ ತುಂಬಿದ ಮನೆ
ನನ್ನ ವಿಶ್ವಾಸ ಹೊತ್ತ ಮನೆ
ನಾವಿಬ್ಬರೂ ಸಾಗಿಸುವ ಮನೆ,
ಕಟ್ಟೋಣ ಬಾರೆ ಗೆಳತಿ ..!
***ಭಾವಪ್ರಿಯ***
Friday, June 01, 2012
ನೀ ಹಿಂಗ ದೂರಬ್ಯಾಡ ನಂಗ
ನೀ ಹಿಂಗ ದೂರಬ್ಯಾಡ ನಂಗ
ಇರ್ಲಿ ಹೆಂಗ ನೀ ಜೊತಿ ಇಲ್ಲದಂಗ
ನಿನ್ನ ಬ್ಯಾಸರಕ ನಾ ಕಾರಣ ಹೆಂಗ
ತಿಳಿವಲ್ತು ನಿನ್ನ ರಮಿಸೋದು ಹೆಂಗ
ನೀ ಹಿಂಗ ದೂರಬ್ಯಾಡ ನಂಗ
ನಿಮಿಷ ನಿಮಿಷ ಕಾಡ್ತಾವ ನಂಗ
ನೀ ಹಿಂಗ ಮುನಿಸಿ ಕೊಂಡ್ರ
ನನ್ನ ಜೀವನ ಮುಂದ ಹೆಂಗ
ನೀ ಹಿಂಗ ದೂರಬ್ಯಾಡ ನಂಗ
ನಿನ್ನ ಕಷ್ಟಕ್ಕ ನಾ ಸ್ಪಂದಿಸಲಿ ಹೆಂಗ
ನಿನ್ನ ಪೇಚಿನ ಮುಖಕ ಚೈತನ್ಯ ತುಂಬಲಿ ಹೆಂಗ
ನೀ ಹಿಂಗ ಮಂಕಾದರ ಇನ್ನಮುಂದ ಹೆಂಗ
ನೀ ಹಿಂಗ ದೂರಬ್ಯಾಡ ನಂಗ
ನಿನ್ನ ಒಡನಾಟದಾಗ ನಾ ಎಲ್ಲಾ ಕಂಡೆ
ನನ್ನ ದುಃಖನಾ ನಿನಗ ಹೇಳ್ಕೊಂಡೇ
ಒಮ್ಮಿಂದೊಮ್ಮೆಲೆ ಹಿಂಗ್ಯಾಕ ಶೆಟ್ತ್ಗೊಂಡಿ
ನೀ ಹಿಂಗ ದೂರಬ್ಯಾಡ ನಂಗ
ನಿನ್ನ ದುಃಖದಾಗ ಖುಷಿ ಕಾಣೋ ಭಂಡ ನಾನಲ್ಲ
ನಿನ್ನ ಮನಸ ನೋಯಿಸಾಕ ನಾ ಎಂದೂ ಬಯಸಂಗಿಲ್ಲ
ತಿಳಿದನ ನಾ ತಪ್ಪು ಮಾಡಿನಿ , ನೀ ಕೊಟ್ಟ ಒಂದ ಕಪಾಳಕ ಸಿಟ್ಟು ತೀರಿಸಿಕೊಳ್ಳ
ನೀ ಹಿಂಗ ದೂರಬ್ಯಾಡ ನಂಗ
ನೀ ಕಳಕೊಂಡ್ರ ನನ್ನ ಮ್ಯಾಗ ನಂಬಿಕಿ
ಮುಖಾ ತೋರಿಸದ ಹಂಗ
ದೂರ ಮರೆಯಾಗ್ತಿನಿ ಕಣ್ಣ್ಮುಚ್ಚಿ
***ಭಾವಪ್ರಿಯ***
Tuesday, May 22, 2012
Friday, May 18, 2012
Thursday, May 17, 2012
Tuesday, May 15, 2012
ನಮ್ಮ ಕಾರುಗಳು ....!!!
ಬೀಟ್ ಚೊಲೋ ಐತಿ ನೋಡಾಕ,
ಜಾಗ ಬಹಳ ಇಲ್ಲ ಕೂಡಾಕ.!
ಸ್ಪಾರ್ಕ್ ಬೀದಿಗೆ ಬಂದರೆ,
ಅನ್ಯರಿಗೆ ಬಹಳ ತೊಂದರೆ.!
ತವೇರನಮ್ಮ ಚಿಲುಮೆ,
ಬೃಹತ್ ಸಂಸ್ಥೆಗಳಿಗೆ ಇದರ ಮೇಲೆ ಒಲುಮೆ.!
ಆಪ್ಟ್ರಾ ನಮ್ಮ ವಿಶಾಲ ವಾಹನ ,
ಬಾಳಲ್ಲಿ ತರುವುದು ವಿಲಾಸಿ ಜೀವನ .!
ಕ್ಯಾಪ್ಟಿವ ಬಲು ಜೋರು,
ಇದು ಬರಿ ದೊಡ್ಡವರ ಕಾರು !
ಕ್ರುಜು ಕಂಡರೆ ಜನರು ಎನುತಿಹರು,
ಅಲ್ಲಿ ನೋಡು... ರಾಜ ಬರುತಿಹರು.!
ಜಾಗ ಬಹಳ ಇಲ್ಲ ಕೂಡಾಕ.!
ಸ್ಪಾರ್ಕ್ ಬೀದಿಗೆ ಬಂದರೆ,
ಅನ್ಯರಿಗೆ ಬಹಳ ತೊಂದರೆ.!
ತವೇರನಮ್ಮ ಚಿಲುಮೆ,
ಬೃಹತ್ ಸಂಸ್ಥೆಗಳಿಗೆ ಇದರ ಮೇಲೆ ಒಲುಮೆ.!
ಆಪ್ಟ್ರಾ ನಮ್ಮ ವಿಶಾಲ ವಾಹನ ,
ಬಾಳಲ್ಲಿ ತರುವುದು ವಿಲಾಸಿ ಜೀವನ .!
ಕ್ಯಾಪ್ಟಿವ ಬಲು ಜೋರು,
ಇದು ಬರಿ ದೊಡ್ಡವರ ಕಾರು !
ಕ್ರುಜು ಕಂಡರೆ ಜನರು ಎನುತಿಹರು,
ಅಲ್ಲಿ ನೋಡು... ರಾಜ ಬರುತಿಹರು.!
कडुवा सच्च...!!!
सच्च केहेने वालों को लोग मानते नहीं
सच्चाई की रास्ते में कबी फूल खिलते नहीं
दर्द भरी सच्चाई में कोई जीना चाहता नहीं
झूठे लोगों की ही दरबार है हर जगह
बेईमानी की हर जगह कदर
जूट की साम्राज्य में सत्य का निर्नाम
कहाँ गया वो गांधीजी का आदर्ष
सज्जन लोग कर रहें संघर्ष
कब होगा इन जैसे लोगों का नाश
कब मिलेगा इंसानियत को आस ..!
ಅವಳ ಕೂಗು
ತಂದೆ ತಾಯಿರ ಮನೆಯ ತೊರೆದು
ಅಣ್ಣ ತಂಗಿಯ ಸ್ನೇಹ ಮರೆತು
ನಂಬಿ ನಿನ್ನಂಗಳಕೆ ಬಂದಿಹಳು
ತನ್ನ ಪ್ರೀತಿ ಎಲ್ಲಾ ನಿನಗೆರೆದು
ನಿನ್ನ ಕೊಂಚ ವಾತ್ಸಲ್ಯವ ಬಯಸಿಹಳು
ಏಕೆ ತಿಳಿಯದಾಗಿದೆ ನಿನಗೆ .., ಅವಳ ಕೂಗು ?
ನಗುವುದ ಮರೆತಿಹಳು
ಮೊಗವು ಇಳಿದಾಗಿ ಚಿಂತೆಯಲೇ ಮುಳುಗಿಹಳು
ಬಾಳುವ ಆಸೆ ನುಚ್ಚುನೂರಾಗಲು
ಏಕೆ ಆಲಿಸದೆ ಹೋದೆ ನೀ ಅವಳ ಒಳ ದನಿಯ
ಮರಳಿಸು ಅವಳ ಮುಗುಳು ನಗೆಯ..
ಏಕೆ ತಿಳಿಯದಾಗಿದೆ ನಿನಗೆ .., ಅವಳ ಕೂಗು ?
ನಿರ್ಲಕ್ಷಿಸುವುದು ತರವಲ್ಲ ನಿನಗೆ
ಆ ಜೀವವು ಇಲ್ಲವಾದರೆ ನಿನ್ನೊಂದಿಗೆ
ಅವಳ ಕೊರೆತೆಯು ಕಾಡುವುದು ಎಂದೆಂದಿಗೂ
ಬಾಳು ಹಸಿರಾಗುವ ಆಲೋಚನೆಯ ಬೆಳಸಿಕೊ
ಸಮಯ ಮೀರುವ ಮುನ್ನ ಎಚ್ಚೆದ್ದುಕೋ
ಇನ್ನಾದರೂ ಅರೆತು ಬಿಡು ನೀ...ಅವಳ ಕೂಗು ..!
-ಭಾವಪ್ರಿಯ
Saturday, March 17, 2012
Friday, March 02, 2012
ಕೈ ರೇಖೆಗಳು ಹೇಳುವುದು ನಿಜವೇ ?

ಐಶ್ವರ್ಯಕ್ಕೆ ಒಂದು ರೇಖೆ,
ಆಯಸ್ಸಿಗೊಂದು ರೇಖೆ,
ಮದುವೆಯ ಜೀವನಕ್ಕೆ ಒಂದು ರೇಖೆ,
ಮಕ್ಕಳ ಸೂಚಿಸುವುದೊಂದು ರೇಖೆ,
ರೇಖೆಗಳು ಕೂಡಿರದಿದ್ದರೆ ಗಂಡಾಂತರವೇಕೆ ?
ರೇಖೆಗಳೇ ಇರದವರಿಗೆ ಭವಿಷ್ಯವೇ ಇಲ್ಲವೇ ?
ಕಷ್ಟಗಳು ಬಂದಾಗ ಅನ್ನುವುದು, ಅಯ್ಯೋ ನನ್ನ ಹಣೆಬಾರವೇ..
ದೇವರು ಬರೆದಿರುವುದು ಹಣೆಯ ಬರಹ..
ಕೈಯ್ಯ ರೇಖೆಗಳೂ ...ಇಲ್ಲ ಹಣೆ ಬರಹವೂ
ಹೇಗೆ ನಂಬುವುದು... ಇವೆಲ್ಲಾ ನಿಜವೇ..?
***ಭಾವಪ್ರಿಯ***
Wednesday, February 29, 2012
ಕಟುಕಿ
ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!

ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!
ನೀ ಮುಗಿಲಾಚೆಯ ನೀಲಿ ಬಾನು
ಪ್ರೀತಿ ತುಂಬಿದ ಕಡಲು ನಾನು
ಕಡಲು ನಿರೀರಬಹುದು ಲವಣ
ಸಿಹಿಗೆ ತಿರುಗಿಸಬಲ್ಲದು ನನ್ನ ಪ್ರೀತಿಯ ತಾಣ
ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!
ನನ್ನಯ ಹೃದಯವಿದು ಚೆಲುವು ಬೃಂದಾವನ
ಮೆಲ್ಲಗೆ ಕುಳಿತು ಸವಿಬಾರೆ ಹಕ್ಕಿಗಳ ಸವಿಗಾನ
ತರ ತರ ಅರಳಿದೆ ಹೂವಿನ ವರ್ಣ
ಸುಗಂಧವು ಉಣಿಸಿದೆ ಒಲವಿನ ಚರಣ
ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!
ಕವಿ ಮನಸು ನನ್ನದು ಚಿರನೂತನ
ನಿನ್ನ ಪ್ರತಿ ಒಂದು ಭಾವವು ನನಗೆ ಪ್ರೇರಣ
ಮಲ್ಲಿಗೆ ಮನದಲ್ಲಿ ಇಡು ಪಾದಾರ್ಪಣ
ನಾ ಸದಾ ಬಡಿಸುವೆ ಪ್ರೀತಿಯ ಔತಣ
ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!
***ಭಾವಪ್ರಿಯ ***
Tuesday, February 28, 2012
ಜಿನುಗುತಿವೆ ಕಣ್ಣ ಹನಿಗಳು .!

ಗೆಳತಿಯೊಡನೆ ಹಂಚಿಕೊಂಡ ನೆನಪು
ನಕ್ಕು ನಲಿದ ಕ್ಷಣವ ನೆನೆದು
ಮರುಕಳಿಸಿದೆ ನಲಿವಿನ ಕಂಪು
ಮತ್ತೆ.., ಮತ್ತೆ .. ನೆನೆ ನೆನೆದು ಜಿನುಗುತಿವೆ ಕಣ್ಣ ಹನಿಗಳು ..!
ನಿದ್ದ್ರೆಯಲಿ ಕಂಡ ಕೆಟ್ಟ ಕನಸಿಗೆ ಬೆಚ್ಚಿ ಬಿದ್ದು
ನಡು ರಾತ್ರಿಯಲಿ ಬಿಕ್ಕಿ ಬಿಕ್ಕಿ ಅತ್ತಿದ್ದು
ಎದೆಗೊರಗಿಸಿ ಮಗುವಂತೆ ರಮಿಸಿದ್ದು
ಮತ್ತೆ.., ಮತ್ತೆ .. ನೆನೆ ನೆನೆದು ಜಿನುಗುತಿವೆ ಕಣ್ಣ ಹನಿಗಳು ..!
ಚಳಿಗೆ ನಿ ನಡುಗುತ್ತ ನಿಂತಾಗ
ಹೊದೆಸಿದ್ದೆ ನಿನಗೆ, ನನ್ನ ಬಾಹುಗಳ ಕಂಬಳಿ
ಎದೆಗೊತ್ತಿದ ನಿನ್ನ ಕಿವಿ ಜುಮಕಿ
ಮತ್ತೆ, ಚುಚ್ಚಿ ಚುಚ್ಚಿ...ಜಿನುಗಿಸಿವೆ ಕಣ್ಣ ಹನಿಗಳು ..!
ಮರೆತೇ ಹೋಗಿರುವೆ ನೀನು...
ಹಿಂತಿರುಗಿ ಬಾರದ ಊರಿಗೆ ನಿ ಹೋದರೂ
ನಿ ಬರುವದಿಲ್ಲ ಎಂಬ ಸತ್ಯವ ತಿಳಿದರೂ
ಆವಿ ಗೊಳ್ಳದೇ.. ಮತ್ತೆ.. ಮತ್ತೆ., ಜಿನುಗುತಿವೆ ಕಣ್ಣ ಹನಿಗಳು ..!
Friday, February 24, 2012
ಕನಸುಗಳ ಕಾರುಬಾರು
ಯಾಕೋ ಇಂದಿಂದು ಕನಸುಗಳದೇ ಕಾರುಬಾರು
ಇರುಳ ತೋಳಲಿ ನಿದ್ದ್ರೆಗೆ ಜಾರುತಲಿ
ಲಗ್ಗೆ ಇಡುವವು ಮುಖಗಳು ಸಾವಿರಾರು ..
ಮುಖ ಪರಿಚಯವೇ ಇಲ್ಲದ ಮುಖಗಳು
ನಸು ನಕ್ಕು ಶೂನ್ಯದಡೆಗೆ ಜಾರಿದರು
ತಿರುಗಿ ನೋಡಿದೊಡನೆ ಅಲ್ಯಾರೂ ಇಹರು
ಕೆಲವು ಕೋಪಗೊಂಡ, ಭೀತಿಗೊಳಿಸುವ ಮುಖಗಳು
ಯಾರದೋ ಮೇಲಿನ ಸಿಟ್ಟಿಗೆ ನನ್ನ ದುರುಗುಟ್ಟುತ್ತಿದ್ದರು
ಭಯದ ಛಾಪು ಮೂಡಿಸಿ, ಕತ್ತಲೆಯ ಬಾವಿಗೆ ದೂಡಿದರು
ಇನ್ನು ಪಾಪ ಮುಘ್ಧ ಮುಖಗಳು
ತಮ್ಮ ಅಗಲಿದ ಆತ್ಮಿಯರ ಹುಡುಕುತ್ತಿದ್ದರು
ಅವರಿವರ ಬಳಿ ತೆರಳಿ ಪರಿಚಯ ಕೇಳುತ್ತಿದ್ದರು
ಇನ್ನು ರೋಧಿಸುತ್ತಿದ್ದ , ಅಳು ಮುಖಗಳು
ವಿಧಿಯ ಆಟಕೆ ಕಂಗೆಟ್ಟ ಮೂಕರು
ಮರಳಿ ಬಾರದ ಜೀವಗಳಿಗೆ ತಪಿಸುತ್ತಿದ್ದರು
ಯಾಕೋ ಇಂದಿಂದು ಇಂತಹ ಕನಸುಗಳದೇ ಕಾರುಬಾರು
ಇರುಳು ಕಳೆದು ಬೆಳಗಿನ ಮುಂಜಾವಲಿ
ಮರೆಯಾಗುವವು.. ಅವೇ ಮುಖಗಳು ಸಾವಿರಾರು ..!!
ಇರುಳ ತೋಳಲಿ ನಿದ್ದ್ರೆಗೆ ಜಾರುತಲಿ
ಲಗ್ಗೆ ಇಡುವವು ಮುಖಗಳು ಸಾವಿರಾರು ..
ಮುಖ ಪರಿಚಯವೇ ಇಲ್ಲದ ಮುಖಗಳು
ನಸು ನಕ್ಕು ಶೂನ್ಯದಡೆಗೆ ಜಾರಿದರು
ತಿರುಗಿ ನೋಡಿದೊಡನೆ ಅಲ್ಯಾರೂ ಇಹರು
ಕೆಲವು ಕೋಪಗೊಂಡ, ಭೀತಿಗೊಳಿಸುವ ಮುಖಗಳು
ಯಾರದೋ ಮೇಲಿನ ಸಿಟ್ಟಿಗೆ ನನ್ನ ದುರುಗುಟ್ಟುತ್ತಿದ್ದರು
ಭಯದ ಛಾಪು ಮೂಡಿಸಿ, ಕತ್ತಲೆಯ ಬಾವಿಗೆ ದೂಡಿದರು
ಇನ್ನು ಪಾಪ ಮುಘ್ಧ ಮುಖಗಳು
ತಮ್ಮ ಅಗಲಿದ ಆತ್ಮಿಯರ ಹುಡುಕುತ್ತಿದ್ದರು
ಅವರಿವರ ಬಳಿ ತೆರಳಿ ಪರಿಚಯ ಕೇಳುತ್ತಿದ್ದರು
ಇನ್ನು ರೋಧಿಸುತ್ತಿದ್ದ , ಅಳು ಮುಖಗಳು
ವಿಧಿಯ ಆಟಕೆ ಕಂಗೆಟ್ಟ ಮೂಕರು
ಮರಳಿ ಬಾರದ ಜೀವಗಳಿಗೆ ತಪಿಸುತ್ತಿದ್ದರು
ಯಾಕೋ ಇಂದಿಂದು ಇಂತಹ ಕನಸುಗಳದೇ ಕಾರುಬಾರು
ಇರುಳು ಕಳೆದು ಬೆಳಗಿನ ಮುಂಜಾವಲಿ
ಮರೆಯಾಗುವವು.. ಅವೇ ಮುಖಗಳು ಸಾವಿರಾರು ..!!
चाहने का अंदाज़
प्यार करने का अपना अलग्सा अंदाज़ है..
अपने मन को.., उनके मनको डोर से बांदते है ..
अपने छाया में हम उन्हें पाते है..
हो ना हो ओ भी हमें इतनाही चाहती होगी...
लेकिन हम उसका जवाब का इंतज़ार ना करते हुवे...
उनको चाहनेकी पल पल में अपनी ख़ुशी पाते है..!
अपने मन को.., उनके मनको डोर से बांदते है ..
अपने छाया में हम उन्हें पाते है..
हो ना हो ओ भी हमें इतनाही चाहती होगी...
लेकिन हम उसका जवाब का इंतज़ार ना करते हुवे...
उनको चाहनेकी पल पल में अपनी ख़ुशी पाते है..!
ಮಾರಕ ನೆನಪುಗಳು
ನೆನಪುಗಳು ನೆನಪಿಗೆ ಬರಲು
ನೆನೆದು ನೆನೆದು ಖುಷಿ ಪಡುವುದೋ.., ಇಲ್ಲ ದುಃಖಿಸುವುದೋ ?
ಸವಿ ಕ್ಷಣಗಳು ಸಿಹಿ ಹಂಚಿದರೆ.. ಕಹಿ ನೆನಪುಗಳು ಕುಕ್ಕಿ ತಿಂದಿವೆ
ಅರಗಿಣಿ ಎಂದು ಪ್ರೀತಿಸಿದ ಕಾರಣಕೆ ರಣ ಹದ್ದಾಗಿ ಕಿರು-ಕಿರುಚಿ ಹರಿದಿದೆ
ಸಂತಸದ ಸಾಗರದಿ ತೇಲಿದೆ ಎಂತ್ತಿದ್ದೆ..,ಆದರೆ ಸುಳಿ ಅದು ನನ್ನ ಸೆಳೆದು ಮುಳುಗಿಸಿ ಕೊಂದಿಹುದು
ನೆನಪುಗಳ ದಿಕ್ಕರಿಸಿ ನಡೆಯಲೇ... ಜೀವವ ತ್ಯಜಿಸಿ ಮಣ್ಣಾಗಲೇ
ಮಾರಕ ನೆನಪುಗಳು ಮನ ಕೊಂದಾಗ ..ಜಿವಿಸಲಿ ಹೇಗೆ ?
ನೆನೆದು ನೆನೆದು ಖುಷಿ ಪಡುವುದೋ.., ಇಲ್ಲ ದುಃಖಿಸುವುದೋ ?
ಸವಿ ಕ್ಷಣಗಳು ಸಿಹಿ ಹಂಚಿದರೆ.. ಕಹಿ ನೆನಪುಗಳು ಕುಕ್ಕಿ ತಿಂದಿವೆ
ಅರಗಿಣಿ ಎಂದು ಪ್ರೀತಿಸಿದ ಕಾರಣಕೆ ರಣ ಹದ್ದಾಗಿ ಕಿರು-ಕಿರುಚಿ ಹರಿದಿದೆ
ಸಂತಸದ ಸಾಗರದಿ ತೇಲಿದೆ ಎಂತ್ತಿದ್ದೆ..,ಆದರೆ ಸುಳಿ ಅದು ನನ್ನ ಸೆಳೆದು ಮುಳುಗಿಸಿ ಕೊಂದಿಹುದು
ನೆನಪುಗಳ ದಿಕ್ಕರಿಸಿ ನಡೆಯಲೇ... ಜೀವವ ತ್ಯಜಿಸಿ ಮಣ್ಣಾಗಲೇ
ಮಾರಕ ನೆನಪುಗಳು ಮನ ಕೊಂದಾಗ ..ಜಿವಿಸಲಿ ಹೇಗೆ ?
ಮನವ ತೊಳೆಯಿರಿ
ಮನವ ತೊಳೆಯಿರಿ ಓ ಮಾನವರೇ ,
ಕೆಟ್ಟ ಚಟಗಳ ಪ್ರೇರೇಪಿಸುವ ಮನವ,
ದುಷ್ಟ ಕೆಲಸಕ್ಕೆ ಕೈ ಹಾಕುವ ಮನವ,
... ಮಾನವನ ವ್ಯಕ್ತಿತ್ವ ಹಾಳು ಮಾಡುವ... ಮನ ತೊಳೆಯಿರಿ..!
ಮನವ ತೊಳೆಯಿರಿ ಓ ಮಾನವರೇ ,
ಅನ್ನ್ಯರನ್ನು ದೂಷಿಸುವ ಮನವ,
ಪರ ಜನರ ಅಳಿವು ಬಯಸುವ ಮನವ,
ಅನ್ಯರ ಕಷ್ಟಗಳಲ್ಲಿ ತೃಪ್ತಿ ಕಾಣುವ .... ಮನ ತೊಳೆಯಿರಿ..!
ಮನವ ತೊಳೆಯಿರಿ ಓ ಮಾನವರೇ ,
ಶ್ರೀಹರಿಯ ಜಪಿಸದ ಮನವ
ದೇವನೋಲುಮೆಯ ಕೊಂಡಾಡದ ಮನವ
ಜಗತ್ತ ಸೃಷ್ಟಿಯ ಮಾಯವ ಅರಿಯದ ....ಮನ ತೊಳೆಯಿರಿ..!
ಮನವ ತೊಳೆಯಿರಿ ಓ ಮಾನವರೇ ,
ಕಲಿಯುಗದ ಕಾಲ ಮುಗಿಯುವ ಮುನ್ನ,
ಮಾನವನ ಹುಟ್ಟು ಅಡಗುವ ಮುನ್ನ,
ಪ್ರಕೃತಿ ವಿಕೊಪಕೆ ತೆರಳುವ ಮುನ್ನ ....ಮನ ತೊಳೆಯಿರಿ..!
ಕೆಟ್ಟ ಚಟಗಳ ಪ್ರೇರೇಪಿಸುವ ಮನವ,
ದುಷ್ಟ ಕೆಲಸಕ್ಕೆ ಕೈ ಹಾಕುವ ಮನವ,
... ಮಾನವನ ವ್ಯಕ್ತಿತ್ವ ಹಾಳು ಮಾಡುವ... ಮನ ತೊಳೆಯಿರಿ..!
ಮನವ ತೊಳೆಯಿರಿ ಓ ಮಾನವರೇ ,
ಅನ್ನ್ಯರನ್ನು ದೂಷಿಸುವ ಮನವ,
ಪರ ಜನರ ಅಳಿವು ಬಯಸುವ ಮನವ,
ಅನ್ಯರ ಕಷ್ಟಗಳಲ್ಲಿ ತೃಪ್ತಿ ಕಾಣುವ .... ಮನ ತೊಳೆಯಿರಿ..!
ಮನವ ತೊಳೆಯಿರಿ ಓ ಮಾನವರೇ ,
ಶ್ರೀಹರಿಯ ಜಪಿಸದ ಮನವ
ದೇವನೋಲುಮೆಯ ಕೊಂಡಾಡದ ಮನವ
ಜಗತ್ತ ಸೃಷ್ಟಿಯ ಮಾಯವ ಅರಿಯದ ....ಮನ ತೊಳೆಯಿರಿ..!
ಮನವ ತೊಳೆಯಿರಿ ಓ ಮಾನವರೇ ,
ಕಲಿಯುಗದ ಕಾಲ ಮುಗಿಯುವ ಮುನ್ನ,
ಮಾನವನ ಹುಟ್ಟು ಅಡಗುವ ಮುನ್ನ,
ಪ್ರಕೃತಿ ವಿಕೊಪಕೆ ತೆರಳುವ ಮುನ್ನ ....ಮನ ತೊಳೆಯಿರಿ..!
Friday, November 25, 2011
ಮೋಡಗಳ್ಯಾಕೋ....

ಮೋಡಗಳ್ಯಾಕೋ ಧರೆಗೆ ಬಂದಾವ ಇಂದು..
ಸೌಮ್ಯದಿ ಚಲಿಸುತ್ತ ..ಯಾರನ್ನೋ ಆರಿಸುತ್ತ ..
ತವಕದಿ ಮುನ್ನುಗ್ಗುತ್ತಾ ..ಸುಯ್ಯನೆ ಕೂಗಿ ಕರೆಯುವಂತೆ ..!
ಅತ್ತಾಗೆ ಕಪ್ಪಗು ಅಲ್ಲ ಇತ್ತಾಗ ಬೆಳ್ಳಗೂ ಅಲ್ಲ
ತಿಳಿ ಕಪ್ಪು ಸವರಿದ ಹಾಗೆ ಮುಖದಾಗ
ಬಿಡಿ ಬಿಡಿಯಾಗಿ ಹೊರಟಾಳ ...ಇವಳ ಚಲನವು ಯಾರ ಕಡೆಗೋ ?
ಬಿಂಕ ಒಯ್ಯಾರ ತಳುಕು ಬಳುಕೋ ...
ಮನದಲಿ ಏನೋ ಇರಬಹುದು ಅಳುಕು
ಸಂಜೆಯ ತನಕ ಕಾದರೆ ತಿಳಿದೀತು... ಇವಳ ಅಳುವೋ ಇಲ್ಲವೋ ಆನಂದ್ ಭಾಷ್ಪವೋ ..!
Thursday, November 24, 2011
ಎತ್ತಕಡೆ ಸಾಗಿದೆಯೋ ಪಯಣ ?
ಜೀವನದಲ್ಲಿ ನೆಮ್ಮದಿ ಇಲ್ಲ
ಮನಸ್ಸಿಗೆ ಶಾಂತಿಯು ಇಲ್ಲ
ಕಾಡುವ ವಿಷಗಳೆಲ್ಲಾ ನಿಗ್ರಿಸುತಿಹವಲ್ಲ
ದಾರಿಯೇ ಕಾಣದಂತಾಗಿದೆ ....ಎತ್ತಕಡೆ ಸಾಗಿದೆಯೋ ಪಯಣ..?
ಕಛೇರಿಯ ಕ್ಷಣಗಳು ಇಂದು ಕೊಲ್ಲುತ್ತಿವೆಯಲ್ಲ
ಕೆಲಸ ಕಾರ್ಯಗಳಲ್ಲಿ ಆಸಕ್ತಿಯೇ ಇಲ್ಲ
ರಾಜ್ಯಕಿಯ ಕಂಡು ಮನ ಬೇಸತ್ತಿದೆಯಲ್ಲ
ಉನ್ನತಿ ಕಾಣುವ ಲಕ್ಷಣಗಳೇ ಇಲ್ಲ... ಎತ್ತಕಡೆ ಸಾಗಿದೆಯೋ ಪಯಣ ..?
ಶನಿಯ ಕಾಟವೋ..., ಇಲ್ಲವೋ ಮೋಹಿನಿಯ ಆಟವೋ ,
ಜೀವನಕ್ಕೆ ಅಡ್ಡಗಾಲಾಗಿ.., ಏಳಿಗೆಗೆ ಸರ್ಪಗಾವಲಾಗಿ...
ಕ್ಷಣ ಕ್ಷಣಕೆ ತಡವಿ , ಕೆಟ್ಟ ಶಕ್ತಿಯೊಂದು ಕೆಣಕಿದೆಯಲ್ಲ
ಎಂದು ಅಳಿಯುವುದು ಕೇಡುಗಾಲ....ಎತ್ತಣದಿಂದೆತ್ತ ಸಾಗಿದೆಯೋ ಪಯಣ..?
ಮನಸ್ಸಿಗೆ ಶಾಂತಿಯು ಇಲ್ಲ
ಕಾಡುವ ವಿಷಗಳೆಲ್ಲಾ ನಿಗ್ರಿಸುತಿಹವಲ್ಲ
ದಾರಿಯೇ ಕಾಣದಂತಾಗಿದೆ ....ಎತ್ತಕಡೆ ಸಾಗಿದೆಯೋ ಪಯಣ..?
ಕಛೇರಿಯ ಕ್ಷಣಗಳು ಇಂದು ಕೊಲ್ಲುತ್ತಿವೆಯಲ್ಲ
ಕೆಲಸ ಕಾರ್ಯಗಳಲ್ಲಿ ಆಸಕ್ತಿಯೇ ಇಲ್ಲ
ರಾಜ್ಯಕಿಯ ಕಂಡು ಮನ ಬೇಸತ್ತಿದೆಯಲ್ಲ
ಉನ್ನತಿ ಕಾಣುವ ಲಕ್ಷಣಗಳೇ ಇಲ್ಲ... ಎತ್ತಕಡೆ ಸಾಗಿದೆಯೋ ಪಯಣ ..?
ಶನಿಯ ಕಾಟವೋ..., ಇಲ್ಲವೋ ಮೋಹಿನಿಯ ಆಟವೋ ,
ಜೀವನಕ್ಕೆ ಅಡ್ಡಗಾಲಾಗಿ.., ಏಳಿಗೆಗೆ ಸರ್ಪಗಾವಲಾಗಿ...
ಕ್ಷಣ ಕ್ಷಣಕೆ ತಡವಿ , ಕೆಟ್ಟ ಶಕ್ತಿಯೊಂದು ಕೆಣಕಿದೆಯಲ್ಲ
ಎಂದು ಅಳಿಯುವುದು ಕೇಡುಗಾಲ....ಎತ್ತಣದಿಂದೆತ್ತ ಸಾಗಿದೆಯೋ ಪಯಣ..?
Thursday, November 17, 2011
ಹೆಮ್ಮಾರಿ
ಬಾಳಬೆಳಕಾಗಿ ಬರಲೆಂದು ಅಂದುಕೊಂಡಿದ್ದೆ
ಬಾಳಿಗೆ ಕಿಚ್ಚೊಂದು ಹಚ್ಚಿ ಬಿಟ್ಟಳು
ಜೀವನ ಬಂಗಾರವಾಗಲಿ ಅಂದುಕೊಂಡಿದ್ದೆ
ಬಂಗಾರವನ್ನೇ ಕದ್ದು ಓಡಿಹೋದಳು
ಪ್ರೀತಿಯ ಸ್ವರೂಪ ಅಂದುಕೊಂಡಿದ್ದೆ
ಪ್ರೀತಿಯ ಅರಿಯದ ಮೊಡಿ ಅವಳು
ಜನುಮ ಜನುಮದ ಸಂಗಾತಿ ಅಂದುಕೊಂಡಿದ್ದೆ
ಯಾವುದೋ ಜನುಮದ ಶತ್ರು ಅವಳು
ಮದುವೆ ಒಂದು ಪವಿತ್ರ ಬಂಧನ ಅಂದುಕೊಂಡಿದ್ದೆ
ಗಂಡನನ್ನೇ ಕೊಲ್ಲುವ ಕೊಲೆಪಾತಕಿ ಆದಳು
ಬಾಳಿಗೆ ಕಿಚ್ಚೊಂದು ಹಚ್ಚಿ ಬಿಟ್ಟಳು
ಜೀವನ ಬಂಗಾರವಾಗಲಿ ಅಂದುಕೊಂಡಿದ್ದೆ
ಬಂಗಾರವನ್ನೇ ಕದ್ದು ಓಡಿಹೋದಳು
ಪ್ರೀತಿಯ ಸ್ವರೂಪ ಅಂದುಕೊಂಡಿದ್ದೆ
ಪ್ರೀತಿಯ ಅರಿಯದ ಮೊಡಿ ಅವಳು
ಜನುಮ ಜನುಮದ ಸಂಗಾತಿ ಅಂದುಕೊಂಡಿದ್ದೆ
ಯಾವುದೋ ಜನುಮದ ಶತ್ರು ಅವಳು
ಮದುವೆ ಒಂದು ಪವಿತ್ರ ಬಂಧನ ಅಂದುಕೊಂಡಿದ್ದೆ
ಗಂಡನನ್ನೇ ಕೊಲ್ಲುವ ಕೊಲೆಪಾತಕಿ ಆದಳು
Monday, November 14, 2011
ಮತ್ತೆ ಮರಳಿ ಬಾ ನನ್ನ ಬಾಲ್ಯವೆ..
ಮತ್ತೆ ಮರಳಿ ಬಾ ನನ್ನ ಬಾಲ್ಯವೆ..
ನಸುಕಿನಲ್ಲಿ ಅಮ್ಮನ ಕೂಗು...
ಸುನಿ... ಎದ್ದು ಮುಖತೊಳೆದು ಬಾರೋ !
ಚಹಾ ಕುಡಿಯುವಂತಿ...! ಹಾಸಿಗೆ ಇಂದ ಮೇಲೆದ್ದು
ಕಣ್ಣು ಉಜ್ಜುತಿದ್ದದ್ದು, ಮೈಯ್ಯ ಮುರಿತಿದ್ದದ್ದು .....
ಮತ್ತೆ ಮರಳಿ ಬರಲಿ ಆ ನನ್ನ ಬಾಲ್ಯ ..!
ಮಲೆನಾಡಿನ ಸುರಿಯೋ ಮಳೆಯಲ್ಲಿ
ರೈನ್ಕೋಟ್ ತೊಟ್ಟು , ಉದ್ದನೆಯ ಬೂಟುಗಳ ಹಾಕಿಕೊಂಡು
ಶಾಲೆಯತ್ತಕಡೆಯ ನಡುಗೆ...
ಹಾದಿಯಲ್ಲಿ ಪುಟಿಯುತಿದ್ದ ಮಳೆ ಹನಿಗಳು ಕರೆಯುವಂತೆ ನನ್ನ
ಮತ್ತೆ ಮರಳಿ ಬರಲಿ ಆ ನನ್ನ ಬಾಲ್ಯ...!
ಶಾಲೆಯ ಹಿಂಬದಿಯ ಕಾಡಿನಲ್ಲಿ..,
ನೆಲ್ಲಿಕಾಯಿಗಾಗಿ ಅಲೆದಾಟ.,
ನೆಲ್ಲಿಯ ಹೆಮ್ಮರವ ಹತ್ತಿದ ಹರ ಸಾಹಸ...
ಪಾಟಿಚೀಲದ ತುಂಬಿ ತಂದ ನೆಲ್ಲಿಕಾಯಿ, ತುಳಿಸಿ ಲಗ್ನವ ಆಚರಿಸಿದ ಸಂಭ್ರಮ ...
ಮತ್ತೆ ಮರಳಿ ಬರಲಿ ಆ ನನ್ನ ಬಾಲ್ಯ...!
ಬೇಸಿಗೆ ರಜೆಯ ಮೆರಗಿನ ಸ್ಪರ್ಶ
ಬಾಲ್ಯದ ಗೆಳತಿಯ ಜೊತೆ ಆಡಿದ ಹರುಷ
ಕೂಡಿ ನಲಿಯುತ ಕಳೆದ ಆ ಕ್ಷಣ..
ಅಲೆ ಅಲೆಯಾಗಿ ಮನಕೆ ಬಡಿಯುತಿದೆ ..,
ಮತ್ತೆ ಮರಳಿ ಬರಲಿ ಆ ನನ್ನ ಬಾಲ್ಯ...!
ನಸುಕಿನಲ್ಲಿ ಅಮ್ಮನ ಕೂಗು...
ಸುನಿ... ಎದ್ದು ಮುಖತೊಳೆದು ಬಾರೋ !
ಚಹಾ ಕುಡಿಯುವಂತಿ...! ಹಾಸಿಗೆ ಇಂದ ಮೇಲೆದ್ದು
ಕಣ್ಣು ಉಜ್ಜುತಿದ್ದದ್ದು, ಮೈಯ್ಯ ಮುರಿತಿದ್ದದ್ದು .....
ಮತ್ತೆ ಮರಳಿ ಬರಲಿ ಆ ನನ್ನ ಬಾಲ್ಯ ..!
ಮಲೆನಾಡಿನ ಸುರಿಯೋ ಮಳೆಯಲ್ಲಿ
ರೈನ್ಕೋಟ್ ತೊಟ್ಟು , ಉದ್ದನೆಯ ಬೂಟುಗಳ ಹಾಕಿಕೊಂಡು
ಶಾಲೆಯತ್ತಕಡೆಯ ನಡುಗೆ...
ಹಾದಿಯಲ್ಲಿ ಪುಟಿಯುತಿದ್ದ ಮಳೆ ಹನಿಗಳು ಕರೆಯುವಂತೆ ನನ್ನ
ಮತ್ತೆ ಮರಳಿ ಬರಲಿ ಆ ನನ್ನ ಬಾಲ್ಯ...!
ಶಾಲೆಯ ಹಿಂಬದಿಯ ಕಾಡಿನಲ್ಲಿ..,
ನೆಲ್ಲಿಕಾಯಿಗಾಗಿ ಅಲೆದಾಟ.,
ನೆಲ್ಲಿಯ ಹೆಮ್ಮರವ ಹತ್ತಿದ ಹರ ಸಾಹಸ...
ಪಾಟಿಚೀಲದ ತುಂಬಿ ತಂದ ನೆಲ್ಲಿಕಾಯಿ, ತುಳಿಸಿ ಲಗ್ನವ ಆಚರಿಸಿದ ಸಂಭ್ರಮ ...
ಮತ್ತೆ ಮರಳಿ ಬರಲಿ ಆ ನನ್ನ ಬಾಲ್ಯ...!
ಬೇಸಿಗೆ ರಜೆಯ ಮೆರಗಿನ ಸ್ಪರ್ಶ
ಬಾಲ್ಯದ ಗೆಳತಿಯ ಜೊತೆ ಆಡಿದ ಹರುಷ
ಕೂಡಿ ನಲಿಯುತ ಕಳೆದ ಆ ಕ್ಷಣ..
ಅಲೆ ಅಲೆಯಾಗಿ ಮನಕೆ ಬಡಿಯುತಿದೆ ..,
ಮತ್ತೆ ಮರಳಿ ಬರಲಿ ಆ ನನ್ನ ಬಾಲ್ಯ...!
Thursday, November 10, 2011
ಶೂನ್ಯ ಜೀವನ
ತನುವು ಕುಗ್ಗಿ
ಮನವು ಬಗ್ಗಿ
ಉಲ್ಲಾಸವೇ ಮರೆತಿದೆ.
ನಿರಸ ಜೀವ
ಕಳೆದ ಭಾವ
ಸೋತ ಅನುಭವದಂತಿದೆ.
ಉತ್ಸಾಹವೆಲ್ಲ ನೆಲಕಚ್ಚಿ
ಬೇಸರದ ಮನೆ ಕಟ್ಟಿ
ಸ್ಮಶಾನ ಮೌನದಂತಿದೆ.
ಇನ್ನೇನು ಉಳಿದಿದೆ ಜೀವನದಿ ?
ಕಣ್ಣುಗಳ ಮುಚ್ಚಿ., ಚೀರ ನಿದ್ದ್ರೆಯಲಿ...
ಮರೆಯಾಗುವಂತನಿಸಿದೆ.....!!!
ಮನವು ಬಗ್ಗಿ
ಉಲ್ಲಾಸವೇ ಮರೆತಿದೆ.
ನಿರಸ ಜೀವ
ಕಳೆದ ಭಾವ
ಸೋತ ಅನುಭವದಂತಿದೆ.
ಉತ್ಸಾಹವೆಲ್ಲ ನೆಲಕಚ್ಚಿ
ಬೇಸರದ ಮನೆ ಕಟ್ಟಿ
ಸ್ಮಶಾನ ಮೌನದಂತಿದೆ.
ಇನ್ನೇನು ಉಳಿದಿದೆ ಜೀವನದಿ ?
ಕಣ್ಣುಗಳ ಮುಚ್ಚಿ., ಚೀರ ನಿದ್ದ್ರೆಯಲಿ...
ಮರೆಯಾಗುವಂತನಿಸಿದೆ.....!!!
Thursday, September 29, 2011
ಒಂದು ಸಲಾ ಕಾಣಿಸು ಬಾರೆ

ಮುಂಜಾವಲ್ಲಿ ಎದ್ದು ಮುಖ ತೊಳೆಯುತ್ತ
ಕನ್ನಡಿಯನ್ನು ನೋಡುತ್ತಾ ನಿಂತಿತು ನನ್ನ ಚಿತ್ತ
ಎಲ್ಲೋ ಇರಬಹುದು ಅವಳು ...
ನನ್ನ ಹಾಗೆ ಕನ್ನಡಿಯ ಮುಂದೆ ನಿಂತು ಕಣ್ಣುಗಳ ಉಜ್ಜುತ್ತಾ...
ಮನದಲ್ಲಿ ಮೂಡಿದ ಮಂದಹಾಸ ಕರೆಯುತ್ತಿದೆ, ಒಂದು ಸಲಾ ಕಾಣಿಸು ಬಾರೆ ...!
ಸದ್ದು ಮಾಡದೆ ಬಂದೆ ನಿ..
ಗುದ್ದಿ ಗುದ್ದಿ ಎದೆಯೊಳಗೆ ಒಲುಮೆಯ ಹರಿಸುತ್ತಿರುವೆ
ಕಣ ಕಣ ಅಂಕಣಗಳಲ್ಲಿ ಚಲಿಸಿ
ಮಂಕು ಮಾಡಿ ನನ್ನ ಹೃದಯ
ಕ್ಷಣದಲ್ಲಿ ಮಾಯವಾಗಬೇಡ , ಒಂದು ಸಲಾ ಕಾಣಿಸು ಬಾರೆ...!
ದಣಿದೆನೆಂದು ಕಣ್ಣು ಮುಚ್ಚಿ ನಿದ್ರಿಸಿದೆನು
ಸ್ವಪ್ನದಲ್ಲಿ ಬಂದು ನಿದ್ದೆ ನಿ ಕೆಡಸುವೆಯೇನು ?
ಓಡಬೇಡ ನಿಲ್ಲು ಅಲ್ಲೇ... ಓ ನಲ್ಲೆ
ನಿನ್ನ ತುಂಟತನವ ಸಹಿಸಲು ನಾ ಒಲ್ಲೆ...
ಬಿಗಿದಪ್ಪುವೆ ಬಾರೆ ನಿನ್ನ , ಒಂದೇ ಒಂದು ಸಲಾ ಕಾಣಿಸು ಬಾರೆ..!
Friday, September 23, 2011
ಮರಳಿ ಬಾ ಗೂಡಿಗೆ...!

ಮುಪ್ಪಿನಲಿ ಮಂಕಾಗಿ
ಮಕ್ಕಳ ಪ್ರಿತಿಗಾಗಿ ಹಂಬಲಿಸಿ
ದೂರದ ಊರಿಗೆ ಹೋದ ಮಕ್ಕಳ ನೆನೆಯುತ
ವಿರಹದೇ ಕಳೆಯುತಿವೆ ಮುಪ್ಪಿನ ದಿನಗಳು ...!
ಹಾರುವದ ಕಲಿತ ಮರಿಹಕ್ಕಿ
ಹೊಸದೊಂದು ಗೂಡ ಕಟ್ಟಿ
ಅದರ ಪೋಷಣೆಯಲಿ
ತವರ ಗೂಡ ಮರೆತಿಹರು...
ತವರೂರ ಗೂಡದು
ಕಣ್ಣು ಮುಚ್ಚದೆ ಕಾದಿಹುದು...
ಮರಳಿ ಬರಲಿ ಮರಿಹಕ್ಕಿಗಳು....ಕಿಚಿ ಪಿಚಿ ಶಬ್ದ ಮಾಡುತ .
ನಿಮ್ಮಯ ದಾರಿಯನ್ನೇ ಇದಿರು ನೋಡುತಿಹುದು...
ಮುಪ್ಪಿನಾವಸ್ಥೆಯಲಿ
ಮೊಮ್ಮಕ್ಕಳ ಜೊತೆ ಆಡುವಂತಾಗಿ
ಮಕ್ಕಳ ನಗುವಲ್ಲೇ ನಲಿವು ಕಾಣಲು
ಹವಣಿಸುತ ಕರೆದಿಹರು .....ಮರಳಿ ಬಾ ಗೂಡಿಗೆ,
ಮರಳಿ ಬಾ...!!!
Wednesday, July 06, 2011
ನಮ್ಮ ನಾಡು.. ನಮ್ಮ ಸಂಸ್ಕೃತಿ..!!

ನಮ್ಮ ಕಛೇರಿಯಲ್ಲಿ ಹೆಣ್ಣು ಮಕ್ಕಳಿಗೆ ತರಲಾಗಿದೆ ಒಂದು ನಿಯಮ
ಪ್ರತಿ ತಿಂಗಳ ಮೊದಲ ಬುಧುವಾರದಂದು ಉಡಬೇಕು ಸೀರೆ ಯನ್ನ !
ಎಲ್ಲ ನಾರಿಮಣಿಗಳಿಗೆ ಇ ನಿಯಮದ ಮೇಲೆ ಕಸಿವಿಸಿ ಚಿಂತನ,
ಕೆಲ ನಾರಿಯರು ಇ ನಿಯಮಕ್ಕೆ ಭದ್ದ
ನಾಡ ಸಂಸ್ಕೃತಿ ಮೆರೆಯಲು ಅವರಿಗೆ ಚೆನ್ನ.
ಇನ್ನು ಕೆಲ ನಾರಿ ಸಾರಿ ಎಂದರೆ ಪರಾರಿ..!
ಜೀನ್ಸು, ಪ್ಯಾಂಟು, ಸ್ಕರ್ಟು ಅಂದರೆ ಧರಿಸುವರು ಕುಣಿದಾಡಿ
ಭಾರತೀಯ ಸಂಸ್ಕೃತಿಯ ತುಳಿದು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ
ನಾಚಿಕೆ ನಾಜೂಕತೆಯ ಮರೆತು ಮೆರೆಯುತಿಹರು..!
ಸಂಸ್ಕೃತಿಯ ಉಳಿಸಿ ಬೆಳೆಸುವವರಿಗೆ ನನ್ನ ನಮನ
ಸಿರೆಯನುಟ್ಟ ಭಾರತೀಯ ನಾರಿಗೆ ಕೈ ಎತ್ತಿ ನಮಸ್ಕರಿಸೋಣ..!
Friday, April 01, 2011
पत्तर दिल..!
मुद्दत से चाहा था तुम्हे
कभी भी तुम इसे समज न पाई
कैसा पत्तर दिल दिया है उपरवाले ने तुम्हे की
कभी भी तुम्हे अपनी ज़िन्दगी की ख्याल न आई ..!
कभी भी तुम इसे समज न पाई
कैसा पत्तर दिल दिया है उपरवाले ने तुम्हे की
कभी भी तुम्हे अपनी ज़िन्दगी की ख्याल न आई ..!
ख़ामोशी
तुम्हारे खुशबू से मेहक रहा है समां
तुम्हारे ना रहते हुए भी होने का एहसास हैं यहाँ
न जाने तुम किस महेफिल में रहती हो
ज़िन्दगी के लम्हे मेरी ख़ामोशी में भर्ती हो ..!
तुम्हारे ना रहते हुए भी होने का एहसास हैं यहाँ
न जाने तुम किस महेफिल में रहती हो
ज़िन्दगी के लम्हे मेरी ख़ामोशी में भर्ती हो ..!
Monday, March 28, 2011
ಓ ಹೆಣ್ಣೇ ಯಾಕೆ ನಿನಗೀ ಹಣದ ಮೇಲೆ ವ್ಯಾಮೋಹ ?
ಓ ಹೆಣ್ಣೇ ಯಾಕೆ ನಿನಗೀ ಹಣದ ಮೇಲೆ ವ್ಯಾಮೋಹ ?
ಹೊನ್ನು, ಐಶ್ವರ್ಯ, ಕಾಂಚಾಣ ಎಲ್ಲವೂ ಚಂಚಲ.
ಇಂದು ಅವನೊಡನೆ ನಾಳೆ ಮತ್ತೊಬ್ಬರೊಡನೆ !
ಪ್ರೀತಿಯ ಕುರುಡಾಗಿಸುವುದು ಕಾಂಚಾಣ,
ಮನದಲ್ಲಿರುವರನ್ನು ದೂರು ಮಾಡುವುದು ಹಣ.
ದ್ವೇಷ ರೋಷಕ್ಕೆ ಎಡೆ ಮಾಡುವುದು,
ಸಂಬಂಧ ಸೂತ್ರಗಳನ್ನು ಒಡೆಯುವುದು..
ಬೇಡ ಹೆಣ್ಣೇ ಇದರ ಮೇಲೆ ವ್ಯಾಮೋಹ..
ಪ್ರೀತಿ ಒಂದಿದ್ದರೆ ಬಾಳಲ್ಲಿ ,
ನಿ ಜಯಿಸಬಲ್ಲೆ ಇಡೀ ಜಗವನ್ನ !
ನಿನ್ನ ನಡೆ ನುಡಿಗಳೇ ಚಿನ್ನದಂತಿರಲಿ...
ನಿನ್ನ ವಾತ್ಸಲ್ಯವೇ ಈ ಭೂಮಿ ಮೇಲೆ ಶಾಶ್ವತವಾಗಲಿ..
ಕ್ಷಣಿಕ ಸುಖಕ್ಕಾಗಿ ಮಾರುಹೋಗದಿರು...
ನಿನ್ನ ನೆಚ್ಚಿಕೊಂಡವರು ನಿನ್ನ ಎಂದಿಗೂ ನೋಯಿಸಲಾರರು..
ಜೀವನವಿದು ಜೀವಿಸುವುದು ಒಂದೇ ಸಾರಿ ,
ಹೊನ್ನಿನ ಬಣ್ಣಗಳು ತುಂಬಲಿ ಬಾಳಿನ ಹರದಾರಿ ..!
Friday, March 25, 2011
ನಗೆಯ ಹಿಂದಿನ ರಹಸ್ಯ...!
Thursday, March 17, 2011
ಪ್ರಕೃತಿ ವಿಕೋಪ
ಭುವಿಯೇ ನಿನಗೇಕಿ ಕೋಪ...?
ಯಾರ ಮೇಲೆ ಮುನಿಸಿಗೆ ಈ ನಿನ್ನ ಪರಿತಾಪ ...!
ಏಕೆ ತುಂಬಿದೆ ನಿನ್ನ ಘರ್ಭದಲ್ಲಿ ಇಷ್ಟೊಂದು ಜ್ವಾಲೆ ..?
ಯಾರ ನಾಷಕ್ಕಿದು ನಿನ್ನ ಈ ರುದ್ರಾವತಾರ ..
ಸಾಗರದಿಂದೆದ್ದು ನಗರಗಳ ಮುಳಿಗಿಸುವ ಪರಿ...
ಯಾರ ಪಾಪಕ್ಕೆ...ಈ ನಿನ್ನ ಕ್ರೋಧ..?
ನಿಲ್ಲಿಸು ನಿನ್ನ ಆರ್ಭಟ ...
ಜೀವ ಸಂಕುಲವಿದು ನಿನ್ನ ಹಠಕ್ಕೆ ತತ್ತರಿಸಿಹುದು ...
ಅಳಿದು ಉಳಿದವರ ಆಕ್ರಂದನ ಮುಗಿಲು ಮುಟ್ಟಿಹುದು...
ಅಕ್ಕ, ಅಣ್ಣ, ತಮ್ಮ ,ತಂಗಿ, ಅಪ್ಪ, ಅಮ್ಮಂದಿರ ಕಳೆದುಕೊಂಡವರ ಗೋಳು
ಕಂಡು ಕಂಡು ನಿಸ್ಸಹಾಯಕನಾಗಿ ಮೂಕ ಪ್ರೇಕ್ಷಕನಂತೆ
ಕೂತು ಕೂತಲ್ಲೇ ವ್ಯಥೆ ಪಡುವುದ ಬಿಟ್ಟು ಮತ್ತೇನೂ ಮಾಡಲಾಗದೆ..
ನಿನ್ನ ಬೇಡಿಕೊಂಬುವೇನು ....ಸಾಕು ನಿಲ್ಲಿಸು ನಿನ್ನ ವೈಪರಿತ್ಯ ...!
ನಿಲ್ಲಿಸು.. ನಿಲ್ಲಿಸು......ದಯಮಾಡಿ ನಿಲ್ಲಿಸಿ...!
ಶಾಂತ ಚಿತ್ತನಾಗು ಓ ಭುವಿಯೇ....!!!
(ಜಪಾನಿನ ಪ್ರಕೃತಿ ವೈಪರ್ಯಕ್ಕೆ ಜೀವ ತೆತ್ತ ನನ್ನ ಬಂಧು ಬಾಂಧವರಿಗೆ ಭಾವಪೂರ್ಣ ಶ್ರದ್ದಾಂಜಲಿ)
ಯಾರ ಮೇಲೆ ಮುನಿಸಿಗೆ ಈ ನಿನ್ನ ಪರಿತಾಪ ...!
ಏಕೆ ತುಂಬಿದೆ ನಿನ್ನ ಘರ್ಭದಲ್ಲಿ ಇಷ್ಟೊಂದು ಜ್ವಾಲೆ ..?
ಯಾರ ನಾಷಕ್ಕಿದು ನಿನ್ನ ಈ ರುದ್ರಾವತಾರ ..
ಸಾಗರದಿಂದೆದ್ದು ನಗರಗಳ ಮುಳಿಗಿಸುವ ಪರಿ...
ಯಾರ ಪಾಪಕ್ಕೆ...ಈ ನಿನ್ನ ಕ್ರೋಧ..?
ನಿಲ್ಲಿಸು ನಿನ್ನ ಆರ್ಭಟ ...
ಜೀವ ಸಂಕುಲವಿದು ನಿನ್ನ ಹಠಕ್ಕೆ ತತ್ತರಿಸಿಹುದು ...
ಅಳಿದು ಉಳಿದವರ ಆಕ್ರಂದನ ಮುಗಿಲು ಮುಟ್ಟಿಹುದು...
ಅಕ್ಕ, ಅಣ್ಣ, ತಮ್ಮ ,ತಂಗಿ, ಅಪ್ಪ, ಅಮ್ಮಂದಿರ ಕಳೆದುಕೊಂಡವರ ಗೋಳು
ಕಂಡು ಕಂಡು ನಿಸ್ಸಹಾಯಕನಾಗಿ ಮೂಕ ಪ್ರೇಕ್ಷಕನಂತೆ
ಕೂತು ಕೂತಲ್ಲೇ ವ್ಯಥೆ ಪಡುವುದ ಬಿಟ್ಟು ಮತ್ತೇನೂ ಮಾಡಲಾಗದೆ..
ನಿನ್ನ ಬೇಡಿಕೊಂಬುವೇನು ....ಸಾಕು ನಿಲ್ಲಿಸು ನಿನ್ನ ವೈಪರಿತ್ಯ ...!
ನಿಲ್ಲಿಸು.. ನಿಲ್ಲಿಸು......ದಯಮಾಡಿ ನಿಲ್ಲಿಸಿ...!
ಶಾಂತ ಚಿತ್ತನಾಗು ಓ ಭುವಿಯೇ....!!!
(ಜಪಾನಿನ ಪ್ರಕೃತಿ ವೈಪರ್ಯಕ್ಕೆ ಜೀವ ತೆತ್ತ ನನ್ನ ಬಂಧು ಬಾಂಧವರಿಗೆ ಭಾವಪೂರ್ಣ ಶ್ರದ್ದಾಂಜಲಿ)
Tuesday, March 15, 2011
ಮೌನ ಗೌರಿ ( ಪಕ್ಕಾ ಧಾರವಾಡ ಭಾಷೆ....!!)
Monday, March 14, 2011
ಬಿರುಗಾಳಿ...!!

ಮುಖ ಮನಸ್ಸಿನ ಕನ್ನಡಿ ಅಲ್ಲ,
ಕಣ್ಣು ಭಾವನೆಗಳ ಎಂದಿಗೂ ಹೇಳುವುದಿಲ್ಲ..!
ನಗೆಯ ಅಂಚು ಸಹಿ ಎಂಬ ಒಪ್ಪಿಗೆಯಲ್ಲ,
ನಿನ್ನ ಮೌನವ ಅರಿಯುವ ಚಾತುರ್ಯ ನನ್ನದಲ್ಲ ..!
ನಯನಗಳು ಕಲಿತರೆ ಮೂಡಿತು ಅಲ್ಲಿ ಆಕರ್ಷಣೆ,
ಮಾತು ಮೌನ ಬೆರೆತರೆ.., ಅಲ್ಲೇ ಪ್ರೇಮದ ಅರ್ಚನೆ ..!
ಕದ್ದು ಕದ್ದು ಎದ್ದು ಬಿದ್ದು ನೀ ನನ್ನ ಕಾಣೆ,
ನಿನ್ನ ಮುದ್ದು ಮೊಗವ ಕಾಣಲು ನಾ ಗೆದ್ದು ಬರುವೆ ನಿನ್ನಾಣೆ..!
ನಿನ್ನ ಮನದ ದುಗುಡವ ನಾ ಅರಿಯೆ ,
ಅಪರಿಚಿತನ ನಂಬುವುದು ಹೇಗೆ ಎಂಬುದು ನಿನ್ನಯ ಚಿಂತೆಯೇ ?
ಜೀವನದ ಕಹಿ ಉಂಡು, ನೊಂದು ಬೆಂದು ನಾ ಬಂದೆನೆ,
ನಿನ್ನ ಮನವ ಕಲುಕಿ ನಾ ಎಂದೂ ಮೋಸ ಮಾಡಲಾರೆನೆ..!
ವೇಳೆ ಎಂಬ ಚಕ್ರವ್ಯೂಹ ಎಳೆದು ನನ್ನ ಕದಡಿದೆ..
ಸುನಾಮಿ ಚಂಡಮಾರುತಕ್ಕೆ ತತ್ತರಿಸಿ ಜೀವ ಸಿಲುಕಿದೆ,
ಈಜಿ ಈಜಿ ಕಷ್ಠದಡವಿ ದಾಟಿ ನಾನು ಬರುತಿರುವೆ..
ದಡದಲ್ಲಿ ನಿನ್ನ ಕಂಡು ಮನವು ತೃಪ್ತಿಗೊಂಡಿದೆ..!
ಮುಂದಿನ ಹಾದಿ ಸುಗಮವಾಗಲಿ ಎಂದು ದೇವರ ಬೇಡಿದೆ
ಅದಕೆ ತಾನೇ ದಾರಿ ತೋರಲು ಇವಳನ್ನ, ನಿನಗೆ ಕಳಿಸಿದೆ
ಕಾಲವೇ ನಿನಗೆ ತಿಳಿಸಲಿ, ನಿನ್ನ ಮನವ ಒಲಿಸಲಿ
ನನ್ನ ಗುರಿಯು, ನಿನ್ನ ಗರಿಯೂ ಮೀಟಿ ಬಾಳು ಹಸನು ಆಗಲಿ ..!
Thursday, March 10, 2011
ನೀನೆ ಬರಿ ನೀನೆ
ಮುಂಜಾನೆಯ ಹನಿಯು ನೀನೆ,
ತುಟಿ ಬಿಚ್ಚಿದೊಡನೆ ಮೊದಲ ಶಬ್ದವು ನೀನೆ,
ಹಗಲು ಕನಸಲೂ ನೀನೆ,
ರೆಪ್ಪೆ ಮುಚ್ಚಿದರೂ ಕಾಣುವೆ ನೀನೆ,
ಹೃದಯ ಬಡಿತವು ನೀನೆ,
ಮನದ ಮಿಡಿತವು ನೀನೆ,
ಉಷ್ಚವಾಸದಲೂ ನೀನೆ,
ನನ್ನ ಅಂಗಾಂಗಳಲಿ ಒಂದಾಗಿರುವೆ ನೀನೆ,
ಹುಚ್ಚ ಕನಸೇನೋ ನಾ ಕಾಣೆ,
ಓ ದೇವರೇ ಮುಗ್ಗರಿಸಿದರೆ.., ಕಡೆ ಉಸಿರಿದು ನನ್ನಾಣೆ ....!
ತುಟಿ ಬಿಚ್ಚಿದೊಡನೆ ಮೊದಲ ಶಬ್ದವು ನೀನೆ,
ಹಗಲು ಕನಸಲೂ ನೀನೆ,
ರೆಪ್ಪೆ ಮುಚ್ಚಿದರೂ ಕಾಣುವೆ ನೀನೆ,
ಹೃದಯ ಬಡಿತವು ನೀನೆ,
ಮನದ ಮಿಡಿತವು ನೀನೆ,
ಉಷ್ಚವಾಸದಲೂ ನೀನೆ,
ನನ್ನ ಅಂಗಾಂಗಳಲಿ ಒಂದಾಗಿರುವೆ ನೀನೆ,
ಹುಚ್ಚ ಕನಸೇನೋ ನಾ ಕಾಣೆ,
ಓ ದೇವರೇ ಮುಗ್ಗರಿಸಿದರೆ.., ಕಡೆ ಉಸಿರಿದು ನನ್ನಾಣೆ ....!
Tuesday, March 08, 2011
ನಿನಗೂ ಹೀಗೆನಾ...?

ನೊರೆಂಟು ಮಾತಿವೆ ಮನದಲ್ಲಿ..
ಕೂಗುತಿರುವ ಹಕ್ಕಿಗಳ ಕಲರವದಂತೆ,
ಮಾತನಾಡುವ ದಾರಿ ಕಾಣದೆ, ಹೃದಯವೆಲ್ಲ ಚಿಲಿಪಿಲಿ...!
ಅದು ಯಾಕೋ ನಿನ್ನಲ್ಲೇ ತೋಡಿಕೊಳ್ಳುವ ತುಡಿತ ,
ನನ್ನ ನಿನ್ನ ಈ ಪರಿಚಯ, ಬಹುವರ್ಶದಿಂದ ಎಂಬಂತೆ..
ನನ್ನ ಮನಸ್ಸು ಮಾತನಾಡುತಿಹುದು ಎಲ್ಲೆ ಇರದಂತೆ ..
ನಿನಗೂನು ಹೀಗೆನಾ....?
ನಿ ಬರುವ ಹಾದಿಯಲಿ ನಾ ಅರಸಿ ಬಂದರೂ
ನಿನ್ನ ಕಾಣದೆ ಮೈಯಲ್ಲ ಪದರು ಪದರು..!
ನಿನ್ನ ನೋಟ ಕಂಡರೆ ಎದೆಗೆ ಬಾಣವಿಟ್ಟಂತೆ,
ನಿನ್ನ ನಗೆಯ ಅಲೆಯು ಹೊಸ ಮಳೆ ತಂದಂತೆ..
ನನ್ನ ಭಾವನೆಯ ಬೇಸಿಗೆ ಆರಿ.., ನಿನ್ನ ತಂಪು ಸುರಿದಂತೆ
ಮೈಯ್ಯ ನವಿರೇರಿಸುತಿರುವುದು ನಿನ್ನ ಚಲುವೋ ಇಲ್ಲ ನನ್ನ ಒಲವೋ..?
ನನಗಂತೂ ಹೀಗೆ....ನಿನಗೂ ಹೀಗೆನಾ ?
ಬಿಟ್ಟು ಬಿಡದಂಗೆ, ಪ್ರತಿ ಕ್ಷಣವೂ ನೆನೆಯುವೆ ನಿನ್ನ
ಒಂದು ಕ್ಷಣವೂ ನಿನ್ನ ಮರೆಯಲಾಗದೆ ಇನ್ನ
ಇರುಳು ಹನಿಯು ಕೊನೆಗೊಳ್ಳುವ ತನಕ..
ಮಂಜಿನ ಹನಿಯು ಮೂಡುವತನಕ..
ನಿದ್ದೆಯ ಸವಿ ಮಬ್ಬಿನಲ್ಲಿಯೂ ನಿನ್ನದೇ ಹಣತೆ..
ಪ್ರಜ್ವಲಿಸುತಿಹುದು ಬಾಳು ಬೆಳಗುವಂತೆ
ನನ್ನಲ್ಲಿಯೇ ಹೀಗೆ...ನಿನಗೂ ಹೀಗೆನಾ...?
ಹಿಂದೆಲ್ಲೋ ನಾವು ಸಂದಿಸಿದ ಹಾಗೆ..
ಜೊತೆಗೂಡಿ ಕಳೆದಂತೆ ಘಳಿಗೆ..
ನಮ್ಮಿಬ್ಬರ ಭಾವನೆಗಳ ಹಂಚಿಕೊಂಡಂತೆ..
ನಮ್ಮಿಬ್ಬರ ಸ್ವಭಾವಗಳ ಸಮ್ಮಿಲನವೇ ಅಪಾರ ..
ಪುಷ್ಪಗಳಿಂದ ಸಿಂಗರಿಸಿದ ಸ್ವರ್ಗದ ಹಾಗೆ...
ಮನೋಹರ ಬಾಳಿನ ದಾರಿಗೊಂದು ದಿನಚರಿ..
ಸೇರಿಕೊಂಡು ರೂಪಿಸಬಲ್ಲೆವು ಒಂದು ಸುಂದರ ಕನಸ್ಸಿನ ಐಸಿರಿ..
ಹೀಗನಿಸಿದೆ ನನಗೆ...ನಿನಗೂ ಹೀಗೆನಾ...?
********* ಭಾವಪ್ರಿಯ *********
Wednesday, March 02, 2011
Just feel it...!

When spring rings in june,
When roses of garden bloom,
When the whole words turns green,
When world fills with the beauty blue, I would stop and say "just feel it "
Morning dews on the grass,
Bliss of sun rays,
Fragrance that drives the wind,
A flute that blew all melodies, Stop a while and " just feel it "
A hectic day
A heavy heart,
A mind full of confusions..
All that perish at the end of day, Pause a second and " just feel it "
In night so calm,
The moon is on,
Stars that glitter..
Look at the sky, close your eyes.. " just feel it "
Before I go to bed,
Before my day closed,
Think a while whom you saw today,
Wish that glimpse will reflects always, " just feel it "
Subscribe to:
Posts (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಅಪ್ಪು - ಮರೆಯದ ಚೇತನ --------------------- ಒಂದು ಮರೆಯಾಗಲಾರದ ಚೇತನ.. ಚಂದನ ವನದ ಸೌಗಂಧದ ಕುಸುಮ ಹೃದಯಗಳ ಆಳಿದ ಧೀಮಂತ ವಿನಯತೆ ಭಾವ ಸದಾ ಜೀವಂತ ಮನುಷತ್ವವೂ ನಾಚ...
-
ಕತ್ತಲು ಕವಿದಾಗ ತಿಳಿ-ಬಿಳಿ ನೆರಳಲ್ಲಿ ಚಂದ್ರಮುಖಿ ದೀಪದ ಬೆಳಕಿನಲ್ಲಿ ನಗೆ ಚೆಲ್ಲೊ ಮಂದಸ್ಮ್ರತಿ ನಯನಗಳು ಮನೋಹರ ಘಾಡ ನೆರಳೊತ್ತ ಗವಿ ಪ್ರೀತಿ ಮೋಹದ ಸಾಗರ ಪಂಚಮ ಪ್ರೀತಮ...














