ನಮ್ಮ ಧಾರವಾಡದಾಗ ಬಂದ್ರ ಮಳಿ
ಊರ ಓಣಿಗಲೆಲ್ಲ ತುಂಬಿದ ಹೊಳಿ
ಸಂತಿ ಭಟ್ಯಾಗ ರೋಜ್ಜಿನ ತಳಿ
ಮೈಯ್ಯ ನಡಗಿಸುವ ತಂಪು ಚಳಿ
ಬೀಸಿ ಹೊರಟೈತಿ ತಣ್ಣನೆ ಗಾಳಿ
ನಮ್ಮ ಹೆದ್ದಾರಿಯಾಗ ಬಿದ್ದಾವ ಮರ ಚಿಗುರಿ
ಭರ್ ಎಂದು ಹೋದಾಗ ಮೊಟರ್ ಗಾಡಿ
ತೂರಿ ಸಿಡಿದೈತಿ ದೂರ ರಾಡಿ
ಜಿಟಿ ಜಿಟಿ ಮಳ್ಯಾಗ ನೆನಕೊಂಡು ಹೊರಟಾರ
ಬೆನ್ನಮ್ಯಾಗ ಪಾಟಿ ಚೀಲ ಹೊತ್ತ ಸಾಲಿ ಹುಡುಗೂರು
ಧಾರವಾಡ ಸೀಮಿ ರೈತ ,ಕುಣಿ ಕುಣಿದು ಜಿಗ್ದಾನ
ಹೊಲವ ಊಳಿ ಬೀಜ ಬಿತ್ತುವ ,ಕೆಲಸದಾಗ ಮುಳ್ಗ್ಯಾನ ..!
-ಭಾವಪ್ರಿಯ
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಅಪ್ಪು - ಮರೆಯದ ಚೇತನ --------------------- ಒಂದು ಮರೆಯಾಗಲಾರದ ಚೇತನ.. ಚಂದನ ವನದ ಸೌಗಂಧದ ಕುಸುಮ ಹೃದಯಗಳ ಆಳಿದ ಧೀಮಂತ ವಿನಯತೆ ಭಾವ ಸದಾ ಜೀವಂತ ಮನುಷತ್ವವೂ ನಾಚ...
-
ಕತ್ತಲು ಕವಿದಾಗ ತಿಳಿ-ಬಿಳಿ ನೆರಳಲ್ಲಿ ಚಂದ್ರಮುಖಿ ದೀಪದ ಬೆಳಕಿನಲ್ಲಿ ನಗೆ ಚೆಲ್ಲೊ ಮಂದಸ್ಮ್ರತಿ ನಯನಗಳು ಮನೋಹರ ಘಾಡ ನೆರಳೊತ್ತ ಗವಿ ಪ್ರೀತಿ ಮೋಹದ ಸಾಗರ ಪಂಚಮ ಪ್ರೀತಮ...
No comments:
Post a Comment