Friday, March 02, 2012

ಕೈ ರೇಖೆಗಳು ಹೇಳುವುದು ನಿಜವೇ ?



ಐಶ್ವರ್ಯಕ್ಕೆ ಒಂದು ರೇಖೆ,
ಆಯಸ್ಸಿಗೊಂದು ರೇಖೆ,
ಮದುವೆಯ ಜೀವನಕ್ಕೆ ಒಂದು ರೇಖೆ,
ಮಕ್ಕಳ ಸೂಚಿಸುವುದೊಂದು ರೇಖೆ,
ರೇಖೆಗಳು ಕೂಡಿರದಿದ್ದರೆ ಗಂಡಾಂತರವೇಕೆ ?
ರೇಖೆಗಳೇ ಇರದವರಿಗೆ ಭವಿಷ್ಯವೇ ಇಲ್ಲವೇ ?
ಕಷ್ಟಗಳು ಬಂದಾಗ ಅನ್ನುವುದು, ಅಯ್ಯೋ ನನ್ನ ಹಣೆಬಾರವೇ..
ದೇವರು ಬರೆದಿರುವುದು ಹಣೆಯ ಬರಹ..
ಕೈಯ್ಯ ರೇಖೆಗಳೂ ...ಇಲ್ಲ ಹಣೆ ಬರಹವೂ
ಹೇಗೆ ನಂಬುವುದು... ಇವೆಲ್ಲಾ ನಿಜವೇ..?

***ಭಾವಪ್ರಿಯ***

Wednesday, February 29, 2012

ಕಟುಕಿ



ನಿನ್ನ ಬಿಟ್ಟು ಬದುಕಲಾರೆ ಎನ್ನುತ್ತಿದ್ದಳು ಅಂದು ,......

ಅವನ ಜೊತೆ ಬದುಕಬಲ್ಲೆ ಎನ್ನುತ್ತಿವಳು ಇಂದು , ನಿನ್ನ ಕೊಂದು ..!

---ಭಾವಪ್ರಿಯ---

ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!



ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!

ನೀ ಮುಗಿಲಾಚೆಯ ನೀಲಿ ಬಾನು 
ಪ್ರೀತಿ ತುಂಬಿದ ಕಡಲು ನಾನು 
ಕಡಲು ನಿರೀರಬಹುದು ಲವಣ
ಸಿಹಿಗೆ ತಿರುಗಿಸಬಲ್ಲದು ನನ್ನ ಪ್ರೀತಿಯ ತಾಣ    
ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!

ನನ್ನಯ ಹೃದಯವಿದು ಚೆಲುವು ಬೃಂದಾವನ
ಮೆಲ್ಲಗೆ ಕುಳಿತು ಸವಿಬಾರೆ ಹಕ್ಕಿಗಳ ಸವಿಗಾನ
ತರ ತರ ಅರಳಿದೆ ಹೂವಿನ ವರ್ಣ
ಸುಗಂಧವು ಉಣಿಸಿದೆ ಒಲವಿನ ಚರಣ
ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!

ಕವಿ ಮನಸು ನನ್ನದು ಚಿರನೂತನ
ನಿನ್ನ ಪ್ರತಿ ಒಂದು ಭಾವವು  ನನಗೆ ಪ್ರೇರಣ
ಮಲ್ಲಿಗೆ ಮನದಲ್ಲಿ  ಇಡು  ಪಾದಾರ್ಪಣ
ನಾ ಸದಾ ಬಡಿಸುವೆ ಪ್ರೀತಿಯ ಔತಣ
ನೂರೆಂಟು ಸವಿ ಮಾತು ನನ್ನಲಿ , ನೀ ಕಿವಿಗೊಟ್ಟು ಕೇಳು ಬಾ ಇಲ್ಲಿ ..!!

***ಭಾವಪ್ರಿಯ ***

Tuesday, February 28, 2012

ಜಿನುಗುತಿವೆ ಕಣ್ಣ ಹನಿಗಳು .!



ಗೆಳತಿಯೊಡನೆ ಹಂಚಿಕೊಂಡ ನೆನಪು
ನಕ್ಕು ನಲಿದ ಕ್ಷಣವ ನೆನೆದು
ಮರುಕಳಿಸಿದೆ ನಲಿವಿನ ಕಂಪು
ಮತ್ತೆ.., ಮತ್ತೆ .. ನೆನೆ ನೆನೆದು ಜಿನುಗುತಿವೆ ಕಣ್ಣ ಹನಿಗಳು ..!

ನಿದ್ದ್ರೆಯಲಿ ಕಂಡ ಕೆಟ್ಟ ಕನಸಿಗೆ ಬೆಚ್ಚಿ ಬಿದ್ದು
ನಡು ರಾತ್ರಿಯಲಿ ಬಿಕ್ಕಿ ಬಿಕ್ಕಿ ಅತ್ತಿದ್ದು
ಎದೆಗೊರಗಿಸಿ ಮಗುವಂತೆ ರಮಿಸಿದ್ದು
ಮತ್ತೆ.., ಮತ್ತೆ .. ನೆನೆ ನೆನೆದು ಜಿನುಗುತಿವೆ ಕಣ್ಣ ಹನಿಗಳು ..!

ಚಳಿಗೆ ನಿ ನಡುಗುತ್ತ ನಿಂತಾಗ
ಹೊದೆಸಿದ್ದೆ ನಿನಗೆ, ನನ್ನ ಬಾಹುಗಳ ಕಂಬಳಿ
ಎದೆಗೊತ್ತಿದ ನಿನ್ನ ಕಿವಿ ಜುಮಕಿ
ಮತ್ತೆ, ಚುಚ್ಚಿ ಚುಚ್ಚಿ...ಜಿನುಗಿಸಿವೆ ಕಣ್ಣ ಹನಿಗಳು ..!

ಮರೆತೇ ಹೋಗಿರುವೆ ನೀನು...
ಹಿಂತಿರುಗಿ ಬಾರದ ಊರಿಗೆ ನಿ ಹೋದರೂ
ನಿ ಬರುವದಿಲ್ಲ ಎಂಬ ಸತ್ಯವ ತಿಳಿದರೂ
ಆವಿ ಗೊಳ್ಳದೇ.. ಮತ್ತೆ.. ಮತ್ತೆ., ಜಿನುಗುತಿವೆ ಕಣ್ಣ ಹನಿಗಳು ..!

Friday, February 24, 2012

ಕನಸುಗಳ ಕಾರುಬಾರು

ಯಾಕೋ ಇಂದಿಂದು ಕನಸುಗಳದೇ ಕಾರುಬಾರು
ಇರುಳ ತೋಳಲಿ ನಿದ್ದ್ರೆಗೆ ಜಾರುತಲಿ
ಲಗ್ಗೆ ಇಡುವವು ಮುಖಗಳು ಸಾವಿರಾರು ..

ಮುಖ ಪರಿಚಯವೇ ಇಲ್ಲದ ಮುಖಗಳು
ನಸು ನಕ್ಕು ಶೂನ್ಯದಡೆಗೆ ಜಾರಿದರು
ತಿರುಗಿ ನೋಡಿದೊಡನೆ ಅಲ್ಯಾರೂ ಇಹರು

ಕೆಲವು ಕೋಪಗೊಂಡ, ಭೀತಿಗೊಳಿಸುವ ಮುಖಗಳು
ಯಾರದೋ ಮೇಲಿನ ಸಿಟ್ಟಿಗೆ ನನ್ನ ದುರುಗುಟ್ಟುತ್ತಿದ್ದರು
ಭಯದ ಛಾಪು ಮೂಡಿಸಿ, ಕತ್ತಲೆಯ ಬಾವಿಗೆ ದೂಡಿದರು

ಇನ್ನು ಪಾಪ ಮುಘ್ಧ ಮುಖಗಳು
ತಮ್ಮ ಅಗಲಿದ ಆತ್ಮಿಯರ ಹುಡುಕುತ್ತಿದ್ದರು
ಅವರಿವರ ಬಳಿ ತೆರಳಿ ಪರಿಚಯ ಕೇಳುತ್ತಿದ್ದರು

ಇನ್ನು ರೋಧಿಸುತ್ತಿದ್ದ , ಅಳು ಮುಖಗಳು
ವಿಧಿಯ ಆಟಕೆ ಕಂಗೆಟ್ಟ ಮೂಕರು
ಮರಳಿ ಬಾರದ ಜೀವಗಳಿಗೆ ತಪಿಸುತ್ತಿದ್ದರು

ಯಾಕೋ ಇಂದಿಂದು ಇಂತಹ ಕನಸುಗಳದೇ ಕಾರುಬಾರು
ಇರುಳು ಕಳೆದು ಬೆಳಗಿನ ಮುಂಜಾವಲಿ
ಮರೆಯಾಗುವವು.. ಅವೇ ಮುಖಗಳು ಸಾವಿರಾರು ..!!

चाहने का अंदाज़

प्यार करने का अपना अलग्सा अंदाज़ है..
अपने मन को.., उनके मनको  डोर से बांदते है ..
अपने छाया में हम उन्हें पाते है..
हो ना हो ओ भी हमें इतनाही चाहती होगी...
लेकिन हम उसका जवाब का इंतज़ार ना करते हुवे...
उनको चाहनेकी पल पल में अपनी ख़ुशी पाते है..! 

ಮಾರಕ ನೆನಪುಗಳು

ನೆನಪುಗಳು ನೆನಪಿಗೆ ಬರಲು 
ನೆನೆದು ನೆನೆದು ಖುಷಿ ಪಡುವುದೋ.., ಇಲ್ಲ ದುಃಖಿಸುವುದೋ ?
ಸವಿ ಕ್ಷಣಗಳು  ಸಿಹಿ ಹಂಚಿದರೆ.. ಕಹಿ ನೆನಪುಗಳು ಕುಕ್ಕಿ ತಿಂದಿವೆ
ಅರಗಿಣಿ ಎಂದು ಪ್ರೀತಿಸಿದ ಕಾರಣಕೆ ರಣ ಹದ್ದಾಗಿ ಕಿರು-ಕಿರುಚಿ ಹರಿದಿದೆ  
ಸಂತಸದ  ಸಾಗರದಿ ತೇಲಿದೆ ಎಂತ್ತಿದ್ದೆ..,ಆದರೆ ಸುಳಿ ಅದು ನನ್ನ ಸೆಳೆದು ಮುಳುಗಿಸಿ ಕೊಂದಿಹುದು  
ನೆನಪುಗಳ ದಿಕ್ಕರಿಸಿ ನಡೆಯಲೇ... ಜೀವವ ತ್ಯಜಿಸಿ ಮಣ್ಣಾಗಲೇ 
ಮಾರಕ ನೆನಪುಗಳು ಮನ ಕೊಂದಾಗ ..ಜಿವಿಸಲಿ  ಹೇಗೆ ? 

ಮನವ ತೊಳೆಯಿರಿ

ಮನವ ತೊಳೆಯಿರಿ ಓ ಮಾನವರೇ ,
ಕೆಟ್ಟ ಚಟಗಳ ಪ್ರೇರೇಪಿಸುವ ಮನವ,
ದುಷ್ಟ ಕೆಲಸಕ್ಕೆ ಕೈ ಹಾಕುವ ಮನವ,
... ಮಾನವನ ವ್ಯಕ್ತಿತ್ವ ಹಾಳು ಮಾಡುವ... ಮನ ತೊಳೆಯಿರಿ..!

ಮನವ ತೊಳೆಯಿರಿ ಓ ಮಾನವರೇ ,
ಅನ್ನ್ಯರನ್ನು ದೂಷಿಸುವ ಮನವ,
ಪರ ಜನರ ಅಳಿವು ಬಯಸುವ ಮನವ,
ಅನ್ಯರ ಕಷ್ಟಗಳಲ್ಲಿ ತೃಪ್ತಿ ಕಾಣುವ .... ಮನ ತೊಳೆಯಿರಿ..!

ಮನವ ತೊಳೆಯಿರಿ ಓ ಮಾನವರೇ ,
ಶ್ರೀಹರಿಯ ಜಪಿಸದ ಮನವ
ದೇವನೋಲುಮೆಯ ಕೊಂಡಾಡದ ಮನವ
ಜಗತ್ತ ಸೃಷ್ಟಿಯ ಮಾಯವ ಅರಿಯದ ....ಮನ ತೊಳೆಯಿರಿ..!

ಮನವ ತೊಳೆಯಿರಿ ಓ ಮಾನವರೇ ,
ಕಲಿಯುಗದ ಕಾಲ ಮುಗಿಯುವ ಮುನ್ನ,
ಮಾನವನ ಹುಟ್ಟು ಅಡಗುವ ಮುನ್ನ,
ಪ್ರಕೃತಿ ವಿಕೊಪಕೆ ತೆರಳುವ ಮುನ್ನ ....ಮನ ತೊಳೆಯಿರಿ..!

Friday, November 25, 2011

ಮೋಡಗಳ್ಯಾಕೋ....



ಮೋಡಗಳ್ಯಾಕೋ ಧರೆಗೆ ಬಂದಾವ ಇಂದು..
ಸೌಮ್ಯದಿ ಚಲಿಸುತ್ತ ..ಯಾರನ್ನೋ ಆರಿಸುತ್ತ ..
ತವಕದಿ ಮುನ್ನುಗ್ಗುತ್ತಾ ..ಸುಯ್ಯನೆ ಕೂಗಿ ಕರೆಯುವಂತೆ ..!

ಅತ್ತಾಗೆ ಕಪ್ಪಗು ಅಲ್ಲ ಇತ್ತಾಗ ಬೆಳ್ಳಗೂ ಅಲ್ಲ
ತಿಳಿ ಕಪ್ಪು ಸವರಿದ ಹಾಗೆ ಮುಖದಾಗ
ಬಿಡಿ ಬಿಡಿಯಾಗಿ ಹೊರಟಾಳ ...ಇವಳ ಚಲನವು ಯಾರ ಕಡೆಗೋ ?

ಬಿಂಕ ಒಯ್ಯಾರ ತಳುಕು ಬಳುಕೋ ...
ಮನದಲಿ ಏನೋ ಇರಬಹುದು ಅಳುಕು
ಸಂಜೆಯ ತನಕ ಕಾದರೆ ತಿಳಿದೀತು... ಇವಳ ಅಳುವೋ ಇಲ್ಲವೋ ಆನಂದ್ ಭಾಷ್ಪವೋ ..!

Thursday, November 24, 2011

ಎತ್ತಕಡೆ ಸಾಗಿದೆಯೋ ಪಯಣ ?

ಜೀವನದಲ್ಲಿ ನೆಮ್ಮದಿ ಇಲ್ಲ
ಮನಸ್ಸಿಗೆ ಶಾಂತಿಯು ಇಲ್ಲ
ಕಾಡುವ ವಿಷಗಳೆಲ್ಲಾ ನಿಗ್ರಿಸುತಿಹವಲ್ಲ
ದಾರಿಯೇ ಕಾಣದಂತಾಗಿದೆ ....ಎತ್ತಕಡೆ ಸಾಗಿದೆಯೋ ಪಯಣ..?

ಕಛೇರಿಯ ಕ್ಷಣಗಳು ಇಂದು ಕೊಲ್ಲುತ್ತಿವೆಯಲ್ಲ
ಕೆಲಸ ಕಾರ್ಯಗಳಲ್ಲಿ ಆಸಕ್ತಿಯೇ ಇಲ್ಲ
ರಾಜ್ಯಕಿಯ ಕಂಡು ಮನ ಬೇಸತ್ತಿದೆಯಲ್ಲ
ಉನ್ನತಿ ಕಾಣುವ ಲಕ್ಷಣಗಳೇ ಇಲ್ಲ... ಎತ್ತಕಡೆ ಸಾಗಿದೆಯೋ ಪಯಣ ..?

ಶನಿಯ ಕಾಟವೋ..., ಇಲ್ಲವೋ ಮೋಹಿನಿಯ ಆಟವೋ ,
ಜೀವನಕ್ಕೆ ಅಡ್ಡಗಾಲಾಗಿ.., ಏಳಿಗೆಗೆ ಸರ್ಪಗಾವಲಾಗಿ...
ಕ್ಷಣ ಕ್ಷಣಕೆ ತಡವಿ , ಕೆಟ್ಟ ಶಕ್ತಿಯೊಂದು ಕೆಣಕಿದೆಯಲ್ಲ
ಎಂದು ಅಳಿಯುವುದು ಕೇಡುಗಾಲ....ಎತ್ತಣದಿಂದೆತ್ತ ಸಾಗಿದೆಯೋ ಪಯಣ..?

Thursday, November 17, 2011

ಹೆಮ್ಮಾರಿ

ಬಾಳಬೆಳಕಾಗಿ ಬರಲೆಂದು ಅಂದುಕೊಂಡಿದ್ದೆ
ಬಾಳಿಗೆ ಕಿಚ್ಚೊಂದು ಹಚ್ಚಿ ಬಿಟ್ಟಳು
ಜೀವನ ಬಂಗಾರವಾಗಲಿ ಅಂದುಕೊಂಡಿದ್ದೆ
ಬಂಗಾರವನ್ನೇ ಕದ್ದು ಓಡಿಹೋದಳು
ಪ್ರೀತಿಯ ಸ್ವರೂಪ ಅಂದುಕೊಂಡಿದ್ದೆ
ಪ್ರೀತಿಯ ಅರಿಯದ ಮೊಡಿ ಅವಳು
ಜನುಮ ಜನುಮದ ಸಂಗಾತಿ ಅಂದುಕೊಂಡಿದ್ದೆ
ಯಾವುದೋ ಜನುಮದ ಶತ್ರು ಅವಳು
ಮದುವೆ ಒಂದು ಪವಿತ್ರ ಬಂಧನ ಅಂದುಕೊಂಡಿದ್ದೆ
ಗಂಡನನ್ನೇ ಕೊಲ್ಲುವ ಕೊಲೆಪಾತಕಿ ಆದಳು

Monday, November 14, 2011

ಮತ್ತೆ ಮರಳಿ ಬಾ ನನ್ನ ಬಾಲ್ಯವೆ..

ಮತ್ತೆ ಮರಳಿ ಬಾ ನನ್ನ ಬಾಲ್ಯವೆ..

ನಸುಕಿನಲ್ಲಿ ಅಮ್ಮನ ಕೂಗು...
ಸುನಿ... ಎದ್ದು ಮುಖತೊಳೆದು ಬಾರೋ !
ಚಹಾ ಕುಡಿಯುವಂತಿ...! ಹಾಸಿಗೆ ಇಂದ ಮೇಲೆದ್ದು
ಕಣ್ಣು ಉಜ್ಜುತಿದ್ದದ್ದು, ಮೈಯ್ಯ ಮುರಿತಿದ್ದದ್ದು .....
ಮತ್ತೆ ಮರಳಿ ಬರಲಿ ಆ ನನ್ನ ಬಾಲ್ಯ ..!

ಮಲೆನಾಡಿನ ಸುರಿಯೋ ಮಳೆಯಲ್ಲಿ
ರೈನ್ಕೋಟ್ ತೊಟ್ಟು , ಉದ್ದನೆಯ ಬೂಟುಗಳ ಹಾಕಿಕೊಂಡು
ಶಾಲೆಯತ್ತಕಡೆಯ ನಡುಗೆ...
ಹಾದಿಯಲ್ಲಿ ಪುಟಿಯುತಿದ್ದ ಮಳೆ ಹನಿಗಳು ಕರೆಯುವಂತೆ ನನ್ನ
ಮತ್ತೆ ಮರಳಿ ಬರಲಿ ಆ ನನ್ನ ಬಾಲ್ಯ...!

ಶಾಲೆಯ ಹಿಂಬದಿಯ ಕಾಡಿನಲ್ಲಿ..,
ನೆಲ್ಲಿಕಾಯಿಗಾಗಿ ಅಲೆದಾಟ.,
ನೆಲ್ಲಿಯ ಹೆಮ್ಮರವ ಹತ್ತಿದ ಹರ ಸಾಹಸ...
ಪಾಟಿಚೀಲದ ತುಂಬಿ ತಂದ ನೆಲ್ಲಿಕಾಯಿ, ತುಳಿಸಿ ಲಗ್ನವ ಆಚರಿಸಿದ ಸಂಭ್ರಮ ...
ಮತ್ತೆ ಮರಳಿ ಬರಲಿ ಆ ನನ್ನ ಬಾಲ್ಯ...!

ಬೇಸಿಗೆ ರಜೆಯ ಮೆರಗಿನ ಸ್ಪರ್ಶ
ಬಾಲ್ಯದ ಗೆಳತಿಯ ಜೊತೆ ಆಡಿದ ಹರುಷ
ಕೂಡಿ ನಲಿಯುತ ಕಳೆದ ಆ ಕ್ಷಣ..
ಅಲೆ ಅಲೆಯಾಗಿ ಮನಕೆ ಬಡಿಯುತಿದೆ ..,
ಮತ್ತೆ ಮರಳಿ ಬರಲಿ ಆ ನನ್ನ ಬಾಲ್ಯ...!

Thursday, November 10, 2011

ಶೂನ್ಯ ಜೀವನ

ತನುವು ಕುಗ್ಗಿ
ಮನವು ಬಗ್ಗಿ
ಉಲ್ಲಾಸವೇ ಮರೆತಿದೆ.

ನಿರಸ ಜೀವ
ಕಳೆದ ಭಾವ
ಸೋತ ಅನುಭವದಂತಿದೆ.

ಉತ್ಸಾಹವೆಲ್ಲ ನೆಲಕಚ್ಚಿ
ಬೇಸರದ ಮನೆ ಕಟ್ಟಿ
ಸ್ಮಶಾನ ಮೌನದಂತಿದೆ.

ಇನ್ನೇನು ಉಳಿದಿದೆ ಜೀವನದಿ ?
ಕಣ್ಣುಗಳ ಮುಚ್ಚಿ., ಚೀರ ನಿದ್ದ್ರೆಯಲಿ...
ಮರೆಯಾಗುವಂತನಿಸಿದೆ.....!!!

Thursday, September 29, 2011

ಒಂದು ಸಲಾ ಕಾಣಿಸು ಬಾರೆ




ಮುಂಜಾವಲ್ಲಿ ಎದ್ದು ಮುಖ ತೊಳೆಯುತ್ತ
ಕನ್ನಡಿಯನ್ನು ನೋಡುತ್ತಾ ನಿಂತಿತು ನನ್ನ ಚಿತ್ತ
ಎಲ್ಲೋ ಇರಬಹುದು ಅವಳು ...
ನನ್ನ ಹಾಗೆ ಕನ್ನಡಿಯ ಮುಂದೆ ನಿಂತು ಕಣ್ಣುಗಳ ಉಜ್ಜುತ್ತಾ...
ಮನದಲ್ಲಿ ಮೂಡಿದ ಮಂದಹಾಸ ಕರೆಯುತ್ತಿದೆ, ಒಂದು ಸಲಾ ಕಾಣಿಸು ಬಾರೆ ...!

ಸದ್ದು ಮಾಡದೆ ಬಂದೆ ನಿ..
ಗುದ್ದಿ ಗುದ್ದಿ ಎದೆಯೊಳಗೆ ಒಲುಮೆಯ ಹರಿಸುತ್ತಿರುವೆ
ಕಣ ಕಣ ಅಂಕಣಗಳಲ್ಲಿ ಚಲಿಸಿ
ಮಂಕು ಮಾಡಿ ನನ್ನ ಹೃದಯ
ಕ್ಷಣದಲ್ಲಿ ಮಾಯವಾಗಬೇಡ , ಒಂದು ಸಲಾ ಕಾಣಿಸು ಬಾರೆ...!

ದಣಿದೆನೆಂದು ಕಣ್ಣು ಮುಚ್ಚಿ ನಿದ್ರಿಸಿದೆನು
ಸ್ವಪ್ನದಲ್ಲಿ ಬಂದು ನಿದ್ದೆ ನಿ ಕೆಡಸುವೆಯೇನು ?
ಓಡಬೇಡ ನಿಲ್ಲು ಅಲ್ಲೇ... ಓ ನಲ್ಲೆ
ನಿನ್ನ ತುಂಟತನವ ಸಹಿಸಲು ನಾ ಒಲ್ಲೆ...
ಬಿಗಿದಪ್ಪುವೆ ಬಾರೆ ನಿನ್ನ , ಒಂದೇ ಒಂದು ಸಲಾ ಕಾಣಿಸು ಬಾರೆ..!

Friday, September 23, 2011

ಮರಳಿ ಬಾ ಗೂಡಿಗೆ...!



ಮುಪ್ಪಿನಲಿ ಮಂಕಾಗಿ
ಮಕ್ಕಳ ಪ್ರಿತಿಗಾಗಿ ಹಂಬಲಿಸಿ
ದೂರದ ಊರಿಗೆ ಹೋದ ಮಕ್ಕಳ ನೆನೆಯುತ
ವಿರಹದೇ ಕಳೆಯುತಿವೆ ಮುಪ್ಪಿನ ದಿನಗಳು ...!

ಹಾರುವದ ಕಲಿತ ಮರಿಹಕ್ಕಿ
ಹೊಸದೊಂದು ಗೂಡ ಕಟ್ಟಿ
ಅದರ ಪೋಷಣೆಯಲಿ
ತವರ ಗೂಡ ಮರೆತಿಹರು...

ತವರೂರ ಗೂಡದು
ಕಣ್ಣು ಮುಚ್ಚದೆ ಕಾದಿಹುದು...
ಮರಳಿ ಬರಲಿ ಮರಿಹಕ್ಕಿಗಳು....ಕಿಚಿ ಪಿಚಿ ಶಬ್ದ ಮಾಡುತ .
ನಿಮ್ಮಯ ದಾರಿಯನ್ನೇ ಇದಿರು ನೋಡುತಿಹುದು...

ಮುಪ್ಪಿನಾವಸ್ಥೆಯಲಿ
ಮೊಮ್ಮಕ್ಕಳ ಜೊತೆ ಆಡುವಂತಾಗಿ
ಮಕ್ಕಳ ನಗುವಲ್ಲೇ ನಲಿವು ಕಾಣಲು
ಹವಣಿಸುತ ಕರೆದಿಹರು .....ಮರಳಿ ಬಾ ಗೂಡಿಗೆ,
ಮರಳಿ ಬಾ...!!!

Wednesday, July 06, 2011

ನಮ್ಮ ನಾಡು.. ನಮ್ಮ ಸಂಸ್ಕೃತಿ..!!



ನಮ್ಮ ಕಛೇರಿಯಲ್ಲಿ ಹೆಣ್ಣು ಮಕ್ಕಳಿಗೆ ತರಲಾಗಿದೆ ಒಂದು ನಿಯಮ
ಪ್ರತಿ ತಿಂಗಳ ಮೊದಲ ಬುಧುವಾರದಂದು ಉಡಬೇಕು ಸೀರೆ ಯನ್ನ !
ಎಲ್ಲ ನಾರಿಮಣಿಗಳಿಗೆ ಇ ನಿಯಮದ ಮೇಲೆ ಕಸಿವಿಸಿ ಚಿಂತನ,    
ಕೆಲ ನಾರಿಯರು ಇ ನಿಯಮಕ್ಕೆ ಭದ್ದ
ನಾಡ ಸಂಸ್ಕೃತಿ ಮೆರೆಯಲು ಅವರಿಗೆ ಚೆನ್ನ.
ಇನ್ನು ಕೆಲ ನಾರಿ ಸಾರಿ ಎಂದರೆ ಪರಾರಿ..!
ಜೀನ್ಸು, ಪ್ಯಾಂಟು, ಸ್ಕರ್ಟು ಅಂದರೆ ಧರಿಸುವರು ಕುಣಿದಾಡಿ 
ಭಾರತೀಯ ಸಂಸ್ಕೃತಿಯ ತುಳಿದು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ  
ನಾಚಿಕೆ ನಾಜೂಕತೆಯ ಮರೆತು ಮೆರೆಯುತಿಹರು..! 
ಸಂಸ್ಕೃತಿಯ ಉಳಿಸಿ ಬೆಳೆಸುವವರಿಗೆ ನನ್ನ ನಮನ
ಸಿರೆಯನುಟ್ಟ ಭಾರತೀಯ ನಾರಿಗೆ ಕೈ ಎತ್ತಿ ನಮಸ್ಕರಿಸೋಣ..!

Friday, April 01, 2011

पत्तर दिल..!

मुद्दत से चाहा था तुम्हे

कभी भी तुम इसे समज न पाई

कैसा पत्तर दिल दिया है उपरवाले ने तुम्हे की

कभी भी तुम्हे अपनी ज़िन्दगी की ख्याल न आई ..!

ख़ामोशी

तुम्हारे खुशबू से मेहक रहा है समां

तुम्हारे ना रहते हुए भी होने का एहसास हैं यहाँ

न जाने तुम किस महेफिल में रहती हो

ज़िन्दगी के लम्हे मेरी ख़ामोशी में भर्ती हो ..!

Monday, March 28, 2011

ಓ ಹೆಣ್ಣೇ ಯಾಕೆ ನಿನಗೀ ಹಣದ ಮೇಲೆ ವ್ಯಾಮೋಹ ?



ಓ ಹೆಣ್ಣೇ ಯಾಕೆ ನಿನಗೀ ಹಣದ ಮೇಲೆ ವ್ಯಾಮೋಹ ?
ಹೊನ್ನು, ಐಶ್ವರ್ಯ, ಕಾಂಚಾಣ ಎಲ್ಲವೂ ಚಂಚಲ.
ಇಂದು ಅವನೊಡನೆ ನಾಳೆ ಮತ್ತೊಬ್ಬರೊಡನೆ !
ಪ್ರೀತಿಯ ಕುರುಡಾಗಿಸುವುದು ಕಾಂಚಾಣ,
ಮನದಲ್ಲಿರುವರನ್ನು ದೂರು ಮಾಡುವುದು ಹಣ.
ದ್ವೇಷ ರೋಷಕ್ಕೆ ಎಡೆ ಮಾಡುವುದು,
ಸಂಬಂಧ ಸೂತ್ರಗಳನ್ನು ಒಡೆಯುವುದು..
ಬೇಡ ಹೆಣ್ಣೇ ಇದರ ಮೇಲೆ ವ್ಯಾಮೋಹ..
ಪ್ರೀತಿ ಒಂದಿದ್ದರೆ ಬಾಳಲ್ಲಿ ,
ನಿ ಜಯಿಸಬಲ್ಲೆ ಇಡೀ ಜಗವನ್ನ !
ನಿನ್ನ ನಡೆ ನುಡಿಗಳೇ ಚಿನ್ನದಂತಿರಲಿ...
ನಿನ್ನ ವಾತ್ಸಲ್ಯವೇ ಈ ಭೂಮಿ ಮೇಲೆ ಶಾಶ್ವತವಾಗಲಿ..
ಕ್ಷಣಿಕ ಸುಖಕ್ಕಾಗಿ ಮಾರುಹೋಗದಿರು...
ನಿನ್ನ ನೆಚ್ಚಿಕೊಂಡವರು ನಿನ್ನ ಎಂದಿಗೂ ನೋಯಿಸಲಾರರು..
ಜೀವನವಿದು ಜೀವಿಸುವುದು ಒಂದೇ ಸಾರಿ ,
ಹೊನ್ನಿನ ಬಣ್ಣಗಳು ತುಂಬಲಿ ಬಾಳಿನ ಹರದಾರಿ ..!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...