Tuesday, March 11, 2014

ಊಸ್ರವಳ್ಳಿ

ಗಳಿ - ಗಳಿಗೆ ಬದಲಾಗುವುದು ಉಸ್ರವಳ್ಳಿಯ ಬಣ್ಣ
ಅದಕ್ಕಿಂತ ಹುಚ್ಚರು ಯಾರೂ ಇಲ್ಲಾ ನಂಬಲು ಅದನ್ನ
ಅದರ ನಾಟಕವನ್ನು, ಚಲವಲನವನ್ನು ಇಂಚು ಇಂಚು ತಿಳಿದವ
ಯಾವ ಮಿನುಗುವ ಬಣ್ಣ ಹಚ್ಚಿದರೂ ಬೆಪ್ಪಾಗುವುದಿಲ್ಲಾ ಇನ್ನಾ !!

ಪಾಪಿ ಜನ್ಮ

ಪಾಪಿ ಜನ್ಮವೇ..

ನಿನ್ನ ಪಾಪಕ್ಕೆ ಪ್ರಾಯಶ್ಚಿತವಿಲ್ಲ

ನಿನ್ನ ಕೆಟ್ಟ ವರ್ತನೆಗೆ ಕೊನೆಯಿಲ್ಲ

ನಿನ್ನ ಉಳಿವಿಂದ ಯಾರಿಗೂ ಸುಖವಿಲ್ಲ

ನೀ ಜೀವಿಸಿದರೂ ಯಾರಿಗೂ ಒಳಿತಿಲ್ಲ

ಬಾವಿಯೋ, ಕೆರೆಯೋ,ರೈಲ ಹಳಿಯೋ

ಏನೇ ಕಂಡುಕೊಂಡರು ಯಾರೂ ಸಂತಾಪ ಪಡುವವರಿಲ್ಲ.!!

Thursday, March 06, 2014

ನೆಮ್ಮದಿ

ಅವಳ ಎಲ್ಲಾ ಕಣ್ಣ ಹನಿಗಳಿಗೆ


ಪರಿಹಾರ ಇಲ್ಲಾ ನನ್ನ ಬಳಿ..!

ಆದರೂ,

ಅವಳ ಮೊಗದ ಸಿಂಗಾರಕೆ

ಸಣ್ಣ ನಗು ನೀಡಿದ ಸಂತೋಷವಿದೆ ನನ್ನಲಿ..!!

Wednesday, March 05, 2014

ವಸಂತದ ಚಿಗುರು

ಗರಿಯ ಚಿಗುರು

ಹೊಸ ಚಿಗುರು

ಹಸಿರ ಚಿಗುರು

ಕೆಂಪ ಚಿಗುರು

ಪಚ್ಚೆ ಹಸಿರು

ತಿಳಿಯ ಹಸಿರು

ಹಸಿರು ಉಸಿರಾಗಿ ಚಿಗಿಯುತಿದೆ !!


ಕಾಡ ಮರದಲಿ

ನಾಡ ಮರದಲಿ

ಚಿಕ್ಕ ಗಿಡದಲಿ

ಹೆಮ್ಮರದಲಿ

ಮುಳ್ಳು ಕಂಟಿಯಲಿ

ಹೂ ಬಳ್ಳಿಯಲಿ

ಹಸಿರು ಉಸಿರಾಗಿ ಚಿಗಿಯುತಿದೆ !!


ವಸಂತ ಬಂದ

ಖುಷಿಯಲಿ

ನವ ಮಾಸದ

ಹುರುಪಲಿ

ಹಸಿರು ಮೊಳೆತು

ಹರುಷದಲಿ

ಹಸಿರು ಉಸಿರಾಗಿ ಚಿಗಿಯುತಿದೆ !!

ಜ್ವರ

ಸೂರ್ಯನಿಗೂ ನಿನ್ನ ಮೇಲೆ ಮನಸ್ಸು
ಅದಕ್ಕೆ ಅನ್ನಿಸುತ್ತೆ ಉದಯಿಸುವುದ ಬಿಟ್ಟು
ಇಂದು ನಿನ್ನಲ್ಲೇ ಅವಿತಿಹನು.

Tuesday, March 04, 2014

अर्मान

अर्मान तो बहुत छुपे है दिलके बादलों में
बस तुम्हारे आने की देरि है...
बरस जाएँगे बादल, बारिश की बूँदों में !

ನಂಟು

ಅವಳ ಕೆನ್ನೆಯ ಗುಳಿ ಕಂಡಾಗಲೆಲ್ಲಾ..
ಚಿಗುರುವುದು ನನ್ನ ಆಸೆಯ ಗಂಟು !
ಇನ್ನೂ ಯಾವ ಕ್ಷಣಕ್ಕೆ ಕಾಯಬೇಕು ನಾ....
ಬೆಸೆದುಕೊಳ್ಳಲು ನಮ್ಮಿಬ್ಬರ ನಂಟು !!

ನ್ಯಾನೊ ಕಥೆ

ಒಬ್ಬ ಹೆಣ್ಣು ತನ್ನ ಚಟಕ್ಕಾಗಿ, ಗಂಡನ ಮೆನೆ ತೊರೆದು ಹೇಳದೇ ಕೇಳದೇ ಓಡಿ ಹೋದಾಗ


ಸಮಾಜ ಕೇಳುವ ಪ್ರಶ್ನೇ " ಯಾವನ ಜೊತೆ ಓಡಿಹೋಗಿದ್ದಳು ?? "

ನಾಚಿಗೆ ಇಲ್ಲದೇ ಮರಳಿ ಅವನೆದಿರು ನಿಂತರೆ ಗಂಡ ಕೂಡಾ ಕೇಳುವ ಪ್ರಶ್ನೇ ಅದೇ " ಯಾವನ ಜೊತೆ ಓಡಿಹೋಗಿದ್ದೆ ? "

ತಾನು ಪವಿತ್ರೆ ಅಂತಾ ಹೇಳುವುದರಿಂದ ಅವಳು, ಕಳಂಕದಿಂದ ತಪ್ಪಿಸಿಕೊಳ್ಳಲಾರಳು. ಅವಳ ನಿಜ ಚರಿತ್ರೆ ಎಲ್ಲಾ ತರಹದ ಪರೀಕ್ಷೆಗೆ ಅವಳು ಸಿದ್ದವಿದ್ದಾಗಲೇ ಅವು ಸುಳ್ಳೊ ನಿಜವೋ ಅನ್ನುವುದು ತಿಳಿಯುತ್ತವೆ. ಇದಕ್ಕೆ ಅವಳು ತಯ್ಯಾರಿರದಲ್ಲಿ .., ಅವಳ ನಿಜ ಸ್ವರೂಪ ಬಯಲು !!

====================================================

ಇಂದಿನ ಸಾಮಾಜಿಕ ಚಿಂತನೆಯ ವಿಷಯ

ಗರ್ಭಗುಡಿ

ಮನಸೆನೋ ವಿಶಾಲವೆ ನನ್ನದು


ಹೃದಯದ ಗರ್ಭಗುಡಿಯ ಬಾಗಿಲು ಚಿಕ್ಕದು

ಬರುವುದಾದರೆ.., ತಲೆ ಬಾಗಿಯೇ ಬರಬೇಕು

ಅಹಂ ಬಿಟ್ಟು, ಭಕ್ತಿಯನಿಟ್ಟು !

Monday, March 03, 2014

ಹಿತವಚನ

ಸಣ್ಣ ತಪ್ಪುಗಳಿಗೆ " ಕ್ಷಮೆ " ಇರುತ್ತದೆ ಆದರೆ ನಂಬಿಕೆ ಮುರಿದ ಮೇಲೆ " ಕ್ಷಮೆ" ಕೂಡಾ ಮರೆಯಾಗುತ್ತದೆ.

Sunday, March 02, 2014

ನೆನಪುಗಳು

ಅವಳು ಹಾಸಿಗೆಯಿಂದ ಎದ್ದಳು, ಕಣ್ಣುಗಳ ಉಜ್ಜುತ್ತಾ ಮನೆಯಲ್ಲಾ ನಡೆದಾಡುತ್ತಾ ಏನನ್ನೋ ಹುಡುಕುತ್ತಿದ್ದಳು. ಮನೆಯ ಮುಂದಿನ ಅಂಗಳ, ಹಿತ್ತಲು ಆ ರೂಮು, ಈ ರೂಮು, ಮನೆಯಲ್ಲಾ ಅಡ್ಡಾಡಿ ಹುಡುಕಿದರೂ ಸಿಗಲಿಲ್ಲಾ...ಅಮ್ಮಾ ಅನ್ನುತ್ತಾ ಅಡುಗೆಯ ಮನೆಯ ಒಳಗೆ ಹೋಗುತ್ತಾಳೆ. ಅವಳ ಅಮ್ಮ ಕಾಫ಼ಿ ಮಾಡುತ್ತಾ ಇರುತ್ತಾರೆ. ಅಮ್ಮಾ " ಮಾಮಾ ಎಲ್ಲಿ " ? ಮಾಮಾ ಆಫ಼ಿಸಿಗೆ ಹೋಗಿದ್ದಾರೆ, ಬೇಗ ಬರ್ತಾರೆ....!, ನಿನಗೆ ಬೇಗ ಸ್ನಾನ ಮಾಡಿಸ್ತಿನಿ ಬಜ್ಜಲ ಮನೆಗೆ ಹೊರಡು ಅಂದಳು ಅಮ್ಮ. ಅಮ್ಮ ಬಂದು ಇವಳಿಗೆ ಸ್ನಾನ ಮಾಡಿಸಲಿಕ್ಕೆ ನೀರು ಹಾಕಿ ಸೋಪು ಹಚ್ಚುತ್ತಾರೆ..ಮತ್ತೆ ಅವಳ ಪ್ರಶ್ನೇ ಅಮ್ಮಾ ಮಾಮಾ ಎಲ್ಲಿ ? ಮಾಮಾ "ಬೂ" ಬೇಗ ಬೇಗ ಸ್ನಾನಾ ಮಾಡು ಮಾಮಾ ಬರ್ತಾರೆ.. ಸ್ನಾನಾ ಆಯ್ತು, ಪಿಂಕು ಬಾರಮ್ಮಾ ಇಲ್ಲಿ ಟಿಫ಼ನ್ ತಿನ್ನಸ್ತಿನಿ ಮತ್ತೆ ಅವಳ ಪ್ರಶ್ನೆ " ಮಾಮಾ ಎಲ್ಲಿ " ? ತಿಂಡಿ ಆಯ್ತು , ಇವಳ ಕಾಟ ತಾಳಲಾರದೇ ಅಜ್ಜಿ ಪಿಂಕುಳನ್ನು ಕರೆದುಕೊಂಡು ತರಕಾರಿ ತರಲು ಹೋಗುತ್ತಾರೆ..., ಎರಡು ನಿಮಿಷ ಸುಮ್ಮನಿದ್ದ ಪಿಂಕು ಮತ್ತೆ ಅಜ್ಜಿಗೂ ಕೂಡಾ ಅದೇ ಪ್ರಶ್ನೆ..? ಅಜ್ಜಿ... " ಮಾಮಾ ಎಲ್ಲಿ " ಇವರುಗಳು ಮನೆಗೆ ಮರಳಿದಾಗ ೧ ಗಂಟೆ, ಸೊಸೆ ಇನ್ನೂ ಮಾಮನ ದಾರಿ ನೋಡುತ್ತಲೇ ಕುಳಿತ್ತಿದ್ದಳು. ಅಷ್ಟೊತ್ತಿಗೆ ಗೇಟಿನ ಶಬ್ದ ಆಯ್ತು....., ಪಿಂಕು ಓಡಿ ಹೋಗುತ್ತಾಳೆ..... ಅಜ್ಜೀssss....... " ಮಾಮಾ ಬಂಡ್ರು " ಮಮ್ಮಿ " ಮಾಮಾ ಬಂಡ್ರು " ಅವಳಿಗೆ ಎಲ್ಲಿಲ್ಲದ ಖುಶಿ, ಓಡಿ ಹೋಗಿ ಮಾಮನ ತೋಳು ಸೇರುತ್ತಾಳೆ..., ಬಾರಪ್ಪಾ ಈವಾಗ ಬಂದಿಯಾ, ಪಿಂಕು ಬೆಳಿಗ್ಗೆಯಿಂದ ನಿನ್ನ ಕೇಳಿ ಕೇಳಿ ತಲೆ ಕೆಡಸಿಬಿಟ್ಟಳು. ತೊಗೋ ನಿನ್ನ ಸೊಸೆನ ನೀನೆ ಸಮಾಧಾನ ಮಾಡು...!:) ಇದು ನಡೆದದ್ದು ೧೦-೧೨ ವರ್ಷಗಳ ಕೆಳಗೆ..., ಮಕ್ಕಳು ಒಬ್ಬರನ್ನ ಹಚ್ಚಿಕೊಂಡರೆ ಎಷ್ಟೊಂದು ಆತ್ಮಿಯತೆ ಬೆಳೆಸಿಕೊಳ್ಳುತ್ತಾರೆ ಅಲ್ವಾ..?? ಈಗ ಅವಳು ದೊಡ್ಡವಳಾಗಿದ್ದಾಳೆ, ನನ್ನ ಹತ್ತಿರ ಮಾತನಾಡಲು ನಾಚುತ್ತಾಳೆ. ನಾನು ಅವಳೊಂದಿಗೆ ಮಾತನಾಡಿದ ಮಾತುಗಳು, ಅವಳ ತುಂಟುತನಗಳು ಇನ್ನೂ ಕೂಡಾ ನನ್ನ ಮನದಲ್ಲಿ ಆ ನೆನಪುಗಳು ಹಚ್ಚು ಹಸಿರಾಗಿವೆ. ಅವಳು ನನ್ನ ಕಣ್ಣಿಗೆ ಇನ್ನೂ ೨ ವರ್ಷದ ಪುಟ್ಟ ಪಿಂಕು ಆಗಿಯೇ ಕಾಣುತ್ತಾಳೆ.

ಅವಿವೇಕಿಗಳು

ಒಂದು ಘಟನೆಯಿಂದ ದುರ್ಘಟನೆ,
ಒಂದು ಚುಂಬನ ಕೂಡ ತರಬಲ್ಲದು ಜೀವಕೆ ಅಂತ್ಯ
ಬಹಿರಂಗವಾಗಿ ಮುತ್ತಿಟ್ಟ ಪತ್ನಿ
ಕೋಪಗೊಂಡ ಗಂಡನು ಇಟ್ಟನು ಅಗ್ನಿ
ಪತ್ನಿ ಪರಲೋಕದಲ್ಲಿ...
ಗಂಡ ಆಸ್ಪತ್ರೆಯಲ್ಲಿ.....!! 

Friday, February 28, 2014

ಮೂಢರು

ಮೆಹೆಂದಿಯ ರಂಗು ಭಾಗ್ಯ ತರಲಿಲ್ಲ ಅವಳಿಗೆ

ಸಂಬಂಧಗಳ ಮಹತ್ವ ತಿಳಿಯದ ಮೂಢೆಗೆ

ಬಾಳು ಹಸುನಾಗುತ್ತಿತ್ತು ಹೇಗೆ ಮೂಢ ನಂಬಿಕೆಗೆ ?

Wednesday, February 26, 2014

ಆರಾಧನೆ

ಅವನ ಕಲ್ಪನೆಯಲ್ಲಿ ಹುಟ್ಟಿದ ಕನ್ಯೆಯ ಕುರಿತು..

ಬರೆದಿಹನು ಸಾವಿರ ಕವನ !

ಅವಳು, ಅವನೇ ವರವಾಗಿ ಬೇಕು ಅಂತಾ ಬಯಸುತ್ತಾ..

ಮಾಡಿಹಳು ಪೂಜಾ,ಹವನ !!

Tuesday, February 25, 2014

ಪಾಕಪ್ರವೀಣ

ಈ ಕಲಿಯುಗದಲ್ಲಿ ಹೆಣ್ಣುಮಕ್ಕಳಿಗಿಂತಲೂ ಗಂಡು ಮಕ್ಕಳೇ ಪಾಕಶಾಸ್ತ್ರದಲ್ಲಿ  ಪ್ರಾವಿಣ್ಯತೆ ಹೊಂದಿದ್ದಾರೆ , ನಂಬುವುದಿಲ್ಲವೇ ? ಉದಾಹರಣೆಗೆ : ನಮ್ಮ ಸುನಿಲ ನನ್ನೇ ತೊಗೊಳಿ, ಅವನು ಗೊಲಾಕಾರದ ಚಪಾತಿಗಳು, ಕ್ಯಾಬೇಜು ಪಲ್ಯಾ, ಅನ್ನ , ನುಗ್ಗೆಕಾಯಿ ಸಾರು , ಕ್ಯಾರೆಟ್ & ಮೂಲಂಗಿ ಸಾಲಡ್ಡು ಎಲ್ಲವೂ ಒಂದೇ ಗಂಟೆಯಲ್ಲಿ ತಯ್ಯಾರ ಮಾಡುತ್ತಾನೆ. ;) :D 

THOUGHT FOR THE DAY

People who walkout of relation with their EGO can gain nothing. People who are left out will get a greater experience and turn expertise in every field they walk through.

ಪ್ರೀತಿ

ಚಿನ್ನ ರನ್ನ ಬೇಡ ನನಗೆ..

ತಿಜೋರಿ ಸೇರುವ ದರ್ಜೆ..!

ಹೃದಯದಲ್ಲಿ ಬಂಧಿಸು ಸಾಕು

ಕೊಡು ನನಗೆ ಪ್ರೀತಿಯ ಸಜೆ !!



Friday, February 21, 2014

God Says..

God Says
" The reason why some people have turned against you and walked away from you without reason...has nothing to do with you. It is because I have removed them from your life because they cannot go where I'M taking you next. They would only hinder you at the next level because they have already served their purpose in your life. Let them GO and keep moving. GREATER is coming your way...says the Lord.

Courtesy : Internet

ನಡೆದು ಬಿಡು ಮುಂದೆ !!

ಆ ಹೃದಯಕೆ ಒಲವಿನ ಪರಿವಿಲ್ಲ

ಆ ಮನಸ್ಸಿಗೆ ಪ್ರೀತಿಯ ಬೆಲೆ ತಿಳಿದಿಲ್ಲ

ಭಾವನೆಗಳು ಅದಕೆ ಮುಟ್ಟುವುದಿಲ್ಲ

ನಡೆದು ಬಿಡು ಮುಂದೆ !!


ಗರ ಬಡಿದವರಿಗೆ ಬಿಡಿಸಲೂ ಬಹುದು

ಹಣದ ಹಿಂದೆ ಹೆಣಗಾಡುವರಿಗೆ

ಮಾನವನ ಭಾವಗಳು ತಿಳಿಯುವುದಿಲ್ಲ

ನಡೆದು ಬಿಡು ಮುಂದೆ !!


ದಾರಿ ತಪ್ಪಿದವರಿಗೆ ತಿದ್ದಿ ತೀಡಲೂ ಬಹುದು

ಅಟ್ಟಹಾಸದಿ ಸೊಕ್ಕಿನಲಿ ಮೆರೆಯುವರಿಗೆ

ತಿಳುವಳಿಕೆಯ ಮಾತು ಮನ ಹೊಕ್ಕುವುದಿಲ್ಲ

ನಡೆದು ಬಿಡು ಮುಂದೆ !!


ದೊಡ್ಡವರಂತಿರುವರು ಅನುಭವ ಹೊಂದಿರಬಹುದು

ನೀತಿಯ ಬೋಧಿಸಿದರೂ ಅರಿಯದವರಿಗೆ

ಮಚ್ಚಿಯ ಪೆಟ್ಟು ಕೂಡಾ ಕಲಿಸಲಾಗದು

ನಡೆದು ಬಿಡು ಮುಂದೆ !!


ನಿರೀಕ್ಷಣೆಯ ಸಮಯ ಮಿತಿ ಮೀರಿತು

ತಿರುಗಿ ಬರಲಾರದು ಇನ್ನೆಂದೂ

ಕಾದು ಕಾದಿಟ್ಟು ಇನ್ನು ಫಲವಿಲ್ಲ

ನಡೆದು ಬಿಡು ಮುಂದೆ !!

Thursday, February 20, 2014

ಚೆಲುವೆ

ನಸುಕಿನ ಮಬ್ಬಿನಲಿ

ಧ್ವನಿಯೊಂದು ಕೇಳುತಿದೆ

ರಾಗ ಬದ್ಧ ಶೃತಿಯಲಿ

ಸಂಗೀತವದು ಕೇಳುತಿದೆ

ನಡೆದೆ ಧ್ವನಿಯ ಅನುಸರಿಸಿ

ದೂರ ನದಿಯ ದಂಡೆಯ ಮೇಲೆ

ಕೇಶ ಹರಡಿ ಮುಖವ ಮರೆಯಾಗಿಸಿ

ಕೂತಿರುವಳೊಬ್ಬ ಬಾಲೆ

ಸದ್ದು ಮಾಡದೆ ಮೆಲ್ಲನೆ ಸಮೀಪಿಸಿ

ಇಣುಕಿ ನೋಡಿದರೆ

ನನ್ನದೇ ಬಿಳಿ ರಂಗವಲ್ಲಿ

ಬಣ್ಣ ತುಂಬುತ್ತಾ ಕೂತಿರುವಳು

ಮೈನವಿರೇಳಿಸುವ ಚೆಲುವೆ !!

THOUGHT FOR THE DAY

IT IS GOOD SIGN TO ACCEPT THE FAULTS/MISTAKES AND CREATE A ACTION PLAN TO AVOID THEM "


RATHER

" ARGUMENT OVER THE MISTAKES, ONLY MAKES THE THINGS WORST "

Wednesday, February 19, 2014

ಜೀವನ

ಜೀವನ ಯಾಕೋ ಕಪ್ಪು ಬಿಳಿ ಚಿತ್ರ

ಎಷ್ಟು ಹುಡುಕಿದರೂ ಸಿಗುತ್ತಿಲ್ಲ ಉತ್ತರ

ಬಾಳ ಹಾದಿ ಹೂವು ಮುಳ್ಳು ಅಂತಾರೆ

ನಡೆಯುವುದು ಹೇಗೆ ಬರೀ ಮುಳ್ಳೇ ಇದ್ದರೆ .. ?

Sunday, February 16, 2014

THOUGHT FOR THE DAY

Its easy to fool people who doesn't know about you.
On the contrary,
Its impossible to fool the people who know you better.

Saturday, February 15, 2014

ಮನೆ ಮಗಳು

ಅವಳು ಕಾಲಿಟ್ಟ ಕ್ಷಣದಲ್ಲಿ ಮನೆಗೆ ಏನೋ ಕಳೆ ಬಂದಂತೆ, ಸಾಮಾನ್ಯ ಹುಣ್ಣಿಮೆ ಅಮವಾಸ್ಯೆಗಳು ಈಗ ಹಬ್ಬಗಳಂತೆ, ನಸುಕಿನಲ್ಲಿ ಎದ್ದು ಮನೆಯ ಗೂಡಿಸಿ ಸಾರಿಸಿ ಸಿಂಗರಿಸುತ್ತಾಳೆ. ಎಲ್ಲರೂ ಏಳುವ ಮೊದಲು ತಾನು ತೈಯ್ಯಾರಾಗುತ್ತಾಳೆ. ಪೂಜೆ ಪಾಠ ಮಾಡಿ, ಮನೆಯ ದೇವರುಗಳಿಗೆಲ್ಲಾ ಬೆಳಗುತ್ತಾಳೆ. ಮನೆಯ ತುಂಬೆಲ್ಲಾ ಭಕ್ತಿ ಗೀತೆಗಳ ಸಂಗೀತ. ಗಂಡ, ಅತ್ತೆ ಮಾವಂದಿರ ನಮಸ್ಕರಿಸುತ್ತಾಳೆ. ಅವರುಗಳು ಮುಖತೊಳೆದು ಬರುವಷ್ಟರಲ್ಲಿ ಚಹಾ ತಿಂಡಿ ತಯ್ಯಾರಾಗಿರುತ್ತದೆ. ಅವಳಿಗೆ ಇಂತಹ ಒಂದು ಕನಸ್ಸಿತ್ತು, ತುಂಬಿದ ಸಂಸಾರ, ದೊಡ್ಡ ಮನೆ, ಆ ಮನೆಯಲ್ಲಿ ದೇವರಂತಹ ಅತ್ತೆ ಮಾವ, ತನಗೆ ಪ್ರಾಣಕ್ಕಿಂದ ಹೆಚ್ಚಾಗಿ ಪ್ರೀತಿಸುವ ಗಂಡ. ಆ ಮನೆಸಿಕ್ಕಿದ್ದುದಕ್ಕೆ ಅವಳಿಗೆ ತುಂಬಾ ಖುಷಿ. ಮಾವರನ್ನು ಅವಳು " ಅಪ್ಪಾಜಿ " ಹಾಗು ಅತ್ತೆಯನ್ನು " ಅಮ್ಮಾ" ಎಂದೇ ಕರೆಯುತ್ತಾಳೆ. ಈ ಕಲಿಯುಗದಲ್ಲಿ ಇಂತಹ ಅತ್ತೆ,  ಮಾವ, ಗಂಡ ಸಿಕ್ಕಿದ್ದು ನನ್ನ ಪುಣ್ಯ ಅನ್ನುತ್ತಾಳೆ, ಆ ಸೊಸೆ. ಅಂದ ಹಾಗೆ ಅವಳು ಸೊಸೆಯಲ್ಲ ನಮ್ಮ " ಮನೆ ಮಗಳು " ಅನ್ನುತ್ತಾರೆ ಅವಳ ಅತ್ತೆ ಮಾಂವದಿರು.  ಇದೇ ಅಲ್ಲವೆ ಗೆಳೆಯರೇ ಚೊಕ್ಕ ಸಂಸಾರ, ಮನೆ ನಂದನವನ. ಎಲ್ಲರೂ ಬಯಸುವ " ವಾಡೆ ". ಶುಭ ದಿನ :)

Friday, February 14, 2014

ಕಹಿ ಸತ್ಯ

ಗೂಬೆಗಳು, ದೆವ್ವಗಳು, ಸೂಳೆಗಳು, ರಾತ್ರಿಯಲ್ಲೇ ಕಾರ್ಯಾಚರಣೆ ಮಾಡುತ್ತವೆ ಏಕೆಂದರೆ, ಅವುಗಳಿಗೆ ಬೆಳಕನ್ನು ಎದಿರಿಸುವ ಧೈರ್ಯ ಇರುವುದಿಲ್ಲ.

ಸಣ್ಣ ಕಥೆ

ಅವನು ಎಂದೆಂದೂ ತನಗಾಗಿ ದೊಡ್ಡ ದೊಡ್ಡ ಮಾಲಿನೊಳಗೆ ಶಾಪಿಂಗ್ ಮಾಡಿದವನಲ್ಲ.., ಅಂದು ಏಕೊ ತನ್ನ ಪ್ರೀತಿ ಪಾತ್ರರಿಗೆ ಉಡುಗೊರೆ ಕೊಡಲೆಂದು ಆ ಭವ್ಯ ವ್ಯಾಪಾರ ಮಳೆಗೆಗೆ ಕಾಲಿಟ್ಟ. ಮಳಿಗೆ ತುಂಬಾ ಜನರ ಹಿಂಡು, ಕಿಕ್ಕಿರಿದು ತುಂಬಿತ್ತು.ಹುಡುಗರು ತಮ್ಮ ಪ್ರೇಯಸಿಗೆ, ಅಪ್ಪಾ ಅಮ್ಮಂದಿರು ತಮ್ಮ ಮಕ್ಕಳಿಗೆ , ಅಜ್ಜಿ ತಾತಂದಿರು ತಮ್ಮ ಮಕ್ಕಳು ಮೊಮ್ಮಕ್ಕಳಿಗೆ ಖರಿಧಿಸುವಲ್ಲಿ ತಲ್ಲೀನರಾಗಿದ್ದರು.ಅವನು ಒಂದು ಬಟ್ಟೆಯ ಅಂಗಡಿ ಹೊಕ್ಕು ಅಲ್ಲಿ ಹೊಸ ಹೊಸ ಉಡುಗೆಗಳ ಖರಿಧಿಸುವಲ್ಲಿ ನಿರತನಾದ. ಎಷ್ಟು ಹುಡುಕಿದರೂ ತನಗೆ ಮನಸೊಪ್ಪುವ ಉಡುಗೆ ಸಿಗುತ್ತಿರಲಿಲ್ಲ. ದೂರದಲ್ಲಿ ಒಂದು ಉಡುಗೆಯ ಕಂಡು ಅದರ ಹತ್ತಿರ ಹೊರಡುತ್ತಾನೆ. ಓಹೋ ಹೊಸ ವಿಯಾಸ, ವಿಭಿನ್ನ ಉಡುಗೆ ಅದನ್ನು ನೋಡುತ್ತಾ ಖುಶಿಯಲ್ಲಿದ್ದಾಗ.....ಒಂದು ಪುಟ್ಟ ಮಗು, ಚಂದದ ಉಡುಗೆ ತೊಟ್ಟು  ಇವನ ಹತ್ತಿರ ಬಂದು, ಇವನ ಪ್ಯಾಂಟನ್ನು ಹಿಡಿದು ಎಳೆಯುತ್ತಾ..ಆಪ್ಪಾ ಅಂದು ಕರೆಯುತ್ತದೆ...ಇವನಿಗೆ ಆಶ್ಚರ್ಯ..! ಯಾರದಿದು ಮಗು ? ತನ್ನ ಅಪ್ಪಾ ಅಮ್ಮಂದಿರಿಂದ ತಪ್ಪಿಸಿಕೊಂಡಿದೆ ಅನ್ನುತ್ತಾ ಆ ಮಗುವನ್ನು ಎತ್ತಿಕೊಂಡು ಅಂಗಡಿಯ ರಿಸಿಪಶನ್ ಹತ್ತಿರ ಹೋಗುತ್ತಾನೆ, ಅಷ್ಟರಲ್ಲಿ ಹಿಂದಿನಿಂದಾ ಒಂದು ಧ್ವನಿ ಕೇಳಿಬರುತ್ತದೆ, ಅದು ಒಂದು ತಾಯಿ ಕಂದನ ಕಳೆದುಕೊಂಡ ದನಿ, ಆ ಮಗು ತಾಯಿಯ ಧ್ವನಿ ಕೇಳಿದ ಕೂಡಲೇ ಅವನ ತೋಳಿನಿಂದ ಇಳಿದು ತಾಯಿಯ ಹತ್ತಿರ ಓಡಿಹೊಗುತ್ತದೆ. ತಾಯಿಯ ತೋಳೆರಿದ ಮಗು ಅವನ ಹತ್ತಿರ ಕೈ ಮಾಡುತ್ತ.....ಅಪ್ಪಾ ಅನ್ನುತ್ತದೆ...ಅವಳು ಅವನ ಕಡೆ ತಿರುಗಿ ನೋಡುತ್ತಾಳೆ., ಒಂದು ನಿಮಿಷ ಸ್ಥಬ್ಧ..... ಇಬ್ಬರಿಗೂ ಆಶ್ಚರ್ಯ....!! ಅವಳು ಅವನ ಕಾಲೇಜಿನ ಪ್ರೇಯಸಿ....ಎಷ್ಟೋ ವರ್ಷಗಳ ನಂತರ ಭೇಟಿ...! ಅವಳನ್ನು ಗಮನಿಸಿದ ಅವನಿಗೆ ಕಾಣಿಸಿದ್ದು ....  ಕುಂಕುಮವಿಲ್ಲದ ಅವಳ ಹಣೆ ..., ತಾಳಿ  ಇರದ ಕೊರಳು...! ಅಲ್ಲೊಂದು ಮೌನ, ಅರೆ ಇವಳ ಮದುವೆ ಆಗಲೇ ಆಗಿತ್ತಲ್ಲ....? ಇವಳೇಕೆ ಹೀಗೆ....???? ಅವಳ ಗಂಡ ಈ ಪುಟ್ಟ ಕಂದಮ್ಮ ಹುಟ್ಟುವ ಹೊತ್ತಿಗೆ ಇಹಲೋಕ ತ್ಯಜಿಸಿದ್ದ.........!!

Wednesday, February 12, 2014

THOUGHT FOR THE DAY

BEAUTY IS ONLY FOR VISION, WHEREAS.., CHARACTER IS THE MEDIUM TO TOUCH ONE'S HEART.

Tuesday, February 11, 2014

ಒಲುಮೆ

ನನ್ನ ಕವನದಲ್ಲಿ,


ಅವಳದೇ ಉಲ್ಲೇಖ ,

ಅನ್ನುವುದು ಅವಳಿಗೆ " ಹಿರಿಮೆ "

ನನ್ನ ಕವನಕೆ ,

ಅವಳೇ ಪ್ರೇರಣೆ ,

ಅನ್ನುವುದು ನನ್ನ " ಒಲುಮೆ "

ಆಕರ್ಷಣೆ

ಎಲ್ಲೊ ದೂರದ ಮೂಲೆಯಲ್ಲಿ ಕೂತು ಅವಳು ನನ್ನ ಗಮನಿಸುತ್ತಾಳೆ!

ನನ್ನ ದೃಷ್ಟಿ ಅವಳ ಕಡೆ ಬಿದ್ದೊಡನೆ ಮರೆಯಾಗುತ್ತಾಳೆ..

ಇನ್ನೂ ಕದ್ದು ನೋಡುವೆ ಏಕೆ ? ಗೀಚಿಬಿಡು ಒಲವಿನ ಕವನ, ಈ ಹೃದಯದ ಹಾಳೆಯ ಮೇಲೆ.!!

ಶುಭ್ರ ಪ್ರೇಮ

ನನ್ನ ಹೃದಯವಲ್ಲ ಇದು ಗರ್ಭಗುಡಿ,

ನೀ ಪಾದಾರ್ಪಣೆ ಮಾಡಿ ನೆಲೆಸು,

ದೇವಿಯಂತೆ ನಿನ್ನ ಆರಾಧಿಸುವೆ !

Monday, February 10, 2014

ಮೌನ ವಿರಹ

ಬಂಡೆಗಳಿಗೆ ಜಲಪಾತದ ಪ್ರೀತಿ ತಿಳಿಯುವುದಿಲ್ಲ
ಪ್ರೀತಿ ಹರಿದು ಪಕ್ಕದ ಬಂಡೆಗೆ ಎರೆದಾಗ..," ಮೌನ ವಿರಹ "

ಚುಟುಕ

ಭಾವನೆಗಳ ಬೆಸುಗೆ

ಮನಸ್ಸುಗಳ ಅಪ್ಪುಗೆ

ವಸಂತ ಬರುವ ಕಾಲಕೆ..

ಹೃದಯಗಳ ಮಿಲನ

ಇನ್ನು ಶುರು ಪ್ರೇಮ ಕವನ.

ಭ್ರೂಣ

ಮನಸ್ಸು ಮನಸ್ಸು ಕೂಡಿ

ಪ್ರೀತಿಯ ಗಾಳಿ ಬೀಸಿ

ಹೃದಯಗಳು ಬೆಸೆದವು ಹಾಡಿ

ಅನುರಾಗದಿ ಉಕ್ಕಿತು ಕವನ

ಮೊಳೆಯಿತು ಅವಳಲಿ..,ಅವರಿಬ್ಬರ ಪ್ರೀತಿಯ ಭ್ರೂಣ !!

ಹೆಂಡ್ತಿ ಬೇಕು..

ನೀಳ ವರ್ಣದವಳಿದ್ದರೂ ಸರಿಯೆ

ಎಣ್ಣೆಗೆಂಪು ಇದ್ದರೂ ಸರಿಯೆ

ಶುಭ್ರ ಮನಸಿದ್ದರೆ ಸಾಕು

ಹೆಂಡ್ತಿ ಬೇಕು..


ಬಡವರಾದರೂ ಸರಿಯೆ

ಅನಾಥಳಿದ್ದರೂ ಸರಿಯೆ

ಗುಣವಂತೆ ಆಗಿದ್ದರೆ ಸಾಕು

ಹೆಂಡ್ತಿ ಬೇಕು..


ಕಛೇರಿಗೆ ತೆರಳುವಾಗ ನಗುತ್ತಾ ಕೈ ಬೀಸಬೇಕು

ಮರಳುವ ವೇಳೆಯಲಿ ಬಾಗಿಲಲ್ಲಿ ಕಾಯುತ್ತಿರಬೇಕು

ಗಂಡನಾದರಿಸುವಳಾಗಿದ್ದರೆ ಸಾಕು

ಹೆಂಡ್ತಿ ಬೇಕು..


ಮುದ್ದು ಮಾಡುತ್ತಿರಬೇಕು

ಮುದ್ದಿಸಿವಂತಿರಬೇಕು

ಮುದ್ದು ಮುದ್ದು ಮಕ್ಕಳಾದರೆ ಸಾಕು

ಹೆಂಡ್ತಿ ಬೇಕು..


ಎಲ್ಲಾ ನಮ್ಮದು ಅಂತಿರಬೇಕು

ನಮ್ಮದೇ ಮನೆಯಿದು ಅಂದುಕೊಳ್ಳಬೇಕು

ನಮ್ಮತನವ ಮೆರೆಯುತ್ತಿದ್ದರೆ ಸಾಕು

ಹೆಂಡ್ತಿ ಬೇಕು..


ತವರು ಮನೆಯ ಜ್ಯೊತಿ ಅವಳು

ಗಂಡನ ಮನೆ ಬೆಳಗುತಿರಬೇಕು

ಮೆನೆ ಮೆಚ್ಚುವ ಮಗಳಾಗಬೇಕು

ಹೆಂಡ್ತಿ ಬೇಕು..


ಪುಟ್ಟ ಗೂಡಿನವಳಾದರೂ ಸರಿಯೆ

ದಿಟ್ಟ ಹೃದಯವಿರಬೇಕು

ಕೆಟ್ಟ ಸಮಯವ ಎದುರಿಸುವಂತಿರಬೇಕು

ಹೆಂಡ್ತಿ ಬೇಕು..

ಮಾಂತ್ರಿಕೆ

ಅವಳು ನನ್ನ ಕವಿತೆಗೆ ಪ್ರತಿಕ್ರಯಿಸದಿದ್ದರೂ,

ಅವಳು ಓದಿಯೇ ಇರುತ್ತಾಳೆ ಅನ್ನುವದು ನನ್ನ ನಂಬಿಕೆ !

ಏಕೆಂದರೆ, ...

ಅವಳು ಬರೆವ ಪ್ರತಿ ಕವನಗಳ ಸಾಲಿನಲ್ಲೂ

ನನಗೆ ಉತ್ತರ ನೀಡುತ್ತಿರುವ ಮಾಂತ್ರಿಕೆ !!



Friday, February 07, 2014

ಗೊಂದಲ

ಆ ಕಣ್ಣುಗಳು ಬಿಡದಂತೆ ದಿಟ್ಟಿಸುತ್ತಿದ್ದವು ಆ ತುಟಿಗಳನು
ಏನು ಆಕರ್ಷಣೆಯೋ ತಿಳಿಯಲಾರದೇ, ಕೇಳಿಯೇ ಬಿಟ್ಟಳು ಅವನಿಗೆ.....ನಿನ್ನ ತುಟಿಗಳು ಇಷ್ಟು ಕೆಂಪಗಿರುವ ಕಾರಣ...ಹಚ್ಚಿರುವೆಯಾ .. ತುಟಿಗಳಿಗೆ ಬಣ್ಣ....? ಅಯ್ಯೋ ಇಲ್ಲಾ ಕಣೆ ಮಾರೈತಿ, ಛಳಿಗೆ ತುಟಿ ಒಡೆದು ಬಿರುಕು ಬಿಟ್ಟಿವೆ.. ಅಂದ ಅವನು..! ತುಟಿಗೆ ಹಚ್ಚಿರುವೆ ವ್ಯಾಸಲೀನಿನ ಲೇಪನ. :)

ಕಟು ಸತ್ಯ

ಪ್ರಮಾದವ ಎಸಗಿದ ಜನರು..

ಅದನ್ನು ಮುಚ್ಚಲು ಸಜ್ಜನರ ತರ ನಟಿಸಿದರೆ, ಅವರು ಸಜ್ಜನರಾಗುವುದಿಲ್ಲ..!

ಅವರ ಕೃತ್ಯ ಶ್ವಾನದಂತೆ...,

ಬಹಿರ್ದೆಶೆಗೆ ಹೋಗಿ....,ನೆಲವ ಕೆದರಿ.., ಮಣ್ಣು ಚಿಮ್ಮಿ.., ಮುಚ್ಚುವಂತೆ..!

Thursday, February 06, 2014

ಪಶ್ಚಾತಾಪ

ಹೂ ಮನಸ್ಸು ಅಂತಾ ತಿಳಿದು ಪ್ರೀತಿ ಮಾಡಿದ್ದು ತಪ್ಪಾಯಿತು
ಕ್ರೂರ ಹೃದಯವದು ಪ್ರೀತಿಯೇ ಅಲ್ಲಾ ದ್ವೇಶಕ್ಕೂ ಅರ್ಹವಲ್ಲದ್ದು !!

Thought for the day

To love is nothing, to be loved is something but to love and to be loved by the one you love,that is EVERYTHING. Never take love for granted.

Friday, January 31, 2014

ಆಟ

ಭಾವದ ಜೊತೆ ಭಾವನೆಗಳ ಆಟ
ಮನಸ್ಸಲ್ಲೆ ಮಂಡಿಗೆ ಅರೆವ ಜಂಜಾಟ
ನಮ್ಮ ನಮ್ಮ ಆಟದೊಳಗೂ ಸೋತೆವೆಂದರೆ ನಾವು ,
ಕಣ್ಣೀರ ಹರಿಸಿ, ನಾವೇ.. ಅಳುತ್ತಾ ಕೂಡುವೆವು !!

ಕಥೆ-ವ್ಯಥೆ

ಮಾಯಾ ನಗರೀಯ ಶೋಕಿಗೆ ಬಿದ್ದರೆ ಯುವ ಜನತೆ
ಹಣಕ್ಕಾಗಿ ಜಗಳ ಅಪ್ಪಾ ಅಮ್ಮಂದಿರ ಜೊತೆ
ವಿದ್ಯಾಭ್ಯಾಸ ಮಠ...ಅಲ್ಲಿಗೆ ಇವರ ಕಥೆ..ಬರೀ ವ್ಯಥೆ.!!

ಹೀಗೂ ಉಂಟೆ..??

ಅವಳೆದುರಿಗೆ ಬಂದರೆ ..
ಬಾರಿಸಿದಂದಾಗುತ್ತದೆ ಹೃದಯ ಮಂದಿರದ ಗಂಟೆ !
ಅವಳೆನಾದರೂ ಲೂಟಿ ಮಾಡಿ ಹೊರಟರೆ..
ತಲೆ ಚಚ್ಚಿಕೊಳ್ಳುತ್ತಾ ಹೇಳಬೇಕು.., ಹೀಗೂ ಉಂಟೆ..??

Thursday, January 30, 2014

ಸೂಳೆಗೊಂದು ಶಾದಿಭಾಗ್ಯ

ಕುವರಿ ಸೂಳೆಗೆ ಬೇಕಂತೆ,


ಒಂದು ಗಂಡು ಕಟ್ಟಿದ ತಾಳಿ

ಗಂಡನೊಡನಾಟ ಬೇಡ ,

ಸಂಸಾರದ ಸ್ವಾರಸ್ಯ ಬೇಡ

ಕತ್ತಿನೊಳಗೆ ಇದ್ದರೆ ಸಾಕು ತಾಳಿ

ಹಾದರಕ್ಕೆ ಸಿಕ್ಕಂತೆ ಸುರಕ್ಷಿತ ದಾರಿ

ಇವಳು,

ಸ್ತ್ರಿ ಜಾತಿಯೇ ನಾಚುವಂತ ಹೆಮ್ಮಾರಿ !!

Thursday, January 23, 2014

ಮನೆಯ ಸೊಸೆ

ಎಲ್ಲರೂ ಮೆಚ್ಚಿದ ನೆಚ್ಚಿನ ಸೊಸೆ

ಮನೆಯ ಬೆಳಗುವ ಬೆಳ್ಳಿ ಹಣತೆ

ಬಲಗಾಲ ಹಚ್ಚಿ ಶುಭ ಜೋಳದ ಸೇರು

ಪಾದವಿಟ್ಟೊಡನೆ ಆ ಮನೆಯೇ ಶಾಶ್ವತ ಸೂರು

ಮನೆಯಲ್ಲಿ ನಡೆದಳು ಕೈಯಲ್ಲಿ ಹಿಡಿದು ಕಡಗೋಲು

ಅಡುಗೆ ಮನೆಯ ಒಡತಿ ಇವಳಾದಳು ನೋಡು

ರೊಟ್ಟಿ ಮಾಡಲು ಇವಳು ಬಹಳ ಗಟ್ಟಿ

ಬಡಿ-ಬಡಿದು ಬೇಯಿಸಿದಳು ರುಚಿ ರುಚಿ ರೊಟ್ಟಿ

ಕರ ಕುಶಲ ವಸ್ತುಗಳ ಮಾಡುವುದರಲ್ಲೂ ಇವಳ ಆಸಕ್ತಿ

ಕೈಯಲ್ಲೆ ಹೆಣೆದು ಅರಳಿಸಿದಳು ಚಂದನೆಯ ಬುಟ್ಟಿ

ಮನೆಯವರ ಮನ ಗೆದ್ದು ನೀ ನೆಲಸೆ

ಸಿದ್ದಿಸಿ ನೀ ತೋರಿಸು.., ಮನೆಗೆ ತಕ್ಕ ಸೊಸೆ !

Wednesday, January 22, 2014

ವಿಸ್ಮಯ ಪ್ರೀತಿ

ಕಣ್ಣುಗಳಲ್ಲೇ ಪ್ರೀತಿಯ ವಿನಿಮಯ
ಭಾವಗಳಲ್ಲೇ ಅವರಿಬ್ಬರ ಪಯಣ
ಹೃದಯ ಬಡಿತಗಳೇ ಸವಿಗಾನ
ಮೌನ ರಾಗವೇ ಅವರ ಪ್ರಣಯ ಗೀತೆ
ಇವರ ಪ್ರೀತಿ ಪ್ರಜ್ವಲಿಸಲು ಬೇಕೆ..?
ಯಾವುದಾದರೂ ಹಣತೆ !!

ಪ್ರೇಮ ಪ್ರಸಂಗ

ಅಂದು ಎಂದಿನಂತೆ ಸೂರ್ಯ ಆಗಸದಲ್ಲಿ ಬೆಳಗುತ್ತಿದ್ದ. ಕಾಲೇಜು ಮೈದಾನಲ್ಲಿ ತಮ್ಮ ತಮ್ಮ ಬಸ್ಸುಗಳನ್ನು ಇಳಿದು ವಿಧ್ಯಾರ್ಥಿಗಳು ತಮ್ಮ ಕ್ಲಾಸ್ ರೂಮಿನಡೆಗೆ ಹೊರಟಿದ್ದರು. ಆ ಹುಡುಗಿ (ನಾಯಕಿ) ತನ್ನ ಸ್ನೇಹಿತೆಯೊಡನೆ ಕ್ಲಾಸಿನೊಳಗೆ ಹೋಗಿ ಕೂರುತ್ತಾಳೆ.
ಹುಡುಗಿಯರು ತಮ್ಮದೆ ಲೋಕದ ಮಾತುಕತೆಗಳಲ್ಲಿ ತಲ್ಲೀನರಾಗಿರುತ್ತಾರೆ. ನಾಯಕ ತನ್ನ ಸ್ನೇಹಿತರೊಡನೆ ಬಸ್ಸಿನಲ್ಲಿ ಬಂದು ಇಳಿಯುತ್ತಾನೆ. ಎಲ್ಲ ಸ್ನೇಹಿತರು ಇವನ ಪ್ರೇಮ ಕತೆ ತಿಳಿದು ಇವನಿಗೆ ಕಾಲು ಎಳೆಯುತ್ತಿರುತ್ತಾರೆ. ಆ ಹುಡುಗನ ಮುಖದಲ್ಲಿ ಅಂದು ಖುಶಿ ಕುಣಿದಾಡುತ್ತಿತ್ತು. ಹೇ ಗೆಳೆಯಾ, ಅವಳ ಪರಿಚಯ ನಿನಗಿದೆ, ಅವಳು ನಿನ್ನೊಡನೆ ಬೆರೆತು ಮಾತನಾಡುತ್ತಾಳೆ. ಅವಳಿಗೂ ನೀನಂದರೆ ಇಷ್ಟಾ ಅನಿಸುತ್ತೆ.., ನೀನೇಕೆ ನಿನ್ನ ಪ್ರೇಮವನ್ನು ಅವಳ ಮುಂದೆ ಪ್ರಸ್ತಾಪಿಸಬಾರದು ಅನ್ನುತ್ತಾರೆ. ಮೊದಲಿಗೆ ಈ ಪ್ರೇಮ ಪ್ರಸಂಗಳಿಗೆ ಸರಿ ಸಮಯವಲ್ಲ, ಸುಮ್ಮನೆ ಬಿಡ್ರಪ್ಪಾ ನನ್ನನ್ನ....., ತಲೆ ಕೆಡಿಸಬೇಡಿ..ಅಂತಾ ಹೇಳುತ್ತನೆ. ಲೋ ಶಿಶ್ಯಾ "Its now or never " ಏನೇ ಆಗಲಿ ಹೇಳಿಬಿಡೊ..., ಮಂದಿನದು ಮುಂದೆ ನೋಡಿದರಾಯ್ತು. ಅಂದರು ಗೆಳೆಯರು. ಗಟ್ಟಿ ಹೃದಯ ಮಾಡಿಕೊಂಡು ಅವನು ಅವಳ ಕ್ಲಾಸಿನ ಹತ್ತಿರ ನಡೆದ, ಗೆಳೆಯರು ಅವನ ಹಿಂದಿಂದೆ ಬಂದರು..ಲೋ ನೀವೆಲ್ಲರು ಹೀಗೆ ಬಂದರೆ ಅವಳಿಗೆ ಕೋಪ ಬರಬಹುದು, ನೀವೆಲ್ಲರೂ ದೂರದಲ್ಲಿರಿ, ನಾನು ಹೋಗಿ ಬರುತ್ತೇನೆ ಅಂದ. ಗೆಳೆಯರೆಲ್ಲಾ ನಾವು ಕಾಫಿ ಕುಡಿಯುತ್ತಾ ಕುಳಿತ್ತಿರುತ್ತೇವೆ ಅಂತಾ ಹೇಳಿ ಅಲ್ಲಿಂದ ಜಾಗಾ ಖಾಲಿ ಮಾಡಿದರು. ನಾಯಕ ಆ ಸ್ನೇಹಿತೆಯರು ಕುಳಿತ ಕ್ಲಾಸಿನಲ್ಲಿ ಹೊರಡುತ್ತಾನೆ.., ಇಬ್ಬರನ್ನು ಮಾತನಾಡಿಸಿ ನಂತರ ಅವಳ ಗೆಳತಿಗೆ, ನೀನು ಸ್ವಲ್ಪ ನಮ್ಮನ್ನು ಏಕಾಂತವಾಗಿ ಬಿಡುತ್ತೀಯಾ ? ನನಗೆ ಇವಳ ಹತ್ತಿರ ಸ್ವಲ್ಪ ಮಾತನಾಡಬೇಕಿದೆ ಅಂದಾ..! ಅಲ್ಲಿಗೆ ಆ ಹುಡುಗಿಯರಿಗೆ ಇವನು ಬಂದ ವಿಷಯ ತಿಳಿದು ಹೋಗುತ್ತದೆ, ನಾಯಕಿ - ನಮ್ಮಿಬ್ಬರಲ್ಲಿ ಏನೂ ಮುಚ್ಚುಮರೆ ಇಲ್ಲಾ, ಇವಳೂ ಇರಲಿ ಹೇಳು ಅಂದಳು. ಕಸಿವಿಸಿಗೊಂಡ ನಾಯಕ ವಿನಮ್ರವಾಗಿ ಆಕೆಯ ಗೆಳತಿಕೆ ದಯವಿಟ್ಟು ೫ ನಿಮಿಷ ಅಂತಾ.. ಕೇಳಿದುದ್ದಕ್ಕೆ ಅವಳು ಒಪ್ಪಿ ಹೊರ ನಡೆಯುತ್ತಾಳೆ..! ಗೆಳತಿಯನ್ನು ಕಳಿಸಿದ್ದು ಆಯ್ತು, ಆದ್ರೆ ಹೇಗೆ ವಿಷಯ ಶುರು ಮಾಡಬೇಕು ಅಂತಾ ತೊಚದಾಯಿತು.., ಸುಮ್ಮನೆ ಕುಶಲೋಪಚಾರಿ ಮಾತುಗಳಾನಾಡುತ್ತಾನೆ, ಒಮ್ಮೆ ಅವಳ ಮುಖವನ್ನು, ಮತ್ತೊಮ್ಮೆ ತಾನು ಕಟ್ಟಿದ ಗಡಿಯಾರವನ್ನು ನೋಡುತ್ತಿರುತ್ತಾನೆ..ಮಧ್ಯದಲ್ಲಿ ೨ ನಿಮಿಷ ಮೌನ....ಆಗ ಅವಳೇ ಮುಂದಾಗಿ ನೀನು ಏನೋ ಹೇಳಬೇಕು ಅಂತಿದ್ದೆ.....ಏನದು..... ಅಂದಳು....! ಅದು.....ಅದು....ಹೇಗೆ ಹೇಳಬೇಕು ಅಂತಾ ತಿಳಿಯುತ್ತಿಲ್ಲ.....ಮನದಲ್ಲೇ ಗಟ್ಟಿ ಜೀವ ಮಾಡಿಕೊಂಡು....ನಿನ್ನ ನಡೆ ನುಡಿ, ನಿನ್ನ ಮಾತುಗಳು ನಿನ್ನ ನೆನಪುಗಳು ಅನುಕ್ಷಣವು ನನ್ನ ಕಣ್ಣೆದಿರು ನಿಂತು ಕಾಡುತ್ತವೆ....ಬಹಳ ಯೋಚನೆ ಮಾಡಿದಾಗ ನನಗನಿಸಿತು...... " I think I'm in love with you " ಅವಳ ಮುಖದಲ್ಲಿ ಕೋಪವಿರಲಿಲ್ಲ.....ಅವಳು ಗಲಿಬಿಲಿಗೊಳ್ಳಲಿಲ್ಲ....ಶಾಂತವಾಗಿ ಮುಗುಳು ನಗೆ ಬೀರುತ್ತಾ.... ನನಗೆ ಆ ತರ ಭಾವನೆಗಳು ನಿನ್ನ ಬಗ್ಗೆ ಇಲ್ಲ, ನಾವು ಜಸ್ಟ ಫ್ರೆಂಡ್ಸ್.....! ನೀನು ಬೇಜಾರು ಮಾಡಿಕೊಳ್ಳಬೇಡ ಅಂದಳು.....ಮತ್ತೆ ಮೌನ....ಸರಿ ಸರಿ ಎಂದ ನಾಯಕ..., ಜೇಬಿನೊಳಗೆ ಕೈ ಹಾಕಿ ಅವಳಿಷ್ಟ ಪಡುವ ಚಾಕಲೇಟನ್ನು ಕೊಟ್ಟು ಅವಳಿಗೆ ಹಸ್ತಲಾಂಗನ ಮಾಡಿ ಹೊರ ನಡೆಯುತ್ತಾನೆ...ಹೊರಗೆ ಕುಳಿತ ಸ್ನೇಹಿತೆಯ ಹತ್ತಿರ ಹೋಗಿ ಅವಳಿಗೊಂದು ಚಾಕಲೇಟನ್ನು ಕೊಟ್ಟು ತನ್ನ ಗೆಳೆಯರ ಹತ್ತಿರ ನಡೆಯುತ್ತಾನೆ.....!

Tuesday, January 21, 2014

ಅವಳ ಕಣ್ಣೋಟ

ಅವಳ ಒಂದು ಧೀರ್ಘ ಕಣ್ಣೋಟ
ಹೃದಯ ತಟ್ಟಿ ಆದರಿಸಿದಂತಿದೆ..!
ಮನವ ಎದಿರು ಬಿಟ್ಟ ರಂಗೋಲಿಯಂತೆ
ಸ್ವಾಗತಿಸುತಿರುವುದು ಪ್ರಣಯದ ಆಟ !!

Saturday, January 18, 2014

ಪೈಪೋಟಿ

ಆ ಮನೆಯ ಭರ್ಜರಿ ಮದುವೆಯ ಕಂಡು
ವಧುಗಳ ಕೊಡಲು ನಾ ಮುಂದು.., ತಾ ಮುಂದು !
ಜೊತೆಗೆ ಕೊಡುವರಂತೆ ಕೋಟಿ ಕೋಟಿ
ಆ ಮನೆಗೆ ಸೊಸೆಯಾಗಲು ಎಲ್ಲರದೂ ಪೈಪೋಟಿ !!

एहसास

कभी तू हवा के पन्नों पर पैगाम लिख्ती है 
कभी ठंडी हवा बनकर मनको छु जाती है 
कभी तू ख़ामोशी में अपनी आवाज़ सूना जाती है 
युहीं दूर बादलों में कही छुपके बैटी हैं
कभी सूरजके किरणों में , कभी बारीश कि बूंदों में बरसती है
कभी ना देखा है तुम्हें इन आखोंसे … फिर भी हर वक़्त तेरे आस पास होनेकी एहसास होती है !!

Thursday, January 16, 2014

THOUGHT FOR THE DAY

" OPPORTUNITES ARE LOST WHEN PEOPLE DO NOT RESPOND TO THE KNOCKS OF DOOR IN TIME "

Tuesday, January 14, 2014

ಶುಭಾಶಯ

ಮಾಗಿಯ ಚಳಿ ಮರೆಯಲು ಎಳ್ಳು ಉಂಬೋಣ

ಕಷ್ಟಗಳ ಕಹಿ ಮರೆತು ಬೆಲ್ಲವ ಮೇಯೋಣ

ಬನ್ನಿ ಎಲ್ಲರೂ ಕೂಡಿ ಎಳ್ಳು ಬೆಲ್ಲವ ಸವೆಯುತ್ತಾ

ಸಂಕ್ರಮಣದ ಸಂಭ್ರಮ ಆಚರಿಸೋಣ !!



ಎಲ್ಲರಿಗೂ ಸಂಕ್ರಮಣದ ಹಾರ್ದಿಕ ಶುಭಾಶಯಗಳು !

ಶಾಶ್ತಿ

ಕವಿಯ ಕುಂಚದಲ್ಲಿ ಅರಳಿದ ಹೂವು

ಕವಿಯನ್ನು ಗೆಲ್ಲಿಸಿ, ಕವಿತೆ ಪುಸ್ತಕ ಸೇರಿತು !

ಶ್ರೇಷ್ಟ ಕವಿಯ ತಿರಸ್ಕರಿಸಿ ನಡೆದ ಸಾಲು

ಅಹಂನಿಂದ ಮೆರೆದು ., ಈಗ ಬೀದಿ ಪಾಲು !!

Friday, December 13, 2013

ಸರ್ವಜ್ಞನ ವಚನಗಳು

ಅತ್ತಿ ಮರಕರಳಿಲ್ಲ ಕತ್ತೆಗಂ ಕೋಡಿಲ್ಲ


ಹತ್ತಿಯಾ ಹೊಲಕೆ ಗಿಳಿಯಿಲ್ಲ ಸೂಳೆಗಂ

ಸತ್ಯವಿಲ್ಲೆಂದ ಸರ್ವಜ್ಞ

(ತಾತ್ಪರ್ಯ : ಅತ್ತಿಯಮರದಲ್ಲಿ ಹೂಗಳು ಆಗುವದೇ ಇಲ್ಲ. ಕತ್ತೆಗೆ ಕೋಡುಗಳು ಇರುವದಿಲ್ಲ. ಹತ್ತಿಯ ಹೊಲದಲ್ಲಿ ಗಿಳಿಗಳು ಬರುವದಿಲ್ಲ.ಸೂಳೆಯಲ್ಲಿ ಸತ್ಯತನವೇ ಇರುವದಿಲ್ಲ)

Wednesday, December 11, 2013

ತಾಳಿ ಎಂದರೆ...

ಕೆಲವರಿಗೆ ,

ಅದು ಪವಿತ್ರ ಬಂಧನ

ಹೆಣ್ಣಿಗೆ ಭೂಷಣ

ಸೌಭಾಗ್ಯವತಿಯ ಆಭರಣ

ನಿತ್ಯವೂ ಕಣ್ಣಿಗೊತ್ತಿ ಅದನ್ನ

ದೇವರ ನೆನೆಯುವುದು ಮನ !

ಇನ್ನೂ ಕೆಲವರಿಗೆ,

ಒಂದು ಕುತ್ತಿಯಲಿ ತೂಗುವ ಸರ

ಪಡ್ಡೆ ಹೈಕಳ ದೂರವಿರಿಸುವ ದಾರ

ಸ್ವೇಚ್ಛಾಚಾರಕ್ಕೆ ಸಿಕ್ಕ ಪರಿಹಾರ

ಹಾದರವ ಮುಚ್ಚಿಡವ ಅಮೃತ ಸಾಗರ

ಆಧುನಿಕತೆ ಹೆಸರಲ್ಲಿ ನಡೆಸೊ ವ್ಯಭಿಚಾರ !!

ಮಧುರ ಕ್ಷಣಗಳು


ಕೇಶಗಳ ಮರೆಯಲ್ಲಿ ಅವಳ ನಗು

ಹಿಂತಿರುಗದೇ ನನ್ನರಸುವ ಅವಳ ಕಣ್ಣು

ಕೈಗಳಲ್ಲಿ ಸವರಿಸುತ್ತ ಅವಳ ಮಂಗುರುಳು

ನೆನ್ನೆ ಅವಳು ಕೊಟ್ಟ ಈ ಸವಿ ಕ್ಷಣಗಳು

ರಾತ್ರಿಯೆಲ್ಲಾ ನಿದಿರೆ ಬರದೇ ಕಾಡಿದವು !!

Monday, December 09, 2013

ಸುಮ್ -ಸುಮ್ನೆ

ನೋಡು ನೋಡುತ್ತಲೇ ನಿನ್ನ

ಹೃದಯಕ್ಕೆ ಹಾಕಿಬಿಟ್ಟಿಯಲ್ಲೇ ಕನ್ನ

ಲೂಟಿಯಾಗಿ ಹೋಯ್ತು ಮನ

ಎಷ್ಟೇ ಧನವಿದ್ದರೇನು ಚೆನ್ನ

ನಾನಾದೆನು ತೀರಾ ಬಡವ,

ನೀನಿಲ್ಲದೇ ಹೇಗೆ ಚಿನ್ನ ?

ಸಾಗಿಸಲಿ.. ಬಡಪಾಯಿಯ ಜೀವನ !!

Friday, December 06, 2013

ಅಂತ್ಯ

ಅವಳೊಂದು ಪೂರ್ಣಗೊಳ್ಳದ ಕಾವ್ಯ

ಸಾರ್ಥಕತೆಯ ಪಡೆಯದ ಅಧ್ಯಾಯ

ಗಂಡಿನ ಆಶ್ರಯ ತಿರ್ಸ್ಕರಿಸಿದ ವಿಧವೆ

ಅವಳ ಅಂತ್ಯ..., ಅನಾಥ ಶವವೇ !!

Tuesday, November 26, 2013

ಮೂಢ

ನಾರಿಯ ಒಲಿಸಲು ಹೊರಟವನು

ಹಾಕುವನು ಬಟ್ಟೆಗೆ ಇಸ್ತರಿ !

ತಿಳಿಯದ ಮೂಢ ಇವನು....

ಅವಳು ಒಲಿದರೆ, ಇವನ ಜೇಬಿಗೆ ಕತ್ತರಿ.!!

Wednesday, November 20, 2013

ಶ್ರೀಮಂತಿಕೆ

ಇಣುಕಿ ನೋಡದಿರಿ ಹುಡುಗಿಯರೇ
ಹುಡುಗನ ಶ್ರೀಮಂತಿಕೆ ಜೇಬಿನೊಳಗೆ..!
ನಿಜ ಪ್ರೀತಿಯ ಬಯಸಿದರೆ
ತಪ್ಪದೇ ಇಣುಕಿರಿ ಹೃದಯದೊಳಗೆ...!!

ಮೌನ ಪ್ರೀತಿ

ಕಣ್ಣ ನೋಟದಲ್ಲೇ ಆಕರ್ಶಿತರಾಗಿ
ನಿತ್ಯ ಭೇಟಿಯ ಸವಿಯು ತಾಕಿ
ಮೌನದಲ್ಲೇ ಪ್ರೀತಿ ಹುಟ್ಟಿ
ಭಾವನೆಗಳ ಬುತ್ತಿ ಕಟ್ಟಿ ,
ಬಿನ್ನಹಿಸಲಿಲ್ಲ ಇಬ್ಬರೂ, ವರುಷಗಳೇ ಕಳೆದರೂ
ಇನ್ನೂ ಅಚ್ಚಳಿಯಾಗಿಯೇ ಉಳಿದಿದೆ.. ಅವರ ಹೃದಯದೊಳು !!

ಅವನಿತ್ತ ಮುತ್ತು

ನಲ್ಲ, 
ನೀನಿತ್ತ ಮುತ್ತಿನಲ್ಲಿ ಏನಿತ್ತೋ ಗಮತ್ತು
ಆ ಕ್ಷಣವ ನೆನೆದರೆ ಇವತ್ತೂ
ಮತ್ತೆ ಮತ್ತೆ ಆ ಸಿಹಿಮುತ್ತು.., ಬೇಕೆನಿಸಿತು !!

Monday, November 11, 2013

ಕಾವ್ಯವಾಹಿನಿ

ಅವಳೊಬ್ಬ ಗುಪ್ತ ಅಭಿಮಾನಿ

ಆಲಿಸಿ ನನ್ನ ಕಾವ್ಯವಾಹಿನಿ

ಚೆಲ್ಲಿರುವಳು ನಗೆಮಲ್ಲಿಗೆಯ ಹನಿ

ಅವಳೇ ನನ್ನಕಾವ್ಯ.., ನಾ ಅವಳ ಪ್ರೇಮಿ !!

ವಿಪರ್ಯಾಸ

ಹೆಂಡತಿಯ ಹುಚ್ಚು ಹುಡುಗಾಟಕ್ಕೆ

ಗಂಡ ಹಾಕಿದ ಬ್ರೇಕು

ನಿಲ್ಲಲಿಲ್ಲ ಅವಳ ಸೊಕ್ಕು

ಹಳಿ ತಪ್ಪಿದ ಅವರ ಬದುಕು

ಮುನ್ನುಗ್ಗಿ ಹಾದಿ ತಪ್ಪಿತು !!

ಚಳಿ

ಆಹಾ..!! ಬಿಸುತಿಹುದು ತಂಪು ತಂಗಾಳಿ

ಸಣ್ಣದಾಗಿ ಶುರುವಾಗಿದೆ ಮಾಗಿಯ ಚಳಿ

ಕಳಚಿಬಿಡು ವಿರಹಗಳ ಸರಪಳಿ

ಓ ಪ್ರೀಯೆ ಈಗಲಾದರೂ..., ಕಂ (Come) ....ಬಳಿ !!

Wednesday, November 06, 2013

ಕಿಡಿನುಡಿ

ಗಂಡನಿಂದ, ಮುಕ್ತಿ ಸಿಕ್ಕ ಸೂಳೆಗೆ...
ರಾತ್ರಿ ಗೆಳೆಯನ ಸೇರುವ ಖುಶಿ !!

Sunday, November 03, 2013

ರಾಜ್ಯೋತ್ಸವ

ನವೆಂಬರ್ ತಿಂಗಳಿಗಷ್ಟೇ ಆಚರಿಸುವುದಿಲ್ಲ ನಾನು, ರಾಜ್ಯೋತ್ಸವ !
ನಿತ್ಯವೂ ಕುಣಿಯುತ್ತವೆ ಕನ್ನಡ ಪದಗಳು ನನ್ನ ಕೈ ಅಡಿಯಲ್ಲಿ
ಅದರಿಂದಲೇ ವರ್ಷ ಉದ್ದಕ್ಕೂ ಕನ್ನಡದ ನಿತ್ಯೋತ್ಸವ !!

ಜೀವನ ಜ್ಯೋತಿ

ನಾನು ನೀನು ಸೇರಿ ಜೋಡಿ ಬತ್ತಿ 
ನಮ್ಮಿಬ್ಬರ ಪ್ರೀತಿಯ ಚಿಲುಮೆ ಹೊತ್ತಿ
ಪರಿಮಳ ಹರಡಿವೆ ಎರಡು ಊದಬತ್ತಿ
ಬೆಳಗುತ್ತಿರಲಿ ನಮ್ಮ ಜೀವನ ಜ್ಯೋತಿ !!

ಜ್ಯೋತಿ

ನಿನ್ನ ಒಂದು ಕಿರು ನಗೆಯ ಪ್ರೀತಿ
ಬೆಳಗಿಸಿತು ನನ್ನ ಹೃದಯದ ಜ್ಯೋತಿ !!

Tuesday, October 29, 2013

ಎಂದೋ ಉದುರಿದ ಕಂಬನಿಗಳಿಗೆ ಬೆಲೆ ಬಂದೀತೆ ?

ಬಿದ್ದ ಕ್ಷಣವೆ ಅದು ಒಣಗಿ ಹಳಕುಪ್ಪಾಯಿತು

ಮಳೆ ಬಂದೊಡನೆ ಮತ್ತೆ ಕರಗಿ ಹೋಯ್ತು

ಹರಿದು ಭೂಮಿಯೊಳಗೆ ಸಮಾಧಿ ಸೇರಿತು ...

ಇನೆಲ್ಲಿಯ ಬೆಲೆ ಆ ಕಂಬನಿಗಳಿಗೆ...??


ದುಃಖ ಉಮ್ಮಳಿಸಿ ಬಂದ ಕಂಬನಿಗಳಲ್ಲ ಅವು..

ಕಪಟತನದಿಂದ ಗೆಲ್ಲಲು ಹೊರಟ ಮೊಸಳೆ ಕಣ್ಣೀರು

ಗಳಗಳನೆ ಸುರಿದೊಡೆ ಮನವು ಕರಗದು

ಗೀಳಲ್ಲ ಅದು, ಬರೀ ಟೊಳ್ಳು..ಇನ್ನೆಲ್ಲಿಯ ಬೆಲೆ ಆ ಕಂಬನಿಗಳಿಗೆ..??



Friday, October 25, 2013

ಕಣ್ಣುಗಳು

ಮನಸು ಹೃದಯ ಹೇಳದ ಮಾತುಗಳ

ಸಣ್ಣ ಸನ್ನೆಯಲೇ ತೋರಿಸುವ ತುಂಟರು !!

Tuesday, October 22, 2013

THOUGHT FOR THE DAY

You cannot force anyone to love you. So just be you. Those who leave you because they are selective about what they want you to be like, never loved you. Never change for anyone because it never lasts. Be true Be real Be you. (courtesy : Internet)
ತಾಕತ್ತು

-------
ರಕ್ಕಸರನ್ನೂ,

ಮನುಷ್ಯರನ್ನಾಗಿಸುವುದು..

" ಪ್ರೀತಿ "

******
ರಕ್ಕಸಗಣ
---------
ಪ್ರೀತಿಯ ನೆಪ ಮಾಡಿ...,

ಮನುಷ್ಯರನ್ನು ವಂಚಿಸುವರು " ರಕ್ಕಸರು "

ಸ್ವಲ್ಪ ಹುಳಿ - ಸ್ವಲ್ಪ ಖಾರಾ

ಹುಡುಗರ ಹೃದಯವದು,

ಇಣುಕುವ ಕನ್ನಡಿಯಲ್ಲ !

ಇಣುಕಿ ನೋಡಿದಾಗಲೆಲ್ಲಾ..,

ನಿಮ್ಮದೇ ಬಿಂಭ ಕಾಣುವುದಿಲ್ಲ !!.

Friday, October 18, 2013

ಹೊಸ ಜನುಮ

ತಾಯ್ತನದ,


ಸುಖದ ಸುಪ್ಪತ್ತಿಗೆಯಲಿ..

ತೇಲುತಿದೆ ಅವಳ ನಗು...!

ಮನೆಯವರೆಲ್ಲರ,

ಸಂತೋಷಕ್ಕೆ ಕಾರಣ...

ನವ ಜನುಮವಿತ್ತ ಮಗು..!!

Thursday, October 17, 2013

ದ್ವಂದ್ವಾರ್ಥ

-------------------

ಕಣ್ಣು ತುಂಬಿ ಬರುತ್ತಿದೆ..

ಅವಳು ತೊರೆದು ಹೋದ ಕಾರಣಕ್ಕಲ್ಲ..,

ಅವಳು ಘಾಸಿ ಮಾಡಿ ಹೋದ ಮನಸ್ಸಿನ ಗಾಯಕ್ಕೆ !!

-------------------

ಕಣ್ಣು ತುಂಬಿ ಬರುತ್ತಿದೆ

ಯಾವುದೊ ಕಾರಣಕ್ಕೂ.. ದುಃಖವಲ್ಲ !

ವಿಶ್ರಮ ಕಾಣದ ಕಣ್ಣುಗಳಿಗೆ

ನಿದ್ದೆ, ಕಣ್ಣು ತುಂಬಿಕೊಂಡು ಬರುತ್ತಿದೆ.!!

==================

ಚುಟುಕ

ಕುಣಿತದಲ್ಲಿ


ಪ್ರಾವಿಣ್ಯತೆ ತೋರಿದ ಅವಳು,

ಭಾರಿ ಚೂಟಿ !

ಇಂದು,

ಪಾಕ ಪ್ರವೀಣೆ ಅಂತಾನೂ ತೋರಿಸಿದಳು,

ಅಡುಗೆಯ ರುಚಿ !!

Wednesday, October 16, 2013

ಶ್ರೀಮಂತ ಸಾಮ್ರಾಜ್ಯ


ವಿಜಯದಶಮಿಯಂದು

ನಮ್ಮ ನಗರ ವಿಜಯನಗರ ಸಾಮ್ರಾಜ್ಯ !

ಮಾರುಕಟ್ಟೆಯ ಬೀದಿ ಬೀದಿಗಳಲ್ಲಿ

ಬಿದ್ದಿತ್ತು ರಾಶಿ ರಾಶಿ ಬಂಗಾರದ ತ್ಯಾಜ್ಯ !!

Monday, October 14, 2013

ಪ್ರವಾಸ

ಮೂರು ವರುಷದ ನಂತರ
ಮತ್ತೆ ಕೂಡಿ ಬಂತು ಅವಸರ
ದೂರದ ಊರಿಗೆ ಪ್ರಯಾಣ
ಹಾರಬೇಕಿತ್ತು ಬಾನ ಎತ್ತರ
ಒಂದು ತರಹದ ಖುಶಿ, ಸಡಗರ
ತಲುಪಿ ಕಲಿಯುವುದ ಕಾತರ
ಒಂದೊಳ್ಳೇಯ ಅವಕಾಶ
ಬಿಡದೇ ಉಪಯೋಗಿಸಿದೆ ಸಮಯ
ಐಶಾರಾಮಿ ಜೀವನದ ಸಿಂಚನ
ದಿನಗಳೆದ ಕ್ಷಣಗಳೆಲ್ಲಾ ಮಧುರ !!

Saturday, October 12, 2013

ಗುಟ್ಟು

ಹೃದಯಕ್ಕೆ ಲಗ್ಗೆ ಇಡಲು..
ಬೇಕಿಲ್ಲಾ ಯಾವುದೇ ಹೆದ್ದಾರಿ.
ಪ್ರೀತಿ ನಿಜವಿದ್ದರೇ ಸಾಕು,
ಅದುವೇ ದೊಡ್ಡ ರಹದಾರಿ !!

Monday, October 07, 2013

ಸಮಾಧಿ

ಆ ಶರೀರಗಳಿಗೆ ಕೂಡಿ ಬಾಳುವ ಯೋಗವಿರಲಿಲ್ಲ

ಒಬ್ಬರನೊಬ್ಬರು ಒಪ್ಪುವ ತಿಳಿ ಇರಲಿಲ್ಲ

ನಂಬಿಕೆ ಉಳಿಸಿಕೊಂಡು ನಡೆದುಕೊಳ್ಳುವ ಪರಿ ಗೊತ್ತಿರಲಿಲ್ಲ

ಹೀಗಾಗಿ ಮತ್ತೊಂದು ಹೆಣ ಇಂದು ಸಮಾಧಿ ಸೇರಿತು !


ವಂಚನೆಯ ಗುರಿ ಇಟ್ಟುಕೊಂಡು, ನ್ಯಾಯವ ಮೆರೆಯಲಿಲ್ಲ

ಲೂಟಿ ಮಾಡುವ ದುಷ್ಟ ದರ್ಪ, ಶಿಷ್ಟ ರೀತಿಯೇ ಗೊತ್ತಿಲ್ಲ

ಒಳ್ಳೇಯ ತನದ ಆದರಿಸದ ದೇಹಗಳು, ಕೃತಜ್ಞತೆಯೇ ಗೊತ್ತಿರಲಿಲ್ಲ

ಹೀಗಾಗಿ ಮತ್ತೊಂದು ಹೆಣ ಇಂದು ಸಮಾಧಿ ಸೇರಿತು !

(ಇದು ಸಮಾಜದಲ್ಲಿ ಕಡಿದು ಬೀಳುವ ಸಂಬಂಧಗಳ ಹೆಣ ಸಮಾಧಿ ಸೇರಿದ ಕವನ !!)

ಹನಿ

ನಾ,

ಮಾಡದ ತಪ್ಪುಗಳಿಗೆ

ಅರಚುತ್ತಿದ್ದ ಅವಳ ತುಟಿಗಳೆಗೆ ..

ನನ್ನ ತುಟಿಗಳಿಂದ

ಜಡಿದೆ, ಬೀಗದ ಮುದ್ರೆ..!!

Thursday, October 03, 2013

" ಜೈ " ಲ ಬದುಕು

ಏಳು ತಲೆಮಾರುಗಳು ಕೂತು ತಿನ್ನುವಷ್ಟು ಸಂಪತ್ತು
ಮೋಸ ವಂಚನೆ ಮಾಡೋದು ಏಕೆ ಬೇಕಿತ್ತು
ಕೊಳ್ಳೆ ಹೊಡೆದು ಭೂ-ಗಣಿ ಸಂಪತ್ತು
ಯಾವ ಐಷಾರಾಮಿ ಜೀವನ ಕಾಣಬೇಕಿತ್ತು
ತಿಂದು ಹೊಟ್ಟೆ ತುಂಬಿಸಿಕೊಳ್ಳಲು ಅನ್ನವೇ ಬೇಕು
ವಂಚನೆಯ ಹಣ, ಹೊನ್ನು, ಸಂಪತ್ತು ತಂತಲ್ಲಾ ನಿನಗೆ ಆಪತ್ತು
ಜೈಲಿನ ಸೊಳ್ಳೆ ತಿಗಣೆಗಳ ಜೊತೆ ಸರಸಾಟ ಬೇಕಿತ್ತಾ..., ನಿನಗೆ ಈ ಬದುಕು...?

Thursday, September 26, 2013

ಹಿತವಚನ

ಹುಟ್ಟು ನನ್ನ ಕೈಯ್ಯಲಿಲ್ಲ

ಸಾವು ನನ್ನ ಕೈಯ್ಯಲಿಲ್ಲ

ಹುಟ್ಟು ಸಾವಿನ ನಡುವಿರುವ " ಬದುಕು " ಮಾತ್ರ ನನ್ನದು

ಅದಕ್ಕೆ ಅರ್ಥಪೂರ್ಣ ಬಣ್ಣ ತುಂಬುವ " ಗುರಿ " ಕೂಡ ನನ್ನದು

Tuesday, September 24, 2013

ಬ್ಯಾಡಗಿ ಖಾರಾ

ಓ ಲಂಗಾ ದಾವಣಿ ತೊಟ್ಟ ಬೆಡಗಿ

ಬಾರ.., ಸೊಂಟಕ್ಕ ಇಟ್ಟಗೊಂಡು ಗಡಗಿ

ನಿನ್ನ ನೋಡಾಕ ಕುಂತೀನಿ ಭಾವಿ ಕಟ್ಟೀಗ, ನಾ ಒರಗಿ !

ನೀ ಹೋಗ್ಲಾ ಮುಲ್ಲಾ ತಿರುಗಿ

ನಾ ಬ್ಯಾಡಗಿ ಖಾರಾ ಹುಡುಗಿ

ನೀ ನೋಡಾಕ ಹತ್ತಿದ್ರ ನನ್ನ, ಹಿಡಕೊಂಡು ಬರ್ತೀನಿ ಬಡಗಿ !

ಸಂಗೀತ ಕಛೇರಿ

ಪದೇ ಪದೇ ಇಣುಕಿ ನೋಡುತ್ತಿರುವಳು,

ಹೃದಯ ಬಾರಿಸುತ್ತಿರುವ ಡೊಳ್ಳನು !

ಅನುಸರಿಸಿ ಅದರ ರಾಗವ ಅವಳು,

ಮೆಲ್ಲಗೆ ನುಡಿಸುತ್ತಿರುವಳು ಕೊಳಲನು !

ನನ್ನ ಎದೆಯ ಡೊಳ್ಳು ಬಡಿತಕೆ...

ಅವಳ ಮನದ ಭಾವಗಳ ಕುಣಿತ..

ಇನ್ನೂ ಇಬ್ಬರ ಹೃದಯದಲಿ ಪ್ರೇಮದ ಏರಿಳಿತ..!

ಒಮ್ಮೆ ನನ್ನ ಡೊಳ್ಳಿನ ಹೊಡೆತ,

ಆಕಡೆಯಿಂದ ಅವಳ ಕೊಳಲ ನುಲಿತ..

ಶುರುವಾಗಿದೆ ನಮ್ಮ ಕಛೇರಿ..,ಆಲಿಸಿ ಬನ್ನಿ ನಮ್ಮ ಸಂಗೀತ !!

ಸ್ನೇಹ

ಅವನು ಮಾತನಾಡದೇ ಇದ್ದರೂ

ಕಾರಣಗಳು ಸಾಕಷ್ಟು ಇರಬಹುದು

ಅವನಿಗಿಲ್ಲಾ ಅವಳ ಮೇಲೆ ಮುನಿಸು !

ಮರೆತಿಲ್ಲಾ ಸ್ನೇಹ ತಂತಿ ಮುರಿದರೂ

ಕಾಣುತಿಹುದು ಅದರ ಕುರುಹು

ನೇತಾಡುತ್ತಿರುವ ಪ್ರಶಂಸೆಯ ತೂಗು !!

ನನ್ನ ಆತ್ಮೀಯ ಗೆಳೆಯ ಬೇಲೂರು ರಘುನಂದನ್ ರವರು ಬರೆದ ವಚನ..

ವಚನ - 211


ಕಟ್ಟು - ೩



ಮುಡಿ ಬಿಟ್ಟವಳು ಮರ್ಯಾದೆ ಬಿಟ್ಟವಳು

ನುಡಿ ಬಿಟ್ಟವಳು ನಾಚಿಕೆಯಾ ಬಿಟ್ಟವಳು ...

ಪತಿಯ ಬಿಟ್ಟವಳು ಲೋಕದಲಿ ರಂಡೆ

ಪತಿಯ ನುಂಗಿ ಕೊಂಡವಳು ಮುಂಡೆ

ಭಾವನೆಯ ತೋರೆ ಲಜ್ಜೆಯನೇ ಬಿಟ್ಟವಳು

ಎಲ್ಲ ಬಿಟ್ಟವಳು ಕೊನೆಗೆ ಮೂರು ಬಿಟ್ಟವಳು

ಎಂದು ಮೊಟಕುವ ಮಂದಿ ನಾಲಿಗೆ ಸತ್ತವರು.

ಎಲ್ಲ ಬಿಟ್ಟವರು ಎನುವ ಇವರು ಏನೇನು ಜೊತೆಗೆ

ಕಟ್ಟಿಕೊಂಡು ಬಿಟ್ಟಿ ಮಾತುಗಳನಾಡುತಿರುವರು.

ನುಂಗಲಾಗದ ಕೆಮ್ಮು ಕಫ಼ ನೋವು ಬಾವು ಕೀವನ್ನು,

ಒಳಗಿಟ್ಟುಕೊಂಡು ಲಾಭವಿಲ್ಲ ಅಂತ ಸೊಟ್ಟ ಮನದಲ್ಲಿ,

ಬಿಟ್ಟವಳು ಬಿಟ್ಟವಳು ಅನ್ನುವ ಭಾವಿಲ್ಲದ ಬಾಯಿಗೆ

ನೀನೇ ಹೇಳಿಬಿಡಯ್ಯ ಶ್ವೇತಪ್ರಿಯ ಗುರುವೆ.



-ಬೇಲೂರು ರಘುನಂದನ್

22.9.2013

Friday, September 20, 2013

ಆಪತ್ತು

ನಿದ್ದೆಯಿಂದ ಏಳಲಾಗುತ್ತಿಲ್ಲ
ಅವಳು ಕೊಟ್ಟ ಮತ್ತಿನ ಗಮ್ಮತ್ತು
ಕನಸುಗಳ ಸರ ಹೆಣೆಯುವುದೇ ನಿಲ್ಲುತ್ತಿಲ್ಲ
ಸಿಗದೇ ಹೋದರೆ ಅವಳು, ತಪ್ಪದು ಜೀವಕ್ಕೆ ಆಪತ್ತು !!

ಹನಿ

ನಲ್ಲೆ ನೀ ಮುಡಿದರೆ ಹೂವು ಮಲ್ಲಿಗೆ
ಪ್ರೀತಿ ಇಮ್ಮಡಿಸುವುದು ನಿನ್ನ ಅಂದಕೆ
ಮರುದಿನ ಆಶ್ಚರ್ಯ ಕಾದಿತ್ತು....
ಅವಳು ಮುಡಿದು ಬಂದಳು ದಾಸವಾಳ
ಕನಸ್ಸುಗಳು ಸುರಿದವು ಬೆವರಿನಂತೆ ದಳದಳ !

Tuesday, September 17, 2013

ಅರಿವು

ನಾ ಮೇಲು ( Male) , ನಾ ಮೇಲು.. ಅಂತಾ ಕುಣಿದಾಡಿದವಳಿಗೆ,


ಅವಳು ಒಂದು ಹೆಣ್ಣು ಅಂತಾ ತಿಳಿದದ್ದು...

ಅವಳೇ ಹರಿಸಿದ ಕಣ್ಣೀರು ಮೊಣಕಾಲೊರೆಗೆ ನಿಂತಾಗ !!

Monday, September 16, 2013

ಗ್ರಹಚಾರ

ವೇದಿಕೆಯಲ್ಲಿ ಹೆಜ್ಜೆಯ ಜೊತೆಗೆ ಹೆಜ್ಜೆ ಇಟ್ಟಳು ಗೆಳತಿ

ಅಸೂಯೆದಿಂದ ಕೆಂಗಣ್ಣು ಬಿಟ್ಟಳು ನಮ್ಮಾಕಿ

ಮನಿಗ ಬರ್ರಿ ಅಂದಳು... ನಿಮಗ ಗ್ರಹಚಾರ ಕಾದೇತಿ !!

ಸಿಹಿ - ಸಹಿ

ಅವನು ಕಳಿಸಿದ,

ಮೇಘ ಸಂದೇಶ

ಬಡಿಸಿಹುದು..

ಅವಳ ಮನಸಗೆ ಸಿಹಿ !

ಉತ್ತರವಾಗಿ,

ರವಾನಿಸಿದಳಾಕೆ...

ಪತ್ರ ಚುಂಬಿಸಿದ ಸಹಿ !!

Wednesday, September 11, 2013

ಪರದಾಟ

ರಾತ್ರಿಯಿಡೀ ಸುರಿದಿದೆ ಮಳೆ

ಬೆಳಿಗ್ಗೆ ಬೀದಿಗಳೆಲ್ಲಾ ಬಚ್ಚಲು ಮನೆ

ಕಾಂಕ್ರೀಟು ಕಾಡಿನಲ್ಲಿ ರಾಡಿಯ ಮೋಡಿ

ರಸ್ತೆ ಗುಂಡಿಗಳಲ್ಲಿ ಕೆಂಪು ನೀರಿನ ಕೋಡಿ

ಅಲ್ಲಲ್ಲಿ ನಿಂತಿವೆ ವಾಹನಗಳು ಕೆಟ್ಟು

ಅಪಘಾತಕ್ಕೆ ಜನರು ಅನುಭವಿಸವರೆ ಪೆಟ್ಟು

ಸುರಿದರೆ ಮಳೆ ರಸ್ತೆಗಳೆಲ್ಲಾ ಕೆರೆ

ಮನೆ ತಲುಪದೇ ಜನರು ಅಲ್ಲೇ ಸೆರೆ

ಗಟಾರು ಗುಂಡಿಗಳಿಲ್ಲದ ಈ ಅವ್ಯವಸ್ಠೆ

ಸಾಮಾನ್ಯ ಜನರ, ಕೇಳುವರ್ಯಾರು ಸಮಸ್ಯೆ !!

Thursday, September 05, 2013

ಅವಳ ಭಾವ

ನಲ್ಲ ,


ನಿನ್ನ ಮಾತುಗಳು ಸ್ವಾತಿ ಮುತ್ತಿನಂತೆ...!

ಮೌನವಾಗಿಯೇ ಆಲಿಸುತ್ತಿರುವೆ... ನೀ ನಿಲ್ಲಿಸದಿರು, ಮಾತುಗಳ ಮಳೆ !

ನಾ, ಹನಿಗಳ ತಂಪನು ಸವೆಯುತಿರುವೆ ಆ ಭೂರಮೆಯಂತೆ..!

Tuesday, September 03, 2013

ನೀಲ ಸಾಗರ

ಕಣ್ಣಲ್ಲೇ ಕಣ್ಣಿಟ್ಟು ನೋಡು ಗೆಳೆಯಾ


ಆ ನಿನ್ನ ನೀಲ ಸಾಗರದ ಆಳದಲ್ಲಿ ಮಿಂದು

ಖುಷಿಯಿಂದ ಕುಣಿಯುವುದು ನನ್ನ ಹೃದಯಾ !!

Monday, September 02, 2013

ಕುಣಿತಾ

ಗೆಳೆಯಾ, ನನ್ನ ನಡುವ ಬಳಸಿ ಗಟ್ಟಿಯಾಗಿ ತಬ್ಬಿ ಹಿಡಿದುಕೋ

ನಮ್ಮ ಕುಣಿತದಲ್ಲಿ ನಾ ಕಾಲ್ ಜಾರಿ ಬಿದ್ದೇನು...!

ಹೆದರಬೇಡ ಗೆಳತಿ, ನನ್ನ ತೋಳಲ್ಲಿ ನೀ ಜಿಗಿದು ಕುಳಿತುಕೋ

ನೀ ಬಿಡು ಎನ್ನುವ ತನಕ ನಾ ಕೆಳಗೇನೆ ಇಳಿಸೆನು...!!

ಪ್ರೀತಿ V/s ಹಣ

ಪ್ರೀತಿ,
ಎಂಬುದು ಮನಸ್ಸನ್ನು ಗೆಲ್ಲುವಂತಹ ಭಾವ , ಅತ್ಯಮೂಲ್ಯ

ಹಣ,
ಎಂಬುದು ಯಾರಾದರೂ ಗಳಿಸಬಹುದಾದ ವಸ್ತು ,


ಒಂದು ಪಕ್ಷ ಹಣವಿರದ್ದಿದ್ದರೂ ಜೀವಿಸಬಹುದು, ಆದರೆ ಪ್ರೀತಿ ಇರದಿರೆ ಜೀವನ ಶೂನ್ಯ !!

ಸುಭಾಷಿತ

ಅವನು,


ಜಗಕ್ಕೆಲ್ಲಾ ಸಮಾನ ಪ್ರೀತಿಯ ಹಂಚುವ ಸೂರ್ಯ !

ಅವನ ಪ್ರೀತಿಯ ಅರಿತು,

ಅದನ್ನು ಸನ್ಮಾನಿಸುವುದು ಅವರವರಿಗೆ ಬಿಟ್ಟಿದ್ದು !!

ನಿರ್ಲಕ್ಷ

ಎಳೆ ಎಳೆಯಾಗಿ

ಕಿತ್ತೆಸೆಯುತಿಹನು ಪಕಳೆಗಳ ಹಾರ !

ಅವಳ ನಿರ್ಲಕ್ಷಕ್ಕೆ

ನೀಡುತಿಹನು ಮೌನ ಉತ್ತರ !!


ಜಗಲಿ ದೀಪ

ನನ್ನ ಮನೆಯ ಜಗಲಿಯಲ್ಲಿ

ಹಚ್ಚಿಟ್ಟ ದೇವರ ದೀಪ

ನನ್ನ ಮನೆ ಅಲ್ಲದೇ...

ನೋಡುಗರ ಮನಸನ್ನೂ

ಪ್ರಕಾಶಿಸಿತು !!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...